Homeಚಳವಳಿನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ...

ನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ…

ವರ್ನನ್ ಅವರ ಬರಹಗಳಲ್ಲಿ ಅವರ ಕಾಣ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ. ವರ್ಗ, ಜಾತಿ, ಜನಾಂಗದ ಭೇದಗಳಿಲ್ಲದ, ಲೈಂಗಿಕ ಸಮಾನತೆಯ ತತ್ವಗಳನ್ನೊಳಗೊಂಡ ಹಾಗೂ ನ್ಯಾಯಯುತವಾದ ಸಮಾಜದ ಅವರ ನೋಟ ಅವರ ಬರಹಗಳನ್ನು ಓದಿದರೆ ಸ್ಪಷ್ಟವಾಗುತ್ತದೆ.

- Advertisement -
- Advertisement -

ಯಾವಾಗಲೂ ಅರ್ಧ ತೋಳಿನ ಕಾಟನ್ ಅಂಗಿ, ದೊಗಳೆ ಪ್ಯಾಂಟು, ಕನ್ನಡಕ, ಬಗಲಿಗೆ ಒಂದು ಚೀಲ ಹಾಗೂ ಹೃದಯಪೂರ್ವಕ ನಗುವಿನೊಂದಿಗೆ ಕಾಣಿಸಿಕೊಳ್ಳುವ ವರ್ನನ್ ಗೊನ್ಸಾಲ್ವೆಸ್ ಒಬ್ಬ ಕ್ರಿಯಾಶೀಲ ಬುದ್ಧಿವಂತನಾಗಿ ಕಂಡುಬರುತ್ತಾರೆ. ಆರು ವರ್ಷದ ಮಗುವಿನಿಂದ ಹಿಡಿದು 60 ವರ್ಷದವರೊಂದಿಗೂ ಅವರು ಸಲೀಸಾಗಿ ಬೆರೆಯುತ್ತಾರೆ. ಅವರ ಬಾಹ್ಯನೋಟ ಅವರ ಹೃದಯದಲ್ಲಿ ಸದಾಕಾಲ ಹುದುಗಿರುವ ಸಂತೋಷವನ್ನು ಪ್ರತಿಫಲಿಸುತ್ತದೆ. ಅವರು ಕಾಲೇಜಿನಲ್ಲಿದ್ದಾಗ ಒಂದು ಬ್ಯಾಂಡ್ ಶುರು ಮಾಡಿದ್ದರು. ಆದರೆ ಜನಚಳವಳಿಯ ಭಾಗವಾದ ನಂತರ ಅದನ್ನು ಬಿಟ್ಟರು. ಈಗಲೂ ಅವರು ಹಾಡಿದಾಗ 70ರ ದಶಕದ ರಾಕ್ ಸಂಗೀತದ ರುಚಿಕಟ್ಟು ಅದಕ್ಕಿದೆ.

ವರ್ನನ್ ಅವರ ಬರಹಗಳಲ್ಲಿ ಅವರ ಕಾಣ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ. ವರ್ಗ, ಜಾತಿ, ಜನಾಂಗದ ಭೇದಗಳಿಲ್ಲದ, ಲೈಂಗಿಕ ಸಮಾನತೆಯ ತತ್ವಗಳನ್ನೊಳಗೊಂಡ ಹಾಗೂ ನ್ಯಾಯಯುತವಾದ ಸಮಾಜದ ಅವರ ನೋಟ ಅವರ ಬರಹಗಳನ್ನು ಓದಿದರೆ ಸ್ಪಷ್ಟವಾಗುತ್ತದೆ. ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅವರು ಕ್ಲಿಷ್ಟ ಸಾಮಾಜಿಕ, ರಾಜಕೀಯ, ಆರ್ಥಿಕ ವಿಷಯಗಳ ಬಗ್ಗೆ ಸೂಕ್ಷ್ಮ ಮತ್ತು ಸಮತೋಲನದ ವಾದಗಳನ್ನು ಮುಂದಿಸುತ್ತಾರೆ. ವರ್ನನ್ ಪ್ರಗತಿಪರ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳಲು ಸದಾ ಉತ್ಸುಕರಾಗಿರುತ್ತಾರೆ.

ಮುಂಬಯಿಯ ಭಾಯಕಲ್ಲಾದ ಒಂದು ಚಾಳನಲ್ಲಿ ಬೆಳೆದ ವರ್ನನ್ ಅವರ ತಂದೆತಾಯಿ ಮಂಗಳೂರು ಮೂಲದ ಕ್ಯಾಥೊಲಿಕ್ಕರು. ಓದಿನಲ್ಲಿ ಯಾವಾಗಲೂ ಮುಂದಿದ್ದ ವರ್ನನ್, ಮುಂಬಯಿ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಸ್ವರ್ಣ ಪದಕ ಪಡೆದವರು. ಶಿಕ್ಷಣ ಮುಗಿಸಿ, ಸೀಮೆನ್ಸ್ ಕಂಪನಿಯಲ್ಲಿ ಕೆಲ ದಿನ ಕಾರ್ಪೋರೇಟ್ ನೌಕರಿ ಮಾಡಿದರು. ನಂತರ ಮುಂಬಯಿಯ ಟ್ರೇಟ್ ಯುನಿಯನ್‌ಗಳು, ಸ್ಲಮ್‌ನಲ್ಲಿ ಇರುವುವರ ಹಾಗೂ ದುಡಿಯುವ ವರ್ಗದವರೊಂದಿಗೆ ಕೆಲಸ ಮಾಡಲು ತಮ್ಮ ನೌಕರಿಯನ್ನು ಬಿಟ್ಟರು. ಅದೇ ಸಮಯದಲ್ಲಿ ಮುಂಬಯಿಯ ಕೆಲವು ಪ್ರಮುಖ ಕಾಲೇಜುಗಳಾದ ರೂಪರೇಲ್ ಕಾಲೇಜು, ಎಚ್‌ಆರ್ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜು ಮತ್ತು ಅಕ್ಬರ್ ಪೀರ್‌ಭೋಯ್ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು.

1983ರ ಹೊತ್ತಿಗೆ ಅವರು ನಾಗಪುರ ಸಮೀಪದ ಚಂದ್ರಪುರದಲ್ಲಿ ಬಂದು ನೆಲಸಿದರು. ಅಲ್ಲಿ ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಒಳಗೊಂಡು ಇತರ ಅಸಂಘಟಿತ ವಲಯದ ಕಾರ್ಮಿಕರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. 1984ರಲ್ಲಿ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಸೂಸಾನ್ ಅಬ್ರಾಹಮ್ ಜೊತೆಗೆ ಲಗ್ನವಾದರು. ಅದು ಎರಡು ವಿಶಿಷ್ಟ ಹಾಗೂ ತೀವ್ರ ಸ್ವತಂತ್ರ ಮನಸ್ಸುಗಳ ಮಿಲನವಾಗಿತ್ತು. ಚಂದ್ರಪುರದಲ್ಲಿ ಒಂದು ದಶಕ ಕೆಲಸ ಮಾಡಿ, 1994ರಲ್ಲಿ ಮಗ ಸಾಗರ್ ಹುಟ್ಟಿದ ನಂತರ ಮುಂಬಯಿಗೆ ಮರಳಿದರು.

2007ರ ಆಗಸ್ಟ್ 19ರಂದು ಮಹಾರಾಷ್ಟ್ರ ಎಟಿಎಸ್ ವರ್ನನ್ ಅವರನ್ನು ಮುಂಬಯಿಯ ಅಂಧೇರಿಯ ಮನೆಯಿಂದ ಬಂಧಿಸಿದರು. ಆದರೆ ಅವರ ಬಂಧನವನ್ನು ಇನ್ನೊಬ್ಬ ಸಹ ಆರೋಪಿ ಎಸ್ ಶ್ರೀಧರ್ ಅವರ ಗೋವಂಡಿಯ ಮನೆಯಲ್ಲಿ ಮಾಡಲಾಯಿತು ಎಂದು ಸುಳ್ಳಾಗಿ ತೋರಿಸಲಾಯಿತು. ಅವರ ಮೇಲೆ ಸ್ಫೋಟಕ ವಸ್ತುಗಳನ್ನು ಇಟ್ಟುಕೊಂಡ ಟಾಪ್ ಲೆವೆಲ್ ನಕ್ಸಲೈಟ್ ಎಂಬ ಆಪಾದನೆಯನ್ನು ಹೊರೆಸಲಾಯಿತು. ಅದಕ್ಕೆ ಕೆಲ ತಿಂಗಳು ಮುಂಚೆ, ವರ್ನನ್ ಅವರು ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಆದಿವಾಸಿ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದರು. ಅವರ ಮೇಲೆ 20 ಪ್ರಕರಣಗಳನ್ನು ದಾಖಲಿಸಲಾಯಿತು. ವಿಚಾರಣಾಧೀನ ಕೈದಿಯಾಗಿ ಸುಮಾರು 6 ವರ್ಷ ಜೈಲಿನಲಿದ್ದರು. 20 ರಲ್ಲಿ 18 ಪ್ರಕರಣಗಳಲ್ಲಿ ನಿರ್ದೋಷಿ ಎಂದು ತೀರ್ಪು ಬಂತು. ಒಂದು ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದು, ಈಗ ನಾಗಪುರ ಹೈಕೋರ್ಟ್‌ನಲ್ಲಿ ಅದರ ವಿರುದ್ಧ ಅಪೀಲ್ ಸಲ್ಲಿಸಲಾಗಿದೆ. ಹಾಗೂ ಕೊನೆಯ ಪ್ರಕರಣದಲ್ಲಿ ಬಿಡುಗಡೆ ಮಾಡಬೇಕು ಎನ್ನುವ ಅರ್ಜಿ ಗುಜರಾತ್ ಹೈಕೋರ್ಟ್ ಮುಂದಿದೆ.

ಜೈಲಿನಲ್ಲಿ ವಿಚಾಣಾಧೀನ ಕೈದಿಯಾಗಿ ವರ್ನನ್ ತಮ್ಮ ಬಹುತೇಕ ಸಮಯವನ್ನು ಬರೆಯುವುದರಲ್ಲಿ ಕಳೆದರು. ಸದ್ಯಕ್ಕೆ ಸೆರೆವಾಸದ ಬಗ್ಗೆಯ ಬರಹಗಳ ಸಂಗ್ರಹದ ಮೇಲೆ ಕೆಲಸ ಮಾಡುತ್ತಿದ್ದಾರೆ. ಜೈಲಿನಲ್ಲಿದ್ದುಕೊಂಡೇ, ಸಣ್ಣ ಕಥೆಗಳ ಸಂಗ್ರಹವನ್ನು ಸಂಪಾದಿಸಿದರು, ಅದರಲ್ಲಿಯ ಒಂದು ಕಥೆ, ಜೈಲ್‌ಬರ್ಡ್ ಜಬ್ಬಾರ್ ಎಂಬುದನ್ನು ಪಕ್ಕಾ ಬಂಬಯ್ಯಾ ಶೈಲಿಯಲ್ಲಿ ಬರೆಯಲಾಗಿದೆ. ಅದರೊಂದಿಗೆ ಮರಾಠಿ ಲೇಖಕ ಅಣ್ಣಾಭಾವು ಸಾಠೆ ಅವರ ಕಥೆಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿದರು. ಅದನ್ನು ಅ ಕ್ಲಚ್ ಆಫ್ ಶಾರ್ಟ್ ಸ್ಟೋರೀಸ್ ಎಂಬ ಶೀರ್ಷಿಕೆಯಲ್ಲಿ ಅಲೆಫ್ ಪ್ರಕಾಶನ ಪ್ರಕಟಿಸಿತು. ಜೈಲಿನಿಂದ ಬಿಡುಗಡೆಯಾದ ನಂತರ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅದರಲ್ಲಿ ಯುಎಪಿಎ ಕಾನೂನನ್ನು ಕೊನೆಗೊಳಿಸುವುದರ ಬಗ್ಗೆ, ದಲಿತ ಮತ್ತು ಆದಿವಾಸಿ ಸಮುದಾಯ ಹಕ್ಕುಗಳು, ಪ್ರಸಕ್ತ ಕಾನೂನುಗಳು, ಅಂಚಿನಲ್ಲಿರುವ ದುರ್ಬಲ ಸಮುದಾಯಗಳ ವಿರುದ್ಧ ಸರಕಾರವು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಹೇಗೆ ದುರ್ಬಳಿಕೆ ಮಾಡುತ್ತಿದೆ, ಕಾರ್ಪೋರೆಟ್‌ಗಳು ಮತ್ತು ಸರ್ಕಾರದ ನೆಕ್ಸಸ್‌ನಿಂದ ಆಗುವ ಭೂಕಬಳಿಕೆ ಹೀಗೆ ಹಲವು ವಿಷಯಗಳ ಬಗ್ಗೆ ಬರೆದಿದ್ದಾರೆ. ಇತ್ತೀಚಿಗೆ ಪ್ರಕಟಗೊಂಡ ಹಾರ್ಷರ್ ಪನಿಷ್‌ಮೆಂಟ್ಸ್ ಆಂಡ್ ರಿಟ್ರಿಬ್ಯೂಟಿವ್ ಕ್ರಿಮಿನಲ್ ಜಸ್ಟಿಸ್ (ಕಠಿಣ ಶಿಕ್ಷೆಗಳು ಮತ್ತು ಪ್ರತೀಕಾರದ ಕ್ರಿಮಿನಲ್ ನ್ಯಾಯ) ಎಂಬ ಲೇಖನವು ಅಪರಾಧ ನಿಯಂತ್ರಣದ ಒಟ್ಟಾರೆ ಗತಿ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯ ವಿಶ್ಲೇಷಣೆಯು ಆ ವಿಷಯದಲ್ಲಿ ಒಂದು ಮೈಲಿಗಲ್ಲಾಗಿದೆ.

ವರ್ನನ್ ಅವರ ಮಗ ಸಾಗರ್, ತನ್ನ ತಂದೆಯ ಬಗ್ಗೆ ಹತ್ತಿರದ ಎಲ್ಲರೂ ಏನನ್ನುತ್ತಾರೆ ಎಂಬುದನ್ನು ಹೀಗೆ ವಿವರಿಸುತ್ತಾರೆ.

ನನ್ನ ತಂದೆಯ ಅನೇಕ ಗುಣಗಳಲ್ಲಿ ನಾನು ಮೆಚ್ಚುವುದು, ತಮ್ಮ ನಂಬಿಕೆ ಮತ್ತು ಆದರ್ಶಗಳ ಬಗ್ಗೆ ಅವರಿಗಿರುವ ಬದ್ಧತೆ. ನ್ಯಾಯದ ಕೆಲಸಕ್ಕೆ ಎದೆಯುಬ್ಬಿಸಿ ನಿಲ್ಲುವುದು ಹಾಗೂ ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾದವರ ಜೊತೆಗೆ ನಿಂತು, ಅವರಿಗೆ ಸಹಾಯ ಮಾಡುವುದು. ಇದನ್ನು ಅವರು ಮುಂಚೆಯಿಂದಲೂ ಮಾಡಿಕೊಂಡು ಬಂದಿದ್ದಾರೆ ಹಾಗೂ ಅದನ್ನೇ ಮುಂದುವರೆಸಲಿದ್ದಾರೆ. ಮುಂಚೆಯೂ ಅವರು ಧೈರ್ಯಗುಂದಲಿಲ್ಲ ಹಾಗೂ ಈಗಲೂ ಅವರು ಧೈರ್ಯಗುಂದದೆ ಮುಂದುವರೆಯುವರು. ತಮ್ಮ ನಂಬಿಕೆಗಳಿಗೆ ಎಂದಿಗೂ ಬದ್ಧರಾಗಿರುವ ಅವರ ಅನನ್ಯತೆಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ”

(ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ)

ಅನುವಾದ: ರಾಜಶೇಖರ ಅಕ್ಕಿ


ಇದನ್ನೂ ಓದಿ: ವಿದ್ಯಾರ್ಥಿಗಳ ನೆಚ್ಚಿನ, ಜನಪ್ರಿಯ ಪ್ರಾಧ್ಯಾಪಕ ಡಾ. ಹನಿ ಬಾಬು ಬಂಧನದಲ್ಲಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಚುನಾವಣಾ ಸಮಯದಲ್ಲಿ ಉಚಿತ ಕೊಡುಗೆಗಳ ಪ್ರವೃತ್ತಿ ಪ್ರಶ್ನಿಸಿದ ಸುಪ್ರೀಂ ಕೋರ್ಟ್

ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳು ಚುನಾವಣೆಗೆ ಮುನ್ನ "ಉಚಿತ ಕೊಡುಗೆಗಳ" ಜಾಹೀರಾತು ನೀಡುವ ಅಭ್ಯಾಸ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಬಲವಾದ ಮೌಖಿಕ ಅವಲೋಕನಗಳನ್ನು ನೀಡಿದೆ. ವಿದ್ಯುತ್ (ತಿದ್ದುಪಡಿ) ನಿಯಮಗಳು, 2024...

ರಾಹುಲ್ ಗಾಂಧಿಗೆ ಕರ್ಣಿ ಸೇನೆಯಿಂದ ಜೀವ ಬೆದರಿಕೆ: ಬಿಜೆಪಿ-ಆರ್‌ಎಸ್‌ಎಸ್ ಜಾಲವೇ ‘ಗೋಡ್ಸೆ ಕಾರ್ಖಾನೆ’ ಎಂದ ಕಾಂಗ್ರೆಸ್

ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿರುದ್ಧ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಕರ್ಣಿ ಸೇನೆ ಜೀವ ಬೆದರಿಕೆ ಹಾಕಿದ್ದು, ಇದು "ಏಕಾಂಗಿ ಸ್ಫೋಟವಲ್ಲ"...

ಬಿಹಾರ| ವಿಧಾನಸಭೆಯಲ್ಲಿ ‘ತಂಬಾಕು’ ತಿಂದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ

ಬಿಹಾರ ವಿಧಾನಸಭೆಯ ಬಜೆಟ್ ಅಧಿವೇಶನದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕ ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿಡಿಯೋದಲ್ಲಿ, ಉಪಮುಖ್ಯಮಂತ್ರಿ ಹಾಗೂ ಹಿರಿಯ ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಕಲಾಪದ ಸಮಯದಲ್ಲಿ ವಸ್ತುವೊಂದನ್ನು...

‘ಬೆದರಿಕೆ, ಚಿತ್ರಹಿಂಸೆ, ಅತ್ಯಾಚಾರ ‘: ಇಸ್ರೇಲ್‌ ಜೈಲಿನ ದೌರ್ಜನ್ಯ ಬಿಚ್ಚಿಟ್ಟ ಪ್ಯಾಲೆಸ್ತೀನ್ ಪತ್ರಕರ್ತರು

ಇಸ್ರೇಲ್ ಜೈಲುಗಳಲ್ಲಿ ಬಂಧಿತರಾಗಿರುವ ಪ್ಯಾಲೆಸ್ತೀನ್ ಪತ್ರಕರ್ತರು ತೀವ್ರವಾದ ದೌರ್ಜನ್ಯಗಳನ್ನು ಎದುರಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ರಕ್ಷಣಾ ಸಮಿತಿ (ಸಿಪಿಜೆ) ಹೇಳಿದೆ. ಬಂಧನದಿಂದ ಬಿಡುಗಡೆಯಾಗಿರುವ ಪತ್ರಕರ್ತರನ್ನು ಸಂದರ್ಶಿಸಿರುವ ಸಿಪಿಜೆ, ಜೈಲಿನಲ್ಲಿರುವ ಪತ್ರಕರ್ತರು ನಿರಂತರವಾಗಿ ದೈಹಿಕ...

ಪಾಕಿಸ್ತಾನದ ಕರಾಚಿಯಲ್ಲಿ ಶಂಕಿತ ಅನಿಲ ಸೋರಿಕೆ: ಮಕ್ಕಳು ಸೇರಿದಂತೆ 16 ಮಂದಿ ಸಾವು

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿ ಗುರುವಾರ ಬೆಳಿಗ್ಗೆ ವಸತಿ ಕಟ್ಟಡವೊಂದರಲ್ಲಿ ಶಂಕಿತ ಅನಿಲ ಸೋರಿಕೆಯಿಂದಾಗಿ ಸ್ಫೋಟ ಸಂಭವಿಸಿ, ಮಕ್ಕಳು ಸೇರಿದಂತೆ ಕನಿಷ್ಠ 16 ಜನರು ಸಾವನ್ನಪ್ಪಿದ್ದು, 14 ಜನರು ಗಾಯಗೊಂಡಿದ್ದಾರೆ. "ಓಲ್ಡ್ ಸೋಲ್ಜರ್ ಬಜಾರ್...

ಮಹಾರಾಷ್ಟ್ರ| 10 ದಿನಗಳ ಮಗುವಿನೊಂದಿಗೆ 12 ನೇ ತರಗತಿ ಪರೀಕ್ಷೆ ಬರೆದ ಮಹಿಳೆ

ಮಹಾರಾಷ್ಟ್ರದ ನಾಂದೇಡ್ ನಗರದಲ್ಲಿ 12 ನೇ ತರಗತಿಯ ಮಹಾರಾಷ್ಟ್ರ ಬೋರ್ಡ್ ಪರೀಕ್ಷೆಗೆ ಹಾಜರಾದ ಮಹಿಳೆಯೊಬ್ಬರು ತನ್ನ 10 ದಿನಗಳ ಮಗುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆತಂದಿದ್ದಾರೆ. ಮಹಿಳೆ ಪರೀಕ್ಷೆ ಬರೆಯುವ ಕಾರಣಕ್ಕೆ ಕೇಂದ್ರದ ವಿಶೇಷ...

ಒಡಿಶಾ| ದಲಿತರು ವಾಸಿಸುವ ಪ್ರದೇಶಕ್ಕೆ ಕುಡಿಯುವ ನೀರು-ವಿದ್ಯುತ್ ಸಂಪರ್ಕ ಕಡಿತ

ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯವಿದೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ. ಆದರೆ, ಗ್ರಾಮದ ಅಧಿಕಾರಿಯೊಬ್ಬರು ಈ ಅಡಚಣೆಗೆ ಸ್ಥಳೀಯ ಕಲಹ ಕಾರಣ ಎಂದು ಆರೋಪಿಸಿದ್ದಾರೆ. ಜಿಲ್ಲೆಯ ತುರೆಕೆಲಾ ಬ್ಲಾಕ್‌ನ ಡುಮೆರ್ಚುವಾನ್ ಗ್ರಾಮದಲ್ಲಿ...

ತಮಿಳುನಾಡು ವಿಧಾನಸಭಾ ಚುನಾವಣೆ: ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ಡಿಎಂಡಿಕೆ ಸೇರ್ಪಡೆ

ಚೆನ್ನೈ: ದಿವಂಗತ ನಟ ವಿಜಯಕಾಂತ್ ಅವರ ದೇಶೀಯ ಮುರ್ಪೋಕ್ಕು ದ್ರಾವಿಡ ಕಳಗಂ (ಡಿಎಂಡಿಕೆ) ಗುರುವಾರ ದ್ರಾವಿಡ ಮುನ್ನೇತ್ರ ಕಳಗಂ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟ (ಎಸ್‌ಪಿಎ)ವನ್ನು 21ವರ್ಷಗಳ ಅಸ್ತಿತ್ವದ ನಂತರ ಮೊದಲ ಬಾರಿಗೆ...

ಟ್ರಕ್ ಚಾಲಕ ರಸ್ತೆಯಲ್ಲಿ ನಮಾಝ್ ಮಾಡಿದ್ದರಿಂದ ಟ್ರಾಫಿಕ್ ಜಾಮ್ ಎಂದು ಸುಳ್ಳು ಸುದ್ದಿ ಪ್ರಸಾರ : ಝೀ ನ್ಯೂಸ್‌ಗೆ 1 ಲಕ್ಷ ರೂ. ದಂಡ

ಮುಸ್ಲಿಂ ವ್ಯಕ್ತಿಯೊಬ್ಬರು ನಮಾಝ್ ಮಾಡಲು ಹೆದ್ದಾರಿ ಮಧ್ಯೆ ಟ್ರಕ್‌ ನಿಲ್ಲಿಸಿದ್ದರಿಂದ ಟ್ರಾಫಿಕ್ ಜಾಮ್‌ ಉಂಟಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿದ ಝೀ ನ್ಯೂಸ್‌ ಚಾನೆಲ್‌ಗೆ ಸುದ್ದಿ ಪ್ರಸಾರಕರು ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ(ಎನ್‌ಬಿಡಿಎಸ್‌ಎ)...

ಗುಜರಾತ್‌| ಜಾತಿ ಆಧಾರಿತ ಜಗಳದಲ್ಲಿ ದಲಿತ ಯುವಕನ ಮೇಲೆ ಚಾಕುವಿನಿಂದ ದಾಳಿ

ಶನಿವಾರ ತಡರಾತ್ರಿ ರಾಣಿಪ್‌ನಲ್ಲಿ ನಡೆದ ಸಣ್ಣ ಭಿನ್ನಾಭಿಪ್ರಾಯವೊಂದು ಹಿಂಸಾಚಾರಕ್ಕೆ ತಿರುಗಿದ್ದು, 25 ವರ್ಷದ ದಲಿತ ಯುವಕ ಸಾಹಿಲ್ ವಘೇಲಾ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯು ಈ ಪ್ರದೇಶದಲ್ಲಿ...