Homeಚಳವಳಿಬಹುಜನ ಚಳವಳಿಗೆ ಬರಹಗಳ ಮಾರ್ಗ ತೋರಿದ ವಿಜಯ ಮಹೇಶ್‌: ಒಡನಾಡಿಗಳ ನುಡಿನಮನ

ಬಹುಜನ ಚಳವಳಿಗೆ ಬರಹಗಳ ಮಾರ್ಗ ತೋರಿದ ವಿಜಯ ಮಹೇಶ್‌: ಒಡನಾಡಿಗಳ ನುಡಿನಮನ

- Advertisement -
- Advertisement -

ಕರ್ನಾಟಕದಲ್ಲಿ ಬಹುಜನ ಚಳವಳಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದ ಚಿಂತಕಿ, ಸಂಶೋಧಕಿ ಎಚ್.ಕೆ.ವಿಜಯರವರು ಅನಾರೋಗ್ಯದ ಕಾರಣದಿಂದ ಸೆಪ್ಟಂಬರ್ 05ರ ಭಾನುವಾರ ರಾತ್ರಿ ಕೊನೆಯುಸಿರೆಳಿದಿದ್ದಾರೆ.

ಅವರು ಸೇರಿದಂತೆ ಹಲವು ಜನರ ಶ್ರಮದಿಂದ ರೂಪಿತವಾಗಿದ್ದ ಬಹುಜನ ವಿದ್ಯಾರ್ಥಿ ಚಳವಳಿಯಿಂದಾಗಿ ಹೊಸ ತಲೆಮಾರಿನ ಬರಹಗಾರರು ಹುಟ್ಟಿಕೊಂಡರು. ಹೊಸ ರೀತಿಯ ಚಳವಳಿಯ ಹಾಡುಗಳು ಚಾಲ್ತಿಗೆ ಬಂದವು. ಅಂಬೇಡ್ಕರ್- ಗಾಂಧಿ ನಡುವಿನ ಭಿನ್ನಾಭಿಪ್ರಾಯಗಳ ಕುರಿತು ಹೊಸ ಚರ್ಚೆಗಳು ಮುನ್ನಲೆಗೆ ಬಂದವು.

ಸರ್ಕಾರಿ ಉದ್ಯೋಗವನ್ನು ಬಿಟ್ಟು, ಚಳವಳಿಗೆ ಕಾಲಿಟ್ಟಿದ್ದ ಎನ್.ಮಹೇಶ್ ಹೊಸ ಭರವಸೆಯಾಗಿ ಹೊಮ್ಮಿದ್ದರು. ಎನ್.ಮಹೇಶ್‌ ಅವರಿಗೆ ಸದಾ ಬೆನ್ನೆಲುಬಾಗಿ ನಿಂತು, ಬಹುಜನ ಚಳವಳಿ ಬಲವಾಗಲು ಕಾರಣರಾಗಿ, ದಲಿತ ವಿದ್ಯಾರ್ಥಿ ಸಮೂಹವನ್ನು ತನ್ನ ಮಕ್ಕಳಂತೆ ಪೊರೆದವರು ವಿಜಯ ಮಹೇಶ್ ಎಂದು ನೆನೆಯುತ್ತಾರೆ ಅವರ ಒಡನಾಡಿಗಳು.

ಎಚ್.ಕೆ.ವಿಜಯ ಹಾಗೂ ಎನ್.ಮಹೇಶ್‌ ಪ್ರೀತಿಸಿ ಮದುವೆಯಾದವರು. ಬೆಂಗಳೂರು ವಿವಿಯ ವಿದ್ಯಾರ್ಥಿಗಳಾಗಿದ್ದ ಈ ಇಬ್ಬರು, ಕಾಲೇಜು ದಿನಗಳಿಂದಲೂ ಪ್ರೀತಿಸುತ್ತಿದ್ದರು. ಮುಂದೆ ಎನ್.ಮಹೇಶ್‌ ಅವರು ಕೆಎಎಸ್‌ ಅಧಿಕಾರಿಯಾದರು. ವಿಜಯ ಅವರು ಅಪೆಕ್ಸ್ ಬ್ಯಾಂಕ್ ನಲ್ಲಿ ಕೆಲಸದಲ್ಲಿದ್ದರು. ಕೆಲಸವನ್ನು ಬಿಟ್ಟು ಎನ್.ಮಹೇಶ್, ಚಳವಳಿಗೆ ಕಾಲಿಡಲು ಪ್ರೋತ್ಸಾಹಿಸಿದ ವಿಜಯ ಮಹೇಶ್, ಬಹುಜನ ಚಳವಳಿಯ ಹುಡುಗರಿಗೆ “ವಿಜಯಕ್ಕ” ಎಂದೇ ಚಿರಪರಿಚಿತರಾದರು.

ಚಳವಳಿಯ ಭಾಗವಾಗಿದ್ದ “ಸಮಾಜ ಪರಿವರ್ತನಾ” ಹಾಗೂ “ಪ್ರಬುದ್ಧ ಭಾರತ” ಪತ್ರಿಕೆಗಳಲ್ಲಿ ವಿಜಯ ಅವರ ಲೇಖನಗಳು ಪ್ರಕಟವಾಗಿದ್ದವು. ಇವರು ಬರೆದ ವಿಚಾರಗಳು ‘ಮೂಲನಿವಾಸಿ ಬಹುಜನರ ಇತಿಹಾಸ’, ‘ಅಂಬೇಡ್ಕರ್ ಮತ್ತು ಚರಿತ್ರೆಯ ಮರುಶೋಧ’, ‘ಹಿಂದುತ್ವದ ಗಾಂಧಿ ಮತ್ತು ಮಾನವತೆಯ ಅಂಬೇಡ್ಕರ್’, ‘ವಿಜಯಕ್ಕನ ವಿಚಾರಲಹರಿ’, ‘ನೆಲದ ಮಾತು’, ‘ಆಧುನಿಕ ಪುಷ್ಯಮಿತ್ರ’, ‘ಅಂದದ ಮಗುವಿಗೆ ಚಂದದ ಹೆಸರು’ ಕೃತಿಗಳಾಗಿ ಪ್ರಕಟವಾಗಿವೆ.

“ಬಹುಜನ ವಿದ್ಯಾರ್ಥಿ ಸಂಘಟನೆಗೆ ವಿಜಯ ಮಹೇಶ್‌ ಅವರ ಬರಹಗಳು ಪ್ರೋತ್ಸಾಹವನ್ನು ನೀಡುತ್ತಿದ್ದವು. ಸಮಾಜ ಪರಿವರ್ತನಾ, ಪ್ರಬುದ್ಧ ಭಾರತಕ್ಕೆ ನಿರಂತರವಾಗಿ ಬರೆಯುತ್ತಿದ್ದರು. ನಾವೆಲ್ಲ ಅವರ ಬರಹಗಳಿಂದ ಸ್ಫೂರ್ತಿ ಪಡೆದೆವು. ಎಷ್ಟೇ ಜನ ಕಾರ್ಯಕರ್ತರು ಬಂದರೂ ಸ್ವತಃ ತಾಯಿಯ ಹಾಗೆ ನೋಡಿಕೊಳ್ಳುತ್ತಿದ್ದರು. ಎನ್‌.ಮಹೇಶ್ ಅವರು ಈ ವಿಚಾರದಲ್ಲಿ ಭಾಗ್ಯವಂತರು. ಎಲ್ಲರಿಗೂ ಇಂತಹ ಪತ್ನಿ ಸಿಗುವುದಿಲ್ಲ. ಮನೆಯಲ್ಲಿ ಸಂಪೂರ್ಣ ಸಹಕಾರ ಸಿಕ್ಕಿದ್ದರಿಂದಲೇ ಚಳವಳಿಗೆ ಹೋಗಲು ಸಾಧ್ಯವಾಯಿತು. ಬಹುಜನ ಚಳವಳಿಗೆ ಎನ್.ಮಹೇಶ್ ಅರ್ಧ ಶಕ್ತಿಯಾಗಿದ್ದರೆ, ವಿಜಯ ಮಹೇಶ್ ಇನ್ನರ್ಧ ಶಕ್ತಿಯಾಗಿದ್ದರು” ಎನ್ನುತ್ತಾರೆ ಬರಹಗಾರ, ಸಂಘಟಕ ಡಾ.ಶಿವಕುಮಾರ್.

“ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್‌ ರಾಮಸ್ವಾಮಿ, ಜ್ಯೋತಿ ಬಾ ಫುಲೆ, ಸಾವಿತ್ರಿ ಬಾ ಫುಲೆ, ಟಿಪ್ಪು ಸುಲ್ತಾನ್, ಕಾನ್ಶಿರಾಮ್, ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವರು ಬರೆಯುತ್ತಿದ್ದ ಲೇಖನಗಳು ಅಥೆಂಟಿಕ್‌ ಆಗಿರುತ್ತಿದ್ದವು. ಹೊಸ ತಲೆಮಾರಿಗೆ ಸ್ಫೂರ್ತಿಯನ್ನು ತುಂಬುತ್ತಿದ್ದರು. ನಾವೆಲ್ಲ ವಿಚಾರವಂತರಾಗಿದ್ದೇವೆ ಎಂದರೆ ಅದರ ಹಿಂದಿನ ಶಕ್ತಿ ವಿಜಯ ಮಹೇಶ್” ಎಂಬುದು ಅವರ ಅಭಿಪ್ರಾಯ.

“ನಾವು ಎಷ್ಟೋ ವಿದ್ಯಾರ್ಥಿಗಳು ವಿವಿಧ ವಿ.ವಿ.ಗಳಲ್ಲಿ ಸಂಶೋಧನೆ ಮಾಡಿದ್ದೇವೆ. ವಿಜಯ ಮಹೇಶ್ ಅವರ ಬರವಣಿಗೆಗಳೇ ಈ ಸಂಶೋಧನಾ ವಿದ್ಯಾರ್ಥಿಗಳಿಗೆ ಆಧಾರವಾಗಿದ್ದವು. ಶೋಷಿತರ ಕುರಿತು ಅತ್ಯಂತ ಖಚಿತವಾಗಿ ಬರೆಯುವ ಲೇಖಕಿ ಅವರರಾಗಿದ್ದರು. ನಾವೆಲ್ಲ ವಿಶ್ವವಿದ್ಯಾನಿಲಯಗಳಲ್ಲಿ ನೋಂದಾಯಿತ ಸಂಶೋಧಕರಾಗಿದ್ದರೆ, ವಿಜಯಕ್ಕ ನೋಂದಾಯಿತರಲ್ಲದ ಸಂಶೋಧಕರಾಗಿದ್ದರು” ಎಂದು ಅಭಿಪ್ರಾಯಪಡುತ್ತಾರೆ ಶಿವಕುಮಾರ್.

ಇದನ್ನೂ ಓದಿ: ಅವಕಾಶವಾದವನ್ನು ಸಿದ್ಧಾಂತವಾಗಿಸಿಕೊಂಡಾಗ ವಿಶ್ವಾಸ ಉಳಿಯುವ ಬಗೆ ಎಂತು?

ಕೈಬರಹದಲ್ಲಿದ್ದ ವಿಜಯ ಮಹೇಶ್ ಅವರ ಬರಹಗಳನ್ನು ಕೃತಿ ರೂಪಕ್ಕೆ ತರಲು ಶ್ರಮಿಸಿದವರಲ್ಲಿ ರಘೋತ್ತಮ ಹೊ.ಬ. ಅವರೂ ಒಬ್ಬರು. “ಸಮಾಜ ಪರಿವರ್ತನಾ ಪತ್ರಿಕೆಯ ಸಂಪಾದನೆಯನ್ನು ನೋಡಿಕೊಳ್ಳುತ್ತಿದ್ದ ಕೃಷ್ಣಮೂರ್ತಿ ಚಮರಂ ಒಂದಿಷ್ಟು ಲೇಖನಗಳನ್ನು ಸಂಗ್ರಹಿಸಿಕೊಟ್ಟಿದ್ದರು. ಮುಂದೆ ಪ್ರಬುದ್ಧ ಭಾರತ ಆರಂಭವಾದಾಗ ಅದರ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದೆ. ಹೀಗಾಗಿ ಅವರ ಹಲವು ಬರಹಗಳನ್ನು ನನ್ನ ಬಳಿ ಇದ್ದವು. ಅವುಗಳನ್ನು ಸಂಗ್ರಹಿಸಿ ಪುಸ್ತಕ ಪ್ರಕಟಿಸಿದ ಖುಷಿ ಇದೆ” ಎನ್ನುತ್ತಾರೆ ಹೊ.ಬ.

ಕಾನ್ಶಿ ಫೌಂಡೇಷನ್

“ಎನ್.ಮಹೇಶ್ ಮತ್ತು ವಿಜಯ ಅವರು ಕಾನ್ಶಿರಾಮ್ ಅವರ ಚಿಂತನೆಗಳಿಂದ ಪ್ರಭಾವಿತರಾದವರು. ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಅಧಿಕಾರ ಹಿಡಿದಿತ್ತು. ಹೋರಾಟಗಾರರಾದ ಗೋಪಿನಾಥ್, ಮೋಹನ್ ಕುಮಾರ್‌ ಅವರು 1992ರಲ್ಲಿ ಸಣ್ಣಮಟ್ಟದಲ್ಲಿ ಬಹುಜನ ಚಳವಳಿಯನ್ನು ಕಟ್ಟುತ್ತಿದ್ದರು. 1993ರಲ್ಲೇ ಭೀಮ್ ಮಾರ್ಚ್ ಹಮ್ಮಿಕೊಂಡಿದ್ದರು. ಮಹೇಶ್ ಅವರು ಚಳವಳಿಯಲ್ಲಿ ಪಾಲ್ಗೊಳ್ಳುತ್ತಿದ್ದರೂ ಸರ್ಕಾರಿ ಉದ್ಯೋಗದಲ್ಲಿದ್ದರು. ಪತ್ನಿಯ ಪ್ರೋತ್ಸಾಹದಿಂದ ಕೆಲಸ ಬಿಟ್ಟರು. ಚಳವಳಿಯಲ್ಲಿ ಪೂರ್ಣ ತೊಡಗಿಸಿಕೊಂಡರು. 1998ರಲ್ಲಿ ಚುನಾವಣೆಯಲ್ಲಿ ನಿಂತರು. ಬಹುಜನ ಚಳವಳಿ ದೊಡ್ಡ ಮಟ್ಟದಲ್ಲಿ ಬೆಳೆಯಲು ವಿಜಯಾ ಅವರು ಕಾರಣ. ಅದ್ಭುತ ಓದುಗರಾಗಿದ್ದ ಅವರು, ಅಂಬೇಡ್ಕರ್ ಅವರ ಮೂಲ ಬರಹಗಳನ್ನೇ ಅಧ್ಯಯನ ಮಾಡಿ, ನಮಗೆಲ್ಲ ವಿಚಾರಗಳನ್ನು ತಿಳಿಸಿಕೊಟ್ಟರು” ಎಂದು ಸ್ಮರಿಸುತ್ತಾರೆ ರಘೋತ್ತಮ ಹೊ.ಬ.

ಕಾನ್ಶಿ ಫೌಂಡೇಷನ್‌ನಲ್ಲಿ ಅಂತ್ಯ ಸಂಸ್ಕಾರ

ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯ ಮಹೇಶ್‌ ಅವರು ಭಾನುವಾರ ನಿಧನರಾದರು. ಅವರು ಬೆಂಗಳೂರಿನ ಬಳಿ ಕನಕಪುರದಲ್ಲಿ ಸ್ಥಾಪಿಸಿದ್ದ ಕಾನ್ಶಿ ಫೌಂಡೇಷನ್‌ನಲ್ಲಿ ಸೋಮವಾರ ಅವರ ಅಂತ್ಯ ಸಂಸ್ಕಾರ ನೆರವೇರಿತು.


ಇದನ್ನೂ ಓದಿ: ಭಾರತದ ಆರ್ಥಿಕತೆ – ಸುಧಾರಣಾಪೂರ್ವ ಮತ್ತು ಸುಧಾರಣೋತ್ತರ ಕಾಲಘಟ್ಟ; ಒಂದು ಮೌಲ್ಯಮಾಪನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...