Homeಚಳವಳಿಬಹುಜನ ಚಳವಳಿಗೆ ಬರಹಗಳ ಮಾರ್ಗ ತೋರಿದ ವಿಜಯ ಮಹೇಶ್‌: ಒಡನಾಡಿಗಳ ನುಡಿನಮನ

ಬಹುಜನ ಚಳವಳಿಗೆ ಬರಹಗಳ ಮಾರ್ಗ ತೋರಿದ ವಿಜಯ ಮಹೇಶ್‌: ಒಡನಾಡಿಗಳ ನುಡಿನಮನ

- Advertisement -
- Advertisement -

ಕರ್ನಾಟಕದಲ್ಲಿ ಬಹುಜನ ಚಳವಳಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದ ಚಿಂತಕಿ, ಸಂಶೋಧಕಿ ಎಚ್.ಕೆ.ವಿಜಯರವರು ಅನಾರೋಗ್ಯದ ಕಾರಣದಿಂದ ಸೆಪ್ಟಂಬರ್ 05ರ ಭಾನುವಾರ ರಾತ್ರಿ ಕೊನೆಯುಸಿರೆಳಿದಿದ್ದಾರೆ.

ಅವರು ಸೇರಿದಂತೆ ಹಲವು ಜನರ ಶ್ರಮದಿಂದ ರೂಪಿತವಾಗಿದ್ದ ಬಹುಜನ ವಿದ್ಯಾರ್ಥಿ ಚಳವಳಿಯಿಂದಾಗಿ ಹೊಸ ತಲೆಮಾರಿನ ಬರಹಗಾರರು ಹುಟ್ಟಿಕೊಂಡರು. ಹೊಸ ರೀತಿಯ ಚಳವಳಿಯ ಹಾಡುಗಳು ಚಾಲ್ತಿಗೆ ಬಂದವು. ಅಂಬೇಡ್ಕರ್- ಗಾಂಧಿ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ಹೊಸ ಚರ್ಚೆಗಳು ಮುನ್ನಲೆಗೆ ಬಂದವು.

ಸರ್ಕಾರಿ ಉದ್ಯೋಗವನ್ನು ಬಿಟ್ಟು, ಚಳವಳಿಗೆ ಕಾಲಿಟ್ಟಿದ್ದ ಎನ್.ಮಹೇಶ್ ಹೊಸ ಭರವಸೆಯಾಗಿ ಹೊಮ್ಮಿದ್ದರು. ಎನ್.ಮಹೇಶ್‌ ಅವರಿಗೆ ಸದಾ ಬೆನ್ನೆಲುಬಾಗಿ ನಿಂತು, ಬಹುಜನ ಚಳವಳಿ ಬಲವಾಗಲು ಕಾರಣರಾಗಿ, ದಲಿತ ವಿದ್ಯಾರ್ಥಿ ಸಮೂಹವನ್ನು ತನ್ನ ಮಕ್ಕಳಂತೆ ಪೊರೆದವರು ವಿಜಯ ಮಹೇಶ್ ಎಂದು ನೆನೆಯುತ್ತಾರೆ ಅವರ ಒಡನಾಡಿಗಳು.

ಎಚ್.ಕೆ.ವಿಜಯ ಹಾಗೂ ಎನ್.ಮಹೇಶ್‌ ಪ್ರೀತಿಸಿ ಮದುವೆಯಾದವರು. ಬೆಂಗಳೂರು ವಿವಿಯ ವಿದ್ಯಾರ್ಥಿಗಳಾಗಿದ್ದ ಈ ಇಬ್ಬರು, ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದರು. ಮುಂದೆ ಎನ್.ಮಹೇಶ್‌ ಅವರು ಕೆಎಎಸ್‌ ಅಧಿಕಾರಿಯಾದರು. ವಿಜಯ ಅವರು ಅಪೆಕ್ಸ್ ಬ್ಯಾಂಕ್ ನಲ್ಲಿ ಕೆಲಸದಲ್ಲಿದ್ದರು. ಕೆಲಸವನ್ನು ಬಿಟ್ಟು ಎನ್.ಮಹೇಶ್, ಚಳವಳಿಗೆ ಕಾಲಿಡಲು ಪ್ರೋತ್ಸಾಹಿಸಿದ ವಿಜಯ ಮಹೇಶ್, ಬಹುಜನ ಚಳವಳಿಯ ಹುಡುಗರಿಗೆ “ವಿಜಯಕ್ಕ” ಎಂದೇ ಚಿರಪರಿಚಿತರಾದರು.

ಚಳವಳಿಯ ಭಾಗವಾಗಿದ್ದ “ಸಮಾಜ ಪರಿವರ್ತನಾ” ಹಾಗೂ “ಪ್ರಬುದ್ಧ ಭಾರತ” ಪತ್ರಿಕೆಗಳಲ್ಲಿ ವಿಜಯ ಅವರ ಲೇಖನಗಳು ಪ್ರಕಟವಾಗಿದ್ದವು. ಇವರು ಬರೆದ ವಿಚಾರಗಳು ‘ಮೂಲನಿವಾಸಿ ಬಹುಜನರ ಇತಿಹಾಸ’, ‘ಅಂಬೇಡ್ಕರ್ ಮತ್ತು ಚರಿತ್ರೆಯ ಮರುಶೋಧ’, ‘ಹಿಂದುತ್ವದ ಗಾಂಧಿ ಮತ್ತು ಮಾನವತೆಯ ಅಂಬೇಡ್ಕರ್’, ‘ವಿಜಯಕ್ಕನ ವಿಚಾರಲಹರಿ’, ‘ನೆಲದ ಮಾತು’, ‘ಆಧುನಿಕ ಪುಷ್ಯಮಿತ್ರ’, ‘ಅಂದದ ಮಗುವಿಗೆ ಚಂದದ ಹೆಸರು’ ಕೃತಿಗಳಾಗಿ ಪ್ರಕಟವಾಗಿವೆ.

“ಬಹುಜನ ವಿದ್ಯಾರ್ಥಿ ಸಂಘಟನೆಗೆ ವಿಜಯ ಮಹೇಶ್‌ ಅವರ ಬರಹಗಳು ಪ್ರೋತ್ಸಾಹವನ್ನು ನೀಡುತ್ತಿದ್ದವು. ಸಮಾಜ ಪರಿವರ್ತನಾ, ಪ್ರಬುದ್ಧ ಭಾರತಕ್ಕೆ ನಿರಂತರವಾಗಿ ಬರೆಯುತ್ತಿದ್ದರು. ನಾವೆಲ್ಲ ಅವರ ಬರಹಗಳಿಂದ ಸ್ಫೂರ್ತಿ ಪಡೆದೆವು. ಎಷ್ಟೇ ಜನ ಕಾರ್ಯಕರ್ತರು ಬಂದರೂ ಸ್ವತಃ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದರು. ಎನ್‌.ಮಹೇಶ್ ಅವರು ಈ ವಿಚಾರದಲ್ಲಿ ಭಾಗ್ಯವಂತರು. ಎಲ್ಲರಿಗೂ ಇಂತಹ ಪತ್ನಿ ಸಿಗುವುದಿಲ್ಲ. ಮನೆಯಲ್ಲಿ ಸಂಪೂರ್ಣ ಸಹಕಾರ ಸಿಕ್ಕಿದ್ದರಿಂದಲೇ ಚಳವಳಿಗೆ ಹೋಗಲು ಸಾಧ್ಯವಾಯಿತು. ಬಹುಜನ ಚಳವಳಿಗೆ ಎನ್.ಮಹೇಶ್ ಅರ್ಧ ಶಕ್ತಿಯಾಗಿದ್ದರೆ, ವಿಜಯ ಮಹೇಶ್ ಇನ್ನರ್ಧ ಶಕ್ತಿಯಾಗಿದ್ದರು” ಎನ್ನುತ್ತಾರೆ ಬರಹಗಾರ, ಸಂಘಟಕ ಡಾ.ಶಿವಕುಮಾರ್.

“ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್‌ ರಾಮಸ್ವಾಮಿ, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ, ಟಿಪ್ಪು ಸುಲ್ತಾನ್, ಕಾನ್ಶಿರಾಮ್, ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವರು ಬರೆಯುತ್ತಿದ್ದ ಲೇಖನಗಳು ಅಥೆಂಟಿಕ್‌ ಆಗಿರುತ್ತಿದ್ದವು. ಹೊಸ ತಲೆಮಾರಿಗೆ ಸ್ಫೂರ್ತಿಯನ್ನು ತುಂಬುತ್ತಿದ್ದರು. ನಾವೆಲ್ಲ ವಿಚಾರವಂತರಾಗಿದ್ದೇವೆ ಎಂದರೆ ಅದರ ಹಿಂದಿನ ಶಕ್ತಿ ವಿಜಯ ಮಹೇಶ್” ಎಂಬುದು ಅವರ ಅಭಿಪ್ರಾಯ.

“ನಾವು ಎಷ್ಟೋ ವಿದ್ಯಾರ್ಥಿಗಳು ವಿವಿಧ ವಿ.ವಿ.ಗಳಲ್ಲಿ ಸಂಶೋಧನೆ ಮಾಡಿದ್ದೇವೆ. ವಿಜಯ ಮಹೇಶ್ ಅವರ ಬರವಣಿಗೆಗಳೇ ಈ ಸಂಶೋಧನಾ ವಿದ್ಯಾರ್ಥಿಗಳಿಗೆ ಆಧಾರವಾಗಿದ್ದವು. ಶೋಷಿತರ ಕುರಿತು ಅತ್ಯಂತ ಖಚಿತವಾಗಿ ಬರೆಯುವ ಲೇಖಕಿ ಅವರರಾಗಿದ್ದರು. ನಾವೆಲ್ಲ ವಿಶ್ವವಿದ್ಯಾನಿಲಯಗಳಲ್ಲಿ ನೋಂದಾಯಿತ ಸಂಶೋಧಕರಾಗಿದ್ದರೆ, ವಿಜಯಕ್ಕ ನೋಂದಾಯಿತರಲ್ಲದ ಸಂಶೋಧಕರಾಗಿದ್ದರು” ಎಂದು ಅಭಿಪ್ರಾಯಪಡುತ್ತಾರೆ ಶಿವಕುಮಾರ್.

ಇದನ್ನೂ ಓದಿ: ಅವಕಾಶವಾದವನ್ನು ಸಿದ್ಧಾಂತವಾಗಿಸಿಕೊಂಡಾಗ ವಿಶ್ವಾಸ ಉಳಿಯುವ ಬಗೆ ಎಂತು?

ಕೈಬರಹದಲ್ಲಿದ್ದ ವಿಜಯ ಮಹೇಶ್ ಅವರ ಬರಹಗಳನ್ನು ಕೃತಿ ರೂಪಕ್ಕೆ ತರಲು ಶ್ರಮಿಸಿದವರಲ್ಲಿ ರಘೋತ್ತಮ ಹೊ.ಬ. ಅವರೂ ಒಬ್ಬರು. “ಸಮಾಜ ಪರಿವರ್ತನಾ ಪತ್ರಿಕೆಯ ಸಂಪಾದನೆಯನ್ನು ನೋಡಿಕೊಳ್ಳುತ್ತಿದ್ದ ಕೃಷ್ಣಮೂರ್ತಿ ಚಮರಂ ಒಂದಿಷ್ಟು ಲೇಖನಗಳನ್ನು ಸಂಗ್ರಹಿಸಿಕೊಟ್ಟಿದ್ದರು. ಮುಂದೆ ಪ್ರಬುದ್ಧ ಭಾರತ ಆರಂಭವಾದಾಗ ಅದರ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದೆ. ಹೀಗಾಗಿ ಅವರ ಹಲವು ಬರಹಗಳನ್ನು ನನ್ನ ಬಳಿ ಇದ್ದವು. ಅವುಗಳನ್ನು ಸಂಗ್ರಹಿಸಿ ಪುಸ್ತಕ ಪ್ರಕಟಿಸಿದ ಖುಷಿ ಇದೆ” ಎನ್ನುತ್ತಾರೆ ಹೊ.ಬ.

ಕಾನ್ಶಿ ಫೌಂಡೇಷನ್

“ಎನ್.ಮಹೇಶ್ ಮತ್ತು ವಿಜಯ ಅವರು ಕಾನ್ಶಿರಾಮ್ ಅವರ ಚಿಂತನೆಗಳಿಂದ ಪ್ರಭಾವಿತರಾದವರು. ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಅಧಿಕಾರ ಹಿಡಿದಿತ್ತು. ಹೋರಾಟಗಾರರಾದ ಗೋಪಿನಾಥ್, ಮೋಹನ್ ಕುಮಾರ್‌ ಅವರು 1992ರಲ್ಲಿ ಸಣ್ಣಮಟ್ಟದಲ್ಲಿ ಬಹುಜನ ಚಳವಳಿಯನ್ನು ಕಟ್ಟುತ್ತಿದ್ದರು. 1993ರಲ್ಲೇ ಭೀಮ್ ಮಾರ್ಚ್ ಹಮ್ಮಿಕೊಂಡಿದ್ದರು. ಮಹೇಶ್ ಅವರು ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದರೂ ಸರ್ಕಾರಿ ಉದ್ಯೋಗದಲ್ಲಿದ್ದರು. ಪತ್ನಿಯ ಪ್ರೋತ್ಸಾಹದಿಂದ ಕೆಲಸ ಬಿಟ್ಟರು. ಚಳವಳಿಯಲ್ಲಿ ಪೂರ್ಣ ತೊಡಗಿಸಿಕೊಂಡರು. 1998ರಲ್ಲಿ ಚುನಾವಣೆಯಲ್ಲಿ ನಿಂತರು. ಬಹುಜನ ಚಳವಳಿ ದೊಡ್ಡ ಮಟ್ಟದಲ್ಲಿ ಬೆಳೆಯಲು ವಿಜಯಾ ಅವರು ಕಾರಣ. ಅದ್ಭುತ ಓದುಗರಾಗಿದ್ದ ಅವರು, ಅಂಬೇಡ್ಕರ್ ಅವರ ಮೂಲ ಬರಹಗಳನ್ನೇ ಅಧ್ಯಯನ ಮಾಡಿ, ನಮಗೆಲ್ಲ ವಿಚಾರಗಳನ್ನು ತಿಳಿಸಿಕೊಟ್ಟರು” ಎಂದು ಸ್ಮರಿಸುತ್ತಾರೆ ರಘೋತ್ತಮ ಹೊ.ಬ.

ಕಾನ್ಶಿ ಫೌಂಡೇಷನ್‌ನಲ್ಲಿ ಅಂತ್ಯ ಸಂಸ್ಕಾರ

ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ ಮಹೇಶ್‌ ಅವರು ಭಾನುವಾರ ನಿಧನರಾದರು. ಅವರು ಬೆಂಗಳೂರಿನ ಬಳಿ ಕನಕಪುರದಲ್ಲಿ ಸ್ಥಾಪಿಸಿದ್ದ ಕಾನ್ಶಿ ಫೌಂಡೇಷನ್‌ನಲ್ಲಿ ಸೋಮವಾರ ಅವರ ಅಂತ್ಯ ಸಂಸ್ಕಾರ ನೆರವೇರಿತು.


ಇದನ್ನೂ ಓದಿ: ಭಾರತದ ಆರ್ಥಿಕತೆ – ಸುಧಾರಣಾಪೂರ್ವ ಮತ್ತು ಸುಧಾರಣೋತ್ತರ ಕಾಲಘಟ್ಟ; ಒಂದು ಮೌಲ್ಯಮಾಪನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...