Homeಅಂಕಣಗಳುಥೂತ್ತೇರಿ | ಯಾಹೂಮಂಡ್ಯದ ಸ್ವಾಭಿಮಾನ ಅಂದ್ರೆ ಏನನ್ನಕಂಡಿದ್ದಿರಿ ಸಾ! - ಥೂತ್ತೇರಿ.

ಮಂಡ್ಯದ ಸ್ವಾಭಿಮಾನ ಅಂದ್ರೆ ಏನನ್ನಕಂಡಿದ್ದಿರಿ ಸಾ! – ಥೂತ್ತೇರಿ.

- Advertisement -
- Advertisement -

ಕುರುಕ್ಷೇತ್ರದ ವಿವರವನ್ನು ದೃತರಾಷ್ಟ್ರ ಸಂಜಯನಿಂದ ತಿಳಿದುಕೊಳ್ಳುತ್ತಿದ್ದಂತೆ, ನಾವು ಕೂಡ ಯಾಕೆ ಮಂಡ್ಯ ಜಿಲ್ಲೆಯ ವಾಟಿಸ್ಸೆ ಮಾತನಾಡಿಸಿ, ಅಖಾಡದ ವಿವರ ಪಡೆಯಬಾರದು ಎನ್ನಿಸಿದ ಕೂಡಲೇ, ಖುಷಿಯಾಯ್ತು. ವಾಟಿಸ್ಸೆಗೆ ಪೋನ್ ಮಾಡಲಾಗಿ ರಿಂಗಾಯ್ತು ರಿಂಗ್ ಟೋನ್….. ಹಾ ಯಣ್ಣೆ ನಿಮ್ದು ಊಟ ನಮ್ದು…..

‘ಹಲೋ ಯಾರು ಮಾತಾಡಿ ಪ್ಲೀಸ್’

“ವಾಟಿಸ್ಸೆ, ನಾನು ಯಾಹೂ”

“ಓಹೊಹೊ ಗುಡ್ಡಾಪ್ಟರ್‍ನೂನ್ ಸರ್”

“ಎಲ್ಲಿದ್ದೀ”

“ನಮ್ಮ ಕ್ಷೇತ್ರದಲ್ಲಿದ್ದೀನಿ ಸಾ”

“ಯಾಗಿದೆ ವಾತಾವರಣ”

“ತುಂಬ ಹೀಟಾಗಿದೆ ಸಾರ್, ಅದರಲ್ಲೂ ಕುಮಾರಣ್ಣನ ಇಂಜನ್ನು ತುಂಬಾ ಬಾಯ್ಲಾಗಿ ಹ್ವೊಗೆ ಬತ್ತಾ ಅದೆ”

“ಜೊತೆಲಿ ರಾಧಿಕಾ ಇದ್ರೆ ಕೂಲಾಗಿರತಿದ್ರಲ್ಲವಾ”

“ಅಂಗೇಳಕ್ಕೆ ಬರದಿಲ್ಲ ಸಾರ್. ಆಗ್ಲೆ ಇಂಜನ್ನ ಯರಡು ಸತಿ ಹೊರಾಯಲ್ಲಾಗಿರದ್ರಿಂದ, ಅವರ ಬಾಳಿಕೆ ಕಡಿಮೆ ಅಂತ ಅವರಪ್ಪ ದ್ಯಾವೇಗೌಡ ಹೇಳವ್ರೆ”

“ಅದ್ಕೆ ನಿಖಿಲ್ ನಿಲ್ಸಿದ್ದರಂತೆ”

“ಅವ್ಯಲ್ಲ ಸುಳ್ಳು ಸಾರ್, ದ್ಯಾವೇಗೌಡ್ರು ಸುಳ್ಳು ಹೇಳಿ ಹೇಳಿ ಅದ್ನೆ ನಿಜ ಅನ್ನಕಂಡು ಬುಡ್ತರೆ. ಅವುರಿಗೆ ಸುಳ್ಳಿಗೂ ಸತ್ಯಕ್ಕೂ ವ್ಯತ್ಯಾಸನೆ ಹೊಂಟ್ಯೋಗ್ಯದೆ”

“ಅಂಗಂತಿಯಾ”

“ಸಾರ್, ನಾನು ಯಾವ ಕಾಲದಿಂದ ದ್ಯಾವೇಗೌಡ್ರ ನೋಡಿದ್ದಿನಿ ಅವುರ ಭಾಷಣ ಕೇಳಿದ್ದೀನಿ. ಯಲ್ಲಾ ರಿಕಾಲ್ಡ್ ನನ್ನತ್ರ ಅವೆ ಸರ್”

“ಚುನಾವಣೆ ಬಗ್ಗೆ ಏನೇಳ್ತೀರಿ, ಸುಮಲತ ಗೆಲ್ತರ?”

“ಅವುರು ಗೆದ್ದಾಯ್ತು ಸಾರ್, ಇನ್ನೇನಿದ್ರು ಲೀಡ್ ಲೆಕ್ಕ ಹಾಕಬೇಕು”

“ಅದ್ಯಂಗೇಳ್ತಿ”

“ವೆರಿ ಸಿಂಪಲ್ಲು ಸಾರ್, ಈ ಕುಮಾರಸ್ವಾಮಿ ದ್ಯಾವೇಗೌಡ್ರು ಯಾವತ್ತು ನಿಖಿಲನ್ನು ತಂದು ಮಂಡ್ಯಕ್ಕೆ ನಿಲ್ಲಿಸಿದ್ರೊ ಅವತ್ತೇ ಸೋತ. ಯಾಕಂದ್ರೆ ಮಂಡ್ಯದಲ್ಲಿ ಗಂಡುಸ್ರಿಲವೆ ಅಂತ ಜನ ತಿರಿಗಿಬಿದ್ರು. ಆಗ ಗಂಡಸರ ಮಾನ ಉಳಸಕ್ಕೆ ಸುಮಲತ ನಿಂತ್ರು. ನಿಜಕ್ಕೂ ಮಂಡ್ಯದ ಮರಿಯಾದಿ ಉಳಿಸಿದ ಗೌಡ್ತಿ ಸಾರವುಳು”

“ಕಾಂಗ್ರೆಸ್ಸಿನೋರು  ಯಂಗವರೆ”?

“ಅವುರದ್ರಲ್ಯ ಅಂಡರ್ ಗ್ರೌಂಡ್ ವರ್ಕ್ ಸಾ”

“ಯಾಕೆ”

“ಯಾಕೆ ಅಂದ್ರೆ, ನಮ್ಮ ಜಿಲ್ಲೆಲಿ ಕಾಂಗ್ರೆಸ್ ಜೆಡಿಎಸ್ ಅಂದ್ರೆ ಮ್ಯಾಗಲ ಕೇರಿ ಕ್ಯಾಳಗಲ ಕೇರಿ ನಾಯಿಗಳಿದ್ದಂಗೆ. ಯಾವಾಗ್ಲೂ ಕಡದಾಡ್ತವೆ. ಯಲಕ್ಷನ್ ಬಂದಾಗ ಯಾರಿಗಾರ ಓಟಾಕಿ ಒಂದಾಗಿರಿನ ಅನ್ನದ ಇವತ್ತಿಗೂ ತಿಳಿಕಂಡಿಲ್ಲ. ಈಗೆ ಕುಮಾರಸ್ವಾಮಿ ಮಗನಿಗಾಗಿ ಒಂದಾದಾರೆ?

“ಅಂಗಾದ್ರೆ ಮೈತ್ರಿ ಧರ್ಮದ ಕತೆ ಏನೂ.”

“ಅದ ಮುರುದಾಕಿರೋನೆ ಕುಮಾರಸ್ವಾಮಿ.”

“ಅದ್ಯಂಗೇ.”

“ಯಂಗೇ ಅಂದ್ರೆ ಕೆಲವು ಕಾಂಗ್ರೆಸ್ಸಿಗರು ನನಿಗೆ ಬೇಕಿಲ್ಲ ಅಂತನೆ. ಅಂದ್ರೆ ಮೈತ್ರಿ ಧರ್ಮ ಮುರದೋರ್ಯಾರು ಹೇಳಿಸಾ.”

“ಕುಮಾರಣ್ಣಂದೆ ತಪ್ಪು  ಅಂತಿರಾ.”

“ಒಂದಲ್ಲಾ ಸಾ. ತಪ್ಪು ದಿನಾ ಮಾಡ್ತನೇ ಹೋಯ್ತಾ ಅವುನೆ.”

“ಒಂದ್ಯರಡೇಳು ನೋಡಣ.”

“ನಿಖಿಲ್ ಎಲ್ಲಿದ್ದಿಯಪ್ಪಾ ಅಂದಿದ್ದು ಮೊದಲ್ನೆ ತಪ್ಪು, ಅವತ್ತಿಂದ ಮಗನ್ನ ಮಂಡ್ಯದಲ್ಲಿ ನಾಟಿಹಾಕಿ ಬ್ಯಳಸಕ್ಕೆ ಮಾಡಿದ ಕ್ಯಲಸಗಳ್ಯಲ್ಲ. ಪ್ರಾಮಾಣಿಕವಾದವಲ್ಲ ಅಂತ, ಜನಕ್ಕೆ ಈಗ ಗೊತ್ತಾಯ್ತಾ ಅದೆ ಸಾ. ಇನ್ನ ಆ ದರ್ಶನನ್ನ ಯಾಕೆ ಬೈಬೇಕು ಸಾ. ಇವುನ ಮಗನೂ ಹೀರೋ ಅಲ್ಲವೆ.”

“ಮಗನ್ನ ಗೆಲ್ಲಸಬೇಕಲವೆ.”

“ಗೆಲ್ಲಿಸಬೇಕು ಅಂತ ಅನ್ನೋ ಮಾತುಗಳೇ, ಅವುನ್ನ ಸೋಲುಸ್ತಾ ಅವೆ ಸಾ. ನಾನಂತು ಹುಟ್ಟಿದ್ ತಾವಿಂದ ಮಂಡ್ಯ ಜಿಲ್ಲೆ ಹಿಂಗೆ ಎದ್ದು ನಿಂತಿದ್ದ ನೋಡ್ನಿಲ್ಲ ಸಾ.”

“ಬರಿ ಅಂಬಿ ಅಭಿಮಾನಿಗಳಬ್ಬರವಂತೆ.”

“ಅವುರಬ್ಬರ ಸರಿ, ಸುಮ್ಮನಿರೋರ ಅಬ್ಬರ ಕೇಳಿಸಿಗಂಡಿದ್ದೀರಾ. ಅದು ಸಾಧಾರಣವಾದದ್ದಲ್ಲ ಸಾರ್. ಇಂದ್ರಾಗಾಂಧಿ, ರಾಜೀವ್‍ಗಾಂಧಿ ಜ್ವತೆಲಿದ್ದಿನಿ ಅಂತ ಮಂಡ್ಯನೆ ಮರತಿದ್ದ ಯಸ್ಸೆಂ ಕೃಷ್ಣನ್ನ ಶಂಕರೇಗೌಡ್ರೆದ್ರಿಗೆ ತಗದು ಯಸ್ತರಲ್ಲ ಅಂಥದೊಂದು ಅಬ್ಬರ ವಳಗೇ ಗುರುಗುಡತಾ ಅದೆ.”

“ಅಮರಾವತಿ ಚಂದ್ರಶೇಖರ ಸುಮಲತಾರಿಗೆ ಕೈಕೊಟ್ಟನಂತೆ.”

“ವ್ಯವಾರಸ್ತರಂಗೇ ಅಲವ ಸಾ, ಅಂಬಿ ಇರಗಂಟ ಅವುನ್ನ ತಂಬಿ ಅನ್ನಕಂಡು ಬದುಕಿದ, ಅವುನ ಮಂತ್ರಿಗಿರಿಗೂ ಕ್ಯಟ್ಟ ಹೆಸರು ತಂದ, ಈಗಂಬಿ ಇಲ್ಲ, ಅದ್ಕೆ ಕುಮಾರಣ್ಣ ನತÀ್ರಕ್ಕೋಗಿ ಕುಯ್ಯಿಗುಡ್ತಾ ಅವುನೆ. ಈ ಶತಮಾನದ ದ್ರೋಹ ಅಂದ್ರೆ ಅವiರಾವತಿ ಚಂದ್ರಶೇಖರ ಅಂಬರೀಶ್ಗೆ ಕೈ ಕೊಟ್ಟಿದ್ದು, ಯಸ್ಸೆಂ ಕೃಷ್ಣ ಕಾಂಗ್ರೆಸ್‍ಗೆ ಕೈಕೊಟ್ಟಿದ್ದು ಸಾ.”

“ಕೃಷ್ಣ ಕಾಂಗ್ರೆಸ್ ಬುಡಕ್ಕೆ ಸರಿಯಾದ ಕಾರಣ ಕೊಟ್ಟವುರೆ.”

“ಏನಾರ ಕೊಡ್ಳಿ, ಇವತ್ತು ಅವುನ ತಲೆಮ್ಯಾಲೆ ಹಾಕ್ಯಂಡವುನಲ್ಲ ವಿಗ್ಗುಮ ಅವು ಕಾಂಗ್ರೆಸ್ಸಿಂದು ಸಾ. ಅವುನ ಮನೆ ಮಠ ಆಸ್ತಿ ಪಾಸ್ತಿ ಬಟ್ಟಿ ಬರಿ ಯಲ್ಲಾ ಕಾಂಗ್ರೆಸ್ಸಿಂದು, ಸಾಯಕಡೆ ಸತಿ ಅದೂ ಬಿಜೆಪಿ ಗೋದ ನೋಡಿ ಅದ್ಕೆ ಅವುನ ದ್ರೋಹ ಈ ಶತಮಾನದ ದ್ರೋಹ ಸಾ.”

“ಅವುರೊಬ್ಬರೆ ಏನೋಗಿಲ್ಲ, ಅಂಥಾ ಡಿ.ಬಿ.ಚಂದ್ರೇಗೌಡ ಹೋದ, ಶ್ರೀಕಂಠಯ್ಯ ಹೋದ ಗೊತ್ತಾ.”

“ಅವುರು ದ್ಯಾವೇಗೌಡನ ರಾಜಕಾರಣದಿಂದ ಬೇಸತ್ತು ಹೋದ್ರು ಸಾ. ಇವುಂದೇಳಿ ಕಾಂಗ್ರೆಸ್ಸು ಇವುನ್ನ ಪ್ರಧಾನಿ ಮಾಡಲಿಲ್ಲ ಅಷ್ಟೇ. ಇನ್ಯಲ್ಲ ಸ್ಥಾನಕೊಟ್ಟಿತ್ತು ಅಲ್ವೆ, ಹೋಗ್ಲಿ ಬುಡಿ ಸತ್ತೋರ ಬಗ್ಗೆ ಯಾಕೆ ಮಾತಾಡದು.”

“ವಾಟಿಸ್ಸೆ ನೀನು ಕಾಂಗ್ರೆಸ್ಸಾ.”

“ಇಲ್ಲ ಸಾರ್, ಈಗ ಇಂಡಿಪೆಂಡೆಂಟು.”

“ಹ್ಯಂಗೆ ನ್ಯಡಿದದೆ ಪ್ರಚಾರ.”

“ನೋಡಿ, ಇವತ್ತು ಕುಮಾರಸ್ವಾಮಿ ಊರಿಗ್ಯಲ್ಲ ಬಸ್ಸು ಕಳಿಸಿ ಜನ ತಂದು ಮಂಡ್ಯದಲ್ಲಿ ಸುರಕಂಡು ಸುಮಲತನಿಗಿಂತ ನಾವು ಸ್ಟ್ರಾಂಗು ಅಂತ ತೋರ್ಯವುನೇ. ತಲಿಗೆ ಐದು ನೂರ್‍ವರ್ಗೂ ಬಟವಾಡೆ ಆಗಿದೆ. ಯಲಕ್ಷನ್ ಟೀಮಿಗೆ ಓಟಿಗಿಷ್ಟು ಅಂತ ತೀರ್ಮಾನ ಮಾಡಿ ಕೋಡ್ತಾರಂತೆ, ಯಾಕಂದ್ರೆ ಮುಖ್ಯಮಂತ್ರಿ ಮಗ ಸೋಲಬಾರದಂತೆ. ಅವುರಿಗೆ ಕಾರ್ಯಕರ್ತರವುರೆ ಎಂಟು ಜನ ಯಮ್ಮೆಲ್ಲೆ ಪೈಕಿ ಮೂರು ಜನ ಮಂತ್ರಿಗಳವುರೆ, ಆದ್ರಿಂದ ಬಟಾವಾಡೆಗೆ ಯಾವ ತ್ವಂದ್ರೆನು ಇಲ್ಲ.”

“ಜನ ದುಡ್ಡೀಸಗಳಕ್ಕೆ ತಯಾರಾಗಿದಾರ.”

“ಮತ್ತೆ ಯಾರಪ್ಪನ ಮನೆ ದುಡ್ಡು ಸಾರ್, ಮಂಡ್ಯದ ಮಣ್ಣಿನ ಮಕ್ಕಳ ದುಡ್ಡು ಬುಡಕ್ಕಾಯ್ತದಾ.”

“ನೀವು.”

“ನಾನು ಈಸಗಂಡು ಓಟು ಮಾತ್ರ ಸುಮಲತಾರಿಗಾಕ್ತಿನಿ.”

“ಥೂತ್ತೇರಿ.”

–    ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...