Homeಮುಖಪುಟದೇಗುಲದಲ್ಲಿ ದೇವರಿಲ್ಲ; 120 ವರ್ಷ ಹಳೆಯ ರವೀಂದ್ರನಾಥ ಠಾಕೂರರ ಕವಿತೆ ವೈರಲ್

ದೇಗುಲದಲ್ಲಿ ದೇವರಿಲ್ಲ; 120 ವರ್ಷ ಹಳೆಯ ರವೀಂದ್ರನಾಥ ಠಾಕೂರರ ಕವಿತೆ ವೈರಲ್

ಬಂಗಾಲಿ ಕ್ಯಾಲೆಂಡರ್‌ ಪ್ರಕಾರ ಆಗಸ್ಟ್ 5 ರಂದು ಈ ಕವಿತೆಗೆ ಸರಿಯಾಗಿ 120 ವರ್ಷ ಆಗುತ್ತದೆ ಎಂದು ಜೆಎನ್‌ಯು ಹಳೆವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

- Advertisement -
- Advertisement -

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಯುತ್ತಿದ್ದಂತೆ ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಠಾಕೂರರ 120 ವರ್ಷಗಳಷ್ಟು ಹಳೆಯ ಕವನವೊಂದು ವೈರಲ್ ಆಗಿದೆ.

ರವೀಂದ್ರನಾಥ ಟ್ಯಾಗೋರ್‌ರ ‘ದೀನೋ ದಾನ್’ (ನಿರ್ಗತಿಕರಿಗೆ ದಾನ ಮಾಡುವುದು) ಶಿರ್ಷಿಕೆಯಿರುವ “ದೇಗುಲದಲ್ಲಿ ದೇವರಿಲ್ಲ” ಎಂಬ ಕವಿತೆಯು ಆಗಸ್ಟ್ 5 ರಿಂದ ಸಾಮಾಜಿಕ ಜಾಲತಾಣದಲ್ಲಿ ಸುತ್ತುತ್ತಿದೆ. ಹಲವಾರು ಜನರು ಇದನ್ನು ತಮ್ಮ ಜಾಲತಾಣದ ಖಾತೆಗಳಲ್ಲಿ ಹಂಚುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. ಈ ಸಮಾರಂಭದ ಮಧ್ಯೆ ಭಾರತದಲ್ಲಿ ಕೊರೊನಾದಿಂದಾದ ಸಾವುಗಳು  40,000 ಗಡಿ ದಾಟಿದ್ದವು. ಬುಧವಾರ ಒಂದೇ ದಿನ 918 ಜನರು ಸಾವಿಗೀಡಾಗುವುದರೊಂದಿಗೆ ದೇಶವು ತನ್ನ ಅತಿದೊಡ್ಡ ಏಕದಿನ ಸಾವಿನ ಪ್ರಮಾಣವನ್ನು ದಾಖಲಿಸಿತು.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಠಾಗೋರ್ ಕವಿತೆ ಮತ್ತು ರಾಮ ಮಂದಿರ ಸಮಾರಂಭದ ನಡುವೆ ಸಾಮ್ಯತೆಯನ್ನು ಕಂಡುಕೊಂಡಿದ್ದಾರೆ.

ಕನ್ನಡದ ಪ್ರಸಿದ್ದ ವಿಜ್ಞಾನ ಲೇಖಕ ಡಾ. ನಾಗೇಶ ಹೆಗ್ಡೆ ಈ ಕವಿತೆಯ ಕನ್ನಡ ಅನುವಾದವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.

ಈ ದೇಗುಲದಲ್ಲಿ ದೇವರಿಲ್ಲ …. [ನಿನ್ನೆ ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆಯುತ್ತಿದ್ದ ಸಂದರ್ಭದಲ್ಲಿ ಕವಿ ರವೀಂದ್ರನಾಥ ಠಾಕೂರರ ಕವನವೊಂದು…

Posted by Nagesh Hegde on Thursday, August 6, 2020

ನಾಗೆಶ್ ಹಗ್ಡೆ ಅವರ ಫೇಸ್‌ಬುಕ್‌ ವಾಲಲ್ಲಿ ಇರುವ ಕವನದವ ಪೂರ್ಣ ಪಠ್ಯ ಕೆಳಗಿನಂತಿದೆ:

“ಈ ದೇಗುಲದಲ್ಲಿ ದೇವರಿಲ್ಲʼʼ ಎಂದುಸುರಿದ ಆ ಸಂತ
ರಾಜನಿಗೆ ಕೋಪ ಉಕ್ಕಿ ಬಂತು
“ಏನೆಂದೆ ದೇವನಿಲ್ಲವೆ? ನೀನೇನು ಸಂತನೋ ನಾಸ್ತಿಕನೊ?
ಕಾಣುವುದಿಲ್ಲವೆ ನಿನಗೆ ವಜ್ರಖಚಿತ ಪೀಠ
ದೇವಮೂರ್ತಿಯ ಮಿನುಗುವ ಮುಕುಟ?”

“ಕಾಣುತ್ತಿವೆ ನನಗೆ. ರಾಜನ ಡೌಲತ್ತಿನ ಚಿಹ್ನೆಗಳಷ್ಟೇ ಕಾಣುತ್ತಿವೆ.
ಹೇ ರಾಜಾ, ನೀನು ನಿನ್ನ ಪ್ರತಿಷ್ಠೆಯನ್ನೇ ಅಲ್ಲಿ ಪ್ರತಿಷ್ಠಾಪಿಸಿಕೊಂಡಿರುವೆ,
ದೇವರನ್ನಲ್ಲ” ಸಂತ ಉಸುರಿದ

ಕೆಂಗಣ್ಣು ಬೀರಿ ರಾಜ ಗುಡುಗಿದ: ಗಗನಚುಂಬಿ ಈ
ದೇಗುಲದ ಮೇಲೆ ಇಪ್ಪತ್ತು ಲಕ್ಷ
ಚಿನ್ನದ ವರಹಗಳನ್ನು ಸುರಿದಿದ್ದೇನೆ, ಶಾಸ್ತ್ರೋಕ್ತ
ಪೂಜೆ ಮಾಡಿದ್ದೇನೆ, ದೇವರಿಲ್ಲವೆನ್ನಲು ನಿನಗೆಷ್ಟು ಧೈರ್ಯ?

ಸಂತ ಶಾಂತವಾಣಿಯಲ್ಲಿ ಹೇಳಿದ: ಇದೇ ವರ್ಷ ನಿನ್ನ ಇಪ್ಪತ್ತು ಲಕ್ಷ
ಪ್ರಜೆಗಳು ಬರಗಾಲಕ್ಕೆ ತುತ್ತಾಗಿದ್ದಾರೆ
ಕೂಳಿಲ್ಲದೆ, ನೀರಿಲ್ಲದೆ ಕಂಗಾಲಾಗಿದ್ದಾರೆ
ನಿನ್ನ ಬಾಗಿಲಿಗೆ ಬಂದು ಅಂಗಲಾಚಿದ್ದಾರೆ
ನಿನ್ನರಮನೆಯಿಂದ ನೂಕಿಸಿಕೊಂಡಿದ್ದಾರೆ.
ಅವರೆಲ್ಲ ಗುಡ್ಡಬೆಟ್ಟಗಳಲ್ಲಿ, ರಸ್ತೆಬದಿಗಳಲ್ಲಿ,
ಪಾಳುಗುಡಿಗಳಲ್ಲಿ ಆಸರೆ ಪಡೆದು ಒರಗಿದ್ದಾರೆ

ಇದೇ ವರ್ಷ ನೀನು ಇಪ್ಪತ್ತು ಲಕ್ಷ ಚಿನ್ನದ ವರಹಗಳನ್ನು
ಸುರಿದು ದೇಗುಲ ಕಟ್ಟಿದ್ದೀಯೆ. ಅದನ್ನು ನೋಡಿ
ದೇವರು ಹೇಳಿದ್ದೇನು ಗೊತ್ತೆ?

ʼʼನೀಲಾಕಾಶದ ಮಿನುಗುವ ತಾರೆಗಳಲ್ಲಿ ನಾನಿದ್ದೇನೆ
ಸತ್ಯ, ಶಾಂತಿ, ದಯೆ ಮತ್ತು ಪ್ರೀತಿಯೇ
ನನ್ನ ಮನೆಯ ಅಡಿಪಾಯಗಳಾಗಿವೆ
ತನ್ನದೇ ಪ್ರಜೆಗಳಿಗೆ ಆಸರೆ ಕೊಡಲಾಗದ ಈ ಜಿಪುಣ ರಾಜ
ನನಗೇನು ದೇಗುಲ ಕಟ್ಟಿಸಿಯಾನು” ಎನ್ನುತ್ತ ದೇವರು ನಿನ್ನ ಆ
ದೇಗುಲವನ್ನು ಬಿಟ್ಟು ದೂರ ನಡೆದಿದ್ದಾನೆ ರಾಜನ್

ಸಾಲುಮರಗಳ ನೆರಳಿನಲ್ಲಿ ಬಿದ್ದಿರುವ ಆ ಗರೀಬರ
ಮನದಲ್ಲಿ ನೆಲೆಸಿದ್ದಾನೆ ಅವನೀಗ
ವಿಶಾಲ ಸಾಗರದ ಮೇಲಿನ ನೀರ್ಗುಳ್ಳೆಗಳಂತೆ
ಈ ನಿನ್ನ ದೇಗುಲ ಟೊಳ್ಳುಪೊಳ್ಳಾಗಿ ಮಿನುಗುತ್ತಿದೆ
ನಿನ್ನ ಪ್ರತಿಷ್ಠೆ ಮತ್ತು ಸಂಪತ್ತಿನ ಪ್ರತೀಕವಾಗಿ ….

ಇಷ್ಟೇ ಅಲ್ಲದೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಮತ್ತು ಜೆಎನ್‌ಯುನ ಹಳೆಯ ವಿದ್ಯಾರ್ಥಿ ಬನೋಜ್ಯೋತ್ಸ್‌ನಾ ಲಾಹಿರಿ ಅವರು ಈ ಕವಿತೆಯನ್ನು ಫೇಸ್‌ಬುಕ್‌ನಲ್ಲಿ ಮೊದಲು ಪೋಸ್ಟ್ ಮಾಡಿದ್ದಾರೆ. ಬಂಗಾಳಿ ಕ್ಯಾಲೆಂಡರ್ ಪ್ರಕಾರ ನಿಖರವಾಗಿ 120 ವರ್ಷಗಳ ಹಿಂದೆ ಈ ಕವಿತೆಯನ್ನು ಬರೆಯಲಾಗಿದೆ ಎಂದು ಅವರು ಪೇಸ್‌ಬುಕ್‌ನಲ್ಲಿ ವಿವರಿಸಿದ್ದಾರೆ.

Is this a coincidence that exactly 120 years ago, on this very day, Rabindranath Tagore wrote a poem "Deeno Daan". It…

Posted by Banojyotsna Lahiri on Wednesday, August 5, 2020

ಇವರನ್ನು ಅನುಸರಿಸಿ, ಈ ಕವಿತೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೊರೊಣಾ ವೈರಸ್ ಕಾಲದ ನಡುವೆ ಕವಿತೆಯು ಅನೇಕ ಸಾಮ್ಯತೆಗಳನ್ನು ಕಂಡುಕೊಂಡಿದೆ. ಅನೇಕರು ಟ್ಯಾಗೋರ್‌ರನ್ನು ಶ್ಲಾಘಿಸಿದ್ದಾರೆ.

1900 ರಲ್ಲಿ (ಬಂಗಾಳಿ ವರ್ಷ 1307) ಬರೆದ ಟ್ಯಾಗೋರ್ ಅವರ ಕವನ ಸಂಕಲನವಾದ ಕಹಿನಿಯ ಭಾಗವೇ ‘ಡೀನೋ ಡಾನ್’.  ಶತಮಾನದ ನಂತರ ವೈರಲ್ ಆದ ಕವನ ನಮ್ಮನ್ನು ಎಚ್ಚರಿಸುವುದೇನೆಂದರೆ ”ಠಾಗೋರ್‌ಗೆ ಎಂದಿಗೂ ವಯಸ್ಸಾಗುವುದಿಲ್ಲ” ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.


ಓದಿ: ಮಂದಿರ ಭವ್ಯವಾಗಬಹುದು; ಪವಿತ್ರವಾಗಿರುವುದಿಲ್ಲ: ಜಿ ರಾಜಶೇಖರ್


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...