Homeಮುಖಪುಟಕೊರೊನಾ ಮತ್ತು ಲಾಕ್‌ಡೌನ್‌ಅನ್ನು ಅರ್ಥ ಮಾಡಿಕೊಂಡು ಸರಿಯಾದ ಯೋಜನೆಗಾಗಿ ಆಗ್ರಹಿಸುವ ಈ ಅಧ್ಯಯನದಲ್ಲಿ ನೀವೂ ಭಾಗಿಯಾಗಬಹುದು

ಕೊರೊನಾ ಮತ್ತು ಲಾಕ್‌ಡೌನ್‌ಅನ್ನು ಅರ್ಥ ಮಾಡಿಕೊಂಡು ಸರಿಯಾದ ಯೋಜನೆಗಾಗಿ ಆಗ್ರಹಿಸುವ ಈ ಅಧ್ಯಯನದಲ್ಲಿ ನೀವೂ ಭಾಗಿಯಾಗಬಹುದು

- Advertisement -
- Advertisement -

(ಮೊದಮೊದಲು ಯಾರಿಗೂ ಈ ಕೊರೊನಾ ಎದುರಿಸುವ ನಿರ್ದಿಷ್ಟ ಬಗೆ ಗೊತ್ತಿರಲಿಲ್ಲ ಎಂಬುದು ಸರಿ. ಹಾಗಾಗಿ ಎಲ್ಲವನ್ನೂ ಪ್ರಯೋಗ ಮಾಡಿಯೇ ಕಲಿಯಬೇಕಿತ್ತು. ಆದರೆ, ಈಗ ಎಷ್ಟೋ ದೇಶಗಳ ಎಷ್ಟೋ ಬಗೆಯ ಪ್ರಯೋಗಗಳಿಂದ ಸಕಾರಾತ್ಮಕ ಮತ್ತು ನಕಾರಾತ್ಮಕ ಪಾಠಗಳು ಸಿಕ್ಕಿವೆ. ಭಾರತದ್ದೂ ಅನುಭವ ಈಗ ದಕ್ಕಿದೆ. ಈಗಲೂ ಗೊತ್ತಿರದ ಸಂಗತಿಗಳಿದ್ದಾವಾದರೂ, ಗೊತ್ತಿರುವ ಅಂಶಗಳ ಆಧಾರದ ಮೇಲೆ ಯಾವ ಅಭಿಪ್ರಾಯಗಳಿಗೆ ಬರಲಾಯಿತು ಎಂದೂ ಹೇಳಬೇಕಾದವರು ಹೇಳುತ್ತಿಲ್ಲ. ಹಾಗಾಗಿ ಈಗ ಅನುಸರಿಸಲಾಗುತ್ತಿರುವ ದಾರಿ ಎಷ್ಟು ಸರಿ ಎಷ್ಟು ತಪ್ಪು ಎಂದೂ ಹೇಳಲಾಗುತ್ತಿಲ್ಲ.)

ಈ ಹಿನ್ನೆಲೆಯಲ್ಲಿ ಪ್ರಪಂಚದ ವಿವಿಧ ಭಾಗಗಳ ಅನುಭವಗಳನ್ನು ಒಂದೆಡೆ ತಂದು, ಈ ಕುರಿತು ವಿವಿಧ ತಜ್ಞರು ಏನು ಹೇಳಿದ್ದಾರೆಂಬುದನ್ನೂ ನಿಕಷಕ್ಕೆ ಒಡ್ಡಿ ಖಚಿತವಾದ ಕೆಲವು ಅಭಿಪ್ರಾಯಗಳಿಗೆ ಬರಬೇಕಿದೆ. ಗಮನಿಸಿ: ನಾವು ನಮ್ಮ ತರ್ಕ ಬುದ್ಧಿಯನ್ನು ಒಂದಷ್ಟು ಬಳಸಬಹುದಾದರೂ ಅಂತಿಮವಾಗಿ ತಜ್ಞರ ಅನಿಸಿಕೆಗಳ ಆಧಾರದ ಮೇಲೆಯೇ ತೀರ್ಮಾನಿಸಬೇಕು. ನಮಗೆ ಇನ್ನೂ ಸ್ಪಷ್ಟವಾಗಿರದುದರ ಕುರಿತು ಕೆಲವು ಪ್ರಶ್ನೆಗಳನ್ನು ಇಲ್ಲಿ ಹಾಕಿಕೊಳ್ಳಲಾಗಿದೆ. ಈ ಅಧ್ಯಯನದಲ್ಲಿ ನೀವೂ ಭಾಗಿಯಾಗುತ್ತಾ ಹೋದರೆ, ಭಾರತವು ಕೊರೊನಾವನ್ನು ಹೇಗೆ ಎದುರಿಸಬೇಕು ಎಂಬುದು ನಿಮಗೂ ಗೊತ್ತಾಗುತ್ತದೆ. ಅಂತಿಮವಾಗಿ ಭಾರತೀಯರಾದ ನಾವು ಸಮಷ್ಟಿ ತಿಳುವಳಿಕೆಯಿಂದ ಕೊರೊನಾವನ್ನು ಎದುರಿಸಿ ಗೆಲ್ಲಲು ಸಾಧ್ಯವಾಗಬೇಕು ಎಂಬುದೇ ಈ ಅಧ್ಯಯನದ ಆಶಯ)

ದೇಶವು ಮಾರ್ಚ್ 24ರಿಂದ ಇಲ್ಲಿಯವರೆಗೆ ಮೂರು ಸಾರಿ ವಿಸ್ತರಣೆಯಾದ ಲಾಕ್‌ಡೌನ್‌ಅನ್ನು ಅನುಭವಿಸಿದೆ. ಮೇ 17ರಂದು ಅದು ಬಹಳಷ್ಟು ಸಡಿಲವಾಗಿದೆ.  ಪ್ರಧಾನಿಗಳು ‘ಹೊಸ ನಿಯಮಗಳೊಂದಿಗೆ 4ನೇ ಬಗೆಯ ಲಾಕ್‌ಡೌನ್’ ಮುಂದುವರೆಯಲಿದೆ ಎಂದು ಹೇಳಿದಾಗ, ಮುಂದಿನ ದಿನಗಳು ಹೇಗಿರುತ್ತವೆ ಎಂಬುದು ಅಸ್ಪಷ್ಟವಾಗಿ ಇತ್ತಾದರೂ, ಈಗ ಅದು ಹೆಚ್ಚಿನಂಶ ಸಡಿಲವಾಗುವ ಲಕ್ಷಣಗಳು ಕಂಡು ಬಂದಿದೆ. ಪ್ರಪಂಚದಾದ್ಯಂತ ಹಲವು ದೇಶಗಳು ವಿವಿಧ ರೀತಿಯ ಲಾಕ್‌ಡೌನ್‌ಅನ್ನು ಜಾರಿಗೊಳಿಸಿದ್ದವು. ಅಂತಿಮವಾಗಿ ಈ ಸಾಂಕ್ರಾಮಿಕವನ್ನು ಎದುರಿಸುವಲ್ಲಿ ಬೇರೆ ಬೇರೆ ಮಟ್ಟದ ಯಶಸ್ಸಿನೊಂದಿಗೆ ಲಾಕ್‌ಡೌನ್‌ನಿಂದ ಹೊರಬರುತ್ತಿವೆ.

ಭಾರತದಲ್ಲಿ ಬಹಳಷ್ಟು ಸಂಕಷ್ಟ, ಒತ್ತಡ, ಸಾವು ಮತ್ತು ಹಸಿವನ್ನು ಈ ಅವಧಿಯಲ್ಲಿ ನಾವು ನೋಡಿದೆವು. ಅವೆಲ್ಲವೂ ವೈರಸ್‌ನಿಂದ ಆಗಿರಲಿಲ್ಲ. ಸಾವುಗಳು ಹೆಚ್ಚಾಗಿ ವೈರಸ್‌ನಿಂದ ಆಗಿರಬಹುದಾದರೂ, ಸಂಕಷ್ಟ ಮತ್ತು ಹಸಿವು ಲಾಕ್‌ಡೌನ್ ಅಳವಡಿಸಿದ ರೀತಿಯಿಂದಾಗಿತ್ತು. ಹಾಗಾಗಿ ಇಲ್ಲಿ ನಾವು ಹಾಕಿಕೊಳ್ಳುತ್ತಿರುವ ಪ್ರಶ್ನೆಗಳು ಕೊರೊನಾ ಸೋಂಕಿನ ನಿರ್ವಹಣೆಯ ಜೊತೆಗೆ ಲಾಕ್‌ಡೌನ್ ಕುರಿತಾಗಿಯೂ ಇರುತ್ತದೆ.

ನಾವು ಹಾಕಿಕೊಂಡಿರುವ ಪ್ರಶ್ನೆಗಳು ಇವು……

1. ಭಾರತವು ಸಾಕಷ್ಟು ಮುಂಚೆ ಸಮಯಸ್ಫೂರ್ತಿಯಿಂದ ಮಧ್ಯಪ್ರವೇಶಿಸಿತೇ?

2. ಕೋವಿಡ್ 19ಅನ್ನು ಭಾರತದಲ್ಲಿ ನಿಗ್ರಹಿಸಲು ಲಾಕ್‌ಡೌನ್ ಅತ್ಯುತ್ತಮ ವಿಧಾನವಾಗಿತ್ತೇ?

3. ಒಂದು ವೇಳೆ ಲಾಕ್‌ಡೌನೇ ಅಂದಿನ ಸಂದರ್ಭದಲ್ಲಿ ಸೂಕ್ತವಾಗಿತ್ತು ಎನ್ನುವುದಾದರೆ, ಭಾರತವು ಅದಕ್ಕೆ ಸೂಕ್ತವಾದ ಯೋಜನೆ ಮಾಡಿಕೊಂಡಿತ್ತೇ?

4. ಸಾಂಕ್ರಾಮಿಕವನ್ನು ತಡೆಗಟ್ಟಲು ಲಾಕ್‌ಡೌನ್ ಪರಿಣಾಮಕಾರಿಯಾಗಿತ್ತೇ?

5. ಲಾಕ್‌ಡೌನ್‌ನಿಂದ ಕೊರೊನಾ ಸೋಂಕಿನ ಪರೀಕ್ಷೆಗಳ (ಟೆಸ್ಟ್) ಸಂಖ್ಯೆಯನ್ನು ಹೆಚ್ಚಿಸಲು ಸಾಧ್ಯವಾಯಿತೇ?

6. ಲಾಕ್‌ಡೌನ್ ಸಡಿಲಿಸಿದಾಗ ದಿಢೀರನೆ ಹೆಚ್ಚಾಗುವ ಕೊರೊನಾ ಕೇಸುಗಳನ್ನು ಎದುರಿಸಲು ವೈದ್ಯಕೀಯ ವ್ಯವಸ್ಥೆ ಸಜ್ಜಾಗಿದೆಯೇ? ಆಗಿದ್ದರೆ ಎಷ್ಟರಮಟ್ಟಿಗೆ ಆಗಿದೆ?

7. ವೈದ್ಯಕೀಯ ವ್ಯವಸ್ಥೆಯ ಸಿದ್ಧತೆಯ ವಿಚಾರದಲ್ಲಿ ಕರ್ನಾಟಕ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ?

8. ಟೆಸ್ಟ್‌ಗಳನ್ನು ಮಾಡುವ ವಿಚಾರದಲ್ಲಿ ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಪರಿಸ್ಥಿತಿ ಹೇಗಿದೆ?

9. ಕರ್ನಾಟಕವು ಸಾಂಕ್ರಾಮಿಕವನ್ನು ತಡೆಗಟ್ಟುವಲ್ಲಿ ತೆಗೆದುಕೊಂಡ ಒಟ್ಟಾರೆ ಕ್ರಮಗಳು ಯಾವ ಪ್ರಮಾಣದ ಯಶಸ್ಸನ್ನು ತಂದಿದೆ?

10. ಇವೆಲ್ಲದರ ಆಧಾರದ ಮೇಲೆ ನಾವು ಯಾವ ಶಿಫಾರಸ್ಸುಗಳನ್ನು ಸರ್ಕಾರದ ಮುಂದಿಡಬಹುದು?

ಇವೆಲ್ಲಕ್ಕೂ ಸ್ಪಷ್ಟವಾದ ವೈಜ್ಞಾನಿಕವಾದ (ಅಂದರೆ ಅಧ್ಯಯನ ಮತ್ತು ನಿರ್ದಿಷ್ಟ ಅನುಭವದಿಂದ ಸಿದ್ಧವಾದ) ಸಂಗತಿಗಳ ಮೇಲೆಯೇ ತೀರ್ಮಾನಕ್ಕೆ ಬರಬೇಕು. ಅಂತಹ ಅಧ್ಯಯನವು ಈಗಾಗಲೇ ಆರಂಭವಾಗಿದ್ದು, ಇದರಲ್ಲಿ ಕೈ ಜೋಡಿಸಬಹುದಾದವರೆಲ್ಲರಿಗೆ ಸ್ವಾಗತ.

ಆಸಕ್ತರು [email protected], [email protected] ಈ ಇಮೇಲ್‌ಗಳನ್ನು ಸಂಪರ್ಕಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...