ಉಡುಪಿ ಜಿಲ್ಲೆಯ ಮಲ್ಪೆ ಬೀಚ್ನಲ್ಲಿ ನಿರ್ಮಿಸಿದ ರಾಜ್ಯದ ಮೊದಲ ತೇಲುವ ಸೇತುವೆ ಉದ್ಘಾಟನೆಯಾದ ಮೂರೇ ದಿನಕ್ಕೆ ಸಮುದ್ರದಲ್ಲಿ ಕೊಚ್ಚಿಹೋಗಿದೆ. ಸೇತುವೆಯ ಅವಶೇಷಗಳು ಸಮುದ್ರದ ದಡದಲ್ಲಿ ಬಿದ್ದಿದ್ದು, ಅದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ರಾಜ್ಯ ಬಿಜೆಪಿ ಸರ್ಕಾರದ 40% ಭ್ರಷ್ಟಾಚಾರದ ಫಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಮೊದಲ ತೇಲುವ ಸೇತುವೆ ಮೇ 6ರ ಶುಕ್ರವಾರದಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಮತ್ತು ಜಿಲ್ಲಾಧಿಕಾರಿ ಎಂ. ಕೂರ್ಮಾ ರಾವ್ ಅವರು ಸಮ್ಮುಖದಲ್ಲಿ ಉದ್ಘಾಟನೆಗೊಂಡಿತ್ತು. 100 ಮೀಟರ್ ಉದ್ದ ಮತ್ತು 3.5 ಮೀಟರ್ ಅಗಲವಿರುವ ತೇಲುವ ಸೇತುವೆಯನ್ನು ಸುಮಾರು 80 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಭಾನುವಾರ ಸಂಜೆಯವರೆಗೂ ಹಲವಾರು ಪ್ರವಾಸಿಗರು ಸೇತುವೆಯಲ್ಲಿ ನಡೆದಾಡಿದ್ದರು. ಆದರೆ, ಸೋಮವಾರ ಬೆಳಗ್ಗೆ ಪ್ರವಾಸಿಗರು ಸಮುದ್ರ ತೀರಕ್ಕೆ ಬಂದಾಗ ಸೇತುವೆಯ ಬಾಕ್ಸ್ಗಳು ಚೆಲ್ಲಾಪಿಲ್ಲಿಯಾಗಿ ಸಮುದ್ರದ ಬದಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ಇದರ ವಿಡಿಯೊ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಉಡುಪಿ: ಕಾಪು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿದ ದೇವಸ್ಥಾನ ಸಮಿತಿ; ‘ಸಹಬಾಳ್ವೆ ಉಡುಪಿ’ ವಿರೋಧ
ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು, ಸೇತುವೆಯ ಈ ಅವಸ್ಥೆಗೆ ರಾಜ್ಯ ಬಿಜೆಪಿಯ 40% ಭ್ರಷ್ಟಾಚಾರವೇ ಕಾರಣ ಎಂದು ಹೇಳಿದ್ದಾರೆ.
ಕನ್ನಡ ಪರ ಹೋರಾಟಗಾರ ದಿನೇಶ್ ಕುಮಾರ್ ಅವರು, “ಭ್ರಷ್ಟ ಸರ್ಕಾರದ 40% ಕಮಿಷನ್ ಸೇತುವೆ ಮೂರೇ ದಿನಗಳಿಗೆ ಮುರಿದು ಸಮುದ್ರದ ಪಾಲಾಯ್ತು” ಎಂದು ಕಿಡಿ ಕಾರಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಕೆ.ಆರ್. ಪ್ರಗತ್ ಅವರು, “20% ಕೇಂದ್ರಕ್ಕೆ 20% ರಾಜ್ಯಕ್ಕೆ. ಒಟ್ಟು 40%. ಉಡುಪಿ ಜಿಲ್ಲೆಯ ಪ್ರವಾಸಿ ಆಕರ್ಷಣೆಯ ಕೇಂದ್ರವಾಗಬೇಕಿದ್ದ ಮಲ್ಪೆಯ ಕೋಟಿ ವೆಚ್ಚದ ತೇಲು ಸೇತುವೆ, ಬಿಜೆಪಿ ಕಮೀಷನ್ ಆಸೆಗೆ ಮಣ್ಣುಪಾಲಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಕೋಮು ದ್ವೇಷ ಹೆಚ್ಚುತ್ತಿರುವ ಹಿನ್ನಲೆ: ರಾಜ್ಯ ಮಟ್ಟದ ಸೌಹಾರ್ದ ಸಮಾವೇಶಕ್ಕೆ ಸಜ್ಜಾಗುತ್ತಿರುವ ಉಡುಪಿ!
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ – ಉಡುಪಿ: ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರುತ್ತಿರುವುದೇಕೆ?
ಸಮುದ್ರವು ಪ್ರಕ್ಷುಬ್ಧಗೊಂಡಿದ್ದರಿಂದ ಸೇತುವೆ ಹಾಳಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾಗಿ ಈದಿನ.ಕಾಂ ವರದಿ ಮಾಡಿದ್ದು, ವಿಷಯ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಲೈಫ್ ಗಾರ್ಡ್ಗಳು ಚೆಲ್ಲಾಪಿಲ್ಲಿಯಾಗಿ ಹರಡಿದ್ದ ಸೇತುವೆಯ ಬಾಕ್ಸ್ಗಳನ್ನು ಸಂಗ್ರಹಿಸಿ ಸಮುದ್ರದ ಬದಿಯಲ್ಲಿ ಇಡಲಾಗಿದೆ.
“ಸೈಕ್ಲೋನ್ ಮತ್ತು ಭಾರೀ ಗಾಳಿಯಿಂದಾಗಿ ತೇಲುವ ಸೇತುವೆಗೆ ಯಾವುದೇ ಹಾನಿಯಾಗದಂತೆ ನಾವು ಸೇತುವೆಯ ಸಂಪರ್ಕ ಬೀಗ(ಲಾಕ್ ವ್ಯವಸ್ಥೆ)ಗಳನ್ನು ಬೇರ್ಪಡಿಸಿದ್ದೇವೆ. ಇದರಿಂದಾಗಿ ಇಂದು ಬೆಳಗ್ಗೆ ಸೇತುವೆಯ ಕೆಲವು ಬ್ಲಾಕ್ಗಳು ಸಮುದ್ರದಲ್ಲಿ ತೇಲುತ್ತಿದ್ದವು. ಕೆಲವರು ವದಂತಿಗಳನ್ನು ಹರಡಿದ್ದಾರೆ. ಯಾವುದೇ ಹಾನಿಯಾಗಿಲ್ಲ. ಕಡಲ ಅಲೆಯ ಪ್ರಭಾವ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸೇತುವೆಯನ್ನು ಮುಚ್ಚಲಾಗಿದೆ” ಎಂದು ಸೇತುವೆಯ ಗುತ್ತಿಗೆದಾರ ಸುದೇಶ್ ಶೆಟ್ಟಿ ಹೇಳಿದ್ದಾಗಿ ಈದಿನ.ಕಾಂ ವರದಿ ಮಾಡಿದೆ.



ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲಾ ಅಂದಂಗಾಯ್ತು….೪೦% ಕ್ಕಿಂತಲೂ ಹೆಚ್ಚು ಕಮಿಷನ್ ಪಡೆದಿರಬೇಕು ಅದಕ್ಕೆ ಮೂರೇ ದಿನದಲ್ಲಿ ಕೊಚ್ಚಿ ಹೋಗಿದೆ. ಪಾಪ ಆ ಗುತ್ತಿಗೆದಾರನಾದರೂ ಏನು ಮಾಡಬೇಕು….!!
ಇದು ಸರ್ಕಾರಿ ಕೆಲಸ ಅಲ್ಲ ಜನರ ತೆರಿಗೆ ಹಣನು ಅಲ್ಲ. 3 ಜನ ಉದ್ಯಮಿಗಳು ಸೇರಿ ಶುರು ಮಾಡಿದ್ದು ಇದು. ನೀವು ನಿಮ್ news ಜನ ನೋಡ್ಬೇಕು ಅಂತ ಸುಳ್ ಸುದ್ದಿ ಬರಿಬೇಡಿ.
Commission scheme systems founders should be awarded for these old systems kept alive till date.
Day one parliamentarian in India systems are well built for politicians welfare..now only percentage ratio has gone up..rest not all but most deals are copy @ paste since decades in this democracy.
Now old beneficiaries are getting stomach ache bcoz above reasons are missing.
Big theves are caching small theves.
Good entertainment for us.
Commission scheme systems founders should be awarded for these old systems kept alive till date.
Day one parliamentarian in India systems are well built for politicians welfare..now only percentage ratio has gone up..rest not all but most deals are copy @ paste since decades in this democracy.
Now old beneficiaries are getting stomach ache bcoz above reasons are missing.
Big theves are caching small theves.
Good entertainment for us.
By the way it’s confirmed that it’s built by three industrialists own fund..it’s not tax money.
Why u don’t go in detail to subject?
U are in a hurry to find faults and blames against ruling government.