Homeಕರ್ನಾಟಕರಂಗಾಸಕ್ತರಿಗೆ ವಿಶೇಷ ಅವಕಾಶ: ತುಮಕೂರಿನ ಡೀಪ್ ಪೋಕಸ್ ಸಂಸ್ಥೆಯಿಂದ ಅಭಿನಯ ತರಭೇತಿ ಕಾರ್ಯಗಾರ

ರಂಗಾಸಕ್ತರಿಗೆ ವಿಶೇಷ ಅವಕಾಶ: ತುಮಕೂರಿನ ಡೀಪ್ ಪೋಕಸ್ ಸಂಸ್ಥೆಯಿಂದ ಅಭಿನಯ ತರಭೇತಿ ಕಾರ್ಯಗಾರ

ಪ್ರವೇಶ ಉಚಿತವಾಗಿದ್ದು ಪ್ರತಿದಿನ ಮದ್ಯಾಹ್ನ 3.30 ರಿಂದ ಸಂಜೆ 8 ರವರೆಗೆ, ತುಮಕೂರಿನ ಅಮಾನಿಕೆರೆಯ ಎದುರುಗಡೆ ಇರುವ ಕನ್ನಡ ಭವನದಲ್ಲಿ ಶಿಬಿರ ನಡೆಯಲಿದೆ

- Advertisement -
- Advertisement -

| ಅನಿಲ್ ಕುಮಾರ್ ಚಿಕ್ಕದಾಳವಟ್ಟ |

ಕನ್ನಡ ರಂಗಭೂಮಿಯಲ್ಲಿ ತುಮಕೂರು ವಿಶೇಷ ಸ್ಥಾನವನ್ನು ಪಡೆದಿದೆ. ಕಂಪನಿ ನಾಟಕದ ದಿಗ್ಗಜರಲ್ಲೊಬ್ಬರಾದ ಗುಬ್ಬಿ ವೀರಣ್ಣನವರ ತವರು ಜಿಲ್ಲೆಯಾದ ಇಲ್ಲಿ, ಈಗಲೂ ಎಂದಿಗೂ ನಿಲ್ಲದಂತೆ ಪ್ರತಿ ಶನಿವಾರ ಮತ್ತು ಭಾನುವಾರ ಪೌರಾಣೀಕ ನಾಟಕ ನಡೆಯತ್ತಲೇ ಇವೆ. ಮುಂಗಡವಾಗಿ 6 ತಿಂಗಳವರೆಗೂ ಈ ವಾರಗಳು ಕಾಯ್ದಿರಿಸುತ್ತಾರೆ. ಇಂತಹ ರಂಗ ನೆಲೆಯ ಹಿನ್ನಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಸಾಕಷ್ಟು ಆಧುನಿಕ ರಂಗಭೂಮಿ ಚಟುವಟಿಕೆಗಳು ನಡೆಯುತ್ತಿವೆ. ಇದೀಗ ಹೆಸರಾಂತ ರಂಗ ನಿರ್ಧೇಶಕ ನಟರಾಜ್ ಹೊನ್ನವಳ್ಳಿ ಅವರ ನೇತೃತ್ವದ ಡೀಪ್ ಪೋಕಸ್ ಸಂಸ್ಥೆಯು ಹತ್ತು ದಿನಗಳ ಅಭಿನಯ ತರಭೇತಿ ಶಿಬಿರ ಹಮ್ಮಿಕೊಂಡಿದೆ. ಜೂನ್ 23 ರಿಂದ ಜುಲೈ 2ರವರೆಗೆ ಶಿಬಿರ ನಡೆಯಲಿದ್ದು, ಜೂನ್ 23ರ ಭಾನುವಾರ ಸಂಜೆ 5.30ಕ್ಕೆ ಶಿಬಿರ ಉದ್ಘಾಟನೆಗೊಳ್ಳಲಿದೆ. ಈ ಶಿಬಿರವನ್ನು ಉದ್ಘಾಟಿಸಲು ರಂಗಭೂಮಿ ಮತ್ತು ಸಿನೆಮಾ ನಟರಾದ ಅಚ್ಯುತ್, ನೀನಾಸಂ ಸತೀಶ್, ಧರ್ಮೇಂದ್ರ ಮುಂತಾದವರು ಭಾಗವಹಿಸಲಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್‍ನ ತುಮಕೂರು ಜಿಲ್ಲಾ ಘಟಕ, ಝೆನ್ ಟೀಮ್ ಮತ್ತು ಸಮ್ಮತ ಥೀಯೇಟರ್ ತುಮಕೂರು ಇವರ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ಪ್ರವೇಶ ಉಚಿತವಾಗಿದ್ದು ಪ್ರತಿದಿನ ಮದ್ಯಾಹ್ನ 3.30 ರಿಂದ ಸಂಜೆ 8 ರವರೆಗೆ, ತುಮಕೂರಿನ ಅಮಾನಿಕೆರೆಯ ಎದುರುಗಡೆ ಇರುವ ಕನ್ನಡ ಭವನದಲ್ಲಿ ಶಿಬಿರ ನಡೆಯಲಿದೆ. ಈ ಶಿಬಿರಕ್ಕೆ ರಂಗನಿರ್ಧೇಕರಾದ ಚನ್ನಕೇಶವ ಜಿ, ಶಿವಮೊಗ್ಗ ರಂಗಾಯಣ ನಿರ್ದೇಶಕರಾದ ಎಂ.ಗಣೇಶ್, ನಟರಾದ ಅಚ್ಯುತ್, ನೀನಾಸಂ ಸತೀಶ್, ಹನುಮಂತೇಗೌಡ ,ನಟಿ ಅಂಜಾನಾ ಶೆಟ್ಟಿ ತುಮಕೂರಿನ ರಂಗಕರ್ಮಿಗಳಾದ ಗೋಮಾರದಹಳ್ಳಿ ಮಂಜುನಾಥ್, ಉಗಮ ಶ್ರೀನಿವಾಸ್, ತಿಪಟೂರು ಚಂದ್ರು, ರಂಗಾಯಣ ರವಿಶಂಕರ್ , ಚೇತನ್ ನೀನಾಸಂ ಮುಂತಾದ ಪ್ರತಿಭೆಗಳು ಜೊತೆಯಾಗಲಿದ್ದಾರೆ.

ಶಿಬಿರದ ನಿರ್ದೇಶಕರಾಗಿ ನಟರಾಜ್ ಹೊನ್ನವಳ್ಳಿ

ನಟರಾಜ್ ಹೊನ್ನವಳ್ಳಿಯವರು ಮೂಲತಹ ತಿಟೂರಿನ ಹೊನ್ನವಳ್ಳಿಯವರಾಗಿದ್ದಾರೆ. ನೀನಾಸಂ ಸಂಸ್ಥೆಯಲ್ಲಿ ರಂಗಶಿಕ್ಷಣದ ಕೋರ್ಸ್ ಮಾಡಿರುವ ಇವರು ಪಾಶ್ಚತ್ಯ ರಂಗಭೂಮಿನ ಕುರಿತು ವಿಶೇಷ ಆಧ್ಯಯನವನ್ನು ಮಾಡಿದ್ದಾರೆ. ತಿಪಟೂರಿನಲ್ಲಿ ಪ್ರೋಥಿಯೋ ಎಂಬ ತಂಡವನ್ನು ಕಟ್ಟಿದ್ದರು. ನಾಡಿನ ಖ್ಯಾತ ರಂಗ ನೀರ್ದೇಶಕರಾಗಿ ಗುರುತಿಸಿಕೊಂಡಿರುವ ಇವರು ಕ್ರೀಯಾಶೀಲ ರಂಗಕರ್ಮಿಯಾಗಿದ್ದಾರೆ.

ನಟರಾಜ್ ಹೊನ್ನವಳ್ಳಿ

ಲಂಕೇಶರ ಬದುಕು, ಶಂಕರ ಮೊಕಾಶಿ ಪುಣೇಕರ್ ಅವರ ನಟ ನಾರಾಯಣಿ , ಪೂರ್ಣಚಂದ್ರ ತೇಜಸ್ವಿಯವರ ಜುಗಾರಿ ಕ್ರಾಸ್, ಮಾಸ್ತಿಯವರ ಸುಬ್ಬಣ್ಣ ಕಾದಂಬರಿ, ಗುಣಮುಖ, ಮುದುಕನ ಮದುವೆ, ಶೇಕ್ಸಫೀಯರ್ ಮನೆಗೆ ಬಂದ ಮುಂತಾದ 50ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಯೂ ಸಂದಿದೆ. ಇವರ ರಂಗಸಾಧನೆಗಾಗಿ ತಿಪಟೂರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕ.ಸಾ.ಪ ಗೌರವಿಸಿತ್ತು.

ಡೀಪ್ ಪೋಕಸ್ ಸಂಸ್ಥೆಯ ಕುರಿತು

ಡೀಪ್ ಪೋಕಸ್ ಸಂಸ್ಥೆ ರಂಗ ನಿರ್ಧೇಶಕ ನಟರಾಜ್ ಹೊನ್ನವಳ್ಳಿಯವರ ಕನಸಿನ ಅಭಿನಯ ತರಬೇತಿ ಸಂಸ್ಥೆಯಾಗಿದೆ. ಈ ಸಂಸ್ಥೆಯು ರಂಗಭೂಮಿ ಮತ್ತು ಸಿನೆಮಾ ನಟನೆಯ ಮತ್ತು ಅಭಿನಯ ತಂತ್ರಗಳ ಬಗ್ಗೆ ಅಧ್ಯಯನ ಸಂಸ್ಥೆಯಾಗಿ ಮುಂದಿನ ದಿನಗಳಲ್ಲಿ ರೂಪುಗೊಳ್ಳಲಿದೆ. ಸದ್ಯ ಹತ್ತು ದಿನಗಳ ಕಾರ್ಯಗಾರ ನಡೆಯುತ್ತಿದ್ದು ನಂತರ ಶಿಬಿರದ ನಿರ್ದೇಶಕರಾದ ನಟರಾಜ್ ಹೊನ್ನವಳ್ಳಿಯವರ ನಿರ್ದೇಶನದಲ್ಲಿ ದ.ರಾ.ಬೇಂದ್ರೆ ರಚಿಸಿರುವಂತಹ ಕಾಳಿದಾಸರ ಮೇಘದೂತ ನಾಟಕ ನಿರ್ಮಾಣವಾಗಲಿದೆ. ಹೀಗೆ ಸಿನೆಮಾ ಮತ್ತು ರಂಗಭೂಮಿಯ ಅಭಿನಯಕ್ಕಾಗಿ ದೇಹ ಮತ್ತು ಮನಸ್ಸನ್ನು ಸಿದ್ಧಪಡಿಸಿಕೊಳ್ಳುವುದು ಹೇಗೆ ಮತ್ತು ನಿರ್ದೇಶನವನ್ನೂ ಒಳಗೊಂಡೊಂತೆ ಬೇರೆ ಬೇರೆ ವಿಭಾಗಗಳನ್ನು ಕಲಿಸುವ ನಿಟ್ಟಿನಲ್ಲಿ ಡೀಪ್ ಫೋಕಸ್ ಅಭಿನಯ ಸ್ಟೋಡಿಯೋ ರೂಪುಗೊಳ್ಳಲಿದೆ. ತುಮಕೂರು ಭಾಗದಲ್ಲಿ ಒಂದು ರಂಗಭೂಮಿ ಮತ್ತು ಸಿನೆಮಾಕ್ಕೆ ಸಂಬಂಧಿಸಿದ ಶಾಲೆಯಾಗಿ ರೂಪುಗೊಳ್ಳೂವ ಸಿದ್ದತೆಯಲ್ಲಿರುವುದ ಸಂತಸದ ವಿಷಯ.

ತರಭೇತಿ ಶಿಬಿರದಲ್ಲಿ ಭಾಗವಹಿಸುವವರು ಹೆಚ್ಚಿನ ಮಾಹಿತಿಗೆ ಈ ಈ ಮೊಬೈಲ್ ನಂಬರ್ ಗಳಿಗೆ ಸಂಪರ್ಕಿಸಬಹುದಾಗಿದೆ. 9606546903, 7676360812, 9901848170, 8105515256.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...