Homeಕರ್ನಾಟಕಉತ್ತರ ಪ್ರದೇಶ ಚುನಾವಣೆ; ಕರ್ನಾಟಕದ ಕಾಂಗ್ರೆಸ್‌ಗೆ ದೊಡ್ಡ ಎಚ್ಚರಿಕೆ

ಉತ್ತರ ಪ್ರದೇಶ ಚುನಾವಣೆ; ಕರ್ನಾಟಕದ ಕಾಂಗ್ರೆಸ್‌ಗೆ ದೊಡ್ಡ ಎಚ್ಚರಿಕೆ

- Advertisement -
- Advertisement -

ಉತ್ತರ ಪ್ರದೇಶದ ಸಾಮಾಜಿಕ ಸನ್ನಿವೇಶಕ್ಕೂ, ಅಲ್ಲಿನ ರಾಜಕೀಯ ಪಕ್ಷಗಳ ಸ್ಥಿತಿಗತಿಗೂ ಕರ್ನಾಟಕದ ಸನ್ನಿವೇಶಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಜೊತೆಗೆ ಉ.ಪ್ರದೇಶವು ಕರ್ನಾಟಕದ ಸುಮಾರು ನಾಲ್ಕು ಪಟ್ಟು ಇರುವ ದೊಡ್ಡ ರಾಜ್ಯ. ಕಳೆದ ಚುನಾವಣೆಯಲ್ಲಿ ಬಿಜೆಪಿಯು ಅಲ್ಲಿನ ವಿಧಾನಸಭೆಯಲ್ಲಿ ನಾಲ್ಕರಲ್ಲಿ ಮೂರರಷ್ಟು ಬಹುಮತ ಪಡೆದಿತ್ತು. ಆದರೆ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತವೇ ಇರಲಿಲ್ಲ; ಅದು ಅಕ್ರಮ ಮಾರ್ಗದಿಂದ ಅಧಿಕಾರ ಕಬಳಿಸಿತು. ಎಲ್ಲಕ್ಕಿಂತ ಮುಖ್ಯವಾಗಿ ಮತಪ್ರಮಾಣದಲ್ಲಿ ಬಿಜೆಪಿಗೂ ಅದರ ಸಮೀಪ ಸ್ಫರ್ಧಿ ಎಸ್‌ಪಿಗೂ ದೊಡ್ಡ ವ್ಯತ್ಯಾಸವಿದೆ. ಆದರೆ ಕರ್ನಾಟಕದಲ್ಲಿ 2018ರಲ್ಲಿ ಸೋತ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಬಿಜೆಪಿಗಿಂತ ಹೆಚ್ಚೇ ಮತ ಬಂದಿತ್ತು. ಹೀಗಿರುವಾಗ ಉತ್ತರ ಪ್ರದೇಶದ ಚುನಾವಣಾ ಫಲಿತಾಂಶವು ಕರ್ನಾಟಕದ ಕಾಂಗ್ರೆಸ್‌ಗೆ ಎಚ್ಚರಿಕೆಯ ವಿಚಾರ ಹೇಗಾದೀತು?

ನಿಸ್ಸಂದೇಹವಾಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಜನ ಮೆಚ್ಚಿಕೊಂಡ ಆಡಳಿತ ನೀಡಿದ ಸರ್ಕಾರವಾಗಿರಲಿಲ್ಲ. ಇಂದು ಹಿಂತಿರುಗಿ ನೋಡಿ ಆ ವಿಚಾರದಲ್ಲಿ ಒಳ್ಳೆಯ ಆಳ್ವಿಕೆಯಿತ್ತು; ಈ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತಮವಾದ ಆಡಳಿತ ನೀಡಿದ್ದರಿಂದಲೇ ಜನರು ಮೆಚ್ಚಿ ಮತ ಹಾಕಿದ್ದಾರೆ ಎಂದು ಯಾರಾದರೂ ಹೇಳಿದರೆ ಅದು ವಾಸ್ತವವಲ್ಲ. ಕೋವಿಡ್ ನಿರ್ವಹಣೆ ಮಾತ್ರವಲ್ಲದೇ ಕಳೆದ ಚುನಾವಣೆಯಲ್ಲಿ ಚರ್ಚೆಗೆ ಬಂದ ಹಲವಾರು ಸಂಗತಿಗಳಲ್ಲಿ ಸದರಿ ಸರ್ಕಾರದ ಸಾಧನೆ ಅತ್ಯಂತ ಕಳಪೆಯಾಗಿತ್ತು. ಕರ್ನಾಟಕದಲ್ಲೂ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳ ಸಾಧನೆಯೂ ಕಳಪೆಯೇ ಆಗಿದೆ. ಅಲ್ಲಿ ಒಬ್ಬರೇ ಮುಖ್ಯಮಂತ್ರಿ ಆಡಳಿತ ನಡೆಸಿದ್ದರೆ, ಇಲ್ಲಿ ಇಬ್ಬಿಬ್ಬರು ಬಂದೂ ಏನೂ ಪ್ರಯೋಜನವಾಗಿಲ್ಲ. ಆದರೆ ಉತ್ತರ ಪ್ರದೇಶದಲ್ಲಿ ಆದಂತೆ ಇಲ್ಲಿಯೂ ಈ ಸರ್ಕಾರ ತೊಲಗಿದರೆ ಸಾಕು ಎಂದು ಜನರಿಗೆ ಅನ್ನಿಸುತ್ತಿಲ್ಲ. ಬಹಳ ಮುಖ್ಯವಾಗಿ ಸರ್ಕಾರದ ವೈಫಲ್ಯದ ಕುರಿತು ವ್ಯಕ್ತವಾದ ಅಥವಾ ಅವ್ಯಕ್ತವಾದ ಸಿಟ್ಟು ಜನರಲ್ಲಿರಬೇಕು. ಅದು ಉತ್ತರ ಪ್ರದೇಶದಲ್ಲಿ ಕಂಡಷ್ಟೂ ಕರ್ನಾಟಕದಲ್ಲಿ ಕಾಣುತ್ತಿಲ್ಲ ಎಂಬುದನ್ನು ಗಮನಿಸಬೇಕು. ಏಕೆಂದರೆ ಜನರು ಗಮನ ಹರಿಸಲು ಬೇಕಾದ ಬೇರೆ (ಅವುಗಳ ಬಗ್ಗೆ ಬಿಜೆಪಿ ವಿರೋಧಿಗಳ ಅಭಿಪ್ರಾಯವೇನೇ ಇರಬಹುದು) ಇಶ್ಯೂಗಳನ್ನು ಬಿಜೆಪಿಯು ರಾಶಿರಾಶಿ ತಂದು ಹಾಕುತ್ತದೆ.

ಯೋಗಿ ಆದಿತ್ಯನಾಥ್

ಇಂತಹ ಸನ್ನಿವೇಶ ಇದ್ದಾಗ, ಇನ್ನೊಬ್ಬರು ಬಂದರೆ ಇವರಿಗಿಂತ ಒಳ್ಳೆಯ ಅಧಿಕಾರ ನೀಡುತ್ತಾರೆ ಎಂಬ ಭರವಸೆ ಹುಟ್ಟಿಸುವಂತಹ ಪಕ್ಷ ಹಾಗೂ ನಾಯಕತ್ವ ಇರಬೇಕು. ನಿಸ್ಸಂದೇಹವಾಗಿ ಎಚ್‌ಡಿಕೆ, ಬಿಎಸ್‌ವೈ ಮತ್ತು ಬೊಮ್ಮಾಯಿಯವರಿಗಿಂತ ಇದರ ಹಿಂದಿನ ಐದು ವರ್ಷಗಳ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವು ಹಲವು ವಿಧಗಳಲ್ಲಿ ಉತ್ತಮವಾದುದಾಗಿತ್ತು. ಆದರೂ ಅದು 2018ರ ಚುನಾವಣೆಯಲ್ಲಿ ಸೋತಿತ್ತು. ಅಂದರೆ ಕಾಂಗ್ರೆಸ್‌ನ ಆಡಳಿತದ ಒಳ್ಳೆಯ ಅಂಶಗಳನ್ನು ಆಗಲೇ ನೆನಪಿಸಿಕೊಳ್ಳದ ಜನರು ಈಗ ನೆನಪಿಸಿಕೊಳ್ಳಬೇಕೆಂದರೆ, ಅದಕ್ಕಿಂತ ಈಗಿನ ಸರ್ಕಾರ ಕಡು ಜನವಿರೋಧಿ ಎನ್ನಿಸಬೇಕು. ಅದಾಗುತ್ತಿಲ್ಲ. ಇನ್ನು ಸಿದ್ದರಾಮಯ್ಯನವರನ್ನು ಹಿಂದೂ ವಿರೋಧಿಯೆಂತಲೂ, ಡಿ.ಕೆ.ಶಿವಕುಮಾರ್‌ರನ್ನು ರೌಡಿ ಎಂತಲೂ ಬಿಂಬಿಸಲು ಬೇಕಾದ್ದೆಲ್ಲವನ್ನೂ ಬಿಜೆಪಿ ಮಾಡುತ್ತಿದೆ. ಕಳೆದ ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ವಿಶೇಷವಾಗಿ ಒಕ್ಕಲಿಗ ವಿರೋಧಿ ಎಂದೂ ಯಶಸ್ವಿಯಾಗಿ ಬಿಂಬಿಸಲಾಗಿತ್ತು.

ಉತ್ತರ ಪ್ರದೇಶದಲ್ಲಿ ಅಧಿಕೃತ ವಿರೋಧ ಪಕ್ಷವಾಗಿ ದೀರ್ಘಕಾಲ ನಿದ್ರೆಯಲ್ಲಿದ್ದ ಅಖಿಲೇಶ್ ಯಾದವ್ ನೇತೃತ್ವದ ಎಸ್‌ಪಿಗಿಂತ ಕರ್ನಾಟಕದ ವಿರೋಧ ಪಕ್ಷ ಕಾಂಗ್ರೆಸ್ ಸಕ್ರಿಯವಾಗಿತ್ತು ಎಂಬುದರಲ್ಲಿ ಅನುಮಾನವಿಲ್ಲ. ಕೋವಿಡ್ ಸಂದರ್ಭದ ದುರಾಡಳಿತ, ಭ್ರಷ್ಟಾಚಾರದ ವಿಷಯದಂತಹ ಕೆಲವು ಸಂಗತಿಗಳನ್ನು ಕಾಂಗ್ರೆಸ್ ಮುನ್ನೆಲೆಗೆ ತಂದಿತ್ತು ಅನ್ನುವುದೂ ನಿಜ. ಆದರೂ, ಜನರ ಕಣ್ಣಿನಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ಮೇಲು ಎನ್ನುವಂತಹ ಭಾವನೆ ಮೂಡುವಲ್ಲಿ ಇವು ಸಾಕಾಗಿಲ್ಲ. ಇಲ್ಲೇ ಎರಡಕ್ಕೂ ಸಾಮ್ಯತೆ ಇರುವುದು. ಬಿಜೆಪಿಯ ಕುರಿತು (ಕೋಮುವಾದೀ ಪ್ರೊಪಗಾಂಡಾದ ಪರಿಣಾಮದಿಂದ ಪೂರಾ ಒಮ್ಮುಖವಾಗಿರುವವರನ್ನು ಬಿಟ್ಟು) ಕರ್ನಾಟಕದ ಜನರಿಗೆ ವಿಶೇಷ ಪ್ರೇಮವೂ ಇಲ್ಲ; ಅದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಕೆಲವು ಸಮುದಾಯಗಳಲ್ಲಿ ಕಂಡಷ್ಟು ಸಿಟ್ಟೂ ಇಲ್ಲ. ಅದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ನ ಪರವಾದ ಭಾವನೆಯೂ ಇಲ್ಲ. ಉತ್ತರ ಪ್ರದೇಶದಲ್ಲಿ ಮುಸ್ಲಿಮರು ಮತ್ತು ಯಾದವರಿಗಿದ್ದ ಎಸ್‌ಪಿ ಪ್ರೇಮದಂಥದ್ದು ಇಲ್ಲಿ ಕಾಂಗ್ರೆಸ್‌ನ ಕುರಿತಾಗಿ ಮುಸ್ಲಿಮರಿಗೆ ಬಿಟ್ಟರೆ ಬೇರಾರಿಗೂ ಇಲ್ಲ. ಮುಸ್ಲಿಮರಿಗಿರುವುದೂ ಪ್ರೇಮವಲ್ಲ; ಅನಿವಾರ್ಯತೆ.

ಹೀಗಿದ್ದೂ ಕರ್ನಾಟಕದ ಕಾಂಗ್ರೆಸ್ ಪಕ್ಷದ ನಾಯಕರು ಮುಂದಿನ ಚುನಾವಣೆಯಲ್ಲಿ ನಾವು ಗೆದ್ದುಬಿಡುವ ಸಾಧ್ಯತೆ ಅಪಾರವಾಗಿದೆ ಎಂದು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬರುವವರೆಗೂ ನಂಬಿಕೊಂಡಿದ್ದರು. ಉತ್ತರ ಪ್ರದೇಶಕ್ಕಿಂತ ಭಿನ್ನವಾಗಿ ಇಲ್ಲಿ ತಮಗೆ ಹೆಚ್ಚಿನ ಓಟ್‌ಬೇಸ್ ಇದೆ ಎಂಬ ಅಂಶವನ್ನು ಅವರುಗಳು ಹೇಳಬಹುದಾದರೂ, 2018ರಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತ ಬಂದಿದೆ ಎಂಬ ವಿಚಾರದಲ್ಲಿ ಅವರು ಖುಷಿ ಪಟ್ಟುಕೊಳ್ಳಲು ಏನೂ ಇಲ್ಲ. ಅದು ಇಡೀ ರಾಜ್ಯದಲ್ಲಿ ಹರಡಿಕೊಂಡಿರುವ ಮತ. ಕನಿಷ್ಠ 50 ಕ್ಷೇತ್ರಗಳಲ್ಲಿ ಬಿಜೆಪಿಯ ಅಸ್ತಿತ್ವ ಅಷ್ಟಾಗಿ ಇಲ್ಲವಾದ್ದರಿಂದ, ಆದರೆ ತಾನಿರುವ 175 ಕ್ಷೇತ್ರಗಳಲ್ಲಿ ಅದು ಬಲಾಢ್ಯವಾಗಿರುವುದರಿಂದ, ಬಿಜೆಪಿಗೆ ಕಡಿಮೆ ಮತ ಬಂದರೂ ಕಾಂಗ್ರೆಸ್‌ಗಿಂತ ಹೆಚ್ಚಿನ ಸೀಟು ಪಡೆಯುತ್ತದೆ.

ಅಖಿಲೇಶ್ ಯಾದವ್

ಹಾಗೆಯೇ ಬಿಎಸ್‌ಪಿ ಹಾಗೂ ಎಂಐಎಂ ಉ.ಪ್ರದೇಶದಲ್ಲಿ ವಹಿಸಿದ ಪಾತ್ರವನ್ನು ಕರ್ನಾಟಕದಲ್ಲಿ ಜೆಡಿಎಸ್ ವಹಿಸುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಈ ವಾದದಲ್ಲಿ ಎರಡು ಸಮಸ್ಯೆಗಳಿವೆ. ಒಂದು ಬಿಎಸ್‌ಪಿ ಅಥವಾ
ಎಂಐಎಂ ಕುರಿತಾಗಿ ಮುಂದಿಡುತ್ತಿರುವ ವಾದವೇ ಅಸಂಬದ್ಧ. ಒಂದು ಕೋಟಿಗೂ ಹೆಚ್ಚು ಮತ ಗಳಿಸಿರುವ ಬಿಎಸ್‌ಪಿಯಿಂದ ಎಸ್‌ಪಿ ಬೆಂಬಲ ನಿರೀಕ್ಷಿಸುವುದಾದಲ್ಲಿ ತಾನೇ ಮುಂದಾಗಬೇಕಿತ್ತು. ಅದೇನೂ ಪುಟ್ಟ ಪಕ್ಷವಲ್ಲ. ಎರಡನೆಯದಾಗಿ ಈ ಪಕ್ಷಗಳು ಸ್ಪರ್ಧಿಸದೇ ಇದ್ದಲ್ಲಿ ಆ ಮತಗಳು ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಬಿಎಸ್‌ಪಿಯ ಮತಗಳು ಬಿಜೆಪಿಗೆ ಹೋಗಿವೆ ಎಂಬುದು ಈಗಾಗಲೇ ಸಾಬೀತಾಗಿರುವ ವಿಚಾರ. ಈ ದೇಶದಲ್ಲಿ ಸೆಕ್ಯುಲರ್ ಮತಗಳು ಎಂಬುದು ಬಹುತೇಕ ಕಡಿಮೆ. ಎರಡು ಬಿಜೆಪಿಯೇತರ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡರೆ ಅವೆರಡರ ಮತಗಳೂ ಜೊತೆಯಾಗಿಬಿಡುತ್ತವೆ ಎಂಬ ತಿಳುವಳಿಕೆ ರಾಜಕೀಯ ಅಮಾಯಕತನದಿಂದ ಮಾತ್ರ ಬರಲು ಸಾಧ್ಯ. ಎಲ್ಲಕ್ಕಿಂತ ಮುಖ್ಯವಾಗಿ ಹಿಂದುತ್ವವಾದಿಗಳು ಪಕ್ಷ ಮಾಡಿಕೊಳ್ಳಬಹುದು, ಯಾದವರು ಪಕ್ಷ ಮಾಡಿಕೊಳ್ಳಬಹುದು, ವಿವಿಧ ಹಿಂದುಳಿದ ಜಾತಿಗಳು ಪಕ್ಷ ಮಾಡಿಕೊಳ್ಳಬಹುದು, ದಲಿತರು ಮತ್ತು ಮುಸ್ಲಿಮರು ಮಾತ್ರ ತಮ್ಮದೇ ಪಕ್ಷ ಮಾಡಿಕೊಳ್ಳಬಾರದು ಎಂದು ಹೇಳುವವರಿಗೆ ಏನು ಹೇಳಬೇಕೋ ಗೊತ್ತಿಲ್ಲ.

ಇದೇ ಮಾತು ಕರ್ನಾಟಕದಲ್ಲಿ ಜೆಡಿಎಸ್‌ಗೂ ಅನ್ವಯಿಸುತ್ತದೆ. ಜೆಡಿಎಸ್ ತನ್ನ ರಾಜಕಾರಣವನ್ನು ತಾನು ಮಾಡುತ್ತಿದೆ. ಅದರ ಹೆಸರಲ್ಲಿ ಜಾತ್ಯತೀತ ಎಂಬ ಪದ ಇದ್ದ ಮಾತ್ರಕ್ಕೆ ಅದು ಪಕ್ಷವನ್ನು ವಿಸರ್ಜಿಸಿ ಕಾಂಗ್ರೆಸ್ ಸೇರಲಾಗುವುದಿಲ್ಲ. ಜೆಡಿಎಸ್ ಅಸ್ತಿತ್ವದಲ್ಲಿರುವ ಬಹುತೇಕ ಕಡೆ ಅದರ ವಿರೋಧಿ ಕಾಂಗ್ರೆಸ್ಸೇ ಹೊರತು ಬಿಜೆಪಿಯಲ್ಲ. ಒಂದು ವೇಳೆ ಜೆಡಿಎಸ್ ಪೂರ್ಣ ಪ್ರಮಾಣದಲ್ಲಿ ಕಾಂಗ್ರೆಸ್ಸಿನ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬಿಟ್ಟರೆ, ಆ ಭಾಗದ ಅರ್ಧದಷ್ಟು ಜನರು ಬಿಜೆಪಿಯ ಕಡೆಗೇ ಹೊರಳುತ್ತಾರೆ. ಕರ್ನಾಟಕಕ್ಕೆ ಜೆಡಿಎಸ್, ಕೇಂದ್ರದಲ್ಲಾದರೆ ನರೇಂದ್ರ ಮೋದಿ ಎಂದು ಹೇಳುವ ಜೆಡಿಎಸ್ ಮತದಾರರು ಇದ್ದಾರಷ್ಟೇ ಅಲ್ಲ; ಜೆಡಿಎಸ್ ಸ್ಪರ್ಧಿಯನ್ನು ಸೋಲಿಸಲು ಮಂಡ್ಯ ಹಾಗೂ ತುಮಕೂರುಗಳಲ್ಲಿ ಬಿಜೆಪಿಗೆ ಮತ ಹಾಕಿದವರಲ್ಲಿ ಕಾಂಗ್ರೆಸ್‌ನ ಮತದಾರರೂ ಮುಂದಾಗಿದ್ದರು. ಹಾಸನದಲ್ಲಂತೂ ಸಮಾಜವಾದಿಗಳು, ದಲಿತ ಸಂಘಟನೆಯವರೂ ಸಹಾ ಜೆಡಿಎಸ್ ಸ್ಪರ್ಧಿಯನ್ನು ಸೋಲಿಸಲು ಬಿಜೆಪಿಗೆ ಮತ ಹಾಕಿ ಎಂದು ಪತ್ರಿಕಾಗೋಷ್ಠಿ ಮಾಡಿ ಕರೆ ನೀಡಿದ್ದರು.

ಸ್ಥಳೀಯ ರಾಜಕಾರಣದ ಒಳಸುಳಿಯನ್ನು ಆಧರಿಸಿ ರಾಜಕೀಯ ಅಸ್ತಿತ್ವದ ಲೆಕ್ಕಾಚಾರ ಕಾಂಗ್ರೆಸ್‌ಗೆ ಮಾತ್ರ ಇರಬೇಕೆಂದು ಹಲವರು ಏಕೆ ಬಯಸುತ್ತಾರೋ ಅರ್ಥವಾಗುವುದಿಲ್ಲ. ಇದೇ ಲೆಕ್ಕಾಚಾರವನ್ನು ಅನ್ವಯಿಸಿ ನೋಡುವುದಾದಲ್ಲಿ ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳಗಳಲ್ಲಿ ಕಾಂಗ್ರೆಸ್ ಸ್ಪರ್ಧೆ ಮಾಡದೇ ಎಸ್‌ಪಿ ಹಾಗೂ ತೃಣಮೂಲ ಕಾಂಗ್ರೆಸ್‌ಗೆ ಬೆಂಬಲಿಸಬೇಕಿತ್ತು.

ಕುಮಾರಸ್ವಾಮಿ

ಇದೆಲ್ಲದರ ಅರ್ಥ ಇಷ್ಟೇ. ಜೆಡಿಎಸ್ ಎಂಬ ಪಕ್ಷದ ಅಸ್ತಿತ್ವ ಇದೆ. ಅದನ್ನು ಒಪ್ಪಿ ಕಾಂಗ್ರೆಸ್ ತನ್ನ ರಾಜಕಾರಣವನ್ನು ತಾನು ಮಾಡಬೇಕು. ಒಂದರ್ಥದಲ್ಲಿ ಆ ಪಕ್ಷ ಇರುವುದೂ ಕಾಂಗ್ರೆಸ್‌ಗೆ ಒಳ್ಳೆಯದೇ. ಈ ಭಾಗದಲ್ಲಿ ತಾನು ಗೆಲ್ಲಲಾಗದು ಎನಿಸಿದ ಕೂಡಲೇ ಬಿಜೆಪಿಯು ಜೆಡಿಎಸ್‌ಅನ್ನು ಒಳಗಿಂದೊಳಗೇ ಬೆಂಬಲಿಸುತ್ತದೆ. ಕಳೆದ ಸಾರಿ ಮಾಡಿದಂತೆ. ಇದಕ್ಕೆ ಕಾರಣವೇನೆಂದರೆ ಬಿಜೆಪಿಯು ಪ್ರತಿ ಕ್ಷೇತ್ರದ ಕುರಿತು ಲೆಕ್ಕ ಹಾಕಿ ತನ್ನ ಕಾರ್ಯತಂತ್ರವನ್ನು ರೂಪಿಸುತ್ತದೆ. ಉತ್ತರ ಪ್ರದೇಶದಲ್ಲಿ ಮಾಡಿದಂತೆ. ಇದೂ ಸಹಾ ಕಾಂಗ್ರೆಸ್‌ಗೆ ಒಂದು ಪಾಠವೇ.

ಆದರೆ ಇದರಿಂದ ಪಾಠವನ್ನೇನೂ ಕಾಂಗ್ರೆಸ್ ಕಲಿಯುವಂತೆ ತೋರುವುದಿಲ್ಲ. ಇಂದಿಗೂ ಕಾಂಗ್ರೆಸ್‌ಗೆ ಸರಿಯಾದ ಅಭ್ಯರ್ಥಿ ಇಲ್ಲದ ಸುಮಾರು 75 ಕ್ಷೇತ್ರಗಳು ಕರ್ನಾಟಕದಲ್ಲಿವೆ. ಉಳಿದ 150ರ ಪೈಕಿ 100ರಲ್ಲಾದರೂ ಗೆದ್ದೇ ಬಿಡಬಹುದು ಎಂದು ಹೇಳುವ ಸ್ಥಿತಿಯಿಲ್ಲ. ಈ ಸಾರಿಯಂತೂ ರಾಜ್ಯಮಟ್ಟದಲ್ಲಿ ಕಾಂಗ್ರೆಸ್‌ಗೆ ಅನುಕೂಲ ಮಾಡುವಂತಹ ನೆರೆಟಿವ್ ಏನೂ ಇಲ್ಲ; ಬದಲಿಗೆ ಇಲ್ಲಿನ ಲೀಡರ್‌ಗಳ ವಿರುದ್ಧದ ಸತತ ಅಪಪ್ರಚಾರ ಹಾಗೂ ಲೀಡರ್‌ಗಳ ನಡುವಿನ ಸಾಮರಸ್ಯದ ಕೊರತೆಯು ಇನ್ನೂ ದೊಡ್ಡ ಪೆಟ್ಟೇ ಕೊಡಬಹುದು.

ಹಾಗೆ ನೋಡಿದರೆ ಕಾಂಗ್ರೆಸ್ ಬಗ್ಗೆಯೂ ಪ್ರೇಮವಿಲ್ಲದ, ಬಿಜೆಪಿಯ ಬಗ್ಗೆ ತಿರಸ್ಕಾರವಾಗಲೀ ಒಲವಾಗಲೀ ಇಲ್ಲದ ಗಣನೀಯ ಸಂಖ್ಯೆಯ ಯುವ ಹಾಗೂ ಇತರ ಸಮುದಾಯಗಳ ಮತಗಳನ್ನು ತೆಗೆದುಕೊಳ್ಳುವ ಹೊಸದೊಂದು ಪಕ್ಷವು ಹುಟ್ಟಿಕೊಂಡಲ್ಲದೇ ಕಾಂಗ್ರೆಸ್‌ಗೆ ಅನುಕೂಲಕರವಾದ ಸಂದರ್ಭ ಒದಗಿಬರುವುದು ಕಷ್ಟವೆಂದೇ ತೋರುತ್ತಿದೆ. ಏಕೆಂದರೆ ಎಷ್ಟೇ ದುರಾಡಳಿತ ನೀಡಿದರೂ, ಜನರು ಅದರ ಬಗ್ಗೆ ಯೋಚಿಸದಂತೆ ಮಾಡಲು, ವಿರೋಧಿಗಳ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡಲು ಬಿಜೆಪಿಯ ಕೈಯ್ಯಲ್ಲಿ ಪ್ರಬಲ ಪ್ರಚಾರ ಯಂತ್ರಾಂಗ ಇದೆ. ಉತ್ತರ ಪ್ರದೇಶದಲ್ಲಿ ಆಗಿದ್ದು ಅದೇ. ಇದನ್ನು ಅರಿತು ಎಲ್ಲಾ ರೀತಿಯಿಂದಲೂ ಭಿನ್ನ ಕಾರ್ಯತಂತ್ರ ಮಾಡದೇ ಕಾಂಗ್ರೆಸ್ ಕರ್ನಾಟಕದಲ್ಲಿ ಗೆಲ್ಲುವುದು ಬಹಳ ಕಷ್ಟ.

ಸಿಸುಮಗ


ಇದನ್ನೂ ಓದಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ಪ್ರಶ್ನೆ ಮತ್ತು ಸುಪ್ರೀಂ ತೀರ್ಪು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...