Homeಕರ್ನಾಟಕಉತ್ತರ ಕನ್ನಡ ಸಂತಾನ ಸಂರಕ್ಷಣೆಗೆ ಒಂದಾದ ಮ್ಯಾಗಿಯಜ್ಜಿ ದೇಶಜ್ಜ!!

ಉತ್ತರ ಕನ್ನಡ ಸಂತಾನ ಸಂರಕ್ಷಣೆಗೆ ಒಂದಾದ ಮ್ಯಾಗಿಯಜ್ಜಿ ದೇಶಜ್ಜ!!

- Advertisement -
- Advertisement -

ಉತ್ತರ ಕನ್ನಡದ ಕಾಂಗ್ರೆಸ್ ಪೊರೆ ಕಳಚಿಕೊಳ್ಳುತ್ತಿದೆ! ಮದವೇರಿದ ಮದ್ದಾನೆಗಳಂತಾಗಿ ದಶಕಗಟ್ಟಲೆ ಕಾಲ ಗುದ್ದಾಡಿ ಜಿಲ್ಲಾ ಕಾಂಗ್ರೆಸನ್ನು ನಜ್ಜುಗುಜ್ಜುಮಾಡಿದ್ದ ಮ್ಯಾಗಿಯಜ್ಜಿ ಮತ್ತು ದೇಶಜ್ಜ ರಾಜಿ ಸಂಕೇತ ಬಿತ್ತರಿಸುತ್ತಿದ್ದಾರೆ. ಪರಸ್ಪರ ಅಸ್ತಿತ್ವ ಉಳಿಸಿಕೊಳ್ಳಲು ಈ ಮುದಿಮಣಿಗಳು ಹೊಂದಾಣಿಕೆಯ ಅನಿವಾರ್ಯಕ್ಕೆ ಬಿದ್ದಿವೆ. ಬದ್ಧವೈರಿಗಳ ಈ ಮನಃಪರಿವರ್ತನೆ ಯಲ್ಲಾಪುರ ಬೈ-ಇಲೆಕ್ಷನ್ ಸೋಲಿನ ನೇರ ಪರಿಣಾಮ ಎಂತಲೇ ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಣೆಗಳು ನಡೆದಿದೆ.

ದೇಶಪಾಂಡೆ ತನ್ನ ಮೂರು ದಶಕದ ರಾಜಕೀಯದಲ್ಲಿ ಜನತಾ ಪರಿವಾರದಲ್ಲಿರಲಿ ಅಥವಾ ಕಾಂಗ್ರೆಸಿನಲ್ಲಿರಲಿ ಯಾರನ್ನೂ ಗೆಲ್ಲಿಸಲು ತ್ರಿಕರ್ಣಪೂರ್ವಕ ಪ್ರಯತ್ನ ಮಾಡಿದ ಕುರುಹುಗಳಿಲ್ಲ. ಹಾಗಂತ ಸೋಲಿಸಲು ಹಲವು ಸಲ ಹಠಹಿಡಿದು ಹಿಕಮತ್ತು ನಡೆಸಿದ ದಾಖಲೆಗಳಿವೆ. ಇಂಥ ಇತಿಹಾಸದ ದೇಶ್ ಕಳೆದ ಯಲ್ಲಾಪುರ ಬೈ-ಇಲೆಕ್ಷನ್‍ನಲ್ಲಿ ತನ್ನ ಚೇಲಾ ಭೀಮಣ್ಣ ನಾಯ್ಕನ ಗೆಲ್ಲಿಸಿ ವೈರಿ ಹೆಬ್ಬಾರ್ ಮೇಲಿನ ಸೇಡು ತೀರಿಸಿಕೊಳ್ಳಲು ಪ್ರತಿಷ್ಠೆ ಪಣಕ್ಕಿಟ್ಟು ಹೋರಾಡಿದ್ದರು. ಆದರೆ ಸ್ವಯಂಕೃತಾಪರಾಧಗಳ ಸರಣಿಯಿಂದ ವರ್ಚಸ್ಸು ಕಳಕೊಂಡಿರುವ ದೇಶ್ ಮುಗ್ಗರಿಸಿ ಮಕಾಡೆ ಮಲಗಿಬಿಟ್ಟರು! ಕಂಗಾಲಾಗಿ ದೇಶಪಾಂಡೆ ಕೂತಿದ್ದ ಈ ಹೊತ್ತಿನಲ್ಲೇ ಬರೋಬ್ಬರಿ ಒಂದು ವರ್ಷದನಂತರ ಜಿಲ್ಲೆಗೆ ವಕ್ಕರಿಸಿದ ಇಲ್ಲಿಯ ಮಾಜಿ ಸಂಸದೆ ಮಾರ್ಗರೇಟ್ ಆಳ್ವ ಆಟ ಶುರುಹಚ್ಚಿಕೊಂಡಿದ್ದರು. ನೇರ ಮ್ಯಾಗಿಯ ಶಿರಸಿಯ ಮನೆಗೇ ಹೋದ ದೇಶ್ ಆಕೆಯ ಮುಂದೆ ನಿಂತು ಹೊಸ ನಂಟಿನ ಪ್ರಸ್ತಾಪ ಇಟ್ಟಿರುವುದು ಅನಿರೀಕ್ಷಿತ ಸಮೀಕರಣವನ್ನು ಜಿಲ್ಲಾ ರಾಜಕೀಯ ಭೂಮಿಕೆಯಲ್ಲಿ ಸೃಷ್ಟಿಸಿಬಿಟ್ಟಿದೆ.

ಮ್ಯಾಗಿ ಮತ್ತಾಕೆಯ ಮಗ ಆಳ್ವ ಫೌಂಡೇಶನ್ ಕಟ್ಟಿಕೊಂಡಿದ್ದರೆ, ದೇಶ್ ಮತ್ತವರ ಪುತ್ರ ಪ್ರಶಾಂತ ದೇಶಪಾಂಡೆ ಟ್ರಸ್ಟ್ ಸ್ಥಾಪಿಸಿಕೊಂಡಿದ್ದಾರೆ. ಎರಡೂ ಕುಟುಂಬಗಳು ಸಾಮಾಜಿಕ ಸೇವೆಯ ಹೆಸರಲ್ಲಿ ರಾಜಕೀಯ ಫಾಯ್ದೆಗೆ ಹವಣಿಸುತ್ತಿವೆ. ಮ್ಯಾಗಿಗೆ ತನ್ನ ಪೆದ್ದು ಕುಲೋದ್ಧಾರಕನನ್ನು ಶಿರಸಿಯ ಶಾಸಕನ ಮಾಡುವ ಕನಸು; ದೇಶ್‍ಗೆ ಮುಂಬೈನಲ್ಲಿ ವಕೀಲಿಕೆ ಮಾಡುವ ಅನಿವಾಸಿ ಉತ್ತರ ಕನ್ನಡಿಗ ಮಗ ಮಹಾರಾಯನ ಸಂಸದನ ಮಾಡುವ ಆಸೆ. ಇದೇ ಒಳಉದ್ದೇಶದಿಂದ ಮ್ಯಾಗಿ ಫೌಂಡೇಷನ್ ಕಾರ್ಯಕ್ರಮ ಹಾಕಿಕೊಂಡು ಈಗ ಜಿಲ್ಲೆಯಲ್ಲಿ ಅಂಡಲೆಯುತ್ತಿದ್ದಾರೆ. ಆಕೆ ಫಂಕ್ಷನ್ ಮುಗಿಸಿ ಮನೆಗೆ ಬರುವುದನ್ನೇ ಕಾಯುತ್ತಿದ್ದ ದೇಶಪಾಂಡೆ ಮೊನ್ನೆ ಶನಿವಾರ ಭೇಟಿಯಾಗಿ ಗ್ಯಾಂಗ್‍ವಾರ್ ನಿಲ್ಲಿಸುವ ಒಪ್ಪಂದ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಎಬ್ಬಿಸಿರುವ ಬಡಿವಾರಕ್ಕೆ ಬೆದರಿರುವ ಮ್ಯಾಗಿ-ದೇಶ್ ನೈಚ್ಛಾನುಸಂಧಾನ ನಡೆಸಬೇಕಾಗಿ ಬಂದಿವೆ, ಪಾಪ!!

ಮ್ಯಾಗಿ-ದೇಶ್ ಅಕ್ಕ-ಪಕ್ಕ ಕುಳಿತು ಕಳೆದ ಅಸೆಂಬ್ಲಿ ಲೋಕಸಭೆ ಚುನಾವಣೆಗಳಲ್ಲಿ ತಮ್ಮ ಬಣ ಬಡಿದಾಟದಿಂದಾದ ಹಾನಿಯ ಲೆಕ್ಕ ತೆಗೆದಿದ್ದಾರೆ. ತಮ್ಮೊಳಗಿನ ದ್ವೇಷಾಸೂಯೆ ಮೇಲಾಟದಿಂದ ಗತಿಗೇಡಿ ಬಿಜೆಪಿ ಸೈತಾನನಂತೆ ಬೆಳೆದಿದೆ ಎಂದು ಪಾಪಪ್ರಜ್ಞೆಯಿಂದ ಮಾತಾಡಿಕೊಂಡಿದ್ದಾರೆ; ಈಗಿಂದಲೇ ತಳಮಟ್ಟದಿಂದ ಪಾರ್ಟಿಯನ್ನು ಕಟ್ಟದಿದ್ದರೆ ತಮ್ಮ ವಂಶದ ಉತ್ತರಾಧಿಕಾರಿಗಳಿಗೆ ಭವಿಷ್ಯವಿಲ್ಲ ಎಂಬುದು ಮನಗಂಡಿದ್ದಾರೆ. ಜಿಲ್ಲಾ ಕಾಂಗ್ರೆಸ್ ಉದ್ಧಾರವಾಗಬೇಕಿದ್ದರೆ ಮೊದಲು ಹಾಲಿ ಡಿಸಿಸಿ ಅಧ್ಯಕ್ಷ ಭೀಮಣ್ಣ ನಾಯ್ಕನ ಉಚ್ಚಾಟಿಸಿ ಹೊಸ ಆಯ್ಕೆ ಮಾಡಬೇಕು; ಆನಂತರ ತಾವಿಬ್ಬರೂ ಒಟ್ಟಾಗಿ ಜಿಲ್ಲಾ ಟೂರ್ ಹೊಡೆದು ಪಕ್ಷಕ್ಕೆ ಜೀವ ತುಂಬಬೇಕೆಂದು ಮ್ಯಾಗಿ ಮನದಿಂಗಿತವನ್ನು ದೇಶ್ ಮುಂದೆ ಮಂಡಿಸಿದ್ದಾರೆ. ಇದನ್ನು ದೇಶಪಾಂಡೆಯೂ ಒಪ್ಪಿದ್ದಾರೆ.

ಬದಲಾದ ವರಸೆಯಲ್ಲಿ ಮ್ಯಾಗಿಗೆ ದೇಶಪಾಂಡೆಗಿಂತಲೂ ಹೆಚ್ಚು ಸಿಟ್ಟಿರುವುದು ಭೀಮಣ್ಣನ ಮೇಲೆ. ತನ್ನನ್ನು ಕೊನೆತನಕವೂ ಕಾಡಿದ ಮಾಜಿ ಸಿಎಂ ‘ಬಂ’ನ ಭಾಮೈದ ಈ ಭೀಮಣ್ಣನೆಂಬುದು ಮ್ಯಾಗಿಯ ಹಲವು ಅಸಮಾಧಾನದ ಕಾರಣಗಳಲ್ಲಿ ಒಂದು. ಈ ಭೀಮಣ್ಣ ನಾಯ್ಕನೂ ಅಷ್ಟೇ ಕಿತಾಪತಿಗಾರ. ಮ್ಯಾಗಿಗೆ ಆತ ಕೇರ್ ಮಾಡುತ್ತಿರಲಿಲ್ಲ. ಆಕೆಯ ನಿಷ್ಠಾವಂತ ಹಿಂಬಾಲಕರಾದ ವಿ.ಎನ್.ನಾಯ್ಕ್, ವಸಂತನಾಯ್ಕ್ ವಗೈರೆ ದೀವರ ಹುಡುಗರನ್ನು ಭೀಮಣ್ಣ ಹಣಿಯುತ್ತಲೇ ಬಂದಿದ್ದ. 2013ರ ಅಸೆಂಬ್ಲಿ ಇಲೆಕ್ಷನ್‍ನಲ್ಲಿ ಶಿರಸಿಯಲ್ಲಿ ಸ್ಪೀಕರ್ ಕಾಗೇರಿ ಎದುರು ಮೂರು ಸಾವಿರ ಚಿಲ್ಲರೆ ಮತದ ತೀರಾ ಸಣ್ಣ ಅಂತರದಲ್ಲಿ ಸೋತಿದ್ದ ದಿವಂಗತ ದೀಪಕ್ ಹೊನ್ನಾವರ್ ಮ್ಯಾಗಿಯ ಪುಂಡ ಪಟ್ಟ ಶಿಷ್ಯನಾಗಿದ್ದ. ಆತ ಗೆಲುವಿನ ಹತ್ತಿರ ಬಂದು ಮುಗ್ಗರಿಸಲು ಭೀಮಣ್ಣ-ರವೀಂದ್ರನಾಥ್ ನಾಯ್ಕ ಜೋಡಿಯ ದ್ರೋಹವೇ ಅಂದು ಕಾರಣವಾಗಿತ್ತು. ಈ ಉರಿ ಮ್ಯಾಗಿಗಿನ್ನೂ ಕಡಿಮೆಯಾಗಿಲ್ಲ. ಒಂದು ಕಾಲದಲ್ಲಿ ರವಿ ಮ್ಯಾಗಿ ಶಿಷ್ಯನಾಗಿದ್ದವ. ಆಕೆಯಿಂದಲೇ ಶಿರಸಿ ಕಾಂಗ್ರೆಸ್ ಕ್ಯಾಂಡಿಡೇಟಾಗಿದ್ದವ. ಆನಂತರ ಗುರುಮಾತೆಗೇ ತಿರುಗಿಬಿದ್ದಿದ್ದ ರವಿ ಜೆಡಿಎಸ್ ಪಾಲಾಗಿದ್ದ. ಮೊನ್ನೆಯ ಯಲ್ಲಾಪುರ ಉಪಚುನಾವಣೆ ಗಡಿಬಿಡಿಯಲ್ಲಿ ಈ ರವಿ, ದೇಶಪಾಂಡೆ ಜುಬ್ಬ ಹಿಡಿದುಕೊಂಡು ಕಾಂಗ್ರೆಸ್‍ಗೆ ನುಸುಳಿದ್ದಾನೆ.

ಇಂಥ ಭೀಮ-ರವಿಯಂಥವರ ದೂರವಿಟ್ಟರೆ ಮ್ಯಾಗಿ-ದೇಶ್‍ನಂಟು ಕುದುರುತ್ತದೆ. 2018ರ ಶಿರಸಿ ವಿಧಾನಸಭಾ ಕ್ಷೇತ್ರದ ಚುನಾವಣೆ ಮತ್ತು ಮೊನ್ನೆಯ ಯಲ್ಲಾಪುರ ಉಪಚುನಾವಣೆಯಲ್ಲಿ ಹೇತ್ಲಾಂಡಿ ಭೀಮಣ್ಣನ ಕಾಂಗ್ರೆಸ್ ಕ್ಯಾಂಡಿಡೇಟ್ ಮಾಡಿದ್ದೇ ತಪ್ಪು ಆಯ್ಕೆ ಎನ್ನುವ ಮ್ಯಾಗಿ ತನ್ನ ಮಗ ಶಿರಸಿಯಲ್ಲಿ “ರೈಟ್ ಕ್ಯಾಂಡಿಡೇಟ್” ಎನ್ನುವುದೇ ವಿಚಿತ್ರ. ಬಿಜೆಪಿ ಬೆಂಬಲಿಗರಾದ ಹವ್ಯಕ ಬ್ರಾಹ್ಮಣ ಬಾಹುಳ್ಯದ ಶಿರಸಿ-ಸಿದ್ಧಾಪುರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ನಿವೇದಿತ್ ಆಳ್ವ ಗೆಲ್ಲುವುದು ಅಷ್ಟು ಸುಲಭವೇನಲ್ಲ. ಅಲ್ಪಸಂಖ್ಯಾತರ ದ್ವೇಷದ ಮೇಲೆಯೇ ಬಿಜೆಪಿಯನ್ನು ಕಟ್ಟಿರುವ ಕಾಗೇರಿ, ಅನಂತ್ಮಾಣಿಗಳ ತವರು ಶಿರಸಿಯಲ್ಲಿ ಕಾಂಗ್ರೆಸ್ ಹವ್ಯಕ ಮಾಣಿ/ಕೂಸು ನಿಲ್ಲಿಸಿದರಷ್ಟೇ ಅನುಕೂಲ. ಸದ್ಯ ಜೆಡಿಎಸ್‍ನಲ್ಲಿರುವ ದಿವಂಗತ ಮಾಜಿ ಸಿಎಂ ರಾಮಕೃಷ್ಣ ಹೆಗಡೆಜೀ ದಾಯಾದಿ ಮೊಮ್ಮಗ ಶಶಿಭೂಷಣ ಹೆಗಡೆ ಕಾಂಗ್ರೆಸ್‍ಗೆ ಸೂಕ್ತ ಅಭ್ಯರ್ಥಿ. ಕಾಂಗ್ರೆಸ್ ಸೇರುವ ಆಸೆ ಶಶಿಗಿದ್ದರೂ ಹೆಗಡೆಜೀಯ ದೊಡ್ಮನೆ ಫ್ಯಾಮಿಲಿ ಬಗ್ಗೆ ದೇಶಪಾಂಡೆಗಿರುವ ಪುರಾತನ ದ್ವೇಷಕ್ಕೆ ಹೆದರಿ ಆತ ಸುಮ್ಮನಿದ್ದಾರೆ.

ಗೆಲ್ಲಲು ಇರುವ ಇಂಥ ಸರಳ ಲೆಕ್ಕಾಚಾರಗಳು ಪುತ್ರ ವ್ಯಾಮೋಹದಲ್ಲಿ ಮಂಕಾಗಿರುವ ಮ್ಯಾಗಜ್ಜೀ-ದೇಶಜ್ಜನಿಗೆ ಅರ್ಥವಾಗೋದಿಲ್ಲ. ಔಟ್‍ಡೇಟೆಡ್ ದಿಗ್ಗಜರು ಹಳೆಯದನ್ನು ಮರೆತು ಒಂದಾಗಿ ಪಾರ್ಟಿ ಕಟ್ಟಬಹುದೆಂಬ ನಂಬಿಕೆ ನಿಷ್ಠಾವಂತ ಕಾಂಗ್ರೆಸಿಗರಿಗಂತೂ ಇಲ್ಲಾ. ಆದರೆ ಮಕ್ಕಳ ಭವಿಷ್ಯ ಬೆಳಗಲು ಅನಿವಾರ್ಯವಾಗಿ ಮ್ಯಾಗಿ-ದೇಶ್ ಹೊಸ ಹೊಂದಾಣಿಕೆಯ ಸ್ಕೆಚ್ ಹಾಕಿದ್ದಾರೆಂಬುದು ಕಾಂಗ್ರೆಸ್‍ನಲ್ಲಷ್ಟೇ ಅಲ್ಲ ವಿರೋಧಿ ಕೇಸರಿ ಪಾಳೆಯದಲ್ಲೂ ಸಣ್ಣದೊಂದು ತಲ್ಲಣ ಎಬ್ಬಿಸಿರುವುದಂತೂ ಖರೆ!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...