Homeಕರ್ನಾಟಕತುಮಕೂರಿನಲ್ಲಿ SP ಗ್ರಾಮ ವಾಸ್ತವ್ಯ: ಪ್ರಯೋಜನವೇನು, ಮಾಡಬೇಕಾದುದ್ದೇನು?

ತುಮಕೂರಿನಲ್ಲಿ SP ಗ್ರಾಮ ವಾಸ್ತವ್ಯ: ಪ್ರಯೋಜನವೇನು, ಮಾಡಬೇಕಾದುದ್ದೇನು?

ಹುತ್ತವ ಬಡಿದರೆ ಹಾವು ಸಾಯದು, ವಾಸ್ತವ್ಯ ಹೂಡಿದರೆ ಸಮಸ್ಯೆ ಬಗೆಹರಿಯದು ಎನ್ನುತ್ತಿವೆ ನಿದರ್ಶನಗಳು

- Advertisement -
- Advertisement -

ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನಂ ವಂಶಿಕೃಷ್ಣ ಗ್ರಾಮ ವಾಸ್ತವ್ಯ ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಮಾಡಬಹುದಾದ ಒಬ್ಬ ಪೊಲೀಸ್ ವರಿಷ್ಠಾಧಿಕಾರಿ ಹೀಗೆ ಗ್ರಾಮ ವಾಸ್ತವ್ಯದ ಮೂಲಕ ಜನರೊಂದಿಗೆ ಬೆರೆತು ಸಮಸ್ಯೆ ತಿಳಿದುಕೊಳ್ಳುವ ಪ್ರಯತ್ನ ಮಾಡಿರುವುದು ಮೆಚ್ಚುವ ಸಂಗತಿಯಾದರೂ ನಿಜದ ಸಮಸ್ಯೆಗಳ ‘ಶಸ್ತ್ರಚಿಕಿತ್ಸೆ’ ಪರಿಹಾರ ದೊರಕುತ್ತದೆಯೇ? ಜನರು ಕೇಳುವ ಎಲ್ಲಾ ರೋಗಗಳಿಗೆ, ಪ್ರಶ್ನೆಗಳಿಗೆ ಪೊಲೀಸ್ ಅಧಿಕಾರಿಯಿಂದ ಪರಿಹಾರ ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಶೂನ್ಯ.

ಪೊಲೀಸ್ ವ್ಯವಸ್ಥೆ ಜನಸ್ನೇಹಿಯಾಗಬೇಕೆಂಬ ಪ್ರಯತ್ನಗಳು ಇಂದು ನಿನ್ನೆಯವಲ್ಲ. ಅಧಿಕಾರ ಮತ್ತು ರಾಜಕೀಯ ವ್ಯಕ್ತಿಗಳ ಪ್ರಭಾವದಿಂದ ಪೊಲೀಸ್ ಠಾಣೆಗಳನ್ನು ಮುಕ್ತಗೊಳಿಸಬೇಕೆಂಬ ಮಾತುಗಳು ಹಿಂದಿನಿಂದ ಕೇಳಿಕೊಂಡೇ ಬರಲಾಗುತ್ತಿದೆ. ಆದರೆ ಇದುವರೆಗೂ ಪೊಲೀಸ್ ವ್ಯವಸ್ಥೆಯನ್ನು ರಾಜಕಾರಣದಿಂದ ಮುಕ್ತಗೊಳಿಸಲು ಸಾಧ್ಯವಾಗಿಲ್ಲ. ಪೊಲೀಸ್ ವ್ಯವಸ್ಥೆ ಮುಕ್ತಗೊಳ್ಳಲು ಮುಂದಾದಷ್ಟು ರಾಜಕಾರಣದ ಕಪಿಮುಷ್ಟಿಗೆ ಮತ್ತಷ್ಟು ಸಿಲುಕಿಕೊಳ್ಳುತಲಿದೆ. ಇನ್ನು ಪೊಲೀಸ್ ವ್ಯವಸ್ಥೆಯೇ ರಾಜಕಾರಣದ ಕಪಿಮುಷ್ಠಿಯಿಂದ ಬಿಡುಗಡೆಗೊಳ್ಳಲು ಹಿಂದೇಟು ಹಾಕುತ್ತಲೇ ಬರುತ್ತಿದೆ. ಎರಡು ಅಧಿಕಾರ ಕೇಂದ್ರಗಳು ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಕೊಡುಕೊಳುವ ಮಾರ್ಗ ಸಹಜವೇ ಇರಬಹುದು.

ಠಾಣೆಗಳು ಜನಸ್ನೇಹಿಯಾಗಬೇಕು. ದೂರು ನೀಡಲು ಬರುವ ಜನರ ಸಮಸ್ಯೆಗಳನ್ನು ಆಪ್ತವಾಗಿ ಆಲಿಸಬೇಕು. ಸಂತ್ರಸ್ಥರಿಗೆ ನ್ಯಾಯಕೊಡಿಸಿಕೊಡುವ ನಿಟ್ಟಿನಲ್ಲಿ ಸಮರ್ಪಕ ಕೆಲಸ ಮಾಡಬೇಕು, ನೊಂದು ನ್ಯಾಯ ಅರಸಿ ಪೊಲೀಸ್ ಠಾಣೆಗೆ ಬರುವವರು ತೀರ ಬಡವರು, ಅಧಿಕಾರ ಬಲವುಳ್ಳವರಿಂದ ಶೋಷಣೆಗೆ ಒಳಗಾದವರು, ದೌರ್ಜನ್ಯಕ್ಕೆ ಒಳಗಾಗುವ ದಲಿತರು ನ್ಯಾಯಕ್ಕಾಗಿ ಠಾಣೆಗಳಿಗೆ ಬರುತ್ತಾರೆ. ಅವರ ದೂರನ್ನು ಠಾಣಾ ಅಧಿಕಾರಿಗಳು ದಾಖಲಿಸಬೇಕು. ಎಷ್ಟೇ ಪ್ರಭಾವಿಗಳಾದರೂ ದೌರ್ಜನ್ಯ ನಡೆಸಿದವರ ವಿರುದ್ಧ ಕ್ರಮ ಜರುಗಿಸಬೇಕು – ಹೀಗೆ ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹೇಳುತ್ತಿದ್ದಾರೆಯೇ ವಿನಃ ಒಂದೂ ಅನುಷ್ಠಾನಕ್ಕೆ ಬಂದಿಲ್ಲ.

ಜಮೀನು ಗಲಾಟೆ, ದಾರಿ-ರಸ್ತೆ ವಿವಾದದ ಬಗ್ಗೆ ಹತ್ಯೆಗಳು ನಡೆಯುವ ಮಟ್ಟಕ್ಕೆ ಹೋಗುತ್ತವೆ. ಈ ಕುರಿತು ಎರಡು ಪಕ್ಷದವರು ನ್ಯಾಯಕ್ಕಾಗಿ ಪೊಲೀಸರ ಮೊರೆಹೋಗುತ್ತಾರೆ. ಸಂಬಂಧಪಟ್ಟ ಠಾಣಾ ಅಧಿಕಾರಿ ಪಕ್ಷಾತೀತ ನ್ಯಾಯ ಒದಗಿಸಲು ಪ್ರಯತ್ನಿಸಿದರೆ, ರಾಜಕಾರಣವೆಂಬುದು ಅಡ್ಡಿಯಾಗುತ್ತದೆ. ಪೋನ್ ಮೂಲಕವೇ ಎಲ್ಲವೂ ನಡೆದುಹೋಗುತ್ತದೆ. ಪೊಲೀಸರಿಂದ ಅರೆಸ್ಟ್ ಆದ ಗಂಟೆಯೊಳಗೆ ಆರೋಪಿಗಳು ಹೊರಗೆ ಓಡಾಡುತ್ತಾರೆ. ಇದೆಲ್ಲವೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿದಿರುವ ಸಂಗತಿಯೇ ಆಗಿದೆ. ಪೊಲೀಸ್ ವರಿಷ್ಠಾಧಿಕಾರಿ ಜನರ ಸ್ನೇಹ ಸಂಪಾದಿಸಲು ಗ್ರಾಮ ವಾಸ್ತವ್ಯ ಹೂಡುವುದು ಸರಿಯಾದ ಕ್ರಮವಾದರೂ ಅದು ತಾತ್ಕಾಲಿಕ ಶಮನವಷ್ಟೇ. ಅದರಿಂದ ಶಾಶ್ವತ ಪರಿಹಾರಗಳು ಕಂಡುಬರುವುದಿಲ್ಲ ಎಂದು ಸಾಮಾನ್ಯರು ಮಾತನಾಡಿಕೊಳ್ಳುವಂತೆ ಆಗಿದೆ.

ತುಮಕೂರು ಜಿಲ್ಲೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಬೆಂಗಳೂರಿಗೆ ಸೀಮಿತವಾಗಿದ್ದ ರಿಯಲ್ ಎಸ್ಟೇಟ್ ವ್ಯವಹಾರ ತುಮಕೂರಿಗೆ ಅಡಿಯಿಟ್ಟು ಸಣ್ಣಪುಟ್ಟ ರೌಡಿಗಳನ್ನು ಸೃಷ್ಟಿ ಮಾಡಿದೆ. ವ್ಯವಹಾರದ ಕಾರಣಕ್ಕಾಗಿ ಮಾಜಿ ಮೇಯರ್ ರವಿಯ ಹತ್ಯೆಯಾಯಿತು. ಅದು ಹಾಡುಹಗಲೇ. ಕಳೆದೊಂದು ವರ್ಷದಲ್ಲಿ ತುಮಕೂರಿನಲ್ಲಿ ನಡೆದಿರುವ ಹತ್ಯೆಗಳು ಇದೇ ಕಾರಣಕ್ಕಾಗಿಯೇ ನಡೆದವು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ನಿಜ. ಆದರೆ ರೌಡಿಗಳ ಉಪಟಳ ನಿಂತಿಲ್ಲ. ಪುಂಡುಪೋಕರಿಗಳು ನಿತ್ಯದ ಜೂಜು, ಕುಡಿತಕ್ಕೆ ಹಣ ಹೊಂದಿಸಲು ಮಾಂಗಲ್ಯ ಸರಗಳಿಗೆ ಅಪಹರಿಸುತ್ತಿರುವುದು ನಗರದಲ್ಲಿ ನಡೆಯುತ್ತಲೇ ಇದೆ. ಪ್ರಭಾವಿ ವ್ಯಕ್ತಿಗಳ ಮಕ್ಕಳು ಇಸ್ಪೀಟ್, ಜೂಜಿನಲ್ಲಿ ಭಾಗಿಯಾಗಿದ್ದರೂ ಅವರನ್ನು ಬಂಧಿಸದೇ ಬಿಟ್ಟ ಸಾಕಷ್ಟು ಉದಾಹರಣೆಗಳು ಇವೆ ಎನ್ನುತ್ತಾರೆ ಹಿರಿಯ ಪತ್ರಕರ್ತರು.

ಪಾವಗಡ ತಾಲೂಕಿನಲ್ಲಿ ಬಹುತೇಕ ಗ್ರಾಮಗಳಲ್ಲಿ ಮಟ್ಕಾ, ಇಸ್ಪೀಟ್, ಜೂಜು ನಡೆಯುತ್ತಲೇ ಇದೆ. ‘ಹೊಂದಾಣಿಕೆ’ ಮನೋಭಾವವು ಅದು ನಿರಂತರವಾಗಿ ನಡೆಯಲು ಕಾರಣ. ಹೊಂದಾಣಿಕೆ ಎರಡು ಕಡೆಯಿಂದಲೂ ನಡೆಯುತ್ತಿದೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಇಸ್ಪೀಟ್ ಆಡುವವರು, ಮಟ್ಕಾ ಚೀಟಿ ಬರೆಯುವವರು ಮತ್ತು ರಕ್ಷಕರು ‘ಹಸ್ತಲಾಘವ’ ಮಾಡಿದ್ದರಿಂದಲೇ ಎಲ್ಲವೂ ಅಡೆತಡೆಯಿಲ್ಲದೆ ನಡೆಯುತ್ತಿದೆ. ಹೇಮಾಹೇಮಿ ಅಧಿಕಾರಿಗಳು ಬಂದುಹೋದರೂ ಮಟ್ಕಾ ನಿಲ್ಲಿಸಲು ಸಾಧ್ಯವಾಗಿಲ್ಲ. ‘ಪಾಲುದಾರಿಕೆ’ ‘ಗುಡ್ಡೆ ಬಾಡು’ ಮೈತ್ರಿ, ಸುಸೂತ್ರವಾಗಿ ನಡೆಯುತ್ತಿದೆ. ಮಟ್ಕ ದೋಸ್ತಿಗಳ ಬಂಧನ, ಬಿಡುಗಡೆ, ಗಡಿಪಾರು ಎಲ್ಲವೂ ಆಗುತ್ತದೆ. ಆದರೂ ‘ವ್ಯವಹಾರ’ ಮಾತ್ರ ರಕ್ಷಕರ ನೆರಳಿನಲ್ಲೇ ನಡೆಯುತ್ತಿದೆ. ಕೋಟ್ಯಂತರ ವಹಿವಾಟು ನಡೆಯುವುದರಿಂದ ಪಾವಗಡ ಒಳ್ಳೆ ‘ಹುಲ್ಲುಗಾವಲು’ ಎಂಬ ಹೆಸರು  ಪಡೆದಿದೆ. .

ಅನಗತ್ಯವಾಗಿ ಪಾವಗಡ ತಾಲೂಕನ್ನು ಇಲ್ಲದ ಸಮಸ್ಯೆಗಳನ್ನು ಬಿಂಬಿಸುತ್ತಲೇ ‘ಲೂಟಿ’ಗೆ ಪರವಾನಗಿ ಪಡೆಯುತ್ತಲೇ ಇದ್ದಾರೆ. ಹೋದವರು ದುಂಡಗಾಗಿದ್ದಾರೆ. ಪನಿಷ್ಮೆಂಟ್ ಟ್ರಾನ್ಸಫರ್ ಒಂದು ರೀತಿಯಲ್ಲೇ ಒಳ್ಳೆಯದೇ ಆಗಿದೆ. ತಾಲೂಕು ಅಭಿವೃದ್ಧಿ ಕಾಣದಿದ್ದರೂ ಜೇಜುಗಳು ಅಭಿವೃದ್ಧಿ ಕಾಣುತ್ತಿವೆ. ಹೀಗಾಗಿ ಎಲ್ಲಾ ಹಂತದಿಂದಲೂ ಪಾವಗಡ ತಾಲೂಕಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಧ್ಯಪ್ರಾಚ್ಯ ಸಂಘರ್ಷ| ಇರಾನ್ ಮೇಲಿನ ದಾಳಿಗೆ ಅಮೆರಿಕಾ ಭಾರತದ ಬಂದರುಗಳನ್ನು ಬಳಸುತ್ತಿದೆ ಎಂಬ ಹೇಳಿಕೆ ವೈರಲ್: ಭಾರತದ ಪ್ರತಿಕ್ರಿಯೆ ಏನು?

ಇರಾನ್ ಮೇಲೆ ನೌಕಾ ದಾಳಿ ನಡೆಸಲು ಅಮೆರಿಕ ಭಾರತದ ಬಂದರುಗಳನ್ನು ಬಳಸುತ್ತಿದೆ ಎಂಬ ವೈರಲ್ ಹೇಳಿಕೆಗಳನ್ನು ಭಾರತ ಬಲವಾಗಿ ತಿರಸ್ಕರಿಸಿದೆ. ಅಲ್ಲದೇ ಈ ಆರೋಪಗಳನ್ನು "ನಕಲಿ"  ಮತ್ತು “ಆಧಾರರಹಿತ” ಎಂದು ಕರೆದಿದೆ. ಬುಧವಾರ ವಿದೇಶಾಂಗ...

ಬಾಬಾ ಬುಡನ್‌ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ ‘ಪ್ರಗತಿಪರ ಸೌಹಾರ್ದ ಸಂಘಟನೆಗಳ’ ಆಗ್ರಹ

ಚಿಕ್ಕಮಗಳೂರಿನ ಬಾಬಾ ಬುಡನ್‌ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿದ ಕರ್ನಾಟಕ ಸಮಸ್ತ ಪ್ರಗತಿಪರ ಸೌಹಾರ್ದ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ಆಗ್ರಹಿಸಿದ್ದಾರೆ. ಚಿಕ್ಕಮಗಳೂರಿನ ಬಾಬಾ ಬುಡನ್‌...

ಖಮೇನಿ ನಿಧನಕ್ಕೆ ತಡವಾಗಿ ಸಂತಾಪ ಸೂಚಿಸಿದ ಭಾರತ; ಇರಾನ್‌ ರಾಯಭಾರ ಕಚೇರಿಯಲ್ಲಿನ ಪುಸ್ತಕದಲ್ಲಿ ವಿಕ್ರಮ್ ಮಿಶ್ರಿ ಸಹಿ

ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ಭಾರತ ತಡವಾಗಿ ಸಂತಾಪ ಸೂಚಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಗುರುವಾರ ನವದೆಹಲಿಯ ಇರಾನಿನ ರಾಯಭಾರ ಕಚೇರಿಯಲ್ಲಿ ಸಂತಾಪ ಸೂಚಿಸುವ ಪುಸ್ತಕಕ್ಕೆ...

ಉಕ್ರೇನ್, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ತ್ವರಿತವಾಗಿ ಕೊನೆಗೊಳಿಸಲು ಬೆಂಬಲಿಸುತ್ತೇನೆ: ಫಿನ್ಲೆಂಡ್‌ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಪಶ್ಚಿಮ ಏಷ್ಯಾ ಮತ್ತು ಉಕ್ರೇನ್‌ನಲ್ಲಿನ ಸಂಘರ್ಷಗಳಿಗೆ "ತ್ವರಿತ ಅಂತ್ಯ" ವನ್ನು ತರಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ, ಯಾವುದೇ ಸಮಸ್ಯೆಯನ್ನು ಮಿಲಿಟರಿ ಮುಖಾಮುಖಿಯ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು...

ಮಹಾರಾಷ್ಟ್ರ| ಬಣ್ಣ ಎರಚಿದ ಮೊಮ್ಮಗನ ಮೇಲೆ ಬಿಸಿ ನೀರು ಸುರಿದ ಮಹಿಳೆ; ಬಾಲಕನ ಸ್ಥಿತಿ ಗಂಭೀರ

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕೊರಾಡಿ ಪ್ರದೇಶದಲ್ಲಿ ಹೋಲಿ ಆಡುತ್ತಿದ್ದಾಗ ನಾಲ್ಕು ವರ್ಷದ ಮೊಮ್ಮಗ ತನ್ನ ಮೇಲೆ ಬಣ್ಣ ಎರಚಿದ್ದರಿಂದ ಕೋಪಗೊಂಡ ಅಜ್ಜಿ ಮಗುವಿನ ಮೇಲೆ ಕುದಿಯುವ ನೀರನ್ನು ಸುರಿದಿರುವ ವಿಡಿಯೋ ಇದೀಗ ವೈರಲ್...

ಭಾರತದ ಕಾಲ ಬುಡದಲ್ಲಿ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ : 100ರಷ್ಟು ಸಿಬ್ಬಂದಿ ಸಾವಿಗೀಡಾದರೂ ಮೋದಿ ಸರ್ಕಾರ ಮೌನ!

ಭಾರತದಿಂದ ಕೇವಲ 300 ಕಿಲೋ ಮೀಟರ್ ದೂರದಲ್ಲಿ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ 'ಐಆರ್‌ಐಎಸ್ ದೆನಾ' ಮೇಲೆ ಅಮೆರಿಕ ಜಲಾಂತರ್ಗಾಮಿ ಬುಧವಾರ (ಮಾ.4) ಭೀಕರ ದಾಳಿ ನಡೆಸಿದೆ. ಈ ಘಟನೆಯಲ್ಲಿ ಇರಾನ್‌ ನೌಕೆಯಲ್ಲಿದ್ದ 180 ಸಿಬ್ಬಂದಿಯ...

ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆ ಮೇಲೆ ದಾಳಿ: ‘ರಾಜಿ ಮಾಡಿಕೊಂಡ ಪ್ರಧಾನಿ ಕಾರ್ಯತಂತ್ರದ ಸ್ವಾಯತ್ತತೆ ಬಿಟ್ಟುಕೊಟ್ಟರು: ರಾಹುಲ್ ಟೀಕೆ

ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆ ಐರಿಸ್ ದೇನಾದ ಮೇಲೆ ಅಮೆರಿಕಾ ದಾಳಿ ಮಾಡಿದ ಒಂದು ದಿನದ ನಂತರ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ...

ಟ್ರಂಪ್ ಬೆದರಿಕೆಗೆ ಹೆದರದ ಸ್ಪೇನ್ ಪ್ರಧಾನಿ; ಇರಾನ್ ಮೇಲಿನ ದಾಳಿಗೆ ಸೇನಾ ನೆಲೆ ಬಳಸಲು ಅನುಮತಿ ನಿರಾಕರಿಸಿದ ಪೆಡ್ರೊ ಸ್ಯಾಂಚೆಜ್

ಇರಾನ್ ಮೇಲೆ ದಾಳಿ ಮಾಡಲು ಅಮೆರಿಕದ ವಿಮಾನಗಳು ತನ್ನ ನೆಲೆಗಳನ್ನು ಬಳಸಲು ಅನುಮತಿಸಲು ಮ್ಯಾಡ್ರಿಡ್ ನಿರಾಕರಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಟೀಕೆಗಳಿಗೆ ಬುಧವಾರ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ತಿರುಗೇಟು...

ಭಾರತದಿಂದ ಹಿಂದಿರುಗುತ್ತಿದ್ದ ಯುದ್ಧನೌಕೆ ಮೇಲೆ ಹಠಾತ್ ದಾಳಿ : ಅಮೆರಿಕ ಪಶ್ಚಾತ್ತಾಪ ಪಡಲಿದೆ ಎಂದ ಇರಾನ್

ಭಾರತೀಯ ನೌಕಾಪಡೆಯ ಆಹ್ವಾನದ ಮೇರೆಗೆ ಸಮರಾಭ್ಯಾಸದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ ಐಆರ್‌ಐಎಸ್ ದೆನಾ ಮೇಲೆ ಅಮೆರಿಕದ ಜಲಾಂತರ್ಗಾಮಿ ದಾಳಿ ನಡೆಸಿ ಅದನ್ನು ಮುಳುಗಿಸಿದೆ. ಮಾರ್ಚ್ 4ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯಿಂದ ಸುಮಾರು 40 ನಾಟಿಕಲ್...

ದೆಹಲಿ| ಹೋಳಿ ಹಬ್ಬ ಸಡಗರದಲ್ಲಿ ಕುಡಿದು ವಾಹನ ಚಾಲನೆ; 1,200 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲು

ಹೋಳಿ ಹಬ್ಬದಂದು ನಗರದಾದ್ಯಂತ ನಡೆಸಿದ ವಿಶೇಷ ಪರಿಶೀಲನೆಯಲ್ಲಿ ದೆಹಲಿ ಸಂಚಾರ ಪೊಲೀಸರು 1,200 ಕ್ಕೂ ಹೆಚ್ಚು ವಾಹನ ಚಾಲಕರ ವಿರುದ್ಧ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ಪಶ್ಚಿಮ ವಲಯದಿಂದ ಅತಿ ಹೆಚ್ಚು...