Homeಮುಖಪುಟದೇಶ ಒಗ್ಗೂಡಿಸುವವರು ದೇಶಪ್ರೇಮಿಗಳು, ದೇಶ ಒಡೆಯುವವರು ದೇಶದ್ರೋಹಿಗಳು: ಯೋಗೇಂದ್ರ ಯಾದವ್

ದೇಶ ಒಗ್ಗೂಡಿಸುವವರು ದೇಶಪ್ರೇಮಿಗಳು, ದೇಶ ಒಡೆಯುವವರು ದೇಶದ್ರೋಹಿಗಳು: ಯೋಗೇಂದ್ರ ಯಾದವ್

ನಮ್ಮ ಕೈಯಲ್ಲಿ ಈ ದೇಶದ ಮಣ್ಣಿದೆ. ಸೂಫಿ ಪರಂಪರೆಯಿದೆ. ಬುದ್ದ, ಬಸವಣ್ಣ, ಭಗತ್ ಸಿಂಗ್, ಮೌಲಾನ ಆಜಾದ್ ಇದ್ದಾರೆ. ಅಂಬೇಡ್ಕರ್‌ರವರ ಸಂವಿಧಾನವಿದೆ.

- Advertisement -
- Advertisement -

ಯಾರು ಈ ದೇಶವನ್ನು ಕಟ್ಟುತ್ತಾರೋ, ಒಗ್ಗೂಡಿಸುತ್ತಾರೊ ಅವರು ದೇಶಪ್ರೇಮಿಗಳು. ಹಿಂದೂ – ಮುಸ್ಲಿಂ, ಹಿಂದೂ – ಸಿಖ್ಖರ ನಡುವೆ ಜಗಳ ತರುವವರು ದೇಶದ್ರೋಹಿಗಳು ಎಂದು ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ ಯೋಗೇಂದ್ರ ಯಾದವ್‌ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯಲ್ಲಿ ನಡೆದ ಸಹಬಾಳ್ವೆ ಸಮಾವೇಶದಲ್ಲಿ ಮಾತನಾಡಿದ ಅವರು, “ಕೆಲವರು ಇಲ್ಲಿಯೇ ಮಂದಿರ ಕಟ್ಟುತ್ತೇವೆ ಎಂದು ಹೇಳುತ್ತಾರೆ. ನಾವು ಇಲ್ಲಿಯೇ ಸಾಮರಸ್ಯ ಮೂಡಿಸುತ್ತೇವೆ, ಸ್ನೇಹ ಬೆಳೆಸುತ್ತೇವೆ ಎನ್ನುತ್ತೇವೆ. ಅವರು ಒಡೆಯುತ್ತಾರೆ, ನಾವು ಕೂಡಿಸುತ್ತೇವೆ. ಅದು ದೆಹಲಿ‌ ತನಕ‌ ಕೇಳಿಸಲಿ. ಇದು ನನ್ನೊಬ್ಬನ ಹೃದಯದ ಮಾತಲ್ಲ, ನಿಮ್ಮೆಲ್ಲರ ಹೃದಯದ ಮಾತಾಗಿದೆ” ಎಂದರು.

ಈ ಸಮಾವೇಶಕ್ಕೆ ಉಡುಪಿಯನ್ನು ಆಯ್ದುಕೊಂಡಿದ್ದಕ್ಕೆ ಧನ್ಯವಾದಗಳು. ಏಕೆಂದರೆ ಇತ್ತೀಚಿನ ದ್ವೇಷದ ಅಲೆಗೆ ಉಡುಪಿಯನ್ನು ಆಯ್ದುಕೊಳ್ಳಲಾಗಿತ್ತು. ಉಡುಪಿಯ ಹೆಸರು ದೇಶದ ಎಲ್ಲಾ ಟಿವಿ ಚಾನೆಲ್‌ಗಳಲ್ಲಿ ಹರಡಿತು. ಕರಾವಳಿ ಕರ್ನಾಟಕ ಒಂದು ಸುಂದರ ತಾಣ. ಇಲ್ಲಿ ಎಲ್ಲವೂ ಬೆಳೆಯುತ್ತದೆ, ಇದು ಫಲವತ್ತಾದ ಸ್ಥಳವಾಗಿದೆ. ಹೀಗಾಗಿ ಇಲ್ಲೂ ಒಂದಿಷ್ಟು ದ್ವೇಷ ಬಿತ್ತೋಣ ಎಂದುಕೊಂಡಿದ್ದಾರೆ. ಆದರೆ ಅದರ ಫಸಲು ಬೆಳೆಯಲು ನಾವು ಬಿಡುವುದಿಲ್ಲ ಎಂದರು.

ಅವರು ಎರಡು ದರ್ಜೆಯ ಜನರನ್ನಾಗಿ ವಿಂಗಡಿಸಲು ಯತ್ನಿಸುತ್ತಾರೆ. ಪ್ರಥಮೆ, ಎರಡನೇ ದರ್ಜೆಯ ನಾಗರಿಕರನ್ನಾಗಿ ವಿಭಜಿಸಲು ಅವರು ಯತ್ನಿಸುತ್ತಾರೆ. ಮನೆಯ ಮಾಲಿಕ ಮತ್ತು ಮನೆಯ ಬಾಡಿಗೆದಾರ ಎಂಬ ವರ್ಗಗಳನ್ನು ಸೃಷ್ಟಿಸುತ್ತಾರೆ. ಹಿಂದಿ ರಾಷ್ಟ್ರ ಭಾಷೆ ಎಂದು ಕೆಲವರು ಹೇಳುತ್ತಾರೆ. ಹಿಂದಿ ಇನ್ನೂರು ವರ್ಷ ಹಳೆಯದು. ಆದರೆ ಕನ್ನಡ ಎರಡೂವರೆ ಸಾವಿರ ವರ್ಷ ಹಳೆಯದು. ಹೀಗಿರುವಾಗ ಹಿಂದಿ ಮಾತನಾಡುವ ಜನರು ಮನೆಯ ಮಾಲೀಕರು ಮತ್ತು ಕನ್ನಡ ಮಾತನಾಡುವ ಜನರು ಹೇಗೆ ಬಾಡಿಗೆದಾರರಾಗಲು ಸಾಧ್ಯ? ಅವರು ಒಂದು ಧರ್ಮದ ಜನರು ಮಾಲೀಕರಾಗಲು ಮತ್ತು ಉಳಿದ ಧರ್ಮದ ಜನರು ಬಾಡಿಗೆದಾರರಾಗುವಂತೆ ಮಾಡುತ್ತಿದ್ದಾರೆ. ನಾವು ಉಡುಪಿಯಲ್ಲಿ ಘೋಷಿಸುತ್ತೇವೆ. ಯಾರ್ಯಾರ ಪೂರ್ವಿಕರ ರಕ್ತ ಇಲ್ಲಿದೆಯೋ ಅವರೆಲ್ಲರೂ ಈ ದೇಶದ ಮಾಲೀಕರು. ನಾವು ಯಾರ ಗುಲಾಮರಲ್ಲ ಎಂದು ಯಾದವ್ ತಿಳಿಸಿದರು.

ಸೆಕ್ಯುಲರಿಸಂ ಎಂಬ ಪದ ಇಂದಿರಾಗಾಂಧಿ ಸಂವಿಧಾನದಲ್ಲಿ ಸೇರಿಸುವ ಮೊದಲು ಇರಲಿಲ್ಲ ಎಂದು ಅವರು ಹೇಳುತ್ತಾರೆ. ಸಮಾನತೆಯ ಹಕ್ಕು, ಸಾಂಸ್ಕೃತಿಕ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್‍ಯದ ಹಕ್ಕು 1950 ರ ಸಂವಿಧಾನದಲ್ಲಿಯೇ ಇತ್ತು. ಅದೇ ಸೆಕ್ಯುಲರಿಸಂ. ಸಂವಿಧಾನದ ಕರಡು ರಚನೆ ಸಂದರ್ಭದಲ್ಲಿಯೇ ಈ ಆಶಯಗಳನ್ನು ಸೇರಿಸಲಾಗಿತ್ತು, ಅವು ಸ್ವಾತಂತ್ರ್‍ಯ ಹೋರಾಟದ ಫಲಗಳು ಎಂದು ಯಾದವ್ ಹೇಳಿದರು.

ಗೌತಮ ಬುದ್ಧ ಮೈತ್ರಿ ಬಗ್ಗೆ ಹೇಳುತ್ತಾರೆ. ಅಶೋಕ ಮತ್ತು ಅಕ್ಬರ್ ಕೂಡ ಮೈತ್ರಿ ಬಗ್ಗೆ ಮಾತನಾಡುತ್ತಾರೆ. ಇದು ಭಾರತದ ಪರಂಪರೆ. ಸೆಕ್ಯುಲರಿಸಂ ಬ್ರಿಟಿಷರ ಕೊಡುಗೆ ಅಲ್ಲ. ಐದು ಸಾವಿರ ವರ್ಷಗಳಿಂದ ಈ ದೇಶ ಹೀಗೆಯೇ ನಡೆಯುತ್ತಿದೆ. ಸಿಂಹಾಸನದ ಮೇಲೆ ಕುಳಿತಿರುವವರು ತಾವೇ ದೇವರು ಎಂದು ನಂಬಿದ್ದಾರೆ. ಅವರ ಮುಂಚೆಯೂ ಈ ದೇಶ ಇತ್ತು, ಅವರ ನಂತರವೂ ಈ ದೇಶ ಇರುತ್ತದೆ. ಎಲ್ಲರನ್ನೂ ಗೌರವಿಸುವ, ಒಟ್ಟಿಗೆ ಕರೆದೊಯ್ಯುವುದು ಈ ದೇಶದ ಧರ್ಮ ಎಂಬುದನ್ನು ಅವರು ಮರೆಯಬಾರದು ಎಂದರು.

ಇಂದು ದೇಶದಲ್ಲಿ ಬುಲ್ಡೋಜರ್‌ ಚಲಾಯಿಸಲಾಗುತ್ತಿದೆ. ಕೇವಲ ಕಟ್ಟಡಗಳ ಮೇಲೆ ಅಲ್ಲ ಹಿಂದೂಸ್ಥಾನದ ಮೇಲೆ, ಸಂವಿಧಾನದ ಮೇಲೆ ಬುಲ್ಡೋಜರ್‌ ಚಲಾಯಿಸಲಾಗುತ್ತಿದೆ. ಮೀಡಿಯಾ ಪ್ರಾಮಾಣಿಕವಾಗಿದ್ದರೆ ಈ ಉಡುಪಿ ಸಮಾವೇಶ ನಾಳೆ ಮುಖಪುಟದ ಹೆಡ್ಲೈನ್ ಆಗುತ್ತದೆ. ನಾನು ಪತ್ರಕರ್ತರನ್ನು ದೂರುವುದಿಲ್ಲ. ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ. ಆದರೆ ಯಾರ ಬಳಿ ಹಣ ಮತ್ತು ಅಧಿಕಾರವಿದೆಯೇ ಅವರು ಮಾಧ್ಯಮಗಳನ್ನು ನಿಯಂತ್ರಿಸುತ್ತಿದ್ದಾರೆ ಎಂದರು.

ನಮ್ಮ ಕೈಯಲ್ಲಿ ಈ ದೇಶದ ಮಣ್ಣಿದೆ. ಸೂಫಿ ಪರಂಪರೆಯಿದೆ. ಬುದ್ದ, ಬಸವಣ್ಣ, ಭಗತ್ ಸಿಂಗ್, ಮೌಲಾನ ಆಜಾದ್ ಇದ್ದಾರೆ. ಅಂಬೇಡ್ಕರ್‌ರವರ ಸಂವಿಧಾನವಿದೆ. ಪ್ರಶ್ನೆ ಇರುವುದು ನಾವು ಗೆದಿಲ್ಲ ಎನ್ನುವುದಲ್ಲ, ಹೇಗೆ ಮತ್ತು ಯಾವಾಗ ಗೆಲ್ಲುತ್ತೇವೆ ಎನ್ನುವುದಾಗಿದೆ. ದೊಡ್ಡ ಪರಂಪರೆ ನಮಗಿರುವುದರಿಂದ ಹೋರಾಡುತ್ತೇವೆ ಮತ್ತು ನಾವು ಗೆಲ್ಲುತ್ತೇವೆ ಎಂದರು.

ಇದನ್ನೂ ಓದಿ; ಏಳು ಬಣ್ಣಗಳ ಬಾವುಟ ಬೀಸಿ ಬಹುತ್ವ ಸಂದೇಶದೊಂದಿಗೆ ಉಡುಪಿಯ ಸಾಮರಸ್ಯ ನಡಿಗೆ ಆರಂಭ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕಮ್ಯೂನಿಸ್ಟ್ ಉಗ್ರರು ಯಾವಾಗಲೂ ಮಾಡಿರುವ ದಾಖಲೆ ದೇಶ ಒಡೆಯುವ ಕೆಲಸವೇ ಅಲ್ಲವೇ ಪ್ರಪಂಚದ ಇತಿಹಾಸದಲ್ಲಿ

  2. ದ್ವೇಷದ ಹೋರಾಟ ಹೇಗೆ ಇಡೀ ಪ್ರಪಂಚಕ್ಕೆ ಸುದ್ದಿ ಮಾದ್ಯಮಗಳಲ್ಲಿ ಬಿತ್ತರವಾಯಿತೋ ಹಾಗೆಯೆ ಸಾಮರಸ್ಯದ ಹೋರಾಟವೂ ಪ್ರಪಂಚದೆಲ್ಲೆಡೆ ಪ್ರಸಾರವಾಗಲಿ ಎಂದು ಆಶಿಸುತ್ತೇನೆ. ಪ್ರಜಾಪ್ರಭಹತ್ವ=ಜಾತ್ಯಾತೀತತೆ, ಇದಕ್ಕೆ ಮತ್ತೊಂದು ವಿವರಣೆಯ ಅವಶ್ಯಕತೆ ಇಲ್ಲ. ಪ್ರಜೆ ಎಂದರೆ ಜಾತಿ, ಧರ್ಮ, ಭಾಷೆ, ಪ್ರದೇಶ, ಇತರೆ ಎಲ್ಲವನ್ನೂ ಮೀರಿದ ಭಾರತೀಯ. ಆನಂತರ ಅವೆಲ್ಲವನ್ನೂ ಪರಿಗಣಿಸ ಬಹುದು. ಈ ವಿಚಾರದಲ್ಲಿ ವಿದ್ಯಾವಂತರನ್ನೂ ತಪ್ಪು ದಾರಿಗೆಳೆಯಲಾಗುತ್ತಿದೆ. ಇದರಿಂದ ದೇಶ ಸರ್ವನಾಶದ ಕಡೆಗೆ ಹೆಜ್ಜೆ ಇಡುತ್ತಿದೆ. ಈ ಸಾಮರಸ್ಯದ ಸಮಾವೇಷ ಸಹಬಾಳ್ವಗೆ ಮತ್ತು ದೇಶದ ಏಳಿಗೆಯ ಆರಂಬ. ಇದನ್ನು ಆಯೋಜಿಸಿದವರೆಲ್ಲರಿಗೂ ವಂದನೆಗಳು.

LEAVE A REPLY

Please enter your comment!
Please enter your name here

- Advertisment -

ಸ್ವಕ್ಷೇತ್ರ ತಿರುವನಂತಪುರದಲ್ಲಿ ಬಿಜೆಪಿ ಭರ್ಜರಿ ಗೆಲುವು : ‘ಪ್ರಜಾಪ್ರಭುತ್ವದ ಸೌಂದರ್ಯ’ ಎಂದ ಕಾಂಗ್ರೆಸ್ ಸಂಸದ ಶಶಿ ತರೂರ್

ಕೇರಳದ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು (ಡಿ.13) ಪ್ರಕಟಗೊಂಡಿದ್ದು, ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 45 ವರ್ಷಗಳ ಸಿಪಿಐ(ಎಂ) ನೇತೃತ್ವದ ಎಲ್‌ಡಿಎಫ್‌...

ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ : ಯುಡಿಎಫ್‌ ಸ್ಪಷ್ಟ ಮೇಲುಗೈ

ಇಂದು (2025 ಡಿಸೆಂಬರ್ 13, ಶನಿವಾರ) ಪ್ರಕಟಗೊಂಡ ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶದಲ್ಲಿ ವಿರೋಧ ಪಕ್ಷಗಳ ಒಕ್ಕೂಟವಾದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಸ್ಪಷ್ಟ ಮೇಲುಗೈ ಸಾಧಿಸಿದೆ. ಈ ಮೂಲಕ ರಾಜ್ಯ...

ಕೋಲ್ಕತ್ತಾ ಮೆಸ್ಸಿ ಕಾರ್ಯಕ್ರಮದಲ್ಲಿ ಗಲಾಟೆ | ಕ್ಷಮೆ ಯಾಚಿಸಿದ ಸಿಎಂ ಮಮತಾ ಬ್ಯಾನರ್ಜಿ, ತನಿಖೆಗೆ ಸಮಿತಿ ರಚನೆ; ಆಯೋಜಕನ ಬಂಧನ

ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಭೇಟಿಯ ವೇಳೆ ಶನಿವಾರ (ಡಿಸೆಂಬರ್ 13) ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಉಂಟಾದ ಗಲಾಟೆಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕ್ಷಮೆಯಾಚಿಸಿದ್ದು, ನಿವೃತ್ತ ನ್ಯಾಯಮೂರ್ತಿ...

ಮೆಸ್ಸಿ ನೋಡಲು 25 ಸಾವಿರ ರೂ. ಪಾವತಿಸಿದವರಿಗೆ ನಿರಾಶೆ; ಕೋಪಗೊಂಡ ಅಭಿಮಾನಿಗಳಿಂದ ಕ್ರೀಡಾಂಗಣದಲ್ಲಿ ದಾಂಧಲೆ

ಶನಿವಾರ ನಡೆದ ಲಿಯೋನೆಲ್ ಮೆಸ್ಸಿ ಅವರ ಬಹು ನಿರೀಕ್ಷಿತ "ಗೋಟ್ ಇಂಡಿಯಾ ಟೂರ್" ಕೋಲ್ಕತ್ತಾದಲ್ಲಿ ಅಸ್ತವ್ಯಸ್ತವಾಯಿತು. ಯುವ ಭಾರತಿ ಕ್ರಿರಂಗನ್‌ನಲ್ಲಿ ರೊಚ್ಚಿಗೆದ್ದ ಅಭಿಮಾನಿಗಳ ದಾಂಧಲೆಯಿಂದ ಕ್ರೀಡಾಂಗಣ ಅವ್ಯವಸ್ಥೆಗೆ ಒಳಗಾಯಿತು. ಸಾವಿರಾರು ಅಭಿಮಾನಿಗಳು ಅರ್ಜೆಂಟೀನಾದ...

ಡ್ರಗ್‌ ಪೆಡ್ಲರ್‌ಗಳ ಮನೆ ಒಡೆದು ಹಾಕುವ ಹೇಳಿಕೆ : ಪರಮೇಶ್ವರ್ ಮಾತಿಗೆ ಆತಂಕ ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ

"ಡ್ರಗ್‌ ಪೆಡ್ಲರ್‌ಗಳ ಬಾಡಿಗೆ ಮನೆಗಳನ್ನು ಒಡೆದು ಹಾಕುವ ಹಂತಕ್ಕೆ ಹೋಗಿದ್ದೇವೆ" ಎಂಬ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ...

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಶಶಿ ತರೂರ್ ಕ್ಷೇತ್ರ ತಿರುವನಂತಪುರಂನಲ್ಲಿ ಬಿಜೆಪಿ ಮುನ್ನಡೆ

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ತಿರುವನಂತಪುರಂನಲ್ಲಿ ಭಾರತೀಯ ಜನತಾ ಪಕ್ಷದ ಸಾಧನೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಶನಿವಾರ ಅಭಿನಂದಿಸಿದ್ದಾರೆ. ಜನರ ತೀರ್ಪನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ದೀರ್ಘ...

ಆಳಂದ ಮತಗಳ್ಳತನ | ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿ 7 ಮಂದಿ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್‌

ಕಲಬುರಗಿಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮತಗಳ್ಳತನ (ಚುನಾವಣಾ ಆಕ್ರಮ) ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಆಳಂದದ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್...

ಉತ್ತರ ಪ್ರದೇಶ| ಗಸ್ತು ವಾಹನ ಹಳ್ಳಕ್ಕೆ ಉರುಳಿಸಿದ ಪಾನಮತ್ತ ಪೊಲೀಸರು; ಕ್ರೇನ್ ಚಾಲಕನ ಮೇಲೆ ಹಲ್ಲೆ

ಶುಕ್ರವಾರ (ಡಿಸೆಂಬರ್ 12) ರಾತ್ರಿ ಪೊಲೀಸರೊಬ್ಬರು ಕಾರಿನ ನಿಯಂತ್ರಣ ಕಳೆದುಕೊಂಡ ಬಳಿಕ '112' ಪೊಲೀಸ್ ಪ್ರತಿಕ್ರಿಯೆ ವಾಹನ (ಪಿಆರ್‌ವಿ) ಹಳ್ಳಕ್ಕೆ ಉರುಳಿದೆ. ವರದಿಗಳ ಪ್ರಕಾರ, ಘಟನೆಯ ಸಮಯದಲ್ಲಿ ಪೊಲೀಸರು ಪಾನಮತ್ತರಾಗಿದ್ದರು. ಕಾರ್ ಕಂದಕಕ್ಕೆ...

ಲಿಯೋನೆಲ್ ಮೆಸ್ಸಿ ಇಂಡಿಯಾ ಪ್ರವಾಸ; ಅಭೂತಪೂರ್ವ ಸ್ವಾಗತ ಕೋರಿದ ಕೋಲ್ಕತ್ತಾ ಅಭಿಮಾನಿಗಳು

ಇಂಡಿಯಾ ಪ್ರವಾಸ ಪ್ರಾರಂಭಿಸಿರುವ ಅರ್ಜೆಂಟೀನಾದ ಪುಟ್‌ಬಾಲ್‌ ತಾರೆ ಲಿಯೋನೆಲ್ ಮೆಸ್ಸಿ ಕೋಲ್ಕತ್ತಾಗೆ ಬಂದಿಳಿದಿದ್ದಾರೆ. ಶನಿವಾರ ಬೆಳಗಿನ ಜಾವ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಂದ ಅವರಿಗೆ ಅಭೂತಪೂರ್ವ ಸ್ವಾಗತ ಕೋರಿದರು. ಅರ್ಜೆಂಟೀನಾದ ಸೂಪರ್‌ಸ್ಟಾರ್ ದುಬೈ...

ನಟಿಯ ಅಪಹರಣ, ಅತ್ಯಾಚಾರ ಪ್ರಕರಣ : ಆರು ಅಪರಾಧಿಗಳಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಮಲಯಾಳಂ ಮೂಲದ ಬಹುಭಾಷಾ ನಟಿಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದ (2017ರ ಪ್ರಕರಣ) ಆರು ಅಪರಾಧಿಗಳಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ (ಡಿಸೆಂಬರ್ 12) ಕೇರಳ ನ್ಯಾಯಾಲಯ ಆದೇಶಿಸಿದೆ. ಡಿಸೆಂಬರ್...