Homeಕರ್ನಾಟಕಉತ್ತರ ಕನ್ನಡ ಬಿಜೆಪಿ: ಹವ್ಯಕ ಮಂಡಲ ಕೊಂಕಣಿ ಕಮಂಡಲ

ಉತ್ತರ ಕನ್ನಡ ಬಿಜೆಪಿ: ಹವ್ಯಕ ಮಂಡಲ ಕೊಂಕಣಿ ಕಮಂಡಲ

- Advertisement -
- Advertisement -

ಉತ್ತರ ಕನ್ನಡದ ಬಿಜೆಪಿ ಪಲ್ಲಕ್ಕಿಯಲ್ಲಿ ಮೇಲ್ವರ್ಗದ ಹವ್ಯಕ ಹಾಗೂ ಕೊಂಕಣಿ ಕಂಠೀರವರೇ ವಿಜೃಂಭಿಸುತ್ತಿದ್ದಾರೆ! ಆ “ಪವಿತ್ರ” ಪಲ್ಲಕ್ಕಿಯನ್ನು ಹಿಂದುಳಿದ ವರ್ಗದ ಕಾಲಾಳುಗಳು ಹೊತ್ತು ಮೆರೆಸುತ್ತಿದ್ದಾರೆ. ಜಿಲ್ಲೆಯ ಹವ್ಯಕ ಹಾಗೂ ಜಿಎಸ್ಬಿ ಸೇರಿದಂತೆ ಒಟ್ಟೂ ಜನಸಂಖ್ಯೆ ಅಬ್ಬಬ್ಬಾ ಎಂದರೆ ಶೇಕಡಾ ಹತ್ತು ದಾಟುವುದಿಲ್ಲ. ಆದರೆ ಬಿಜೆಪಿ ದರ್ಬಾರಿನಲ್ಲಿ ಈ “ಅಲ್ಪಸಂಖ್ಯಾತರಿಗೆ” ಆಯಕಟ್ಟಿನ ಅಧಿಕಾರ ಒಂದೊಂದಾಗಿ ಸಂದಾಯವಾಗುತ್ತಿದೆ. ಹಿಂದುಳಿದವರು- ದಲಿತರು-ಅಲ್ಪಸಂಖ್ಯಾತರು ದಿಕ್ಕು ದೆಸೆಯಿಲ್ಲದ ಅಬ್ಬೇಪಾರಿಗಳಾಗಿದ್ದಾರೆ.

ಮುಸಲರು, ಕ್ರೈಸ್ತರ ಬಿಡಿ, ಆ ಜನಾಂಗ ಕಂಡರೆ ಬಿಜೆಪಿಗೆ ಆಗಬರುವುದಿಲ್ಲ. ಆದರೆ ಹಿಂದೂತ್ವದ ಆವಹನೆ ಮಾಡಿಕೊಂಡು ಕುಣಿಯುವ ಹಿಂದುಳಿದವರ-ದಲಿತರ ಪಾಲಿಗೆ ಗೆರಟೆಯ ಗತಿಯಾಗಿದೆ! ಹಿಂದೂ ನಾವೆಲ್ಲ ಒಂದು ಎಂದು ಸುಳ್ಳು ಸ್ಲೋಗನ್ ಹೊಡೆಯುತ್ತ ಬಂದಿರುವ ಬಿಜೆಪಿ ಪರಿವಾರ ಶೋಷಿತರಿಗೆ ಅಧಿಕಾರ ಕೊಡುತ್ತಿಲ್ಲ.

ಬಿಜೆಪಿ ಸ್ಥಾಪನೆಯಾದ ನಂತರ ನಡೆದ ಎಲ್ಲ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೇಸರಿ ಪಾರ್ಟಿಯ ಹುರಿಯಾಳಾಗಿದ್ದು ಹವ್ಯಕ ಬ್ರಾಹ್ಮಣ ಬಹಾದ್ದೂರರೇ! ಸತತವಾಗಿ ಸಂಸದನಾಗುತ್ತಿರುವ ಅನಂತ್ಮಾಣಿ ಹವ್ಯಕ ಕಣ್ಮಣಿ. ಈ ಬಾರಿ ಅನಂತ್ಮಾಣಿಗೆ ಟಿಕೆಟ್ ತಪ್ಪಿಸಲು ಹವಣಿಸಿದ್ದ ಹವ್ಯಕರ ತಂಡವೂ ಹುಡುಕುತ್ತಿದ್ದು ರಕ್ತ ಬಾಂಧವರನ್ನೇ. ವಿಧಾನಸಭೆ ಚುನಾವಣೆಯಲ್ಲಿ ಠೇವಣಿ ಕಳಕೊಂಡಿದ್ದ ಕುಮಟೆಯ ಡಾ| ಜಿ.ಜಿ.ಹೆಗಡೆ, ಸಿದ್ಧಾಪುರದ ವಕೀಲ ರವಿ ಹೆಗಡೆ ಹೂವಿನಮನೆ, ಪತ್ರಕರ್ತ ವಿಶ್ವೇಶ್ವರ ಭಟ್ಟ, ಹಾಲಿ ಸ್ಪೀಕರ್ ಕಾಗೇರಿ… ವಗೈರೆ ಮಾಣಿಗಳೆ ಟಿಕೆಟ್ ಟ್ಯಾಕ್ಟಿಸ್‍ನಲ್ಲಿದ್ದರು.

ಹವ್ಯಕ ಪ್ರಾಬಲ್ಯದ ಈ ಹಿಂದಿನ ಅಂಕೋಲ ಹಾಗೂ ಈಗಿನ ಶಿರಸಿ ಕ್ಷೇತ್ರದಲ್ಲಿ ಸ್ವಜಾತಿ ಸ್ವಾಮೀಜಿಗಳ ಮಂತ್ರಾಕ್ಷತೆಯಿಂದ ಗೆಲ್ಲುತ್ತಿರುವ ಕಾಗೇರಿ ಸತತ ಆರು ಬಾರಿ ಎಮ್ಮೆಲ್ಲೆಯಾಗಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಎಬಿವಿಪಿ ಕೇಡರಿನ ಕಾಗೇರಿಗೆ ದೊಡ್ಡ ಪೀಠ ಖಂಡಿತ! ಹಿಂದೆ ಕ್ಯಾಬಿನೆಟ್ ಮಂತ್ರಿಯಾಗಿದ್ದ ಕಾಗೇರಿ ಈಗ ಮಹತ್ವದ ವಿಧಾನಸಭಾಧ್ಯಕ್ಷರಾಗಿ ಪ್ರತಿಷ್ಟಾಪನೆಗೊಂಡಿದ್ದಾರೆ. ಮಂತ್ರಿಯಾಗಿ ಜೀವನ ಕೊನೆಯ ಆಸೆ ಈಡೇರಿಸಿಕೊಳ್ಳುವ ತೆವಲಿಂದ ಕಾಂಗ್ರೆಸ್ ಶಾಸಕತ್ವಕ್ಕೆ ಅನರ್ಹತೆ ತಂದುಕೊಂಡಿದ್ದ ಯಲ್ಲಾಪುರದ ಕಳ್ಳ ಅದಿರು ಉದ್ಯಮಿ ಶಿವರಾಮ ಹೆಬ್ಬಾರ್ ಎಂಬ ಹವ್ಯಕ ಹಿರೇಮಣಿಗೆ ಕ್ಯಾಬಿನೆಟ್ ಮಂತ್ರಿ ಮಾಡಲಾಗಿದೆ.

ಬಿಜೆಪಿ ಅಧಿಕಾರಕ್ಕೆ ಬಂದಾಗೆಲ್ಲಾ ಕಾಡನ್ನು ಅತಿಕ್ರಮಣ ಮಾಡಿ ತೋಟ ಮಾಡಿಕೊಂಡಿರುವ ಪರಿಸರವ್ಯಾಧಿ ಅನಂತ ಹೆಗಡೆ ಆಶೀಸರ್‍ಗೆ ನಿಗಮ ಒಂದು ಗ್ಯಾರಂಟಿ. ಕೇಶವಕೃಪಾದಲ್ಲಿ ಆಶ್ರಯದಾತರ ಸಂಪಾದಿಸಿರುವ ಆಶೀಸರ್‍ಗೆ ಜೀವ ವೈವಿಧ್ಯ ಮಂಡಳಿ ಇನಾಮಾಗಿ ಸಿಕ್ಕಿದೆ. ಸಿದ್ದು ಸರ್ಕಾರವಿದ್ಧಾಗ ಪ್ರೊ. ಎಂ.ಎ.ಹೆಗಡೆಗೆ ಯಕ್ಷಗಾನ ಅಕಾಡೆಮಿಗೆ ಅಧ್ಯಕ್ಷನಾಗಿ ನೇಮಿಸಲಾಗಿತ್ತು. ಈ “ಯಕ್ಷತಜ್ಞ” ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಸ್ವಜಾತಿ ಲಾಬಿ ಪ್ರಯೋಗಿಸಿ ಅಲ್ಲೇ ಹಾಯಾಗಿ ಮುಂದುವರಿದಿದ್ದಾರೆ. ಒಟ್ಟಿನಲ್ಲಿ ಜಿಲ್ಲೆಗೆ ದಕ್ಕಿರುವ ಐದೂ ಸರ್ಕಾರಿ ಕಾರಿನ ಭಾಗ್ಯ ಹವ್ಯಕರಿಗೇ ಖುಲಾಯಿಸಿದೆ. ಇದು ಕಾಕತಾಳೀಯವಲ್ಲ; ಜನಿವಾರ ಜಾದೂ!! ಈ ಹವ್ಯಕ ವೈಭವ ಪ್ರಸಂಗ ಕಂಡು ಹಾಲಕ್ಕಿ ಒಕ್ಕಲಿಗರು, ದೀವರು, ಮೀನುಗಾರರು, ಕೋಮಾರಪಂತ, ಮರಾಠರೇ ಮುಂತಾದ ಹಿಂದುಳಿದವರು ಬಲವಂತದ “ಖುಷಿ”ಪಡುತ್ತಿದ್ದಾರೆ.

ಹವ್ಯಕರು ಸಿಕ್ಕ-ಸಿಕ್ಕ ಅಧಿಕಾರ ಗದ್ದುಗೆ ಬರುತ್ತಿದ್ದರೂ ಕೊಂಕಣಿಗರಿಗೇನೂ ಬೇಸರವಿಲ್ಲ. ಯಾಕೆಂದರೆ, ಜಿಲ್ಲಾ ಬಿಜೆಪಿ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ಸಂತೃಪ್ತಿ ಕೊಂಕಣಿಗರದು!! ಪಕ್ಷಕ್ಕೆ ಪ್ರಯೋಜನವಿಲ್ಲದ ರಾಜಕೀಯ ದಂಧೆದಾರ ವಿನೋದ ಪ್ರಭು ರಾಜ್ಯ ಬಿಜೆಪಿಯ ಪ್ರಮುಖ ಪದಾಧಿಕಾರಿ. ಕುಮಟೆಯ ಡಿಂಗ್ಡಾಂಗ್ ಶಾಸಕ ದಿನಕರ ಶೆಟ್ಟಿಯ ವಿರೋಧ ಲೆಕ್ಕಿಸದೆ ಕೊಂಕಣಿ ಕುವರ ವೆಂಕಟೇಶ್ ನಾಯಕ್‍ಗೆ ಜಿಲ್ಲಾ ಬಿಜೆಪಿ ಅಧ್ಯಕ್ಷನಾಗಿ ಆರೆಸೆಸ್ ದೀಕ್ಷೆಕೊಟ್ಟಿದೆ. ಹಳಿಯಾಳ ಮೂಲದ ಸಂಘಿ ಸರದಾರ ಮಂಗೇಶ್ ಬೆಂಡೆ ಜಿಲ್ಲಾ ಬಿಜೆಪಿ ಹೈಕಮಾಂಡ್, ಕುಮಟಾದ “ಕಲ್ಲಡ್ಕ” ಹನ್ಮಂತ ಶಾನಭೋಗ್ ಸುಪ್ರೀಂ ಕಮಾಂಡರ್. ಅನಂತ್ಮಾಣಿ ಈ ರಿಂಗ್ ಮಾಸ್ಟರ್‍ಗಳ ಕಣ್ಸನ್ನೆಗೆ ಬಾಲ ಅಲ್ಲಾಡಿಸುವ ಕಮಾಂಡರ್. ಕೊಂಕಣಿಗರ ಈಶಾರೆ ಇಲ್ಲದೆ ಪಕ್ಷದಲ್ಲಿ ಏನೂ ಆಗುವುದಿಲ್ಲ. ಸೀನಿಯರ್ ಕಾಗೇರಿ ಆದಿಯಾಗಿ ಜಿಲ್ಲೆಯ ಅಷ್ಟೂ ಬಿಜೆಪಿ ಶಾಸಕರು ಕೊಂಕಣಿ ಕಮಾಂಡ್‍ನ ಅಡಿಯಾಳುಗಳು.

ಬಿಜೆಪಿ ಭೂಪರು ಕರಾವಳಿಯ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದವರನ್ನು ಎಮ್ಮೆಲ್ಲೆ ಮಾಡಿದ್ದೇವೆಂದು ಸಾಮಾಜಿಕ ನ್ಯಾಯದ ಸಬೂಬು ಹೇಳುತ್ತಿದೆ. ವಾಸ್ತವವೆಂದರೆ, ಈ ಹಿಂದುಳಿದವರ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಜನಿವಾರಿಗಳು ಸ್ಪರ್ಧಿಸಿದರೆ ಠೇವಣಿಯೂ ಉಳಿಯುವುದಿಲ್ಲ. ಹೀಗಾಗಿ ತಮ್ಮ ಗುಲಾಮಗಿರಿ ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ಶೂದ್ರರನ್ನು ಶಾಸಕರಾಗಿ ಮಾಡಿಕೊಂಡಿದ್ದಾರೆ. ತಮಗೆ ಸೆಡ್ಡು ಹೊಡೆಯಬಹುದಾದ ಸೂರಜ್ ನಾಯ್ಕನ ಹೊರತಳ್ಳಿದ್ದಾರೆ. ಮಾಜಿ ಮಂತ್ರಿ ಶಿವಾನಂದ ನಾಯ್ಕರನ್ನು ಜನಿವಾರ ಲಾಬಿ ಬರ್ಬರವಾಗಿ ಹಣಿದ ದೊಡ್ಡ ಇತಿಹಾಸವೇ ಇದೆ. ಸಿದ್ಧಾಪುರದ ಕೆ.ಜಿ.ನಾಯ್ಕ, ಕಾರವಾರದ ನಾಗರಾಜ್ ನಾಯಕ್, ಗಣಪತಿ ಉಳ್ವೇಕರ್….. ಮುಂತಾದ ಶೂದ್ರರು ಬಿಜೆಪಿಯ ಪಹರೆ ಕಾಯುವುದಕ್ಕμÉ್ಟೀ ಸೀಮಿತರಾಗಿದ್ದಾರೆ, ಪಾಪ! ತಾವು ವೈದಿಕ ಬಾಸ್‍ಗಳ ಕೃಪಾಶೀರ್ವಾದದಿಂದಲೇ ಗೆದ್ದಿದ್ದೇವೆಂದು ದೈನೇಸಿಯಾಗಿ ಹೇಳುತ್ತಿರುವ ಕರಾವಳಿಯ ಕೇಸರಿ ಶಾಸಕರು – “ಕುಲಕ್ಕೆ ಮೃತ್ಯು ಕೊಡಲಿ ಕಾವು” – ಎಂಬಂತಾಗಿದ್ದಾರೆ ಹಿಂದುಳಿದ ಸಮುದಾಯಕ್ಕೆ!!

ಕಾರವಾರದ ರೂಪಾಲಿ ನಾಯ್ಕ್, ಕುಮಟೆಯ ದಿನಕರ ಶೆಟ್ಟಿ ಮತ್ತು ಭಟ್ಕಳದ ಸುನೀಲ್ ನಾಯ್ಕ್ ಹೆಸರಿಗಷ್ಟೇ ಶಾಸಕರು. ಈ ಶಾಸಕರ ಚಲನವಲನದ ಮೇಲೆ ರಹಸ್ಯ ಕಣ್ಣಿಟ್ಟಿದೆ! ರೂಪಾಲಿಯಮ್ಮನ ಸರ್ಕಾರಿ ಪಿಎಸ್ ಸಂಸದ ಮಾಣಿಯ ಖಾಸಾ ಆದ್ಮಿ. ಜಿಲ್ಲಾ ಬಿಜೆಪಿ ವಕ್ತಾರ ರಾಜೇಶ್ ನಾಯಕ್‍ನ ಅಣತಿಯಾಚೆ ರೂಪಾಲಿ ಹೆಜ್ಜೆ ಹಾಕುವಂತಿಲ್ಲ. ಕುಮಟೆಯ ದಿನಕರ ಶೆಟ್ಟಿಯನ್ನು ಸರ್ಕಾರಿ ಕಂಟ್ರಾಕ್ಟರ್ ಲಾಬಿಯ ಗಜುಪೈ ಮತ್ತು ಸುಧೀರ್ ಪಂಡಿತ್ ಎಂಬ “ಬಿಲ್ವಿದ್ಯಾ” ಪಂಡಿತರು ನಿಯಂತ್ರಿಸುತ್ತಿದ್ದಾರೆ. ಭಟ್ಕಳದ ಸುನೀಲ್ ನಾಯ್ಕನಿಗೆ ಆರೆಸ್ಸೆಸ್ನ ಪ್ರಮೋದ್ ಜೋಶಿ ಮೂಗುದಾರ ಹಾಕಿ ಕುಂತಿದ್ದಾನೆ. ಜನಿವಾರದ ಬಿಗಿ ಬಂಧನದಲ್ಲಿ ಹಿಂದುಳಿದ ವರ್ಗದ ಶಾಸಕರು ಏದುಸಿರು ಬಿಡುತ್ತಿದ್ದಾರೆ. ಅಬ್ರಾಹ್ಮಣರು “ಒಡೆದೀರು” ಮೊಣಕೈಗೆ ಸವರಿದ ತುಪ್ಪದ ಪರಿಮಳಕ್ಕೆ ಬಲಿಬೀಳುತ್ತಲೇ ಇದ್ದಾರೆ…..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...