Homeಮುಖಪುಟದೇಗುಲದಲ್ಲಿ ದೇವರಿಲ್ಲ; 120 ವರ್ಷ ಹಳೆಯ ರವೀಂದ್ರನಾಥ ಠಾಕೂರರ ಕವಿತೆ ವೈರಲ್

ದೇಗುಲದಲ್ಲಿ ದೇವರಿಲ್ಲ; 120 ವರ್ಷ ಹಳೆಯ ರವೀಂದ್ರನಾಥ ಠಾಕೂರರ ಕವಿತೆ ವೈರಲ್

ಬಂಗಾಲಿ ಕ್ಯಾಲೆಂಡರ್‌ ಪ್ರಕಾರ ಆಗಸ್ಟ್ 5 ರಂದು ಈ ಕವಿತೆಗೆ ಸರಿಯಾಗಿ 120 ವರ್ಷ ಆಗುತ್ತದೆ ಎಂದು ಜೆಎನ್‌ಯು ಹಳೆವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

- Advertisement -
- Advertisement -

ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಶಿಲಾನ್ಯಾಸ ನಡೆಯುತ್ತಿದ್ದಂತೆ ನೋಬೆಲ್ ಪುರಸ್ಕೃತ ಕವಿ ರವೀಂದ್ರನಾಥ ಠಾಕೂರರ 120 ವರ್ಷಗಳಷ್ಟು ಹಳೆಯ ಕವನವೊಂದು ವೈರಲ್ ಆಗಿದೆ.

ರವೀಂದ್ರನಾಥ ಟ್ಯಾಗೋರ್‌ರ ‘ದೀನೋ ದಾನ್’ (ನಿರ್ಗತಿಕರಿಗೆ ದಾನ ಮಾಡುವುದು) ಶಿರ್ಷಿಕೆಯಿರುವ “ದೇಗುಲದಲ್ಲಿ ದೇವರಿಲ್ಲ” ಎಂಬ ಕವಿತೆಯು ಆಗಸ್ಟ್ 5 ರಿಂದ ಸಾಮಾಜಿಕ ಜಾಲತಾಣದಲ್ಲಿ ಸುತ್ತುತ್ತಿದೆ. ಹಲವಾರು ಜನರು ಇದನ್ನು ತಮ್ಮ ಜಾಲತಾಣದ ಖಾತೆಗಳಲ್ಲಿ ಹಂಚುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿದರು. ಈ ಸಮಾರಂಭದ ಮಧ್ಯೆ ಭಾರತದಲ್ಲಿ ಕೊರೊನಾದಿಂದಾದ ಸಾವುಗಳು  40,000 ಗಡಿ ದಾಟಿದ್ದವು. ಬುಧವಾರ ಒಂದೇ ದಿನ 918 ಜನರು ಸಾವಿಗೀಡಾಗುವುದರೊಂದಿಗೆ ದೇಶವು ತನ್ನ ಅತಿದೊಡ್ಡ ಏಕದಿನ ಸಾವಿನ ಪ್ರಮಾಣವನ್ನು ದಾಖಲಿಸಿತು.

ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಠಾಗೋರ್ ಕವಿತೆ ಮತ್ತು ರಾಮ ಮಂದಿರ ಸಮಾರಂಭದ ನಡುವೆ ಸಾಮ್ಯತೆಯನ್ನು ಕಂಡುಕೊಂಡಿದ್ದಾರೆ.

ಕನ್ನಡದ ಪ್ರಸಿದ್ದ ವಿಜ್ಞಾನ ಲೇಖಕ ಡಾ. ನಾಗೇಶ ಹೆಗ್ಡೆ ಈ ಕವಿತೆಯ ಕನ್ನಡ ಅನುವಾದವನ್ನು ತಮ್ಮ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದಾರೆ.

ಈ ದೇಗುಲದಲ್ಲಿ ದೇವರಿಲ್ಲ …. [ನಿನ್ನೆ ಅಯೋಧ್ಯೆಯಲ್ಲಿ ಶಿಲಾನ್ಯಾಸ ನಡೆಯುತ್ತಿದ್ದ ಸಂದರ್ಭದಲ್ಲಿ ಕವಿ ರವೀಂದ್ರನಾಥ ಠಾಕೂರರ ಕವನವೊಂದು…

Posted by Nagesh Hegde on Thursday, August 6, 2020

ನಾಗೆಶ್ ಹಗ್ಡೆ ಅವರ ಫೇಸ್‌ಬುಕ್‌ ವಾಲಲ್ಲಿ ಇರುವ ಕವನದವ ಪೂರ್ಣ ಪಠ್ಯ ಕೆಳಗಿನಂತಿದೆ:

“ಈ ದೇಗುಲದಲ್ಲಿ ದೇವರಿಲ್ಲʼʼ ಎಂದುಸುರಿದ ಆ ಸಂತ
ರಾಜನಿಗೆ ಕೋಪ ಉಕ್ಕಿ ಬಂತು
“ಏನೆಂದೆ ದೇವನಿಲ್ಲವೆ? ನೀನೇನು ಸಂತನೋ ನಾಸ್ತಿಕನೊ?
ಕಾಣುವುದಿಲ್ಲವೆ ನಿನಗೆ ವಜ್ರಖಚಿತ ಪೀಠ
ದೇವಮೂರ್ತಿಯ ಮಿನುಗುವ ಮುಕುಟ?”

“ಕಾಣುತ್ತಿವೆ ನನಗೆ. ರಾಜನ ಡೌಲತ್ತಿನ ಚಿಹ್ನೆಗಳಷ್ಟೇ ಕಾಣುತ್ತಿವೆ.
ಹೇ ರಾಜಾ, ನೀನು ನಿನ್ನ ಪ್ರತಿಷ್ಠೆಯನ್ನೇ ಅಲ್ಲಿ ಪ್ರತಿಷ್ಠಾಪಿಸಿಕೊಂಡಿರುವೆ,
ದೇವರನ್ನಲ್ಲ” ಸಂತ ಉಸುರಿದ

ಕೆಂಗಣ್ಣು ಬೀರಿ ರಾಜ ಗುಡುಗಿದ: ಗಗನಚುಂಬಿ ಈ
ದೇಗುಲದ ಮೇಲೆ ಇಪ್ಪತ್ತು ಲಕ್ಷ
ಚಿನ್ನದ ವರಹಗಳನ್ನು ಸುರಿದಿದ್ದೇನೆ, ಶಾಸ್ತ್ರೋಕ್ತ
ಪೂಜೆ ಮಾಡಿದ್ದೇನೆ, ದೇವರಿಲ್ಲವೆನ್ನಲು ನಿನಗೆಷ್ಟು ಧೈರ್ಯ?

ಸಂತ ಶಾಂತವಾಣಿಯಲ್ಲಿ ಹೇಳಿದ: ಇದೇ ವರ್ಷ ನಿನ್ನ ಇಪ್ಪತ್ತು ಲಕ್ಷ
ಪ್ರಜೆಗಳು ಬರಗಾಲಕ್ಕೆ ತುತ್ತಾಗಿದ್ದಾರೆ
ಕೂಳಿಲ್ಲದೆ, ನೀರಿಲ್ಲದೆ ಕಂಗಾಲಾಗಿದ್ದಾರೆ
ನಿನ್ನ ಬಾಗಿಲಿಗೆ ಬಂದು ಅಂಗಲಾಚಿದ್ದಾರೆ
ನಿನ್ನರಮನೆಯಿಂದ ನೂಕಿಸಿಕೊಂಡಿದ್ದಾರೆ.
ಅವರೆಲ್ಲ ಗುಡ್ಡಬೆಟ್ಟಗಳಲ್ಲಿ, ರಸ್ತೆಬದಿಗಳಲ್ಲಿ,
ಪಾಳುಗುಡಿಗಳಲ್ಲಿ ಆಸರೆ ಪಡೆದು ಒರಗಿದ್ದಾರೆ

ಇದೇ ವರ್ಷ ನೀನು ಇಪ್ಪತ್ತು ಲಕ್ಷ ಚಿನ್ನದ ವರಹಗಳನ್ನು
ಸುರಿದು ದೇಗುಲ ಕಟ್ಟಿದ್ದೀಯೆ. ಅದನ್ನು ನೋಡಿ
ದೇವರು ಹೇಳಿದ್ದೇನು ಗೊತ್ತೆ?

ʼʼನೀಲಾಕಾಶದ ಮಿನುಗುವ ತಾರೆಗಳಲ್ಲಿ ನಾನಿದ್ದೇನೆ
ಸತ್ಯ, ಶಾಂತಿ, ದಯೆ ಮತ್ತು ಪ್ರೀತಿಯೇ
ನನ್ನ ಮನೆಯ ಅಡಿಪಾಯಗಳಾಗಿವೆ
ತನ್ನದೇ ಪ್ರಜೆಗಳಿಗೆ ಆಸರೆ ಕೊಡಲಾಗದ ಈ ಜಿಪುಣ ರಾಜ
ನನಗೇನು ದೇಗುಲ ಕಟ್ಟಿಸಿಯಾನು” ಎನ್ನುತ್ತ ದೇವರು ನಿನ್ನ ಆ
ದೇಗುಲವನ್ನು ಬಿಟ್ಟು ದೂರ ನಡೆದಿದ್ದಾನೆ ರಾಜನ್

ಸಾಲುಮರಗಳ ನೆರಳಿನಲ್ಲಿ ಬಿದ್ದಿರುವ ಆ ಗರೀಬರ
ಮನದಲ್ಲಿ ನೆಲೆಸಿದ್ದಾನೆ ಅವನೀಗ
ವಿಶಾಲ ಸಾಗರದ ಮೇಲಿನ ನೀರ್ಗುಳ್ಳೆಗಳಂತೆ
ಈ ನಿನ್ನ ದೇಗುಲ ಟೊಳ್ಳುಪೊಳ್ಳಾಗಿ ಮಿನುಗುತ್ತಿದೆ
ನಿನ್ನ ಪ್ರತಿಷ್ಠೆ ಮತ್ತು ಸಂಪತ್ತಿನ ಪ್ರತೀಕವಾಗಿ ….

ಇಷ್ಟೇ ಅಲ್ಲದೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಮತ್ತು ಜೆಎನ್‌ಯುನ ಹಳೆಯ ವಿದ್ಯಾರ್ಥಿ ಬನೋಜ್ಯೋತ್ಸ್‌ನಾ ಲಾಹಿರಿ ಅವರು ಈ ಕವಿತೆಯನ್ನು ಫೇಸ್‌ಬುಕ್‌ನಲ್ಲಿ ಮೊದಲು ಪೋಸ್ಟ್ ಮಾಡಿದ್ದಾರೆ. ಬಂಗಾಳಿ ಕ್ಯಾಲೆಂಡರ್ ಪ್ರಕಾರ ನಿಖರವಾಗಿ 120 ವರ್ಷಗಳ ಹಿಂದೆ ಈ ಕವಿತೆಯನ್ನು ಬರೆಯಲಾಗಿದೆ ಎಂದು ಅವರು ಪೇಸ್‌ಬುಕ್‌ನಲ್ಲಿ ವಿವರಿಸಿದ್ದಾರೆ.

Is this a coincidence that exactly 120 years ago, on this very day, Rabindranath Tagore wrote a poem "Deeno Daan". It…

Posted by Banojyotsna Lahiri on Wednesday, August 5, 2020

ಇವರನ್ನು ಅನುಸರಿಸಿ, ಈ ಕವಿತೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕೊರೊಣಾ ವೈರಸ್ ಕಾಲದ ನಡುವೆ ಕವಿತೆಯು ಅನೇಕ ಸಾಮ್ಯತೆಗಳನ್ನು ಕಂಡುಕೊಂಡಿದೆ. ಅನೇಕರು ಟ್ಯಾಗೋರ್‌ರನ್ನು ಶ್ಲಾಘಿಸಿದ್ದಾರೆ.

1900 ರಲ್ಲಿ (ಬಂಗಾಳಿ ವರ್ಷ 1307) ಬರೆದ ಟ್ಯಾಗೋರ್ ಅವರ ಕವನ ಸಂಕಲನವಾದ ಕಹಿನಿಯ ಭಾಗವೇ ‘ಡೀನೋ ಡಾನ್’.  ಶತಮಾನದ ನಂತರ ವೈರಲ್ ಆದ ಕವನ ನಮ್ಮನ್ನು ಎಚ್ಚರಿಸುವುದೇನೆಂದರೆ ”ಠಾಗೋರ್‌ಗೆ ಎಂದಿಗೂ ವಯಸ್ಸಾಗುವುದಿಲ್ಲ” ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.


ಓದಿ: ಮಂದಿರ ಭವ್ಯವಾಗಬಹುದು; ಪವಿತ್ರವಾಗಿರುವುದಿಲ್ಲ: ಜಿ ರಾಜಶೇಖರ್


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...