Homeಅಂತರಾಷ್ಟ್ರೀಯಅತ್ಯುತ್ತಮ ಶಿಕ್ಷಣ ನೀಡುವ ರಾಷ್ಟ್ರಗಳಲ್ಲಿ ಫಿನ್‍ಲ್ಯಾಂಡ್ ನಂಬರ್ 1 ಆಗಿದ್ದು ಹೇಗೆ ಗೊತ್ತೆ?

ಅತ್ಯುತ್ತಮ ಶಿಕ್ಷಣ ನೀಡುವ ರಾಷ್ಟ್ರಗಳಲ್ಲಿ ಫಿನ್‍ಲ್ಯಾಂಡ್ ನಂಬರ್ 1 ಆಗಿದ್ದು ಹೇಗೆ ಗೊತ್ತೆ?

- Advertisement -
- Advertisement -

| ಪ್ರೊ. ಅನಿಲ್ ಸದ್ಗೋಪಾಲ್ |

ಇದು ಒಂದು ಪುಟ್ಟ ದೇಶದ ಕಥೆ. ಆ ದೇಶದ ಹೆಸರು ಫಿನ್‍ಲ್ಯಾಂಡ್. ನೀವುಗಳು ಈ ದೇಶದ ಹೆಸರನ್ನು ಬೇರೊಂದು ಪರೋಕ್ಷ ಕಾರಣಕ್ಕಾಗಿ ಕೇಳಿರುತ್ತೀರಿ. ಆ ದೇಶದ ಒಂದು ಉತ್ಪನ್ನ ನಮ್ಮೆಲ್ಲರ ಜೇಬು ಅಥವ ಕೈಗಳಲ್ಲಿರುತ್ತದೆ. ‘ನೋಕಿಯಾ’.

ಮೂರು ದಶಕಗಳ ಹಿಂದೆ ಯುರೋಪಿಯನ್ ದೇಶಗಳ ಶೈಕ್ಷಣಿಕ ಗುಣಮಟ್ಟದ ಮೇಲೆ ನಡೆದ ಅಧ್ಯಯನ ವರದಿಯು ಫಿನ್‍ಲ್ಯಾಂಡ್‍ನ ಶಿಕ್ಷಣದ ಸ್ಥಿತಿಗತಿ ಇಡೀ ಪಟ್ಟಿಯಲ್ಲಿ ಕೊಟ್ಟಕೊನೆಯಲ್ಲಿದೆ ಎಂಬುದನ್ನು ತೋರಿಸಿತು. ವರದಿಯು ಈ ವಿಚಾರವನ್ನ ಹೊರಗೆಡವಿದ ಕೂಡಲೇ ಫಿನ್‍ಲ್ಯಾಂಡ್‍ನ ಸರ್ಕಾರ ಯಾವುದೋ ಕೆಲವು ಯೋಜನೆಗಳನ್ನು ಘೋಷಿಸಿ ಅದಕ್ಕೊಂದಿಷ್ಟು ಬಜೆಟ್‍ನ್ನು ನಿಗದಿಪಡಿಸಿ ಸುಮ್ಮನಾಗಲಿಲ್ಲ. ಇದರ ಕಾರಣಗಳ ಬಗ್ಗೆ ತನ್ನದೇ ಆದ ಪರಿಶೋಧನೆಗಳನ್ನು ನಡೆಸಿತು. ಅದರ ನಂತರ ಅಲ್ಲಿನ ಸರ್ಕಾರ ಒಂದು ನಿರ್ಧಾರಕ್ಕೆ ಬಂತು.

ತಮ್ಮ ಶಿಕ್ಷಣ ವ್ಯವಸ್ಥೆಯನ್ನು ಕೇವಲ ಸುಧಾರಿಸುವುದಲ್ಲ ಬದಲಿಗೆ ಅದರಲ್ಲಿ ಒಂದು ಕ್ರಾಂತಿಕಾರಕ ಪರಿವರ್ತನೆಯನ್ನೇ ತರಬೇಕು ಎಂದು ಪ್ರಯತ್ನ ಆರಂಭವಾಯಿತು. ಮೂವತ್ತು ವರ್ಷಗಳ ನಂತರ, ಮೂರು ದಶಕಗಳ ಹಿಂದೆ ಅಧ್ಯಯನ ನಡೆಸಿದ್ದ ಅದೇ ಸಂಸ್ಥೆಯು ನಡೆಸಿದ ಶೈಕ್ಷಣಿಕ ಸ್ತಿತಿಗತಿಗಳ ಅಧ್ಯಯನದ ವರದಿಯು, ಫಿನ್‍ಲ್ಯಾಂಡ್ ಯುರೋಪಿನ ದೊಡ್ಡ ಸಂಖ್ಯೆಯ ದೇಶಗಳ ಪಟ್ಟಿಯಲ್ಲಿ ಶೈಕ್ಷಣಿಕವಾಗಿ ಮೊದಲ ಸ್ಥಾನಕ್ಕೆ ಏರಿರುವುದು ಮಾತ್ರವಲ್ಲ ಇಡೀ ಪ್ರಪಂಚದಲ್ಲೇ ಫಿನ್‍ಲ್ಯಾಂಡ್ ನಂ.1 ಸ್ಥಾನದಲ್ಲಿರುವುದನ್ನು ಸಾಬೀತುಪಡಿಸಿತು. ಶಿಕ್ಷಣದ ಗುಣಮಟ್ಟ-ಶಿಕ್ಷಕರ ಗುಣಮಟ್ಟ, ಪಠ್ಯಕ್ರಮ ಮತ್ತು ಬೋಧನಾಕ್ರಮದ ಗುಣಮಟ್ಟ, ಶಿಕ್ಷಣ ಪಡೆಯುವುದಕ್ಕೆ ಸಮಾನ ಅವಕಾಶಗಳು ಮತ್ತು ಸಾರ್ವತ್ರಿಕವಾಗಿ ಎಲ್ಲರಿಗೂ ಒಂದೇ ರೀತಿಯ ಉತ್ತಮ ಉಚಿತ ಶಿಕ್ಷಣ ವ್ಯವಸ್ಥೆ- ಇವುಗಳನ್ನು ಫಿನ್‍ಲ್ಯಾಂಡ್ ಸಾಧಿಸಿದೆ ಎಂಬುದು ಜಗತ್ತಿಗೆ ತಿಳಿಯಿತು. ಈಗಾಗಲು ಕಾರಣಗಳೇನು ಎಂಬುದನ್ನು ನೋಡೋಣ.

ಮೊದಲನೇಯದಾಗಿ ಫಿನ್‍ಲ್ಯಾಂಡ್‍ನ ಸರ್ಕಾರ ಅಲ್ಲಿನ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ರಾತ್ರೋರಾತ್ರಿ ವಶಕ್ಕೆ ತೆಗೆದುಕೊಂಡಿತು. ಏಕೆಂದರೆ, ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ ಹಾಗೂ ಎಲ್ಲರಿಗೂ ಸಾರ್ವತ್ರಿಕವಾಗಿ ಏಕರೂಪವಾಗಿ ದೊರಕಬೇಕಿರುವ ಸಮಾನ ಅವಕಾಶಗಳು ಮೊಟಕಾಗುತ್ತವೆ ಎಂಬುದು ಇದಕ್ಕೆ ಕಾರಣ. ಆದ್ದರಿಂದ ಪೂರ್ವಪ್ರಾಥಮಿಕದಿಂದ ಹಿಡಿದು ಸ್ನಾತಕೋತ್ತರದ ವರೆಗಿನ ಸಂಪೂರ್ಣ ಶಿಕ್ಷಣವನ್ನು ಸರ್ಕಾರ ತನ್ನ ನೇರ ಉಸ್ತುವಾರಿಗೆ ತೆಗೆದುಕೊಂಡಿತು.

ಎರಡನೇಯದಾಗಿ, ಫಿನ್‍ಲ್ಯಾಂಡ್ ಸರ್ಕಾರ ಪ್ರತೀ ಕುಟುಂಬಕ್ಕೂ ಒಂದು ಆದೇಶ ಹೊರಡಿಸಿತು; ಇನ್ನು ಮೇಲೆ ದೇಶದ ಎಲ್ಲಾ ಕುಟುಂಬಗಳು ತಮ್ಮ ಮಕ್ಕಳನ್ನು ಹತ್ತಿರದ ಸರ್ಕಾರಿ ವೆಚ್ಚದಲ್ಲಿ ನಡೆಯುವ ಶಾಲೆಗಳಿಗೇ ಕಳಿಸಬೇಕು ಎಂದು. ಮನೆಯ ಸಮೀಪದ ಸರ್ಕಾರಿ ವೆಚ್ಚದಲ್ಲಿ ನಡೆಯುವ ಸಾರ್ವಜನಿಕ ಶಾಲೆಗೇ ಎಲ್ಲಾ ಮಕ್ಕಳೂ ಹೋಗಲಾರಂಭಿಸಿದ ಕೂಡಲೇ ಅಂತಹ ಎಲ್ಲಾ ಶಾಲೆಗಳೂ ನಿಜವಾದ ಅರ್ಥದಲ್ಲಿ ನೆರೆಹೊರೆ ಶಾಲೆಗಳಾದವು. ಆ ಶಾಲೆಗಳನ್ನು ಬಿಟ್ಟರೆ ಬೇರೆ ಶಾಲೆಗಳಿಗೆ ಯಾವ ಪೋಷಕರೂ ಮಕ್ಕಳನ್ನು ಕಳಿಸುವ ಆಯ್ಕೆಯನ್ನೇ ಅವರಿಗೆ ಕೊಡಲಾಗಿರಲಿಲ್ಲ. ನಮ್ಮಂತಹ ದೇಶದಲ್ಲಿ ಬಂಡವಾಳಶಾಹಿ ಮೌಲ್ಯವಾದ ‘ಆಯ್ಕೆಯ ಸ್ವಾತಂತ್ರ್ಯ’ದ ಬಗ್ಗೆ ತುಂಬಾ ಮಾತನಾಡಲಾಗುತ್ತದೆ (ನ್ಯಾಯಾಲಯಗಳೂ ಸೇರಿ). ಪೋಷಕರಿಗೆ ಆಯ್ಕೆ ಇರಬೇಕು, ಅವರನ್ನು ಹೇಗೆ ಒತ್ತಾಯಿಸಲು ಸಾಧ್ಯ ಎಂದು ಕೇಳಲಾಗುತ್ತದೆ. ಈ ಆಯ್ಕೆಯ ಪರಿಕಲ್ಪನೆಯೇ ತುಂಬಾ ಪೊಳ್ಳಾದುದು. ನಮ್ಮ ದೇಶದಲ್ಲಿ ಪ್ರಜಾತಾಂತ್ರಿಕ ಎಂದು ಕರೆಯಲಾಗುವ ಆಯ್ಕೆಯ ವಿಚಾರವನ್ನು ಫಿನ್‍ಲ್ಯಾಂಡ್ ಲಾಭಗಳಿಕೆಯ ಹುನ್ನಾರ ಎಂದು ನೋಡಿತು.

ಮೂರನೇಯ ಮತ್ತು ಅತ್ಯಂತ ಮುಖ್ಯವಾದ ವಿಚಾರವೆಂದರೆ, ಈ ಎಲ್ಲಾ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು-ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು- ಹೊಂದಿರುವ ಬೋಧಕ ಸಿಬ್ಬಂದಿಯು ದೇಶದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಗುಂಪಿಗೆ ಸೇರಿಸಲ್ಪಟ್ಟರು. ಅಲ್ಲಿನ ಮಂತ್ರಿಗಳಿಗಿಂತಲೂ ಉನ್ನತ ಅಧಿಕಾರಿಗಳಿಗಿಂತಲೂ ಶಿಕ್ಷಕರ ವೇತನ ಹೆಚ್ಚಾಯಿತು. ಫಿನ್‍ಲ್ಯಾಂಡ್ ಅತ್ಯುತ್ತಮ ಶೈಕ್ಷಣಿಕ ಸಾಧನೆ ಮಾಡಿದ ನಂತರ ಅಲ್ಲಿನ ಶಿಕ್ಷಣ ಸಚಿವರನ್ನು ಈ ಅದ್ಭುತವನ್ನು ಅವರು ಸಾಧಿಸಿದ್ದು ಹೇಗೆ ಎಂಬುದನು ಅಮೇರಿಕನ್ನರಿಗೆ ತಿಳಿಸುವುದಕ್ಕಾಗಿ ಯುಎಸ್‍ಎ ಗೆ ಕರೆಸಲಾಗಿತ್ತು. ಆಗ, ಮಾಧ್ಯಮದ ಜನರು ‘ನೀವು ಶಿಕ್ಷಕರಿಗೆ ಯಾಕೆ ಅತಿ ಹೆಚ್ಚು ಸಂಬಳ ಕೊಡಲು ನಿರ್ಧರಿಸಿದಿರಿ’ ಎಂದು ಕೇಳಿದರು. ಅವರ ಉತ್ತರ ನೆನಪಿನಲ್ಲಿರಿಸಿಕೊಳ್ಳಬೇಕಾದಂಥದ್ದು. ಶಿಕ್ಷಣ ಮಂತ್ರಿ ಉತ್ತರಿಸಿದರು. “ಏಕೆಂಧರೆ ನಾವು ಮಕ್ಕಳಿಗೆ ಸರಿಯಾಗಿ ತರಬೇತುಗೊಳಿಸುವುದು ಎಲ್ಲಾ ಕೆಲಸಗಳಲ್ಲಿ ಅತಿ ಕಷ್ಟದ ಕೆಲಸ ಎಂದು ಅರಿತೆವು. ಹಾಗೆಯೇ ಆ ಕೆಲಸಕ್ಕೆ ಬೇಕಾದ ಅತ್ಯುನ್ನತ ಅರ್ಹತೆ ಹೊಂದಿದವರು ಅಲ್ಲಿಗೆ ಬರಬೇಕಾಗಿದ್ದು ನಮಗೆ ಅತ್ಯಗತ್ಯವಾಗಿತ್ತು. ಆದ್ದರಿಂದ ಈ ಕ್ರಮ ಕೈಗೊಂಡೆವು” ಎಂದು ಉತ್ತರಿಸಿದರು.

ಉಚಿತ ಶಿಕ್ಷಣ ಸಾಧ್ಯವೇ? ಜರ್ಮನಿಯಲ್ಲಿ ಹೇಗಿದೆ?
ಜರ್ಮನಿ! ಜರ್ಮನಿ ಸ್ವಲ್ಪ ಸಮಯದ ಹಿಂದೆ ಇಂತಹ ಪವಾಡ ಎಂದು ಕರೆಯಬಹುದಾದ ವಿಚಾರವನ್ನು ಮಾಡಿ ತೋರಿಸಿತು. ಪೂರ್ವ ಪ್ರಾಥಮಿಕದಿಂದ ಹಿಡಿದು ಸ್ನಾತಕೋತ್ತರದವರೆಗೆ ಸಂಪೂರ್ಣ ಉಚಿತ ಶಿಕ್ಷಣ. ಯಾವ ಪೋಷಕರೂ ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಏನನ್ನೂ ವೆಚ್ಚ ಮಾಡುವ ಅಗತ್ಯವಿಲ್ಲ. ಇಂಜಿನಿಯರ್‍ಗಳಾಗಲೂ ಸಹಾ! ಮ್ಯಾನೇಜ್‍ಮೆಂಟ್ ಕಲಿಯಲೂ ಸಹಾ!
ಒಮ್ಮೆ ನಾನು ಒಬ್ಬ ಜರ್ಮನ್ ಶಿಕ್ಷಣತಜ್ಞನನ್ನು ಭೇಟಿ ಮಾಡಿದ್ದೆ. ಜರ್ಮನರು ಇಂಗ್ಲೀಷ್ ಕಲಿಯುವುದರ ಬಗ್ಗೆ ಅಷ್ಟೇನೂ ಉತ್ಸುಕರಾಗಿರುವುದಿಲ್ಲ. ಹೀಗಾಗಿ ನಾನು ಆತನನ್ನು “ನೀವು ಮಕ್ಕಳಿಗೆ ಶಿಕ್ಷಣ ನೀಡಲು ಎಷ್ಟು ಹಣ ಪಡೆಯುತ್ತೀರಿ?” ಎಂದು ಕೇಳಿದೆ. ಆತನಿಗೆ ಅರ್ಥ ಆಗಲಿಲ. “ಮಕ್ಕಳಿಂದ ಹಣ, ಯಾಕೆ?” ಎಂದ. “ಯಾಕೆಂದರೆ ಅವರು ನಿಮ್ಮ ಶಿಕ್ಷಣ ಸಂಸ್ಥೆಯನ್ನು ಕಲಿಯಲು ಉಪಯೋಗಿಸಿರುತ್ತಾರಲ್ಲ ಅದಕ್ಕೆ” ಎಂದೆ. ಆತ “ನಮ್ಮ ದೇಶದ ಪ್ರತಿಯೊಂದು ಮಗುವಿಗೂ ಸರ್ಕಾರದಿಂದ ಶಿಕ್ಷಣ ಪಡೆಯುವ ಹಕ್ಕು ಇದೆ, ಅದಕ್ಕಾಗಿ ಅವರು ಹಣ ಏಕೆ ಕಟ್ಟಬೇಕು? ಅದು ನಮ್ಮ ಜವಾಬ್ದಾರಿ ಅಲ್ಲವೇ?” ಎಂದ.

ಇದು ಇಂದಿನ ಭಾರತದಲ್ಲಿ ಬಹುಶಃ ಕಲ್ಪನೆಗೂ ಮೀರಿದ ವಿಚಾರ. ನಮ್ಮನ್ನು ನಾವು ಪ್ರಜಾಪ್ರಭುತ್ವ, ಅಥವಾ ಬೆಳವಣಿಗೆ ಹೊಂದುತ್ತಿರುವ ಆರ್ಥಿಕತೆ ಅಥವಾ ನಮ್ಮ ದೇಶ ಯಾವ ವ್ಯವಸ್ಥೆಯಡಿ ನಡೆಯುತ್ತಿದೆ ಮೆಂಬುದೇ ಸ್ವಲ್ಪ ಗೊಂದಲದ ಸಂಗತಿ-ಒಟ್ಟಿನಲ್ಲಿ ಶಿಕ್ಷಣದ ವಿಚಾರದಲ್ಲಿ ಬಹುದೂರ ಸಾಗಬೇಕಿರುವ ನಮ್ಮ ದೇಶದಲ್ಲಿ ಹಣವಸೂಲಿಯೇ ಪ್ರತಿಯೊಂದು ಕೋರ್ಸ್‍ನ ಮೂಲಭೂತ ವಿಷಯ ಆಗಿಬಿಟ್ಟಿದೆ. ಆದರೆ, ಬಂಡವಾಳಶಾಹಿ ಸಿದ್ಧಾಂತದ ಅಡಿಯಲ್ಲಿ ನಡೆಯುವ ಜರ್ಮನಿಯ ಶಿಕ್ಷಣ ಸಂಸ್ಥೆಗಳಲ್ಲಿ ಹಣ ವಸೂಲಿಯೆಂಬ ಕಲ್ಪನೆಯೇ ಅಪರಿಚಿತ! ಆದ್ದರಿಂದ ಉಚಿತ ಶಿಕ್ಷಣ ಎಂಬುದು ನಾವು ಸಾಧಿಸಬೇಕಾದ ಬಹುಮುಖ್ಯವಾದ ಗುರಿ.

ಅಮೇರಿಕಾದಲ್ಲಿ ಯಾವ ಪದ್ದತಿ ಇದೆ?

ನಾನು ಮೂರನೇ ಉದಾಹರಣೆ ತೆಗೆದುಕೊಳ್ಳುತ್ತೇನೆ. ಈಗ ನಾವು ಚರ್ಚಿಸುತ್ತಿರುವುದು ಬಂಡವಾಳಶಾಹಿ ರಾಷ್ಟ್ರಗಳಲ್ಲೇ ಅತಿ ಬಲಾಢ್ಯ ರಾಷ್ಟ್ರವಾದ ಅಮೇರಿಕಾ ಸಂಯುಕ್ತ ಸಂಸ್ಥಾನದ ವಿಚಾರ. ಕಳೆದ 2-3 ದಶಕಗಳಲ್ಲಿ ಅಮೇರಿಕದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ದಿನೇ ದಿನೇ ನವ ಉದಾರವಾದಿ ದಾಳಿಗೆ ಗುರಿಯಾಗುತ್ತಿದೆ. ಆ ದೇಶದ ಒಳ್ಳೆಯ ಜನರು – ಲಾಭಕೋರ ಆರ್ಥಿಕ ನೀತಿಗಳು ಶಿಕ್ಷಣ ವ್ಯವಸ್ಥೆಯನ್ನು ನುಂಗುತ್ತಿರುವುದರ ವಿರುದ್ಧ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಆದರೆ ಆ ಸಂಯುಕ್ತ ಸಂಸ್ಥಾನದ ಕೆಲವು ರಾಜ್ಯಗಳಲ್ಲಿ ದಾಳಿಯ ಪ್ರಭಾವ ಬಲವಾಗಿಯೇ ಇದೆ. ನಾನು ಈಗ ಹೇಳಲು ಹೊರಟಿರುವುದು ಆ ಬಲವಾದ ದಾಳಿಯನ್ನೂ ಕೂಡಾ ಹಿಮ್ಮೆಟ್ಟಿಸುವಲ್ಲಿ ಶಕ್ತವಾಗಿರುವ ಅಮೇರಿಕಾದ ಕ್ಯಾಲಿಫೊರ್ನಿಯಾ ರಾಜ್ಯದ ಬಗ್ಗೆ.

ನಾನು ಅವರ ಸಮಾನ ಶಾಲಾ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಸ್ವಲ್ಪ ಸಮಯ ಕಳೆದಿದ್ದೇನೆ. ಅಲ್ಲಿನ ನನ್ನ ಸ್ನೇಹಿತರಿಗೆ ಸಾರ್ವಜನಿಕ ವೆಚ್ಚದ ಶಾಲೆಗಳ ಜೊತೆಗೆ ಒಂದು ಖಾಸಗಿ ಶಾಲೆಯನ್ನೂ ತೋರಿಸಬೇಕೆಂದು ಮನವಿ ಮಾಡಿದ್ದೆ. ನಾನು ಮಾತನಾಡುತ್ತಿರುವುದು ಹೆಚ್ಚು ಸಂಪತ್ಭರಿತವಾದ, ಹಾಲಿವುಡ್ ಪ್ರದೇಶವನ್ನು ಹೊಂದಿರುವ ಪಶ್ಚಿಮ ಕ್ಯಾಲಿಫೋರ್ನಿಯಾದ ಬಗ್ಗೆ. ಅಲ್ಲಿನ ನನ್ನ ಗೆಳೆಯರು ಬಹಳ ಪ್ರಾಮಾಣಿಕವಾಗಿ ಶ್ರಮ ಹಾಕಿ ಬಹಳ ಕಷ್ಟದಿಂದ ಒಂದು ಖಾಸಗಿ ಶಾಲೆಯನ್ನು ನನಗಾಗಿ ಹುಡುಕಿ ತೋರಿಸಿದರು. ಆದರೆ, ಅದನ್ನು ಖಾಸಗಿ ಶಾಲೆಯೆಂದು ನಂಬಲು ಸಾಧ್ಯವಾಗದಂತೆ ಬಹಳ ದಯನೀಯ ಸ್ಥಿತಿಯಲ್ಲಿತ್ತು. ಸಾರ್ವಜನಿಕ ಶಾಲೆಗಳು ಅತ್ಯುತ್ತಮವಾಗಿದ್ದವು.

ಅಲ್ಲಿ ನಮ್ಮಲ್ಲಿನ ರೆವಿನ್ಯೂ ಕ್ಷೇತ್ರಗಳ ಹಾಗೆ ಶೈಕ್ಷಣಿಕ ಕ್ಷೇತ್ರಗಳಿರುತ್ತವೆ. ಪ್ರತೀ ಶಾಲೆಗೂ ಜನರಿಂದ ಆಯ್ಕೆಯಾದ ಉಸ್ತುವಾರಿ ಸಮಿತಿಗಳಿರುತ್ತವೆ. ಅಂತಹ ಒಂದು ಕ್ಷೇತ್ರದ ಹಣಕಾಸು ಅಧಿಕಾರಿಯನ್ನು ನಾನು ಭೇಟಿಯಾದೆ. ನಾನು ಕೆಲವು ಪ್ರಶ್ನೆಗಳನ್ನು ಕೇಳಿದೆ. “ನಿಮ್ಮ ರಾಜ್ಯದ ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಸಮುದಾಯಗಳ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಏನು ಮಾಡುತ್ತೀರಿ?”. “ಅಂತಹ ಎಲ್ಲಾ ಮಕ್ಕಳನ್ನೂ ಹತ್ತಿರದ ಸಮಾನ ಶಾಲೆಗೆ ಕಳಿಸುವುದು ಅಂತಹ ಎಲ್ಲಾ ಬಡ ಕುಟುಂಬಗಳ ಜವಾಬ್ದಾರಿ ಮತ್ತು ಅದು ಅವರಿಗೆ ಕಡ್ಡಾಯ. ಅಷ್ಟು ಮಾತ್ರವಲ್ಲ ಅದು ಇಡೀ ಆ ಶೈಕ್ಷಣಿಕ ಕ್ಷೇತ್ರದ ಆಯ್ಕೆಯಾದ ಸಮಿತಿಯ ಜವಾಬ್ದಾರಿಯೂ ಸಹಾ” ಎಂದು ಅವರು ಹೇಳಿದರು.

ಆಗ ನನ್ನ ಪ್ರಶ್ನೆ “ಕಪ್ಪುಜನರ ಮಕ್ಕಳಿಗೆ ಮತ್ತು ಅಂತಹ ಲ್ಯಾಟಿನ್ ಅಮೇರಿಕಾದಿಂದ ವಲಸೆ ಬಂದ ಹಿಂದುಳಿದ ಮಕ್ಕಳಿಗೆ ನೀವು ಶಿಕ್ಷಣ ಖಾತ್ರಿಪಡಿಸುವುದು ಹೇಗೆ?” ಅದಕ್ಕೆ ಅವರ ಉತ್ತರ ಬಹಳ ಆಸಕ್ತಿಕರ. “ನೋಡಿ ಕ್ಯಾಲಿಫೋರ್ನಿಯಾದಲ್ಲಿ ಶಿಕ್ಷಣಕ್ಕೆ ವೆಚ್ಚವಾಗುವ ಹಣದ ಬಹುಭಾಗ ಒಕ್ಕೂಟ ವ್ಯವಸ್ಥೆಯ ಫೆಡರಲ್ ಸರ್ಕಾರದಿಂದ ಮತ್ತು ಉಳಿದದ್ದು ರಾಜ್ಯ ಸರ್ಕಾರದಿಂದ ಬರುತ್ತದೆ. ಇಡೀ ವರ್ಷದ ಎಲ್ಲಾ ಶೈಕ್ಷಣಿಕ ಖರ್ಚನ್ನು ಪೂರೈಸಲು ಒಂದು ಸೂತ್ರ ಮಾಡಿಕೊಂಡಿದ್ದೇವೆ. ಇಡೀ ವರ್ಷದ ಎಲ್ಲಾ ಖರ್ಚನ್ನು ಕೂಡಿಸಿ ಪ್ರತೀ ಮಗುವಿಗಾಗುವ ತಲಾ ಖರ್ಚನ್ನು ಲೆಕ್ಕ ಹಾಕಿ ಪ್ರತೀ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅಷ್ಟನ್ನು ಪ್ರತೀ ಶಾಲೆಗೆ ನೀಡುತ್ತೇವೆ. ಯಾವ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯ ಕಪ್ಪು ಮಕ್ಕಳು ಅಥವಾ ವಲಸೆ ಕಾರ್ಮಿಕರ ಮಕ್ಕಳು ಇರುತ್ತಾರೋ ಆ ಶಾಲೆಗೆ ಹೆಚ್ಚಿನ ಪ್ರಮಾಣದ ಅನುದಾನ ದೊರೆಯುತ್ತದೆ. ಅದರಿಂದ ಆ ಶಾಲೆಗಳು ಹೆಚ್ಚಿನ ಸಂಖ್ಯೆಯ ಶಿಕ್ಷಕರನ್ನು, ಕ್ರೀಡೆ ಸಂಗೀತ ನೃತ್ಯ ಮೊದಲಾದ ವಿಶೇಷ ಶಿಕ್ಷಕರನ್ನು, ಅಗತ್ಯವಿರುವ ಎಲ್ಲಾ ಸವಲತ್ತುಗಳನ್ನೂ ದೊರಕಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಎಲ್ಲಾ ಶಾಲೆಗಳು ತಮ್ಮ ವ್ಯಾಪ್ತಿಯಲ್ಲಿರುವ ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳನ್ನು ಹೊರಗಿಡುವ ಬದಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಶಾಲೆಗಳಿಗೆ ತಂದುಕೊಳ್ಳಲು ಪ್ರಯತ್ನಿಸುತ್ತಾರೆ. ಇದರಿಂದ ಶಾಲೆಯಲ್ಲಿ ಎಲ್ಲಾ ಜನವಿಭಾಗಗಳ ಮಕ್ಕಳೂ ಇರುವಂತಹ ಪ್ರಾತಿನಿಧ್ಯದ ವ್ಯವಸ್ಥೆ ಸಾಧ್ಯವಾಗಿದೆ” ಎಂದು ಆ ಅಧಿಕಾರಿ ವಿವರಿಸಿದರು.

“ಇದು ನಮ್ಮ ದೇಶದಲ್ಲಿ ತದ್ವಿರುದ್ಧವಾಗಿದೆ” ಎಂದೆ. ಅದಕ್ಕೆ ಅವರು, “ಹೌದು ನನಗೆ ಗೊತ್ತಿದೆ; ನಾನು ಬೌದ್ಧ ಧರ್ಮದೆಡೆಗೆ ಆಕರ್ಷಿತನಾಗಿ ಬೋಧ್‍ಗಯಾಕ್ಕೆ ಬಂದಿದ್ದೆ. ಆಗ ಅಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಗಮನಿಸಿದೆ. ಇಡೀ ವಿಶ್ವದ ನಮ್ಮಂತಹ ಎಷ್ಟೋ ಜನರಿಗೆ ಸಮಾನತೆ, ಸಹಬಾಳ್ವೆಯ ತತ್ವಗಳನ್ನು ಬಹಳ ಹಿಂದೆಯೇ ಕೊಡಮಾಡಿದ ಧರ್ಮ ಹುಟ್ಟಿದ ಕಡೆ ಶಿಕ್ಷಣದಲ್ಲಿ ಇಂತಹ ಅಸಮಾನತೆ ಇರುವುದು ವಿಪರ್ಯಾಸ” ಎಂದು ಆತ ವಿಷಾದದಿಂದ ನುಡಿದರು.

ನಾನು ಈಗ ನಿಮ್ಮ ಮುಂದೆ ಮೂರು ದೇಶಗಳ ಉದಾಹರಣೆಗಳನ್ನು ಇರಿಸಿದ್ದೇನೆ. ಬಂಡವಾಳಶಾಹಿ ದೇಶಗಳು ಒಂದು ಮಟ್ಟಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಪಾಲಿಸುವಂತಹ ಒತ್ತಡವನ್ನು ಅಲ್ಲಿನ ಪ್ರಜ್ಞಾವಂತ ಜನತೆ ಉಂಟುಮಾಡಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಈ ತತ್ವಗಳು ನಿರಂತರವಾಗಿ ಉಲ್ಲಂಘನೆಯಾಗಿವೆ. ಆದ್ದರಿಂದಲೇ ಇಂದು ಶೋಷಿತ ಸಮುದಾಯಗಳು ಗುಣಮಟ್ಟದ ಶಿಕ್ಷಣದಿಂದ ಹೊರಗುಳಿಯುವುದು ಸಾಮಾನ್ಯ ನಿಯಮ ಎಂಬಂತಾಗಿ ಬಿಟ್ಟಿದೆ. ಅವರಿಗಾಗಿ ಇಲ್ಲಿನ ಸರ್ಕಾರಗಳು ಏನೂ ಮಾಡುವುದಿಲ್ಲ; ಏನಾದರೂ ಮಾಡಿದರೆ ಅದು ಕೇವಲ ಬಾಯುಪಚಾರದ ತೋರಿಕೆಗಾಗಿ ಅಷ್ಟೇ! ಸಮಾಜದ ಶೋಷಿತ ಸಮುದಾಯಗಳ ಪ್ರತ್ಯೇಕತೆ ಇಂದು ಸ್ಥಾಪಿತ ಸತ್ಯ. ಇದರ ವಿರುದ್ಧ ನಾನು ಹೋರಾಟನಿರತನಾಗಿದ್ದೇನೆ. ನೀವು ನಮ್ಮೊಂದಿಗೆ ಕೈಜೋಡಿಸುವಿರಾ?

ಇದನ್ನು ಓದಿ : ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ಸಿಗಲು ಕಾರಣರಾದ ನಿಜವಾದ ಶಿಕ್ಷಣದ ಸಂತ ಅನಿಲ್ ಸದ್ಗೋಪಾಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...