Homeಮುಖಪುಟಧ್ವನಿ ಇಲ್ಲದ ಹೆಣ್ಮಕ್ಕಳ ಧ್ವನಿಯಾಗಿದ್ದ ಗೀತಾ ನಾಗಭೂಷಣ...

ಧ್ವನಿ ಇಲ್ಲದ ಹೆಣ್ಮಕ್ಕಳ ಧ್ವನಿಯಾಗಿದ್ದ ಗೀತಾ ನಾಗಭೂಷಣ…

- Advertisement -
- Advertisement -

ಇತ್ತೀಚಿಗೆ ನಿಧನರಾದ ಹಿರಿಯ ಸಾಹಿತಿ ಗೀತಾ ನಾಗಭೂಷಣ ರವರಿಗೆ ನುಡಿ ನಮನ ಬರಹ.

ನನ್ನ ಶಾಲಾ ದಿನಗಳು ಅದು. ವಾರ್ಷಿಕ ರಜೆಯಲ್ಲಿ ಅಟ್ಟದ ಕಸ ಗುಡಿಸುವ ಅಭ್ಯಾಸ. ಪೊರಕೆ ಹಿಡಿದು ತಲೆಗೆ ಅಮ್ಮನ ಹಳೆ ಸೀರೆ ತುಂಡು ಬಿಗಿದು ಅಟ್ಟ ಹತ್ತಿದರೆ ಹಳೆ ಪತ್ರಿಕೆಗಳನ್ನೆಲ್ಲ ರಾಶಿ ಹಾಕಿಕೊಂಡು ಕಣ್ಣಾಡಿಸುತ್ತ ಓದಬೇಕೆನಿಸಿದ್ದನ್ನು ಎತ್ತಿಟ್ಟುಕೊಂಡು, ಉಳಿದದ್ದನ್ನೆಲ್ಲ ರದ್ದಿಗೆ ಹಾಕಲು ಜೋಡಿಸಿ ಬೀಂಜಲು ತೆಗೆದು ಧೂಳು ಹೊಡೆದು ಕೆಳಗಿಳಿಯುತ್ತಿದ್ದೆ. ಆ ದಿನಗಳಲ್ಲಿ ನಮ್ಮನೆಗೆ ತರಂಗ, ಮಂಗಳ ವಾರಪತ್ರಿಕೆ ತರಿಸುತ್ತಿದ್ದರು. ಧಾರಾವಾಹಿಗಳ ಕಾಲ. ಪತ್ರಿಕೆ ಬರುತ್ತಿದ್ದಂತೆ ಅಕ್ಕ, ಅಣ್ಣ ಇವರದೆಲ್ಲ ಸರದಿ ಮುಗಿಯದೆ ನನ್ನ ಕೈಗಂತು ಸಿಗುತ್ತಿರಲಿಲ್ಲ. ಸಿಕ್ಕಿದರೂ ಧಾರಾವಾಹಿ ಓದುವ ವಯಸ್ಸಲ್ಲ ಎಂಬ ನಂಬಿಕೆಯ ಹಿರಿಯರು. ಹಳೆಯದಾಗಿ ಅಟ್ಟ ಸೇರಿರುವುದನ್ನು ವರ್ಷದ ನಂತರ ಹೀಗೆ ಗುಡ್ಡೆ ಹಾಕಿಕೊಂಡು ಕುಕ್ಕರುಗಾಲಲ್ಲಿ ಕುಳಿತು ಪುಟ ತಿರುಗಿಸುತ್ತಿದ್ದಾಗ ಸಿಕಿದ್ದು “ಹಸಿ ಮಾಂಸ ಮತ್ತು ರಣ ಹದ್ದು”. ಒಂದಷ್ಟು ಸಾಲು ಓದುತ್ತಿದ್ದಂತೆ ಕಥೆ ಹೇಳುವ ರೀತಿ, ಭಾಷೆ, ವಸ್ತು ಎಲ್ಲವೂ ಹೊಸ ನಮೂನೆಯೇ. ದಕ್ಕಿಣಕನ್ನಡದ ಅದರಲ್ಲೂ ಗ್ರಾಮೀಣ ಭಾಗದ ಮಕ್ಕಳಾದ ನಮಗೆ ನಮ್ಮ ಇನ್ನೊಂದು ತುದಿಯಲ್ಲಿ ಈ ರೀತಿಯ ಬದುಕಿದೆ, ಜನರಿದ್ದಾರೆ ಎಂಬ ಅರಿವೂ ಇಲ್ಲದಿರುವ ದಿನಗಳವು. ಅರ್ಥೈಸಿಕೊಳ್ಳಲು ಕಷ್ಟವಾದರೂ ಅರ್ಧದಲ್ಲೆ ಕೈ ಬಿಡಲಾಗುತ್ತಿರಲಿಲ್ಲ. ರಾತ್ರಿ ಮಲಗಿದಾಗಲೂ ಕಾಡುತ್ತಿತ್ತು. ಅಂದಿನಿಂದಲೇ ನಾನು ಕಾಣದ ಆ ಸೀಮೆ, ಭಾಷೆ, ಅಲ್ಲಿಯ ಜನ ನನ್ನೆದೆಯೊಳಗೆ ಕುಳಿತುಬಿಟ್ಟರು. ಮುಂದೆ ವಲಸೆಗಳು ಜಾಸ್ತಿಯಾಗಿ ಆ ಭಾಗದ ಮಂದಿ ಜಾಸ್ತಿ ಜಾಸ್ತಿ ಕಾಣಲು ಸಿಕ್ಕಿದಾಗ ಗೀತಾ ನಾಗಭೂಷಣರ ಕಥಾ ಪಾತ್ರಗಳು ಇವರೆಲ್ಲರೊಳಗೂ ಇರಬಹುದೆಂದು ತಡಕಾಡಿದ್ದೂ ಇದೆ. ಅವರನ್ನು ಮಾತಾಡಿಸುವ ಹಂಬಲ, ಅವರ ಊರಿನ ಬದುಕಿನ ಬಗ್ಗೆ ಕೇಳುವ, ಅವರ ಕಥೆಗಳಿಗೆ ಕಿವಿಯಾಗುತ್ತ ಅವರನ್ನು ಒಳಗಿಳಿಸಿಕೊಳ್ಳುವ ಪ್ರಯತ್ನಕ್ಕೂ ಮೂಲದಲ್ಲಿ ಇದೇ ಕಾರಣವಿರಬಹುದು.

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಮೊದಲ ಮಹಿಳೆ, ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಮೊದಲ ಮಹಿಳೆ – ಹಲವು ಮೊದಲುಗಳಿಗೆ ಭಾಜನರಾದ ಗೀತಾ ನಾಗಭೂಷಣ ಅಂದೊಡನೆ ನನ್ನ ಮೊದಲ ತಾಜಾ ಅನುಭವ ಇದು. ಯಾವತ್ತೂ ನಾನು ಗೀತಾ ನಾಗಭೂಷಣರನ್ನು ಮುಖತಃ ಕಾಣುವಂತಹ ಅವಕಾಶಗಳಿಗೆ ಎದುರಾದವಳಲ್ಲ. ಆದರೆ, ನನಗೆಂದೂ ಅದು ದೊಡ್ಡ ಮಟ್ಟಿನ ಕೊರತೆಯಾಗಿ ಕಾಡಲಿಲ್ಲ. ಅಕಾಡಮಿಕ್ ಆಗಿಯೂ ಸಾಹಿತ್ಯದ ವಿದ್ಯಾರ್ಥಿನಿ ಅಲ್ಲದ ನನಗೆ ನಾನಿದ್ದ ಪರಿಸರದಲ್ಲಿ ಅವರ ಬರಹಗಳು ಬಹುಕಾಲದವರೆಗೆ ಅಷ್ಟಾಗಿ ಓದಿಗೆ ದೊರೆಯಲಿಲ್ಲ. ಆದರೆ, ಅಂದಿನ ಆ ಓದು ನನ್ನೊಳಗೆ ಸಣ್ಣ ಕಿಡಿ ಹೊತ್ತಿಸಿ ಇಂದಿಗೂ ಬೆಚ್ಚಗಿರುವುದನ್ನು ಅಲ್ಲಗಳೆಯಲಾರೆ.

ತನ್ನ ಸಮಾಜವನ್ನು ಒಳ ವಿಮರ್ಶಗೆ ಒಡ್ಡಿ ಒರೆ ಹಚ್ಚಿ ಬರೆಯುವ ನಿಷ್ಪಕ್ಷಪಾತಿಯಾಗುವುದು ಸೃಜನಶೀಲ ಬರವಣಿಗೆಯ ದೊಡ್ಡ ಸವಾಲು. ಅದರಲ್ಲೂ ಬರಹಗಾರ್ತಿಯರಿಗಂತು ಇದು ಇಂದಿಗೂ ನುಂಗಲಾರದ ಉಗುಳಲಾರದ ತುತ್ತು. ಇದಕ್ಕೆ ಗೀತಾ ನಾಗಭೂಷಣರೂ ಹೊರತಲ್ಲವೆಂಬುದು ಮುಂದೆ ಒಂದಷ್ಟು ಅವರ ಬರಹಗಳು ಓದಿಗೆ ಸಿಕ್ಕಿದಾಗ ಅನಿಸಿತು. ಅವರ ಮೊದಮೊದಲ ಬರಹಗಳು ನಂತರದ ಬರಹಗಳಂತೆ ಕಾದ ಕಬ್ಬಿಣದ ಸರಳಾಗಿರಲಿಲ್ಲ. ತನ್ನ ಬದುಕಿನಲ್ಲಿ ಹೋರಾಡುತ್ತಲೇ ಅಕ್ಷರಗಳನ್ನು ಪಡೆದುಕೊಂಡರೂ, ಒಂದು ಸ್ಥಾನಮಾನ ಗಿಟ್ಟಿಸಿದರೂ ಆರಂಭದ ಬರವಣಿಗೆಯಲ್ಲಿ ಒಳ ಮನಸ್ಸಿನ ಕೋರಿಕೆಯಂತೆ ಬರೆಯಲು ಅವರಿಗೆ ಸಾಧ್ಯವಾಗಲಿಲ್ಲವೋ ಅಥವಾ ಇದು ತನ್ನ ದಾರಿಯಲ್ಲವೆಂದು ಗುರುತಿಸಿಕೊಂಡು ಒಳಮನದ ಬೇಡಿಕೆಗೆ ತೆರೆದುಕೊಳ್ಳಲು ಸಮಯ ಬೇಕಾಯಿತೋ. “ನನಗೆ ಧ್ವನಿ ಇದೆ. ಧ್ವನಿ ಇಲ್ಲದ ನನ್ನ ಹೆಣ್ಮಕ್ಕಳ, ನನ್ನ ನೆಲದ-ಜನರ ಉಮ್ಮಳವನ್ನು ನಾನು ಮುಸುಕಿಕ್ಕದೆ ಹೇಳಿ ತೀರುತ್ತೇನೆ” ಎಂದು ನಿರ್ಧರಿಸಿದ ಮೇಲೆ ಕೌಟುಂಬಿಕ ಸಂಘರ್ಷದಲ್ಲೂ ರಾಜಿಯಾಗದೆ ನಿಂತಿದ್ದು ಸ್ವ ಶಕ್ತಿಯ ಮೇಲೆ ಅವರಿಗಿದ್ದ ಆತ್ಮವಿಶ್ವಾಸವನ್ನು, ಅವರ ಆತ್ಮಬಲವನ್ನು ತೋರಿಸುತ್ತದೆ. ಹೀಗೆ ಬರೆಯಲು ತೊಡಗಿದಾಗ ಕೆಲವೊಮ್ಮೆ ಒಳಸಮಾಜದೊಂದಿಗೆ ಒಟ್ಟು ಸಮಾಜವನ್ನು ವಿಮರ್ಶಾ ಕಣ್ಣಿಂದ ನೋಡುವಾಗ ಒಳ ಸಮಾಜದ ಬಗ್ಗೆ ಪಕ್ಷಪಾತ, ಸಹಾನುಭೂತಿ ಕಳಚಿಕೊಳ್ಳಬೇಕಾಗುತ್ತಿದೆ. ಇದನ್ನು ದಾಟಿಕೊಳ್ಳುವುದೇ ಸವಾಲು. ನಿಜದಲ್ಲಿ ಲೇಖಕ ಅಥವಾ ಲೇಖಕಿ ದಾಟಿಕೊಂಡರೂ ಅದನ್ನು ಒಟ್ಟು ಸಮಾಜದ ಓದುಗರು ಗುರುತಿಸುವುದರಲ್ಲಿ ಸೋಲುವ ಸಾಧ್ಯತೆಗಳಿರುತ್ತವೆ. ಹಾಗೆಯೇ ಕೆಲವೊಮ್ಮೆ ಅತಿ ಎಂದೋ, ಪುನರಾವರ್ತನೆ ಎಂದೊ ಟೀಕೆಗೊಳಗಾಗುವುದೂ ಇದೆ. ಇದ್ಯಾವುದರಿಂದಲೂ ಗೀತಾನಾಗಭೂಷಣರು ಹೊರತಾಗಲಿಲ್ಲ. ಆದರೆ, ಕೆಲವು ಸಂದರ್ಭಗಳಲ್ಲಿ ತಾನು ಹೇಳುತ್ತಿರುವ ಬದುಕಿನ ತೀವ್ರತೆ ಮನದಟ್ಟು ಮಾಡಿಸಲು ಈ ಪುನರಾವರ್ತನೆ ಅಥವಾ ಅತಿಗಳು ಸಹಕಾರಿಯಾಗುತ್ತವೆ. ಇತಿ-ಮಿತಿ ಹಾಗು ವ್ಯಾಪ್ತಿ-ಪ್ರಾಪ್ತಿಗಳ ನಡುವೆಯೇ ವರ್ತಮಾನದ ಕನ್ನಡ ಸಾಹಿತ್ಯದಲ್ಲಿ ಗೀತಾನಾಗಭೂಷಣರು ಉಳಿಸಿದ ಧ್ವನಿ, ಆತ್ಮದ ಧ್ವನಿಗಾಗಿ ತಮ್ಮ ಬದುಕನ್ನೇ ಪ್ರಯೋಗಕ್ಕೊಡ್ಡಿದ ಕಮಲಾದಾಸ್, ಮಹಾಶ್ವೇತಾದೇವಿ, ಇಂದಿರಾ ಗೋಸ್ವಾಮಿಯಂತವರನ್ನು ನೆನಪಿಸುತ್ತದೆ.

ಸಾಹಿತ್ಯವೆಂಬುದು ಆಯಾ ಕಾಲಘಟ್ಟದ ಸೃಜನಶೀಲ ಸಂಘರ್ಷವೆಂದ ಅವರ ಮಾತಿಗೆ ಪೂರಕವಾಗಿಯೇ “ಬದುಕು” ಕಾದಂಬರಿಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಪಡೆಯುವ ಸಮಯದಲ್ಲಿ ತನ್ನ ಸಾಹಿತ್ಯ ರಚನೆಯ ಬಗ್ಗೆ ಅವರಾಡಿದ ಮಾತುಗಳು ಹಾಗು 76ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅದನ್ನವರು ನಿಭಾಯಿಸಿದ ರೀತಿ ಹಾಗು ಅವರೆತ್ತಿದ ಪ್ರಶ್ನೆಗಳೂ ಇದ್ದವು.

ಅಂದು ಗೀತಾನಾಗಭೂಷಣರ ಮೊದಲ ಓದಿನ ಅನುಭವಕ್ಕೆ ತೆರೆದುಕೊಳ್ಳುವಾಗ ಈ ಸಾಹಿತ್ಯದ ಮಣ್ಣಲ್ಲಿ ನನ್ನದೇ ಆದ ಪುಟ್ಟ ಉಳುಮೆ ಮಾಡುವ ಪ್ರಯತ್ನ ಮಾಡುತ್ತೇನೆಂದೂ ಕನಸೂ ಕಂಡವಳಲ್ಲ. ಇಂದು ಗೀತಾನಾಗಭೂಷಣ ನಮ್ಮಂತಹ ಕಂದಮ್ಮಗಳಿಗೆ ಒಳಮನದ ಮಾತಿನಂತೆ ಹೆಜ್ಜೆ ಇಡಲು ತಾಕತ್ ತುಂಬಿದ ಅವ್ವ ಅಂದರೆ ಉತ್ಪ್ರೇಕ್ಷೆ ಅಲ್ಲ. ಎಲ್ಲಾ ವಿಧದಲ್ಲೂ ಹುಳುಕುಗಳನ್ನು ಮುಚ್ಚಿಡುವ ಶಿಷ್ಟತೆಯ ಹಂಗು ಕಳಚಿಕೊಂಡು ಇದು ಹಾಗೆ ಮಾತ್ರ ಅಲ್ಲ ಹೀಗೂ ಇದೆ ನೋಡಿ ಎಂದು ಅವರು ತೆರೆದಿಟ್ಟ ಜಗತ್ತು, ನಾವು ನಮ್ಮ ನಮ್ಮೊಳಗಿನ ಜಗತ್ತು ನೋಡಿಕೊಳ್ಳುವುದನ್ನು ತುಸುವಾದರೂ ಕಲಿಸಿದೆ. ಕಲಿಸುತ್ತಿರುತ್ತದೆ..

  • ಅನುಪಮಾ ಪ್ರಸಾದ್ ರವರು ಲೇಖಕಿಯಾಗಿದ್ದು ಇತ್ತೀಚೆಗೆ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿ ಬರೆದಿದ್ದಾರೆ.

ಇದನ್ನು ಓದಿ: ಗೀತಾ ನಾಗಭೂಷಣ ತಮ್ಮ ಪುಸ್ತಕಗಳ ಜೊತೆ ಸದಾ ಜೀವಂತವಾಗಿ ಇರುತ್ತಾರೆ: ಶ್ರದ್ಧಾಂಜಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...