Homeಚಳವಳಿಟ್ರಾಕ್ಟರ್‌ ರ್‍ಯಾಲಿ: ರೈತರು ತಮಗೆ ತಾವೇ ಅಳವಡಿಸಿಕೊಂಡ ಮಾರ್ಗಸೂಚಿಗಳು ಇಲ್ಲಿವೆ!

ಟ್ರಾಕ್ಟರ್‌ ರ್‍ಯಾಲಿ: ರೈತರು ತಮಗೆ ತಾವೇ ಅಳವಡಿಸಿಕೊಂಡ ಮಾರ್ಗಸೂಚಿಗಳು ಇಲ್ಲಿವೆ!

ನೆನಪಿಡಿ, ನಮ್ಮ ಗುರಿ ದೆಹಲಿಯನ್ನು ವಶಪಡಿಸಿಕೊಳ್ಳುವುದಲ್ಲ, ಈ ದೇಶದ ಜನರ ಹೃದಯವನ್ನು ಗೆಲ್ಲುವುದು.

- Advertisement -
- Advertisement -

ಮೂರು ಕರಾಳ ಕೃಷಿ ಕಾನೂನಿನ ವಿರುದ್ದ ಪ್ರತಿಭಟಿಸುತ್ತಿರುವ ರೈತರು ಜನವರಿ 26 ರ ಗಣರಾಜ್ಯೋತ್ಸವದಂದು ಟ್ರಾಕ್ಟರ್ ರ್‍ಯಾಲಿ ನಡೆಸಲಿದ್ದಾರೆ. ಈ ಐತಿಹಾಸಿಕ ರೈತರ ಗಣರಾಜ್ಯೋತ್ಸವಕ್ಕೆ ರೈತರು ತಮಗೆ ತಾವೇ ಮಾರ್ಗಸೂಚಿಗಳನ್ನು ಅಳವಡಿಕೊಂಡಿದ್ದಾರೆ. ಅವು ಹೀಗಿದೆ… 

ಸ್ನೇಹಿತರೇ, ನಾವು ಇತಿಹಾಸವನ್ನು ನಿರ್ಮಿಸಲಿದ್ದೇವೆ. ಇತಿಹಾಸದಲ್ಲಿ ಹಿಂದೆಂದೂ ಈ ಗಣರಾಜ್ಯದ ಜನರು ಗಣರಾಜ್ಯೋತ್ಸವದಂದು ಈ ರೀತಿಯ ಮೆರವಣಿಗೆಯ ಭಾಗವಾಗಿಲ್ಲ. ಈ ಮೆರವಣಿಗೆಯ ಮೂಲಕ ನಾವು ದೇಶ ಮತ್ತು ಜಗತ್ತಿಗೆ ನಮ್ಮ ಬಗ್ಗೆ ಹೇಳಬೇಕಾಗಿದೆ.

ನಾವು ಮೂರು ರೈತ ವಿರೋಧಿ ಕಾನೂನುಗಳ ಬಗ್ಗೆ ಸತ್ಯವನ್ನು ತಿಳಿಸಬೇಕಾಗಿದೆ. ಈ ಐತಿಹಾಸಿಕ ಮೆರವಣಿಗೆ ಯಾವುದೇ ಕಿರಿಕಿರಿಗೆ ಕಾರಣವಾಗದಂತೆ ನಾವು ಕಾಳಜಿ ವಹಿಸಬೇಕು. ಮೆರವಣಿಗೆಯನ್ನು ಅತ್ಯಂತ ಶಾಂತಿಯುತವಾಗಿ ಕರೆದೊಯ್ಯುವಲ್ಲಿ ನಮ್ಮ ಗೆಲುವು ಇರುತ್ತದೆ; ಯಾವುದೇ ಅನಗತ್ಯ ಘಟನೆಗಳು ನಡೆಯಕೂಡದು. ನೆನಪಿಡಿ, ನಮ್ಮ ಗುರಿ ದೆಹಲಿಯನ್ನು ವಶಪಡಿಸಿಕೊಳ್ಳುವುದಲ್ಲ, ಈ ದೇಶದ ಜನರ ಹೃದಯವನ್ನು ಗೆಲ್ಲುವುದು.

ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿ ಜ. 26ರಂದು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್‌ ಪರೇಡ್‌; ರಾಜಧಾನಿಯತ್ತ 5000 ವಾಹನಗಳು!

ಇದನ್ನು ಗಮನದಲ್ಲಿಟ್ಟುಕೊಂಡು, ’ಸಂಯುಕ್ತ್ ಕಿಸಾನ್ ಮೋರ್ಚ’ ಮೆರವಣಿಗೆಗೆ ಸರ್ವಾನುಮತದಿಂದ ಒಪ್ಪಿದ ಕೆಲವು ಸೂಚನೆಗಳನ್ನು ಪ್ರಸ್ತುತಪಡಿಸುತ್ತಿದೆ. ದಯವಿಟ್ಟು ಅದನ್ನು ಸಾಧ್ಯವಾದಷ್ಟು ಜನರೊಂದಿಗೆ ಹಂಚಿಕೊಳ್ಳಿ ಮತ್ತು ಯಾವುದೇ ಗೊಂದಲಗಳಿದ್ದಲ್ಲಿ, ನಿಮ್ಮ ಆಯಾ ಸಂಸ್ಥೆಗಳ ಮುಖಂಡರನ್ನು ಸಂಪರ್ಕಿಸಿ ಅಥವಾ ಸಹಾಯವಾಣಿ ಸಂಖ್ಯೆ 7428384230 ಗೆ ಕರೆ ಮಾಡಿ.

ಮೆರವಣಿಗೆಗೆ ಮುಂಚಿತವಾಗಿ ಸಿದ್ಧತೆಗಳು

  • ಮೆರವಣಿಗೆಯಲ್ಲಿ ಟ್ರಾಲಿಗಳನ್ನು ಅನುಮತಿಸಲಾಗುವುದಿಲ್ಲ. ಟ್ರ್ಯಾಕ್ಟರ್‌ಗಳು ಮತ್ತು ಇತರ ವಾಹನಗಳನ್ನು ಮಾತ್ರ ಅನುಮತಿಸಲಾಗುವುದು. ವಿಶೇಷ ಟ್ಯಾಬ್ಲೋ ಹೊಂದಿರುವ ಟ್ರಾಲಿಗಳಿಗೆ ವಿನಾಯಿತಿ ನೀಡಬಹುದು. ದಯವಿಟ್ಟು ಟ್ರಾಲಿಯ ಸುರಕ್ಷತೆಗಾಗಿ ವ್ಯವಸ್ಥೆ ಮಾಡಿ.
  • ನಿಮ್ಮೊಂದಿಗೆ 24 ಗಂಟೆಗಳಿಗೆ ಬೇಕಾಗುವಷ್ಟು ಪಡಿತರ ಮತ್ತು ನೀರನ್ನು ಪ್ಯಾಕ್ ಮಾಡಿ. ಚಳಿಯಿಂದ ರಕ್ಷಣೆ ಹೊಂದಲು ನೀವು ಸರಿಯಾದ ವ್ಯವಸ್ಥೆಗಳನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಿ. ನೀವು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಕೊಂಡಿದ್ದರೆ ಅದು ಅಗತ್ಯವಾಗಬಹುದು.
  • ಪ್ರತಿ ಟ್ರ್ಯಾಕ್ಟರ್ ಅಥವಾ ಚಕ್ಕಡಿಯನ್ನು ರೈತರ ಸಂಘಟನೆಗಳ ಧ್ವಜ ಮತ್ತು ರಾಷ್ಟ್ರೀಯ ಧ್ವಜದೊಂದಿಗೆ ಅಳವಡಿಸಬೇಕೆಂದು ಸಂಯುಕ್ತ್ ಕಿಸಾನ್ ಮೋರ್ಚಾ ಮನವಿ ಮಾಡುತ್ತದೆ ಯಾವುದೇ ರಾಜಕೀಯ ಪಕ್ಷದ ಧ್ವಜ ಹಾಕಕೂಡದು.
  • ಯಾವುದೇ ಶಸ್ತ್ರಾಸ್ತ್ರವನ್ನು ನಿಮ್ಮೊಂದಿಗೆ ಕೊಂಡೊಯ್ಯಬೇಡಿ, ಕೋಲುಗಳನ್ನು ಸಹ ತರಬೇಡಿ. ಯಾವುದೇ ಪ್ರಚೋದನಕಾರಿ ಅಥವಾ ನಕಾರಾತ್ಮಕ ಘೋಷಣೆಗಳಿರುವ ಬ್ಯಾನರ್‌ಗಳನ್ನು ಬಳಸಬೇಡಿ.
  • ಮೆರವಣಿಗೆಯಲ್ಲಿ ನೀವು ಭಾಗವಹಿಸುವುದರ ಬಗ್ಗೆ ತಿಳಿಸಲು ನೀವು ಬಯಸಿದರೆ, 8448385556 ಗೆ ಮಿಸ್ಡ್ ಕಾಲ್ ನೀಡಿ.

ಇದನ್ನೂ ಓದಿ: ರ್‍ಯಾಲಿಗೆ ಟ್ರಾಕ್ಟರ್‌ ತರಬೇಡಿ ಎಂದ ಬೆಂಗಳೂರು ಪೊಲೀಸರು: ತಂದೇ ತರುತ್ತೇವೆ ಎಂದ ರೈತರು!

ಪೆರೇಡ್ ಸಮಯದಲ್ಲಿ ಅನುಸರಿಸಬೇಕಾದ ಸೂಚನೆಗಳು

  • ಮೆರವಣಿಗೆಯನ್ನು ರೈತ ಮುಖಂಡರೊಂದಿಗೆ ಕಾರುಗಳ ಮೂಂಚೂಣಿಯಲ್ಲಿ ನಡೆಸಲಾಗುತ್ತದೆ. ಯಾವುದೇ ಕಾರು / ಟ್ರಾಕ್ಟರ್ ಆ ಕಾರನ್ನು ಹಿಂದಿಕ್ಕಬಾರದು. ಹಸಿರು ಜಾಕೆಟ್ ಧರಿಸಿದ ನಮ್ಮ ಸ್ವಯಂಸೇವಕರ ನಿರ್ದೇಶನಗಳನ್ನು ದಯವಿಟ್ಟು ಅನುಸರಿಸಿ.
  • ಮೆರವಣಿಗೆಗಾಗಿ ಮಾರ್ಗವನ್ನು ಮೊದಲೇ ನಿರ್ಧರಿಸಲಾಗಿದೆ ಮತ್ತು ಗುರುತಿಸಲಾಗಿದೆ. ಪೊಲೀಸ್ ಮತ್ತು ಸಂಚಾರ ಸ್ವಯಂಸೇವಕರು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಮಾರ್ಗದಿಂದ ವಿಚಲನಗೊಂಡ ಯಾವುದೇ ಕಾರು / ಟ್ರಾಕ್ಟರ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
  • ಯಾವುದೇ ಕಾರು / ಟ್ರಾಕ್ಟರ್ ಅನ್ನು ಯಾವುದೇ ಕಾರಣವಿಲ್ಲದೆ ಒಂದು ಜಾಗದಲ್ಲಿ ನಿಲ್ಲಿಸಿದರೆ ಆಕ್ರಮಿಸಿಕೊಂಡರೆ, ಆ ಕಾರು / ಟ್ರಾಕ್ಟರ್ ಅನ್ನು ಸ್ವಯಂಸೇವಕರು ತೆಗೆದುಹಾಕುತ್ತಾರೆ ಎಂದು ಎಸ್‌ಕೆಎಂ ನಿರ್ಧರಿಸಿದೆ. ಪೆರೇಡ್‌ನಲ್ಲಿರುವ ಎಲ್ಲಾ ಕಾರು/ಟ್ರಾಕ್ಟರ್‌ಗಳು ಮೆರವಣಿಗೆಯನ್ನು ಪೂರ್ಣಗೊಳಿಸಿದ ನಂತರ ಆರಂಭಿಕ ಹಂತಕ್ಕೆ ಮರಳಬೇಕು.
  • ಚಾಲಕ ಸೇರಿದಂತೆ ಗರಿಷ್ಠ 5 ಜನರು ಒಂದು ಟ್ರ್ಯಾಕ್ಟರ್‌ನಲ್ಲಿ ಸವಾರಿ ಮಾಡಬಹುದು. ಟ್ರಾಕ್ಟರುಗಳ ಬಾನೆಟ್, ಬಂಪರ್ ಅಥವಾ ಟ್ರ್ಯಾಕ್ಟರ್ ಮೇಲ್ಭಾಗದಲ್ಲಿ ಕೂಳಿತುಕೊಳ್ಳಬಾರದು.
  • ಎಲ್ಲಾ ಟ್ರಾಕ್ಟರುಗಳು ಒಂದು ಸಾಲಿನಲ್ಲಿ ಮುಂದುವರಿಯಬೇಕು ಮತ್ತು ಪೆರೇಡ್‌ನಾದ್ಯಂತ ಯಾವುದೇ ಇತರ ವಾಹನವನ್ನು ಹಿಂದಿಕ್ಕುವಂತಿಲ್ಲ. ಮೆರವಣಿಗೆಯನ್ನು ಮುನ್ನಡೆಸುವ ರೈತ ಮುಖಂಡರ ವಾಹನಗಳನ್ನು ದಯವಿಟ್ಟು ಹಿಂದಿಕ್ಕಬೇಡಿ.
  • ದಯವಿಟ್ಟು ಟ್ರ್ಯಾಕ್ಟರ್‌ನಲ್ಲಿ ಸಂಗೀತ ನುಡಿಸಬೇಡಿ. ಮೆರವಣಿಗೆಯಲ್ಲಿರುವ ಎಲ್ಲ ಪ್ರಕಟಣೆಗಳು ಯಾವುದೇ ಅಡೆತಡೆಯಿಲ್ಲದೆ ಕೇಳಿಸಿಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ.
  • ಮೆರವಣಿಗೆಗೆ ಮೊದಲು ಅಥವಾ ಮೆರವಣಿಗೆ ಸಮಯದಲ್ಲಿ ಯಾವುದೇ ಮಾದಕವಸ್ತು ಬಳಸುವುದನ್ನು ನಿಷೇಧಿಸಲಾಗಿದೆ. ಅಂತಹ ಪ್ರಕರಣಗಳನ್ನು ಸಂಚಾರ ಸ್ವಯಂಸೇವಕರಿಗೆ ವರದಿ ಮಾಡಲಾಗುತ್ತದೆ.
  • ಮೆರವಣಿಗೆಯನ್ನು ಮನೋಹರವಾಗಿ ನಡೆಸುವುದು ಮತ್ತು ನಮ್ಮ ಸಹವರ್ತಿ ನಾಗರಿಕರ ಹೃದಯಗಳನ್ನು ಗೆಲ್ಲುವುದು ನಮ್ಮ ಉದ್ದೇಶ ಎಂಬುದನ್ನು ದಯವಿಟ್ಟು ನೆನಪಿಡಿ. ಪೊಲೀಸರು ಕೂಡ ನಮ್ಮ ಭಾಗವಾಗಿದ್ದಾರೆ, ನಾವು ಯಾವುದೇ ಜಗಳಗಳಲ್ಲಿ ತೊಡಗಬಾರದು. ಎಲ್ಲಾ ಸುದ್ದಿ ಚಾನೆಲ್‌ಗಳ ಪ್ರತಿನಿಧಿಗಳನ್ನು ಗೌರವಿಸಬೇಕು.
  • ದಯವಿಟ್ಟು ಕಸವನ್ನು ರಸ್ತೆಗಳಲ್ಲಿ ಎಸೆಯುವ ಮೂಲಕ ಸುತ್ತಮುತ್ತಲಿನ ಪ್ರದೇಶಗಳನ್ನು ಕಲುಷಿತಗೊಳಿಸಬೇಡಿ. ತ್ಯಾಜ್ಯವನ್ನು ವಿಲೇವಾರಿ ಮಾಡಲು ಚೀಲವನ್ನು ಕೊಂಡೊಯ್ಯಬೇಕು ಎಂದು ನಮ್ರವಾಗಿ ಸೂಚಿಸುತ್ತೇವೆ.

ಇದನ್ನೂ ಓದಿ: ಬಲವಂತವಾಗಿ ರೈತ ಜಾಥಾ ತಡೆದ ಪೊಲೀಸರು: ರೈತ ಮುಖಂಡರ ಆಕ್ಷೇಪ

ತುರ್ತು ಪರಿಸ್ಥಿತಿಗಾಗಿ ಮಾರ್ಗಸೂಚಿಗಳು

ಕಿಸಾನ್ ಏಕ್ತಾ ಮೋರ್ಚಾ ಪ್ರತಿಯೊಂದು ರೀತಿಯ ತುರ್ತು ಪರಿಸ್ಥಿತಿಗಾಗಿ ನಿಬಂಧನೆಗಳನ್ನು ರೂಪಿಸಿದೆ. ಆದ್ದರಿಂದ ಯಾವುದೇ ಸಮಸ್ಯೆ ಇದ್ದರೆ ಭಯಪಡಬೇಡಿ, ಈ ಸೂಚನೆಗಳನ್ನು ಅನುಸರಿಸಿ:

  • ಯಾವುದೇ ವದಂತಿಗಳನ್ನು ನಿರ್ಲಕ್ಷಿಸಿ. ನೀವು ಏನನ್ನಾದರೂ ಸ್ಪಷ್ಟಪಡಿಸಲು ಬಯಸಿದರೆ, ಸತ್ಯವನ್ನು ಪರಿಶೀಲಿಸಲು ಕಿಸಾನ್ ಏಕ್ತಾ ಮೋರ್ಚಾದ ಫೇಸ್‌ಬುಕ್ ಪುಟವನ್ನು ನೋಡಿ.
  • ಮೆರವಣಿಗೆಯಲ್ಲಿ ಆಂಬ್ಯುಲೆನ್ಸ್‌ಗಳು ಸುತ್ತಮುತ್ತಲ ಪ್ರದೇಶಗಳಲ್ಲಿರುತ್ತವೆ. ಆಸ್ಪತ್ರೆಗಳ ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ತುರ್ತುಸ್ಥಿತಿ ಇದ್ದರೆ, ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಅಥವಾ ಹತ್ತಿರದ ಸ್ವಯಂಸೇವಕರಿಗೆ ತಿಳಿಸಿ.
  • ಟ್ರಾಕ್ಟರ್ ಅಥವಾ ಕಾರಿನೊಂದಿಗೆ ಯಾವುದೇ ಸಮಸ್ಯೆ ಇದ್ದಲ್ಲಿ, ಅದನ್ನು ಬದಿಯಲ್ಲಿ ಇರಿಸಿ ಮತ್ತು ಸ್ವಯಂಸೇವಕರನ್ನು ಸಂಪರ್ಕಿಸಿ ಅಥವಾ ಸಹಾಯವಾಣಿಗೆ ಕರೆ ಮಾಡಿ.
  • ಈ ಮೆರವಣಿಗೆಗಾಗಿ ಸಂಯುಕ್ತ್ ಕಿಸಾನ್ ಮೋರ್ಚಾದ ಸಹಾಯವಾಣಿ ಸಂಖ್ಯೆ 24 ಗಂಟೆಗಳ ಕಾಲ ತೆರೆದಿರುತ್ತದೆ. ನೀವು ಯಾವುದೇ ಪ್ರಶ್ನೆಯನ್ನು ಹೊಂದಿದ್ದರೆ ಅಥವಾ ಏನನ್ನಾದರೂ ತಿಳಿಸಲು ಬಯಸಿದರೆ, ದಯವಿಟ್ಟು ತಕ್ಷಣ ಕರೆ ಮಾಡಿ.
  • ಯಾವುದೇ ದುರದೃಷ್ಟಕರ ಘಟನೆ ನಡೆದರೆ, ನೀವು ಅದನ್ನು 112 ನೇ ಸಂಖ್ಯೆಯಲ್ಲಿರುವ ಪೊಲೀಸ್ ನಿಯಂತ್ರಣ ಕೊಠಡಿಗೆ ವರದಿ ಮಾಡಬಹುದು.

ಸಹಾಯವಾಣಿ ಸಂಖ್ಯೆ 7428384230

ಇದನ್ನೂ ಓದಿ: ಗಣರಾಜ್ಯೋತ್ಸವದ ಟ್ರ್ಯಾಕ್ಟರ್‌ ಪರೇ‌ಡ್‌ನಲ್ಲಿ ನಾಲ್ವರು ರೈತ ಮುಖಂಡರನ್ನು ಕೊಲ್ಲಲು ಸಂಚು ಆರೋಪ: ಸಿಕ್ಕಿಬಿದ್ದ ಯುವಕ
ಟ್ರಾಕ್ಟರ್‌ ರ್‍ಯಾಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭೆ ಚುನಾವಣೆ : ಬಿಹಾರದಲ್ಲಿ ಕಿಂಗ್ ಮೇಕರ್ ಆದ ಓವೈಸಿ ಪಕ್ಷ

ಮಾರ್ಚ್ 16ರಂದು ನಡೆಯಲಿರುವ ಬಿಹಾರದ ಐದು ರಾಜ್ಯಸಭಾ ಸ್ಥಾನಗಳ ಚುನಾವಣೆಯಲ್ಲಿ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಪಕ್ಷವು 'ಕಿಂಗ್ ಮೇಕರ್' ಆಗಿ ಹೊರಹೊಮ್ಮಿದೆ. ಬಿಹಾರದಲ್ಲಿ ಒಂದು ರಾಜ್ಯಸಭಾ ಸ್ಥಾನ ಗೆಲ್ಲಲು ಕನಿಷ್ಠ...

ದೆಹಲಿ : ಪ್ರಧಾನಿ ಮನೆ ಬಳಿಯ ಕೊಳಗೇರಿಗಳ 717 ಕುಟುಂಬಗಳಿಗೆ ಮನೆ ಖಾಲಿ ಮಾಡುವಂತೆ ನೋಟಿಸ್

ನವದೆಹಲಿಯ ಪ್ರಧಾನಿ ನಿವಾಸದ ಬಳಿಯ ಮೂರು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಏಳುನೂರ ಹದಿನೇಳು ಕುಟುಂಬಗಳು ಮಾರ್ಚ್ 6ರೊಳಗೆ ತಮ್ಮ ಮನೆಗಳನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಎದುರಿಸಲು ಸಿದ್ದರಾಗುವಂತೆ ಎಚ್ಚರಿಕೆ ನೀಡಲಾಗಿದೆ...

ಹೊಸ ಅಸ್ತ್ರ ಪ್ರಯೋಗಿಸಿದ ಟ್ರಂಪ್ : ಎಲ್ಲಾ ರಾಷ್ಟ್ರಗಳ ಆಮದು ಮೇಲೆ ಶೇ.10ರಷ್ಟು ಜಾಗತಿಕ ಸುಂಕ ಘೋಷಣೆ

ಎಲ್ಲಾ ದೇಶಗಳ ಆಮದುಗಳ ಮೇಲೆ ಹೊಸದಾಗಿ ಶೇಕಡ 10 ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ಘೋಷಿಸಿದ್ದಾರೆ. ಇದಕ್ಕೂ ಕೆಲ ಗಂಟೆಗಳ ಮೊದಲು,...

ಭಾರತದೊಂದಿಗಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಇಲ್ಲ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಟ್ರಂಪ್ ಹೇಳಿಕೆ

ಅಮೆರಿಕ ಸುಪ್ರೀಂ ಕೋರ್ಟ್ ಪ್ರತಿ ಸುಂಕ (Reciprocal tariffs) ನೀತಿಯನ್ನು ರದ್ದುಗೊಳಿಸಿದರೂ, ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶುಕ್ರವಾರ (ಫೆ.20) ತಿಳಿಸಿದ್ದಾರೆ. ಶ್ವೇತಭವನದಲ್ಲಿ...

ಗುಜರಾತ್: ‘ಲವ್ ಜಿಹಾದ್’ ತಡೆಗೆ ವಿವಾಹ ನೋಂದಣಿ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡುತ್ತೇವೆ; ಡಿಸಿಎಂ ಹರ್ಷ ಸಾಂಘವಿ ಘೋಷಣೆ

ಅಹಮದಾಬಾದ್: ಗುಜರಾತ್‌ನ ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಶುಕ್ರವಾರ, ರಾಜ್ಯ ಸರ್ಕಾರವು ವಿವಾಹ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತರಲಿದೆ ಎಂದು ಘೋಷಿಸಿದ್ದು, "ಸಮಾಜ ವಿರೋಧಿ ಶಕ್ತಿಗಳು", ವಿಶೇಷವಾಗಿ ಗುಜರಾತ್‌ನ ಹೆಣ್ಣುಮಕ್ಕಳನ್ನು "ಲವ್ ಜಿಹಾದ್" ಗಾಗಿ...

ಬಂಗಾಳ ಎಸ್ಐಆರ್ ಪ್ರಕ್ರಿಯೆ: ಚುನಾವಣಾ ಆಯೋಗದ ಸಹಾಯಕ್ಕೆ ನ್ಯಾಯಾಂಗ ಅಧಿಕಾರಿಗಳನ್ನು ನೇಮಿಸಲು ಕಲ್ಕತ್ತಾ ಹೈಕೋರ್ಟ್‌ಗೆ ಸುಪ್ರೀಂ ಸೂಚನೆ

ನವದೆಹಲಿ: ಪಶ್ಚಿಮ ಬಂಗಾಳ ಸರ್ಕಾರ ಮತ್ತು ಚುನಾವಣಾ ಆಯೋಗದ ನಡುವೆ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನಕ್ಕೆ ಸಂಬಂಧಿಸಿದಂತೆ ದುರದೃಷ್ಟಕರ ಆರೋಪದ ಆಟ ನಡೆಯುತ್ತಿದೆ ಎಂದು ಪ್ರತಿಕ್ರಿಯಿಸಿರುವ ಸುಪ್ರೀಂ ಕೋರ್ಟ್, ವಿಶೇಷ ತೀವ್ರ ಪರಿಷ್ಕರಣೆ...

ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬಿಷ್ಣೋಯಿ ಗ್ಯಾಂಗ್ ನಿಂದ ಜೀವಬೆದರಿಕೆ: ಅಮೆರಿಕಾ ನಂಬರ್ ನಿಂದ 10ಕೋಟಿ ರೂ. ಬೇಡಿಕೆ 

ಬಿಷ್ಣೋಯ್ ಗ್ಯಾಂಗ್ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಅಮೆರಿಕದ ಸಂಖ್ಯೆಯಿಂದ ಬಂದ ವಾಯ್ಸ್ ನೋಟ್ ಮೂಲಕ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಮುಂಬೈ ಪೊಲೀಸ್...

‘ರಾಜಿ ಮಾಡಿಕೊಂಡ ಪ್ರಧಾನಿ’: ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್‌ ಕಾರ್ಯಕರ್ತರಿಂದ ಶರ್ಟ್‌ ಬಿಚ್ಚಿ ಪ್ರತಿಭಟನೆ

ಎಐ ಇಂಪ್ಯಾಕ್ಟ್ ಶೃಂಗಸಭೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡು ಮತ್ತು ಪ್ರಧಾನಿ "ರಾಜಿ ಮಾಡಿಕೊಂಡಿದ್ದಾರೆ" ಎಂದು ಆರೋಪಿಸಿ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಭಾರತ್ ಮಂಟಪದಲ್ಲಿ ಶರ್ಟ್ ಧರಿಸದೆ ಪ್ರತಿಭಟನೆ...

ಬಾಗಲಕೋಟೆ: ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲು ತೂರಾಟ, ಉದ್ವಿಗ್ನ ಪರಿಸ್ಥಿತಿ: ಫೆ.24ರವರೆಗೆ ನಿಷೇಧಾಜ್ಞೆ ಜಾರಿ

ಬಾಗಲಕೋಟೆಯಲ್ಲಿ ಗುರುವಾರ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯಂದು ನಡೆದ ಪ್ರತಿಮೆ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದ ಘಟನೆ ವರದಿಯಾಗಿದೆ. ಹಳೆಯ ನಗರ ಪ್ರದೇಶದ ಪಂಕ ಮಸೀದಿ ಬಳಿ ಮೆರವಣಿಗೆ ಸಾಗುತ್ತಿದ್ದಾಗ ಈ...

ನಿಯಮಿತವಾಗಿ ಎಸ್‌ಸಿ/ಎಸ್‌ಟಿ ಕಾಯ್ದೆ ಕೋಶದ ಸಭೆ ನಡೆಸುತ್ತಿಲ್ಲ ಎಂದು ಆರೋಪಿಸಿದ ಮೇವಾನಿ; ಗುಜರಾತ್ ವಿಧಾನಸಭೆಯಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ವಾಗ್ವಾದ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲಿ ರಚಿಸಲಾದ ರಾಜ್ಯ ಮೇಲ್ವಿಚಾರಣಾ ಕೋಶದ (ಎಸ್‌ಎಂಸಿ) ನಿಯಮಿತ ಸಭೆಗಳನ್ನು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕರೆಯುತ್ತಿಲ್ಲ ಎಂದು ವಡ್ಗಾಮ್‌ನ ಕಾಂಗ್ರೆಸ್ ಶಾಸಕ ಜಿಗ್ನೇಶ್...