Homeಮುಖಪುಟಟಿಪ್ಪು ಸುಲ್ತಾನರ ಬಲವಂತದ ಮತಾಂತರ ಚರ್ಚೆಯೊಳಗಿನ ವಾಸ್ತವಗಳು!

ಟಿಪ್ಪು ಸುಲ್ತಾನರ ಬಲವಂತದ ಮತಾಂತರ ಚರ್ಚೆಯೊಳಗಿನ ವಾಸ್ತವಗಳು!

ಮನಸಾರೆ ಒಪ್ಪಿಕೊಳ್ಳದಿದ್ದರೆ ಆತ ಮುಸ್ಲಿಂ ಆಗಲು ಸಾಧ್ಯವೇ ಇಲ್ಲ ಎಂಬ ವಿಚಾರ ಇಸ್ಲಾಮಿನ ಬಗ್ಗೆ ಪ್ರಾಥಮಿಕ ಜ್ಞಾನವಿರುವರಿಗೆ ನಿಲುಕುವ ಸರಳ ತರ್ಕ. ಇದು ಟಿಪ್ಪು ಸುಲ್ತಾನ್‌ಗೆ ತಿಳಿದಿರಲಿಲ್ಲವೇ?

- Advertisement -
- Advertisement -

ಟಿಪ್ಪು ಸುಲ್ತಾನರ ಮೇಲೆ ಬಲವಂತದ ಮತಾಂತರದ ಆರೋಪ ಇಂದು ನಿನ್ನೆಯದಲ್ಲ. ಅಂತೆಯೇ ಅದನ್ನು ನಿರಾಕರಿಸುವ ಎಡಪಂಥೀಯ ಒಲವಿನ ಮತ್ತು ಯಾವುದೇ ಪಂಥಗಳ ಸಂಕೋಲೆಯೊಳಗೆ ಬಂಧಿಯಾಗದ ಇತಿಹಾಸಕಾರರ ಪ್ರತಿಪಾದನೆಯೂ ಇಂದು ನಿನ್ನೆಯದಲ್ಲ. ವಸಾಹತುಶಾಹಿ ಪರ ಇತಿಹಾಸಕಾರರ ಸುಳ್ಳಾರೋಪಗಳಿಗೆ ಅವರದ್ದೇ ವಸಾಹತು ಪ್ರಭುಗಳ ಜನಗಣತಿಯ ಆಧಾರಗಳನ್ನನ್ನುಸರಿಸಿ ಹಲವು ಇತಿಹಾಸಕಾರರು ದಾಖಲೆಗಳನ್ನು ನೀಡಿದ್ದಾರೆ. ಅವುಗಳೆಲ್ಲವೂ ಜನಸಾಮಾನ್ಯರ ಆಲೋಚನೆಗಳಿಗೆ ಸರಳವಾಗಿ ನಿಲುಕುವಂತಹವುಗಳು. ಅಲ್ಲೆಲ್ಲೂ ಇತಿಹಾಸ ಮಂಡನೆಯ ನಿರ್ದಿಷ್ಟ ಸಿದ್ಧಾಂತದ ಭಾರವೂ ಇಲ್ಲ. ಅವುಗಳ ಮೇಲೊಂದು ಪಕ್ಷಿ ನೋಟ ಬೀರುವ ಪ್ರಯತ್ನ ಮಾಡುತ್ತೇನೆ.

ಮಾರ್ಕ್ ವಿಲ್ಕ್ಸ್ ಎಂಬ ವಸಾಹತುಶಾಹಿಗಳ ಇತಿಹಾಸಕಾರ ತನ್ನ “Sketches of South Indian history” ಎಂಬ ಗ್ರಂಥದಲ್ಲಿ ‘ಟಿಪ್ಪು ಸುಲ್ತಾನ್ ಕೊಡಗಿನಲ್ಲಿ 70,000 ಹಿಂದೂಗಳನ್ನು ಇಸ್ಲಾಮಿಗೆ ಮತಾಂತರಿಸಿದ” ಎಂದು ಆಪಾದಿಸಿದ್ದಾನೆ. ಬಿ.ಎಲ್.ರೈಸ್ ಎಂಬ ಇನ್ನೋರ್ವ ವಸಾಹತುಶಾಹಿ ಪರ ಇತಿಹಾಸಕಾರ Mysore Gazzetiar ಒಂದರಲ್ಲಿ ಟಿಪ್ಪು ಸುಲ್ತಾನ್ ಕೊಡಗಿನಲ್ಲಿ‌85,000 ಜನರನ್ನು ಇಸ್ಲಾಂಗೆ ಮತಾಂತರಿಸಿದ” ಎಂದು ಆರೋಪಿಸಿದ್ದಾನೆ. ಇಲ್ಲೇ ಒಂದು ವ್ಯತ್ಯಾಸ ಗಮನಿಸಿ. ಇವರೀರ್ವರು ನೀಡುವ ಸಂಖ್ಯೆಗಳಲ್ಲಿ ‌15,000ದಷ್ಟು ಬೃಹತ್ ಅಂತರವಿದೆ. ಟಿಪ್ಪು ಹುತಾತ್ಮರಾಗಿದ್ದು 1799ರಲ್ಲಿ. 1836ರಲ್ಲಿ ಅಂದರೆ ಟಿಪ್ಪು ಹುತಾತ್ಮರಾಗಿ 37ವರ್ಷಗಳ ಬಳಿಕ ಬ್ರಿಟಿಷ್ ವಸಾಹತುಶಾಹಿ ಪ್ರಭುಗಳೇ ನಡೆಸಿದ ಜನಗಣತಿಯ ಪ್ರಕಾರ ಕೊಡಗಿನ ಒಟ್ಟು ಜನಸಂಖ್ಯೆ 65,437 ಮಾತ್ರ. 37‌ ವರ್ಷಗಳ ಹಿಂದೆ ಸಹಜವಾಗಿಯೇ ಜನಸಂಖ್ಯೆ ಕಡಿಮೆಯಿರುತ್ತದೆಯೇ ಹೊರತು ಹೆಚ್ಚಿರುವುದಿಲ್ಲ. ಇರುವ ಒಟ್ಟು ಜನಸಂಖ್ಯೆಗಿಂತ ಹೆಚ್ಚು ಜನರನ್ನು ಹೇಗೆ ಮತಾಂತರಿಸಲು ಸಾಧ್ಯ..? ವಾದಕ್ಕೆ ಅಷ್ಟೂ ಸಂಖ್ಯೆಯ ಜನರನ್ನು ಟಿಪ್ಪು ಮತಾಂತರಿಸಿದ್ದರೆಂದೇ ಇಟ್ಟುಕೊಳ್ಳೋಣ. ಟಿಪ್ಪುವಿನ ಆಡಳಿತ 1799 ಮೇ ನಾಲ್ಕರಂದು ಟಿಪ್ಪು ಹುತಾತ್ಮರಾಗುವುದರೊಂದಿಗೆ ಮುಗಿಯುತ್ತದೆ. ಬಲಾತ್ಕಾರದಿಂದ ಮತಾಂತರಕ್ಕೊಳಪಟ್ಟವರು ಆ ಬಳಿಕ ಅಂದರೆ ಓರ್ವ ಹಿಂದೂ ಅರಸನ ಕಾಲದಲ್ಲಿ ಮರು ಮತಾಂತರವಾಗಬಹುದಿತ್ತಲ್ವಾ..? ಹಾಗೆ ಸಾಮೂಹಿಕವಾಗಿ ಮರು ಮತಾಂತರಗೊಂಡ ಏಕೈಕ ನಿದರ್ಶನವನ್ನಾದರೂ ಇಂದು ಟಿಪ್ಪುವಿನ ಮೇಲೆ ಮತಾಂತರದ ಆರೋಪ ಹೊರಿಸುವವರು ತೋರಿಸಲಿ.

ಇನ್ನು ಮಂಗಳೂರು ಕ್ರೈಸ್ತರ ಮತಾಂತರದ ಕುರಿತಂತೆ ನೋಡೋಣ. ಫಾದರ್ ಮಿರಾಂಡ ಎಂಬವರು “ಟಿಪ್ಪು 60,000 ಕ್ರೈಸ್ತರನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರಿಸಿದ” ಎಂದು ಆಪಾದಿಸುತ್ತಾರೆ. ಇನ್ನೊಂದೆಡೆ ಆತ ಹೀಗೆ ಆಪಾದಿಸುತ್ತಾರೆ. “ಟಿಪ್ಪು 40,000 ಕ್ರೈಸ್ತರನ್ನು ಮಂಗಳೂರಿನಿಂದ ಮೈಸೂರಿಗೆ ಕೊಂಡೊಯ್ದು ಮತಾಂತರಿಸಿದ್ದಾನೆ. ಅವರಲ್ಲಿ 15,000 ಕ್ರೈಸ್ತರು ಮಂಗಳೂರಿಗೆ ವಾಪಾಸು ಬಂದಿದ್ದಾರೆ.”
1894 ರಲ್ಲಿ ಬ್ರಿಟಿಷ್ ವಸಾಹತುಶಾಹಿಗಳೇ ರಚಿಸಿದ Madras Manual ಎಂಬ ಗ್ರಂಥದ South Canada gazattier ಎಂಬ ಉಪಶೀರ್ಷಿಕೆಯಡಿ 1890ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು ಜನಸಂಖ್ಯೆ 70,000 ಎಂದು ದಾಖಲಿಸಲಾಗಿದೆ. ಹಾಗಿದ್ದರೆ ಸುಮಾರು ನೂರು ವರ್ಷಗಳ ಹಿಂದೆ ಮಂಗಳೂರಿನ ಒಟ್ಟು ಜನಸಂಖ್ಯೆ ಎಷ್ಟಿದ್ದಿರಬಹುದು..? ಅದರಲ್ಲಿ ಕ್ರೈಸ್ತರು ಎಷ್ಟಿದ್ದಿರಬಹುದು ಎಂದು ಊಹಿಸಿ ನೋಡಿ. ಟಿಪ್ಪುವಿನ ಕಾಲಾನಂತರ ಮಂಗಳೂರಿನಲ್ಲೂ ಕೂಡಾ ಕ್ರೈಸ್ತ ಧರ್ಮಕ್ಕೆ ಮರು ಮತಾಂತರಗೊಂಡ ಏಕೈಕ ನಿದರ್ಶನವಿಲ್ಲ.

ಇನ್ನೊಂದು ಸರಳ ತರ್ಕ ನೋಡೋಣ. ಓರ್ವ ಮುಸ್ಲಿಮೇತರ ಇಸ್ಲಾಮ್‌ಗೆ ಮತಾಂತರವಾಗಬೇಕೆಂದರೆ ಆತ ವಾಚಾ ಮತ್ತು ಮನಸಾ “ಅಶ್‌ಹದು ಅಲ್ಲಾಇ‌ಲಾಹ ಇಲ್ಲಲ್ಲಾಹ್,ವ‌ಅಶ್‌ಹದು ಅನ್ನ ಮುಹಮ್ಮದರ್ರಸೂಲುಲ್ಲಾಹ್” (ಅಲ್ಲಾಹನಲ್ಲದೇ ಅನ್ಯ ಆರಾಧ್ಯರಿಲ್ಲ, ಮುಹಮ್ಮದ್ (ಸ)ರು ಅಲ್ಲಾಹನ ಸಂದೇಶವಾಹಕರು) ಎಂದು ಮನಸಾರೆ ಒಪ್ಪಿ ಪ್ರತಿಜ್ಞೆ‌ಗೈಯಬೇಕು. ಒಬ್ಬ ವ್ಯಕ್ತಿ ಜೀವಭಯದಿಂದ ಬಾಯಲ್ಲಿ ಉಚ್ಚರಿಸಬಹುದೇ ಹೊರತು ಮನಸಾರೆ ಒಪ್ಪಿಕೊಳ್ಳಲಾರ. ಮನಸಾರೆ ಒಪ್ಪಿಕೊಳ್ಳದಿದ್ದರೆ ಆತ ಮುಸ್ಲಿಂ ಆಗಲು ಸಾಧ್ಯವೇ ಇಲ್ಲ ಎಂಬ ವಿಚಾರ ಇಸ್ಲಾಮಿನ ಬಗ್ಗೆ ಪ್ರಾಥಮಿಕ ಜ್ಞಾನವಿರುವರಿಗೆ ನಿಲುಕುವ ಸರಳ ತರ್ಕ. ಇಂತಹ ಸರಳ ತರ್ಕವನ್ನು ಅರಿಯದಷ್ಟು ಹುಂಬರೇ ಟಿಪ್ಪು ಸುಲ್ತಾನ್…?

ಟಿಪ್ಪು ಸುಲ್ತಾನರ ಮೇಲೆ ಚಿದಾನಂದಮೂರ್ತಿಯಾದಿಯಾಗಿ ಕೆಲವು ಮರಿ ಸಂಶೋಧಕರು 7,900 ದೇವಸ್ಥಾನಗಳ ಧ್ವಂಸದ ಆರೋಪವನ್ನು ಹೊರಿಸುತ್ತಾ ಬಂದಿದ್ದಾರೆ. ಸುಮ್ಮನೆ ಒಂದು ಸರಳ ತರ್ಕ ನೋಡೋಣ. ಟಿಪ್ಪುವಿನ ಒಟ್ಟು ಆಡಳಿತಾವಧಿ 17 ವರ್ಷಗಳು. ಅಂದರೆ 365×17= 6205 ದಿನಗಳು. ದಿನಕ್ಕೊಂದು ದೇವಸ್ಥಾನ ಧ್ವಂಸಗೈದರೂ‌ 6205 ದೇವಸ್ಥಾನಗಳಾಗುತ್ತವೆ. ಹಾಗಾದರೆ ಉಳಿದ 1695 ದೇವಾಲಯಗಳನ್ನು ಯಾರು ನಾಶಪಡಿಸಿದರು..? ಟಿಪ್ಪುವಿಗೆ ದೇವಾಲಯ ನಾಶಪಡಿಸುವುದೊಂದೇ ಕೆಲಸವಿದ್ದುದೇ..? ಬೇರೇನೂ ಕೆಲಸವೇ ಇರಲಿಲ್ಲವೇ..? ಟಿಪ್ಪು ಬ್ರಿಟಿಷರ ವಿರುದ್ಧ ನಾಲ್ಕು ಯುದ್ಧ ಮಾಡಿದ್ದು., ಮರಾಠಾ, ನಿಝಾಮ ಮುಂತಾದವರೊಂದಿಗೆ ಯುದ್ಧ,ದಂಗೆ ಎದ್ದ ರಾಜದ್ರೋಹಿಗಳನ್ನು ನಿಯಂತ್ರಣಕ್ಕೆ ತಂದದ್ದು, ಅಸಂಖ್ಯ ಅಭಿವೃದ್ದಿ, ಜನಕಲ್ಯಾಣ , ಕೈಗಾರಿಕೆ, ಕೃಷಿ ಯೋಜನೆ ಇತ್ಯಾದಿಗಳನ್ನು ಮಾಡಿದ್ದು, ಕುಟುಂಬದೊಂದಿಗೆ ಕಳೆದಿದ್ದು, ಆಡಳಿತ ನಡೆಸಿದ್ದೆಲ್ಲಾ ಯಾವಾಗ..? ಬಲ್ಲವರು ತಿಳಿಸುವರೇ…?

  • ಇಸ್ಮತ್ ಪಜೀರ್

ಇದನ್ನೂ ಓದಿ: ಟಿಪ್ಪು ಜನ್ಮ ದಿನಾಚರಣೆ: ಮೈಸೂರು ಹುಲಿ ಟಿಪ್ಪುವಿನ ಪುಸ್ತಕ ಪ್ರೇಮ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...