Homeಮುಖಪುಟದೇಶ ಒಗ್ಗೂಡಿಸುವವರು ದೇಶಪ್ರೇಮಿಗಳು, ದೇಶ ಒಡೆಯುವವರು ದೇಶದ್ರೋಹಿಗಳು: ಯೋಗೇಂದ್ರ ಯಾದವ್

ದೇಶ ಒಗ್ಗೂಡಿಸುವವರು ದೇಶಪ್ರೇಮಿಗಳು, ದೇಶ ಒಡೆಯುವವರು ದೇಶದ್ರೋಹಿಗಳು: ಯೋಗೇಂದ್ರ ಯಾದವ್

ನಮ್ಮ ಕೈಯಲ್ಲಿ ಈ ದೇಶದ ಮಣ್ಣಿದೆ. ಸೂಫಿ ಪರಂಪರೆಯಿದೆ. ಬುದ್ದ, ಬಸವಣ್ಣ, ಭಗತ್ ಸಿಂಗ್, ಮೌಲಾನ ಆಜಾದ್ ಇದ್ದಾರೆ. ಅಂಬೇಡ್ಕರ್‌ರವರ ಸಂವಿಧಾನವಿದೆ.

- Advertisement -
- Advertisement -

ಯಾರು ಈ ದೇಶವನ್ನು ಕಟ್ಟುತ್ತಾರೋ, ಒಗ್ಗೂಡಿಸುತ್ತಾರೊ ಅವರು ದೇಶಪ್ರೇಮಿಗಳು. ಹಿಂದೂ – ಮುಸ್ಲಿಂ, ಹಿಂದೂ – ಸಿಖ್ಖರ ನಡುವೆ ಜಗಳ ತರುವವರು ದೇಶದ್ರೋಹಿಗಳು ಎಂದು ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಯೋಗೇಂದ್ರ ಯಾದವ್‌ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯಲ್ಲಿ ನಡೆದ ಸಹಬಾಳ್ವೆ ಸಮಾವೇಶದಲ್ಲಿ ಮಾತನಾಡಿದ ಅವರು, “ಕೆಲವರು ಇಲ್ಲಿಯೇ ಮಂದಿರ ಕಟ್ಟುತ್ತೇವೆ ಎಂದು ಹೇಳುತ್ತಾರೆ. ನಾವು ಇಲ್ಲಿಯೇ ಸಾಮರಸ್ಯ ಮೂಡಿಸುತ್ತೇವೆ, ಸ್ನೇಹ ಬೆಳೆಸುತ್ತೇವೆ ಎನ್ನುತ್ತೇವೆ. ಅವರು ಒಡೆಯುತ್ತಾರೆ, ನಾವು ಕೂಡಿಸುತ್ತೇವೆ. ಅದು ದೆಹಲಿ‌ ತನಕ‌ ಕೇಳಿಸಲಿ. ಇದು ನನ್ನೊಬ್ಬನ ಹೃದಯದ ಮಾತಲ್ಲ, ನಿಮ್ಮೆಲ್ಲರ ಹೃದಯದ ಮಾತಾಗಿದೆ” ಎಂದರು.

ಈ ಸಮಾವೇಶಕ್ಕೆ ಉಡುಪಿಯನ್ನು ಆಯ್ದುಕೊಂಡಿದ್ದಕ್ಕೆ ಧನ್ಯವಾದಗಳು. ಏಕೆಂದರೆ ಇತ್ತೀಚಿನ ದ್ವೇಷದ ಅಲೆಗೆ ಉಡುಪಿಯನ್ನು ಆಯ್ದುಕೊಳ್ಳಲಾಗಿತ್ತು. ಉಡುಪಿಯ ಹೆಸರು ದೇಶದ ಎಲ್ಲಾ ಟಿವಿ ಚಾನೆಲ್‌ಗಳಲ್ಲಿ ಹರಡಿತು. ಕರಾವಳಿ ಕರ್ನಾಟಕ ಒಂದು ಸುಂದರ ತಾಣ. ಇಲ್ಲಿ ಎಲ್ಲವೂ ಬೆಳೆಯುತ್ತದೆ, ಇದು ಫಲವತ್ತಾದ ಸ್ಥಳವಾಗಿದೆ. ಹೀಗಾಗಿ ಇಲ್ಲೂ ಒಂದಿಷ್ಟು ದ್ವೇಷ ಬಿತ್ತೋಣ ಎಂದುಕೊಂಡಿದ್ದಾರೆ. ಆದರೆ ಅದರ ಫಸಲು ಬೆಳೆಯಲು ನಾವು ಬಿಡುವುದಿಲ್ಲ ಎಂದರು.

ಅವರು ಎರಡು ದರ್ಜೆಯ ಜನರನ್ನಾಗಿ ವಿಂಗಡಿಸಲು ಯತ್ನಿಸುತ್ತಾರೆ. ಪ್ರಥಮೆ, ಎರಡನೇ ದರ್ಜೆಯ ನಾಗರಿಕರನ್ನಾಗಿ ವಿಭಜಿಸಲು ಅವರು ಯತ್ನಿಸುತ್ತಾರೆ. ಮನೆಯ ಮಾಲಿಕ ಮತ್ತು ಮನೆಯ ಬಾಡಿಗೆದಾರ ಎಂಬ ವರ್ಗಗಳನ್ನು ಸೃಷ್ಟಿಸುತ್ತಾರೆ. ಹಿಂದಿ ರಾಷ್ಟ್ರ ಭಾಷೆ ಎಂದು ಕೆಲವರು ಹೇಳುತ್ತಾರೆ. ಹಿಂದಿ ಇನ್ನೂರು ವರ್ಷ ಹಳೆಯದು. ಆದರೆ ಕನ್ನಡ ಎರಡೂವರೆ ಸಾವಿರ ವರ್ಷ ಹಳೆಯದು. ಹೀಗಿರುವಾಗ ಹಿಂದಿ ಮಾತನಾಡುವ ಜನರು ಮನೆಯ ಮಾಲೀಕರು ಮತ್ತು ಕನ್ನಡ ಮಾತನಾಡುವ ಜನರು ಹೇಗೆ ಬಾಡಿಗೆದಾರರಾಗಲು ಸಾಧ್ಯ? ಅವರು ಒಂದು ಧರ್ಮದ ಜನರು ಮಾಲೀಕರಾಗಲು ಮತ್ತು ಉಳಿದ ಧರ್ಮದ ಜನರು ಬಾಡಿಗೆದಾರರಾಗುವಂತೆ ಮಾಡುತ್ತಿದ್ದಾರೆ. ನಾವು ಉಡುಪಿಯಲ್ಲಿ ಘೋಷಿಸುತ್ತೇವೆ. ಯಾರ್ಯಾರ ಪೂರ್ವಿಕರ ರಕ್ತ ಇಲ್ಲಿದೆಯೋ ಅವರೆಲ್ಲರೂ ಈ ದೇಶದ ಮಾಲೀಕರು. ನಾವು ಯಾರ ಗುಲಾಮರಲ್ಲ ಎಂದು ಯಾದವ್ ತಿಳಿಸಿದರು.

ಸೆಕ್ಯುಲರಿಸಂ ಎಂಬ ಪದ ಇಂದಿರಾಗಾಂಧಿ ಸಂವಿಧಾನದಲ್ಲಿ ಸೇರಿಸುವ ಮೊದಲು ಇರಲಿಲ್ಲ ಎಂದು ಅವರು ಹೇಳುತ್ತಾರೆ. ಸಮಾನತೆಯ ಹಕ್ಕು, ಸಾಂಸ್ಕೃತಿಕ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್‍ಯದ ಹಕ್ಕು 1950 ರ ಸಂವಿಧಾನದಲ್ಲಿಯೇ ಇತ್ತು. ಅದೇ ಸೆಕ್ಯುಲರಿಸಂ. ಸಂವಿಧಾನದ ಕರಡು ರಚನೆ ಸಂದರ್ಭದಲ್ಲಿಯೇ ಈ ಆಶಯಗಳನ್ನು ಸೇರಿಸಲಾಗಿತ್ತು, ಅವು ಸ್ವಾತಂತ್ರ್‍ಯ ಹೋರಾಟದ ಫಲಗಳು ಎಂದು ಯಾದವ್ ಹೇಳಿದರು.

ಗೌತಮ ಬುದ್ಧ ಮೈತ್ರಿ ಬಗ್ಗೆ ಹೇಳುತ್ತಾರೆ. ಅಶೋಕ ಮತ್ತು ಅಕ್ಬರ್ ಕೂಡ ಮೈತ್ರಿ ಬಗ್ಗೆ ಮಾತನಾಡುತ್ತಾರೆ. ಇದು ಭಾರತದ ಪರಂಪರೆ. ಸೆಕ್ಯುಲರಿಸಂ ಬ್ರಿಟಿಷರ ಕೊಡುಗೆ ಅಲ್ಲ. ಐದು ಸಾವಿರ ವರ್ಷಗಳಿಂದ ಈ ದೇಶ ಹೀಗೆಯೇ ನಡೆಯುತ್ತಿದೆ. ಸಿಂಹಾಸನದ ಮೇಲೆ ಕುಳಿತಿರುವವರು ತಾವೇ ದೇವರು ಎಂದು ನಂಬಿದ್ದಾರೆ. ಅವರ ಮುಂಚೆಯೂ ಈ ದೇಶ ಇತ್ತು, ಅವರ ನಂತರವೂ ಈ ದೇಶ ಇರುತ್ತದೆ. ಎಲ್ಲರನ್ನೂ ಗೌರವಿಸುವ, ಒಟ್ಟಿಗೆ ಕರೆದೊಯ್ಯುವುದು ಈ ದೇಶದ ಧರ್ಮ ಎಂಬುದನ್ನು ಅವರು ಮರೆಯಬಾರದು ಎಂದರು.

ಇಂದು ದೇಶದಲ್ಲಿ ಬುಲ್ಡೋಜರ್‌ ಚಲಾಯಿಸಲಾಗುತ್ತಿದೆ. ಕೇವಲ ಕಟ್ಟಡಗಳ ಮೇಲೆ ಅಲ್ಲ ಹಿಂದೂಸ್ಥಾನದ ಮೇಲೆ, ಸಂವಿಧಾನದ ಮೇಲೆ ಬುಲ್ಡೋಜರ್‌ ಚಲಾಯಿಸಲಾಗುತ್ತಿದೆ. ಮೀಡಿಯಾ ಪ್ರಾಮಾಣಿಕವಾಗಿದ್ದರೆ ಈ ಉಡುಪಿ ಸಮಾವೇಶ ನಾಳೆ ಮುಖಪುಟದ ಹೆಡ್ಲೈನ್ ಆಗುತ್ತದೆ. ನಾನು ಪತ್ರಕರ್ತರನ್ನು ದೂರುವುದಿಲ್ಲ. ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ. ಆದರೆ ಯಾರ ಬಳಿ ಹಣ ಮತ್ತು ಅಧಿಕಾರವಿದೆಯೇ ಅವರು ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದರು.

ನಮ್ಮ ಕೈಯಲ್ಲಿ ಈ ದೇಶದ ಮಣ್ಣಿದೆ. ಸೂಫಿ ಪರಂಪರೆಯಿದೆ. ಬುದ್ದ, ಬಸವಣ್ಣ, ಭಗತ್ ಸಿಂಗ್, ಮೌಲಾನ ಆಜಾದ್ ಇದ್ದಾರೆ. ಅಂಬೇಡ್ಕರ್‌ರವರ ಸಂವಿಧಾನವಿದೆ. ಪ್ರಶ್ನೆ ಇರುವುದು ನಾವು ಗೆದಿಲ್ಲ ಎನ್ನುವುದಲ್ಲ, ಹೇಗೆ ಮತ್ತು ಯಾವಾಗ ಗೆಲ್ಲುತ್ತೇವೆ ಎನ್ನುವುದಾಗಿದೆ. ದೊಡ್ಡ ಪರಂಪರೆ ನಮಗಿರುವುದರಿಂದ ಹೋರಾಡುತ್ತೇವೆ ಮತ್ತು ನಾವು ಗೆಲ್ಲುತ್ತೇವೆ ಎಂದರು.

ಇದನ್ನೂ ಓದಿ; ಏಳು ಬಣ್ಣಗಳ ಬಾವುಟ ಬೀಸಿ ಬಹುತ್ವ ಸಂದೇಶದೊಂದಿಗೆ ಉಡುಪಿಯ ಸಾಮರಸ್ಯ ನಡಿಗೆ ಆರಂಭ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕಮ್ಯೂನಿಸ್ಟ್ ಉಗ್ರರು ಯಾವಾಗಲೂ ಮಾಡಿರುವ ದಾಖಲೆ ದೇಶ ಒಡೆಯುವ ಕೆಲಸವೇ ಅಲ್ಲವೇ ಪ್ರಪಂಚದ ಇತಿಹಾಸದಲ್ಲಿ

  2. ದ್ವೇಷದ ಹೋರಾಟ ಹೇಗೆ ಇಡೀ ಪ್ರಪಂಚಕ್ಕೆ ಸುದ್ದಿ ಮಾದ್ಯಮಗಳಲ್ಲಿ ಬಿತ್ತರವಾಯಿತೋ ಹಾಗೆಯೆ ಸಾಮರಸ್ಯದ ಹೋರಾಟವೂ ಪ್ರಪಂಚದೆಲ್ಲೆಡೆ ಪ್ರಸಾರವಾಗಲಿ ಎಂದು ಆಶಿಸುತ್ತೇನೆ. ಪ್ರಜಾಪ್ರಭಹತ್ವ=ಜಾತ್ಯಾತೀತತೆ, ಇದಕ್ಕೆ ಮತ್ತೊಂದು ವಿವರಣೆಯ ಅವಶ್ಯಕತೆ ಇಲ್ಲ. ಪ್ರಜೆ ಎಂದರೆ ಜಾತಿ, ಧರ್ಮ, ಭಾಷೆ, ಪ್ರದೇಶ, ಇತರೆ ಎಲ್ಲವನ್ನೂ ಮೀರಿದ ಭಾರತೀಯ. ಆನಂತರ ಅವೆಲ್ಲವನ್ನೂ ಪರಿಗಣಿಸ ಬಹುದು. ಈ ವಿಚಾರದಲ್ಲಿ ವಿದ್ಯಾವಂತರನ್ನೂ ತಪ್ಪು ದಾರಿಗೆಳೆಯಲಾಗುತ್ತಿದೆ. ಇದರಿಂದ ದೇಶ ಸರ್ವನಾಶದ ಕಡೆಗೆ ಹೆಜ್ಜೆ ಇಡುತ್ತಿದೆ. ಈ ಸಾಮರಸ್ಯದ ಸಮಾವೇಷ ಸಹಬಾಳ್ವಗೆ ಮತ್ತು ದೇಶದ ಏಳಿಗೆಯ ಆರಂಬ. ಇದನ್ನು ಆಯೋಜಿಸಿದವರೆಲ್ಲರಿಗೂ ವಂದನೆಗಳು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...