Homeಕರ್ನಾಟಕಟಿಪ್ಪು ಜನ್ಮ ದಿನಾಚರಣೆ: ಮೈಸೂರು ಹುಲಿ ಟಿಪ್ಪುವಿನ ಪುಸ್ತಕ ಪ್ರೇಮ!

ಟಿಪ್ಪು ಜನ್ಮ ದಿನಾಚರಣೆ: ಮೈಸೂರು ಹುಲಿ ಟಿಪ್ಪುವಿನ ಪುಸ್ತಕ ಪ್ರೇಮ!

ಕೇಂದ್ರ ಗ್ರಂಥ ಭಂಡಾರವಲ್ಲದೇ ರಾಜ್ಯದ ವಿವಿಧೆಡೆ ಚಿಕ್ಕ ಪುಸ್ತಕ ಭಂಡಾರಗಳನ್ನೂ ಟಿಪ್ಪು ಸ್ಥಾಪಿಸಿದ್ದರು. ಓದುವುದು ಉಸಿರಾಡುವಷ್ಟೇ ಸುಲಭವಾಗಿರಬೇಕು ಎಂದು ಟಿಪ್ಪು ಪ್ರತಿಪಾದಿಸುತ್ತಿದ್ದರು.

- Advertisement -
- Advertisement -

ಮೈಸೂರು ಹುಲಿ ಟಿಪ್ಪುವಿನ ಮದುವೆಗೆ ಮುಂಚೆ ತಂದೆ ಹೈದರ್ ಅಲಿ, ಮಗನೇ ನನ್ನದೆಲ್ಲವೂ ನಿನ್ನದೇ ಆದರೂ ನಿನ್ನ ಮದುವೆಯ ಸಂದರ್ಭದಲ್ಲಿ ನಿನ್ನ ಖುಷಿಯನ್ನು ಇಮ್ಮಡಿಗೊಳಿಸಲು ನಿನಗೇನಾದರೂ ಕೊಡಬೇಕೆಂದಿದ್ದೇನೆ ಎಂದು ಟಿಪ್ಪುವಿನಲ್ಲಿ ಕೇಳಿದರು. ಅದಕ್ಕೆ ಟಿಪ್ಪು ನೀವು ಈಗಾಗಲೇ ಬಹಳಷ್ಟನ್ನು ಕೊಟ್ಟಿದ್ದೀರಿ, ನನಗೆ ಇನ್ನೇನು ಬೇಡ ಎಂದಾಗ ಅಪ್ಪ ಹೈದರ್ ಪಟ್ಟು ಬಿಡದೇ ಒತ್ತಾಯಿಸಿದರು.

ತಂದೆಯ ಒತ್ತಾಯಕ್ಕೆ ಮಣಿದ ಟಿಪ್ಪು, ಹಾಗಾದರೆ ನನಗೊಂದು ಗ್ರಂಥ ಭಂಡಾರ ನಿರ್ಮಿಸಿ ಕೊಡಿ ಎಂದರು. ಅನಕ್ಷರಸ್ಥರಾಗಿದ್ದ ಹೈದರ್ ಅಲಿಗೆ ಸೋಜಿಗವೆನಿಸಿತ್ತು. ಅವರಿಗೆ ಲೆಕ್ಕ ಮಾತ್ರ ಗೊತ್ತಿತ್ತು. ಲೆಕ್ಕ ಬರೆದಿಡುವ ಪುಸ್ತಕಗಳ ಮಹತ್ವ ಮಾತ್ರ ತಿಳಿದಿತ್ತು. ಅದರಲ್ಲೂ ಬರಬೇಕಾಗಿದ್ದ ತೆರಿಗೆಗಳ ವಿವರಗಳಿದ್ದ ಪುಸ್ತಕಗಳ ಪ್ರಾಶಸ್ತ್ಯ ಮಾತ್ರ ತಿಳಿದಿತ್ತು. ಖುರಾನ್, ಗೀತಾ, ತಾಲ್ಮಡ್, ಬೈಬಲ್, ಗುರು ಗ್ರಂಥ್ ಸಾಹಿಬ್ ಮುಂತಾದ ಪವಿತ್ರ ಗ್ರಂಥಗಳನ್ನು ಓದುತ್ತಿದ್ದವರನ್ನು ಹೈದರ್ ಅಲಿ ಗೌರವಿಸುತ್ತಿದ್ದರು. ಅಂತಹ ಪುಸ್ತಕಗಳು ಮನುಷ್ಯ ಕೆಡುಕು ಮಾಡುವುದರಿಂದ ದೂರವಿರಿಸುತ್ತದೆಂದು ಹೈದರ್ ನಂಬಿದ್ದರು.

ಟಿಪ್ಪುವಿನ ಗುರುಗಳಾದ ಮೌಲವಿ ಉಬೇದುಲ್ಲಾ ಮತ್ತು ಗೋವರ್ಧನ ಪಂಡಿತರು ಟಿಪ್ಪುವಿಗೆ ಸಾಕಷ್ಟು ಪುಸ್ತಕಗಳನ್ನು ಉಡುಗೊರೆಯಾಗಿ ಕೊಟ್ಟು ಹೋಗಿದ್ದರು. ಟಿಪ್ಪುವಿನ ದೊಡ್ಡ ಅಭ್ಯಾಸದ ಕೋಣೆಯ ತುಂಬಾ ಪುಸ್ತಕಗಳೇ ತುಂಬಿದ್ದವು. ಟಿಪ್ಪು ಇನ್ನೂ ಪುಸ್ತಕಗಳು ಬೇಕೆನ್ನುವುದಾದರೆ ಹೈದರ್ ಬೇಡವೆನ್ನಲಾರರು.
ಹೈದರ್ ರಾಜ್ಯದಲ್ಲಿರುವ ಎಲ್ಲಾ ಪುಸ್ತಕಗಳನ್ನು ಖರೀದಿಸಿ ಟಿಪ್ಪುವಿಗೆ ಕೊಡಲು ಪ್ರಧಾನಿ ಪೂರ್ಣಯ್ಯನಿಗೆ ಆಜ್ಞೆ ಮಾಡಿದರು. ಟಿಪ್ಪು ತನ್ನ ಮನಸ್ಸಿನಲ್ಲಿರುವ ದೊಡ್ಡ ಯೋಜನೆಯನ್ನು ಹೇಳಿದರು.

ಟಿಪ್ಪು ಸುಲ್ತಾನ್, ನಾನು ಎಲ್ಲಾ ಸಂಸ್ಕೃತಿಗಳ, ಎಲ್ಲಾ ರಾಷ್ಟ್ರಗಳ ಪುಸ್ತಕಗಳನ್ನು ಸಂಗ್ರಹಿಸಬೇಕೆಂದಿದ್ದೇನೆ ಎಂದು ತಂದೆಯ ಬಳಿ ಹೇಳಿದ್ದರು. ಆಗ ನಿನ್ನ ಕುರಿತೂ ಮುಂದೊಂದು ದಿನ ಜನರು ಓದಬಹುದು ಎಂದು ಹೈದರ್ ಭವಿಷ್ಯ ನುಡಿದಿದ್ದರು. ಜೊತೆಗೆ ಬೇರೆ ದೇಶಗಳ ಪುಸ್ತಕಗಳು ಬೇರೆ ಭಾಷೆಯಲ್ಲಿರುತ್ತವಲ್ಲವೇ ಎಂದು ಹೈದರ್ ಪ್ರಶ್ನಿಸಿದರು. ಅವುಗಳನ್ನು ಭಾಷಾಂತರ ಮಾಡಿಸಬೇಕು ಎಂದು ಟಿಪ್ಪು ಹೇಳಿದರು.

ಇದನ್ನೂ ಓದಿ: ವೀರ ಹೋರಾಟಗಾರ ’ಮೈಸೂರು ಹುಲಿ’ ಟಿಪ್ಪು ಸುಲ್ತಾನ್ ಈ ನೆಲದ ಮಗ: ವಿಧಾನ ಪರಿಷತ್‌ ಬಿಜೆಪಿ ಸದಸ್ಯ

ಟಿಪ್ಪುವಿಗೆ ಪರ್ಷಿಯನ್ ಭಾಷೆ ತುಂಬಾ ಚೆನ್ನಾಗಿ ಗೊತ್ತಿತ್ತು. ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳನ್ನೂ ಟಿಪ್ಪು ಅಭ್ಯಾಸ ಮಾಡಿದ್ದರಾದರೂ ಅವುಗಳ ಮೇಲೆ ಹಿಡಿತ ಸಾಧಿಸಲಾಗಿರಲಿಲ್ಲ. ಟಿಪ್ಪುವಿಗೆ ಕನ್ನಡ, ಹಿಂದಿ ಮತ್ತು ಉರ್ದುವಲ್ಲದೇ ಅಲ್ಪ ಸ್ವಲ್ಪ ಮಲಯಾಳಂ ಮತ್ತು ತಮಿಳು ಗೊತ್ತಿತ್ತು.

ದಿವಾನ್ ಪೂರ್ಣಯ್ಯನವರ ಉಸ್ತುವಾರಿಯಲ್ಲಿ ಹೈದರ್ ಅಲಿಯ ಆಜ್ಞೆ ಮೇರೆಗೆ ಟಿಪ್ಪುವಿಗಾಗಿ ಸ್ಥಾಪಿಸಿದ ಗ್ರಂಥಾಲಯಕ್ಕೆ ನೂರುಲ್ ಅಮೀನ್ ಎಂಬವನನ್ನು ಮುಖ್ಯ ಗ್ರಂಥಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಅವರ ಸಹಾಯಕ ಗ್ರಂಥಾಧಿಕಾರಿಗಳು, ಪುಸ್ತಕ ಪಟ್ಟಿ ತಯಾರಕರು, ಸಂಶೋಧನಾ ಸಹಾಯಕರು, ಪರಿಶೀಲಕರು ಮುಂತಾದ ಹುದ್ದೆಗಳಿಗೆ ದೇಶ ವಿದೇಶಗಳ ವಿಷಯ ತಜ್ಞರನ್ನು ನೇಮಿಸಲಾಗಿತ್ತು. ಫ್ರೆಂಚ್, ಜರ್ಮನ್, ಇಂಗ್ಲಿಷ್, ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳ ಅನುವಾದಕರನ್ನೂ ನೇಮಿಸಲಾಗಿತ್ತು.

ಕೇಂದ್ರ ಗ್ರಂಥ ಭಂಡಾರವಲ್ಲದೇ ರಾಜ್ಯದ ವಿವಿಧೆಡೆ ಚಿಕ್ಕ ಪುಸ್ತಕ ಭಂಡಾರಗಳನ್ನೂ ಟಿಪ್ಪು ಸ್ಥಾಪಿಸಿದ್ದರು. ಓದುವುದು ಉಸಿರಾಡುವಷ್ಟೇ ಸುಲಭವಾಗಿರಬೇಕು ಎಂದು ಟಿಪ್ಪು ಪ್ರತಿಪಾದಿಸುತ್ತಿದ್ದರು. ಆ ಕಾಲದಲ್ಲೇ ಗ್ರಂಥ ಭಂಡಾರಗಳಿಗೆ ಹೋಗಿ ಓದಲು ಬಾಲಕ-ಬಾಲಕಿಯರಿಗೆ ಪ್ರೋತ್ಸಾಹ ನೀಡಬೇಕೆಂದು ಟಿಪ್ಪು ಆದೇಶಿಸಿದ್ದರು.
ಟಿಪ್ಪುವಿನ ಗ್ರಂಥಾಲಯದಲ್ಲಿ ಖಗೋಳ ಶಾಸ್ತ್ರ, ವೈದ್ಯಶಾಸ್ತ್ರ, ಕಲೆ, ತತ್ವಶಾಸ್ತ್ರ, ತಸವ್ವುಫ್ (ಸೂಫಿ ತತ್ವಜ್ಞಾನದ ಗ್ರಂಥಗಳು), ಆಧ್ಯಾತ, ಕಾನೂನು, ಖುರ್‌ಆನ್ ವ್ಯಾಖ್ಯಾನ ಗ್ರಂಥಗಳೆಲ್ಲಾ ಇದ್ದವು. ಕನ್ನಡ, ಉರ್ದು, ಪರ್ಶ್ಯನ್, ಫ್ರೆಂಚ್, ತುರ್ಕಿ, ದಖನಿ ಜರ್ಮನ್, ಇಂಗ್ಲೀಷ್, ಸಂಸ್ಕೃತ, ಅರಬಿಕ್ ಹೀಗೆ ಜಗತ್ತಿನ ಹಲವು ಭಾಷೆಗಳ ಗ್ರಂಥಗಳು ಗ್ರಂಥಾಲಯದಲ್ಲಿದ್ದವು.

ಟಿಪ್ಪು ತನ್ನ ಹದಿನೇಳು ವರ್ಷಗಳ ಆಡಳಿತಾವಧಿಯಲ್ಲಿ ನಲ್ವತ್ತೈದು ಗ್ರಂಥಗಳನ್ನು ಬರೆಸಿದ್ದರು. ಉರ್ದು, ತುರ್ಕಿ, ಪರ್ಶ್ಯನ್, ಅರೆಬಿಕ್, ದಖನಿ ಭಾಷೆಗಳ ನೂರ ತೊಂಬತ್ತು ಹಸ್ತಪ್ರತಿಗಳಿದ್ದವು. ಇತರೆಲ್ಲಾ ಭಾಷೆಗಳ ಎರಡು ಸಾವಿರಕ್ಕೂ ಮಿಕ್ಕಿದ ಗ್ರಂಥಗಳು ಟಿಪ್ಪುವಿನ ಗ್ರಂಥಾಲಯದಲ್ಲಿದ್ದವು.

ಟಿಪ್ಪುವಿನ ಗ್ರಂಥ ಭಂಡಾರಕ್ಕೆ ಪುಸ್ತಕಗಳನ್ನು ಆಯ್ಕೆ ಮಾಡಲು ವಿದ್ವಾಂಸರ ಸಲಹೆಗಳನ್ನು ಆಗಾಗ ಕೇಳಲಾಗುತ್ತಿತ್ತು. ಅಂತಹ ವಿದ್ವಾಂಸರಲ್ಲಿ ಬಹುಮುಖ ಪ್ರತಿಭೆಯ ಫ್ರೆಂಚ್ ವಿದ್ವಾಂಸ ಫಿಯರಿ ಕೆರನ್ ಡ ಬ್ಯೂಮಾರ್ಕೆಸ್ ಕೂಡಾ ಒಬ್ಬನಾಗಿದ್ದ. ಆತ ಸುಪ್ರಸಿದ್ಧ ಬಾರ್ಬರ್ ಆಫ್ ಸೆವಿಲೆ ಹಾಗೂ ಫಿಗಾರೋ ಎಂಬ ಗ್ರಂಥಗಳನ್ನು ಬರೆದಿದ್ದ. ಆತ ಫ್ರೆಂಚ್ ಸಂಸ್ಕೃತಿ, ಸಾಹಿತ್ಯ, ಕಲೆ ಮತ್ತು ತತ್ವಶಾಸ್ತ್ರಗಳ ಕುರಿತ ಶ್ರೇಷ್ಠ ಪುಸ್ತಕಗಳು ಟಿಪ್ಪುವಿನ ಗ್ರಂಥ ಭಂಡಾರ ಸೇರಲು ಕಾರಣಕರ್ತನಾಗಿದ್ದ.

ಬ್ಯೂಮಾರ್ಕೆಸ್ ಸೂಚಿಸಿದ ಪುಸ್ತಕಗಳಲ್ಲಿ ಟಿಪ್ಪುವಿನ ಮೇಲೆ ಅತ್ಯಂತ ಪ್ರಭಾವ ಬೀರಿದ ಗ್ರಂಥ ಥಾಮಸ್ ಜೆಪರ್ಸನ್ ಬರೆದಿದ್ದ ಅಮೆರಿಕಾ ಸ್ವಾತಂತ್ರ್ಯ ಘೋಷಣೆ. ಅದು ಮಾನವ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಕುರಿತ ಶ್ರೇಷ್ಠ ಕೃತಿಯಾಗಿತ್ತು. ಟಿಪ್ಪು ಅದನ್ನು ಆಗಾಗ ಓದುತ್ತಿದ್ದರು. ಅದು ಟಿಪ್ಪುವಿನ ಮನ ಕಲಕಿತ್ತು. ಅದು ಬ್ರಿಟಿಷರ ವಿರುದ್ಧದ ಅವರ ಹೋರಾಟದ ಕೆಚ್ಚನ್ನು ಇಮ್ಮಡಿಗೊಳಿಸಿತ್ತು.

ಇದನ್ನೂ ಓದಿ:ಟಿಪ್ಪು ಈ ದೇಶದ ಇತಿಹಾಸದ ಭಾಗ, ಪಠ್ಯದಿಂದ ಕೈಬಿಡುವುದು ಸರಿಯಲ್ಲ: ಡಿಕೆಶಿ

ಅಮೆರಿಕಾ ಸ್ವಾತಂತ್ರ್ಯ ಘೋಷಣೆ ಪುಸ್ತಕದ ಒಂದು ಅಂಶವು ಟಿಪ್ಪುವಿನ ವ್ಯಕ್ತಿತ್ವದ ಮೇಲೆಯೂ ಅಪಾರ ಪ್ರಭಾವ ಬೀರಿದ್ದನ್ನು ನಾವು ಟಿಪ್ಪುವಿನ ಮಾನವ ಹಕ್ಕುಗಳ ಪರ ಮತ್ತು ಮತೀಯ ಸೌಹಾರ್ದತೆಯ ಕಾನೂನಿನಲ್ಲಿ ಕಾಣಲು ಸಾಧ್ಯ.

ಟಿಪ್ಪುವಿನ ಮೇಲೆ ಅಪಾರ ಪ್ರಭಾವ ಬೀರಿದ ಥಾಮಸ್ ಜೆಫರ್ಸನ್ ಅವರ ಅಮೆರಿಕಾ ಸ್ವಾತಂತ್ರ್ಯ ಘೋಷಣೆ ಗ್ರಂಥದ ಆ ಪ್ಯಾರಾ ಇಂತಿದೆ. “ನಾವು ಈ ಸ್ವಯಂ ವೇದ್ಯ ಸತ್ಯಗಳನ್ನು ಎತ್ತಿ ಹಿಡಿಯುತ್ತೇವೆ. ಎಲ್ಲಾ ಮಾನವರು ಸಮಾನರಾಗಿಯೇ ಸೃಷ್ಟಿಯಾದವರು. ಅವರ ಸೃಷ್ಟಿಕರ್ತ ಅವರಿಗೆ ಅವರಿಂದ ಬೇರ್ಪಡಿಸಲಾಗದಂತಹ ಹಕ್ಕುಗಳನ್ನು ಕೊಟ್ಟಿದ್ದಾನೆ. ಆ ಹಕ್ಕುಗಳಲ್ಲಿ ಜೀವನ, ಸ್ವಾತಂತ್ರ್ಯ ಮತ್ತು ಸಂತೋಷದ ಅನ್ವೇಷಣೆಗಳೂ ಸೇರಿವೆ. ಈ ಹಕ್ಕುಗಳ ರಕ್ಷಣೆಗಾಗಿ ಪ್ರಜೆಗಳು ಸರ್ಕಾರವನ್ನು ರಚಿಸಿಕೊಳ್ಳುತ್ತಾರೆ. ಸರ್ಕಾರಗಳಿಗೆ ನ್ಯಾಯಬದ್ಧ ಅಧಿಕಾರ ದೊರಕುವುದು ಅವುಗಳ ಪ್ರಜೆಗಳ ಒಪ್ಪಿಗೆಯಿಂದಾಗಿದೆ. ಯಾವ ಸರ್ಕಾರವಾದರೂ ಈ ಉದ್ದೇಶಗಳಿಗೆ ಭಂಗ ತಂದರೆ ಆ ಸರ್ಕಾರವನ್ನು ಮಾರ್ಪಡಿಸುವ ಅಥವಾ ತೆಗೆದು ಹಾಕುವ ಅಧಿಕಾರ ಆ ಪ್ರಜೆಗಳಿಗೆ ಇದೆ. ಹಾಗೂ ತಮ್ಮ ಸುರಕ್ಷತೆ ಮತ್ತು ಸಂತೋಷಗಳನ್ನು ಕಾಪಾಡಬಹುದಾದಂತಹ ಸಿದ್ಧಾಂತಗಳ ತಳಹದಿಯ ಮೇಲೆ ಅಧಿಕಾರ ಬಳಸಿ ಕಾರ್ಯನಿರ್ವಹಿಸುವಂತಹ ಹೊಸ ಸರ್ಕಾರವನ್ನು ಅವರು ಸ್ಥಾಪಿಸಿಕೊಳ್ಳಬಹುದು”.

ಹಾಗೆಯೇ ದೇಶ ವಿದೇಶಗಳ ಅತ್ಯಂತ ಮೌಲ್ಯಯುತ ಪುಸ್ತಕಗಳನ್ನು ಟಿಪ್ಪು ಸಂಗ್ರಹಿಸಿದ್ದರು. ಅವರು ಅದೆಂತಹ ಪುಸ್ತಕ ಪ್ರೇಮಿಯಾಗಿದ್ದರೆಂದರೆ ಇವೇ ನನ್ನ ಸಂಪತ್ತು. ಈ ಸಂಪತ್ತು ಬೆಳ್ಳಿ-ಬಂಗಾರಗಳಿಗಿಂತಲೂ ಮೌಲ್ಯಯುತವಾದವುಗಳು ಮತ್ತು ಹೆಚ್ಚು ಶಾಶ್ವತವಾದವುಗಳು. ಇವುಗಳನ್ನು ಯಾರೂ ಕದಿಯಲಾರರು ಮತ್ತು ನಾಶಪಡಿಸಲಾರರು ಎಂದು ಮೈಸೂರು ಹುಲಿ ಹೇಳುತ್ತಿದ್ದರು.

ಆದರೆ ಅವರ ಲೆಕ್ಕಾಚಾರ ತಪ್ಪಾಗಿತ್ತು. ಬ್ರಿಟಿಷರು ಶ್ರೀರಂಗಪಟ್ಟಣವನ್ನು ಕೈ ವಶಪಡಿಸಿಕೊಂಡಾಗ ಮೊದಲು ದಾಳಿಗೀಡಾದವುಗಳಲ್ಲಿ ಟಿಪ್ಪುವಿನ ಗ್ರಂಥ ಭಂಡಾರವೂ ಒಂದಾಗಿತ್ತು. ಅವರು ಆ ಬಳಿಕ ಅಂದರೆ 1800ರಲ್ಲಿ ಟಿಪ್ಪುವಿನ ಗ್ರಂಥಾಲಯದಲ್ಲಿದ್ದ ಗ್ರಂಥಗಳನ್ನು ಕೊಲ್ಕತ್ತಾಗೆ ಸಾಗಿಸಿ, ಅಲ್ಲಿಂದ ಇಂಗ್ಲೆಂಡಿಗೆ ಕೊಂಡೊಯ್ದರು.

ಉರ್ದು ಭಾಷೆಯಲ್ಲಿ ಮೊಟ್ಟ ಮೊದಲು ಪತ್ರಿಕೆಯೊಂದನ್ನು ಹೊರತಂದವರು ಮೈಸೂರು ಹುಲಿ ಟಿಪ್ಪು ಸುಲ್ತಾನ್. ಅದೊಂದು ವಾರಪತ್ರಿಕೆಯಾಗಿತ್ತು. ಅದು ಟಿಪ್ಪುವಿನ ಸೇನಾ ಚಟುವಟಿಕೆಗಳ ಮುಖಾವಾಣಿಯಾಗಿತ್ತು. ಆ ವಾರಪತ್ರಿಕೆಯನ್ನು ಒಂದು ದೊಡ್ಡ ಹಾಳೆಯಲ್ಲಿ ಮುದ್ರಿಸಲಾಗುತ್ತಿತ್ತು. ಟಿಪ್ಪುವಿನ ಪತನದ ನಂತರ ಆ ಪತ್ರಿಕೆ ನಿಂತು ಹೋಯಿತು ಮತ್ತು ಬ್ರಿಟಿಷರು ಟಿಪ್ಪುವಿನ ಮುದ್ರಣಾಲಯವನ್ನು ನಾಶಪಡಿಸಿದರು.


ಇದನ್ನೂ ಓದಿ: ಆರ್‌.ಆರ್‌.ನಗರ- ಮೊದಲ ಹಂತದ ಎಣಿಕೆಯಲ್ಲಿ ಮುನಿರತ್ನಗೆ 3000 ಮತಗಳ ಮುನ್ನಡೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...