Homeಅಂತರಾಷ್ಟ್ರೀಯಸಿಕ್ಕ ಸಿಕ್ಕ ದೇಶಗಳ ಮೇಲೆ ದಾಳಿ ನಡೆಸುತ್ತಿರುವ ಟ್ರಂಪ್ : ಅಧ್ಯಕ್ಷರ ಯುದ್ದೋನ್ಮಾದಕ್ಕೆ ಲಗಾಮು ಹಾಕಲು...

ಸಿಕ್ಕ ಸಿಕ್ಕ ದೇಶಗಳ ಮೇಲೆ ದಾಳಿ ನಡೆಸುತ್ತಿರುವ ಟ್ರಂಪ್ : ಅಧ್ಯಕ್ಷರ ಯುದ್ದೋನ್ಮಾದಕ್ಕೆ ಲಗಾಮು ಹಾಕಲು ಮುಂದಾದ ಯುಎಸ್ ಕಾಂಗ್ರೆಸ್

- Advertisement -
- Advertisement -

“ನಾನು ಶಾಂತಿದೂತ, ವಿಶ್ವ ಶಾಂತಿಯ ರಾಯಭಾರಿ, ಹಲವು ದೇಶಗಳ ನಡುವಿನ ಸಂಘರ್ಷಗಳನ್ನು ನಿಲ್ಲಿಸಿ ಜಗತ್ತಿನಲ್ಲಿ ಶಾಂತಿ ನೆಲೆಸುವಂತೆ ಮಾಡಿರುವ ನನಗೆ ‘ನೊಬೆಲ್ ಶಾಂತಿ ಪ್ರಶಸ್ತಿ’ ಕೊಡಿ” ಎನ್ನುತ್ತಲೇ, ಸಿಕ್ಕ ಸಿಕ್ಕ ದೇಶಗಳ ಮೇಲೆ ದಾಳಿ ಮಾಡಿಸುತ್ತಾ ಸಾವಿರಾರು ಜೀವಗಳನ್ನು ಬಲಿ ಪಡೆಯುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ದೋನ್ಮಾದಕ್ಕೆ ಲಗಾಮು ಹಾಕಲು ಅಮೆರಿಕ ಕಾಂಗ್ರೆಸ್ (ಸಂಸತ್ತು) ಪ್ರಯತ್ನ ನಡೆಸುತ್ತಿದೆ.

ತಮ್ಮ ಅಧ್ಯಕ್ಷನ ಹುಚ್ಚುತನದಿಂದ ಅಮಾಯಗಳು ಜೀವಗಳು ಬಲಿಯಾಗುತ್ತಿರುವುದು ಅಮೆರಿಕದ ಕೆಲ ಜೀವಪರ ಸಂಸದರಿಗೆ ನೋವುಂಟು ಮಾಡಿದೆ. ಆದರೆ, ಅವರು ನೇರವಾಗಿ ಇದರ ವಿರುದ್ದ ಮಾತನಾಡಲೋ, ಇನ್ನೊಂದು ಸಂತ್ರಸ್ತ ದೇಶದ ಪರ ನಿಲ್ಲಲೋ ಸಾಧ್ಯವಾಗುತ್ತಿಲ್ಲ. ತಮ್ಮ ಮನಸ್ಸಿನಲ್ಲಿ ಮುಗ್ದ ಜೀವಗಳು ಬಲಿಯಾಗುತ್ತಿರುವ ಬೇಸರ ಇದ್ದರೂ..ಅಮೆರಿಕ ದೇಶದ ಜನಪ್ರತಿನಿಧಿಗಳಾಗಿರುವ ಅವರು, ಯುದ್ಧದ ಸಂದರ್ಭದಲ್ಲಿ ತಮ್ಮ ದೇಶದ ಪರ ನಿಲ್ಲಬೇಕಾದ ಅನಿವಾರ್ಯತೆ ಇದೆ.

ಹಾಗಾಗಿ, ಯುದ್ಧದಿಂದ ದೇಶದ ಆರ್ಥಿಕತೆ ಮೇಲೆ ಬೀರುವ ಪರಿಣಾಮ ಮತ್ತು ಕೆಲ ತಾಂತ್ರಿಕ ನೆಪಗಳನ್ನು ಮುಂದಿಟ್ಟುಕೊಂಡು ಟ್ರಂಪ್‌ ಅಧಿಕಾರಕ್ಕೆ ಕಡಿವಾಣ ಹಾಕುವ ಪ್ರಯತ್ನದಲ್ಲಿದ್ದಾರೆ.

ಅಮೆರಿಕದ ಸಂವಿಧಾನದ ಪ್ರಕಾರ, ಯುದ್ಧ ಘೋಷಿಸುವ ಅಧಿಕಾರ ಸಂಸತ್ತಿಗೆ ಇದೆ. ಆದರೆ, ಈಗ ಅಧ್ಯಕ್ಷರು ‘ರಾಷ್ಟ್ರೀಯ ಭದ್ರತೆ’ಯ ಹೆಸರಿನಲ್ಲಿ ದಾಳಿ ನಡೆಸಲು ತನಗಿರುವ ಅಧಿಕಾರವನ್ನು ದುರುಪಯೋಗಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಸಂಸದರ ಆರೋಪವಾಗಿದೆ. ಇದನ್ನು ವಿರೋಧಿಸಿ ಸಂಸದರು ಹೊಸ ನಿರ್ಣಯವನ್ನು ಮುಂದಿಟ್ಟಿದ್ದಾರೆ.

1973ರ ‘ವಾರ್ ಪವರ್ಸ್ ಆಕ್ಟ್’ ಅಡಿಯಲ್ಲಿ, ಅಧ್ಯಕ್ಷರು ಸೈನ್ಯವನ್ನು ಬಳಸಿದ 48 ಗಂಟೆಗಳ ಒಳಗೆ ಸಂಸತ್ತಿಗೆ ಮಾಹಿತಿ ನೀಡಬೇಕು ಮತ್ತು 60 ದಿನಗಳ ಒಳಗೆ ಅನುಮತಿ ಪಡೆಯಬೇಕು.

ಹಲವು ದಶಕಗಳ ಹಿಂದೆ (1991 ಮತ್ತು 2002 ರಲ್ಲಿ) ಇರಾಕ್ ಯುದ್ಧಕ್ಕಾಗಿ ನೀಡಲಾಗಿದ್ದ ‘ಮಿಲಿಟರಿ ಬಳಕೆಯ ಅಧಿಕಾರ’ವನ್ನು ಅಧ್ಯಕ್ಷರು ಈಗಲೂ ಬಳಸುತ್ತಿದ್ದಾರೆ. ಇದನ್ನು ರದ್ದುಗೊಳಿಸಲು ಸಂಸತ್ತು ಪ್ರಯತ್ನಿಸುತ್ತಿದೆ.

ಸಂಸತ್ತಿನ ಅನುಮತಿ ಇಲ್ಲದೆ ಇರಾನ್ ಸೇರಿದಂತೆ ಇತರ ಯಾವುದೇ ದೇಶಗಳ ವಿರುದ್ಧ ಯಾವುದೇ ಮಿಲಿಟರಿ ಕ್ರಮ ಕೈಗೊಳ್ಳದಂತೆ ಅಧ್ಯಕ್ಷರನ್ನು ತಡೆಯುವುದು ಇದರ ಉದ್ದೇಶವಾಗಿದೆ.

ಡೆಮೋಕ್ರಾಟ್ ಪಕ್ಷದ ನಾಯಕರು ಮತ್ತು ಕೆಲವು ರಿಪಬ್ಲಿಕನ್ ಸಂಸದರು (ಉದಾಹರಣೆಗೆ ಥಾಮಸ್ ಮಾಸ್ಸಿ) ಅಧ್ಯಕ್ಷರ ಅಧಿಕಾರಕ್ಕೆ ಲಗಾಮು ಹಾಕುವುದನ್ನು ಬೆಂಬಲಿಸುತ್ತಿದ್ದಾರೆ. ಅನಗತ್ಯ ಯುದ್ಧದಿಂದ ಅಮೆರಿಕದ ಆರ್ಥಿಕತೆ ಮತ್ತು ಸೈನಿಕರಿಗೆ ತೊಂದರೆಯಾಗುತ್ತದೆ ಎಂದು ಇವರು ಹೇಳಿದ್ದಾರೆ.

ಆದರೆ, ಅಧ್ಯಕ್ಷರ ಬೆಂಬಲಿಗರು ಇದನ್ನು ವಿರೋಧಿಸುತ್ತಿದ್ದಾರೆ. ಇರಾನ್‌ನ ಪರಮಾಣು ಬೆದರಿಕೆಯನ್ನು ತಡೆಯಲು ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರ ಇರಬೇಕು ಎಂಬುದು ಇವರ ವಾದವಾಗಿದೆ.

ಸಂಸತ್ತು ಅಧ್ಯಕ್ಷರ ಪರಮಾಧಿಕಾರದ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದರೂ, ಅಧ್ಯಕ್ಷರು ಅದನ್ನು ತಮ್ಮ ‘ವೀಟೋ’ ಅಧಿಕಾರ ಬಳಸಿ ತಡೆಹಿಡಿಯುವ ಸಾಧ್ಯತೆ ಹೆಚ್ಚಿದೆ. ಅದನ್ನು ಮೀರಿ ಕಾನೂನು ಜಾರಿಗೆ ತರಲು ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ.

ಸಂಸದರಾದ ರೋ ಖನ್ನಾ ಮತ್ತು ಥಾಮಸ್ ಮಾಸ್ಸಿ ಅವರು ಮಂಡಿಸಿದ ಜಂಟಿ ನಿರ್ಣಯದ ಮೇಲೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನಲ್ಲಿ ಚರ್ಚೆ ಪೂರ್ಣಗೊಂಡಿದೆ. ಈ ನಿರ್ಣಯವು ಇರಾನ್ ಮೇಲೆ ಯಾವುದೇ ಮುಂದಿನ ದಾಳಿ ನಡೆಸುವ ಮೊದಲು ಕಾಂಗ್ರೆಸ್‌ನಿಂದ ಹಣಕಾಸಿನ ಅನುಮೋದನೆ ಮತ್ತು ಅಧಿಕೃತ ಯುದ್ಧ ಘೋಷಣೆಯನ್ನು ಕಡ್ಡಾಯಗೊಳಿಸುತ್ತದೆ.

ವೈಟ್ ಹೌಸ್ ಈಗಾಗಲೇ ಈ ನಿರ್ಣಯದ ವಿರುದ್ಧ ಎಚ್ಚರಿಕೆ ನೀಡಿದೆ. ಒಂದು ವೇಳೆ ಸಂಸತ್ತು ಈ ಮಿತಿಯನ್ನು ಅಂಗೀಕರಿಸಿದರೂ, ಅಧ್ಯಕ್ಷರು ತಮ್ಮ ‘ವೀಟೋ’ ಅಧಿಕಾರ ಬಳಸಿ ಅದನ್ನು ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ. ಇದನ್ನು ಮೀರಿ ಕಾನೂನು ಜಾರಿಗೆ ತರಲು ಸಂಸತ್ತಿನ ಎರಡೂ ಸದನಗಳಲ್ಲಿ 2/3 ಬಹುಮತದ ಅಗತ್ಯವಿದೆ, ಇದು ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಷ್ಟಕರವಾಗಿದೆ.

ಕೆಲವು ಕಾನೂನು ತಜ್ಞರು ಮತ್ತು ಸಂಸದರು ಈ ವಿಷಯವನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ಯಲು ಸಿದ್ಧತೆ ನಡೆಸುತ್ತಿದ್ದಾರೆ. “ಅಧ್ಯಕ್ಷರು ಸಂಸತ್ತಿನ ಅನುಮತಿ ಇಲ್ಲದೆ ಯುದ್ಧ ಸದೃಶ ಸನ್ನಿವೇಶ ಸೃಷ್ಟಿಸುವುದು ಸಂವಿಧಾನ ಬಾಹಿರ” ಎಂಬುದು ಇವರ ಆರೋಪವಾಗಿದೆ.

ಯುರೋಪಿಯನ್ ಒಕ್ಕೂಟ ಮತ್ತು ವಿಶ್ವಸಂಸ್ಥೆ ಅಮೆರಿಕದ ಈ ಆಂತರಿಕ ಬೆಳವಣಿಗೆಯನ್ನು ಗಮನಿಸುತ್ತಿವೆ. ಅಮೆರಿಕದ ಸಂಸತ್ತು ಅಧ್ಯಕ್ಷರ ಅಧಿಕಾರವನ್ನು ನಿಯಂತ್ರಿಸಿದರೆ ಮಾತ್ರ ಮಧ್ಯಪ್ರಾಚ್ಯದಲ್ಲಿ ದೊಡ್ಡ ಮಟ್ಟದ ಯುದ್ಧವನ್ನು ತಪ್ಪಿಸಬಹುದು ಎಂಬುದು ಮಿತ್ರ ರಾಷ್ಟ್ರಗಳ ಅಭಿಪ್ರಾಯವಾಗಿದೆ.

ಸಂಸದರಾದ ರೋ ಖನ್ನಾ ಮತ್ತು ಥಾಮಸ್ ಮಾಸ್ಸಿ ಅವರು ಈ ವಾರವೇ ತಮ್ಮ ನಿರ್ಣಯದ ಮೇಲಿನ ಸಂಸತ್ತಿನಲ್ಲಿ ಮತದಾನಕ್ಕೆ ಒತ್ತಾಯಿಸುತ್ತಿದ್ದಾರೆ. ಅಧ್ಯಕ್ಷರು ಸಂಸತ್ತಿನ ಅನುಮತಿ ಇಲ್ಲದೆ ಯುದ್ಧ ಮುಂದುವರಿಸಬಾರದು ಎಂಬುದು ನಿರ್ಣಯದ ಉದ್ದೇಶ.

ಅಧ್ಯಕ್ಷರು ಈ ಯಾವುದೇ ಮಿತಿಯನ್ನು ಒಪ್ಪಿಕೊಳ್ಳುವ ಸಾಧ್ಯತೆ ಇಲ್ಲ. ಅವರು ತಮ್ಮ ವಿಶೇಷ ಅಧಿಕಾರ ಬಳಸಿ ಈ ನಿರ್ಣಯವನ್ನು ತಡೆಹಿಡಿಯಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...