Homeಕರ್ನಾಟಕಆರ್‌ಎಸ್‌ಎಸ್‌ನವರಿದ್ದರು, ಪೊಲೀಸರ ರಕ್ಷಣೆ ಸಿಗದಿದ್ದರೆ ಹಲ್ಲೆಯಾಗುತ್ತಿತ್ತೇನೋ: ‘ಟಿಪ್ಪು’ ನಾಟಕ ವಿವಾದ ಕುರಿತು ಟಿ.ಗುರುರಾಜ್ ಹೇಳಿಕೆ

ಆರ್‌ಎಸ್‌ಎಸ್‌ನವರಿದ್ದರು, ಪೊಲೀಸರ ರಕ್ಷಣೆ ಸಿಗದಿದ್ದರೆ ಹಲ್ಲೆಯಾಗುತ್ತಿತ್ತೇನೋ: ‘ಟಿಪ್ಪು’ ನಾಟಕ ವಿವಾದ ಕುರಿತು ಟಿ.ಗುರುರಾಜ್ ಹೇಳಿಕೆ

- Advertisement -
- Advertisement -

ಪೊಲೀಸರ ಬಿಗಿ ಭದ್ರತೆಯಲ್ಲಿ ‘ಟಿಪ್ಪು ನಿಜಕನಸುಗಳು’ ನಾಟಕವನ್ನು ಮೈಸೂರು ರಂಗಾಯಣದ ಭೂಮಿಗೀತದಲ್ಲಿ ಭಾನುವಾರ ಪ್ರದರ್ಶಿಸಲಾಯಿತು. ಆ ನಾಟಕ ನೋಡಲು ಪತ್ರಕರ್ತ ಟಿ.ಗುರುರಾಜ್‌ ಮತ್ತು ರಂಗಾಯಣದ ಮಾಜಿ ನಿರ್ದೇಶಕರಾದ ಸಿ.ಬಸವಲಿಂಗಯ್ಯ ಹೋಗಿದ್ದರು. ಆದರೆ ಇವರನ್ನು ಒಳಗೆ ಪ್ರವೇಶಿಸದಂತೆ ಪೊಲೀಸರು ಅಡಚಣೆ ಉಂಟು ಮಾಡಿದ್ದು ಸುದ್ದಿಯಾಗಿದೆ.

ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅವರು ರಚನೆ ಮಾಡಿ ನಿರ್ದೇಶಿಸಿರುವ ಈ ನಾಟಕವನ್ನು ರಂಗಾಯಣ ರೆಪರ್ಟರಿ ಕಲಾವಿದರು ಅಭಿನಯಿಸಿದ್ದು, ಸುಮಾರು 250ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆಯಲ್ಲಿ ನಾಟಕ ಪ್ರದರ್ಶನವಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪ, ಲೇಖಕ ಡಾ.ಪ್ರಧಾನ ಗುರುದತ್ತ, ಶಾಸಕ ಕೆ.ಜಿ.ಬೋಪಯ್ಯ, ಆರ್‌ಎಸ್‌ಎಸ್‌ ಮುಖಂಡ ಮಾ.ವೆಂಕಟರಾಮ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ, ಸಂಸದ ಪ್ರತಾಪ ಸಿಂಹ ಪತ್ನಿ ಅರ್ಪಿತಾ ಸಿಂಹ ವೀಕ್ಷಿಸಿದರು. ಟಿಪ್ಪು ನೈಜ ಇತಿಹಾಸದ ಕುರಿತು ಮೊದಲಿನಿಂದಲೂ ಮಾತನಾಡುತ್ತಾ ಬಂದಿರುವ ‘ಹಲೋ ಮೈಸೂರು’ ಪತ್ರಿಕೆಯ ಸಂಪಾದಕರಾದ ಟಿ.ಗುರುರಾಜ್‌ ಹಾಗೂ ರಂಗಕರ್ಮಿ ಬಸವಲಿಂಗಯ್ಯ ಅವರು ನಾಟಕ ವೀಕ್ಷಿಸಲು ತೆರಳಿದ್ದರು. “ಟಿಕೆಟ್ ಇದ್ದರೂ ಪ್ರವೇಶ ನೀಡದ ಪೊಲೀಸರೊಂದಿಗೆ” ಸಿ.ಬಸವಲಿಂಗಯ್ಯ ಹಾಗೂ ಪತ್ರಕರ್ತ ಟಿ.ಗುರುರಾಜ್ ಮಾತಿನ ಚಕಮಕಿ ನಡೆಸಿದರು. ದ್ವಾರದಲ್ಲೇ ಧರಣಿ ಕುಳಿತ ಅವರು, ‘ಅನುಮಾನವಿದ್ದರೆ ನಮ್ಮೊಂದಿಗೆ ಪೊಲೀಸರೂ ಬರಲಿ’ ಎಂದು ಮನವರಿಕೆ ಮಾಡಿದ ನಂತರ ಪ್ರವೇಶಕ್ಕೆ ಅನುಮತಿ ಕೊಡಲಾಯಿತು.

ಘಟನೆಯ ಕುರಿತು ‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಟಿ.ಗುರುರಾಜ್‌, “ನನ್ನ ಮತ್ತು ಬಸವಲಿಂಗಯ್ಯನವರ ಅಕ್ಕಪಕ್ಕ ಇಬ್ಬರು- ಮೂವರು ಪೊಲೀಸರು ಕೂತುಕೊಂಡಿದ್ದರು. ಇವರಿಲ್ಲದಿದ್ದರೆ ಬಹುಶಃ ನಮ್ಮ ಮೇಲೆ ಹಲ್ಲೆಯಾಗುತ್ತಿತ್ತೇನೋ. ಅಲ್ಲಿ ಸಂಘಪರಿವಾರದವರು ಇದ್ದರು. ನಾಟಕ ನೋಡಿ ಹೊರಬಂದ ಬಳಿಕ ರಂಗಾಯಣದ ನಿರ್ದೇಶಕ ಕಾರ್ಯಪ್ಪ ಮಾತನಾಡಿ ನಮ್ಮ ವಿರುದ್ಧ ಗದಾಪ್ರಹಾರ ಮಾಡಿದರೆಂದು ತಿಳಿಯಿತು. ನಮಗೆ ಸೂಕ್ತ ಭದ್ರತೆ ನೀಡಿದ ಪೊಲೀಸರಿಗೆ ಧನ್ಯವಾದಗಳು” ಎಂದರು.

“ನಾಟಕದ ಬಗ್ಗೆ ಹೇಳುವುದಾದರೆ ಗಿರೀಶ್ ಕಾರ್ನಾಡರು ಬರೆದಿರುವ ಸಾಲುಗಳನ್ನು ಯಥಾವತ್ತು ಕದ್ದು ಈ ನಾಟಕದಲ್ಲಿ ಸೇರಿಸಲಾಗಿದೆ. ಸತ್ಯಗಳಿಗೆ ಸುಳ್ಳಿನ ಪರದೆ ಹೊದಿಸಿ, ಇದೇ ಸತ್ಯವೆಂದು ಬಿಂಬಿಸಲಾಗಿದೆ. ಇಡೀ ನಾಟಕದ ಆಶಯ ಮೂರೇ ಮೂರು ಅಂಶಗಳನ್ನು ಒಳಗೊಂಡಿದೆ. ಜಿಹಾದ್‌, ಅಲ್ಲಾ ಓ ಅಕ್ಬರ್‌, ಮುಸಲ್ಮಾನರ ರಾಜ್ಯವನ್ನಾಗಿ ಪಣತೊಟ್ಟ ಟಿಪ್ಪು ಸುಲ್ತಾನ್- ಈ ಮೂರರ ಮೇಲೆ ಇಡೀ ನಾಟಕ ಕೇಂದ್ರೀಕೃತವಾಗಿದೆ” ಎಂದು ವಿವರಿಸಿದರು.

“ಅಡ್ಡಂಡ ಕಾರ್ಯಪ್ಪನವರಿಗೆ ಮೈಸೂರು ಇತಿಹಾಸದ ಕನಿಷ್ಠ ಪ್ರಜ್ಞೆಯೂ ಇಲ್ಲ. ಯಾವ ರಾಜರು ಹೈದರಾಲಿಯ ಕಾಲದಲ್ಲಿ ಆಳುತ್ತಿದ್ದರು ಎಂಬ ಪರಿವೇ ಇಲ್ಲ. ಇಮ್ಮಡಿ ಕೃಷ್ಣರಾಜ ಒಡೆಯರ ಹೆಸರಿನ ಬದಲಿಗೆ ನಂಜರಾಜ ಒಡೆಯರ್‌ ಎಂದು ಹೇಳಿಸಿದ್ದಾರೆ. ಶೃಂಗೇರಿ ಅರಸರು ಟಿಪ್ಪುವಿನೊಂದಿಗೆ ನಡೆಸುವ ಪತ್ರ ವ್ಯವಹಾರ 1791, 1792ರ ಅವಧಿಗೆ ಸೇರಿವೆ. ಆದರೆ ಅಡ್ಡಂಡ ಕಾರ್ಯಪ್ಪ ಈ ಪತ್ರವನ್ನು 1799, ಮೇ 4ನೇ ತಾರೀಖಿನಂದು ಬರೆಸಿದ್ದಾರೆ. ಈ ನಾಟಕ ಆಭಾಸಗಳಿಂದ ತುಂಬಿ ತುಳುಕುತ್ತಿದೆ. ಇಲ್ಲಿಯವರೆಗೆ ಯಾವ ಇತಿಹಾಸಕಾರರು ಬರೆಯದ, ಯಾವುದೇ ಕೃತಿಯಲ್ಲೂ ಇರದ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಎಂಬವರು ಟಿಪ್ಪುವನ್ನು ಕೊಂದಿರುವುದಾಗಿ ಕೊನೆಯಲ್ಲಿ ತೋರಿಸಲಾಗಿದೆ. ವಾಟ್ಸಾಪ್‌ ವಿಶ್ವವಿದ್ಯಾನಿಲಯ ಸಂಶೋಧನೆಯು ನಾಟಕವೊಂದರ ನಿಜಪಾತ್ರವಾಗಿ ಬಂದಿದೆ” ಎಂದು ವಿಷಾದಿಸಿದರು.

“‘ನಮ್ಮ ಟಿಪ್ಪು: ವದಂತಿ ಮತ್ತು ಸತ್ಯಸಂಗತಿ’ ಎಂಬ ಪುಟ್ಟ ಕೃತಿಯನ್ನು ರಚಿಸುತ್ತಿದ್ದೇನೆ. ಟಿಪ್ಪುವನ್ನು ಸಮರ್ಥಿಸುವ ಕೆಲಸವನ್ನೇನೂ ನಾನು ಮಾಡುತ್ತಿಲ್ಲ. ರಾಜಪ್ರಭುತ್ವದ ಕಾಲದವನಾದ ಟಿಪ್ಪು ಮಾಡಿದ ತಪ್ಪುಗಳನ್ನು ನಾವು ಒಪ್ಪಿಕೊಳ್ಳಬೇಕು. ರಾಜಪ್ರಭುತ್ವ ಮತ್ತು ಪ್ರಜಾಪ್ರಭುತ್ವಕ್ಕೂ ವ್ಯತ್ಯಾಸಗಳಿವೆ. ಭೂತವನ್ನು ವರ್ತಮಾನದಲ್ಲಿಟ್ಟು, ವರ್ತಮಾನದಲ್ಲಿ ಭವಿಷ್ಯಕ್ಕೆ ಮಾರಕವಾಗುವಂತೆ ನಡೆದುಕೊಳ್ಳುವುದು ಮತ್ತಷ್ಟು ಆಘಾತಕಾರಿ. ನಾವು ಕಟ್ಟುವ ಕೆಲಸ ಮಾಡಬೇಕು, ಒಡೆಯುವ ಕೆಲಸವನ್ನಲ್ಲ. ಭಾರತೀಯತೆ ನಮ್ಮ ಎದೆಯೊಳಗೆ ಇದೆ. ಅದರ ಪಾಠವನ್ನು ಇನ್ನ್ಯಾರೋ ಮಾಡುವ ಅಗತ್ಯವಿಲ್ಲ” ಎಂದು ತಿಳಿಸಿದರು.

ಇದನ್ನೂ ಓದಿರಿ: ಮತ್ತೊಂದು ವಿವಾದಕ್ಕೆ ರಂಗಾಯಣ ನಿರ್ದೇಶಕರ ರೂಪುರೇಷೆ; ‘ಟಿಪ್ಪು’ ಕುರಿತ ನಾಟಕ ಪ್ರದರ್ಶನಕ್ಕೆ ಸಿದ್ಧ

“ಟಿಪ್ಪುವಿನ ಬಗ್ಗೆ ಇವರು ಎತ್ತಿರುವ ಎಲ್ಲ ಪ್ರಶ್ನೆಗಳಿಗೆ ಐತಿಹಾಸಿಕವಾದ ಉತ್ತರವನ್ನು ಕೊಡುವ ಪ್ರಯತ್ನವನ್ನು ಈ ಪುಟ್ಟ ಕೃತಿಯಲ್ಲಿ ಮಾಡುತ್ತಿದ್ದೇನೆ. ನಾನು ಬರೆದಿರುವುದು ಸುಳ್ಳು ಎಂದು ಯಾರಾದರೂ ದಾಖಲೆ ಸಮೇತ ಸಾಬೀತುಪಡಿಸಿದರೆ ಒಪ್ಪಿಕೊಳ್ಳಲು ಸಿದ್ಧವಿದ್ದೇನೆ. ಟಿಪ್ಪು ಯಾರನ್ನೂ ಕೊಂದಿಲ್ಲ, ಮತಾಂತರ ಮಾಡಿಲ್ಲ ಎಂದು ಮೊಂಡುವಾದ ಮಾಡಲ್ಲ. ಇಡೀ ರಾಜಪ್ರಭುತ್ವದ ಚರಿತ್ರೆಯನ್ನು ನೋಡಿದರೆ ಟಿಪ್ಪುವಿನಂತೆಯೇ ಎಲ್ಲ ಅರಸರ ಇತಿಹಾಸವಿರುತ್ತದೆ. ತಮ್ಮ ಸಂಬಂಧಿಕರನ್ನೇ ಕೊಂದ ಘಟನೆಗಳು ಸಿಗುತ್ತವೆ. ಸತ್ಯಕ್ಕೆ ವಿದಾಯ ಹೇಳಿರುವ ಅಡ್ಡಂಡ ಕಾರ್ಯಪ್ಪ ಸರ್ಕಾರಕ್ಕೆ ಋಣಸಂದಾಯ ಮಾಡಿದ್ದಾರೆ ಅನಿಸುತ್ತದೆ. 30 ವರ್ಷಗಳ ರಂಗಾಯಣ ಇತಿಹಾಸದಲ್ಲಿ ಈ ನಮೂನೆಯ ಪೊಲೀಸರು ಯಾವತ್ತೂ ಬರಲಿಲ್ಲ. ಬಸವಲಿಂಗಯ್ಯನವರು ಇಡೀ ರಾತ್ರಿ ‘ಮಲೆಗಳಲ್ಲಿ ಮದುಮಗಳು’ ನಾಟಕವನ್ನು ಆಡಿಸಿದ್ದರು. ಸಾವಿರಾರು ಜನ ಬೇರೆ ಬೇರೆ ದೇಶಗಳಿಂದ ಬಂದು ನೋಡಿದರು. ಅಂದು ಹೀಗೆ ಪೊಲೀಸರು ಪ್ರವೇಶಿಸಿರಲಿಲ್ಲ” ಎಂದು ಹೇಳಿದರು.

“ನಾಟಕ ನೋಡಲು ಹೋಗದಂತೆ ನಮ್ಮನ್ನು ತಡೆಯಲಾಯಿತು. ಆದರೆ ಪೊಲೀಸರ ಅಕ್ಕಪಕ್ಕ ಕೂತು ನಾಟಕ ವೀಕ್ಷಿಸಲು ಅನುಮತಿ ಕೊಡಲಾಯಿತು. ನಮ್ಮ ಅಕ್ಕಪಕ್ಕದಲ್ಲಿ ಕೂತಿದ್ದ ಪೊಲೀಸರಿಗೆ ನಾವು ಕೃತ್ಯಜ್ಞತೆಯನ್ನು ಅರ್ಪಿಸುತ್ತೇವೆ. ಯಾಕೆಂದರೆ ನಾಟಕ ನೋಡಲು ಸಂಘಪರಿವಾರದ ಪ್ರೀತಿಪಾತ್ರರು ಬಂದಿದ್ದರು. ಉದ್ದೇಶಪೂರ್ವಕವಾಗಿ ನಾಟಕ ಮುಗಿದ ಮೇಲೆ ಅಡ್ಡಂಡ ಕಾರ್ಯಪ್ಪ ನಮ್ಮ ಹೆಸರನ್ನು ಪ್ರಸ್ತಾಪಿಸಿದ್ದಾರೆ. ನಮ್ಮ ಮೇಲೆ ಹಲ್ಲೆ ನಡೆಸುವ ಸಾಧ್ಯತೆಯೂ ಇತ್ತು. ಬಹುಶಃ ಪೊಲೀಸರು ಇಲ್ಲದೆ ಇದ್ದಿದ್ದರೆ ನಾವು ಏಟು ತಿಂದುಕೊಂಡು ಹೊರಬರಬೇಕಿತ್ತೇನೋ, ಗೊತ್ತಿಲ್ಲ. ಹೀಗಾಗಿ ಅವರಿಗೆ ಥ್ಯಾಂಕ್ಸ್‌ ಹೇಳಬೇಕು” ಎಂದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...