Homeಚಳವಳಿನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ...

ನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ…

ವರ್ನನ್ ಅವರ ಬರಹಗಳಲ್ಲಿ ಅವರ ಕಾಣ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ. ವರ್ಗ, ಜಾತಿ, ಜನಾಂಗದ ಭೇದಗಳಿಲ್ಲದ, ಲೈಂಗಿಕ ಸಮಾನತೆಯ ತತ್ವಗಳನ್ನೊಳಗೊಂಡ ಹಾಗೂ ನ್ಯಾಯಯುತವಾದ ಸಮಾಜದ ಅವರ ನೋಟ ಅವರ ಬರಹಗಳನ್ನು ಓದಿದರೆ ಸ್ಪಷ್ಟವಾಗುತ್ತದೆ.

- Advertisement -
- Advertisement -

ಯಾವಾಗಲೂ ಅರ್ಧ ತೋಳಿನ ಕಾಟನ್ ಅಂಗಿ, ದೊಗಳೆ ಪ್ಯಾಂಟು, ಕನ್ನಡಕ, ಬಗಲಿಗೆ ಒಂದು ಚೀಲ ಹಾಗೂ ಹೃದಯಪೂರ್ವಕ ನಗುವಿನೊಂದಿಗೆ ಕಾಣಿಸಿಕೊಳ್ಳುವ ವರ್ನನ್ ಗೊನ್ಸಾಲ್ವೆಸ್ ಒಬ್ಬ ಕ್ರಿಯಾಶೀಲ ಬುದ್ಧಿವಂತನಾಗಿ ಕಂಡುಬರುತ್ತಾರೆ. ಆರು ವರ್ಷದ ಮಗುವಿನಿಂದ ಹಿಡಿದು 60 ವರ್ಷದವರೊಂದಿಗೂ ಅವರು ಸಲೀಸಾಗಿ ಬೆರೆಯುತ್ತಾರೆ. ಅವರ ಬಾಹ್ಯನೋಟ ಅವರ ಹೃದಯದಲ್ಲಿ ಸದಾಕಾಲ ಹುದುಗಿರುವ ಸಂತೋಷವನ್ನು ಪ್ರತಿಫಲಿಸುತ್ತದೆ. ಅವರು ಕಾಲೇಜಿನಲ್ಲಿದ್ದಾಗ ಒಂದು ಬ್ಯಾಂಡ್ ಶುರು ಮಾಡಿದ್ದರು. ಆದರೆ ಜನಚಳವಳಿಯ ಭಾಗವಾದ ನಂತರ ಅದನ್ನು ಬಿಟ್ಟರು. ಈಗಲೂ ಅವರು ಹಾಡಿದಾಗ 70ರ ದಶಕದ ರಾಕ್ ಸಂಗೀತದ ರುಚಿಕಟ್ಟು ಅದಕ್ಕಿದೆ.

ವರ್ನನ್ ಅವರ ಬರಹಗಳಲ್ಲಿ ಅವರ ಕಾಣ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ. ವರ್ಗ, ಜಾತಿ, ಜನಾಂಗದ ಭೇದಗಳಿಲ್ಲದ, ಲೈಂಗಿಕ ಸಮಾನತೆಯ ತತ್ವಗಳನ್ನೊಳಗೊಂಡ ಹಾಗೂ ನ್ಯಾಯಯುತವಾದ ಸಮಾಜದ ಅವರ ನೋಟ ಅವರ ಬರಹಗಳನ್ನು ಓದಿದರೆ ಸ್ಪಷ್ಟವಾಗುತ್ತದೆ. ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅವರು ಕ್ಲಿಷ್ಟ ಸಾಮಾಜಿಕ, ರಾಜಕೀಯ, ಆರ್ಥಿಕ ವಿಷಯಗಳ ಬಗ್ಗೆ ಸೂಕ್ಷ್ಮ ಮತ್ತು ಸಮತೋಲನದ ವಾದಗಳನ್ನು ಮುಂದಿಸುತ್ತಾರೆ. ವರ್ನನ್ ಪ್ರಗತಿಪರ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳಲು ಸದಾ ಉತ್ಸುಕರಾಗಿರುತ್ತಾರೆ.

ಮುಂಬಯಿಯ ಭಾಯಕಲ್ಲಾದ ಒಂದು ಚಾಳನಲ್ಲಿ ಬೆಳೆದ ವರ್ನನ್ ಅವರ ತಂದೆತಾಯಿ ಮಂಗಳೂರು ಮೂಲದ ಕ್ಯಾಥೊಲಿಕ್ಕರು. ಓದಿನಲ್ಲಿ ಯಾವಾಗಲೂ ಮುಂದಿದ್ದ ವರ್ನನ್, ಮುಂಬಯಿ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಸ್ವರ್ಣ ಪದಕ ಪಡೆದವರು. ಶಿಕ್ಷಣ ಮುಗಿಸಿ, ಸೀಮೆನ್ಸ್ ಕಂಪನಿಯಲ್ಲಿ ಕೆಲ ದಿನ ಕಾರ್ಪೋರೇಟ್ ನೌಕರಿ ಮಾಡಿದರು. ನಂತರ ಮುಂಬಯಿಯ ಟ್ರೇಟ್ ಯುನಿಯನ್‌ಗಳು, ಸ್ಲಮ್‌ನಲ್ಲಿ ಇರುವುವರ ಹಾಗೂ ದುಡಿಯುವ ವರ್ಗದವರೊಂದಿಗೆ ಕೆಲಸ ಮಾಡಲು ತಮ್ಮ ನೌಕರಿಯನ್ನು ಬಿಟ್ಟರು. ಅದೇ ಸಮಯದಲ್ಲಿ ಮುಂಬಯಿಯ ಕೆಲವು ಪ್ರಮುಖ ಕಾಲೇಜುಗಳಾದ ರೂಪರೇಲ್ ಕಾಲೇಜು, ಎಚ್‌ಆರ್ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜು ಮತ್ತು ಅಕ್ಬರ್ ಪೀರ್‌ಭೋಯ್ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು.

1983ರ ಹೊತ್ತಿಗೆ ಅವರು ನಾಗಪುರ ಸಮೀಪದ ಚಂದ್ರಪುರದಲ್ಲಿ ಬಂದು ನೆಲಸಿದರು. ಅಲ್ಲಿ ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಒಳಗೊಂಡು ಇತರ ಅಸಂಘಟಿತ ವಲಯದ ಕಾರ್ಮಿಕರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. 1984ರಲ್ಲಿ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಸೂಸಾನ್ ಅಬ್ರಾಹಮ್ ಜೊತೆಗೆ ಲಗ್ನವಾದರು. ಅದು ಎರಡು ವಿಶಿಷ್ಟ ಹಾಗೂ ತೀವ್ರ ಸ್ವತಂತ್ರ ಮನಸ್ಸುಗಳ ಮಿಲನವಾಗಿತ್ತು. ಚಂದ್ರಪುರದಲ್ಲಿ ಒಂದು ದಶಕ ಕೆಲಸ ಮಾಡಿ, 1994ರಲ್ಲಿ ಮಗ ಸಾಗರ್ ಹುಟ್ಟಿದ ನಂತರ ಮುಂಬಯಿಗೆ ಮರಳಿದರು.

2007ರ ಆಗಸ್ಟ್ 19ರಂದು ಮಹಾರಾಷ್ಟ್ರ ಎಟಿಎಸ್ ವರ್ನನ್ ಅವರನ್ನು ಮುಂಬಯಿಯ ಅಂಧೇರಿಯ ಮನೆಯಿಂದ ಬಂಧಿಸಿದರು. ಆದರೆ ಅವರ ಬಂಧನವನ್ನು ಇನ್ನೊಬ್ಬ ಸಹ ಆರೋಪಿ ಎಸ್ ಶ್ರೀಧರ್ ಅವರ ಗೋವಂಡಿಯ ಮನೆಯಲ್ಲಿ ಮಾಡಲಾಯಿತು ಎಂದು ಸುಳ್ಳಾಗಿ ತೋರಿಸಲಾಯಿತು. ಅವರ ಮೇಲೆ ಸ್ಫೋಟಕ ವಸ್ತುಗಳನ್ನು ಇಟ್ಟುಕೊಂಡ ಟಾಪ್ ಲೆವೆಲ್ ನಕ್ಸಲೈಟ್ ಎಂಬ ಆಪಾದನೆಯನ್ನು ಹೊರೆಸಲಾಯಿತು. ಅದಕ್ಕೆ ಕೆಲ ತಿಂಗಳು ಮುಂಚೆ, ವರ್ನನ್ ಅವರು ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಆದಿವಾಸಿ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದರು. ಅವರ ಮೇಲೆ 20 ಪ್ರಕರಣಗಳನ್ನು ದಾಖಲಿಸಲಾಯಿತು. ವಿಚಾರಣಾಧೀನ ಕೈದಿಯಾಗಿ ಸುಮಾರು 6 ವರ್ಷ ಜೈಲಿನಲಿದ್ದರು. 20 ರಲ್ಲಿ 18 ಪ್ರಕರಣಗಳಲ್ಲಿ ನಿರ್ದೋಷಿ ಎಂದು ತೀರ್ಪು ಬಂತು. ಒಂದು ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದು, ಈಗ ನಾಗಪುರ ಹೈಕೋರ್ಟ್‌ನಲ್ಲಿ ಅದರ ವಿರುದ್ಧ ಅಪೀಲ್ ಸಲ್ಲಿಸಲಾಗಿದೆ. ಹಾಗೂ ಕೊನೆಯ ಪ್ರಕರಣದಲ್ಲಿ ಬಿಡುಗಡೆ ಮಾಡಬೇಕು ಎನ್ನುವ ಅರ್ಜಿ ಗುಜರಾತ್ ಹೈಕೋರ್ಟ್ ಮುಂದಿದೆ.

ಜೈಲಿನಲ್ಲಿ ವಿಚಾಣಾಧೀನ ಕೈದಿಯಾಗಿ ವರ್ನನ್ ತಮ್ಮ ಬಹುತೇಕ ಸಮಯವನ್ನು ಬರೆಯುವುದರಲ್ಲಿ ಕಳೆದರು. ಸದ್ಯಕ್ಕೆ ಸೆರೆವಾಸದ ಬಗ್ಗೆಯ ಬರಹಗಳ ಸಂಗ್ರಹದ ಮೇಲೆ ಕೆಲಸ ಮಾಡುತ್ತಿದ್ದಾರೆ. ಜೈಲಿನಲ್ಲಿದ್ದುಕೊಂಡೇ, ಸಣ್ಣ ಕಥೆಗಳ ಸಂಗ್ರಹವನ್ನು ಸಂಪಾದಿಸಿದರು, ಅದರಲ್ಲಿಯ ಒಂದು ಕಥೆ, ಜೈಲ್‌ಬರ್ಡ್ ಜಬ್ಬಾರ್ ಎಂಬುದನ್ನು ಪಕ್ಕಾ ಬಂಬಯ್ಯಾ ಶೈಲಿಯಲ್ಲಿ ಬರೆಯಲಾಗಿದೆ. ಅದರೊಂದಿಗೆ ಮರಾಠಿ ಲೇಖಕ ಅಣ್ಣಾಭಾವು ಸಾಠೆ ಅವರ ಕಥೆಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿದರು. ಅದನ್ನು ಅ ಕ್ಲಚ್ ಆಫ್ ಶಾರ್ಟ್ ಸ್ಟೋರೀಸ್ ಎಂಬ ಶೀರ್ಷಿಕೆಯಲ್ಲಿ ಅಲೆಫ್ ಪ್ರಕಾಶನ ಪ್ರಕಟಿಸಿತು. ಜೈಲಿನಿಂದ ಬಿಡುಗಡೆಯಾದ ನಂತರ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅದರಲ್ಲಿ ಯುಎಪಿಎ ಕಾನೂನನ್ನು ಕೊನೆಗೊಳಿಸುವುದರ ಬಗ್ಗೆ, ದಲಿತ ಮತ್ತು ಆದಿವಾಸಿ ಸಮುದಾಯ ಹಕ್ಕುಗಳು, ಪ್ರಸಕ್ತ ಕಾನೂನುಗಳು, ಅಂಚಿನಲ್ಲಿರುವ ದುರ್ಬಲ ಸಮುದಾಯಗಳ ವಿರುದ್ಧ ಸರಕಾರವು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಹೇಗೆ ದುರ್ಬಳಿಕೆ ಮಾಡುತ್ತಿದೆ, ಕಾರ್ಪೋರೆಟ್‌ಗಳು ಮತ್ತು ಸರ್ಕಾರದ ನೆಕ್ಸಸ್‌ನಿಂದ ಆಗುವ ಭೂಕಬಳಿಕೆ ಹೀಗೆ ಹಲವು ವಿಷಯಗಳ ಬಗ್ಗೆ ಬರೆದಿದ್ದಾರೆ. ಇತ್ತೀಚಿಗೆ ಪ್ರಕಟಗೊಂಡ ಹಾರ್ಷರ್ ಪನಿಷ್‌ಮೆಂಟ್ಸ್ ಆಂಡ್ ರಿಟ್ರಿಬ್ಯೂಟಿವ್ ಕ್ರಿಮಿನಲ್ ಜಸ್ಟಿಸ್ (ಕಠಿಣ ಶಿಕ್ಷೆಗಳು ಮತ್ತು ಪ್ರತೀಕಾರದ ಕ್ರಿಮಿನಲ್ ನ್ಯಾಯ) ಎಂಬ ಲೇಖನವು ಅಪರಾಧ ನಿಯಂತ್ರಣದ ಒಟ್ಟಾರೆ ಗತಿ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯ ವಿಶ್ಲೇಷಣೆಯು ಆ ವಿಷಯದಲ್ಲಿ ಒಂದು ಮೈಲಿಗಲ್ಲಾಗಿದೆ.

ವರ್ನನ್ ಅವರ ಮಗ ಸಾಗರ್, ತನ್ನ ತಂದೆಯ ಬಗ್ಗೆ ಹತ್ತಿರದ ಎಲ್ಲರೂ ಏನನ್ನುತ್ತಾರೆ ಎಂಬುದನ್ನು ಹೀಗೆ ವಿವರಿಸುತ್ತಾರೆ.

ನನ್ನ ತಂದೆಯ ಅನೇಕ ಗುಣಗಳಲ್ಲಿ ನಾನು ಮೆಚ್ಚುವುದು, ತಮ್ಮ ನಂಬಿಕೆ ಮತ್ತು ಆದರ್ಶಗಳ ಬಗ್ಗೆ ಅವರಿಗಿರುವ ಬದ್ಧತೆ. ನ್ಯಾಯದ ಕೆಲಸಕ್ಕೆ ಎದೆಯುಬ್ಬಿಸಿ ನಿಲ್ಲುವುದು ಹಾಗೂ ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾದವರ ಜೊತೆಗೆ ನಿಂತು, ಅವರಿಗೆ ಸಹಾಯ ಮಾಡುವುದು. ಇದನ್ನು ಅವರು ಮುಂಚೆಯಿಂದಲೂ ಮಾಡಿಕೊಂಡು ಬಂದಿದ್ದಾರೆ ಹಾಗೂ ಅದನ್ನೇ ಮುಂದುವರೆಸಲಿದ್ದಾರೆ. ಮುಂಚೆಯೂ ಅವರು ಧೈರ್ಯಗುಂದಲಿಲ್ಲ ಹಾಗೂ ಈಗಲೂ ಅವರು ಧೈರ್ಯಗುಂದದೆ ಮುಂದುವರೆಯುವರು. ತಮ್ಮ ನಂಬಿಕೆಗಳಿಗೆ ಎಂದಿಗೂ ಬದ್ಧರಾಗಿರುವ ಅವರ ಅನನ್ಯತೆಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ”

(ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ)

ಅನುವಾದ: ರಾಜಶೇಖರ ಅಕ್ಕಿ


ಇದನ್ನೂ ಓದಿ: ವಿದ್ಯಾರ್ಥಿಗಳ ನೆಚ್ಚಿನ, ಜನಪ್ರಿಯ ಪ್ರಾಧ್ಯಾಪಕ ಡಾ. ಹನಿ ಬಾಬು ಬಂಧನದಲ್ಲಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...