Homeಚಳವಳಿನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ...

ನ್ಯಾಯಕ್ಕಾಗಿ ಎದೆಯುಬ್ಬಿಸಿ ನಿಲ್ಲುವ ವರ್ನನ್ ಗೊನ್ಸಾಲ್ವೆಸ್ ಜೈಲಿನಲ್ಲಿ…

ವರ್ನನ್ ಅವರ ಬರಹಗಳಲ್ಲಿ ಅವರ ಕಾಣ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ. ವರ್ಗ, ಜಾತಿ, ಜನಾಂಗದ ಭೇದಗಳಿಲ್ಲದ, ಲೈಂಗಿಕ ಸಮಾನತೆಯ ತತ್ವಗಳನ್ನೊಳಗೊಂಡ ಹಾಗೂ ನ್ಯಾಯಯುತವಾದ ಸಮಾಜದ ಅವರ ನೋಟ ಅವರ ಬರಹಗಳನ್ನು ಓದಿದರೆ ಸ್ಪಷ್ಟವಾಗುತ್ತದೆ.

- Advertisement -
- Advertisement -

ಯಾವಾಗಲೂ ಅರ್ಧ ತೋಳಿನ ಕಾಟನ್ ಅಂಗಿ, ದೊಗಳೆ ಪ್ಯಾಂಟು, ಕನ್ನಡಕ, ಬಗಲಿಗೆ ಒಂದು ಚೀಲ ಹಾಗೂ ಹೃದಯಪೂರ್ವಕ ನಗುವಿನೊಂದಿಗೆ ಕಾಣಿಸಿಕೊಳ್ಳುವ ವರ್ನನ್ ಗೊನ್ಸಾಲ್ವೆಸ್ ಒಬ್ಬ ಕ್ರಿಯಾಶೀಲ ಬುದ್ಧಿವಂತನಾಗಿ ಕಂಡುಬರುತ್ತಾರೆ. ಆರು ವರ್ಷದ ಮಗುವಿನಿಂದ ಹಿಡಿದು 60 ವರ್ಷದವರೊಂದಿಗೂ ಅವರು ಸಲೀಸಾಗಿ ಬೆರೆಯುತ್ತಾರೆ. ಅವರ ಬಾಹ್ಯನೋಟ ಅವರ ಹೃದಯದಲ್ಲಿ ಸದಾಕಾಲ ಹುದುಗಿರುವ ಸಂತೋಷವನ್ನು ಪ್ರತಿಫಲಿಸುತ್ತದೆ. ಅವರು ಕಾಲೇಜಿನಲ್ಲಿದ್ದಾಗ ಒಂದು ಬ್ಯಾಂಡ್ ಶುರು ಮಾಡಿದ್ದರು. ಆದರೆ ಜನಚಳವಳಿಯ ಭಾಗವಾದ ನಂತರ ಅದನ್ನು ಬಿಟ್ಟರು. ಈಗಲೂ ಅವರು ಹಾಡಿದಾಗ 70ರ ದಶಕದ ರಾಕ್ ಸಂಗೀತದ ರುಚಿಕಟ್ಟು ಅದಕ್ಕಿದೆ.

ವರ್ನನ್ ಅವರ ಬರಹಗಳಲ್ಲಿ ಅವರ ಕಾಣ್ಕೆ ಸ್ಪಷ್ಟವಾಗಿ ಕಂಡುಬರುತ್ತದೆ. ವರ್ಗ, ಜಾತಿ, ಜನಾಂಗದ ಭೇದಗಳಿಲ್ಲದ, ಲೈಂಗಿಕ ಸಮಾನತೆಯ ತತ್ವಗಳನ್ನೊಳಗೊಂಡ ಹಾಗೂ ನ್ಯಾಯಯುತವಾದ ಸಮಾಜದ ಅವರ ನೋಟ ಅವರ ಬರಹಗಳನ್ನು ಓದಿದರೆ ಸ್ಪಷ್ಟವಾಗುತ್ತದೆ. ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುವ ಅವರು ಕ್ಲಿಷ್ಟ ಸಾಮಾಜಿಕ, ರಾಜಕೀಯ, ಆರ್ಥಿಕ ವಿಷಯಗಳ ಬಗ್ಗೆ ಸೂಕ್ಷ್ಮ ಮತ್ತು ಸಮತೋಲನದ ವಾದಗಳನ್ನು ಮುಂದಿಸುತ್ತಾರೆ. ವರ್ನನ್ ಪ್ರಗತಿಪರ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳಲು ಸದಾ ಉತ್ಸುಕರಾಗಿರುತ್ತಾರೆ.

ಮುಂಬಯಿಯ ಭಾಯಕಲ್ಲಾದ ಒಂದು ಚಾಳನಲ್ಲಿ ಬೆಳೆದ ವರ್ನನ್ ಅವರ ತಂದೆತಾಯಿ ಮಂಗಳೂರು ಮೂಲದ ಕ್ಯಾಥೊಲಿಕ್ಕರು. ಓದಿನಲ್ಲಿ ಯಾವಾಗಲೂ ಮುಂದಿದ್ದ ವರ್ನನ್, ಮುಂಬಯಿ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಸ್ವರ್ಣ ಪದಕ ಪಡೆದವರು. ಶಿಕ್ಷಣ ಮುಗಿಸಿ, ಸೀಮೆನ್ಸ್ ಕಂಪನಿಯಲ್ಲಿ ಕೆಲ ದಿನ ಕಾರ್ಪೋರೇಟ್ ನೌಕರಿ ಮಾಡಿದರು. ನಂತರ ಮುಂಬಯಿಯ ಟ್ರೇಟ್ ಯುನಿಯನ್‌ಗಳು, ಸ್ಲಮ್‌ನಲ್ಲಿ ಇರುವುವರ ಹಾಗೂ ದುಡಿಯುವ ವರ್ಗದವರೊಂದಿಗೆ ಕೆಲಸ ಮಾಡಲು ತಮ್ಮ ನೌಕರಿಯನ್ನು ಬಿಟ್ಟರು. ಅದೇ ಸಮಯದಲ್ಲಿ ಮುಂಬಯಿಯ ಕೆಲವು ಪ್ರಮುಖ ಕಾಲೇಜುಗಳಾದ ರೂಪರೇಲ್ ಕಾಲೇಜು, ಎಚ್‌ಆರ್ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜು ಮತ್ತು ಅಕ್ಬರ್ ಪೀರ್‌ಭೋಯ್ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು.

1983ರ ಹೊತ್ತಿಗೆ ಅವರು ನಾಗಪುರ ಸಮೀಪದ ಚಂದ್ರಪುರದಲ್ಲಿ ಬಂದು ನೆಲಸಿದರು. ಅಲ್ಲಿ ಕಲ್ಲಿದ್ದಲು ಗಣಿ ಕಾರ್ಮಿಕರನ್ನು ಒಳಗೊಂಡು ಇತರ ಅಸಂಘಟಿತ ವಲಯದ ಕಾರ್ಮಿಕರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. 1984ರಲ್ಲಿ ತಮ್ಮೊಂದಿಗೆ ಕೆಲಸ ಮಾಡುತ್ತಿದ್ದ ಸಾಮಾಜಿಕ ಕಾರ್ಯಕರ್ತೆ ಸೂಸಾನ್ ಅಬ್ರಾಹಮ್ ಜೊತೆಗೆ ಲಗ್ನವಾದರು. ಅದು ಎರಡು ವಿಶಿಷ್ಟ ಹಾಗೂ ತೀವ್ರ ಸ್ವತಂತ್ರ ಮನಸ್ಸುಗಳ ಮಿಲನವಾಗಿತ್ತು. ಚಂದ್ರಪುರದಲ್ಲಿ ಒಂದು ದಶಕ ಕೆಲಸ ಮಾಡಿ, 1994ರಲ್ಲಿ ಮಗ ಸಾಗರ್ ಹುಟ್ಟಿದ ನಂತರ ಮುಂಬಯಿಗೆ ಮರಳಿದರು.

2007ರ ಆಗಸ್ಟ್ 19ರಂದು ಮಹಾರಾಷ್ಟ್ರ ಎಟಿಎಸ್ ವರ್ನನ್ ಅವರನ್ನು ಮುಂಬಯಿಯ ಅಂಧೇರಿಯ ಮನೆಯಿಂದ ಬಂಧಿಸಿದರು. ಆದರೆ ಅವರ ಬಂಧನವನ್ನು ಇನ್ನೊಬ್ಬ ಸಹ ಆರೋಪಿ ಎಸ್ ಶ್ರೀಧರ್ ಅವರ ಗೋವಂಡಿಯ ಮನೆಯಲ್ಲಿ ಮಾಡಲಾಯಿತು ಎಂದು ಸುಳ್ಳಾಗಿ ತೋರಿಸಲಾಯಿತು. ಅವರ ಮೇಲೆ ಸ್ಫೋಟಕ ವಸ್ತುಗಳನ್ನು ಇಟ್ಟುಕೊಂಡ ಟಾಪ್ ಲೆವೆಲ್ ನಕ್ಸಲೈಟ್ ಎಂಬ ಆಪಾದನೆಯನ್ನು ಹೊರೆಸಲಾಯಿತು. ಅದಕ್ಕೆ ಕೆಲ ತಿಂಗಳು ಮುಂಚೆ, ವರ್ನನ್ ಅವರು ಮಹಾರಾಷ್ಟ್ರದ ಚಂದ್ರಪುರ ಜಿಲ್ಲೆಯ ಆದಿವಾಸಿ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದರು. ಅವರ ಮೇಲೆ 20 ಪ್ರಕರಣಗಳನ್ನು ದಾಖಲಿಸಲಾಯಿತು. ವಿಚಾರಣಾಧೀನ ಕೈದಿಯಾಗಿ ಸುಮಾರು 6 ವರ್ಷ ಜೈಲಿನಲಿದ್ದರು. 20 ರಲ್ಲಿ 18 ಪ್ರಕರಣಗಳಲ್ಲಿ ನಿರ್ದೋಷಿ ಎಂದು ತೀರ್ಪು ಬಂತು. ಒಂದು ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದು, ಈಗ ನಾಗಪುರ ಹೈಕೋರ್ಟ್‌ನಲ್ಲಿ ಅದರ ವಿರುದ್ಧ ಅಪೀಲ್ ಸಲ್ಲಿಸಲಾಗಿದೆ. ಹಾಗೂ ಕೊನೆಯ ಪ್ರಕರಣದಲ್ಲಿ ಬಿಡುಗಡೆ ಮಾಡಬೇಕು ಎನ್ನುವ ಅರ್ಜಿ ಗುಜರಾತ್ ಹೈಕೋರ್ಟ್ ಮುಂದಿದೆ.

ಜೈಲಿನಲ್ಲಿ ವಿಚಾಣಾಧೀನ ಕೈದಿಯಾಗಿ ವರ್ನನ್ ತಮ್ಮ ಬಹುತೇಕ ಸಮಯವನ್ನು ಬರೆಯುವುದರಲ್ಲಿ ಕಳೆದರು. ಸದ್ಯಕ್ಕೆ ಸೆರೆವಾಸದ ಬಗ್ಗೆಯ ಬರಹಗಳ ಸಂಗ್ರಹದ ಮೇಲೆ ಕೆಲಸ ಮಾಡುತ್ತಿದ್ದಾರೆ. ಜೈಲಿನಲ್ಲಿದ್ದುಕೊಂಡೇ, ಸಣ್ಣ ಕಥೆಗಳ ಸಂಗ್ರಹವನ್ನು ಸಂಪಾದಿಸಿದರು, ಅದರಲ್ಲಿಯ ಒಂದು ಕಥೆ, ಜೈಲ್‌ಬರ್ಡ್ ಜಬ್ಬಾರ್ ಎಂಬುದನ್ನು ಪಕ್ಕಾ ಬಂಬಯ್ಯಾ ಶೈಲಿಯಲ್ಲಿ ಬರೆಯಲಾಗಿದೆ. ಅದರೊಂದಿಗೆ ಮರಾಠಿ ಲೇಖಕ ಅಣ್ಣಾಭಾವು ಸಾಠೆ ಅವರ ಕಥೆಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿದರು. ಅದನ್ನು ಅ ಕ್ಲಚ್ ಆಫ್ ಶಾರ್ಟ್ ಸ್ಟೋರೀಸ್ ಎಂಬ ಶೀರ್ಷಿಕೆಯಲ್ಲಿ ಅಲೆಫ್ ಪ್ರಕಾಶನ ಪ್ರಕಟಿಸಿತು. ಜೈಲಿನಿಂದ ಬಿಡುಗಡೆಯಾದ ನಂತರ ಅನೇಕ ಲೇಖನಗಳನ್ನು ಬರೆದಿದ್ದಾರೆ. ಅದರಲ್ಲಿ ಯುಎಪಿಎ ಕಾನೂನನ್ನು ಕೊನೆಗೊಳಿಸುವುದರ ಬಗ್ಗೆ, ದಲಿತ ಮತ್ತು ಆದಿವಾಸಿ ಸಮುದಾಯ ಹಕ್ಕುಗಳು, ಪ್ರಸಕ್ತ ಕಾನೂನುಗಳು, ಅಂಚಿನಲ್ಲಿರುವ ದುರ್ಬಲ ಸಮುದಾಯಗಳ ವಿರುದ್ಧ ಸರಕಾರವು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಹೇಗೆ ದುರ್ಬಳಿಕೆ ಮಾಡುತ್ತಿದೆ, ಕಾರ್ಪೋರೆಟ್‌ಗಳು ಮತ್ತು ಸರ್ಕಾರದ ನೆಕ್ಸಸ್‌ನಿಂದ ಆಗುವ ಭೂಕಬಳಿಕೆ ಹೀಗೆ ಹಲವು ವಿಷಯಗಳ ಬಗ್ಗೆ ಬರೆದಿದ್ದಾರೆ. ಇತ್ತೀಚಿಗೆ ಪ್ರಕಟಗೊಂಡ ಹಾರ್ಷರ್ ಪನಿಷ್‌ಮೆಂಟ್ಸ್ ಆಂಡ್ ರಿಟ್ರಿಬ್ಯೂಟಿವ್ ಕ್ರಿಮಿನಲ್ ಜಸ್ಟಿಸ್ (ಕಠಿಣ ಶಿಕ್ಷೆಗಳು ಮತ್ತು ಪ್ರತೀಕಾರದ ಕ್ರಿಮಿನಲ್ ನ್ಯಾಯ) ಎಂಬ ಲೇಖನವು ಅಪರಾಧ ನಿಯಂತ್ರಣದ ಒಟ್ಟಾರೆ ಗತಿ ಮತ್ತು ನ್ಯಾಯಾಂಗ ವ್ಯವಸ್ಥೆಯ ಬಗ್ಗೆಯ ವಿಶ್ಲೇಷಣೆಯು ಆ ವಿಷಯದಲ್ಲಿ ಒಂದು ಮೈಲಿಗಲ್ಲಾಗಿದೆ.

ವರ್ನನ್ ಅವರ ಮಗ ಸಾಗರ್, ತನ್ನ ತಂದೆಯ ಬಗ್ಗೆ ಹತ್ತಿರದ ಎಲ್ಲರೂ ಏನನ್ನುತ್ತಾರೆ ಎಂಬುದನ್ನು ಹೀಗೆ ವಿವರಿಸುತ್ತಾರೆ.

ನನ್ನ ತಂದೆಯ ಅನೇಕ ಗುಣಗಳಲ್ಲಿ ನಾನು ಮೆಚ್ಚುವುದು, ತಮ್ಮ ನಂಬಿಕೆ ಮತ್ತು ಆದರ್ಶಗಳ ಬಗ್ಗೆ ಅವರಿಗಿರುವ ಬದ್ಧತೆ. ನ್ಯಾಯದ ಕೆಲಸಕ್ಕೆ ಎದೆಯುಬ್ಬಿಸಿ ನಿಲ್ಲುವುದು ಹಾಗೂ ತಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾದವರ ಜೊತೆಗೆ ನಿಂತು, ಅವರಿಗೆ ಸಹಾಯ ಮಾಡುವುದು. ಇದನ್ನು ಅವರು ಮುಂಚೆಯಿಂದಲೂ ಮಾಡಿಕೊಂಡು ಬಂದಿದ್ದಾರೆ ಹಾಗೂ ಅದನ್ನೇ ಮುಂದುವರೆಸಲಿದ್ದಾರೆ. ಮುಂಚೆಯೂ ಅವರು ಧೈರ್ಯಗುಂದಲಿಲ್ಲ ಹಾಗೂ ಈಗಲೂ ಅವರು ಧೈರ್ಯಗುಂದದೆ ಮುಂದುವರೆಯುವರು. ತಮ್ಮ ನಂಬಿಕೆಗಳಿಗೆ ಎಂದಿಗೂ ಬದ್ಧರಾಗಿರುವ ಅವರ ಅನನ್ಯತೆಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ”

(ಕೃಪೆ: ಮುಂಬೈ ರೈಸಸ್ ಟು ಸೇವ್ ಡೆಮಾಕ್ರಸಿ)

ಅನುವಾದ: ರಾಜಶೇಖರ ಅಕ್ಕಿ


ಇದನ್ನೂ ಓದಿ: ವಿದ್ಯಾರ್ಥಿಗಳ ನೆಚ್ಚಿನ, ಜನಪ್ರಿಯ ಪ್ರಾಧ್ಯಾಪಕ ಡಾ. ಹನಿ ಬಾಬು ಬಂಧನದಲ್ಲಿ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...