Homeಕರ್ನಾಟಕ1785ರಿಂದ 1798ರ ಅವಧಿಯ ಟಿಪ್ಪುವಿನ ಕನಸುಗಳು

1785ರಿಂದ 1798ರ ಅವಧಿಯ ಟಿಪ್ಪುವಿನ ಕನಸುಗಳು

- Advertisement -
- Advertisement -

ಕನಸು 1

ಮರಾಠ ಸೇನೆಯ ಮೂವರು ಅಧಿಕಾರಿಗಳು

ಚಂದ್ರಮಾನದ ಪ್ರಕಾರ ಮೊದಲ ’ಅಹ್ಮದಿ’ ತಿಂಗಳ ಗುರುವಾರ ರಾತ್ರಿ. ಹಿಜರಿಯ 1200 ದಾಲ್ವ್ ವರ್ಷದ ಆರಂಭದಲ್ಲಿ, ರಾತ್ರಿಯ ಮೂರು ಭಾಗ ಹಾಗೂ ಐದು ಪ್ರಹರಗಳು ಕಳೆದಿದ್ದವು. ಶಮ್ಸಾಬಾದ್‌ನಲ್ಲಿ ಇದ್ದಾಗ ನಾನು ಈ ಕನಸ ಕಂಡೆನು.

ಮರಾಠ ಸೈನ್ಯವು ಬಂದಂತೆ ನಾನು ಏಕಾಂಗಿಯಾಗಿ ಮುನ್ನುಗ್ಗಿ ಅದರ ಸೇನಾಧಿಪತಿಗಳ ಬಳಿ ಒಬ್ಬೊಬ್ಬರಾಗಿ ಹೋರಾಡುವ ಸವಾಲು ಹಾಕಿದಂತೆ ಕಾಣಿಸಿತು. ಆ ಸೈನ್ಯದ ಮುಸ್ಲಿಮ್ ಸೇನಾಧಿಕಾರಿ ನನ್ನನ್ನು ಎದುರಿಸಿ ನಿಂತ. ಸಮರಾಂಗಣದಲ್ಲಿ ಎರಡೂ ಸೈನ್ಯಗಳು ಮುಖಾಮುಖಿಯಾಗಿ ಕದನ ನಡೆಸುತ್ತಿರುವಾಗ ನನ್ನ ಖಡ್ಗದ ಒಂದೇ ಏಟಿಗೆ ಆ ಮುಸ್ಲಿಮ್ ಸೇನಾಧಿಪತಿಯನ್ನು ಕೊಂದೆನು. ಅದಾದ ನಂತರ ಸೈನ್ಯದ ನಾಯಕನಾಗಿದ್ದ ಯುವಕ ಅಲ್ಲಿಂದ ಕಾಲ್ಕಿತ್ತು ಓಡಿದ. ನಾನು ಅವನ ಬೆನ್ನಟ್ಟಿದೆ. ಮತ್ತು ಮುಖಾಮುಖಿಯಾಗಿ ಒಂದೇ ಹೊಡೆತಕ್ಕೆ ಅವನನ್ನು ಮುಗಿಸಿದೆ. ಅದೇ ರೀತಿಯಾಗಿ ಮೂರನೇ ಮುಖ್ಯ ಸೇನಾಧಿಪತಿಯನ್ನು ಕೊಂದುಹಾಕಿದೆ. ಮೂವರು ಸೇನಾಧಿಕಾರಿಗಳನ್ನೂ ತಲಾ ಒಂದೊಂದು ಏಟಿಗೆ ಮುಗಿಸಿ ಮರಳಿದೆ. ನನ್ನ ಸೈನ್ಯ ವಿಜಯಶಾಲಿಯಾಗಿ ಸಂಭ್ರಮದಲ್ಲಿತ್ತು.

ಆಗ ಕನಸಿನಲ್ಲಿ ನನ್ನ ಸೈನ್ಯದ ಎಲ್ಲ ಅಧಿಕಾರಿಗಳು ಹಾಗೂ ಹೈದರ್ ಸಾಹಿಬ್ ಅವರು ಮನೆಯಲ್ಲಿ ಊಟ ಮಾಡುತ್ತಿರುವಂತೆ ಕಂಡೆನು. ತುಂಬಾ ದಣಿದಿದ್ದ ನಾನು ಕುಡಿಯುವುದಕ್ಕಾಗಿ ನೀರು ಕೇಳಿದೆ. ಅಲ್ಲಿದ್ದವರು ನನಗೆ ಶುಭಾಶಯ ಕೋರಿದರು ಹಾಗೂ ಊಟ ಮಾಡಿದ ನಂತರ ನೀರು ಕುಡಿಯುವಂತೆ ಮನವಿ ಮಾಡಿದರು. ಈ ಮಧ್ಯೆ ದುರ್ಬಲನಾದ ಬಿಳಿಗಡ್ಡದ ಮುದುಕನೊಬ್ಬ ನನ್ನ ಮುಂದೆ ಕಾಣಿಸಿಕೊಂಡ. ಅವನ ಕೈಯಲ್ಲಿ ಕೆನೆ ಹಾಗೂ ಸಿಹಿಯಾದ ತಿಂಡಿಗಳಿದ್ದವು. ಅವನ್ನು ತೆಗೆದುಕೊಳ್ಳುವಂತೆ ಕೇಳಿದ. ಆ ಸಿಹಿ ತಿಂಡಿಗಳನ್ನು ಅವನಿಂದ ಪಡೆದು ತಿಂದ ನಂತರ ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ. “ಇಷ್ಟೊಂದು ಸ್ವಾದಿಷ್ಟ ಹಾಗೂ ರುಚಿಯಾದ ಆಹಾರ ಹಿಂದೆಂದೂ ತಿಂದಿರಲಿಲ್ಲ. ಅವು ಅತ್ಯಂತ ರುಚಿಕರವಾಗಿದ್ದವು.” ಸ್ನಾನ ಮಾಡಿ ಶುದ್ಧಿಯಾದ ನಂತರ ನನ್ನ ಅಧಿಕಾರಿಗಳ ಬಳಿ ವಿಚಾರಿಸಿದೆ. ಅವರು ಕಾಫಿರರ ಸೈನ್ಯವನ್ನು ನಾಶ ಮಾಡಿದ ಬಗ್ಗೆ; ಹೈದರಿ ಸೈನ್ಯದ ಅಧಿಕಾರಿಗಳು ಇಲ್ಲ ಎಂದು ಉತ್ತರಿಸಿದರು. ಮತ್ತು ಈ ವಿಷಯದಲ್ಲಿ ಅಂತಹ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹಾಗೂ ಅವರು ಸೂಕ್ತ ಆದೇಶಕ್ಕಾಗಿ ಕಾಯುತ್ತಿದ್ದುದಾಗಿ ತಿಳಿಸಿದರು.

ಈ ಮಧ್ಯೆ ಅವರು, ಕಾಫಿರರ /ಸತ್ಯನಿಷೇಧಿಗಳ/ ನಂಬಿಕೆ ಇಲ್ಲದವರ ಸೈನ್ಯದ ಬಳಿ ನೆಲೆನಿಂತ ಹಳ್ಳಿಯಲ್ಲಿ ಕೊಳ್ಳೆಹೊಡೆದ ವಸ್ತುಗಳಿದ್ದವು ಎಂದು ಹೇಳಿದರು. ನಾನು ನನ್ನ ಸೈನ್ಯವನ್ನು ಸಿದ್ಧಗೊಳಿಸಿ, ಆ ಸೈನ್ಯ ಇರುವಲ್ಲಿಗೆ ಹೊರಟೆ. ಸಹಾಯಕರ ನೆರವಿನಿಂದ ಸೊಂಟಕ್ಕೆ ಕಟ್ಟಿದ ಒರೆಯಿಂದ ನನ್ನ ಖಡ್ಗ ಹೊರ ತೆಗೆದೆ. ಸೈಯದ್ ಜುನೈದ್, ಸೈಯದ್ ಗಫಾರ್ ಮತ್ತು ಇತರ ಅಧಿಕಾರಿಗಳಿಗೆ ಯುದ್ಧಕ್ಕೆ ಸಿದ್ಧರಾಗುವಂತೆ ಹೇಳಿದೆ. ಈ ಕನಸಿನಲ್ಲಿ ಕಂಡದ್ದು ಇಷ್ಟೇ.

***

ಕನಸು 21

ನಿಜಾಮ್‌ನ ಪ್ರತಿನಿಧಿ

ರಾಸಿಕ್ ವರ್ಷದ ರಬ್ಬಾನಿ ತಿಂಗಳಿನ 25ನೇ ದಿನ. ಮುಹಮ್ಮದರು ಜನಿಸಿದ ದಿನದಿಂದ ಆರಂಭಿಸಿದ 1222ನೇ ವರ್ಷಕ್ಕೆ ಸಮನಾಗುತ್ತದೆ. ದಿನದ ನಾಲ್ಕು ಗಂಟೆಗಳು ಉಳಿದಿದ್ದವು. ಆಗ ಈ ಕನಸ ಕಂಡೆ. ನಿಜಾಮ್ ಅಲಿಖಾನ್ ಅವರ ದಿವಾನ್ ಬರುವುದ ಕಂಡೆ. ಕಾಣಿಸುತ್ತಿದ್ದಂತೆಯೇ ಅವನಿಗೆ ಹಲ್ಲು ಇಲ್ಲದೇ ಇರುವುದು ಹಾಗೆಯೇ ತಲೆಗೂದಲಿಗೆ ಬಣ್ಣ ಹಚ್ಚಿಕೊಂಡಿರುವುದನ್ನು ಗಮನಿಸಿದೆ. ಅವನು ನನ್ನಿಂದ ಸಹಾಯ ಯಾಚಿಸಿದ. ದೇವರ ಸೇವಕನು ಅವನಿಗೆ ಹೇಳಿದ, “ಆಗಲಿ, ನೀನು ನೆಮ್ಮದಿಯಿಂದಿರು, ನನ್ನ ಸಲಹೆಗಾರರ ಜೊತೆ ಮಾತನಾಡುವೆ, ಅದಾದ ನಂತರ ನಿನಗೆ ಉತ್ತರ ನೀಡುವೆ.” ಈ ರೀತಿಯಲ್ಲಿ ಮಾತನಾಡಿದ ನಂತರ ಅವನನ್ನು ಕೋಟೆಯಿಂದ ಹೊರಗೆ ಕಳುಹಿಸಿದೆ. ಇಂತಹ ವ್ಯಕ್ತಿಗಳ ಜೊತೆಗೆ ಸಾಂತ್ವನ ಹೇಳುವ ರೀತಿಯಲ್ಲಿಯೇ ಮಾತನಾಡಬೇಕು ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ. ಹೀಗೆ ಸಹಾಯ ಕೇಳಿದವರಲ್ಲಿ ಪೂನಾದವರು ಮೊದಲಿಗರು. ಮತ್ತು ಈಗ ಇವರು ಸಹಾಯ ಕೇಳಲು ಬಂದಿದ್ದಾರೆ. ಆದರೆ, ಅವರ ಮಾತುಗಳನ್ನ ನಂಬುವ ಹಾಗಿಲ್ಲ. ಈ ಹಂತದಲ್ಲಿ ಎಚ್ಚರಾಗಿ ಎದ್ದು ಕುಳಿತೆ.

***

ಕನಸು 22

ಅಸಾಧಾರಣ ಮೂರ್ತಿಗಳು, ಪ್ರತಿಮೆ, ಶಿಲ್ಪ

ಹಿರಾಸತ್ ವರ್ಷದ ಝಕಾರಿ ತಿಂಗಳಿನ 8ನೇ ದಿನ, ಮಂಗಳವಾರ ರಾತ್ರಿ, ಮರುದಿನ ಬುಧವಾರ ಇತ್ತು. ಅದು ಮುಹಮ್ಮದ್ ಜನಿಸಿದ ದಿನದಿಂದ ಆರಂಭಿಸಿ 1224ನೇ ವರ್ಷದ ಜಮಾದಿ-ಉಲ್ ಥಾನಿಯ 7ನೇ ದಿನಕ್ಕೆ ಸಮನಾಗುತ್ತದೆ. ಬೆಳಗಿನ ಜಾವ ಈ ಕನಸು ಕಂಡೆ. ಅಲ್ಲೊಂದು ಬೃಹತ್ ದೇವಾಲಯ ಕಾಣಿಸಿತು. ಅದರ ಹಿಂಭಾಗ ಸ್ವಲ್ಪ ಮಟ್ಟಿಗೆ ಧಕ್ಕೆಗೆ ಒಳಗಾಗಿತ್ತು. ಅದರಲ್ಲಿ ಹಲವು ದೊಡ್ಡಗಾತ್ರದ ಪ್ರತಿಮೆಗಳಿದ್ದವು. ನಾನು ಹಲವು ಜನರೊಡನೆ ಸೇರಿ ದೇವಾಲಯದೊಳಕ್ಕೆ ಹೋದೆ. ಪ್ರತಿಮೆಗಳು ಮನುಷ್ಯರ ಹಾಗೆ ನೋಡುತ್ತಿರುವ ಹಾಗೆ ಅವುಗಳ ಕಣ್ಣುಗಳು ಅಲುಗಾಡುತ್ತಿರುವುದನ್ನು ಗಮನಿಸಿದೆವು. ಪ್ರತಿಮೆಗಳ ಕಣ್ಣುಗಳು ಜೀವಂತ ಇರುವವರಂತೆ ಅಲುಗಾಡುವುದ ನೋಡಿದೆ, ಅದೇಕೆ ಹಾಗಿರಬಹುದು ಎಂದು ಅಚ್ಚರಿಯಾಯಿತು. ಆಗ ನಾನು ಅವುಗಳ ಸಮೀಪ ಹೋದೆ. ಕೊನೆಯ ಸಾಲಿನಲ್ಲಿ ಎರಡು ಸ್ತ್ರೀಪ್ರತಿಮೆಗಳಿದ್ದವು. ಆ ಎರಡರ ಪೈಕಿ ಒಂದು ಪ್ರತಿಮೆಯ ಸೀರೆ ಉಟ್ಟ ಕಾಲುಗಳು ಕಾಣಿಸಿದವು. ಅದರಿಂದ ಇಬ್ಬರು ಮಹಿಳೆಯರು ಉಳಿದೆಲ್ಲ ಪ್ರತಿಮೆಗಳು ಪುರುಷರು ಮತ್ತು ಇತರ ವಸ್ತುಗಳು ಎಂದು ಗೊತ್ತಾಯಿತು. ಅವಳು ಹೇಳಿದಳು, ತಾವು ದೀರ್ಘಕಾಲದಿಂದ ದೇವರ ಹತ್ತಿರ ಪ್ರಾರ್ಥಿಸುತ್ತಿದ್ದೇವೆ ಮತ್ತು ಪ್ರತಿಯೊಬ್ಬರೂ ನಮ್ಮನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ. ನಾನು ಅವಳಿಗೆ ಹೇಳಿದೆ “ಒಳ್ಳೆಯದಾಯಿತು. ನಿಮ್ಮಷ್ಟಕ್ಕೆ ನೀವು ದೇವರ ಸ್ಮರಣೆಯನ್ನು ಮುಂದುವರಿಸಿರಿ”. ಹಾಗೆ ಹೇಳಿದ ಮೇಲೆ ಕಟ್ಟಡದ ಶಿಥಿಲಗೊಂಡ ಭಾಗವನ್ನು ದುರಸ್ತಿ ಮಾಡುವಂತೆ ಆದೇಶಿಸಿದೆ. ಈ ಮಧ್ಯೆ ನನಗೆ ಎಚ್ಚರವಾಯಿತು.

(1785ರಿಂದ 1798ರ ಅವಧಿಯಲ್ಲಿ ಟಿಪ್ಪು ಸುಲ್ತಾನ ದಾಖಲಿಸಿದ 37 ಕನಸುಗಳನ್ನು ಇಂಗ್ಲಿಷ್‌ನಲ್ಲಿ ’ದ ಬುಕ್ ಆಫ್ ಡ್ರೀಮ್ಸ್’ ಎಂದು ಪ್ರಕಟಿಸಲಾಗಿದೆ. ಬ್ರಿಟಿಷರು, ನಿಜಾಮ, ಮರಾಠರನ್ನು ಯುದ್ಧದಲ್ಲಿ ಸೋಲಿಸುವ ಬಗ್ಗೆ ಹಾಗೂ ಇನ್ನೂ ಹಲವು ವಿಷಯಗಳ ಬಗ್ಗೆ ಟಿಪ್ಪುವಿನ ಸುಪ್ತಮನಸ್ಸಿನ ದಾಖಲೆಗಳಿವು. ಈ ಕನಸುಗಳನ್ನು ಕನ್ನಡಕ್ಕೆ ದೇವು ಪತ್ತಾರ ದೀರ್ಘ ಪ್ರಸ್ತಾವನೆಯೊಂದಿಗೆ ಅನುವಾದಿಸಿದ್ದಾರೆ. ಗೌರಿ ಮೀಡಿಯಾ ಟ್ರಸ್ಟ್ ಇದನ್ನು ಡಿಸೆಂಬರ್ ತಿಂಗಳಿನಲ್ಲಿ ಪ್ರಕಟಿಸಲಿದೆ.)

ದೇವು ಪತ್ತಾರ

(ಕನ್ನಡಕ್ಕೆ): ದೇವು ಪತ್ತಾರ
ಹಿರಿಯ ಪತ್ರಕರ್ತರು. ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ, ಮಹಾದೇವ ಬಾಬಾ ಮೆಡೋಸ್ ಟೇಲರ್(ಸಂಪಾದಿತ), ಈಗ ಹೀಗಿರುವ ಲೋಕದಲ್ಲಿ (ವ್ಯಕ್ತಿಚಿತ್ರ), ಬಹಮನಿ ಸಾಮ್ರಾಜ್ಯ ಅವರ ಪ್ರಕಟಿತ ಕೃತಿಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...