Homeಮುಖಪುಟ21 ದಿನದ ಲಾಕ್‌ಡೌನ್‌ ಜನ ಹೀಗೆಂದರೆ, ಸತತ 6 ತಿಂಗಳ ಕಾಶ್ಮೀರಿಗಳ ಕಥೆ ಏನಾಗಿರಬೇಡ?

21 ದಿನದ ಲಾಕ್‌ಡೌನ್‌ ಜನ ಹೀಗೆಂದರೆ, ಸತತ 6 ತಿಂಗಳ ಕಾಶ್ಮೀರಿಗಳ ಕಥೆ ಏನಾಗಿರಬೇಡ?

“ಲಾಕ್‌ಡೌನ್‌ ” ಭಾಗಶಃ ಈ ಪದವನ್ನು ಈ ಹಿಂದೆ ಭಾರತೀಯರು ಎಂದಿಗೂ ಕೇಳಿರಲಿಕ್ಕಿಲ್ಲವೇನೋ? ಆದರೆ ಕಳೆದ 10 ದಿನಗಳಿಂದ ಈ ಪದವನ್ನು ಕೇಳುವುದಿರಲಿ, ಲಾಕ್‌ಡೌನ್‌ ನೀಡುತ್ತಿರುವ ಎಫೆಕ್ಟ್‌ಗೆ ಅಕ್ಷರಶಃ ನಲುಗಿ ಹೋಗಿದ್ದಾರೆ. ನಿನ್ನೆ ಮೊನ್ನೆವರೆಗೆ ಆಫೀಸು, ಕೆಲಸ, ಮೋಜು ಮಸ್ತಿ ಎಂದು ಕೈಲಿ ಬೈಕ್-ಕಾರು ಹಿಡಿದು ಜಾಲಿ ರೌಂಡ್ ಹೊಡೆಯುತ್ತಿದ್ದವರು ಇಂದು ಮೈ ಮುದುಡಿ ಮನೆಯಲ್ಲೇ ಕೂರುವಂತಾಗಿದೆ.

- Advertisement -
- Advertisement -

ಮನೆಯಲ್ಲಿ ಇದ್ದು ಬೇಸರವಾಗಿ ರೌಂಡ್ ಹೊಡೆಯಲು ಹೊರ ಬಂದವರಿಗೆ ಪೊಲೀಸರು ಬೀಸುತ್ತಿದ್ದಾರೆ. ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 176. ಆದರೆ ಕಳೆದ 10 ದಿನದ ಅವಧಿಯಲ್ಲಿ ಪೊಲೀಸರ ಲಾಠಿ ರುಚಿ ಕಂಡವರ ಸಂಖ್ಯೆ 5600 ನ್ನೂ ಮೀರುತ್ತಿದೆ. ಅಲ್ಲದೆ ಸಿಎಂ ಸ್ವಕ್ಷೇತ್ರ ಶೀಕಾರಿಪುರದಲ್ಲಿ ಪೊಲೀಸರ ಏಟು ತಾಳಲಾರದೆ ಸುರೇಶ್ ನಾಯ್ಕ ಎಂಬ ಓರ್ವ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

130 ಕೋಟಿ ಜನ ಸಂಖ್ಯೆ ಹೊಂದಿರುವ ಭಾರತದಂತಹ ದೇಶದಲ್ಲಿ ದಿಢೀರನೆ ಲಾಕ್ಡೌನ್ ಘೋಷಣೆ ಮಾಡಿದರೆ ಜನ ಹೇಗೆ ನಲುಗಬಹುದು ಎಂಬುದು ಭಾರತೀಯರಿಗೆ ಈಗ  ಅರ್ಥವಾಗಿರಬೇಕು. ಆದರೆ ಕಳೆದ 70 ವರ್ಷಗಳಲ್ಲಿ ಕಾಶ್ಮೀರದಲ್ಲಿ ಎಷ್ಟು ಬಾರಿ ಲಾಕ್‌ಡೌನ್‌ ಮಾಡಲಾಗಿದೆ. ಕಳೆದ ವರ್ಷ ಕಲಂ 370 ರದ್ದು ಪಡಿಸುವ ಸಂದರ್ಭದಲ್ಲಿ ಕಣಿವೆ ರಾಜ್ಯವನ್ನು ಸತತ 6 ತಿಂಗಳ ಕಾಲ ಲಾಕ್‌ಡೌನ್‌ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಅಲ್ಲಿನ ಜನ ಹೇಗೆ ಕಷ್ಟಪಟ್ಟಿರಬೇಕು? ಜನ ಜೀವನ ಎಷ್ಟರ ಮಟ್ಟಿಗೆ ನಲುಗಿರಬೇಕು? ಆ 6 ತಿಂಗಳ ಅವಧಿಯಲ್ಲಿ ಅಲ್ಲಿನ ವ್ಯಾಪಾರ ವಹಿವಾಟು ಎಷ್ಟು ನಷ್ಟ ಅನುಭವಿಸಿರಬೇಕು? ಇದ್ಯಾವುದರ ಬಗ್ಗೆಯಾದರೂ ನಮಗೆ ಮಾಹಿತಿ ಇದೆಯಾ? ಈ ಕುರಿತು ಯೋಚಿಸುವ ಗೋಜಿಗೂ ನಾವು ಹೋಗಿರಲಿಕ್ಕಿಲ್ಲವೇನೋ? ಆದರೆ ಈಗ ಆ ಸಂದರ್ಭ ಎದುರಾಗಿದೆ. ಕಾಶ್ಮೀರದ ಆ 180 ದಿನದ ಲಾಕ್‌ಡೌನ್‌ ಎಂಬ ಕಪ್ಪು ದಿನದ ಕತೆಗಳನ್ನು ಹಾಗೂ ಅಲ್ಲಿನ ಬದುಕನ್ನು ಯೋಚಿಸಬೇಕಿದೆ.

6 ತಿಂಗಳು ಮನೆಯಲ್ಲೇ ಬಂದಿ

ಕೊರೋನಾ ಕಾರಣಕ್ಕೆ ಭಾರತದಲ್ಲಿ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಗಿದೆ. ಈ 21 ದಿನಗಳ ಕಾಲ ನಾವು ಮನೆಯಲ್ಲಿ ಕೂರುವುದೇ ನಮಗೆ ಕಷ್ಟವಾಗಿದೆ. ಆದರೆ, ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನೀಡುತ್ತಿದ್ದ ವಿಶೇಷ ಸ್ಥಾನಮಾನ ಕಲಂ 370ನ್ನು ರದ್ದುಗೊಳಿಸಿದ ನಂತರ ಕಳೆದ ಆಗಸ್ಟ್ 05ರ ನಂತರ 6 ತಿಂಗಳು ಕಣಿವೆ ರಾಜ್ಯದ ಜನ ಮನೆಯಲ್ಲೇ ಕಳೆಯಬೇಕಾದ ಪರಿಸ್ಥಿತಿ ಎದುರಾಯಿತು.

ಅಗತ್ಯ ವಸ್ತುಗಳ ಖರೀದಿ ಹೊರತಾಗಿ ಬೇರೆ ಯಾವುದೇ ವಿಚಾರಕ್ಕೆ ಅವರು ಮನೆಯಿಂದ ಹೊರ ಬರುವಂತಿರಲಿಲ್ಲ. ರಾಜ್ಯದಲ್ಲಾದರೂ ಲಾಕ್‌ಡೌನ್‌ ಪಾಲನೆಗೆ ಪೊಲೀಸರನ್ನು ನೇಮಕ ಮಾಡಲಾಗಿದೆ. ಆದರೆ, ಕಾಶ್ಮೀರದಲ್ಲಿ ಮಿಲಿಟರಿಯನ್ನೇ ನೇಮಕ ಮಾಡಲಾಗಿತ್ತು ಎಂದರೆ ಮನೆಯಿಂದ ಹೊರ ಬಂದವರಿಗೆ ಶಿಕ್ಷೆ ಹೇಗಿರುತ್ತಿತ್ತು ಎಂಬುದನ್ನು ಬೇರೆ ಬಿಡಿಸಿ ಹೇಳಬೇಕಿಲ್ಲ.

ಕಣಿವೆ ರೈತರ ಗೋಳು ಕೇಳುವರ್ಯಾರು?

ದೇಶದಲ್ಲಿ ಯಾವುದೇ ಮೂಲೆಯಲ್ಲಿ ಓರ್ವ ರೈತ ಸಾಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರೆ ಅದು ರಾಷ್ಟ್ರೀಯ ಸುದ್ದಿ. ಇನ್ನು ರಾಜ್ಯದಲ್ಲಿ ಓರ್ವ ರೈತ ಸತ್ತರೆ ಆಡಳಿತ ಪಕ್ಷದ ಕಾಲೆಳೆಯಲು ಟೀಕಿಸಲು ವಿರೋಧ ಪಕ್ಷಕ್ಕೆ ಸಿಕ್ಕ ದೊಡ್ಡ ಆಯುಧ. ಇನ್ನು ಮಾಧ್ಯಮಗಳಿಗೆ ಅದು ಹಾಟ್ ಬ್ರೇಕಿಂಗ್ ನ್ಯೂಸ್.

ಆದರೆ, ಕಾಶ್ಮೀರದಲ್ಲಿ ರೈತರು ಇಲ್ಲವೇ? ಅವರಿಗೆ ಸಾಲ ಇಲ್ಲವೇ? ಅಲ್ಲಿನ ರೈತರೂ ಮನುಷ್ಯರಲ್ಲವೇ? ಕಾಶ್ಮೀರದಲ್ಲಿ ಸಾಲದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗುವ ರೈತರ ಕುರಿತು ನಾವು ಮರುಗುವುದು ಬೇಡ, ಎಂದಾದರೂ ಈ ಕುರಿತು ಕನಿಷ್ಟ ಯೋಚನೆ ಮಾಡಿದ್ದೇವೆಯೇ ಎಂದು ನಮ್ಮ ಆತ್ಮಸಾಕ್ಷಿಯನ್ನು ನಾವು ಪ್ರಶ್ನೆ ಮಾಡಿಕೊಂಡರೆ ಉತ್ತರ ದಕ್ಕುತ್ತದೆ.

ಅಸಲಿಗೆ ಕಾಶ್ಮೀರದ ಪ್ರಮುಖ ಬೆಳೆ ಸೇಬು ಮತ್ತು ಕೇಸರಿ. ಭಾರತಕ್ಕೆ ಶೇ.90 ರಷ್ಟು ಸೇಬಿನ ಹಣ್ಣು ಕಣಿವೆ ರಾಜ್ಯ ಕಾಶ್ಮೀರದಿಂದಲೇ ಲಭ್ಯವಾಗುತ್ತದೆ. ಇನ್ನು ಶೇ.100 ರಷ್ಟು ಕೇಸರಿ ಇಲ್ಲಿಂದಲೇ ಪೂರೈಕೆಯಾಗುತ್ತಿದೆ. ಕಾಶ್ಮೀರದ ಕೇಸರಿಗೆ ವಿಶ್ವದಾದ್ಯಂತ ಡಿಮ್ಯಾಂಡ್ ಇದೆ. ವಿಶ್ವದ ಕೇಸರಿ ಉತ್ಪಾದನೆಯಲ್ಲಿ ಕಾಶ್ಮೀರದ ಪಾಲು ಶೇ.07 ರಷ್ಟು. ಕಾಶ್ಮೀರದ ಸೇಬು ಸಹ ಸಾಕಷ್ಟು ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತಾಗುತ್ತದೆ.

2019ರಲ್ಲಿ ಕೇಸರಿ ಮತ್ತು ಸೇಬಿನ ಬೆಳೆ ಕಾಶ್ಮೀರಿ ರೈತರಿಗೆ ಉತ್ತಮವಾಗಿಯೇ ಕೈಸೇರಿತ್ತು. ಆದರೆ ಈ ಬೆಳೆ ಮಾರುಕಟ್ಟೆಗೆ ಸೇರುವ ಹೊತ್ತಿಗೆ ಲಾಕ್‌ಡೌನ್‌ ಘೋಷಿಸಿಯಾಗಿತ್ತು. ಪರಿಣಾಮ ಕಾಶ್ಮೀರ ಸೇಬು ಉದ್ಯಮ ಆಗಸ್ಟ್‌ನಿಂದ ಅಕ್ಟೋಬರ್ ವರೆಗಿನ ಕೇವಲ ಎರಡು ತಿಂಗಳಿನಲ್ಲಿ ಅನುಭವಿಸಿದ ನಷ್ಟ ಬರೋಬ್ಬರಿ 12,000 ಕೋಟಿ ಎನ್ನುತ್ತಿವೆ ಆರ್ಥಿಕ ವಿಶ್ಲೇಷಣೆಗಳು.

ಅಕ್ಟೋಬರ್ ನಂತರ ಕೇಂದ್ರ ಸರ್ಕಾರವೇ ನೇರ ಸೇಬು ಕೊಳ್ಳಲು ಮುಂದಾದರೂ ಅಷ್ಟರೊಳಗಾಗಲೇ ಶೇ. 60ಕ್ಕೂ ಹೆಚ್ಚು ಸೇಬು ಕೊಳೆತು ಅನುಪಯುಕ್ತವಾಗಿ ಹೋಗಿತ್ತು. ಆಕ್ಟೋಬರ್ ನಂತರವೂ ಅಲ್ಲಿನ ರೈತನ ಪರಿಸ್ಥಿತಿ ಸುಧಾರಿಸಿರಲಿಲ್ಲ.

ಇನ್ನೂ ಕುರಿ ಸಾಕಾಣಕೆ ಮತ್ತು ಉತ್ಕೃಷ್ಟ ಉಣ್ಣೆ ತಯಾರಿಕೆ ಇಲ್ಲಿನ ಉಪ ಕಸುಬು. ವರ್ಷಕ್ಕೆ ಸಾವಿರಾರು ಕೋಟಿ ಹಣ ಸಂಚಯಿಸುವ ಮತ್ತೊಂದು ದೊಡ್ಡ ಉದ್ಯಮವೇ ಸರಿ. ಆದರೆ, ಸತತ 6 ತಿಂಗಳ ಲಾಕ್‌ಡೌನ್‌ ಇಲ್ಲಿನ ಉಣ್ಣೆ ಉದ್ಯಮವನ್ನೂ ಇನ್ನಿಲ್ಲದಂತೆ ಕಾಡಿತ್ತು, ಅತ್ತ ಪ್ರಮುಖ ಉದ್ಯಮವಾದ ಸೇಬು ಕೇಸರಿಯೂ ಕೈಕೊಟ್ಟಿತ್ತು, ಇತ್ತ ಉಪ ಕಸುಬು ಇಲ್ಲದೆ ಇಲ್ಲಿನ ರೈತ ಸಂಕಷ್ಟಕ್ಕೆ ಒಳಗಾದದ್ದು ಹೊರ ಜಗತ್ತಿಗೆ ತಿಳಿಯಲೇ ಇಲ್ಲ.

ಪ್ರವಾಸೋದ್ಯಮವೂ ಮಕಾಡೆ ಮಲಗಿತ್ತು

ಪ್ರವಾಸೋದ್ಯಮ ಕಣಿವೆ ರಾಜ್ಯದ ಪ್ರಮುಖ ಉದ್ಯಮಗಳಲ್ಲೊಂದು. ಇಲ್ಲಿನ ಜನ ಅತಿಹೆಚ್ಚು ಅವಲಂಬಿತವಾಗಿರುವುದು ಪ್ರವಾಸೋದ್ಯಮವನ್ನೆ. ಪ್ರವಾಸೋದ್ಯಮ ಈ ಭಾಗದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆಮ್ಲ ಜನಕ ಎಂದರೂ ತಪ್ಪಾಗಲಾರದು. ಪ್ರವಾಸೋದ್ಯಮವನ್ನೇ ನಂಬಿ ಇಲ್ಲಿ ಸಾವಿರಾರು ಕುಟುಂಬಗಳು ಬದುಕುತ್ತಿವೆ.

ಆದರೆ, ದಿಢೀರನೆ ಬಂದೆರಗಿದ ಲಾಕ್ಡೌನ್ ಈ ಭಾಗದಲ್ಲಿ ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿದ್ದವರ ಬದುಕನ್ನೇ ಕಸಿದಿತ್ತು. ಭಾರತದಲ್ಲೇ ಅತಿಹೆಚ್ಚು ನಿರುದ್ಯೋಗಿಗಳನ್ನು ಹೊಂದಿರುವ ರಾಜ್ಯಗಳ ಪೈಕಿ ಕಾಶ್ಮೀರವೂ ಒಂದು. ನಿರುದ್ಯೋಗದ ಜೊತೆಗೆ ಲಾಕ್‌ಡೌನ್‌‌ನಿಂದ ಪ್ರವಾಸೋದ್ಯಮವನ್ನೇ ನಂಬಿ ಬದುಕಿದ್ದವರ ಬದುಕು ಬೀದಿಗೆ ಬಂದದ್ದು ಈ ಕಾಲಾವಧಿಯಲ್ಲಿ, ಅಲ್ಲಿನ ಬಡತನ ರೇಖೆಗಿಂತ ಕೆಳಗಿದ್ದ ಶೇ.21.63 ರಷ್ಟು ಜನ ಅನುಭವಿಸಿದ ಕಷ್ಟವನ್ನು ಯಾವ ಅಂತಾರಾಷ್ಟ್ರೀಯ ಮಾಧ್ಯಮಗಳೂ ಸೆರೆ ಹಿಡಿಯಲೇ ಇಲ್ಲ.

ಲಾಕ್‌ಡೌನ್‌ ನೆಪದಲ್ಲಿ ಇಂಟರ್ನೆಟ್ ತಡೆ

ಭಾರತದಲ್ಲಿ ಇದೀಗ 21 ದಿನಗಳ ಲಾಕ್‌ಡೌನ್‌ ಘೋಷಿಸಲಾಗಿದೆ. ಲಾಕ್‌ಡೌನ್‌ ನಡುವೆಯೂ ಎಲ್ಲಾ ಜನರಿಗೆ 4ಜಿ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಜನ ಮನೆಯಲ್ಲೇ ಇದ್ದೂ ವಿಶ್ವದ ಆಗುಹೋಗುಗಳನ್ನು ತಿಳಿದುಕೊಳ್ಳಲು ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಆದರೆ ಲಾಕ್‌ಡೌನ್‌ ಸಮಯದಲ್ಲಿ ಕಾಶ್ಮೀರದಲ್ಲಿ ಇಂಟರ್ನೆಟ್ ಮತ್ತು ಟೆಲಿಫೋನ್ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಲಾಗಿತ್ತು. ಪರಿಣಾಮ ಕಣಿವೆ ರಾಜ್ಯ 50 ವರ್ಷಗಳಷ್ಟು ಹಿಂದುಳಿಯುವಂತಾಗಿತ್ತು.

ಶಾಲಾ ಕಾಲೇಜುಗಳನ್ನು ಸತತ 6 ತಿಂಗಳು ಬಂದ್ ಮಾಡಲಾಗಿತ್ತು. ಮಕ್ಕಳಿಗೆ ಶಿಕ್ಷಣವೂ ದೂರ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಲಾಕ್ಡೌನ್ ತೆರವಾದ ನಂತರವೂ ಕಾಶ್ಮೀರಕ್ಕೆ ಸಮರ್ಪಕ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿರಲಿಲ್ಲ. ಪರಿಣಾಮ ಅಲ್ಲಿನ ಶಾಲಾ ಬಾಲಕನೊಬ್ಬ ದಯವಿಟ್ಟು ಇಂಟರ್ನೆಟ್ ಕೊಡಿ ಇಲ್ಲಿ ಶಾಲೆಯೂ ಇಲ್ಲ ಇಂಟರ್ನೆಟ್ ಸಹ ಇಲ್ಲದೆ ನಾವು ಏನನ್ನೂ ಕಲಿಯಲಾಗುತ್ತಿಲ್ಲ. ದಶಕಗಳಷ್ಟು ಹಿಂದುಳಿದಂತೆ ಭಾಸವಾಗುತ್ತಿದೆ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದನ್ನು ಭಾಗಶಃ ಯಾರೂ ಮರೆತಿರಲು ಸಾಧ್ಯವಿಲ್ಲ.

ಕಳೆದ 70 ವರ್ಷಗಳ ಅವಧಿಯಲ್ಲಿ ಎರಡು ರಾಷ್ಟ್ರಗಳ ರಾಜಕೀಯ ಲಾಭಕ್ಕೆ ಇಲ್ಲಿನ ಜನ ಬಲಿಯಾಗಿದ್ದಾರೆ, ಇಲ್ಲಿನ ಜನರ ಬದುಕು ಹರಿದು ಮೂರಾಬಟ್ಟೆಯಾಗಿದೆ ಎಂಬುದೂ ಎಷ್ಟು ಸತ್ಯವೋ, ಅಲ್ಲಿನ ಜನರ ಬದುಕಿನ ಕುರಿತು ದೇಶದ ಯಾವ ಭಾಗದ ಜನರಿಗೂ ಅಷ್ಟಾಗಿ ಆಸಕ್ತಿ ಇಲ್ಲ ಎಂಬುದು ಅದಕ್ಕಿಂತ ದೊಡ್ಡ ಸತ್ಯ.

ಭಾರತದ 21 ದಿನಗಳ ಲಾಕ್‌ಡೌನ್‌ ನೆಪದಲ್ಲಿ ಈಗಲೂ ನಾವು ಕಾಶ್ಮೀರದ ವ್ಯಥೆಯನ್ನು, ಕಪ್ಪು ಇತಿಹಾಸವನ್ನು, ಇಲ್ಲಿನ ಜನರ ಬದುಕಿನೊಳಗೆ ನುಸುಳಿ ಬದುಕನ್ನೇ ಹರಿದು ಹಾಕಿದ ಸ್ವಾರ್ಥ ರಾಜಕಾರಣದ ಕುರಿತು ಅವಲೋಕಿಸದಿದ್ದರೆ ಇನ್ಯಾವಾಗ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಅಶ್ಟೊ ಇಶ್ಟೋ ಪ್ಯಾಕೇಜ್ ಕರೋನಾ ಪ್ಯಾಕೇಜ್ ಸಾರಲಾಗಿದೆ.
    ಅಲ್ಲಿ!

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...