Homeಕರೋನಾ ತಲ್ಲಣಸಾಂಕ್ರಾಮಿಕ ನಿಯಂತ್ರಿಸಲು ವಿಫಲರಾದ ಈ ಐದು ನಾಯಕರು ಎಡವಿದ್ದೆಲ್ಲಿ?

ಸಾಂಕ್ರಾಮಿಕ ನಿಯಂತ್ರಿಸಲು ವಿಫಲರಾದ ಈ ಐದು ನಾಯಕರು ಎಡವಿದ್ದೆಲ್ಲಿ?

ಸಾಂಕ್ರಾಮಿಕ ರೋಗದ ದಾಳಿ ಇನ್ನೂ ಮುಗಿದಿಲ್ಲ. ಆದರೆ ಈ ವಿಶ್ವ ನಾಯಕರು ಈಗಾಗಲೇ ಮಾರಣಾಂತಿಕ ಕೊರೋನಾವನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಫಲವಾದ ಕಾರಣ ಇತಿಹಾಸದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

- Advertisement -
- Advertisement -

ಸಾಂಕ್ರಾಮಿಕ ನಿರ್ವಹಣೆಯಲ್ಲಿ ವಿಫಲರಾದ ಐವರು ವಿಶ್ವನಾಯಕರ ಆಡಳಿತ ಶೈಲಿ ಕುರಿತು ಇಲ್ಲಿ ವಿಶ್ಲೇಷಣೆಯಿದೆ. ಭಾರತೀಯರಾದ ಪ್ರೊ. ಸುಮಿತ್ ಗಂಗೂಲಿ ಸೇರಿದಂತೆ ಹಲವು ದೇಶಗಳ ತಜ್ಞರು, ಪ್ರೊಫೆಸ್‌ರ್‌ಗಳು ಮತ್ತು ವೈದ್ಯರ ನಡುವೆ ನಡೆದ ಚರ್ಚೆಯನ್ನು ‘ದಿ ವೈರ್’ ಸಂಗ್ರಹಿಸಿ ಕೊಟ್ಟಿದೆ.

‘ಕೆಲವು ಪ್ರಸ್ತುತ ಮತ್ತು ಮಾಜಿ ವಿಶ್ವ ನಾಯಕರು ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಅಲಕ್ಷ್ಯ ಮಾಡುವ ಮೂಲಕ, ವಿಜ್ಞಾನವನ್ನು ಕಡೆಗಣಿಸುವ ಮೂಲಕ, ಸಾಮಾಜಿಕ ದೂರ ಮತ್ತು ಮಾಸ್ಕ್‌ಗಳಂತಹ ಆರೋಗ್ಯದ ಮಧ್ಯಸ್ಥಿಕೆಗಳನ್ನು ನಿರ್ಲಕ್ಷಿಸುವ ಮೂಲಕ ತಮ್ಮ ದೇಶದಲ್ಲಿ ಕೊರೊನಾ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಈ ಪಟ್ಟಿಯಲ್ಲಿರುವ ಐವರೂ ಪುರುಷ ಸಿಂಹಗಳೇ! ಭಾರತದ ನರೇಂದ್ರ ಮೋದಿ ಅದರಲ್ಲಿ ಒಬ್ಬರು ಎನ್ನುತ್ತಾರೆ’ ಇಂಡಿಯಾನಾ ವಿಶ್ವವಿದ್ಯಾಲಯದ ಪ್ರೊ. ಸುಮಿತ್ ಗಂಗೂಲಿ.

ಭಾರತವು ಜಾಗತಿಕ ಸಾಂಕ್ರಾಮಿಕದ ಹೊಸ ಕೇಂದ್ರಬಿಂದುವಾಗಿದ್ದು, ಮೇ 2021 ರ ಹೊತ್ತಿಗೆ ದಿನಕ್ಕೆ ಸುಮಾರು 4 ಲಕ್ಷ ಹೊಸ ಪ್ರಕರಣಗಳನ್ನು ದಾಖಲಿಸಿದೆ. ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳು ಸಾಯುತ್ತಿದ್ದಾರೆ, ಏಕೆಂದರೆ ಆಮ್ಲಜನಕವಿಲ್ಲ ಮತ್ತು ಚಿಕಿತ್ಸೆಗೆ ಅಗತ್ಯವಾದ ಔಷಧಿಗಳಿಲ್ಲ ಮತ್ತು ವೆಂಟಿಲೇಟರ್‌ಗಳೂ ಇಲ್ಲ. ಜೊತೆಗೆ ಉಚಿತ ಹಾಸಿಗೆಗಳೇ ಲಭ್ಯವಿಲ್ಲ.

ದೇಶದ ದುರಂತಕ್ಕೆ ಅನೇಕ ಭಾರತೀಯರು ಒಬ್ಬ ವ್ಯಕ್ತಿಯನ್ನು ದೂಷಿಸುತ್ತಾರೆ: ಪ್ರಧಾನಿ ನರೇಂದ್ರ ಮೋದಿ!

ಜನವರಿ 2021ರಲ್ಲಿ, ಮೋದಿ ಜಾಗತಿಕ ವೇದಿಕೆಯಲ್ಲಿ ಭಾರತವು “ಕೊರೊನಾವನ್ನು ಪರಿಣಾಮಕಾರಿಯಾಗಿ ಎದುರಿಸಿ ಗೆದ್ದಿದೆ” ಎಂದು ಘೋಷಿಸಿದರು. ಮಾರ್ಚ್‌ನಲ್ಲಿ ಅವರ ಆರೋಗ್ಯ ಸಚಿವರು ಸಾಂಕ್ರಾಮಿಕ ರೋಗವು “ಎಂಡ್ ಗೇಮ್” ತಲುಪುತ್ತಿದೆ ಎಂದು ಘೋಷಿಸಿದರು. ವಾಸ್ತವವಾಗಿ ಭಾರತದಲ್ಲಿ ಮತ್ತು ವಿಶ್ವಾದ್ಯಂತ ಕೊರೊನಾ ಶಕ್ತಿಯನ್ನು ಪಡೆಯುತ್ತಿತ್ತು. ಆದರೆ ಮೋದಿ ಸರ್ಕಾರವು ಸಂಭವನೀಯ ಆಕಸ್ಮಿಕಗಳಿಗೆ ಯಾವುದೇ ಸಿದ್ಧತೆಗಳನ್ನು ಮಾಡಲಿಲ್ಲ.

ದೇಶದಲ್ಲಿ ಕೋವಿಡ್ ಎರಡನೆ ಅಲೆ ತೀವ್ರವಾಗುವ ಸಂದರ್ಭದಲ್ಲಿ ಮೋದಿ ಮತ್ತು ಅವರ ಪಕ್ಷದ ಇತರ ಸದಸ್ಯರು ಏಪ್ರಿಲ್ ಚುನಾವಣೆಗೆ ಮುಂಚಿತವಾಗಿ ಹೊರಾಂಗಣ ಪ್ರಚಾರ ರ‍್ಯಾಲಿಗಳನ್ನು ನಡೆಸಿದರು. ಆ ರ‍್ಯಾಲಿಗಳಲ್ಲಿ ಮಾಸ್ಕ್ ಇರಲಿಲ್ಲ, ದೈಹಿಕ ಅಂತರ ಇರಲು ಸಾಧ್ಯವೇ? ಜನವರಿಯಿಂದ ಮಾರ್ಚ್‌ವರೆಗೆ ಲಕ್ಷಾಂತರ ಜನರನ್ನು ಸೆಳೆಯುವ ಕುಂಭಮೇಳ ಉತ್ಸವಕ್ಕೂ ಮೋದಿ ಅವಕಾಶ ನೀಡಿದರು. ಸಾರ್ವಜನಿಕ ಆರೋಗ್ಯ ಅಧಿಕಾರಿಗಳು, ತಜ್ಞರು ಈಗ ಉತ್ಸವವು ಒಂದು ಸೂಪರ್-ಸ್ಪ್ರೆ ಡರ್ ಆಗಿದೆ ಎನ್ನುತ್ತಿದ್ದಾರೆ.

ಕಳೆದ ವರ್ಷ ಮೋದಿಯವರು ತಮ್ಮ ಯಶಸ್ಸನ್ನು ತಿಳಿಸಿದಂತೆ, ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಭಾರತವು 10 ದಶಲಕ್ಷಕ್ಕೂ ಹೆಚ್ಚಿನ ಲಸಿಕೆ ಪ್ರಮಾಣವನ್ನು ನೆರೆಯ ದೇಶಗಳಿಗೆ ಕಳುಹಿಸಿತು. ಭಾರತದ 139 ಕೋಟಿ ಜನರಲ್ಲಿ ಕೇವಲ 1.9% ರಷ್ಟು ಜನರು ಮೇ ಆರಂಭದಲ್ಲಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ.

ಬ್ರೆಜಿಲ್‌ನ ಜೈರ್ ಬೋಲ್ಸನಾರೊ

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರು ಕೋವಿಡ್ ಬಗ್ಗೆ ತೀವ್ರ ನಿರ್ಲಕ್ಷ್ಯ ಮಾಡಿದರು. ಕೊರೊನಾ ‘ಬರೀ ಜ್ವರ ಬಿಡಿ’ ಎಂದು ಪರಿಸ್ಥಿತಿಯನ್ನ ಹದಗೆಡಿಸಿದರು.

ಆರೋಗ್ಯ ಸಚಿವಾಲಯದ ಆಡಳಿತಾತ್ಮಕ ವಿಷಯಗಳಾದ ಕ್ಲಿನಿಕಲ್ ಪ್ರೋಟೋಕಾಲ್‌ಗಳು, ಡೇಟಾ ಬಹಿರಂಗಪಡಿಸುವಿಕೆ ಮತ್ತು ಲಸಿಕೆ ಸಂಗ್ರಹಣೆಗಳಲ್ಲಿ ಬೋಲ್ಸೊನಾರೊ ಹಸ್ತಕ್ಷೇಪ ಮಾಡಿ, ಅವೈಜ್ಞಾನಿಕ ನಿರ್ಧಾರಗಳನ್ನು ತೆಗೆದುಕೊಂಡರು. ಧಾರ್ಮಿಕ ಸ್ಥಳಗಳಲ್ಲಿ ಮಾಸ್ಕ್ ಬಳಸುವುದನ್ನು ಕಡ್ಡಾಯಗೊಳಿಸುವ ಮತ್ತು ಸಾಂಕ್ರಾಮಿಕ ರೋಗದಿಂದ ಶಾಶ್ವತವಾಗಿ ಹಾನಿಗೊಳಗಾದ ಆರೋಗ್ಯ ವೃತ್ತಿಪರರಿಗೆ ಪರಿಹಾರ ನೀಡುವ ಶಾಸನವನ್ನು ಅವರು ರದ್ದು ಮಾಡಿದರು. ಸಾಮಾಜಿಕ ದೂರವನ್ನು ಉತ್ತೇಜಿಸುವ ಆಡಳಿತದ ಪ್ರಯತ್ನಗಳಿಗೆ ಅವರು ಅಡ್ಡಿಯುಂಟು ಮಾಡಿದರು. ಸ್ಪಾಗಳು ಮತ್ತು ಜಿಮ್‌ಗಳು ಸೇರಿದಂತೆ ಅನೇಕ ವ್ಯವಹಾರಗಳನ್ನು “ಅಗತ್ಯ” ಎಂದು ತೆರೆಯಲು ಅನುಮತಿ ನೀಡಿದರು. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬೋಲ್ಸೊನಾರೊ ಸಾಬೀತಾಗದ ಔಷಧಿಗಳನ್ನು, ಮುಖ್ಯವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಆಕ್ರಮಣಕಾರಿಯಾಗಿ ಉತ್ತೇಜಿಸಿದರು.

ಬೆಲಾರಸ್‌ನ ಅಲೆಕ್ಸಾಂಡರ್ ಲುಕಾಶೆಂಕೊ

ಬೆಲಾರಸ್‌ನ ದೀರ್ಘಕಾಲದ ಸರ್ವಾಧಿಕಾರಿ ನಾಯಕ ಅಲೆಕ್ಸಾಂಡರ್ ಲುಕಾಶೆಂಕೊ ಕೋವಿಡ್ ದುರಂತದ ಬೆದರಿಕೆಯನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಸಾಂಕ್ರಾಮಿಕ ರೋಗದ ಆರಂಭದಲ್ಲಿ, ಇತರ ದೇಶಗಳು ಲಾಕ್‌ಡೌನ್‌ಗಳನ್ನು ಜಾರಿಗೊಳಿಸುತ್ತಿದ್ದಂತೆ, ಲುಕಾಶೆಂಕೊ ಕೋವಿಡ್ ಹರಡುವುದನ್ನು ತಡೆಯಲು ಯಾವುದೇ ನಿರ್ಬಂಧಿತ ಕ್ರಮಗಳನ್ನು ಜಾರಿಗೊಳಿಸದಿರಲು ನಿರ್ಧರಿಸಿದರು. ಬದಲಾಗಿ, ವೋಡ್ಕಾ ಕುಡಿಯುವುದರಿಂದ, ಸೌನಾಕ್ಕೆ ಭೇಟಿ ನೀಡುವುದರಿಂದ ಮತ್ತು ಹೊಲಗಳಲ್ಲಿ ಕೆಲಸ ಮಾಡುವುದರಿಂದ ವೈರಸ್ ತಡೆಗಟ್ಟಬಹುದು ಎಂದು ಅವರು ಹೇಳಿದ್ದಾರೆ.

ಅಮೆರಿಕದ ಡೊನಾಲ್ಡ್ ಟ್ರಂಪ್

ಟ್ರಂಪ್ ಅಧಿಕಾರದಿಂದ ಹೊರಗುಳಿದಿದ್ದಾರೆ. ಆದರೆ ಸಾಂಕ್ರಾಮಿಕ ರೋಗವನ್ನು ಅವರು ತಪ್ಪಾಗಿ ನಿರ್ವಹಿಸಿದ್ದು ಅಮೆರಿಕಾದ ಮೇಲೆ- ವಿಶೇಷವಾಗಿ ಕಪ್ಪು ವರ್ಣದ ಸಮುದಾಯಗಳ ಮೇಲೆ- ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತಿದೆ.

ಸಾಂಕ್ರಾಮಿಕ ರೋಗದ ಆರಂಭಿಕ ನಿರಾಕರಣೆ, ಮಾಸ್ಕ್ ಮತ್ತು ಚಿಕಿತ್ಸೆಗಳ ಬಗ್ಗೆ ತಪ್ಪು ಸಂದೇಶಗಳನ್ನು ಅವರು ನೀಡುತ್ತ ಬಂದರು. ಮೋದಿಯವರಂತೆ ಅವರಿಗೂ ಚುನಾವಣೆ ಗೆಲ್ಲುವುದಷ್ಟೇ ಮುಖ್ಯವಾಗಿತ್ತು.

ಆಫ್ರಿಕನ್ ಅಮೆರಿಕನ್ನರು ಮತ್ತು ಲ್ಯಾಟಿನೋಗಳು ಯುಎಸ್ ಜನಸಂಖ್ಯೆಯ ಕೇವಲ 31%ರಷ್ಟಿದ್ದಾರೆ. ಅವರು ಕೋವಿಡ್ ಪ್ರಕರಣಗಳಲ್ಲಿ 55% ಕ್ಕಿಂತ ಹೆಚ್ಚು ಇದ್ದಾರೆ. ಬಿಳಿಯರ ಮರಣ ಪ್ರಮಾಣಕ್ಕಿಂತ ಕಪ್ಪು ವರ್ಣದವರ ಮರಣ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಿತ್ತು.
ನಿರುದ್ಯೋಗ ಏರಿಕೆಯಲ್ಲೂ ಟ್ರಂಪ್ ಕಾರಣವಾದರು. ಇದು ಹೆಚ್ಚಾಗಿ ತಟ್ಟಿದ್ದು ಬಿಳಿಯರಲ್ಲದ ಅಮೆರಿಕನ್ ಪ್ರಜೆಗಳಿಗೆ.

ಮೆಕ್ಸಿಕೊದ ಆಂಡ್ರೆಸ್

ಮೆಕ್ಸಿಕೊವು ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಸಾವಿನ ಪ್ರಮಾಣವನ್ನು ಹೊಂದಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಇದು 6,17,000 ಸಾವುಗಳನ್ನು ಅನುಭವಿಸಿದೆ. ಭಾರತ ಮತ್ತು ಅಮೆರಿಕ ಕೂಡ ಸಾವಿನ ಸಂಖ್ಯೆಯಲ್ಲಿ ಮುಂದಿವೆ.

ಮೆಕ್ಸಿಕೊದ ದೀರ್ಘಕಾಲದ, ವಿಪರೀತ ಕೋವಿಡ್ ಏಕಾಏಕಿಗಳಿಗೆ ಅಸಮರ್ಪಕ ರಾಷ್ಟ್ರೀಯ ನಾಯಕತ್ವ ಕಾರಣವಾಗಿದೆ.

ಸಾಂಕ್ರಾಮಿಕ ರೋಗದುದ್ದಕ್ಕೂ, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಮೆಕ್ಸಿಕೊದ ಪರಿಸ್ಥಿತಿಯ ಸಂಕಷ್ಟವನ್ನು ಮುಚ್ಚಿ ಇಡಲು ನೋಡಿದರು. ಆರಂಭದಲ್ಲಿ, ಅವರು ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಗೆ ವಿರೋಧಿಸಿದರು ಮತ್ತು ಅಂತಿಮವಾಗಿ ಮಾರ್ಚ್ 23, 2020 ರಂದು ಮೆಕ್ಸಿಕೊ ಎರಡು ತಿಂಗಳ ಕಾಲ ಸ್ಥಗಿತಗೊಳ್ಳುವಂತೆ ಮಾಡಿದರು. ಅವರು ಆಗಾಗ್ಗೆ ಮಾಸ್ಕ್ ಧರಿಸಲು ನಿರಾಕರಿಸಿದರು.

ಸಾಂಕ್ರಾಮಿಕ ರೋಗವು ಸ್ಫೋಟಗೊಳ್ಳುವ ಮೊದಲೇ, ಲೋಪೆಜ್ ಒಬ್ರಡಾರ್ ಜಾರಿಗೆ ತಂದ ಹಣಕಾಸು ನೀತಿ ಆರೋಗ್ಯ ಬಿಕ್ಕಟ್ಟನ್ನು ಇನ್ನಷ್ಟು ದುಸ್ತರವಾಗಿಸಿದೆ. ನಮ್ಮಲ್ಲಿ ಮೋದಿಯವರ ನೋಟ್‌ಬ್ಯಾನ್, ಅವೈಜ್ಞಾನಿಕ ಜಿಎಸ್‌ಟಿ ನೀತಿಗಳು ಕೂಡ ಭಾರತಕ್ಕೆ ಈಗ ಕಾಡುತ್ತಿವೆ.

(ಕೃಪೆ: ದಿ ವೈರ್)


ಇದನ್ನೂ ಓದಿ: ಅತಿ ಕೆಟ್ಟ ಕೋವಿಡ್ ನಿರ್ವಹಣೆ: ಐದು ಜಾಗತಿಕ ನಾಯಕರಲ್ಲಿ ನರೇಂದ್ರ ಮೋದಿಗೆ ಮೊದಲ ಸ್ಥಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...