Homeಅಂಕಣಗಳುಥೂತ್ತೇರಿ | ಯಾಹೂಮಂಡ್ಯದ ಸ್ವಾಭಿಮಾನ ಅಂದ್ರೆ ಏನನ್ನಕಂಡಿದ್ದಿರಿ ಸಾ! - ಥೂತ್ತೇರಿ.

ಮಂಡ್ಯದ ಸ್ವಾಭಿಮಾನ ಅಂದ್ರೆ ಏನನ್ನಕಂಡಿದ್ದಿರಿ ಸಾ! – ಥೂತ್ತೇರಿ.

- Advertisement -
- Advertisement -

ಕುರುಕ್ಷೇತ್ರದ ವಿವರವನ್ನು ದೃತರಾಷ್ಟ್ರ ಸಂಜಯನಿಂದ ತಿಳಿದುಕೊಳ್ಳುತ್ತಿದ್ದಂತೆ, ನಾವು ಕೂಡ ಯಾಕೆ ಮಂಡ್ಯ ಜಿಲ್ಲೆಯ ವಾಟಿಸ್ಸೆ ಮಾತನಾಡಿಸಿ, ಅಖಾಡದ ವಿವರ ಪಡೆಯಬಾರದು ಎನ್ನಿಸಿದ ಕೂಡಲೇ, ಖುಷಿಯಾಯ್ತು. ವಾಟಿಸ್ಸೆಗೆ ಪೋನ್ ಮಾಡಲಾಗಿ ರಿಂಗಾಯ್ತು ರಿಂಗ್ ಟೋನ್….. ಹಾ ಯಣ್ಣೆ ನಿಮ್ದು ಊಟ ನಮ್ದು…..

‘ಹಲೋ ಯಾರು ಮಾತಾಡಿ ಪ್ಲೀಸ್’

“ವಾಟಿಸ್ಸೆ, ನಾನು ಯಾಹೂ”

“ಓಹೊಹೊ ಗುಡ್ಡಾಪ್ಟರ್‍ನೂನ್ ಸರ್”

“ಎಲ್ಲಿದ್ದೀ”

“ನಮ್ಮ ಕ್ಷೇತ್ರದಲ್ಲಿದ್ದೀನಿ ಸಾ”

“ಯಾಗಿದೆ ವಾತಾವರಣ”

“ತುಂಬ ಹೀಟಾಗಿದೆ ಸಾರ್, ಅದರಲ್ಲೂ ಕುಮಾರಣ್ಣನ ಇಂಜನ್ನು ತುಂಬಾ ಬಾಯ್ಲಾಗಿ ಹ್ವೊಗೆ ಬತ್ತಾ ಅದೆ”

“ಜೊತೆಲಿ ರಾಧಿಕಾ ಇದ್ರೆ ಕೂಲಾಗಿರತಿದ್ರಲ್ಲವಾ”

“ಅಂಗೇಳಕ್ಕೆ ಬರದಿಲ್ಲ ಸಾರ್. ಆಗ್ಲೆ ಇಂಜನ್ನ ಯರಡು ಸತಿ ಹೊರಾಯಲ್ಲಾಗಿರದ್ರಿಂದ, ಅವರ ಬಾಳಿಕೆ ಕಡಿಮೆ ಅಂತ ಅವರಪ್ಪ ದ್ಯಾವೇಗೌಡ ಹೇಳವ್ರೆ”

“ಅದ್ಕೆ ನಿಖಿಲ್ ನಿಲ್ಸಿದ್ದರಂತೆ”

“ಅವ್ಯಲ್ಲ ಸುಳ್ಳು ಸಾರ್, ದ್ಯಾವೇಗೌಡ್ರು ಸುಳ್ಳು ಹೇಳಿ ಹೇಳಿ ಅದ್ನೆ ನಿಜ ಅನ್ನಕಂಡು ಬುಡ್ತರೆ. ಅವುರಿಗೆ ಸುಳ್ಳಿಗೂ ಸತ್ಯಕ್ಕೂ ವ್ಯತ್ಯಾಸನೆ ಹೊಂಟ್ಯೋಗ್ಯದೆ”

“ಅಂಗಂತಿಯಾ”

“ಸಾರ್, ನಾನು ಯಾವ ಕಾಲದಿಂದ ದ್ಯಾವೇಗೌಡ್ರ ನೋಡಿದ್ದಿನಿ ಅವುರ ಭಾಷಣ ಕೇಳಿದ್ದೀನಿ. ಯಲ್ಲಾ ರಿಕಾಲ್ಡ್ ನನ್ನತ್ರ ಅವೆ ಸರ್”

“ಚುನಾವಣೆ ಬಗ್ಗೆ ಏನೇಳ್ತೀರಿ, ಸುಮಲತ ಗೆಲ್ತರ?”

“ಅವುರು ಗೆದ್ದಾಯ್ತು ಸಾರ್, ಇನ್ನೇನಿದ್ರು ಲೀಡ್ ಲೆಕ್ಕ ಹಾಕಬೇಕು”

“ಅದ್ಯಂಗೇಳ್ತಿ”

“ವೆರಿ ಸಿಂಪಲ್ಲು ಸಾರ್, ಈ ಕುಮಾರಸ್ವಾಮಿ ದ್ಯಾವೇಗೌಡ್ರು ಯಾವತ್ತು ನಿಖಿಲನ್ನು ತಂದು ಮಂಡ್ಯಕ್ಕೆ ನಿಲ್ಲಿಸಿದ್ರೊ ಅವತ್ತೇ ಸೋತ. ಯಾಕಂದ್ರೆ ಮಂಡ್ಯದಲ್ಲಿ ಗಂಡುಸ್ರಿಲವೆ ಅಂತ ಜನ ತಿರಿಗಿಬಿದ್ರು. ಆಗ ಗಂಡಸರ ಮಾನ ಉಳಸಕ್ಕೆ ಸುಮಲತ ನಿಂತ್ರು. ನಿಜಕ್ಕೂ ಮಂಡ್ಯದ ಮರಿಯಾದಿ ಉಳಿಸಿದ ಗೌಡ್ತಿ ಸಾರವುಳು”

“ಕಾಂಗ್ರೆಸ್ಸಿನೋರು  ಯಂಗವರೆ”?

“ಅವುರದ್ರಲ್ಯ ಅಂಡರ್ ಗ್ರೌಂಡ್ ವರ್ಕ್ ಸಾ”

“ಯಾಕೆ”

“ಯಾಕೆ ಅಂದ್ರೆ, ನಮ್ಮ ಜಿಲ್ಲೆಲಿ ಕಾಂಗ್ರೆಸ್ ಜೆಡಿಎಸ್ ಅಂದ್ರೆ ಮ್ಯಾಗಲ ಕೇರಿ ಕ್ಯಾಳಗಲ ಕೇರಿ ನಾಯಿಗಳಿದ್ದಂಗೆ. ಯಾವಾಗ್ಲೂ ಕಡದಾಡ್ತವೆ. ಯಲಕ್ಷನ್ ಬಂದಾಗ ಯಾರಿಗಾರ ಓಟಾಕಿ ಒಂದಾಗಿರಿನ ಅನ್ನದ ಇವತ್ತಿಗೂ ತಿಳಿಕಂಡಿಲ್ಲ. ಈಗೆ ಕುಮಾರಸ್ವಾಮಿ ಮಗನಿಗಾಗಿ ಒಂದಾದಾರೆ?

“ಅಂಗಾದ್ರೆ ಮೈತ್ರಿ ಧರ್ಮದ ಕತೆ ಏನೂ.”

“ಅದ ಮುರುದಾಕಿರೋನೆ ಕುಮಾರಸ್ವಾಮಿ.”

“ಅದ್ಯಂಗೇ.”

“ಯಂಗೇ ಅಂದ್ರೆ ಕೆಲವು ಕಾಂಗ್ರೆಸ್ಸಿಗರು ನನಿಗೆ ಬೇಕಿಲ್ಲ ಅಂತನೆ. ಅಂದ್ರೆ ಮೈತ್ರಿ ಧರ್ಮ ಮುರದೋರ್ಯಾರು ಹೇಳಿಸಾ.”

“ಕುಮಾರಣ್ಣಂದೆ ತಪ್ಪು  ಅಂತಿರಾ.”

“ಒಂದಲ್ಲಾ ಸಾ. ತಪ್ಪು ದಿನಾ ಮಾಡ್ತನೇ ಹೋಯ್ತಾ ಅವುನೆ.”

“ಒಂದ್ಯರಡೇಳು ನೋಡಣ.”

“ನಿಖಿಲ್ ಎಲ್ಲಿದ್ದಿಯಪ್ಪಾ ಅಂದಿದ್ದು ಮೊದಲ್ನೆ ತಪ್ಪು, ಅವತ್ತಿಂದ ಮಗನ್ನ ಮಂಡ್ಯದಲ್ಲಿ ನಾಟಿಹಾಕಿ ಬ್ಯಳಸಕ್ಕೆ ಮಾಡಿದ ಕ್ಯಲಸಗಳ್ಯಲ್ಲ. ಪ್ರಾಮಾಣಿಕವಾದವಲ್ಲ ಅಂತ, ಜನಕ್ಕೆ ಈಗ ಗೊತ್ತಾಯ್ತಾ ಅದೆ ಸಾ. ಇನ್ನ ಆ ದರ್ಶನನ್ನ ಯಾಕೆ ಬೈಬೇಕು ಸಾ. ಇವುನ ಮಗನೂ ಹೀರೋ ಅಲ್ಲವೆ.”

“ಮಗನ್ನ ಗೆಲ್ಲಸಬೇಕಲವೆ.”

“ಗೆಲ್ಲಿಸಬೇಕು ಅಂತ ಅನ್ನೋ ಮಾತುಗಳೇ, ಅವುನ್ನ ಸೋಲುಸ್ತಾ ಅವೆ ಸಾ. ನಾನಂತು ಹುಟ್ಟಿದ್ ತಾವಿಂದ ಮಂಡ್ಯ ಜಿಲ್ಲೆ ಹಿಂಗೆ ಎದ್ದು ನಿಂತಿದ್ದ ನೋಡ್ನಿಲ್ಲ ಸಾ.”

“ಬರಿ ಅಂಬಿ ಅಭಿಮಾನಿಗಳಬ್ಬರವಂತೆ.”

“ಅವುರಬ್ಬರ ಸರಿ, ಸುಮ್ಮನಿರೋರ ಅಬ್ಬರ ಕೇಳಿಸಿಗಂಡಿದ್ದೀರಾ. ಅದು ಸಾಧಾರಣವಾದದ್ದಲ್ಲ ಸಾರ್. ಇಂದ್ರಾಗಾಂಧಿ, ರಾಜೀವ್‍ಗಾಂಧಿ ಜ್ವತೆಲಿದ್ದಿನಿ ಅಂತ ಮಂಡ್ಯನೆ ಮರತಿದ್ದ ಯಸ್ಸೆಂ ಕೃಷ್ಣನ್ನ ಶಂಕರೇಗೌಡ್ರೆದ್ರಿಗೆ ತಗದು ಯಸ್ತರಲ್ಲ ಅಂಥದೊಂದು ಅಬ್ಬರ ವಳಗೇ ಗುರುಗುಡತಾ ಅದೆ.”

“ಅಮರಾವತಿ ಚಂದ್ರಶೇಖರ ಸುಮಲತಾರಿಗೆ ಕೈಕೊಟ್ಟನಂತೆ.”

“ವ್ಯವಾರಸ್ತರಂಗೇ ಅಲವ ಸಾ, ಅಂಬಿ ಇರಗಂಟ ಅವುನ್ನ ತಂಬಿ ಅನ್ನಕಂಡು ಬದುಕಿದ, ಅವುನ ಮಂತ್ರಿಗಿರಿಗೂ ಕ್ಯಟ್ಟ ಹೆಸರು ತಂದ, ಈಗಂಬಿ ಇಲ್ಲ, ಅದ್ಕೆ ಕುಮಾರಣ್ಣ ನತÀ್ರಕ್ಕೋಗಿ ಕುಯ್ಯಿಗುಡ್ತಾ ಅವುನೆ. ಈ ಶತಮಾನದ ದ್ರೋಹ ಅಂದ್ರೆ ಅವiರಾವತಿ ಚಂದ್ರಶೇಖರ ಅಂಬರೀಶ್ಗೆ ಕೈ ಕೊಟ್ಟಿದ್ದು, ಯಸ್ಸೆಂ ಕೃಷ್ಣ ಕಾಂಗ್ರೆಸ್‍ಗೆ ಕೈಕೊಟ್ಟಿದ್ದು ಸಾ.”

“ಕೃಷ್ಣ ಕಾಂಗ್ರೆಸ್ ಬುಡಕ್ಕೆ ಸರಿಯಾದ ಕಾರಣ ಕೊಟ್ಟವುರೆ.”

“ಏನಾರ ಕೊಡ್ಳಿ, ಇವತ್ತು ಅವುನ ತಲೆಮ್ಯಾಲೆ ಹಾಕ್ಯಂಡವುನಲ್ಲ ವಿಗ್ಗುಮ ಅವು ಕಾಂಗ್ರೆಸ್ಸಿಂದು ಸಾ. ಅವುನ ಮನೆ ಮಠ ಆಸ್ತಿ ಪಾಸ್ತಿ ಬಟ್ಟಿ ಬರಿ ಯಲ್ಲಾ ಕಾಂಗ್ರೆಸ್ಸಿಂದು, ಸಾಯಕಡೆ ಸತಿ ಅದೂ ಬಿಜೆಪಿ ಗೋದ ನೋಡಿ ಅದ್ಕೆ ಅವುನ ದ್ರೋಹ ಈ ಶತಮಾನದ ದ್ರೋಹ ಸಾ.”

“ಅವುರೊಬ್ಬರೆ ಏನೋಗಿಲ್ಲ, ಅಂಥಾ ಡಿ.ಬಿ.ಚಂದ್ರೇಗೌಡ ಹೋದ, ಶ್ರೀಕಂಠಯ್ಯ ಹೋದ ಗೊತ್ತಾ.”

“ಅವುರು ದ್ಯಾವೇಗೌಡನ ರಾಜಕಾರಣದಿಂದ ಬೇಸತ್ತು ಹೋದ್ರು ಸಾ. ಇವುಂದೇಳಿ ಕಾಂಗ್ರೆಸ್ಸು ಇವುನ್ನ ಪ್ರಧಾನಿ ಮಾಡಲಿಲ್ಲ ಅಷ್ಟೇ. ಇನ್ಯಲ್ಲ ಸ್ಥಾನಕೊಟ್ಟಿತ್ತು ಅಲ್ವೆ, ಹೋಗ್ಲಿ ಬುಡಿ ಸತ್ತೋರ ಬಗ್ಗೆ ಯಾಕೆ ಮಾತಾಡದು.”

“ವಾಟಿಸ್ಸೆ ನೀನು ಕಾಂಗ್ರೆಸ್ಸಾ.”

“ಇಲ್ಲ ಸಾರ್, ಈಗ ಇಂಡಿಪೆಂಡೆಂಟು.”

“ಹ್ಯಂಗೆ ನ್ಯಡಿದದೆ ಪ್ರಚಾರ.”

“ನೋಡಿ, ಇವತ್ತು ಕುಮಾರಸ್ವಾಮಿ ಊರಿಗ್ಯಲ್ಲ ಬಸ್ಸು ಕಳಿಸಿ ಜನ ತಂದು ಮಂಡ್ಯದಲ್ಲಿ ಸುರಕಂಡು ಸುಮಲತನಿಗಿಂತ ನಾವು ಸ್ಟ್ರಾಂಗು ಅಂತ ತೋರ್ಯವುನೇ. ತಲಿಗೆ ಐದು ನೂರ್‍ವರ್ಗೂ ಬಟವಾಡೆ ಆಗಿದೆ. ಯಲಕ್ಷನ್ ಟೀಮಿಗೆ ಓಟಿಗಿಷ್ಟು ಅಂತ ತೀರ್ಮಾನ ಮಾಡಿ ಕೋಡ್ತಾರಂತೆ, ಯಾಕಂದ್ರೆ ಮುಖ್ಯಮಂತ್ರಿ ಮಗ ಸೋಲಬಾರದಂತೆ. ಅವುರಿಗೆ ಕಾರ್ಯಕರ್ತರವುರೆ ಎಂಟು ಜನ ಯಮ್ಮೆಲ್ಲೆ ಪೈಕಿ ಮೂರು ಜನ ಮಂತ್ರಿಗಳವುರೆ, ಆದ್ರಿಂದ ಬಟಾವಾಡೆಗೆ ಯಾವ ತ್ವಂದ್ರೆನು ಇಲ್ಲ.”

“ಜನ ದುಡ್ಡೀಸಗಳಕ್ಕೆ ತಯಾರಾಗಿದಾರ.”

“ಮತ್ತೆ ಯಾರಪ್ಪನ ಮನೆ ದುಡ್ಡು ಸಾರ್, ಮಂಡ್ಯದ ಮಣ್ಣಿನ ಮಕ್ಕಳ ದುಡ್ಡು ಬುಡಕ್ಕಾಯ್ತದಾ.”

“ನೀವು.”

“ನಾನು ಈಸಗಂಡು ಓಟು ಮಾತ್ರ ಸುಮಲತಾರಿಗಾಕ್ತಿನಿ.”

“ಥೂತ್ತೇರಿ.”

–    ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...