Homeಕರ್ನಾಟಕಮುಗಿಲಿನಿಂದ ಯಾರೂ ಉಚಿಗೊಂಡು ಬಿದ್ದಿಲ್ಲ ! ದಲಿತರ ಮೇಲಿನ ಕ್ರೌರ್ಯಕ್ಕೆ ನಾಗರಿಕ ಸಮಾಜವೇ ತಲೆ ತಗ್ಗಿಸಬೇಕು

ಮುಗಿಲಿನಿಂದ ಯಾರೂ ಉಚಿಗೊಂಡು ಬಿದ್ದಿಲ್ಲ ! ದಲಿತರ ಮೇಲಿನ ಕ್ರೌರ್ಯಕ್ಕೆ ನಾಗರಿಕ ಸಮಾಜವೇ ತಲೆ ತಗ್ಗಿಸಬೇಕು

- Advertisement -
- Advertisement -

| ವಿಶ್ವಾರಾಧ್ಯ ಸತ್ಯಂಪೇಟೆ |

ನಮ್ಮೆಲ್ಲರ ಮನಸ್ಸಿಗೆ ಅಂಟಿದ ಏಡ್ಸ್, ಕಾನ್ಸರ್‍ಗಿಂತಲೂ ಭೀಕರವಾದ ಜಾತಿಯತೆಯ ಭ್ರಮೆ ತೊಲಗುವ ಯಾವ ಲಕ್ಷಣಗಳು ನಮ್ಮ ನಾಗರಿಕ ಸಮಾಜದಲ್ಲಿ ಕಾಣುತ್ತಿಲ್ಲ. ವ್ಯಕ್ತಿಯ ಹುಟ್ಟಿನ ಮೂಲಕವೆ ಆತನ ಜಾತಿಯನ್ನು ನಿರ್ಧರಿಸುವ ಸಮಾಜವನ್ನು ಸ್ವಾಸ್ಥ್ಯ ಸಮಾಜವೆಂದು ಹೇಗೆ ಕರೆಯಬೇಕು? ವ್ಯಕ್ತಿಯ ಕೆಲಸಗಳಿಂದ ಆರಂಭವಾದ ಈ ಜಾತಿ ಪದ್ಧತಿ ಇಂದಿಗೂ ಮುಂದುವರೆದಿರುವುದು ದುರಂತವೆಂದೇ ಹೇಳಬೇಕಾಗಿದೆ. ಯಾವ ವ್ಯಕ್ತಿಯೂ ಹುಟ್ಟುವಾಗಲೆ ಕುರುಪಿ, ಕುಡಗೋಲು, ಸಲಿಕೆ, ಪುಟ್ಟಿಗಳನ್ನು ಜೊತೆಗೆ ತೆಗೆದುಕೊಂಡು ಹುಟ್ಟಿ ಬಂದಿಲ್ಲ. ಹಾಗೆಯೆ ಜನಿವಾರ, ನಾಮ, ವಿಭೂತಿ, ಇಷ್ಟಲಿಂಗ ಮುಂತಾದ ಲಾಂಛನಗಳನ್ನೂ ಹೊತ್ತು ಬಂದಿಲ್ಲ. ಆದರೂ ಜನ ಮಾನಸದಲ್ಲಿ ಜಾತಿಯ ಬೇರುಗಳು ಆಳಕ್ಕೆ ಇಳಿದು ಅವರೊಳಗಿನ ಮನುಷ್ಯತ್ವವನ್ನೆ ಕತ್ತರಿಸಿ ಹಾಕಿವೆ.

ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ
ಜಲಬಿಂದುವಿನ ವ್ಯವಹಾರ ಒಂದೇ
ಆಶೆಯಾಮಿಷ ರೋಹ ಹರುಷ ವಿಷಯಾದಿಗಳೆಲ್ಲಾ ಒಂದೇ
ಏನನೋದಿ ಏನ ಕೇಳಿ ಏನು ಫಲ ?
ಕುಲಜನೆಂಬುದಕ್ಕೆ ಆವುದು ದೃಷ್ಟ ?
ಕಾಶಿ ಕಮ್ಮಾರನಾದ ಬೀಸಿ ಮಡಿವಾಳನಾದ
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ?
ಇದು ಕಾಣರ ಕೂಡಲಸಂಗಮದೇವಾ
ಲಿಂಗಸ್ಥಲವನರಿದವನೆ ಕುಲಜನು

ಜಾತಿಗಳಿಲ್ಲಿಯೇ ಶ್ರೇಷ್ಠ ಜಾತಿ ಎಂದು ಬೊಗಳೆ ಬಿಡುವ ಅಳಲೆಕಾಯಿ ಪಂಡಿತರು ಹುಟ್ಟಿದ್ದು ತಾಯಿಯ ಗರ್ಭದಲ್ಲಿಯೆ. ತಂದೆ ಮತ್ತು ತಾಯಿಗಳ ಮಿಲನದಿಂದ ಗರ್ಭಕಟ್ಟಿ ಮಗುವಾಗಿ ತಾಯಿಯ ಯೋನಿಯ ಮೂಲಕ ಹೊರಬಂದದ್ದು. ಈ ಸತ್ಯವನ್ನು ಅರಿತೂ ಅರಿಯದಂತೆ ನಡೆಸುವ ಮನುಷ್ಯ ತನ್ನೊಳಗೆ ದುಷ್ಟತನವನ್ನು ಸಾಕಿ ಸಲಹಿದ್ದಾನೆ. ಶುಕ್ಲ ಶೋಣಿತದ ಎಲ್ಲರ ಹುಟ್ಟು ಇದೆ. ವೇದ ಆಗಮ ಶಾಸ್ತ್ರ ಪುರಾಣ ಪುಣ್ಯ ಕತೆಗಳನ್ನು ಓದಿದ್ದೇವೆ ಎಂದು ಒಂದೆ ಸಮ ಅರಚುವ ಪಂಡಿತೋತ್ತಮರೂ ಸಹ ಜಾತಿಯ ಹೊಲಸಿನಲ್ಲಿ ಸಿಕ್ಕಿ ಬಿದಿದ್ದಾರೆ. ಜನತೆಯ ಮನಸ್ಸನ್ನು ಸರಿಯಾಗಿ ಗ್ರಹಿಸಿದ ಬಸವಣ್ಣನವರು ಆಶೆಯಾಮಿಷ ರೋಷ ಹರುಷಗಳು ಸಹ ಮನುಷ್ಯರಲ್ಲಿ ಒಂದೆ ಬಗೆಯಾಗಿರುತ್ತವೆ. ಜಾತಿ ಭಿನ್ನವಾದ ಮಾತ್ರಕ್ಕೆ ಅವರವರ ಮನಸ್ಥಿತಿಗಳು ಬದಲಾಗಲಾರವು ಎಂದಿದ್ದಾರೆ.

ಇದನ್ನು ಓದಿ: ಗುಂಡ್ಲುಪೇಟೆ ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ಖಂಡಿಸಿ ಪ್ರತಿಭಟನೆ

ಮಾಡುವ ಕಾಯಕಗಳು ಹೇಗೆ ಜಾತಿಯಾದವು ? ಎಂಬುದನ್ನು ಮನಂಬುಗುವಂತೆ ವಚನದಲ್ಲಿ ವಿವರಿಸಿದ್ದಾರೆ. ಯಾರೂ ಕಿವಿಯಲ್ಲಿ ಹುಟ್ಟಲು ಸಾಧ್ಯವೆ ಇಲ್ಲ. ಲಿಂಗಸ್ಥಲದ ಅರಿವು ಅಂದರೆ ಅದು ವಾಸ್ತವದ ಅರಿವು. ಸತ್ಯದ ಅರಿವು. ವಿಜ್ಞಾನದ ಅರಿವು ಎಂದರ್ಥ. ಯಾರು ಸತ್ಯವನ್ನು ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾನೊ ಆತನೆ ಶ್ರೇಷ್ಠ ಕುಲದವನು ಎಂಬ ವಾದ ಬಸವಣ್ಣನವರದು. ಕುಲಗಳು ಶ್ರೇಷ್ಠ ಕನಿಷ್ಠ ಎಂದು ವಿಂಗಡಿಸುವಿರಾದರೆ ಹಿಂದೆ ಇದ್ದ ಮನು ಮುನಿಗಳು ಯಾರಿದ್ದರು ? ಎಂಬ ಇತಿಹಾಸದ ಪುಟವನ್ನು ಹೆಕ್ಕಿ ನೋಡಿದರೆ ಸತ್ಯ ಕಾಣುತ್ತದೆ.

ವ್ಯಾಸ ಬೋವಿತಿಯ ಮಗ, ಮಾರ್ಕಂಡೇಯ ಮಾತಂಗಿಯ ಮಗ
ಮಂಡೋದರಿ ಕಪ್ಪೆಯ ಮಗಳು, ಕುಲವನರಸದಿರಿಂ ಭೋ
ಕುಲದಿಂದ ಮುನ್ನೆನಾದಿರಿಂ ಭೋ !
ಸಾಕ್ಷಾತ್ ಅಗಸ್ತ್ಯ ಕಬ್ಬಿಲ, ದುರ್ವಾಸ ಮಚ್ಚಿಗ
ಕಶ್ಯಪ್ಪ ಕಮ್ಮಾರ, ಕೌಂಡಿನ್ಯನೆಂಬ ಖುಷಿ
ಮೂರು ಭುವನರಿಯದೆ ನಾವಿದ ಕಾಣಿ ಭೋ !
ನಮ್ಮ ಕೂಡಲ ಸಂಗನ ವಚನವಿಂತೆಂದುದು
ಶ್ವಪಚೋಪಿಯಾದಡೇನು , ಭಕ್ತನೆ ಕುಲಜಂ ಭೋ !

ರಾಮಾಯಣ ಮಹಾಕಾವ್ಯವನ್ನು ರಚಿಸಿ ಮಹಾಋಷಿ ಎನಿಸಿಕೊಂಡ ವ್ಯಾಸ ಬೋವಿತಿಯ ಮಗ. ಮಾರ್ಕಂಡೇಯ ಮಹರ್ಷಿ ಮಾತಂಗಿಯ ಮಗ. ಅಗಸ್ತ್ಯ ಮಹರ್ಷಿ ಕಬ್ಬಲಿಗ, ದುರ್ವಾಸ ಮುನಿ ಮಚ್ಚಿಗ, ಕೌಂಡಿನ್ಯ ಎಂಬ ಋಷಿ ನಾವಿದ. ಆದ್ದರಿಂದ ಯಾರೂ ಜಾತಿಯ ಮೂಲಕ ಶ್ರೇಷ್ಠ ಕನಿಷ್ಠರಾಗಲು ಸಾಧ್ಯವಿಲ್ಲ ಎಂಬುದು ಬಸವಣ್ಣನವರ ಖಚಿತವಾದ ನಿಲುವು. ಯಾರು ಕಾಯಕ ಜೀವಿಯಾಗಿರುತ್ತಾನೋ, ತನ್ನ ಪರಿಶ್ರಮದ ದುಡಿಮೆಯ ಮೂಲಕ ಬಂದ ಫಲದಲ್ಲಿ ಸತ್ಪಾತ್ರರಿಗೆ ದಾಸೋಹ ನಡೆಸುತ್ತಾನೋ ಆ ಭಕ್ತನೆ ಕುಲಜನು ಎಂಬುದು ಶರಣರ ಇಂಗಿತವಾಗಿದೆ.

ಅಂಬಿಗರಚೌಡಯ್ಯನೆಂಬ ಶರಣನಂತೂ ಜಾತಿಯನ್ನು ನೋಡಿ ವ್ಯವಹರಿಸುವವರ ಕಂಡರೆ ಕೆಂಡಾಮಂಡಲವಾಗುತ್ತಾನೆ.

ಜಾತಿ ಭ್ರಮೆ, ನೀತಿ ಭ್ರಮೆ ಎಂಬ ಕರ್ಮಂಗಳನು
ಘಾತಿಸಿ ಕಳೆಯಬಲ್ಲಡಾತ ಯೋಗಿ
ಯೋಗಿ ಅಂದರೆ ನಾಡು ಬಿಟ್ಟು ಕಾಡು ಸೇರುವವನಲ್ಲ. ಗಡ್ಡ ಬಿಟ್ಟು, ಹೆಂಡತಿ ಮಕ್ಕಳ ತೊರೆದು ಹೋಗುವಾತನಲ್ಲ. ಜಾತಿ ಭ್ರಮೆಂiÀiನ್ನು ಕಳೆಯುವವನೆ ಯೋಗಿ ಎಂದಿದ್ದಾರೆ. ಆನು ಹಾರುವನೆಂದರೆ ಕೂಡಲ ಸಂಗಮ ನಗುವನಯ್ಯಾ ಎನ್ನುತ್ತಲೆ ಬಸವಣ್ಣನವರು ತಮ್ಮ ಮೇಲಿರಿಮೆಯ ಭ್ರಮೆಯನ್ನು ಕಳಚಿಕೊಂಡು ಮಾದಾರ ಚೆನ್ನಯ್ಯನ ಮನೆಯ ಮಗ ನಾನು ಎಂದು ಹೇಳುವ ಮೂಲಕ ತಮ್ಮ ಮನಸ್ಸಿಗೆ ಅಂಟಿದ ಕೊಳೆಯನ್ನು ತೊಳಕೊಂಡರು. ಅಷ್ಟಕ್ಕೂ ಅವರಿಗೆ ಸಮಾಧಾನವಾಗಲಿಲ್ಲ. ಆಗ

ಚೆನ್ನಯ್ಯನ ಮನೆಯ ದಾಸಿನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇಬ್ಬರಿಗೂ ಹೊದಲು ಬೆರಣಿಗೆ ಹೋಗಿ
ಸಂಗವ ಮಾಡಿದರು ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗವದೇವ ಸಾಕ್ಷಿಯಾಗಿ

ಎನ್ನುವ ಮೂಲಕ ತಮ್ಮನ್ನು ಕೇವಲ ತಳವರ್ಗದ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳಲಿಲ್ಲ. ಚೆನ್ನಯ್ಯ ಮತ್ತು ಕಕ್ಕಯ್ಯನೆಂದರೆ ಕೀಳು ಎಂದು ತಿಳಿದ ಆ ದಿನಗಳಲ್ಲಿ ಅವರ ಮನೆಯ ಆಳುಗಳು ಬೆರಣಿಯ ಆಯಲು ಹೋದಾಗ ಸಮಾಜದ ಒಪ್ಪಿಗೆಯೂ ಪಡೆಯದೆ ಸಂಗವ ಮಾಡಿದರು. ಅಂದರೆ ಅಕ್ಷರಶಃ ಅವರು ಹಾದಕ್ಕೆ ಒಳಗಾದಾಗ ಹುಟ್ಟಿದ ಕೂಸು ನಾನು ಎನ್ನುವ ಮೂಲಕ ತಮ್ಮೊಳಗಿನ ಜಾತಿಯ ತಿಮಿರವನ್ನು ಕಳೆದುಕೊಳ್ಳುತ್ತಾರೆ.

ಅಮ್ಮುಗೆಯ ದೇವಯ್ಯ ಎಂಬ ಶರಣ ಕೂಡ
ಕಕ್ಕಯ್ಯನ ಪ್ರಸಾದ ಕೊಂಡೆನ್ನ ಕುಲ ಸೂತಕ ಹೋಯಿತ್ತಯ್ಯಾ
ಚೆನ್ನಯ್ಯನ ಪ್ರಸಾದವ ಕೊಂಡೆನ್ನ ಛಲ ಸೂತಕ ಹೋಯಿತ್ತಯ್ಯಾ
ದಾಸಯ್ಯನ ಪ್ರಸಾದವ ಕೊಂಡೆನ್ನ ತನು ಸೂತಕ ಹೋಯಿತ್ತಯ್ಯಾ
ಚಂದಯ್ಯನ ಪ್ರಸಾದವ ಕೊಂಡೆನ್ನ ಮನ ಸೂತಕ ಹೋಯಿತ್ತಯ್ಯಾ

ಅನುಭಾವಿ ಶರಣರ, ಸಂತರ ಸಂಗದಿಂದ ಮಾತ್ರ ನಮ್ಮ ಮನದಲ್ಲಿಯ ಜಾತಿ ಭ್ರಮೆ ಹೋಗಲು ಸಾಧ್ಯವಿದೆ. ಇಲ್ಲದೆ ಹೋದರೆ ಈ ಜಾತಿ ಚಕ್ರವ್ಯೂಹದಲ್ಲಿ ಸಿಲುಕಿದ ಮನುಷ್ಯ ಹೊರಬರುವುದು ತೀರಾ ಅಪರೂಪ.
ಮಂಡೆ ಮಾಸಿದೊಡೆ ಮಹಾಮಜ್ಜನವ ಮಾಡುವುದು
ವಸ್ತ್ರ ಮಾಸಿದಡೆ ಮಡಿವಾಳರಿಕ್ಕುವುದು
ಮನದ ಮೈಲಿಗೆ ತೊಳೆಯಬೇಕಾದಡೆ
ಕೂಡಲಚೆನ್ನಸಂಗಯ್ಯನ ಶರಣರ ಅನುಭಾವ ಮಾಡುವುದು
ಎಂದು ಹೇಳಿದ್ದಾರೆ ಚೆನ್ನಬಸವಣ್ಣನವರು .

ತಳ ಸಮೂಹದಲ್ಲಿ ಹುಟ್ಟಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಆ ಸಮೂಹವನ್ನು ಗುಡಿಯೊಳಗೆ ಬಿಟ್ಟುಕೊಳ್ಳದೆ ಇರುವುದು. ಅವರಿಂದ ಸಣ್ಣ ತಪ್ಪು ಘಟಿಸಿದರೂ ನೆಲ ಮುಗಿಲು ಒಂದಾಗುವಂತೆ ಮಾಡಿ ಮಾನವೀಯತೆ ಮರೆತು ಕ್ರೌರ್ಯದಿಂದ ವರ್ತಿಸುವುದು ನಾಗರಿಕ ಲಕ್ಷಣವಲ್ಲ. ಪಶು ಪಕ್ಷಿಗಳು ಸಹ ಹಿಂಡು ಹಿಂಡಾಗಿ ಸೌಹಾರ್ದತೆಯಿಂದ ವಾಸಿಸುತ್ತಿರುವಾಗ ಮನುಷ್ಯ ಮಾತ್ರ ಜಾತಿಯ ಕಾರಣಕ್ಕಾಗಿ ಒಬ್ಬರು ಮತ್ತೊಬ್ಬರ ಮೇಲೆ ಏರಿ ಹೋಗಿ ಹಲ್ಲೆ ಮಾಡುವುದು ಯಾರೂ ಒಪ್ಪಲು ಸಾಧ್ಯವಿಲ್ಲ.

ಇಷ್ಟಕ್ಕೂ ಯಾವುದೆ ವ್ಯಕ್ತಿ ತಳ ಸಮುದಾಯದಲ್ಲಿ ಹುಟ್ಟಬೇಕೆಂದು ಮೊದಲೆ ಅಪ್ಲಿಕೇಷನ್ ಹಾಕಿಕೊಂಡಿಲ್ಲ. ಚಾಮರಾಜ ನಗರ ಜಿಲ್ಲೆಯ ಗುಂಡ್ಲುಪೇಟೆಯ ವೀರನಪುರದಲ್ಲಿ ಇತ್ತೀಚೆಗೆ ನಡೆದ ದಲಿತ ದೌರ್ಜನ್ಯ ಘಟನೆ ಮನುಷ್ಯ ಕುಲ ತಲೆ ತಗ್ಗಿಸುವಂತೆ ಮಾಡಿದೆ. ಪ್ರಜ್ಞಾವಂತ ಮನುಷ್ಯ ಸಮಾಜ ಇದನ್ನು ಬಲವಾಗಿ ಖಂಡಿಸಬೇಕಿದೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...