Homeಪುಸ್ತಕ ವಿಮರ್ಶೆಗಾಂಧೀಜಿಗೆ ಪ್ರಭಾವ ಬೀರಿದ ಪುಸ್ತಕ ಜಾನ್ ರಸ್ಕಿನ್‌ರ ’ಅನ್‍ಟು ದಿಸ್ ಲಾಸ್ಟ್’ ಬಗ್ಗೆ

ಗಾಂಧೀಜಿಗೆ ಪ್ರಭಾವ ಬೀರಿದ ಪುಸ್ತಕ ಜಾನ್ ರಸ್ಕಿನ್‌ರ ’ಅನ್‍ಟು ದಿಸ್ ಲಾಸ್ಟ್’ ಬಗ್ಗೆ

- Advertisement -
- Advertisement -

ಗಾಂಧೀಜಿಗೆ ಸರ್ವೋದಯವಾಗಿ ಕಂಡ ಜಾನ್ ರಸ್ಕಿನ್ ಅವರ ಅನ್ಟು ದಿಸ್ ಲಾಸ್ಟ್ ಶಿರೋಬರಹದ ಬೇರು ಬೈಬಲ್ಲಿನ ಒಬ್ಬ ಉದಾರ ಮನದ ಮಾಲಿಕನ ದೃಷ್ಟಾಂತದಲ್ಲಿದೆ. ಸ್ವರ್ಗ ಸಾಮ್ರಾಜ್ಯದ ರೂಪಕವನ್ನು ಅರ್ಥೈಸಲು ಯೇಸು ಹೇಳುವ ಕತೆ.

ದ್ರಾಕ್ಷಿತೋಟದ ಯಜಮಾನ ಕೂಲಿಯಾಳುಗಳಿಗೆ ದಿನಕ್ಕೆ ಒಂದು ಬೆಳ್ಳಿ ನಾಣ್ಯದಂತೆ ಗೊತ್ತು ಮಾಡಿ ಕೆಲಸಕ್ಕೆ ಕಳುಹಿಸುತ್ತಾನೆ. ತೋಟದೊಡೆಯ ಕೆಲಸವಿಲ್ಲದೇ ಇರುವ ಇತರರನ್ನೂ ಕಂಡು ತಡವಾಗಿದ್ದರೂ ಅವರನ್ನೂ ಕೂಲಿಗೆ ಕಳುಹಿಸುತ್ತಾನೆ. ಅದೇ ರೀತಿಯಲ್ಲಿ ಇನ್ನೂ ದಿನದ ಕೊನೆಯ ಭಾಗದಲ್ಲಿ ಬಂದು ಸೇರಿಕೊಂಡವರಿಗೆಲ್ಲಾ ಕೆಲಸಕ್ಕೆ ಸೇರಿಸಿಕೊಳ್ಳುತ್ತಾನೆ. ಸಂಜೆ ಎಲ್ಲರೂ ಹೊರಡುವಾಗ ಎಲ್ಲರಿಗೂ ಸಮನಾಗಿ ಒಂದು ಬೆಳ್ಳಿ ನಾಣ್ಯದ ಕೂಲಿಯೇ ಸಿಗುತ್ತದೆ. ಮೊದಲು ಕೆಲಸಕ್ಕೆ ಬಂದವರು ಮೊದಲು, ನಡುವೆ ಮತ್ತು ಕೊನೆಗೆ ಬಂದವರೆಲ್ಲರಿಗೂ ಒಂದೇ ಸರಿಸಮ ಕೂಲಿ ಎಂದು ಗೊಣಗಿದಾಗ ತೋಟದೊಡೆಯ ಹೇಳುತ್ತಾನೆ.

“ನಿನಗೆ ಅನ್ಯಾಯ ಮಾಡಲಿಲ್ಲ. ಒಪ್ಪಂದದ ಪ್ರಕಾರ ನಿನಗೆ ನಿನ್ನ ಬೆಳ್ಳಿನಾಣ್ಯ ಸಿಕ್ಕಿದೆ. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ. ನನ್ನ ಔದಾರ್ಯ ಕಂಡು ನಿನಗೇಕೆ ಅಸೂಯೆ?”

ಈ ಕಟ್ಟ ಕಡೆಯವನಿಗೆ ಎನ್ನುವುದೇ “ಅನ್ ಟು ದಿಸ್ ಲಾಸ್ಟ್.”

ನ್ಯಾಯ ಮತ್ತು ಪ್ರಾಮಾಣಿಕತೆಗಳೆಂಬ ಮೌಲ್ಯಾಧಾರದಲ್ಲಿ ಸಂಪತ್ತನ್ನು ವ್ಯಾಖ್ಯಾನಿಸುವ ರಸ್ಕಿನ್ ಗಾಂಧಿ ಮತ್ತು ಟಾಲ್‌ ಸ್ಟಾಯ್‌ ಒಳಗೊಂಡಂತೆ ಅನೇಕಾನೇಕರನ್ನು ತಮ್ಮ ಬರಹದ ಮೂಲಕ ಪ್ರಭಾವಿಸಿದ್ದರು. ಹಾಗೆಯೇ ಅವರನ್ನು ಬಂಡವಾಳಶಾಹಿಯನ್ನು ಪ್ರತಿನಿಧಿಸುವವರು ವಿರೋಧಿಸುತ್ತಿದ್ದರು. ಸೃಷ್ಟಿಯ ಸಂರಚನೆಯಲ್ಲಿ ಕೈಗಾರಿಕೆಗಳ ಆಡಳಿತಯಂತ್ರಗಳು ಮತ್ತು ಬಂಡವಾಳಶಾಹಿಯು ಹೇಗೆ ಅಮಾನ್ಯವಾಗುತ್ತದೆ ಎಂಬ ಅರಿವನ್ನೂ ಈ ಕೃತಿಯಲ್ಲಿ ಉಸುರಿದ್ದರು.

ಎಲ್ಲಾ ಕೆಲಸಗಳನ್ನೂ ಗೌರವಿಸುತ್ತಾ ಕೊಟ್ಟೆಲ್ಲಾ ಕೆಲಸಗಳಿಗೆ ಸಮವಾಗಿ ಸಂದಾಯ ಮಾಡಬೇಕೆನ್ನುವ ರಸ್ಕಿನ್ ಪ್ರತಿಯೊಬ್ಬರನ್ನೂ ಕುಶಲಿಗಳನ್ನಾಗಿ, ವಿದ್ಯಾವಂತರನ್ನಾಗಿ ರೂಪಿಸುವುದು ಸರಕಾರದ ಕೆಲಸವೆನ್ನುತ್ತಾರೆ. ಅವರ ಆದರ್ಶವೆಂದರೆ; ಯಜಮಾನನು ತನ್ನ ಮಗನನ್ನು ವಿದ್ಯಾವಂತನನ್ನಾಗಿ, ಹಣವಂತನನ್ನಾಗಿ ಆಸ್ಥೆಯಿಂದ ರೂಪಿಸುವಂತೆ ತನ್ನ ಕೆಲಸಗಾರರನ್ನೂ ರೂಪಿಸಬೇಕು.

ಮತ್ತೊಬ್ಬರನ್ನು ಬಳಸಿಕೊಳ್ಳುತ್ತಾ ತಾನು ಸಿರಿವಂತನಾಗುವುದು ಪಾಪದ ಕೆಲಸ. ಅದು ಸರಕಾರದ ಆರ್ಥಿಕತೆಗೂ ಅನ್ಯಾಯ. ತನ್ನ ನೆರೆಯವನನ್ನು ಬಡತನಕ್ಕೆ ದೂಡುತ್ತಾ ತನ್ನನ್ನು ಶ್ರೀಮಂತಗೊಳಿಸಿಕೊಳ್ಳುವ ಯಾವುದೇ ವಿಧಾನ ಅನ್ಯಾಯ. ತಾನೊಬ್ಬ ಸಿರಿವಂತನಾಗಿ ಬಡ ಸಮಾಜದಲ್ಲಿರುವುದು ಮೌಲ್ಯಹೀನ. ಹಾಗಾಗಿ ಸಂಪತ್ತು ಎಂಬುದು ನ್ಯಾಯದ ಆಧಾರದಲ್ಲಿರಬೇಕು. ಇತರರ ದುಡಿಮೆಯಿಂದ ತಾನು ಶ್ರೀಮಂತನಾಗುವುದು ಶೀಲವಲ್ಲ.

ರಾಷ್ಟ್ರೀಯ ಸಂಪತ್ತೆನ್ನುವುದು ಕೆಲವು ಜನರ ಒಟ್ಟುಗೂಡಿಸಿದ ಸಂಪತ್ತಾಗಬಾರದು. ರಾಷ್ಟ್ರದ ಎಲ್ಲಾ ಜನರ ವಿದ್ಯಾರ್ಹತೆ, ಪ್ರತಿಭೆ, ದುಡಿಮೆಗಳಿಂದ ಕ್ರೋಢೀಕರಿಸಿರುವಂತಹ ಸಂಪತ್ತಾಗಬೇಕು. ವ್ಯಕ್ತಿಗತವಾಗಿ ಶ್ರೀಮಂತರಾಗಿರುವವರಿಂದ ಸಮಾಜಕ್ಕೆ ಎಂತಹ ಕೊಡುಗೆ ದೊರಕುತ್ತದೆ!

ವಾಣಿಜ್ಯ ವ್ಯವಹಾರವು ನ್ಯಾಯಸಮ್ಮತವಾಗಿಯೇ ನಡೆಯಬೇಕು. ಏಕೆಂದರೆ ಸೃಷ್ಟಿಯ ವ್ಯವಹಾರಗಳಲ್ಲಿ ತಾರತಮ್ಯವಿಲ್ಲ. ಅದೇರೀತಿ ನ್ಯಾಯದ ಪ್ರಜ್ಞೆಯಿಂದ ಆರ್ಥಿಕ ವ್ಯವಹಾರಗಳೂ ನಡೆಯಬೇಕು. ಆರ್ಥಿಕತೆಯೂ ಕೆಲವು ಜನರ ಕೈಯೊಡೆತನದಲ್ಲಿರದೇ ಸಹಜೀವಿಗಳೆಲ್ಲ ಸರಣಿಯಲ್ಲಿ ವ್ಯಾಪ್ತವಾಗಿ ಪ್ರಾಪ್ತಿಯಲ್ಲಿರಬೇಕು. ರಸ್ಕಿನ್ ಹೇಳುವಂತೆ ಯಾರುಯಾರನ್ನೂ ಕಡೆಯಾಗಿ ನೋಡಬಾರದು, ಯಾರು ಯಾರಿಗೂ ಗುಲಾಮರಾಗಿರಕೂಡದು. ಕೆಲವು ಜನರ ಕೈಯೊಡೆತನದಲ್ಲಿರುವ ಸಂಪತ್ತು ಹಲವು ಜನರನ್ನು ಬಡತನಕ್ಕೆ ದೂಡುತ್ತದೆ.

ರಸ್ಕಿನ್ ಧ್ವನಿಸುವುದಿಷ್ಟೇ, ಜೀವನಕ್ಕೆ ಆಧಾರವಾಗುವುದೋ ಅದೇ ಮೌಲ್ಯ. ಹಣ, ಬೆಲೆ, ಉತ್ಪಾದನೆ ಯಾವುದಾದರೂ ಜೀವಿಗಳ ಜೀವನಕ್ಕೆ ಆಧಾರವಾಗುವುದಾದರೆ ಮಾತ್ರವೇ ಅವು ಮೌಲ್ಯ. ಉಪಯೋಗಿಸದ ಸಂಪತ್ತನ್ನು ಶೇಖರಿಸಿಟ್ಟುಕೊಳ್ಳುವುದು ಸಿರಿವಂತಿಕೆಯ ರೋಗ. ಉತ್ಪಾದನೆಗಳು ಹಣವನ್ನು ಸೃಷ್ಟಿಸುವ ಆಧಾರದಲ್ಲಾಗದೇ ಬಳಕೆಯ ಆಧಾರದಲ್ಲಾದರೆ ಅದು ಉಪಯುಕ್ತ ಮತ್ತು ಮೌಲ್ಯಾಧಾರಿತವಾದ ಪ್ರಗತಿ.

ರಸ್ಕಿನ್‍ರವರ ಆರ್ಥಿಕ ತತ್ವ, ಜೀವನಕ್ಕೆ ಹೊರತಾದ ಸಂಪತ್ತಿಲ್ಲ. ಪ್ರೀತಿ, ಆನಂದ, ಅಭಿಮಾನ ಎಲ್ಲವನ್ನೂ ಒಳಗೊಳ್ಳುವ ಶಕ್ತಿಯೇ ಜೀವನವಾಗಿರುವಾಗ ದೇಶದ ಸರ್ಕಾರವೂ ಕೂಡಾ ಘನತೆಯ ಮತ್ತು ಸಂತೋಷದ ಮನುಷ್ಯರನ್ನು ತನ್ನ ನೆಲದಲ್ಲಿ ರೂಪಿಸಬೇಕು. ಇತರರ ಮರ್ಜಿಯಲ್ಲಿ ದೈನೇಸಿಯಿಂದ ಬದುಕುವಂತಹ ಪರಾವಲಂಬಿಗಳನ್ನಾಗಿ ಮಾಡುವುದಲ್ಲ.

ಇದೇ ರಸ್ಕಿನ್ನನ್ನಿಂದ ಗಾಂಧೀಜಿ ಗ್ರಹಿಸಿದ ಸರ್ವೋದಯ ತತ್ವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....