ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಳ್ಲಿ ವೈರಲ್ ಆಗಿ, ಜನರಿಂದ ನಿಂದನೆ, ಟ್ರೋಲ್ ಗಳನ್ನು ಸಹಿಸಲಾಗದೆ 27ವರ್ಷದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ನಡೆದಿದೆ.
ಅಕ್ಟೋಬರ್ 30 ರಂದು 27ವರ್ಷದ ಮಹೇಶ್ ಅಧೆ ಎಂಬ ಯುವಕ ಛತ್ರಪತಿ ಸಂಭಾಜಿ ಮಹಾರಾಜ್ ರೈಲು ನಿಲ್ದಾಣದ ಬಳಿ ಮೂತ್ರವಿಸರ್ಜನೆ ಮಾಡಿತ್ತಿದ್ದ ವಿಡಿಯೋವನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದರು. ತನ್ನ ತಪ್ಪಿನ ಅರಿವಾಗುತ್ತಿದ್ದಂತೆಯೇ ಮಹೇಶ್ ಅಧೆ ಮತ್ತು ಆತನ ಸ್ನೇಹಿತ ವಿಡಿಯೋ ಮಾಡಿ, ಸಾರ್ವಜನಿಕರಲ್ಲಿ ಕ್ಷಮೆ ಕೋರಿದ್ದರು.
ಈ ವಿಡಿಯೋ ಜೊತೆಗೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ಸಹ ಮತ್ತಷ್ಟು ವೈರಲ್ ಆಗಿ ಆನ್ ಲೈನ್ ಕಿರುಕುಳ, ಟ್ರೋಲ್ ನಿಂದನೆಗಳು ಹೆಚ್ಚಾಗಿವೆ. ಜೊತೆಗೆ ಛತ್ರಪತಿ ಸಂಭಾಜಿ ಮಹಾರಾಜ್ ನಾಮಫಲಕದ ಬಳಿ ಮೂತ್ರ ಮಾಡಲಾಗಿದೆ ಎಂಬ ಕಾರಣಕ್ಕೆ ಆತನಿಗೆ ಬೆದರಿಕೆ ಕರೆಗಳು ಬರುವುದಕ್ಕೂ ಪ್ರಾರಂಭವಾಗಿದ್ದವು ಇದನ್ನು ಯುವಕ ಮನೆಯವರ ಬಳಿಯೂ ಹೇಳಿಕೊಂಡಿದ್ದ. ನಿಂದನೆಗಳು ಹೆಚ್ಚಾದಂತೆ ಅದನ್ನು ತಡೆಯಲಾಗದೇ ಯುವಕ ಬೆಳ್ಳಂಬೆಳಿಗ್ಗೆ ಮನೆಯಿಂದ ಹೊರ ಹೋಗಿದ್ದ ಎಷ್ಟೇ ಸಮಯವಾದರೂ ವಾಪಸ್ಸಾಗದೇ ಇದ್ದಾಗ ಆತನ ಕುಟುಂಬದವರು ಹುಡುಕಿದ್ದಾರೆ. ಈ ವೇಳೆ ಬಾವಿಯೊಂದರಲ್ಲಿ ಆತನ ಶವ ಪತ್ತೆಯಾಗಿದೆ.
ಮಹೇಶ್ ಅಧೇ ಅವರ ಸೋದರ ಸಂಬಂಧಿ ಅಖಿಲೇಶ್ ನೀಡಿದ ದೂರಿನ ಮೇರೆಗೆ, ಪೊಲೀಸರು ಬುಧವಾರ ತಡರಾತ್ರಿ ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 3(5) (ಸಾಮಾನ್ಯವೀಡಿಯೊವನ್ನು ಪ್ರಸಾರ ಮಾಡಿದ ಮತ್ತು ಬೆದರಿಕೆ ಹಾಕಿದ) ಏಳು ಜನರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ವಿಚಾರ ತಡವಾಗಿ ಬೆಳಕಿಗೆ ಬಂದಿದೆ.


