Homeಕರ್ನಾಟಕ1785ರಿಂದ 1798ರ ಅವಧಿಯ ಟಿಪ್ಪುವಿನ ಕನಸುಗಳು

1785ರಿಂದ 1798ರ ಅವಧಿಯ ಟಿಪ್ಪುವಿನ ಕನಸುಗಳು

- Advertisement -
- Advertisement -

ಕನಸು 1

ಮರಾಠ ಸೇನೆಯ ಮೂವರು ಅಧಿಕಾರಿಗಳು

ಚಂದ್ರಮಾನದ ಪ್ರಕಾರ ಮೊದಲ ’ಅಹ್ಮದಿ’ ತಿಂಗಳ ಗುರುವಾರ ರಾತ್ರಿ. ಹಿಜರಿಯ 1200 ದಾಲ್ವ್ ವರ್ಷದ ಆರಂಭದಲ್ಲಿ, ರಾತ್ರಿಯ ಮೂರು ಭಾಗ ಹಾಗೂ ಐದು ಪ್ರಹರಗಳು ಕಳೆದಿದ್ದವು. ಶಮ್ಸಾಬಾದ್‌ನಲ್ಲಿ ಇದ್ದಾಗ ನಾನು ಈ ಕನಸ ಕಂಡೆನು.

ಮರಾಠ ಸೈನ್ಯವು ಬಂದಂತೆ ನಾನು ಏಕಾಂಗಿಯಾಗಿ ಮುನ್ನುಗ್ಗಿ ಅದರ ಸೇನಾಧಿಪತಿಗಳ ಬಳಿ ಒಬ್ಬೊಬ್ಬರಾಗಿ ಹೋರಾಡುವ ಸವಾಲು ಹಾಕಿದಂತೆ ಕಾಣಿಸಿತು. ಆ ಸೈನ್ಯದ ಮುಸ್ಲಿಮ್ ಸೇನಾಧಿಕಾರಿ ನನ್ನನ್ನು ಎದುರಿಸಿ ನಿಂತ. ಸಮರಾಂಗಣದಲ್ಲಿ ಎರಡೂ ಸೈನ್ಯಗಳು ಮುಖಾಮುಖಿಯಾಗಿ ಕದನ ನಡೆಸುತ್ತಿರುವಾಗ ನನ್ನ ಖಡ್ಗದ ಒಂದೇ ಏಟಿಗೆ ಆ ಮುಸ್ಲಿಮ್ ಸೇನಾಧಿಪತಿಯನ್ನು ಕೊಂದೆನು. ಅದಾದ ನಂತರ ಸೈನ್ಯದ ನಾಯಕನಾಗಿದ್ದ ಯುವಕ ಅಲ್ಲಿಂದ ಕಾಲ್ಕಿತ್ತು ಓಡಿದ. ನಾನು ಅವನ ಬೆನ್ನಟ್ಟಿದೆ. ಮತ್ತು ಮುಖಾಮುಖಿಯಾಗಿ ಒಂದೇ ಹೊಡೆತಕ್ಕೆ ಅವನನ್ನು ಮುಗಿಸಿದೆ. ಅದೇ ರೀತಿಯಾಗಿ ಮೂರನೇ ಮುಖ್ಯ ಸೇನಾಧಿಪತಿಯನ್ನು ಕೊಂದುಹಾಕಿದೆ. ಮೂವರು ಸೇನಾಧಿಕಾರಿಗಳನ್ನೂ ತಲಾ ಒಂದೊಂದು ಏಟಿಗೆ ಮುಗಿಸಿ ಮರಳಿದೆ. ನನ್ನ ಸೈನ್ಯ ವಿಜಯಶಾಲಿಯಾಗಿ ಸಂಭ್ರಮದಲ್ಲಿತ್ತು.

ಆಗ ಕನಸಿನಲ್ಲಿ ನನ್ನ ಸೈನ್ಯದ ಎಲ್ಲ ಅಧಿಕಾರಿಗಳು ಹಾಗೂ ಹೈದರ್ ಸಾಹಿಬ್ ಅವರು ಮನೆಯಲ್ಲಿ ಊಟ ಮಾಡುತ್ತಿರುವಂತೆ ಕಂಡೆನು. ತುಂಬಾ ದಣಿದಿದ್ದ ನಾನು ಕುಡಿಯುವುದಕ್ಕಾಗಿ ನೀರು ಕೇಳಿದೆ. ಅಲ್ಲಿದ್ದವರು ನನಗೆ ಶುಭಾಶಯ ಕೋರಿದರು ಹಾಗೂ ಊಟ ಮಾಡಿದ ನಂತರ ನೀರು ಕುಡಿಯುವಂತೆ ಮನವಿ ಮಾಡಿದರು. ಈ ಮಧ್ಯೆ ದುರ್ಬಲನಾದ ಬಿಳಿಗಡ್ಡದ ಮುದುಕನೊಬ್ಬ ನನ್ನ ಮುಂದೆ ಕಾಣಿಸಿಕೊಂಡ. ಅವನ ಕೈಯಲ್ಲಿ ಕೆನೆ ಹಾಗೂ ಸಿಹಿಯಾದ ತಿಂಡಿಗಳಿದ್ದವು. ಅವನ್ನು ತೆಗೆದುಕೊಳ್ಳುವಂತೆ ಕೇಳಿದ. ಆ ಸಿಹಿ ತಿಂಡಿಗಳನ್ನು ಅವನಿಂದ ಪಡೆದು ತಿಂದ ನಂತರ ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ. “ಇಷ್ಟೊಂದು ಸ್ವಾದಿಷ್ಟ ಹಾಗೂ ರುಚಿಯಾದ ಆಹಾರ ಹಿಂದೆಂದೂ ತಿಂದಿರಲಿಲ್ಲ. ಅವು ಅತ್ಯಂತ ರುಚಿಕರವಾಗಿದ್ದವು.” ಸ್ನಾನ ಮಾಡಿ ಶುದ್ಧಿಯಾದ ನಂತರ ನನ್ನ ಅಧಿಕಾರಿಗಳ ಬಳಿ ವಿಚಾರಿಸಿದೆ. ಅವರು ಕಾಫಿರರ ಸೈನ್ಯವನ್ನು ನಾಶ ಮಾಡಿದ ಬಗ್ಗೆ; ಹೈದರಿ ಸೈನ್ಯದ ಅಧಿಕಾರಿಗಳು ಇಲ್ಲ ಎಂದು ಉತ್ತರಿಸಿದರು. ಮತ್ತು ಈ ವಿಷಯದಲ್ಲಿ ಅಂತಹ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹಾಗೂ ಅವರು ಸೂಕ್ತ ಆದೇಶಕ್ಕಾಗಿ ಕಾಯುತ್ತಿದ್ದುದಾಗಿ ತಿಳಿಸಿದರು.

ಈ ಮಧ್ಯೆ ಅವರು, ಕಾಫಿರರ /ಸತ್ಯನಿಷೇಧಿಗಳ/ ನಂಬಿಕೆ ಇಲ್ಲದವರ ಸೈನ್ಯದ ಬಳಿ ನೆಲೆನಿಂತ ಹಳ್ಳಿಯಲ್ಲಿ ಕೊಳ್ಳೆಹೊಡೆದ ವಸ್ತುಗಳಿದ್ದವು ಎಂದು ಹೇಳಿದರು. ನಾನು ನನ್ನ ಸೈನ್ಯವನ್ನು ಸಿದ್ಧಗೊಳಿಸಿ, ಆ ಸೈನ್ಯ ಇರುವಲ್ಲಿಗೆ ಹೊರಟೆ. ಸಹಾಯಕರ ನೆರವಿನಿಂದ ಸೊಂಟಕ್ಕೆ ಕಟ್ಟಿದ ಒರೆಯಿಂದ ನನ್ನ ಖಡ್ಗ ಹೊರ ತೆಗೆದೆ. ಸೈಯದ್ ಜುನೈದ್, ಸೈಯದ್ ಗಫಾರ್ ಮತ್ತು ಇತರ ಅಧಿಕಾರಿಗಳಿಗೆ ಯುದ್ಧಕ್ಕೆ ಸಿದ್ಧರಾಗುವಂತೆ ಹೇಳಿದೆ. ಈ ಕನಸಿನಲ್ಲಿ ಕಂಡದ್ದು ಇಷ್ಟೇ.

***

ಕನಸು 21

ನಿಜಾಮ್‌ನ ಪ್ರತಿನಿಧಿ

ರಾಸಿಕ್ ವರ್ಷದ ರಬ್ಬಾನಿ ತಿಂಗಳಿನ 25ನೇ ದಿನ. ಮುಹಮ್ಮದರು ಜನಿಸಿದ ದಿನದಿಂದ ಆರಂಭಿಸಿದ 1222ನೇ ವರ್ಷಕ್ಕೆ ಸಮನಾಗುತ್ತದೆ. ದಿನದ ನಾಲ್ಕು ಗಂಟೆಗಳು ಉಳಿದಿದ್ದವು. ಆಗ ಈ ಕನಸ ಕಂಡೆ. ನಿಜಾಮ್ ಅಲಿಖಾನ್ ಅವರ ದಿವಾನ್ ಬರುವುದ ಕಂಡೆ. ಕಾಣಿಸುತ್ತಿದ್ದಂತೆಯೇ ಅವನಿಗೆ ಹಲ್ಲು ಇಲ್ಲದೇ ಇರುವುದು ಹಾಗೆಯೇ ತಲೆಗೂದಲಿಗೆ ಬಣ್ಣ ಹಚ್ಚಿಕೊಂಡಿರುವುದನ್ನು ಗಮನಿಸಿದೆ. ಅವನು ನನ್ನಿಂದ ಸಹಾಯ ಯಾಚಿಸಿದ. ದೇವರ ಸೇವಕನು ಅವನಿಗೆ ಹೇಳಿದ, “ಆಗಲಿ, ನೀನು ನೆಮ್ಮದಿಯಿಂದಿರು, ನನ್ನ ಸಲಹೆಗಾರರ ಜೊತೆ ಮಾತನಾಡುವೆ, ಅದಾದ ನಂತರ ನಿನಗೆ ಉತ್ತರ ನೀಡುವೆ.” ಈ ರೀತಿಯಲ್ಲಿ ಮಾತನಾಡಿದ ನಂತರ ಅವನನ್ನು ಕೋಟೆಯಿಂದ ಹೊರಗೆ ಕಳುಹಿಸಿದೆ. ಇಂತಹ ವ್ಯಕ್ತಿಗಳ ಜೊತೆಗೆ ಸಾಂತ್ವನ ಹೇಳುವ ರೀತಿಯಲ್ಲಿಯೇ ಮಾತನಾಡಬೇಕು ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ. ಹೀಗೆ ಸಹಾಯ ಕೇಳಿದವರಲ್ಲಿ ಪೂನಾದವರು ಮೊದಲಿಗರು. ಮತ್ತು ಈಗ ಇವರು ಸಹಾಯ ಕೇಳಲು ಬಂದಿದ್ದಾರೆ. ಆದರೆ, ಅವರ ಮಾತುಗಳನ್ನ ನಂಬುವ ಹಾಗಿಲ್ಲ. ಈ ಹಂತದಲ್ಲಿ ಎಚ್ಚರಾಗಿ ಎದ್ದು ಕುಳಿತೆ.

***

ಕನಸು 22

ಅಸಾಧಾರಣ ಮೂರ್ತಿಗಳು, ಪ್ರತಿಮೆ, ಶಿಲ್ಪ

ಹಿರಾಸತ್ ವರ್ಷದ ಝಕಾರಿ ತಿಂಗಳಿನ 8ನೇ ದಿನ, ಮಂಗಳವಾರ ರಾತ್ರಿ, ಮರುದಿನ ಬುಧವಾರ ಇತ್ತು. ಅದು ಮುಹಮ್ಮದ್ ಜನಿಸಿದ ದಿನದಿಂದ ಆರಂಭಿಸಿ 1224ನೇ ವರ್ಷದ ಜಮಾದಿ-ಉಲ್ ಥಾನಿಯ 7ನೇ ದಿನಕ್ಕೆ ಸಮನಾಗುತ್ತದೆ. ಬೆಳಗಿನ ಜಾವ ಈ ಕನಸು ಕಂಡೆ. ಅಲ್ಲೊಂದು ಬೃಹತ್ ದೇವಾಲಯ ಕಾಣಿಸಿತು. ಅದರ ಹಿಂಭಾಗ ಸ್ವಲ್ಪ ಮಟ್ಟಿಗೆ ಧಕ್ಕೆಗೆ ಒಳಗಾಗಿತ್ತು. ಅದರಲ್ಲಿ ಹಲವು ದೊಡ್ಡಗಾತ್ರದ ಪ್ರತಿಮೆಗಳಿದ್ದವು. ನಾನು ಹಲವು ಜನರೊಡನೆ ಸೇರಿ ದೇವಾಲಯದೊಳಕ್ಕೆ ಹೋದೆ. ಪ್ರತಿಮೆಗಳು ಮನುಷ್ಯರ ಹಾಗೆ ನೋಡುತ್ತಿರುವ ಹಾಗೆ ಅವುಗಳ ಕಣ್ಣುಗಳು ಅಲುಗಾಡುತ್ತಿರುವುದನ್ನು ಗಮನಿಸಿದೆವು. ಪ್ರತಿಮೆಗಳ ಕಣ್ಣುಗಳು ಜೀವಂತ ಇರುವವರಂತೆ ಅಲುಗಾಡುವುದ ನೋಡಿದೆ, ಅದೇಕೆ ಹಾಗಿರಬಹುದು ಎಂದು ಅಚ್ಚರಿಯಾಯಿತು. ಆಗ ನಾನು ಅವುಗಳ ಸಮೀಪ ಹೋದೆ. ಕೊನೆಯ ಸಾಲಿನಲ್ಲಿ ಎರಡು ಸ್ತ್ರೀಪ್ರತಿಮೆಗಳಿದ್ದವು. ಆ ಎರಡರ ಪೈಕಿ ಒಂದು ಪ್ರತಿಮೆಯ ಸೀರೆ ಉಟ್ಟ ಕಾಲುಗಳು ಕಾಣಿಸಿದವು. ಅದರಿಂದ ಇಬ್ಬರು ಮಹಿಳೆಯರು ಉಳಿದೆಲ್ಲ ಪ್ರತಿಮೆಗಳು ಪುರುಷರು ಮತ್ತು ಇತರ ವಸ್ತುಗಳು ಎಂದು ಗೊತ್ತಾಯಿತು. ಅವಳು ಹೇಳಿದಳು, ತಾವು ದೀರ್ಘಕಾಲದಿಂದ ದೇವರ ಹತ್ತಿರ ಪ್ರಾರ್ಥಿಸುತ್ತಿದ್ದೇವೆ ಮತ್ತು ಪ್ರತಿಯೊಬ್ಬರೂ ನಮ್ಮನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ. ನಾನು ಅವಳಿಗೆ ಹೇಳಿದೆ “ಒಳ್ಳೆಯದಾಯಿತು. ನಿಮ್ಮಷ್ಟಕ್ಕೆ ನೀವು ದೇವರ ಸ್ಮರಣೆಯನ್ನು ಮುಂದುವರಿಸಿರಿ”. ಹಾಗೆ ಹೇಳಿದ ಮೇಲೆ ಕಟ್ಟಡದ ಶಿಥಿಲಗೊಂಡ ಭಾಗವನ್ನು ದುರಸ್ತಿ ಮಾಡುವಂತೆ ಆದೇಶಿಸಿದೆ. ಈ ಮಧ್ಯೆ ನನಗೆ ಎಚ್ಚರವಾಯಿತು.

(1785ರಿಂದ 1798ರ ಅವಧಿಯಲ್ಲಿ ಟಿಪ್ಪು ಸುಲ್ತಾನ ದಾಖಲಿಸಿದ 37 ಕನಸುಗಳನ್ನು ಇಂಗ್ಲಿಷ್‌ನಲ್ಲಿ ’ದ ಬುಕ್ ಆಫ್ ಡ್ರೀಮ್ಸ್’ ಎಂದು ಪ್ರಕಟಿಸಲಾಗಿದೆ. ಬ್ರಿಟಿಷರು, ನಿಜಾಮ, ಮರಾಠರನ್ನು ಯುದ್ಧದಲ್ಲಿ ಸೋಲಿಸುವ ಬಗ್ಗೆ ಹಾಗೂ ಇನ್ನೂ ಹಲವು ವಿಷಯಗಳ ಬಗ್ಗೆ ಟಿಪ್ಪುವಿನ ಸುಪ್ತಮನಸ್ಸಿನ ದಾಖಲೆಗಳಿವು. ಈ ಕನಸುಗಳನ್ನು ಕನ್ನಡಕ್ಕೆ ದೇವು ಪತ್ತಾರ ದೀರ್ಘ ಪ್ರಸ್ತಾವನೆಯೊಂದಿಗೆ ಅನುವಾದಿಸಿದ್ದಾರೆ. ಗೌರಿ ಮೀಡಿಯಾ ಟ್ರಸ್ಟ್ ಇದನ್ನು ಡಿಸೆಂಬರ್ ತಿಂಗಳಿನಲ್ಲಿ ಪ್ರಕಟಿಸಲಿದೆ.)

ದೇವು ಪತ್ತಾರ

(ಕನ್ನಡಕ್ಕೆ): ದೇವು ಪತ್ತಾರ
ಹಿರಿಯ ಪತ್ರಕರ್ತರು. ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ, ಮಹಾದೇವ ಬಾಬಾ ಮೆಡೋಸ್ ಟೇಲರ್(ಸಂಪಾದಿತ), ಈಗ ಹೀಗಿರುವ ಲೋಕದಲ್ಲಿ (ವ್ಯಕ್ತಿಚಿತ್ರ), ಬಹಮನಿ ಸಾಮ್ರಾಜ್ಯ ಅವರ ಪ್ರಕಟಿತ ಕೃತಿಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...