Homeಚಳವಳಿನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ...

ನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ…

ವರ್ನನ್ ಅವರ ಬರಹಗಳಲ್ಲಿ ಅವರ ಕಾಣ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ. ವರ್ಗ, ಜಾತಿ, ಜನಾಂಗದ ಭೇದಗಳಿಲ್ಲದ, ಲೈಂಗಿಕ ಸಮಾನತೆಯ ತತ್ವಗಳನ್ನೊಳಗೊಂಡ ಹಾಗೂ ನ್ಯಾಯಯುತವಾದ ಸಮಾಜದ ಅವರ ನೋಟ ಅವರ ಬರಹಗಳನ್ನು ಓದಿದರೆ ಸ್ಪಷ್ಟವಾಗುತ್ತದೆ.

- Advertisement -
- Advertisement -

ಯಾವಾಗಲೂ ಅರ್ಧ ತೋಳಿನ ಕಾಟನ್ ಅಂಗಿ, ದೊಗಳೆ ಪ್ಯಾಂಟು, ಕನ್ನಡಕ, ಬಗಲಿಗೆ ಒಂದು ಚೀಲ ಹಾಗೂ ಹೃದಯಪೂರ್ವಕ ನಗುವಿನೊಂದಿಗೆ ಕಾಣಿಸಿಕೊಳ್ಳುವ ವರ್ನನ್ ಗೊನ್ಸಾಲ್ವೆಸ್ ಒಬ್ಬ ಕ್ರಿಯಾಶೀಲ ಬುದ್ಧಿವಂತನಾಗಿ ಕಂಡುಬರುತ್ತಾರೆ. ಆರು ವರ್ಷದ ಮಗುವಿನಿಂದ ಹಿಡಿದು 60 ವರ್ಷದವರೊಂದಿಗೂ ಅವರು ಸಲೀಸಾಗಿ ಬೆರೆಯುತ್ತಾರೆ. ಅವರ ಬಾಹ್ಯನೋಟ ಅವರ ಹೃದಯದಲ್ಲಿ ಸದಾಕಾಲ ಹುದುಗಿರುವ ಸಂತೋಷವನ್ನು ಪ್ರತಿಫಲಿಸುತ್ತದೆ. ಅವರು ಕಾಲೇಜಿನಲ್ಲಿದ್ದಾಗ ಒಂದು ಬ್ಯಾಂಡ್ ಶುರು ಮಾಡಿದ್ದರು. ಆದರೆ ಜನಚಳವಳಿಯ ಭಾಗವಾದ ನಂತರ ಅದನ್ನು ಬಿಟ್ಟರು. ಈಗಲೂ ಅವರು ಹಾಡಿದಾಗ 70ರ ದಶಕದ ರಾಕ್ ಸಂಗೀತದ ರುಚಿಕಟ್ಟು ಅದಕ್ಕಿದೆ.

ವರ್ನನ್ ಅವರ ಬರಹಗಳಲ್ಲಿ ಅವರ ಕಾಣ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ. ವರ್ಗ, ಜಾತಿ, ಜನಾಂಗದ ಭೇದಗಳಿಲ್ಲದ, ಲೈಂಗಿಕ ಸಮಾನತೆಯ ತತ್ವಗಳನ್ನೊಳಗೊಂಡ ಹಾಗೂ ನ್ಯಾಯಯುತವಾದ ಸಮಾಜದ ಅವರ ನೋಟ ಅವರ ಬರಹಗಳನ್ನು ಓದಿದರೆ ಸ್ಪಷ್ಟವಾಗುತ್ತದೆ. ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅವರು ಕ್ಲಿಷ್ಟ ಸಾಮಾಜಿಕ, ರಾಜಕೀಯ, ಆರ್ಥಿಕ ವಿಷಯಗಳ ಬಗ್ಗೆ ಸೂಕ್ಷ್ಮ ಮತ್ತು ಸಮತೋಲನದ ವಾದಗಳನ್ನು ಮುಂದಿಸುತ್ತಾರೆ. ವರ್ನನ್ ಪ್ರಗತಿಪರ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳಲು ಸದಾ ಉತ್ಸುಕರಾಗಿರುತ್ತಾರೆ.

ಮುಂಬಯಿಯ ಭಾಯಕಲ್ಲಾದ ಒಂದು ಚಾಳನಲ್ಲಿ ಬೆಳೆದ ವರ್ನನ್ ಅವರ ತಂದೆತಾಯಿ ಮಂಗಳೂರು ಮೂಲದ ಕ್ಯಾಥೊಲಿಕ್ಕರು. ಓದಿನಲ್ಲಿ ಯಾವಾಗಲೂ ಮುಂದಿದ್ದ ವರ್ನನ್, ಮುಂಬಯಿ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಸ್ವರ್ಣ ಪದಕ ಪಡೆದವರು. ಶಿಕ್ಷಣ ಮುಗಿಸಿ, ಸೀಮೆನ್ಸ್ ಕಂಪನಿಯಲ್ಲಿ ಕೆಲ ದಿನ ಕಾರ್ಪೋರೇಟ್ ನೌಕರಿ ಮಾಡಿದರು. ನಂತರ ಮುಂಬಯಿಯ ಟ್ರೇಟ್ ಯುನಿಯನ್‌ಗಳು, ಸ್ಲಮ್‌ನಲ್ಲಿ ಇರುವುವರ ಹಾಗೂ ದುಡಿಯುವ ವರ್ಗದವರೊಂದಿಗೆ ಕೆಲಸ ಮಾಡಲು ತಮ್ಮ ನೌಕರಿಯನ್ನು ಬಿಟ್ಟರು. ಅದೇ ಸಮಯದಲ್ಲಿ ಮುಂಬಯಿಯ ಕೆಲವು ಪ್ರಮುಖ ಕಾಲೇಜುಗಳಾದ ರೂಪರೇಲ್ ಕಾಲೇಜು, ಎಚ್‌ಆರ್ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜು ಮತ್ತು ಅಕ್ಬರ್ ಪೀರ್‌ಭೋಯ್ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು.

1983ರ ಹೊತ್ತಿಗೆ ಅವರು ನಾಗಪುರ ಸಮೀಪದ ಚಂದ್ರಪುರದಲ್ಲಿ ಬಂದು ನೆಲಸಿದರು. ಅಲ್ಲಿ ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಒಳಗೊಂಡು ಇತರ ಅಸಂಘಟಿತ ವಲಯದ ಕಾರ್ಮಿಕರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. 1984ರಲ್ಲಿ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಸೂಸಾನ್ ಅಬ್ರಾಹಮ್ ಜೊತೆಗೆ ಲಗ್ನವಾದರು. ಅದು ಎರಡು ವಿಶಿಷ್ಟ ಹಾಗೂ ತೀವ್ರ ಸ್ವತಂತ್ರ ಮನಸ್ಸುಗಳ ಮಿಲನವಾಗಿತ್ತು. ಚಂದ್ರಪುರದಲ್ಲಿ ಒಂದು ದಶಕ ಕೆಲಸ ಮಾಡಿ, 1994ರಲ್ಲಿ ಮಗ ಸಾಗರ್ ಹುಟ್ಟಿದ ನಂತರ ಮುಂಬಯಿಗೆ ಮರಳಿದರು.

2007ರ ಆಗಸ್ಟ್ 19ರಂದು ಮಹಾರಾಷ್ಟ್ರ ಎಟಿಎಸ್ ವರ್ನನ್ ಅವರನ್ನು ಮುಂಬಯಿಯ ಅಂಧೇರಿಯ ಮನೆಯಿಂದ ಬಂಧಿಸಿದರು. ಆದರೆ ಅವರ ಬಂಧನವನ್ನು ಇನ್ನೊಬ್ಬ ಸಹ ಆರೋಪಿ ಎಸ್ ಶ್ರೀಧರ್ ಅವರ ಗೋವಂಡಿಯ ಮನೆಯಲ್ಲಿ ಮಾಡಲಾಯಿತು ಎಂದು ಸುಳ್ಳಾಗಿ ತೋರಿಸಲಾಯಿತು. ಅವರ ಮೇಲೆ ಸ್ಫೋಟಕ ವಸ್ತುಗಳನ್ನು ಇಟ್ಟುಕೊಂಡ ಟಾಪ್ ಲೆವೆಲ್ ನಕ್ಸಲೈಟ್ ಎಂಬ ಆಪಾದನೆಯನ್ನು ಹೊರೆಸಲಾಯಿತು. ಅದಕ್ಕೆ ಕೆಲ ತಿಂಗಳು ಮುಂಚೆ, ವರ್ನನ್ ಅವರು ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಆದಿವಾಸಿ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದರು. ಅವರ ಮೇಲೆ 20 ಪ್ರಕರಣಗಳನ್ನು ದಾಖಲಿಸಲಾಯಿತು. ವಿಚಾರಣಾಧೀನ ಕೈದಿಯಾಗಿ ಸುಮಾರು 6 ವರ್ಷ ಜೈಲಿನಲಿದ್ದರು. 20 ರಲ್ಲಿ 18 ಪ್ರಕರಣಗಳಲ್ಲಿ ನಿರ್ದೋಷಿ ಎಂದು ತೀರ್ಪು ಬಂತು. ಒಂದು ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದು, ಈಗ ನಾಗಪುರ ಹೈಕೋರ್ಟ್‌ನಲ್ಲಿ ಅದರ ವಿರುದ್ಧ ಅಪೀಲ್ ಸಲ್ಲಿಸಲಾಗಿದೆ. ಹಾಗೂ ಕೊನೆಯ ಪ್ರಕರಣದಲ್ಲಿ ಬಿಡುಗಡೆ ಮಾಡಬೇಕು ಎನ್ನುವ ಅರ್ಜಿ ಗುಜರಾತ್ ಹೈಕೋರ್ಟ್ ಮುಂದಿದೆ.

ಜೈಲಿನಲ್ಲಿ ವಿಚಾಣಾಧೀನ ಕೈದಿಯಾಗಿ ವರ್ನನ್ ತಮ್ಮ ಬಹುತೇಕ ಸಮಯವನ್ನು ಬರೆಯುವುದರಲ್ಲಿ ಕಳೆದರು. ಸದ್ಯಕ್ಕೆ ಸೆರೆವಾಸದ ಬಗ್ಗೆಯ ಬರಹಗಳ ಸಂಗ್ರಹದ ಮೇಲೆ ಕೆಲಸ ಮಾಡುತ್ತಿದ್ದಾರೆ. ಜೈಲಿನಲ್ಲಿದ್ದುಕೊಂಡೇ, ಸಣ್ಣ ಕಥೆಗಳ ಸಂಗ್ರಹವನ್ನು ಸಂಪಾದಿಸಿದರು, ಅದರಲ್ಲಿಯ ಒಂದು ಕಥೆ, ಜೈಲ್‌ಬರ್ಡ್ ಜಬ್ಬಾರ್ ಎಂಬುದನ್ನು ಪಕ್ಕಾ ಬಂಬಯ್ಯಾ ಶೈಲಿಯಲ್ಲಿ ಬರೆಯಲಾಗಿದೆ. ಅದರೊಂದಿಗೆ ಮರಾಠಿ ಲೇಖಕ ಅಣ್ಣಾಭಾವು ಸಾಠೆ ಅವರ ಕಥೆಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿದರು. ಅದನ್ನು ಅ ಕ್ಲಚ್ ಆಫ್ ಶಾರ್ಟ್ ಸ್ಟೋರೀಸ್ ಎಂಬ ಶೀರ್ಷಿಕೆಯಲ್ಲಿ ಅಲೆಫ್ ಪ್ರಕಾಶನ ಪ್ರಕಟಿಸಿತು. ಜೈಲಿನಿಂದ ಬಿಡುಗಡೆಯಾದ ನಂತರ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅದರಲ್ಲಿ ಯುಎಪಿಎ ಕಾನೂನನ್ನು ಕೊನೆಗೊಳಿಸುವುದರ ಬಗ್ಗೆ, ದಲಿತ ಮತ್ತು ಆದಿವಾಸಿ ಸಮುದಾಯ ಹಕ್ಕುಗಳು, ಪ್ರಸಕ್ತ ಕಾನೂನುಗಳು, ಅಂಚಿನಲ್ಲಿರುವ ದುರ್ಬಲ ಸಮುದಾಯಗಳ ವಿರುದ್ಧ ಸರಕಾರವು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಹೇಗೆ ದುರ್ಬಳಿಕೆ ಮಾಡುತ್ತಿದೆ, ಕಾರ್ಪೋರೆಟ್‌ಗಳು ಮತ್ತು ಸರ್ಕಾರದ ನೆಕ್ಸಸ್‌ನಿಂದ ಆಗುವ ಭೂಕಬಳಿಕೆ ಹೀಗೆ ಹಲವು ವಿಷಯಗಳ ಬಗ್ಗೆ ಬರೆದಿದ್ದಾರೆ. ಇತ್ತೀಚಿಗೆ ಪ್ರಕಟಗೊಂಡ ಹಾರ್ಷರ್ ಪನಿಷ್‌ಮೆಂಟ್ಸ್ ಆಂಡ್ ರಿಟ್ರಿಬ್ಯೂಟಿವ್ ಕ್ರಿಮಿನಲ್ ಜಸ್ಟಿಸ್ (ಕಠಿಣ ಶಿಕ್ಷೆಗಳು ಮತ್ತು ಪ್ರತೀಕಾರದ ಕ್ರಿಮಿನಲ್ ನ್ಯಾಯ) ಎಂಬ ಲೇಖನವು ಅಪರಾಧ ನಿಯಂತ್ರಣದ ಒಟ್ಟಾರೆ ಗತಿ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯ ವಿಶ್ಲೇಷಣೆಯು ಆ ವಿಷಯದಲ್ಲಿ ಒಂದು ಮೈಲಿಗಲ್ಲಾಗಿದೆ.

ವರ್ನನ್ ಅವರ ಮಗ ಸಾಗರ್, ತನ್ನ ತಂದೆಯ ಬಗ್ಗೆ ಹತ್ತಿರದ ಎಲ್ಲರೂ ಏನನ್ನುತ್ತಾರೆ ಎಂಬುದನ್ನು ಹೀಗೆ ವಿವರಿಸುತ್ತಾರೆ.

ನನ್ನ ತಂದೆಯ ಅನೇಕ ಗುಣಗಳಲ್ಲಿ ನಾನು ಮೆಚ್ಚುವುದು, ತಮ್ಮ ನಂಬಿಕೆ ಮತ್ತು ಆದರ್ಶಗಳ ಬಗ್ಗೆ ಅವರಿಗಿರುವ ಬದ್ಧತೆ. ನ್ಯಾಯದ ಕೆಲಸಕ್ಕೆ ಎದೆಯುಬ್ಬಿಸಿ ನಿಲ್ಲುವುದು ಹಾಗೂ ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾದವರ ಜೊತೆಗೆ ನಿಂತು, ಅವರಿಗೆ ಸಹಾಯ ಮಾಡುವುದು. ಇದನ್ನು ಅವರು ಮುಂಚೆಯಿಂದಲೂ ಮಾಡಿಕೊಂಡು ಬಂದಿದ್ದಾರೆ ಹಾಗೂ ಅದನ್ನೇ ಮುಂದುವರೆಸಲಿದ್ದಾರೆ. ಮುಂಚೆಯೂ ಅವರು ಧೈರ್ಯಗುಂದಲಿಲ್ಲ ಹಾಗೂ ಈಗಲೂ ಅವರು ಧೈರ್ಯಗುಂದದೆ ಮುಂದುವರೆಯುವರು. ತಮ್ಮ ನಂಬಿಕೆಗಳಿಗೆ ಎಂದಿಗೂ ಬದ್ಧರಾಗಿರುವ ಅವರ ಅನನ್ಯತೆಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ”

(ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ)

ಅನುವಾದ: ರಾಜಶೇಖರ ಅಕ್ಕಿ


ಇದನ್ನೂ ಓದಿ: ವಿದ್ಯಾರ್ಥಿಗಳ ನೆಚ್ಚಿನ, ಜನಪ್ರಿಯ ಪ್ರಾಧ್ಯಾಪಕ ಡಾ. ಹನಿ ಬಾಬು ಬಂಧನದಲ್ಲಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...