ಕರ್ನಾಟಕದ ಜನಸ್ತೋಮಕ್ಕೆ ಅನ್ನ ನೀರು ವಸತಿ ಮತ್ತು ಉದ್ಯೋಗ ನೀಡುವ ಜವಾಬ್ದಾರಿ ಹೊತ್ತವರಂತೆ ಬೊಬ್ಬಿರಿಯುತ್ತಿದ್ದ ಅಷ್ಟಮಠಗಳ ಯತಿಗಳ ಕರ್ಮಕಾಂಡ ಅಷ್ಟ ದಿಕ್ಕಿಗೂ ಹರಡುತ್ತಿದೆಯಲ್ಲಾ.
ಕರ್ಮಕಾಂಡದ ರುವಾರಿಯಾಗಿದ್ದ ಶಿರೂರು ಸ್ವಾಮಿ ನಿಜಕ್ಕೂ ಈ ಸಮಯದಲ್ಲಿ ಹುತಾತ್ಮರಂತೆ ಕಾಣುತ್ತಿದ್ದಾರೆ. ಸದರಿ ಸ್ವಾಮಿಯನ್ನು ಏಳನೇ ವರ್ಷಕ್ಕೆ ಸನ್ಯಾಸಿ ಮಾಡಲಾಗಿತ್ತು ಪ್ರಾಪ್ತವಯಸ್ಸಿಗೆ ಬಂದ ಶಿರೂರು ಯಾವ ಎಗ್ಗೂಇಲ್ಲದೆ ಪಂಚೇಂದ್ರಿಯಗಳನ್ನ ಧಾರಾಳವಾಗಿಯೇ ಬಳಸತೊಡಗಿದ್ದಲ್ಲದೆ ತನ್ನ ಬಗ್ಗೆ ಮಾತನಾಡಲು ಮುಂದಾದ ಇತರ ಸ್ವಾಮಿಗಳ ಜಾತಕವನ್ನೇ ಬಿಚ್ಚಿಡುವುದಾಗಿ ಬೆದರಿಕೆ ಹಾಕಿದ್ದರಂತಲ್ಲಾ. ಹಾಗೆ ನೋಡಿದರೆ ಇದು ಬೆದರಿಕೆಯಲ್ಲ ನಿಮ್ಮ ಕೆಲಸವನ್ನ ನೀವು ಮಾಡಿ ನನ್ನ ಕೆಲಸವನ್ನ ನಾನು ಮಾಡುತ್ತೇನೆ ಎಂದ ಶಿರೂರು ಎಲ್ಲವನ್ನ ಕಂಠಪೂರ್ತಿ ಅನುಭವಿಸಿದರಂತಲ್ಲಾ. ಅಂತೂ ಬುದ್ದಿ ಮತ್ತು ಭಾಷೆಯ ಬಗ್ಗೆ ನಿಯಂತ್ರಣ ಕಳೆದುಕೊಂಡ ಶಿರೂರು ಅಷ್ಟಮಠಕ್ಕೆ ಅನಿಷ್ಟವಾದ ಕೂಡಲೇ ಅವರ ಕೊಲೆಯಾಯ್ತಂತಲ್ಲಾ ಥೂತ್ತೇರಿ.
*****
ಶಿರೂರು ಸ್ವಾಮಿಯ ಅಕ್ರಮ ಸಂತಾನದಂತಿರುವ ಕೆಲವೇ ಕೆಲವು ಮಾಧ್ಯಮದ ಮುಸಂಡಿಗಳು ಶಿರೂರನ ಬಾಲಲೀಲೆ, ಪ್ರಾಪ್ತ ವಯಸ್ಸಿನ ಬಾನಗಡಿ ಹಾಗೂ ಸ್ವಾಮಿಯಾದ ನಂತರ ನಡೆಸಿದ ಕಾಮಕ್ರೀಡೆಯನ್ನ ಮರೆಮಾಚಿ ರಮ್ಯಾಶೆಟ್ಟಿ ಎಂಬುವಳು ಮಾಯಾಂಗನೆ, ವಿಷಕನ್ಯೆ, ನಯವಂಚಕಿ ಶಿರೂರು ಶಿರಭಾಗದಲ್ಲಿದ್ದ ಸರವನ್ನು ಲಫಟಾಯಿಸಿದ್ದಾಳೆ. ಕೈ ಕಡಗವನ್ನು ಕಿತ್ತುಕೊಂಡಿದ್ದಾಳೆ. ಇವೆಲ್ಲವನ್ನ ದೋಚಿಕೊಂಡು ಹೋಗುವ ಮುನ್ನ ಪಾಪ ದೇವರಂತಹ ಶಿರೂರು ಸ್ವಾಮಿಗೆ ವಿಷಪ್ರಾಶನ ಮಾಡಿಸಿರಲುಬಹುದು. ಆಕೆ ಮುಸ್ಲಿಂ ಹೆಣ್ಣುಮಕ್ಕಳು ಧರಿಸುವಂತಹ ಬುರ್ಖಾ ಧರಿಸಿದ್ದಳು ಎಂದರೆ, ಪಾತಕಕೃತ್ಯ ನಡೆಸಿರುವುದಕ್ಕೆ ಇನ್ನಾವ ಸಾಕ್ಷಿ ಬೇಕು ಎಂಬಂತೆ ಬಿತ್ತರಿಸುತ್ತ ಕೂತಿವೆಯಂತಲ್ಲಾ ಥೂತ್ತೇರಿ.
*****
ಅಷ್ಟಮಠದ ಯತಿಗಳಲ್ಲೇ ಸರ್ವಶ್ರೇಷ್ಠರೂ, ಮನುಕುಲತಿಲಕರೂ ಮತ್ತು ಕೃಷ್ಣನ ಭಾಗಕ್ಕೆ ವಾಸುದೇವನಂತಿರುವ ಪೇಜಾವರ ಶ್ರೀಗಳನ್ನ ಮಾತನಾಡಿಸಿದರೆ ಹೇಗೆ ಅನ್ನಿಸಿ ಫೋನ್ ಮಾಡಲಾಗಿ ರಿಂಗಾಯ್ತು, ರಿಂಗ್ ಟೋನ್…… ಕೃಷ್ಣ ನೀ ಬೇಗನೇ ಬಾರೋ, ಬೇಗನೆ ಬಂದು ಮುಕ್ತಿಯ ತೋರೋ. ಕೃಷ್ಣಾ………….. ಹಲೋ
“ನಮಸ್ಕಾರ ಸ್ವಾಮೀಜಿ ನಾನು ಯಾಹೂ.”
“ಯಾರ ಬಳಿಯಲ್ಲೂ ಮಾತನಾಡಲು ಸಮಯವಿಲ್ಲ.”
ಒಂದೇ ನಿಮಿಷ ಸ್ವಾಮಿ.”
“ಸಾಧ್ಯವಿಲ್ಲ.”
“ಹಾಗಾದ್ರೆ ನಮ್ಮ ಮನಸ್ಸಿಗೆ ಬಂದದ್ದನ್ನ ಬರಕೊಳ್ತೀವಿ ಸ್ವಾಮಿ.”
“ಎರಡೇ ಮಾತಲ್ಲಿ ಕೇಳಿ.”
“ಧರ್ಮರಾಯ ಇದ್ದ ಜಾಗದಲ್ಲಿ ಮಳೆ ಬೆಳೆ ಜೊತೆಗೆ ಅಪರಾಧಗಳು ನಡೀತಿರಲಿಲ್ಲ. ಹಾಗೇ ನಮ್ಮ ಪೇಜಾವರರು ನೆಲೆಸಿದ ಜಾಗ ಅಂದುಕೊಂಡಿದ್ದೋ.”
“ಆ ನಂಬಿಕೆಗೆ ಈಗ ಯಾವ ತೊಂದರೆಯೂ ಆಗಿಲ್ಲ.”
“ಇದೇನು ಸ್ವಾಮಿ ಹೀಗಂತಿರಿ, ಪ್ರಳಯದಂತಹ ಮಳೆ ಆಗಿದೆ, ಶಿರೂರು ಸ್ವಾಮಿ ಕೊಲೆಯಾಗಿದೆ.”
“ಅದನ್ನ ಕೊಲೆ ಅಂತ ಈಗಲೇ ಹೇಳಲು ಬರುವುದಿಲ್ಲ.”
“ನಂತರ ಹೇಳಬಹುದಾ.”
“ನೋಡಿ ಇವರೆ ಈಗ ನಾವು ಯಾವ ವಿಷಯ ಕುರಿತು ಏನೂ ಹೇಳುವುದಿಲ್ಲ.”
“ಅಂತಹ ಸ್ಥಿತಿ ಶಿರೂರು ತಂದಿಟ್ಟರಲ್ಲಾ ಸ್ವಾಮೀಜಿ.”
“ಅಂತಹ ಸ್ಥಿತಿ ಬಂದಿಲ್ಲ.”
“ನಿಮ್ಮ ಬುಡಕ್ಕೆ ಬಂದಿದೆಯಲ್ಲಾ ಸ್ವಾಮಿ.”
“ನಮ್ಮ ಬುಡಕ್ಕೆ ಯಂತ ಬಂದಿಲ್ಲ.”
“ಪೇಜಾವರಶ್ರೀ ತಾರುಣ್ಯದಲ್ಲಿ ತರುಣಿಯ ಸಂಗ ಮಾಡಿದ್ದರು ಅದರ ಫಲವಾಗಿ ಮಗಳಿದ್ದಾಳೆ ಅಂತ ದೂರಿದೆಯಲ್ಲ ಸ್ವಾಮೀಜಿ.”
“ಅದನ್ನ ಸಾಭೀತುಮಾಡಿದರೆ ಪೀಠತ್ಯಾಗ ಮಾಡುತ್ತೇನೆ.”
“ನೀವು ಮಾಡದೆಯಿದ್ರೂ ಆಯಸ್ಸು ಅವಧಿ ಎಲ್ಲ ಮುಗಿದಿದೆ, ಈಗಿನ ನಿಮ್ಮ ತ್ಯಾಗ ಒಂಥರ ಮಾಧ್ವ ಕುಲವೇ ತಲೆತಗ್ಗಿಸುವಂತದ್ದು.”
“ಮಾಧ್ವಕುಲ ತಲೆತಗ್ಗಿಸುವಂತಹ ಕೆಲಸ ನಾವು ಮಾಡಿಲ್ಲ.”
“ನೀವು ಮಾಡದೇಯಿದ್ರೂ ಮಾಡೋರಿಗೆ ಪುಸಲಾಯಿಸಿದ್ದೀರಿ.”
“ಅದನ್ನ ಸಬೀತು ಮಾಡಿದರೆ ಪೀಠತ್ಯಾಗ ಮಾಡ್ತೇನೆ.”
“ಮಾಡಬೇಡಿ ಅಲ್ಲೇ ಇರಿ, ಆದರೆ ಈ ಹಿಂದೆ ಹೆಣ್ಣಿನ ಸಂಗದ ಬಗ್ಗೆ ಪ್ರಚೋದನೆಗೊಂಡ ಸ್ವಾಮಿಯೊಬ್ಬರು ಪೀಠತ್ಯಾಗ ಮಾಡಿ ಸಂಸಾರಿಯಾಗುತ್ತೇನೆ ಅಂದಾಗ ತಾವು ಹಾಗೆ ಮಾಡಬೇಡಿ, ಪೀಠದಲ್ಲಿ ಇದ್ದುಕೊಂಡೇ ಗುಟ್ಟಾಗಿ ನಿಭಾಯಿಸಿ ಅನ್ನೋ ಮಾತನ್ನ ತಾವು ಹೇಳಿದ್ದೀರಿ.”
“ಇಲ್ಲ ನಾನು ಹಾಗೆ ಹೇಳಿಲ.್ಲ”
“ತಮ್ಮ ಮಾತನ್ನ ಮೀರಿ ಪೀಠತ್ಯಾಗ ಮಾಡಿ ಈಗ ಅಮೇರಿಕದಲ್ಲಿ ಸಂಸಾರಿಯಾಗಿರೊ ವ್ಯಕ್ತಿ, ನಮ್ಮ ಜೊತೆ ನಿಮ್ಮ ಸಂಧಾನದ ಮಾತನ್ನ ಹಂಚಿಕೊಂಡ್ರು ಇದಕ್ಕಿಂತ ಸಾಕ್ಷಿಬೇಕೆ”
“ನೋಡಿ ಇವರೆ ನಾನು ಹೇಳಿದ್ದು ಸನ್ಯಾಸಿ ಜೀವನ ಕಷ್ಟಕರವಾದದ್ದು ಅದನ್ನ ನಿಭಾಯಿಸಿ ಅಂತ ಹೇಳಿದ್ದು.”
“ಹೊಂದಾಣಿಕೆಯಿಂದ.”
“ಹಾಗಲ್ಲ ಕೃಷ್ಣಪೂಜೆ ಓದು ಧ್ಯಾನವ್ರತಗಳನ್ನ ಮಾಡಿಕೊಂಡು ನಮ್ಮ ಮನಸ್ಸನ್ನ ನಿಯಂತ್ರಣದಲ್ಲಿ ಇಟ್ಟುಕೊಂಡು ಸನ್ಯಾಸಿ ಜೀವನವನ್ನ ಸಾಗಿಸಬೇಕು.”
“ಅದು ಸರಿ ಸ್ವಾಮಿ ನೀವು ಪೂಜೆ ಮಾಡೋ ದೇವರೆ ಸ್ತ್ರೀಲೋಲ. ಮತ್ತೆ ಪೀಡಕನಾಗಿದ್ದ. ಅವನು ಕಟ್ಟಿಕೊಂಡ ಸ್ತ್ರೀಯರ ಸಂಖ್ಯೆ ಅಗಣಿತ, ಅಂತಹ ವ್ಯಕ್ತಿಯನ್ನ ಪೂಜೆ ಮಾಡೋರು ಸನ್ಯಾಸಿ ಜೀವನ ಮಾಡದು ಸುಳ್ಳಲ್ಲವ.”
“ನಾವಿದ್ದೇವಲ್ಲ.”
“ನಿಮ್ಮ ಮಠದಲ್ಲಿದ್ದವರಿಂದಲೇ ನಿಮ್ಮ ಜೀವನವೂ ಅನಾವರಣವಾಯ್ತಲ್ಲ ಸ್ವಾಮಿ.”
“ಯಂತ ಅನಾವರಣವಾಯ್ತು.”
“ಬೇರೆಯವರಿಗೆ ಗೌಪ್ಯ ಸುಖಸಂಸಾರ ಹೇಳಿಕೊಟ್ಟವರು, ಹಾಗೇ ತಾವೂ ಮಾಡುತ್ತಿರಬಹುದಲ್ಲ, ಇಂತ ಅನುಮಾನಗಳು ಈಗ ಹುಟ್ಟಿಕೊಂಡಿವೆ, ತಡವಾದರೂ ಸತ್ಯದರ್ಶನವಾಗುತ್ತಿವೆ. ಕರ್ನಾಟಕದ ಮಠಗಳ ಮಾನ ಹರಾಜಾಗ್ತಾಯಿದೆ. ಇಷ್ಟರ ನಡುವೆ ಇನ್ನೂ ಕೆಲವು ಮಠಗಳು ತಮ್ಮ ನೈತಿಕ ಜವಬ್ದಾರಿ ಬಿಟ್ಟುಕೊಟ್ಟಿಲ್ಲ. ಆದರೆ ನಿಮ್ಮ ಮಠಗಳು ಹಣ ಅಧಿಕಾರ ಸ್ತ್ರೀಶಕ್ತಿ ಮತ್ತು ಮತಾಂಧತೆಯಿಂದ ಪತನವಾಗ್ತಾಯಿವೆ. ಅದೂ ನೈತಿಕವಾಗಿ ನಿಮಗೂ ಹಿಂಗನ್ಸಲ್ಲ ಸ್ವಾಮೀಜಿ……. ಹಲೋ ಹಲೋ ಹಲೋ ಮಾತಾಡಿ ಸ್ವಾಮೀಜಿ..
ಥೂತ್ತೇರಿ.


