Homeಕರ್ನಾಟಕ1785ರಿಂದ 1798ರ ಅವಧಿಯ ಟಿಪ್ಪುವಿನ ಕನಸುಗಳು

1785ರಿಂದ 1798ರ ಅವಧಿಯ ಟಿಪ್ಪುವಿನ ಕನಸುಗಳು

- Advertisement -
- Advertisement -

ಕನಸು 1

ಮರಾಠ ಸೇನೆಯ ಮೂವರು ಅಧಿಕಾರಿಗಳು

ಚಂದ್ರಮಾನದ ಪ್ರಕಾರ ಮೊದಲ ’ಅಹ್ಮದಿ’ ತಿಂಗಳ ಗುರುವಾರ ರಾತ್ರಿ. ಹಿಜರಿಯ 1200 ದಾಲ್ವ್ ವರ್ಷದ ಆರಂಭದಲ್ಲಿ, ರಾತ್ರಿಯ ಮೂರು ಭಾಗ ಹಾಗೂ ಐದು ಪ್ರಹರಗಳು ಕಳೆದಿದ್ದವು. ಶಮ್ಸಾಬಾದ್‌ನಲ್ಲಿ ಇದ್ದಾಗ ನಾನು ಈ ಕನಸ ಕಂಡೆನು.

ಮರಾಠ ಸೈನ್ಯವು ಬಂದಂತೆ ನಾನು ಏಕಾಂಗಿಯಾಗಿ ಮುನ್ನುಗ್ಗಿ ಅದರ ಸೇನಾಧಿಪತಿಗಳ ಬಳಿ ಒಬ್ಬೊಬ್ಬರಾಗಿ ಹೋರಾಡುವ ಸವಾಲು ಹಾಕಿದಂತೆ ಕಾಣಿಸಿತು. ಆ ಸೈನ್ಯದ ಮುಸ್ಲಿಮ್ ಸೇನಾಧಿಕಾರಿ ನನ್ನನ್ನು ಎದುರಿಸಿ ನಿಂತ. ಸಮರಾಂಗಣದಲ್ಲಿ ಎರಡೂ ಸೈನ್ಯಗಳು ಮುಖಾಮುಖಿಯಾಗಿ ಕದನ ನಡೆಸುತ್ತಿರುವಾಗ ನನ್ನ ಖಡ್ಗದ ಒಂದೇ ಏಟಿಗೆ ಆ ಮುಸ್ಲಿಮ್ ಸೇನಾಧಿಪತಿಯನ್ನು ಕೊಂದೆನು. ಅದಾದ ನಂತರ ಸೈನ್ಯದ ನಾಯಕನಾಗಿದ್ದ ಯುವಕ ಅಲ್ಲಿಂದ ಕಾಲ್ಕಿತ್ತು ಓಡಿದ. ನಾನು ಅವನ ಬೆನ್ನಟ್ಟಿದೆ. ಮತ್ತು ಮುಖಾಮುಖಿಯಾಗಿ ಒಂದೇ ಹೊಡೆತಕ್ಕೆ ಅವನನ್ನು ಮುಗಿಸಿದೆ. ಅದೇ ರೀತಿಯಾಗಿ ಮೂರನೇ ಮುಖ್ಯ ಸೇನಾಧಿಪತಿಯನ್ನು ಕೊಂದುಹಾಕಿದೆ. ಮೂವರು ಸೇನಾಧಿಕಾರಿಗಳನ್ನೂ ತಲಾ ಒಂದೊಂದು ಏಟಿಗೆ ಮುಗಿಸಿ ಮರಳಿದೆ. ನನ್ನ ಸೈನ್ಯ ವಿಜಯಶಾಲಿಯಾಗಿ ಸಂಭ್ರಮದಲ್ಲಿತ್ತು.

ಆಗ ಕನಸಿನಲ್ಲಿ ನನ್ನ ಸೈನ್ಯದ ಎಲ್ಲ ಅಧಿಕಾರಿಗಳು ಹಾಗೂ ಹೈದರ್ ಸಾಹಿಬ್ ಅವರು ಮನೆಯಲ್ಲಿ ಊಟ ಮಾಡುತ್ತಿರುವಂತೆ ಕಂಡೆನು. ತುಂಬಾ ದಣಿದಿದ್ದ ನಾನು ಕುಡಿಯುವುದಕ್ಕಾಗಿ ನೀರು ಕೇಳಿದೆ. ಅಲ್ಲಿದ್ದವರು ನನಗೆ ಶುಭಾಶಯ ಕೋರಿದರು ಹಾಗೂ ಊಟ ಮಾಡಿದ ನಂತರ ನೀರು ಕುಡಿಯುವಂತೆ ಮನವಿ ಮಾಡಿದರು. ಈ ಮಧ್ಯೆ ದುರ್ಬಲನಾದ ಬಿಳಿಗಡ್ಡದ ಮುದುಕನೊಬ್ಬ ನನ್ನ ಮುಂದೆ ಕಾಣಿಸಿಕೊಂಡ. ಅವನ ಕೈಯಲ್ಲಿ ಕೆನೆ ಹಾಗೂ ಸಿಹಿಯಾದ ತಿಂಡಿಗಳಿದ್ದವು. ಅವನ್ನು ತೆಗೆದುಕೊಳ್ಳುವಂತೆ ಕೇಳಿದ. ಆ ಸಿಹಿ ತಿಂಡಿಗಳನ್ನು ಅವನಿಂದ ಪಡೆದು ತಿಂದ ನಂತರ ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ. “ಇಷ್ಟೊಂದು ಸ್ವಾದಿಷ್ಟ ಹಾಗೂ ರುಚಿಯಾದ ಆಹಾರ ಹಿಂದೆಂದೂ ತಿಂದಿರಲಿಲ್ಲ. ಅವು ಅತ್ಯಂತ ರುಚಿಕರವಾಗಿದ್ದವು.” ಸ್ನಾನ ಮಾಡಿ ಶುದ್ಧಿಯಾದ ನಂತರ ನನ್ನ ಅಧಿಕಾರಿಗಳ ಬಳಿ ವಿಚಾರಿಸಿದೆ. ಅವರು ಕಾಫಿರರ ಸೈನ್ಯವನ್ನು ನಾಶ ಮಾಡಿದ ಬಗ್ಗೆ; ಹೈದರಿ ಸೈನ್ಯದ ಅಧಿಕಾರಿಗಳು ಇಲ್ಲ ಎಂದು ಉತ್ತರಿಸಿದರು. ಮತ್ತು ಈ ವಿಷಯದಲ್ಲಿ ಅಂತಹ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹಾಗೂ ಅವರು ಸೂಕ್ತ ಆದೇಶಕ್ಕಾಗಿ ಕಾಯುತ್ತಿದ್ದುದಾಗಿ ತಿಳಿಸಿದರು.

ಈ ಮಧ್ಯೆ ಅವರು, ಕಾಫಿರರ /ಸತ್ಯನಿಷೇಧಿಗಳ/ ನಂಬಿಕೆ ಇಲ್ಲದವರ ಸೈನ್ಯದ ಬಳಿ ನೆಲೆನಿಂತ ಹಳ್ಳಿಯಲ್ಲಿ ಕೊಳ್ಳೆಹೊಡೆದ ವಸ್ತುಗಳಿದ್ದವು ಎಂದು ಹೇಳಿದರು. ನಾನು ನನ್ನ ಸೈನ್ಯವನ್ನು ಸಿದ್ಧಗೊಳಿಸಿ, ಆ ಸೈನ್ಯ ಇರುವಲ್ಲಿಗೆ ಹೊರಟೆ. ಸಹಾಯಕರ ನೆರವಿನಿಂದ ಸೊಂಟಕ್ಕೆ ಕಟ್ಟಿದ ಒರೆಯಿಂದ ನನ್ನ ಖಡ್ಗ ಹೊರ ತೆಗೆದೆ. ಸೈಯದ್ ಜುನೈದ್, ಸೈಯದ್ ಗಫಾರ್ ಮತ್ತು ಇತರ ಅಧಿಕಾರಿಗಳಿಗೆ ಯುದ್ಧಕ್ಕೆ ಸಿದ್ಧರಾಗುವಂತೆ ಹೇಳಿದೆ. ಈ ಕನಸಿನಲ್ಲಿ ಕಂಡದ್ದು ಇಷ್ಟೇ.

***

ಕನಸು 21

ನಿಜಾಮ್‌ನ ಪ್ರತಿನಿಧಿ

ರಾಸಿಕ್ ವರ್ಷದ ರಬ್ಬಾನಿ ತಿಂಗಳಿನ 25ನೇ ದಿನ. ಮುಹಮ್ಮದರು ಜನಿಸಿದ ದಿನದಿಂದ ಆರಂಭಿಸಿದ 1222ನೇ ವರ್ಷಕ್ಕೆ ಸಮನಾಗುತ್ತದೆ. ದಿನದ ನಾಲ್ಕು ಗಂಟೆಗಳು ಉಳಿದಿದ್ದವು. ಆಗ ಈ ಕನಸ ಕಂಡೆ. ನಿಜಾಮ್ ಅಲಿಖಾನ್ ಅವರ ದಿವಾನ್ ಬರುವುದ ಕಂಡೆ. ಕಾಣಿಸುತ್ತಿದ್ದಂತೆಯೇ ಅವನಿಗೆ ಹಲ್ಲು ಇಲ್ಲದೇ ಇರುವುದು ಹಾಗೆಯೇ ತಲೆಗೂದಲಿಗೆ ಬಣ್ಣ ಹಚ್ಚಿಕೊಂಡಿರುವುದನ್ನು ಗಮನಿಸಿದೆ. ಅವನು ನನ್ನಿಂದ ಸಹಾಯ ಯಾಚಿಸಿದ. ದೇವರ ಸೇವಕನು ಅವನಿಗೆ ಹೇಳಿದ, “ಆಗಲಿ, ನೀನು ನೆಮ್ಮದಿಯಿಂದಿರು, ನನ್ನ ಸಲಹೆಗಾರರ ಜೊತೆ ಮಾತನಾಡುವೆ, ಅದಾದ ನಂತರ ನಿನಗೆ ಉತ್ತರ ನೀಡುವೆ.” ಈ ರೀತಿಯಲ್ಲಿ ಮಾತನಾಡಿದ ನಂತರ ಅವನನ್ನು ಕೋಟೆಯಿಂದ ಹೊರಗೆ ಕಳುಹಿಸಿದೆ. ಇಂತಹ ವ್ಯಕ್ತಿಗಳ ಜೊತೆಗೆ ಸಾಂತ್ವನ ಹೇಳುವ ರೀತಿಯಲ್ಲಿಯೇ ಮಾತನಾಡಬೇಕು ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ. ಹೀಗೆ ಸಹಾಯ ಕೇಳಿದವರಲ್ಲಿ ಪೂನಾದವರು ಮೊದಲಿಗರು. ಮತ್ತು ಈಗ ಇವರು ಸಹಾಯ ಕೇಳಲು ಬಂದಿದ್ದಾರೆ. ಆದರೆ, ಅವರ ಮಾತುಗಳನ್ನ ನಂಬುವ ಹಾಗಿಲ್ಲ. ಈ ಹಂತದಲ್ಲಿ ಎಚ್ಚರಾಗಿ ಎದ್ದು ಕುಳಿತೆ.

***

ಕನಸು 22

ಅಸಾಧಾರಣ ಮೂರ್ತಿಗಳು, ಪ್ರತಿಮೆ, ಶಿಲ್ಪ

ಹಿರಾಸತ್ ವರ್ಷದ ಝಕಾರಿ ತಿಂಗಳಿನ 8ನೇ ದಿನ, ಮಂಗಳವಾರ ರಾತ್ರಿ, ಮರುದಿನ ಬುಧವಾರ ಇತ್ತು. ಅದು ಮುಹಮ್ಮದ್ ಜನಿಸಿದ ದಿನದಿಂದ ಆರಂಭಿಸಿ 1224ನೇ ವರ್ಷದ ಜಮಾದಿ-ಉಲ್ ಥಾನಿಯ 7ನೇ ದಿನಕ್ಕೆ ಸಮನಾಗುತ್ತದೆ. ಬೆಳಗಿನ ಜಾವ ಈ ಕನಸು ಕಂಡೆ. ಅಲ್ಲೊಂದು ಬೃಹತ್ ದೇವಾಲಯ ಕಾಣಿಸಿತು. ಅದರ ಹಿಂಭಾಗ ಸ್ವಲ್ಪ ಮಟ್ಟಿಗೆ ಧಕ್ಕೆಗೆ ಒಳಗಾಗಿತ್ತು. ಅದರಲ್ಲಿ ಹಲವು ದೊಡ್ಡಗಾತ್ರದ ಪ್ರತಿಮೆಗಳಿದ್ದವು. ನಾನು ಹಲವು ಜನರೊಡನೆ ಸೇರಿ ದೇವಾಲಯದೊಳಕ್ಕೆ ಹೋದೆ. ಪ್ರತಿಮೆಗಳು ಮನುಷ್ಯರ ಹಾಗೆ ನೋಡುತ್ತಿರುವ ಹಾಗೆ ಅವುಗಳ ಕಣ್ಣುಗಳು ಅಲುಗಾಡುತ್ತಿರುವುದನ್ನು ಗಮನಿಸಿದೆವು. ಪ್ರತಿಮೆಗಳ ಕಣ್ಣುಗಳು ಜೀವಂತ ಇರುವವರಂತೆ ಅಲುಗಾಡುವುದ ನೋಡಿದೆ, ಅದೇಕೆ ಹಾಗಿರಬಹುದು ಎಂದು ಅಚ್ಚರಿಯಾಯಿತು. ಆಗ ನಾನು ಅವುಗಳ ಸಮೀಪ ಹೋದೆ. ಕೊನೆಯ ಸಾಲಿನಲ್ಲಿ ಎರಡು ಸ್ತ್ರೀಪ್ರತಿಮೆಗಳಿದ್ದವು. ಆ ಎರಡರ ಪೈಕಿ ಒಂದು ಪ್ರತಿಮೆಯ ಸೀರೆ ಉಟ್ಟ ಕಾಲುಗಳು ಕಾಣಿಸಿದವು. ಅದರಿಂದ ಇಬ್ಬರು ಮಹಿಳೆಯರು ಉಳಿದೆಲ್ಲ ಪ್ರತಿಮೆಗಳು ಪುರುಷರು ಮತ್ತು ಇತರ ವಸ್ತುಗಳು ಎಂದು ಗೊತ್ತಾಯಿತು. ಅವಳು ಹೇಳಿದಳು, ತಾವು ದೀರ್ಘಕಾಲದಿಂದ ದೇವರ ಹತ್ತಿರ ಪ್ರಾರ್ಥಿಸುತ್ತಿದ್ದೇವೆ ಮತ್ತು ಪ್ರತಿಯೊಬ್ಬರೂ ನಮ್ಮನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ. ನಾನು ಅವಳಿಗೆ ಹೇಳಿದೆ “ಒಳ್ಳೆಯದಾಯಿತು. ನಿಮ್ಮಷ್ಟಕ್ಕೆ ನೀವು ದೇವರ ಸ್ಮರಣೆಯನ್ನು ಮುಂದುವರಿಸಿರಿ”. ಹಾಗೆ ಹೇಳಿದ ಮೇಲೆ ಕಟ್ಟಡದ ಶಿಥಿಲಗೊಂಡ ಭಾಗವನ್ನು ದುರಸ್ತಿ ಮಾಡುವಂತೆ ಆದೇಶಿಸಿದೆ. ಈ ಮಧ್ಯೆ ನನಗೆ ಎಚ್ಚರವಾಯಿತು.

(1785ರಿಂದ 1798ರ ಅವಧಿಯಲ್ಲಿ ಟಿಪ್ಪು ಸುಲ್ತಾನ ದಾಖಲಿಸಿದ 37 ಕನಸುಗಳನ್ನು ಇಂಗ್ಲಿಷ್‌ನಲ್ಲಿ ’ದ ಬುಕ್ ಆಫ್ ಡ್ರೀಮ್ಸ್’ ಎಂದು ಪ್ರಕಟಿಸಲಾಗಿದೆ. ಬ್ರಿಟಿಷರು, ನಿಜಾಮ, ಮರಾಠರನ್ನು ಯುದ್ಧದಲ್ಲಿ ಸೋಲಿಸುವ ಬಗ್ಗೆ ಹಾಗೂ ಇನ್ನೂ ಹಲವು ವಿಷಯಗಳ ಬಗ್ಗೆ ಟಿಪ್ಪುವಿನ ಸುಪ್ತಮನಸ್ಸಿನ ದಾಖಲೆಗಳಿವು. ಈ ಕನಸುಗಳನ್ನು ಕನ್ನಡಕ್ಕೆ ದೇವು ಪತ್ತಾರ ದೀರ್ಘ ಪ್ರಸ್ತಾವನೆಯೊಂದಿಗೆ ಅನುವಾದಿಸಿದ್ದಾರೆ. ಗೌರಿ ಮೀಡಿಯಾ ಟ್ರಸ್ಟ್ ಇದನ್ನು ಡಿಸೆಂಬರ್ ತಿಂಗಳಿನಲ್ಲಿ ಪ್ರಕಟಿಸಲಿದೆ.)

ದೇವು ಪತ್ತಾರ

(ಕನ್ನಡಕ್ಕೆ): ದೇವು ಪತ್ತಾರ
ಹಿರಿಯ ಪತ್ರಕರ್ತರು. ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ, ಮಹಾದೇವ ಬಾಬಾ ಮೆಡೋಸ್ ಟೇಲರ್(ಸಂಪಾದಿತ), ಈಗ ಹೀಗಿರುವ ಲೋಕದಲ್ಲಿ (ವ್ಯಕ್ತಿಚಿತ್ರ), ಬಹಮನಿ ಸಾಮ್ರಾಜ್ಯ ಅವರ ಪ್ರಕಟಿತ ಕೃತಿಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...