Homeಅಂಕಣಗಳುಥೂತ್ತೇರಿ | ಯಾಹೂಮಂಡ್ಯದ ಸ್ವಾಭಿಮಾನ ಅಂದ್ರೆ ಏನನ್ನಕಂಡಿದ್ದಿರಿ ಸಾ! - ಥೂತ್ತೇರಿ.

ಮಂಡ್ಯದ ಸ್ವಾಭಿಮಾನ ಅಂದ್ರೆ ಏನನ್ನಕಂಡಿದ್ದಿರಿ ಸಾ! – ಥೂತ್ತೇರಿ.

- Advertisement -
- Advertisement -

ಕುರುಕ್ಷೇತ್ರದ ವಿವರವನ್ನು ದೃತರಾಷ್ಟ್ರ ಸಂಜಯನಿಂದ ತಿಳಿದುಕೊಳ್ಳುತ್ತಿದ್ದಂತೆ, ನಾವು ಕೂಡ ಯಾಕೆ ಮಂಡ್ಯ ಜಿಲ್ಲೆಯ ವಾಟಿಸ್ಸೆ ಮಾತನಾಡಿಸಿ, ಅಖಾಡದ ವಿವರ ಪಡೆಯಬಾರದು ಎನ್ನಿಸಿದ ಕೂಡಲೇ, ಖುಷಿಯಾಯ್ತು. ವಾಟಿಸ್ಸೆಗೆ ಪೋನ್ ಮಾಡಲಾಗಿ ರಿಂಗಾಯ್ತು ರಿಂಗ್ ಟೋನ್….. ಹಾ ಯಣ್ಣೆ ನಿಮ್ದು ಊಟ ನಮ್ದು…..

‘ಹಲೋ ಯಾರು ಮಾತಾಡಿ ಪ್ಲೀಸ್’

“ವಾಟಿಸ್ಸೆ, ನಾನು ಯಾಹೂ”

“ಓಹೊಹೊ ಗುಡ್ಡಾಪ್ಟರ್‍ನೂನ್ ಸರ್”

“ಎಲ್ಲಿದ್ದೀ”

“ನಮ್ಮ ಕ್ಷೇತ್ರದಲ್ಲಿದ್ದೀನಿ ಸಾ”

“ಯಾಗಿದೆ ವಾತಾವರಣ”

“ತುಂಬ ಹೀಟಾಗಿದೆ ಸಾರ್, ಅದರಲ್ಲೂ ಕುಮಾರಣ್ಣನ ಇಂಜನ್ನು ತುಂಬಾ ಬಾಯ್ಲಾಗಿ ಹ್ವೊಗೆ ಬತ್ತಾ ಅದೆ”

“ಜೊತೆಲಿ ರಾಧಿಕಾ ಇದ್ರೆ ಕೂಲಾಗಿರತಿದ್ರಲ್ಲವಾ”

“ಅಂಗೇಳಕ್ಕೆ ಬರದಿಲ್ಲ ಸಾರ್. ಆಗ್ಲೆ ಇಂಜನ್ನ ಯರಡು ಸತಿ ಹೊರಾಯಲ್ಲಾಗಿರದ್ರಿಂದ, ಅವರ ಬಾಳಿಕೆ ಕಡಿಮೆ ಅಂತ ಅವರಪ್ಪ ದ್ಯಾವೇಗೌಡ ಹೇಳವ್ರೆ”

“ಅದ್ಕೆ ನಿಖಿಲ್ ನಿಲ್ಸಿದ್ದರಂತೆ”

“ಅವ್ಯಲ್ಲ ಸುಳ್ಳು ಸಾರ್, ದ್ಯಾವೇಗೌಡ್ರು ಸುಳ್ಳು ಹೇಳಿ ಹೇಳಿ ಅದ್ನೆ ನಿಜ ಅನ್ನಕಂಡು ಬುಡ್ತರೆ. ಅವುರಿಗೆ ಸುಳ್ಳಿಗೂ ಸತ್ಯಕ್ಕೂ ವ್ಯತ್ಯಾಸನೆ ಹೊಂಟ್ಯೋಗ್ಯದೆ”

“ಅಂಗಂತಿಯಾ”

“ಸಾರ್, ನಾನು ಯಾವ ಕಾಲದಿಂದ ದ್ಯಾವೇಗೌಡ್ರ ನೋಡಿದ್ದಿನಿ ಅವುರ ಭಾಷಣ ಕೇಳಿದ್ದೀನಿ. ಯಲ್ಲಾ ರಿಕಾಲ್ಡ್ ನನ್ನತ್ರ ಅವೆ ಸರ್”

“ಚುನಾವಣೆ ಬಗ್ಗೆ ಏನೇಳ್ತೀರಿ, ಸುಮಲತ ಗೆಲ್ತರ?”

“ಅವುರು ಗೆದ್ದಾಯ್ತು ಸಾರ್, ಇನ್ನೇನಿದ್ರು ಲೀಡ್ ಲೆಕ್ಕ ಹಾಕಬೇಕು”

“ಅದ್ಯಂಗೇಳ್ತಿ”

“ವೆರಿ ಸಿಂಪಲ್ಲು ಸಾರ್, ಈ ಕುಮಾರಸ್ವಾಮಿ ದ್ಯಾವೇಗೌಡ್ರು ಯಾವತ್ತು ನಿಖಿಲನ್ನು ತಂದು ಮಂಡ್ಯಕ್ಕೆ ನಿಲ್ಲಿಸಿದ್ರೊ ಅವತ್ತೇ ಸೋತ. ಯಾಕಂದ್ರೆ ಮಂಡ್ಯದಲ್ಲಿ ಗಂಡುಸ್ರಿಲವೆ ಅಂತ ಜನ ತಿರಿಗಿಬಿದ್ರು. ಆಗ ಗಂಡಸರ ಮಾನ ಉಳಸಕ್ಕೆ ಸುಮಲತ ನಿಂತ್ರು. ನಿಜಕ್ಕೂ ಮಂಡ್ಯದ ಮರಿಯಾದಿ ಉಳಿಸಿದ ಗೌಡ್ತಿ ಸಾರವುಳು”

“ಕಾಂಗ್ರೆಸ್ಸಿನೋರು  ಯಂಗವರೆ”?

“ಅವುರದ್ರಲ್ಯ ಅಂಡರ್ ಗ್ರೌಂಡ್ ವರ್ಕ್ ಸಾ”

“ಯಾಕೆ”

“ಯಾಕೆ ಅಂದ್ರೆ, ನಮ್ಮ ಜಿಲ್ಲೆಲಿ ಕಾಂಗ್ರೆಸ್ ಜೆಡಿಎಸ್ ಅಂದ್ರೆ ಮ್ಯಾಗಲ ಕೇರಿ ಕ್ಯಾಳಗಲ ಕೇರಿ ನಾಯಿಗಳಿದ್ದಂಗೆ. ಯಾವಾಗ್ಲೂ ಕಡದಾಡ್ತವೆ. ಯಲಕ್ಷನ್ ಬಂದಾಗ ಯಾರಿಗಾರ ಓಟಾಕಿ ಒಂದಾಗಿರಿನ ಅನ್ನದ ಇವತ್ತಿಗೂ ತಿಳಿಕಂಡಿಲ್ಲ. ಈಗೆ ಕುಮಾರಸ್ವಾಮಿ ಮಗನಿಗಾಗಿ ಒಂದಾದಾರೆ?

“ಅಂಗಾದ್ರೆ ಮೈತ್ರಿ ಧರ್ಮದ ಕತೆ ಏನೂ.”

“ಅದ ಮುರುದಾಕಿರೋನೆ ಕುಮಾರಸ್ವಾಮಿ.”

“ಅದ್ಯಂಗೇ.”

“ಯಂಗೇ ಅಂದ್ರೆ ಕೆಲವು ಕಾಂಗ್ರೆಸ್ಸಿಗರು ನನಿಗೆ ಬೇಕಿಲ್ಲ ಅಂತನೆ. ಅಂದ್ರೆ ಮೈತ್ರಿ ಧರ್ಮ ಮುರದೋರ್ಯಾರು ಹೇಳಿಸಾ.”

“ಕುಮಾರಣ್ಣಂದೆ ತಪ್ಪು  ಅಂತಿರಾ.”

“ಒಂದಲ್ಲಾ ಸಾ. ತಪ್ಪು ದಿನಾ ಮಾಡ್ತನೇ ಹೋಯ್ತಾ ಅವುನೆ.”

“ಒಂದ್ಯರಡೇಳು ನೋಡಣ.”

“ನಿಖಿಲ್ ಎಲ್ಲಿದ್ದಿಯಪ್ಪಾ ಅಂದಿದ್ದು ಮೊದಲ್ನೆ ತಪ್ಪು, ಅವತ್ತಿಂದ ಮಗನ್ನ ಮಂಡ್ಯದಲ್ಲಿ ನಾಟಿಹಾಕಿ ಬ್ಯಳಸಕ್ಕೆ ಮಾಡಿದ ಕ್ಯಲಸಗಳ್ಯಲ್ಲ. ಪ್ರಾಮಾಣಿಕವಾದವಲ್ಲ ಅಂತ, ಜನಕ್ಕೆ ಈಗ ಗೊತ್ತಾಯ್ತಾ ಅದೆ ಸಾ. ಇನ್ನ ಆ ದರ್ಶನನ್ನ ಯಾಕೆ ಬೈಬೇಕು ಸಾ. ಇವುನ ಮಗನೂ ಹೀರೋ ಅಲ್ಲವೆ.”

“ಮಗನ್ನ ಗೆಲ್ಲಸಬೇಕಲವೆ.”

“ಗೆಲ್ಲಿಸಬೇಕು ಅಂತ ಅನ್ನೋ ಮಾತುಗಳೇ, ಅವುನ್ನ ಸೋಲುಸ್ತಾ ಅವೆ ಸಾ. ನಾನಂತು ಹುಟ್ಟಿದ್ ತಾವಿಂದ ಮಂಡ್ಯ ಜಿಲ್ಲೆ ಹಿಂಗೆ ಎದ್ದು ನಿಂತಿದ್ದ ನೋಡ್ನಿಲ್ಲ ಸಾ.”

“ಬರಿ ಅಂಬಿ ಅಭಿಮಾನಿಗಳಬ್ಬರವಂತೆ.”

“ಅವುರಬ್ಬರ ಸರಿ, ಸುಮ್ಮನಿರೋರ ಅಬ್ಬರ ಕೇಳಿಸಿಗಂಡಿದ್ದೀರಾ. ಅದು ಸಾಧಾರಣವಾದದ್ದಲ್ಲ ಸಾರ್. ಇಂದ್ರಾಗಾಂಧಿ, ರಾಜೀವ್‍ಗಾಂಧಿ ಜ್ವತೆಲಿದ್ದಿನಿ ಅಂತ ಮಂಡ್ಯನೆ ಮರತಿದ್ದ ಯಸ್ಸೆಂ ಕೃಷ್ಣನ್ನ ಶಂಕರೇಗೌಡ್ರೆದ್ರಿಗೆ ತಗದು ಯಸ್ತರಲ್ಲ ಅಂಥದೊಂದು ಅಬ್ಬರ ವಳಗೇ ಗುರುಗುಡತಾ ಅದೆ.”

“ಅಮರಾವತಿ ಚಂದ್ರಶೇಖರ ಸುಮಲತಾರಿಗೆ ಕೈಕೊಟ್ಟನಂತೆ.”

“ವ್ಯವಾರಸ್ತರಂಗೇ ಅಲವ ಸಾ, ಅಂಬಿ ಇರಗಂಟ ಅವುನ್ನ ತಂಬಿ ಅನ್ನಕಂಡು ಬದುಕಿದ, ಅವುನ ಮಂತ್ರಿಗಿರಿಗೂ ಕ್ಯಟ್ಟ ಹೆಸರು ತಂದ, ಈಗಂಬಿ ಇಲ್ಲ, ಅದ್ಕೆ ಕುಮಾರಣ್ಣ ನತÀ್ರಕ್ಕೋಗಿ ಕುಯ್ಯಿಗುಡ್ತಾ ಅವುನೆ. ಈ ಶತಮಾನದ ದ್ರೋಹ ಅಂದ್ರೆ ಅವiರಾವತಿ ಚಂದ್ರಶೇಖರ ಅಂಬರೀಶ್ಗೆ ಕೈ ಕೊಟ್ಟಿದ್ದು, ಯಸ್ಸೆಂ ಕೃಷ್ಣ ಕಾಂಗ್ರೆಸ್‍ಗೆ ಕೈಕೊಟ್ಟಿದ್ದು ಸಾ.”

“ಕೃಷ್ಣ ಕಾಂಗ್ರೆಸ್ ಬುಡಕ್ಕೆ ಸರಿಯಾದ ಕಾರಣ ಕೊಟ್ಟವುರೆ.”

“ಏನಾರ ಕೊಡ್ಳಿ, ಇವತ್ತು ಅವುನ ತಲೆಮ್ಯಾಲೆ ಹಾಕ್ಯಂಡವುನಲ್ಲ ವಿಗ್ಗುಮ ಅವು ಕಾಂಗ್ರೆಸ್ಸಿಂದು ಸಾ. ಅವುನ ಮನೆ ಮಠ ಆಸ್ತಿ ಪಾಸ್ತಿ ಬಟ್ಟಿ ಬರಿ ಯಲ್ಲಾ ಕಾಂಗ್ರೆಸ್ಸಿಂದು, ಸಾಯಕಡೆ ಸತಿ ಅದೂ ಬಿಜೆಪಿ ಗೋದ ನೋಡಿ ಅದ್ಕೆ ಅವುನ ದ್ರೋಹ ಈ ಶತಮಾನದ ದ್ರೋಹ ಸಾ.”

“ಅವುರೊಬ್ಬರೆ ಏನೋಗಿಲ್ಲ, ಅಂಥಾ ಡಿ.ಬಿ.ಚಂದ್ರೇಗೌಡ ಹೋದ, ಶ್ರೀಕಂಠಯ್ಯ ಹೋದ ಗೊತ್ತಾ.”

“ಅವುರು ದ್ಯಾವೇಗೌಡನ ರಾಜಕಾರಣದಿಂದ ಬೇಸತ್ತು ಹೋದ್ರು ಸಾ. ಇವುಂದೇಳಿ ಕಾಂಗ್ರೆಸ್ಸು ಇವುನ್ನ ಪ್ರಧಾನಿ ಮಾಡಲಿಲ್ಲ ಅಷ್ಟೇ. ಇನ್ಯಲ್ಲ ಸ್ಥಾನಕೊಟ್ಟಿತ್ತು ಅಲ್ವೆ, ಹೋಗ್ಲಿ ಬುಡಿ ಸತ್ತೋರ ಬಗ್ಗೆ ಯಾಕೆ ಮಾತಾಡದು.”

“ವಾಟಿಸ್ಸೆ ನೀನು ಕಾಂಗ್ರೆಸ್ಸಾ.”

“ಇಲ್ಲ ಸಾರ್, ಈಗ ಇಂಡಿಪೆಂಡೆಂಟು.”

“ಹ್ಯಂಗೆ ನ್ಯಡಿದದೆ ಪ್ರಚಾರ.”

“ನೋಡಿ, ಇವತ್ತು ಕುಮಾರಸ್ವಾಮಿ ಊರಿಗ್ಯಲ್ಲ ಬಸ್ಸು ಕಳಿಸಿ ಜನ ತಂದು ಮಂಡ್ಯದಲ್ಲಿ ಸುರಕಂಡು ಸುಮಲತನಿಗಿಂತ ನಾವು ಸ್ಟ್ರಾಂಗು ಅಂತ ತೋರ್ಯವುನೇ. ತಲಿಗೆ ಐದು ನೂರ್‍ವರ್ಗೂ ಬಟವಾಡೆ ಆಗಿದೆ. ಯಲಕ್ಷನ್ ಟೀಮಿಗೆ ಓಟಿಗಿಷ್ಟು ಅಂತ ತೀರ್ಮಾನ ಮಾಡಿ ಕೋಡ್ತಾರಂತೆ, ಯಾಕಂದ್ರೆ ಮುಖ್ಯಮಂತ್ರಿ ಮಗ ಸೋಲಬಾರದಂತೆ. ಅವುರಿಗೆ ಕಾರ್ಯಕರ್ತರವುರೆ ಎಂಟು ಜನ ಯಮ್ಮೆಲ್ಲೆ ಪೈಕಿ ಮೂರು ಜನ ಮಂತ್ರಿಗಳವುರೆ, ಆದ್ರಿಂದ ಬಟಾವಾಡೆಗೆ ಯಾವ ತ್ವಂದ್ರೆನು ಇಲ್ಲ.”

“ಜನ ದುಡ್ಡೀಸಗಳಕ್ಕೆ ತಯಾರಾಗಿದಾರ.”

“ಮತ್ತೆ ಯಾರಪ್ಪನ ಮನೆ ದುಡ್ಡು ಸಾರ್, ಮಂಡ್ಯದ ಮಣ್ಣಿನ ಮಕ್ಕಳ ದುಡ್ಡು ಬುಡಕ್ಕಾಯ್ತದಾ.”

“ನೀವು.”

“ನಾನು ಈಸಗಂಡು ಓಟು ಮಾತ್ರ ಸುಮಲತಾರಿಗಾಕ್ತಿನಿ.”

“ಥೂತ್ತೇರಿ.”

–    ಯಾಹೂ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಜಾರಿ ಸರ್ಕಾರದ ಹೊಸ ಸೂತ್ರ

ಕರ್ನಾಟಕದಲ್ಲಿ ಒಳಮೀಸಲಾತಿಯ ’ಸದ್ದು-ಗುದ್ದು’ ಅವಿಭಜಿತ ಆಂಧ್ರಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಇದಕ್ಕೆ ಕಾರಣ ಪರಿಶಿಷ್ಟ ಜಾತಿಗಳೊಳಗಿನ ಮೇಲಾಟವೂ ಹೌದು, ಸರ್ಕಾರದ ಬೇಜವಾಬ್ದಾರಿ ನಡೆಗಳೂ ಹೌದು. ಆದರೆ ದಿನಾಂಕ: 24.04.2026ರಂದು ನಡೆದ ಸಚಿವ ಸಂಪುಟ ಸಭೆಯು ಒಳಮೀಸಲಾತಿ...

ಕೊರೋನಾ ಲಸಿಕೆ ಒಳಹೊರಗುಗಳ ಪರಾಮರ್ಶೆಯ ನೋಟ

ಮನುಷ್ಯನ ನೆನಪಿನ ಶಕ್ತಿ ಕಡಿಮೆ ಎಂದು ರಾಜಕಾರಣಿಗಳು, ಅಧಿಕಾರಿಗಳು ಸದಾ ಗುನುಗುತ್ತಿರುತ್ತಾರೆ. ಅದು ಜೀವ ಮತ್ತು ಜೀವನ ಕಳೆದುಕೊಂಡ ವಿಚಾರವನ್ನು ಕೂಡ ಬಹಳ ಬೇಗ ಮರೆವಿನ ತೊಟ್ಟಿಗೆ ತಳ್ಳಿ ಬಿಡುತ್ತದೆ.ಆದರೂ, ಮನುಷ್ಯ ಭೂಮಿಯ...

‘ಮಾವಿನ ಮರ’ ಕಂಡ ಕನಸು

ಪುಸ್ತಕ ಪರಿಚಯ ಸವಾಲಿನ ವಿಷಯ. ಅದರಲ್ಲೂ ಕವಿತೆಗಳ ಕುರಿತು ಮಾತನಾಡುವುದು ಇನ್ನೂ ಸವಾಲು. ಪ್ರತಿಯೊಂದು ಕವಿತೆಯೂ ತನ್ನ ಓದುಗರೊಂದಿಗೆ ಸಂವಾದಿಸುವ ಬಗೆ ವಿಭಿನ್ನವಾಗಿರುತ್ತದೆ. ಅದನ್ನು ಏಕರೂಪೀ ಪರಿಭಾಷೆಯಲ್ಲಿ ಮಂಡಿಸುವುದು ಸರಿಯಲ್ಲ. ’ಮಿಥಿಲೆಯ ಮಾವಿನ...

NEET ರದ್ದು : ಖಿನ್ನತೆ, ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು; ನಾಲ್ಕು ದಿನದಲ್ಲಿ ನಾಲ್ವರು ಸಾವಿಗೆ ಶರಣು

ಈ ವರ್ಷದ (2026) ನೀಟ್-ಯುಜಿ (NEET-UG) ಪರೀಕ್ಷೆ ರದ್ದಾದ ಬಳಿಕ ದೇಶದಾದ್ಯಂತ ಕನಿಷ್ಠ ನಾಲ್ವರು ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡ ಹಾಗೂ ಹತಾಶೆಯಿಂದ ಸಾವಿಗೆ ಶರಣಾಗಿದ್ದಾರೆ. ರಾಜಸ್ಥಾನದ ಝುಂಜುನು ಜಿಲ್ಲೆಯ 23 ವರ್ಷದ ಪ್ರದೀಪ್...

ಪ್ಯಾಲೆಸ್ಟೀನಿಯನ್ ಕೈದಿಗಳ ಮೇಲೆ ಲೈಂಗಿಕ ದೌರ್ಜನ್ಯ ವರದಿ: ನ್ಯೂಯಾರ್ಕ್ ಟೈಮ್ ವಿರುದ್ಧ ಮೊಕದ್ದಮೆ ದಾಖಲಿಸಿದ ಇಸ್ರೇಲ್ ಕ್ರಮಕ್ಕೆ ಆರ್‌ಎಸ್‌ಎಫ್ ಖಂಡನೆ

ಪ್ಯಾಲೆಸ್ಟೀನಿಯನ್ ಕೈದಿಗಳನ್ನು ಗುರಿಯಾಗಿಸಿಕೊಂಡು ವ್ಯಾಪಕವಾದ ಲೈಂಗಿಕ ದೌರ್ಜನ್ಯವನ್ನು ಬಹಿರಂಗಪಡಿಸಿದ ನಿಕೋಲಸ್ ಕ್ರಿಸ್ಟೋಫ್ ಅವರ  ಅಭಿಪ್ರಾಯ ಅಂಕಣವನ್ನು ಪ್ರಕಟಿಸಿದ ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವ ಇಸ್ರೇಲಿ ಸರ್ಕಾರದ ನಿರ್ಧಾರವನ್ನು ರಿಪೋರ್ಟರ್ಸ್ ವಿದೌಟ್...

“ಮುಸ್ಲಿಮರಿಗೆ ಯಾವುದೇ ಕೆಲಸ ಮಾಡಲ್ಲ” ಎಂದು ವಿವಾದಾತ್ಮಕ ಶಪಥ ಮಾಡಿದ ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ರಿತೇಶ್ ತಿವಾರಿ

ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ನೇತೃತ್ವದಲ್ಲಿ ಬಿಜೆಪಿ ತನ್ನ ಮೊದಲ ಸರ್ಕಾರವನ್ನು ರಚಿಸಿದ ಕೆಲವೇ ದಿನಗಳಲ್ಲಿ, ಪಕ್ಷದ ಶಾಸಕ ರಿತೇಶ್ ತಿವಾರಿ ಅವರು ಮಾಡಿರುವ ಭಾಷಣವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಪಶ್ಚಿಮ...

’ಎಸ್‌ಐಆರ್’ ವಿರುದ್ಧ ಜನಪರ ಸಂಘಟನೆಗಳಿಂದ ಜನಾಂದೋಲನ ಬಂಗಾಳದ ಜನರ ಜೊತೆಗೆ ನಿಂತ ಕರ್ನಾಟಕ

ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮೂಲಕ ವಿರೋಧ ಪಕ್ಷಗಳ ಮತದಾರರು ಮತ್ತು ಅಲ್ಪಸಂಖ್ಯಾತ ಸಮುದಾಯದ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕುತಂತ್ರ ಈಗಾಗಲೇ ಬಿಹಾರದಲ್ಲಿ ಜಗಜ್ಜಾಹೀರಾಗಿದೆ....

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇದೆಂತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...