Homeಕರೋನಾ ತಲ್ಲಣಸಾಂಕ್ರಾಮಿಕ ನಿಯಂತ್ರಿಸಲು ವಿಫಲರಾದ ಈ ಐದು ನಾಯಕರು ಎಡವಿದ್ದೆಲ್ಲಿ?

ಸಾಂಕ್ರಾಮಿಕ ನಿಯಂತ್ರಿಸಲು ವಿಫಲರಾದ ಈ ಐದು ನಾಯಕರು ಎಡವಿದ್ದೆಲ್ಲಿ?

ಸಾಂಕ್ರಾಮಿಕ ರೋಗದ ದಾಳಿ ಇನ್ನೂ ಮುಗಿದಿಲ್ಲ. ಆದರೆ ಈ ವಿಶ್ವ ನಾಯಕರು ಈಗಾಗಲೇ ಮಾರಣಾಂತಿಕ ಕೊರೋನಾವನ್ನು ಪರಿಣಾಮಕಾರಿಯಾಗಿ ಎದುರಿಸಲು ವಿಫಲವಾದ ಕಾರಣ ಇತಿಹಾಸದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

- Advertisement -
- Advertisement -

ಸಾಂಕ್ರಾಮಿಕ ನಿರ್ವಹಣೆಯಲ್ಲಿ ವಿಫಲರಾದ ಐವರು ವಿಶ್ವನಾಯಕರ ಆಡಳಿತ ಶೈಲಿ ಕುರಿತು ಇಲ್ಲಿ ವಿಶ್ಲೇಷಣೆಯಿದೆ. ಭಾರತೀಯರಾದ ಪ್ರೊ. ಸುಮಿತ್ ಗಂಗೂಲಿ ಸೇರಿದಂತೆ ಹಲವು ದೇಶಗಳ ತಜ್ಞರು, ಪ್ರೊಫೆಸ್‌ರ್‌ಗಳು ಮತ್ತು ವೈದ್ಯರ ನಡುವೆ ನಡೆದ ಚರ್ಚೆಯನ್ನು ‘ದಿ ವೈರ್’ ಸಂಗ್ರಹಿಸಿ ಕೊಟ್ಟಿದೆ.

‘ಕೆಲವು ಪ್ರಸ್ತುತ ಮತ್ತು ಮಾಜಿ ವಿಶ್ವ ನಾಯಕರು ಸಾಂಕ್ರಾಮಿಕ ರೋಗದ ತೀವ್ರತೆಯನ್ನು ಅಲಕ್ಷ್ಯ ಮಾಡುವ ಮೂಲಕ, ವಿಜ್ಞಾನವನ್ನು ಕಡೆಗಣಿಸುವ ಮೂಲಕ, ಸಾಮಾಜಿಕ ದೂರ ಮತ್ತು ಮಾಸ್ಕ್‌ಗಳಂತಹ ಆರೋಗ್ಯದ ಮಧ್ಯಸ್ಥಿಕೆಗಳನ್ನು ನಿರ್ಲಕ್ಷಿಸುವ ಮೂಲಕ ತಮ್ಮ ದೇಶದಲ್ಲಿ ಕೊರೊನಾ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಈ ಪಟ್ಟಿಯಲ್ಲಿರುವ ಐವರೂ ಪುರುಷ ಸಿಂಹಗಳೇ! ಭಾರತದ ನರೇಂದ್ರ ಮೋದಿ ಅದರಲ್ಲಿ ಒಬ್ಬರು ಎನ್ನುತ್ತಾರೆ’ ಇಂಡಿಯಾನಾ ವಿಶ್ವವಿದ್ಯಾಲಯದ ಪ್ರೊ. ಸುಮಿತ್ ಗಂಗೂಲಿ.

ಭಾರತವು ಜಾಗತಿಕ ಸಾಂಕ್ರಾಮಿಕದ ಹೊಸ ಕೇಂದ್ರಬಿಂದುವಾಗಿದ್ದು, ಮೇ 2021 ರ ಹೊತ್ತಿಗೆ ದಿನಕ್ಕೆ ಸುಮಾರು 4 ಲಕ್ಷ ಹೊಸ ಪ್ರಕರಣಗಳನ್ನು ದಾಖಲಿಸಿದೆ. ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳು ಸಾಯುತ್ತಿದ್ದಾರೆ, ಏಕೆಂದರೆ ಆಮ್ಲಜನಕವಿಲ್ಲ ಮತ್ತು ಚಿಕಿತ್ಸೆಗೆ ಅಗತ್ಯವಾದ ಔಷಧಿಗಳಿಲ್ಲ ಮತ್ತು ವೆಂಟಿಲೇಟರ್‌ಗಳೂ ಇಲ್ಲ. ಜೊತೆಗೆ ಉಚಿತ ಹಾಸಿಗೆಗಳೇ ಲಭ್ಯವಿಲ್ಲ.

ದೇಶದ ದುರಂತಕ್ಕೆ ಅನೇಕ ಭಾರತೀಯರು ಒಬ್ಬ ವ್ಯಕ್ತಿಯನ್ನು ದೂಷಿಸುತ್ತಾರೆ: ಪ್ರಧಾನಿ ನರೇಂದ್ರ ಮೋದಿ!

ಜನವರಿ 2021ರಲ್ಲಿ, ಮೋದಿ ಜಾಗತಿಕ ವೇದಿಕೆಯಲ್ಲಿ ಭಾರತವು “ಕೊರೊನಾವನ್ನು ಪರಿಣಾಮಕಾರಿಯಾಗಿ ಎದುರಿಸಿ ಗೆದ್ದಿದೆ” ಎಂದು ಘೋಷಿಸಿದರು. ಮಾರ್ಚ್‌ನಲ್ಲಿ ಅವರ ಆರೋಗ್ಯ ಸಚಿವರು ಸಾಂಕ್ರಾಮಿಕ ರೋಗವು “ಎಂಡ್ ಗೇಮ್” ತಲುಪುತ್ತಿದೆ ಎಂದು ಘೋಷಿಸಿದರು. ವಾಸ್ತವವಾಗಿ ಭಾರತದಲ್ಲಿ ಮತ್ತು ವಿಶ್ವಾದ್ಯಂತ ಕೊರೊನಾ ಶಕ್ತಿಯನ್ನು ಪಡೆಯುತ್ತಿತ್ತು. ಆದರೆ ಮೋದಿ ಸರ್ಕಾರವು ಸಂಭವನೀಯ ಆಕಸ್ಮಿಕಗಳಿಗೆ ಯಾವುದೇ ಸಿದ್ಧತೆಗಳನ್ನು ಮಾಡಲಿಲ್ಲ.

ದೇಶದಲ್ಲಿ ಕೋವಿಡ್ ಎರಡನೆ ಅಲೆ ತೀವ್ರವಾಗುವ ಸಂದರ್ಭದಲ್ಲಿ ಮೋದಿ ಮತ್ತು ಅವರ ಪಕ್ಷದ ಇತರ ಸದಸ್ಯರು ಏಪ್ರಿಲ್ ಚುನಾವಣೆಗೆ ಮುಂಚಿತವಾಗಿ ಹೊರಾಂಗಣ ಪ್ರಚಾರ ರ‍್ಯಾಲಿಗಳನ್ನು ನಡೆಸಿದರು. ಆ ರ‍್ಯಾಲಿಗಳಲ್ಲಿ ಮಾಸ್ಕ್ ಇರಲಿಲ್ಲ, ದೈಹಿಕ ಅಂತರ ಇರಲು ಸಾಧ್ಯವೇ? ಜನವರಿಯಿಂದ ಮಾರ್ಚ್‌ವರೆಗೆ ಲಕ್ಷಾಂತರ ಜನರನ್ನು ಸೆಳೆಯುವ ಕುಂಭಮೇಳ ಉತ್ಸವಕ್ಕೂ ಮೋದಿ ಅವಕಾಶ ನೀಡಿದರು. ಸಾರ್ವಜನಿಕ ಆರೋಗ್ಯ ಅಧಿಕಾರಿಗಳು, ತಜ್ಞರು ಈಗ ಉತ್ಸವವು ಒಂದು ಸೂಪರ್-ಸ್ಪ್ರೆ ಡರ್ ಆಗಿದೆ ಎನ್ನುತ್ತಿದ್ದಾರೆ.

ಕಳೆದ ವರ್ಷ ಮೋದಿಯವರು ತಮ್ಮ ಯಶಸ್ಸನ್ನು ತಿಳಿಸಿದಂತೆ, ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಭಾರತವು 10 ದಶಲಕ್ಷಕ್ಕೂ ಹೆಚ್ಚಿನ ಲಸಿಕೆ ಪ್ರಮಾಣವನ್ನು ನೆರೆಯ ದೇಶಗಳಿಗೆ ಕಳುಹಿಸಿತು. ಭಾರತದ 139 ಕೋಟಿ ಜನರಲ್ಲಿ ಕೇವಲ 1.9% ರಷ್ಟು ಜನರು ಮೇ ಆರಂಭದಲ್ಲಿ ಸಂಪೂರ್ಣ ಲಸಿಕೆ ಪಡೆದಿದ್ದಾರೆ.

ಬ್ರೆಜಿಲ್‌ನ ಜೈರ್ ಬೋಲ್ಸನಾರೊ

ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸೊನಾರೊ ಅವರು ಕೋವಿಡ್ ಬಗ್ಗೆ ತೀವ್ರ ನಿರ್ಲಕ್ಷ್ಯ ಮಾಡಿದರು. ಕೊರೊನಾ ‘ಬರೀ ಜ್ವರ ಬಿಡಿ’ ಎಂದು ಪರಿಸ್ಥಿತಿಯನ್ನ ಹದಗೆಡಿಸಿದರು.

ಆರೋಗ್ಯ ಸಚಿವಾಲಯದ ಆಡಳಿತಾತ್ಮಕ ವಿಷಯಗಳಾದ ಕ್ಲಿನಿಕಲ್ ಪ್ರೋಟೋಕಾಲ್‌ಗಳು, ಡೇಟಾ ಬಹಿರಂಗಪಡಿಸುವಿಕೆ ಮತ್ತು ಲಸಿಕೆ ಸಂಗ್ರಹಣೆಗಳಲ್ಲಿ ಬೋಲ್ಸೊನಾರೊ ಹಸ್ತಕ್ಷೇಪ ಮಾಡಿ, ಅವೈಜ್ಞಾನಿಕ ನಿರ್ಧಾರಗಳನ್ನು ತೆಗೆದುಕೊಂಡರು. ಧಾರ್ಮಿಕ ಸ್ಥಳಗಳಲ್ಲಿ ಮಾಸ್ಕ್ ಬಳಸುವುದನ್ನು ಕಡ್ಡಾಯಗೊಳಿಸುವ ಮತ್ತು ಸಾಂಕ್ರಾಮಿಕ ರೋಗದಿಂದ ಶಾಶ್ವತವಾಗಿ ಹಾನಿಗೊಳಗಾದ ಆರೋಗ್ಯ ವೃತ್ತಿಪರರಿಗೆ ಪರಿಹಾರ ನೀಡುವ ಶಾಸನವನ್ನು ಅವರು ರದ್ದು ಮಾಡಿದರು. ಸಾಮಾಜಿಕ ದೂರವನ್ನು ಉತ್ತೇಜಿಸುವ ಆಡಳಿತದ ಪ್ರಯತ್ನಗಳಿಗೆ ಅವರು ಅಡ್ಡಿಯುಂಟು ಮಾಡಿದರು. ಸ್ಪಾಗಳು ಮತ್ತು ಜಿಮ್‌ಗಳು ಸೇರಿದಂತೆ ಅನೇಕ ವ್ಯವಹಾರಗಳನ್ನು “ಅಗತ್ಯ” ಎಂದು ತೆರೆಯಲು ಅನುಮತಿ ನೀಡಿದರು. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ಬೋಲ್ಸೊನಾರೊ ಸಾಬೀತಾಗದ ಔಷಧಿಗಳನ್ನು, ಮುಖ್ಯವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಆಕ್ರಮಣಕಾರಿಯಾಗಿ ಉತ್ತೇಜಿಸಿದರು.

ಬೆಲಾರಸ್‌ನ ಅಲೆಕ್ಸಾಂಡರ್ ಲುಕಾಶೆಂಕೊ

ಬೆಲಾರಸ್‌ನ ದೀರ್ಘಕಾಲದ ಸರ್ವಾಧಿಕಾರಿ ನಾಯಕ ಅಲೆಕ್ಸಾಂಡರ್ ಲುಕಾಶೆಂಕೊ ಕೋವಿಡ್ ದುರಂತದ ಬೆದರಿಕೆಯನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಸಾಂಕ್ರಾಮಿಕ ರೋಗದ ಆರಂಭದಲ್ಲಿ, ಇತರ ದೇಶಗಳು ಲಾಕ್‌ಡೌನ್‌ಗಳನ್ನು ಜಾರಿಗೊಳಿಸುತ್ತಿದ್ದಂತೆ, ಲುಕಾಶೆಂಕೊ ಕೋವಿಡ್ ಹರಡುವುದನ್ನು ತಡೆಯಲು ಯಾವುದೇ ನಿರ್ಬಂಧಿತ ಕ್ರಮಗಳನ್ನು ಜಾರಿಗೊಳಿಸದಿರಲು ನಿರ್ಧರಿಸಿದರು. ಬದಲಾಗಿ, ವೋಡ್ಕಾ ಕುಡಿಯುವುದರಿಂದ, ಸೌನಾಕ್ಕೆ ಭೇಟಿ ನೀಡುವುದರಿಂದ ಮತ್ತು ಹೊಲಗಳಲ್ಲಿ ಕೆಲಸ ಮಾಡುವುದರಿಂದ ವೈರಸ್ ತಡೆಗಟ್ಟಬಹುದು ಎಂದು ಅವರು ಹೇಳಿದ್ದಾರೆ.

ಅಮೆರಿಕದ ಡೊನಾಲ್ಡ್ ಟ್ರಂಪ್

ಟ್ರಂಪ್ ಅಧಿಕಾರದಿಂದ ಹೊರಗುಳಿದಿದ್ದಾರೆ. ಆದರೆ ಸಾಂಕ್ರಾಮಿಕ ರೋಗವನ್ನು ಅವರು ತಪ್ಪಾಗಿ ನಿರ್ವಹಿಸಿದ್ದು ಅಮೆರಿಕಾದ ಮೇಲೆ- ವಿಶೇಷವಾಗಿ ಕಪ್ಪು ವರ್ಣದ ಸಮುದಾಯಗಳ ಮೇಲೆ- ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತಿದೆ.

ಸಾಂಕ್ರಾಮಿಕ ರೋಗದ ಆರಂಭಿಕ ನಿರಾಕರಣೆ, ಮಾಸ್ಕ್ ಮತ್ತು ಚಿಕಿತ್ಸೆಗಳ ಬಗ್ಗೆ ತಪ್ಪು ಸಂದೇಶಗಳನ್ನು ಅವರು ನೀಡುತ್ತ ಬಂದರು. ಮೋದಿಯವರಂತೆ ಅವರಿಗೂ ಚುನಾವಣೆ ಗೆಲ್ಲುವುದಷ್ಟೇ ಮುಖ್ಯವಾಗಿತ್ತು.

ಆಫ್ರಿಕನ್ ಅಮೆರಿಕನ್ನರು ಮತ್ತು ಲ್ಯಾಟಿನೋಗಳು ಯುಎಸ್ ಜನಸಂಖ್ಯೆಯ ಕೇವಲ 31%ರಷ್ಟಿದ್ದಾರೆ. ಅವರು ಕೋವಿಡ್ ಪ್ರಕರಣಗಳಲ್ಲಿ 55% ಕ್ಕಿಂತ ಹೆಚ್ಚು ಇದ್ದಾರೆ. ಬಿಳಿಯರ ಮರಣ ಪ್ರಮಾಣಕ್ಕಿಂತ ಕಪ್ಪು ವರ್ಣದವರ ಮರಣ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಿತ್ತು.
ನಿರುದ್ಯೋಗ ಏರಿಕೆಯಲ್ಲೂ ಟ್ರಂಪ್ ಕಾರಣವಾದರು. ಇದು ಹೆಚ್ಚಾಗಿ ತಟ್ಟಿದ್ದು ಬಿಳಿಯರಲ್ಲದ ಅಮೆರಿಕನ್ ಪ್ರಜೆಗಳಿಗೆ.

ಮೆಕ್ಸಿಕೊದ ಆಂಡ್ರೆಸ್

ಮೆಕ್ಸಿಕೊವು ವಿಶ್ವದಲ್ಲೇ ಅತಿ ಹೆಚ್ಚು ಕೋವಿಡ್ ಸಾವಿನ ಪ್ರಮಾಣವನ್ನು ಹೊಂದಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಇದು 6,17,000 ಸಾವುಗಳನ್ನು ಅನುಭವಿಸಿದೆ. ಭಾರತ ಮತ್ತು ಅಮೆರಿಕ ಕೂಡ ಸಾವಿನ ಸಂಖ್ಯೆಯಲ್ಲಿ ಮುಂದಿವೆ.

ಮೆಕ್ಸಿಕೊದ ದೀರ್ಘಕಾಲದ, ವಿಪರೀತ ಕೋವಿಡ್ ಏಕಾಏಕಿಗಳಿಗೆ ಅಸಮರ್ಪಕ ರಾಷ್ಟ್ರೀಯ ನಾಯಕತ್ವ ಕಾರಣವಾಗಿದೆ.

ಸಾಂಕ್ರಾಮಿಕ ರೋಗದುದ್ದಕ್ಕೂ, ಮೆಕ್ಸಿಕನ್ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಮೆಕ್ಸಿಕೊದ ಪರಿಸ್ಥಿತಿಯ ಸಂಕಷ್ಟವನ್ನು ಮುಚ್ಚಿ ಇಡಲು ನೋಡಿದರು. ಆರಂಭದಲ್ಲಿ, ಅವರು ರಾಷ್ಟ್ರವ್ಯಾಪಿ ಲಾಕ್ ಡೌನ್ ಜಾರಿಗೆ ವಿರೋಧಿಸಿದರು ಮತ್ತು ಅಂತಿಮವಾಗಿ ಮಾರ್ಚ್ 23, 2020 ರಂದು ಮೆಕ್ಸಿಕೊ ಎರಡು ತಿಂಗಳ ಕಾಲ ಸ್ಥಗಿತಗೊಳ್ಳುವಂತೆ ಮಾಡಿದರು. ಅವರು ಆಗಾಗ್ಗೆ ಮಾಸ್ಕ್ ಧರಿಸಲು ನಿರಾಕರಿಸಿದರು.

ಸಾಂಕ್ರಾಮಿಕ ರೋಗವು ಸ್ಫೋಟಗೊಳ್ಳುವ ಮೊದಲೇ, ಲೋಪೆಜ್ ಒಬ್ರಡಾರ್ ಜಾರಿಗೆ ತಂದ ಹಣಕಾಸು ನೀತಿ ಆರೋಗ್ಯ ಬಿಕ್ಕಟ್ಟನ್ನು ಇನ್ನಷ್ಟು ದುಸ್ತರವಾಗಿಸಿದೆ. ನಮ್ಮಲ್ಲಿ ಮೋದಿಯವರ ನೋಟ್‌ಬ್ಯಾನ್, ಅವೈಜ್ಞಾನಿಕ ಜಿಎಸ್‌ಟಿ ನೀತಿಗಳು ಕೂಡ ಭಾರತಕ್ಕೆ ಈಗ ಕಾಡುತ್ತಿವೆ.

(ಕೃಪೆ: ದಿ ವೈರ್)


ಇದನ್ನೂ ಓದಿ: ಅತಿ ಕೆಟ್ಟ ಕೋವಿಡ್ ನಿರ್ವಹಣೆ: ಐದು ಜಾಗತಿಕ ನಾಯಕರಲ್ಲಿ ನರೇಂದ್ರ ಮೋದಿಗೆ ಮೊದಲ ಸ್ಥಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...