Homeಕರ್ನಾಟಕ1785ರಿಂದ 1798ರ ಅವಧಿಯ ಟಿಪ್ಪುವಿನ ಕನಸುಗಳು

1785ರಿಂದ 1798ರ ಅವಧಿಯ ಟಿಪ್ಪುವಿನ ಕನಸುಗಳು

- Advertisement -
- Advertisement -

ಕನಸು 1

ಮರಾಠ ಸೇನೆಯ ಮೂವರು ಅಧಿಕಾರಿಗಳು

ಚಂದ್ರಮಾನದ ಪ್ರಕಾರ ಮೊದಲ ’ಅಹ್ಮದಿ’ ತಿಂಗಳ ಗುರುವಾರ ರಾತ್ರಿ. ಹಿಜರಿಯ 1200 ದಾಲ್ವ್ ವರ್ಷದ ಆರಂಭದಲ್ಲಿ, ರಾತ್ರಿಯ ಮೂರು ಭಾಗ ಹಾಗೂ ಐದು ಪ್ರಹರಗಳು ಕಳೆದಿದ್ದವು. ಶಮ್ಸಾಬಾದ್‌ನಲ್ಲಿ ಇದ್ದಾಗ ನಾನು ಈ ಕನಸ ಕಂಡೆನು.

ಮರಾಠ ಸೈನ್ಯವು ಬಂದಂತೆ ನಾನು ಏಕಾಂಗಿಯಾಗಿ ಮುನ್ನುಗ್ಗಿ ಅದರ ಸೇನಾಧಿಪತಿಗಳ ಬಳಿ ಒಬ್ಬೊಬ್ಬರಾಗಿ ಹೋರಾಡುವ ಸವಾಲು ಹಾಕಿದಂತೆ ಕಾಣಿಸಿತು. ಆ ಸೈನ್ಯದ ಮುಸ್ಲಿಮ್ ಸೇನಾಧಿಕಾರಿ ನನ್ನನ್ನು ಎದುರಿಸಿ ನಿಂತ. ಸಮರಾಂಗಣದಲ್ಲಿ ಎರಡೂ ಸೈನ್ಯಗಳು ಮುಖಾಮುಖಿಯಾಗಿ ಕದನ ನಡೆಸುತ್ತಿರುವಾಗ ನನ್ನ ಖಡ್ಗದ ಒಂದೇ ಏಟಿಗೆ ಆ ಮುಸ್ಲಿಮ್ ಸೇನಾಧಿಪತಿಯನ್ನು ಕೊಂದೆನು. ಅದಾದ ನಂತರ ಸೈನ್ಯದ ನಾಯಕನಾಗಿದ್ದ ಯುವಕ ಅಲ್ಲಿಂದ ಕಾಲ್ಕಿತ್ತು ಓಡಿದ. ನಾನು ಅವನ ಬೆನ್ನಟ್ಟಿದೆ. ಮತ್ತು ಮುಖಾಮುಖಿಯಾಗಿ ಒಂದೇ ಹೊಡೆತಕ್ಕೆ ಅವನನ್ನು ಮುಗಿಸಿದೆ. ಅದೇ ರೀತಿಯಾಗಿ ಮೂರನೇ ಮುಖ್ಯ ಸೇನಾಧಿಪತಿಯನ್ನು ಕೊಂದುಹಾಕಿದೆ. ಮೂವರು ಸೇನಾಧಿಕಾರಿಗಳನ್ನೂ ತಲಾ ಒಂದೊಂದು ಏಟಿಗೆ ಮುಗಿಸಿ ಮರಳಿದೆ. ನನ್ನ ಸೈನ್ಯ ವಿಜಯಶಾಲಿಯಾಗಿ ಸಂಭ್ರಮದಲ್ಲಿತ್ತು.

ಆಗ ಕನಸಿನಲ್ಲಿ ನನ್ನ ಸೈನ್ಯದ ಎಲ್ಲ ಅಧಿಕಾರಿಗಳು ಹಾಗೂ ಹೈದರ್ ಸಾಹಿಬ್ ಅವರು ಮನೆಯಲ್ಲಿ ಊಟ ಮಾಡುತ್ತಿರುವಂತೆ ಕಂಡೆನು. ತುಂಬಾ ದಣಿದಿದ್ದ ನಾನು ಕುಡಿಯುವುದಕ್ಕಾಗಿ ನೀರು ಕೇಳಿದೆ. ಅಲ್ಲಿದ್ದವರು ನನಗೆ ಶುಭಾಶಯ ಕೋರಿದರು ಹಾಗೂ ಊಟ ಮಾಡಿದ ನಂತರ ನೀರು ಕುಡಿಯುವಂತೆ ಮನವಿ ಮಾಡಿದರು. ಈ ಮಧ್ಯೆ ದುರ್ಬಲನಾದ ಬಿಳಿಗಡ್ಡದ ಮುದುಕನೊಬ್ಬ ನನ್ನ ಮುಂದೆ ಕಾಣಿಸಿಕೊಂಡ. ಅವನ ಕೈಯಲ್ಲಿ ಕೆನೆ ಹಾಗೂ ಸಿಹಿಯಾದ ತಿಂಡಿಗಳಿದ್ದವು. ಅವನ್ನು ತೆಗೆದುಕೊಳ್ಳುವಂತೆ ಕೇಳಿದ. ಆ ಸಿಹಿ ತಿಂಡಿಗಳನ್ನು ಅವನಿಂದ ಪಡೆದು ತಿಂದ ನಂತರ ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ. “ಇಷ್ಟೊಂದು ಸ್ವಾದಿಷ್ಟ ಹಾಗೂ ರುಚಿಯಾದ ಆಹಾರ ಹಿಂದೆಂದೂ ತಿಂದಿರಲಿಲ್ಲ. ಅವು ಅತ್ಯಂತ ರುಚಿಕರವಾಗಿದ್ದವು.” ಸ್ನಾನ ಮಾಡಿ ಶುದ್ಧಿಯಾದ ನಂತರ ನನ್ನ ಅಧಿಕಾರಿಗಳ ಬಳಿ ವಿಚಾರಿಸಿದೆ. ಅವರು ಕಾಫಿರರ ಸೈನ್ಯವನ್ನು ನಾಶ ಮಾಡಿದ ಬಗ್ಗೆ; ಹೈದರಿ ಸೈನ್ಯದ ಅಧಿಕಾರಿಗಳು ಇಲ್ಲ ಎಂದು ಉತ್ತರಿಸಿದರು. ಮತ್ತು ಈ ವಿಷಯದಲ್ಲಿ ಅಂತಹ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹಾಗೂ ಅವರು ಸೂಕ್ತ ಆದೇಶಕ್ಕಾಗಿ ಕಾಯುತ್ತಿದ್ದುದಾಗಿ ತಿಳಿಸಿದರು.

ಈ ಮಧ್ಯೆ ಅವರು, ಕಾಫಿರರ /ಸತ್ಯನಿಷೇಧಿಗಳ/ ನಂಬಿಕೆ ಇಲ್ಲದವರ ಸೈನ್ಯದ ಬಳಿ ನೆಲೆನಿಂತ ಹಳ್ಳಿಯಲ್ಲಿ ಕೊಳ್ಳೆಹೊಡೆದ ವಸ್ತುಗಳಿದ್ದವು ಎಂದು ಹೇಳಿದರು. ನಾನು ನನ್ನ ಸೈನ್ಯವನ್ನು ಸಿದ್ಧಗೊಳಿಸಿ, ಆ ಸೈನ್ಯ ಇರುವಲ್ಲಿಗೆ ಹೊರಟೆ. ಸಹಾಯಕರ ನೆರವಿನಿಂದ ಸೊಂಟಕ್ಕೆ ಕಟ್ಟಿದ ಒರೆಯಿಂದ ನನ್ನ ಖಡ್ಗ ಹೊರ ತೆಗೆದೆ. ಸೈಯದ್ ಜುನೈದ್, ಸೈಯದ್ ಗಫಾರ್ ಮತ್ತು ಇತರ ಅಧಿಕಾರಿಗಳಿಗೆ ಯುದ್ಧಕ್ಕೆ ಸಿದ್ಧರಾಗುವಂತೆ ಹೇಳಿದೆ. ಈ ಕನಸಿನಲ್ಲಿ ಕಂಡದ್ದು ಇಷ್ಟೇ.

***

ಕನಸು 21

ನಿಜಾಮ್‌ನ ಪ್ರತಿನಿಧಿ

ರಾಸಿಕ್ ವರ್ಷದ ರಬ್ಬಾನಿ ತಿಂಗಳಿನ 25ನೇ ದಿನ. ಮುಹಮ್ಮದರು ಜನಿಸಿದ ದಿನದಿಂದ ಆರಂಭಿಸಿದ 1222ನೇ ವರ್ಷಕ್ಕೆ ಸಮನಾಗುತ್ತದೆ. ದಿನದ ನಾಲ್ಕು ಗಂಟೆಗಳು ಉಳಿದಿದ್ದವು. ಆಗ ಈ ಕನಸ ಕಂಡೆ. ನಿಜಾಮ್ ಅಲಿಖಾನ್ ಅವರ ದಿವಾನ್ ಬರುವುದ ಕಂಡೆ. ಕಾಣಿಸುತ್ತಿದ್ದಂತೆಯೇ ಅವನಿಗೆ ಹಲ್ಲು ಇಲ್ಲದೇ ಇರುವುದು ಹಾಗೆಯೇ ತಲೆಗೂದಲಿಗೆ ಬಣ್ಣ ಹಚ್ಚಿಕೊಂಡಿರುವುದನ್ನು ಗಮನಿಸಿದೆ. ಅವನು ನನ್ನಿಂದ ಸಹಾಯ ಯಾಚಿಸಿದ. ದೇವರ ಸೇವಕನು ಅವನಿಗೆ ಹೇಳಿದ, “ಆಗಲಿ, ನೀನು ನೆಮ್ಮದಿಯಿಂದಿರು, ನನ್ನ ಸಲಹೆಗಾರರ ಜೊತೆ ಮಾತನಾಡುವೆ, ಅದಾದ ನಂತರ ನಿನಗೆ ಉತ್ತರ ನೀಡುವೆ.” ಈ ರೀತಿಯಲ್ಲಿ ಮಾತನಾಡಿದ ನಂತರ ಅವನನ್ನು ಕೋಟೆಯಿಂದ ಹೊರಗೆ ಕಳುಹಿಸಿದೆ. ಇಂತಹ ವ್ಯಕ್ತಿಗಳ ಜೊತೆಗೆ ಸಾಂತ್ವನ ಹೇಳುವ ರೀತಿಯಲ್ಲಿಯೇ ಮಾತನಾಡಬೇಕು ಎಂದು ನನ್ನಷ್ಟಕ್ಕೆ ನಾನೇ ಹೇಳಿಕೊಂಡೆ. ಹೀಗೆ ಸಹಾಯ ಕೇಳಿದವರಲ್ಲಿ ಪೂನಾದವರು ಮೊದಲಿಗರು. ಮತ್ತು ಈಗ ಇವರು ಸಹಾಯ ಕೇಳಲು ಬಂದಿದ್ದಾರೆ. ಆದರೆ, ಅವರ ಮಾತುಗಳನ್ನ ನಂಬುವ ಹಾಗಿಲ್ಲ. ಈ ಹಂತದಲ್ಲಿ ಎಚ್ಚರಾಗಿ ಎದ್ದು ಕುಳಿತೆ.

***

ಕನಸು 22

ಅಸಾಧಾರಣ ಮೂರ್ತಿಗಳು, ಪ್ರತಿಮೆ, ಶಿಲ್ಪ

ಹಿರಾಸತ್ ವರ್ಷದ ಝಕಾರಿ ತಿಂಗಳಿನ 8ನೇ ದಿನ, ಮಂಗಳವಾರ ರಾತ್ರಿ, ಮರುದಿನ ಬುಧವಾರ ಇತ್ತು. ಅದು ಮುಹಮ್ಮದ್ ಜನಿಸಿದ ದಿನದಿಂದ ಆರಂಭಿಸಿ 1224ನೇ ವರ್ಷದ ಜಮಾದಿ-ಉಲ್ ಥಾನಿಯ 7ನೇ ದಿನಕ್ಕೆ ಸಮನಾಗುತ್ತದೆ. ಬೆಳಗಿನ ಜಾವ ಈ ಕನಸು ಕಂಡೆ. ಅಲ್ಲೊಂದು ಬೃಹತ್ ದೇವಾಲಯ ಕಾಣಿಸಿತು. ಅದರ ಹಿಂಭಾಗ ಸ್ವಲ್ಪ ಮಟ್ಟಿಗೆ ಧಕ್ಕೆಗೆ ಒಳಗಾಗಿತ್ತು. ಅದರಲ್ಲಿ ಹಲವು ದೊಡ್ಡಗಾತ್ರದ ಪ್ರತಿಮೆಗಳಿದ್ದವು. ನಾನು ಹಲವು ಜನರೊಡನೆ ಸೇರಿ ದೇವಾಲಯದೊಳಕ್ಕೆ ಹೋದೆ. ಪ್ರತಿಮೆಗಳು ಮನುಷ್ಯರ ಹಾಗೆ ನೋಡುತ್ತಿರುವ ಹಾಗೆ ಅವುಗಳ ಕಣ್ಣುಗಳು ಅಲುಗಾಡುತ್ತಿರುವುದನ್ನು ಗಮನಿಸಿದೆವು. ಪ್ರತಿಮೆಗಳ ಕಣ್ಣುಗಳು ಜೀವಂತ ಇರುವವರಂತೆ ಅಲುಗಾಡುವುದ ನೋಡಿದೆ, ಅದೇಕೆ ಹಾಗಿರಬಹುದು ಎಂದು ಅಚ್ಚರಿಯಾಯಿತು. ಆಗ ನಾನು ಅವುಗಳ ಸಮೀಪ ಹೋದೆ. ಕೊನೆಯ ಸಾಲಿನಲ್ಲಿ ಎರಡು ಸ್ತ್ರೀಪ್ರತಿಮೆಗಳಿದ್ದವು. ಆ ಎರಡರ ಪೈಕಿ ಒಂದು ಪ್ರತಿಮೆಯ ಸೀರೆ ಉಟ್ಟ ಕಾಲುಗಳು ಕಾಣಿಸಿದವು. ಅದರಿಂದ ಇಬ್ಬರು ಮಹಿಳೆಯರು ಉಳಿದೆಲ್ಲ ಪ್ರತಿಮೆಗಳು ಪುರುಷರು ಮತ್ತು ಇತರ ವಸ್ತುಗಳು ಎಂದು ಗೊತ್ತಾಯಿತು. ಅವಳು ಹೇಳಿದಳು, ತಾವು ದೀರ್ಘಕಾಲದಿಂದ ದೇವರ ಹತ್ತಿರ ಪ್ರಾರ್ಥಿಸುತ್ತಿದ್ದೇವೆ ಮತ್ತು ಪ್ರತಿಯೊಬ್ಬರೂ ನಮ್ಮನ್ನು ನಾವೇ ನೋಡಿಕೊಳ್ಳುತ್ತಿದ್ದೇವೆ. ನಾನು ಅವಳಿಗೆ ಹೇಳಿದೆ “ಒಳ್ಳೆಯದಾಯಿತು. ನಿಮ್ಮಷ್ಟಕ್ಕೆ ನೀವು ದೇವರ ಸ್ಮರಣೆಯನ್ನು ಮುಂದುವರಿಸಿರಿ”. ಹಾಗೆ ಹೇಳಿದ ಮೇಲೆ ಕಟ್ಟಡದ ಶಿಥಿಲಗೊಂಡ ಭಾಗವನ್ನು ದುರಸ್ತಿ ಮಾಡುವಂತೆ ಆದೇಶಿಸಿದೆ. ಈ ಮಧ್ಯೆ ನನಗೆ ಎಚ್ಚರವಾಯಿತು.

(1785ರಿಂದ 1798ರ ಅವಧಿಯಲ್ಲಿ ಟಿಪ್ಪು ಸುಲ್ತಾನ ದಾಖಲಿಸಿದ 37 ಕನಸುಗಳನ್ನು ಇಂಗ್ಲಿಷ್‌ನಲ್ಲಿ ’ದ ಬುಕ್ ಆಫ್ ಡ್ರೀಮ್ಸ್’ ಎಂದು ಪ್ರಕಟಿಸಲಾಗಿದೆ. ಬ್ರಿಟಿಷರು, ನಿಜಾಮ, ಮರಾಠರನ್ನು ಯುದ್ಧದಲ್ಲಿ ಸೋಲಿಸುವ ಬಗ್ಗೆ ಹಾಗೂ ಇನ್ನೂ ಹಲವು ವಿಷಯಗಳ ಬಗ್ಗೆ ಟಿಪ್ಪುವಿನ ಸುಪ್ತಮನಸ್ಸಿನ ದಾಖಲೆಗಳಿವು. ಈ ಕನಸುಗಳನ್ನು ಕನ್ನಡಕ್ಕೆ ದೇವು ಪತ್ತಾರ ದೀರ್ಘ ಪ್ರಸ್ತಾವನೆಯೊಂದಿಗೆ ಅನುವಾದಿಸಿದ್ದಾರೆ. ಗೌರಿ ಮೀಡಿಯಾ ಟ್ರಸ್ಟ್ ಇದನ್ನು ಡಿಸೆಂಬರ್ ತಿಂಗಳಿನಲ್ಲಿ ಪ್ರಕಟಿಸಲಿದೆ.)

ದೇವು ಪತ್ತಾರ

(ಕನ್ನಡಕ್ಕೆ): ದೇವು ಪತ್ತಾರ
ಹಿರಿಯ ಪತ್ರಕರ್ತರು. ಕ್ಯಾಮರಾ ಇಂಜಿನಿಯರ್ ಗುಲಾಂ ಮುಂತಕಾ, ಮಹಾದೇವ ಬಾಬಾ ಮೆಡೋಸ್ ಟೇಲರ್(ಸಂಪಾದಿತ), ಈಗ ಹೀಗಿರುವ ಲೋಕದಲ್ಲಿ (ವ್ಯಕ್ತಿಚಿತ್ರ), ಬಹಮನಿ ಸಾಮ್ರಾಜ್ಯ ಅವರ ಪ್ರಕಟಿತ ಕೃತಿಗಳಲ್ಲಿ ಕೆಲವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...