ರೈಲು ಟಿಕೆಟ್ ವಿಷಯಕ್ಕೆ ಕ್ಯಾತೆ ತೆಗೆದು ಸಿಆರ್ಪಿಎಫ್ ಯೋಧನ ಮೇಲೆ ಹಲ್ಲೆ ನಡೆಸಿದ ಮೂವರು ಕಾವಡ್ ಯಾತ್ರಿಗಳನ್ನು ಉತ್ತರ ಪ್ರದೇಶದ ಮಿರ್ಝಾಪುರ ರೈಲು ನಿಲ್ದಾಣದಲ್ಲಿ ಶನಿವಾರ ಬಂಧಿಸಲಾಗಿದೆ.
ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಜವಾನ ಬ್ರಹ್ಮಪುತ್ರ ಎಕ್ಸ್ಪ್ರೆಸ್ ರೈಲು ಹಿಡಿಯಲು ಹೊರಟಿದ್ದಾಗ, ಕಾವಡ್ ಯಾತ್ರಿಗಳು (ಶಿವನ ಭಕ್ತರು) ಜಾರ್ಖಂಡ್ನ ಬೈದ್ಯನಾಥ ಧಾಮಕ್ಕೆ ಹೋಗಲು ಅದೇ ರೈಲಿಗೆ ಟಿಕೆಟ್ ಖರೀದಿಸಲು ಮುಂದಾಗಿದ್ದರು.
ಈ ವೇಳೆ ಟಿಕೆಟ್ ಖರೀದಿಸುವ ವಿಚಾರದಲ್ಲಿ ಅವರ ನಡುವೆ ವಾಗ್ವಾದ ಶುರುವಾಗಿದೆ. ಅದು ತಾರಕಕ್ಕೇರಿ ಕನ್ವರಿಗಳು ಯೋಧನನ್ನು ನೆಲಕ್ಕೆ ಬೀಳಿಸಿ, ಕಾಲಿನಿಂದ ಒದ್ದು ಮನಬಂದಂತೆ ಥಳಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
These drugged GuNDAs are shaming the holy Kanwar Yatra, the Hindus and defaming our sacred practice by their hooliganism. They need to be STOPPED.
It's outrageous to see how brutally they are beating the CRPF Jawan.
I hope @crpfindia will take a stand! pic.twitter.com/iFoaeZWgsy
— Gaurav Pandhi (@GauravPandhi) July 19, 2025
ಘಟನೆ ನಡೆದಾಗ ಸ್ಥಳದಲ್ಲಿದ್ದ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಯೋಧರು ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದ್ದರು. ಆದರೆ, ಗಲಾಟೆ ಹೆಚ್ಚಾದ ಕಾರಣ ಅವರು ಹೆಚ್ಚಿನ ಪಡೆಗಳನ್ನು ಸ್ದಳಕ್ಕೆ ಕರೆಸಬೇಕಾಯಿತು ಎಂದು ಜಿಆರ್ಪಿ ಇನ್ಸ್ಪೆಕ್ಟರ್ ರಾಘವೇಂದ್ರ ಸಿಂಗ್ ಹೇಳಿದ್ದಾರೆ.
ಸಿಆರ್ಪಿಎಫ್ ಜವಾನ ತನ್ನ ಕರ್ತವ್ಯಕ್ಕಾಗಿ ಮಣಿಪುರಕ್ಕೆ ಹೋಗುತ್ತಿದ್ದರು. ಹಲ್ಲೆಗೊಳಗಾದ ಬಳಿಕ ಬ್ರಹ್ಮಪುತ್ರ ಎಕ್ಸ್ಪ್ರೆಸ್ನಲ್ಲೇ ಅವರಿಗೆ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಬಿಎನ್ಎಸ್ ಮತ್ತು ರೈಲ್ವೆ ಕಾಯ್ದೆಯ ಸೆಕ್ಷನ್ 115(2) (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಜಿಆರ್ಪಿ ಕನ್ವರಿಗಳ ವಿರುದ್ಧ ಪ್ರಕರಣ ದಾಖಲಿಸಿದೆ.
ಬಂಧನದ ಬಳಿಕ ಕನ್ವರಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಜಿಆರ್ಪಿ ತಿಳಿಸಿದೆ.
ಬಾಲಕಿಯನ್ನು ಅಪಹರಿಸಿ ಬೆಂಕಿ ಹಚ್ಚಿದ ಪ್ರಕರಣ: ಪೂರ್ವ ಯೋಜಿತ ಕೃತ್ಯ ಎಂದ ಪ್ರಾಥಮಿಕ ವರದಿ


