Homeಅಂಕಣಗಳುಹನಿಮೂನ್ ಸಾಕು ತಗೋ ತಲಾಕು

ಹನಿಮೂನ್ ಸಾಕು ತಗೋ ತಲಾಕು

- Advertisement -
- Advertisement -

ಆಘಾತವಾಣಿ ವಾರ್ತೆಗಳು, ಕೇಳುಗರಿಗೆಲ್ಲ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.

ಆಗಿದ್ದಾಗ್ಲಿ ಹೋಗಿದ್ದೋಗ್ಲಿ, ಆರು ಮೂರಾಗ್ಲಿ, ಮೂರು ಮುವ್ವತ್ತಾಗ್ಲಿ, ನಾನೂ ಕೆಲ್ಸ ಮಾಡಲ್ಲ, ಬೇರೇಯವ್ರಿಗೂ ಕೆಲ್ಸ ಮಾಡೋಕೆ ಬಿಡಲ್ಲ ಅಂತ ವೀರಪ್ರತಿಜ್ಞೆ ಮಾಡಿರೋ ಪಕೋಡೇಂದ್ರ ಕುಂಡಾಲಯ್ಯನ ಕಡೆಯಿಂದ ಹೊಸ ಸುದ್ದಿಯೊಂದು ಬಂದಿದೆ. ವರ್ಷಗಳ ಹಿಂದೆ ದೆಹಲಿ ಚುನಾವಣೆಯಲ್ಲಿ ಕೇಜ್ರಿವಾಲ್ ಪಕ್ಷದಿಂದ ಮಕಮೂತಿಗೆ ಇಕ್ಕಿಸಿಕೊಂಡು ಮಣ್ಣುಮುಕ್ಕಿದ್ದ ಪಕೋಡೇಂದ್ರರವರು ಕೇಜ್ರಿವಾಲ್ ತಲೆ ಮೇಲೆ ಲೆಫ್ಟಿನೆಂಟ್ ಗೌರ್ನರ್ ಎಂಬ ಶೋಕೇಸ್ ಪೀಸೊಂದನ್ನು ಕುಕ್ಕಿದ್ದನು. ಈ ಲಡಾಸಿ ಗೌರ್ನರ್ ದೆಹಲಿಯ ಐಎಎಸ್ ಅಧಿಕಾರಿಗಳ ತಲೆಸವರಿ ಒಳಕ್ಕೆಳೆದುಕೊಂಡು ತಾನಿರುವ ಸರ್ಕಾರದ ವಿರುದ್ಧವೇ ಸ್ಟ್ರೈಕು ಮಾಡಿಸಲು ಹಚ್ಚಿದ್ದಾರೆಂದು ಸುಪ್ತಚರ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಪ್ರತಿಯಾಗಿ ಕೇಜ್ರಿವಾಲ್ ತಮ್ಮ ತಂಡದೊಂದಿಗೆ ಲೆಫ್ಟಿನೆಂಟ್ ಗೌರ್ನರ್ ಕಚೇರಿಯೊಳಗೇ ಮೊಕ್ಕಾಂ ಹೂಡಿ ಧರಣಿ ಕೂತು ವಾರ ಕಳೆದರೂ ಚೇಂಬರಿನಿಂದ ಹೊರಬರದೆ ಟೇಬಲ್ ಕೆಳಗೆ ಅವಿತು ಕುಳಿತಿದ್ದ ಆತನು ದೆಹಲಿಯ ಜನರು ಕೈಗೆ ಪ್ಯಾರಗಾನ್ ಚಡಾವು ಕಳಚಿಕೊಳ್ಳುತ್ತಿದ್ದಂತೆ ಆಫೀಸಿಂದ ಈಚೆ ಬಂದು ಕೇಜ್ರಿವಾಲ್ ಬೇಡಿಕೆಗಳಿಗೆ ಸೈನ್ ಹಾಕಿ ಮತ್ತೆ ಹೋಗಿ ಟೇಬಲ್ ಕೆಳಗೆ ಅವಿತುಕೊಂಡಿದ್ದಾನೆಂದು ವರದಿಯಾಗಿದೆ.
****
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಶ್ಮೀರದಲ್ಲಿ ಮೂರು ಮುಕ್ಕಾಲು ಸೀಟು ಪಡೆದು ಕಾಶ್ಮೀರ ಪ್ರತ್ಯೇಕತಾವಾದಿ ಪಿಡಿಪಿ ಪಕ್ಷದ ಜೊತೆ ಸೇರಿ ಸರ್ಕಾರ ರಚಿಸಿದ್ದ ಬ್ಲೂಜೆಪಿ ಪಕ್ಷದ ವತಿಯಿಂದ ಹೊಸ ನ್ಯೂಸೊಂದು ಎಗರಿ ಬಂದಿದೆ. ಪುಡಿಪುಕ್ಕ ಸೀಟುಗಳನ್ನು ಕಂಕುಳಿಗಿಟ್ಟುಕೊಂಡು “ ಪ್ರೀತ್ಸೇ ಪ್ರೀತ್ಸೇ, ಮೂರೂ ಬಿಟ್ಟು ನನ್ನೇ ಪ್ರೀತ್ಸೇ” ಅಂತ ಈ ಕಡೆಯಿಂದ ಪಿಡಿಪಿ ಪಕ್ಷದ ಸೊಂಟ ಗಿಲ್ಲಿದಾಗ, ಆ ಕಡೆಯಿಂದ “ ಆಜಾ ಮೆರಿ ಗಾಡಿ ಮೇ ಬೈಟ್ ಜಾ, ಆಜಾ ಮೆರಿ ಗಾಡಿ ಮೇ ಬೈಟ್ ಜಾ” ಅನ್ನೋ ರೆಸ್ಪಾನ್ಸ್ ಬಂದಿತ್ತು. ನಂತ್ರ ಇಬ್ಬರೂ ಸೇರಿ ಕಾಶ್ಮೀರದಲ್ಲಿ ಕಲಬೆರಕೆ ಸರ್ಕಾರ ರಚಿಸಿ ಒಬ್ಬರ ಸೊಂಟ ಒಬ್ಬರು ಹಿಡಿದು “ ಬೆರಕೆ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ, ಹೂ ಅಂತೀಯ, ಉಹೂ ಅಂತೀಯ” ಅಂತ ಡ್ಯಾನ್ಸ್ ಮಾಡ್ತಿದ್ದ ಎರಡೂ ಪಕ್ಷಗಳು ಈಗ ಮಕಮಕ ಪರಚಾಡಿಕೊಂಡು ದಿಢೀರ್ ಡೈವೋರ್ಸ್ ತಗೊಂಡಿವೆ.
****
ಈ ಢಮಾರ್ ಡೈವೋರ್ಸಿಗೆ ಕಾರಣಗಳೇನೆಂದು ಕೆದಕಿದಾಗ ಕುತೂಹಲಕಾರಿ ಕಿತಾಪತಿ ಮಾಹಿತಿಗಳು ನಮಗೆ ಲಭ್ಯವಾಗಿವೆ. ದೇಶದ ತುಂಬ ಕಾಶ್ಮೀರಿ ಟೆರರಿಸ್ಟ್‍ಗಳ ಬಗ್ಗೆ ಪುಯ್ಯೋ ಪುಯ್ಯೋ ಎಂದು ಪುಂಗಿ ಊದುವ ಬ್ಲೂಜೆಪಿ ಪಕ್ಷವು, ಈ ಪ್ರತ್ಯೇಕತಾವಾದಿಗಳ ಜೊತೆಗೆ ಕಾಶ್ಮೀರದಲ್ಲಿ ತಮ್ಮದೇ ಸರ್ಕಾರದಲ್ಲಿ ಕುಸುಕು ಮುಸುಕು ನಡೆಸುತ್ತಿದ್ದುದು ಎಲ್ಲರಿಗು ತಿಳಿದ ಸತ್ಯ. ಪೊಲೀಸರು-ಮಿಲಿಟರಿಯವರು ಅರೆಸ್ಟ್ ಮಾಡಿದ ಟೆರರಿಸ್ಟುಗಳ ಕೈಗೆ ಹೂಗುಚ್ಛ ಕೊಟ್ಟು ಜೈಲಿಂದ ಬಿಡಿಸಿ ಕಳಿಸುತ್ತಿದ್ದ ಇದೇ ಬೆರಕೆ ಪಕ್ಷದವರು ಬೇರೆ ರಾಜ್ಯಗಳಲ್ಲಿ ಇದಕ್ಕೆ ಉಲ್ಟಾ ಭಾಷಣಗಳನ್ನು ಬೊಗಳುತ್ತ ಚಿಲ್ರೆಕಾಸು ದುಡಿದು ಹೊಟ್ಟೆ ಹೊರೆಯುತ್ತಿದ್ದರು. ಅದೇನಾಯ್ತೋ ಏನೋ ಪಿಡಿಪಿ ಪಕ್ಷಕ್ಕೆ ಬ್ಲೂಜೆಪಿ ಜೊತೆಗಿನ ಕುಸುಕು ಮುಸುಕು ಪ್ರಣಯ ಸಾಕಾಗಿ ಬ್ಲೂಜೆಪಿಯನ್ನು ಸರ್ಕಾರದಿಂದ ಒದ್ದೋಡಿಸುವ ಪ್ರಯತ್ನದಲ್ಲಿತ್ತು. ಅಷ್ಟರಲ್ಲಿ ತನ್ನ ಲಂಗೋಟಿ-ಪುಟಗೋಸಿಯನ್ನು ಗಂಟು ಕಟ್ಟಿಕೊಂಡು ತಲೆ ಮೇಲೆ ಟವೆಲ್ಲು ಹಾಕಿಕೊಂಡ ಬ್ಲೂಜೆಪಿಯು ತಾನೇ ಸರ್ಕಾರದಿಂದ ಈಚೆಗೆ ಬರುತ್ತಿದ್ದೇನೆಂಬ ಡ್ರಾಮಾ ಆಡಿ ಮುಖ ಉಳಿಸಿಕೊಳ್ಳಲು ಪ್ರಯತ್ನಿಸಿದೆಯೆಂದು ಬಲ್ಲ ಮೂಲಗಳು ಬೊಂಬಡ ಹೊಡೆಯುತ್ತ ತಿಳಿಸಿವೆ.
****
ಪ್ರಸ್ತುತ ಮಾಟ-ಮಂತ್ರ ಕವಡೆಶಾಸ್ತ್ರ ತಜ್ಞರ ರಾಜ್ಯಮಟ್ಟದ ಸಮ್ಮೇಳನದಂತೆ ಕಾಣುತ್ತಿರುವ ಕರ್ನಾಟಕದ ‘ಮಿಕ್ಸ್ ಮಸಾಲ ಸರ್ಕಾರ’ದ ಕಡೆಯಿಂದ ಹೊಸ “ಮಮ್ಮಿ ಮೆಟ್ಟು” ವರದಿಯೊಂದು ಕುಪ್ಪಳಿಸುತ್ತ ಬಂದಿದೆ. ಪ್ರೈಮರಿಶಾಲೆಯ ಮಂತ್ರಿಯೊಬ್ಬರು ಮದನಪಲ್ಲಿ ಮೂಲದ ರೇಪಿಸ್ಟನೊಬ್ಬನ ಪತ್ನಿ ಹಾಗೂ ಮಾಜಿಸುಂದರಿ ಮತ್ತು ಹಾಲಿ “ಮಮ್ಮಿ ಭಗವಾನ್” ದೇವಿಯ ಮರದ ಎಕ್ಕಡಗಳನ್ನು ಸ್ಲೋಮೋಷನ್ನಿನಲ್ಲಿ ಮೈಗೆಲ್ಲ ಚರಚರನೆ ಸವರಿಕೊಂಡು ಪಠಾಪಠಾ ಹೊಡೆದುಕೊಂಡು ಆಶೀರ್ವಾದ ತೆಗೆದುಕೊಂಡ ಹಾಸ್ಯಾಸ್ಪದ ಸುದ್ದಿಯೊಂದು ಲಭ್ಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಮಮ್ಮಿ ಭಗವಾನ್ ಭಕ್ತಮಂತ್ರಿಯ ಎಕ್ಕಡಸೇವೆಯ ವಿಡಿಯೋ ಕಡ್ಲೆಪುರಿಯಂತೆ ಖರ್ಚಾಗುತ್ತಿರುವುದು ರಾಜ್ಯದ ಪ್ರಾಥಮಿಕ ಶಾಲೆಯ ಪುಟ್ಟಮಕ್ಕಳಲ್ಲಿ ಗಾಬರಿ ಹುಟ್ಟಿಸಿದೆ. ಈ ಬಗ್ಗೆ ನಿಮ್ಮ ಒಪಿನಿಯನ್ ಏನೆಂದು ಕೇಳಿದಾಗ “ಓಟಿಗೋಸ್ಕರ ಹಿಂಗೆಲ್ಲ ಕಂಡೋರ ಎಕ್ಕಡವನ್ನು ಮತದಾರರ ಇಚ್ಛೆಯಂತೆ ಮೈಗೆಲ್ಲ ಸವರಿಕೊಳ್ಳಬೇಕಾಗ್ತದೆ” ಎಂದು ಸದರೀ ಮಮ್ಮಿ ಭಗವಾನ್ ಭಕ್ತಮಂತ್ರಿಯು ಆಲಾಪಿಸಿದೆ. ಓಟು ಕೊಡೋರು “ನಮ್ಮನೆ ಎಮ್ಮೆಸೆಗಣಿ ತಿನ್ನಿ, ಮೇಲ್ಜಾತಿ ಜನರ ಬೀದಿಯ ಚರಂಡಿನೀರು ತಗೊಂಡು ತಲೆಗೆ ಚಿಮುಕಿಸ್ಕೊಳಿ” ಅಂದ್ರೆ ಅದನ್ನೂ ಮಾಡ್ತೀರ ಸ್ವಾಮಿ? ಎಂದು ಕೇಳಿದಾಗ.. ಕಂಗಾಲಾದ ಭಕ್ತಮಂತ್ರಿಯು ಮುಳುಮುಳನೆ ಗೋಳಾಡುತ್ತ ತನ್ನ ಭಜನೆಭಕ್ತರೊಡನೆ ಇನ್ನೊಂದು “ಡ್ಯಾಡಿ ಭಗವಾನ್” ಮಠದತ್ತ ಬರಿಗಾಲಲ್ಲಿ ಓಡಿಹೋದ ಘಟನೆ ತಡವಾಗಿ ವರದಿಯಾಗಿದೆ.
****
ಹೊಟ್ಟೆಪಾಡಿಗೊಂದು ಕೆಲಸವೂ ಇಲ್ಲದೆ ತೆಂಗಿನಚಿಪ್ಪೊಂದನ್ನು ತಲೇ ಮೇಲಿಟ್ಟುಕೊಂಡು ಊರೂರಲ್ಲಿ ತಿರುಪೆಯೆತ್ತಿಕೊಂಡು ಅಂಡಲೆಯುತ್ತಿರುವ ‘ಪ್ರಬೋದ್ ಮೂತ್ರಲೀಕ್’ ಎಂಬ ವಯೋವೃದ್ಧ ಗುಳ್ಳೆನರಿಯು ಈ ಜನ್ಮದಲ್ಲಿ ಉದ್ದಾರವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲವೆಂಬುದಕ್ಕೆ ಇತ್ತೀಚೆಗೆ ಮತ್ತೊಂದು ಸಾಕ್ಷಿ ದೊರಕಿದೆ. ಕರ್ನಾಟಕದಲ್ಲಿ ನಾಯಿ ಸತ್ತರೂ ಅದಕ್ಕೆ ಡ್ರಾಮಾಮಾಸ್ಟರ್ ಕುಂಡಾಲೇಂದ್ರ ರೆಸ್ಪಾಂಡ್ ಮಾಡಬೇಕೆ? ಎಂದು ಈ ಕೆಟ್ಟಮುಸುಡಿ ಗುಳ್ಳೆನರಿಯು ಊಳಿಟ್ಟಿದೆ. ಈ ಸುದ್ದಿ ಕೇಳಿದ ಹುಬ್ಬಳ್ಳಿಯ ಪಾನ್ ಬೀಡಾ ಅಂಗಡಿ ಓನರ್ ಸಿದ್ದಪ್ಪಶೆಟ್ಟಿಯವರು, “ಇವನ ಮನೆ ಹಾಳಾಗ, ಇದೆಲ್ಲಾ ಕಿಸಲಗೇಡಿ ಮಾತಾಡೋ ಈ ಮೂತ್ರಲೀಕ್, ಕಟಿಂಗ್ ಶೇವಿಂಗ್ ಮಾಡಿಸಿಕೊಳ್ಳಲು ನನ್ನ ಬಳಿ 300 ರುಪಾಯಿ ತೆಗೆದುಕೊಂಡು ತಲೆಮರೆಸಿಕೊಂಡು ತಿರುಗುತ್ತಿದ್ದಾನೆ, ಇವನನ್ನು ಕಂಡವರು ಇವನ ಕೈಕಾಲು ಕಟ್ಟಿ ಹತ್ತಿರದ ಪಾಳುಬಾವಿಯೊಂದರೊಳಗೆ ಎತ್ತಿಹಾಕಿ, ನನಗೊಂದು ಮಿಸ್ ಕಾಲ್ ಕೊಟ್ರೆ ಓಡಿ ಬಂದು ಮೂತ್ರಲೀಕ್ ಬಿದ್ದಿರುವ ಪಾಳುಬಾವಿಗೆ ಮುವ್ವತ್ತು ಮಂಕರಿ ತಿಪ್ಪೆಗೊಬ್ಬರ ಸುರಿಯುತ್ತೇನೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****
ಕರ್ನಾಟಕ ಕಿಚಡಿ ಗೌರ್ಮೆಂಟಿನ ಚೀಫ್ ಮಂತ್ರಿಯಾಗಿರುವ ಕುಮಾರಣ್ಣನವರ ತಲೆ ಇತ್ತೀಚೆಗೆ ಕೆಟ್ಟು ಕೇಸರಿಬಾತ್ ಆಗಿರುವ ಲಕ್ಷಣಗಳು ಗೋಚರವಾಗುತ್ತಿವೆ. ಹಾವು ಮುಂಗುಸಿಗಳನ್ನು ಒಂದೇ ಮೂಟೆಯೊಳಗೆ ತುಂಬಿಟ್ಟಂತಾಗಿರುವ ಕಿಚಡಿ ಸರ್ಕಾರದಲ್ಲಿ ಕಂಡಕಂಡವರೆಲ್ಲ ಕುಮಾರಣ್ಣನ ನುಣುಪಾದ ತಲೆಗೆ ಟುಕು ಟುಕು ಕುಟ್ಟುತ್ತಿರುವುದರಿಂದ ರೋಸತ್ತು ಹೋಗಿರುವ ಮು.ಮಂ. ಅವರು ಇನ್ನುಮುಂದೆ ತಲೆಗೆ 25 ಕೇಜಿ ತೂಕದ ತಾಮ್ರದ ಹೆಲ್ಮೆಟ್ಟು ಧರಿಸಿಕೊಂಡು ಓಡಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅತ್ತ ನಿಂಬೆಹಣ್ ತಜ್ಞ ಲೇವಣ್ಣ, ಇತ್ತ ಹೋಮಹವನ ಪಂಡಿತ ಪಲಮೇಶ್ವರ್, ಆ ಕಡೆ ಹೆಡ್ ಮೇಸ್ಟ್ರು ದೊಡ್ಡಗೌಡ್ರು, ಈ ಕಡೆ 24/7 ಗಢಾರಿ ಹಿಡಿದುಕೊಂಡೇ ಓಡಾಡೋ ಎಂ.ಬಿ. ಘಾಟೀಲ್, ಮತ್ತೊಂದು ಕಡೆ ಉದುರೋ ಕಡ್ಲೆಬೀಜ ಫಾಲೋ ಮಾಡ್ಕೊಂಡು ಹಿಂದಿಂದೆಯೇ ಸುತ್ತುತ್ತಿರೋ ಧಡಿಯೂರಪ್ಪ, ಇನ್ನೊಂದ್ಕಡೆ ಈ ಗೌರ್ಮೆಂಟ್ ಅದುರಿ ಅಲ್ಲಾಡಿ, ನೆಗರಿ ನಿಗುರಾಡಿ ಸರ್ವನಾಶ ಆಗಲಿ ಅಂತ ದಿನಬೆಳಗಾದರೆ ಕಯ್ಯಯ್ಯೋ ಅನ್ನೋ ‘ಆಲ್‍ರೈಟ್ ರಂಗ’ ಅಂಡ್ ಪಟಾಲಂನ ರಕ್ತಬೇಧಿಯ ಕಾಟ ತಡೆಯಲಾರದೆ ಕುಮಾರಣ್ಣ ಕಕ್ಕಾಬಿಕ್ಕಿಯಾಗಿ, ತಲೆಗೇರಿಸಿಕೊಂಡ ತಾಮ್ರದ ಹೆಲ್ಮೆಟ್ಟನ್ನು ಮಲಗೋವಾಗಲು ಸಹ ತೆಗೆಯದೆ ಸೇಫ್ಟಿಯಾಗಿದ್ದಾರೆಂದು ಅವರ ಕಾರ್ ಡ್ರೈವರ್ ಎಣ್ಣೆ ಏಟಿನಲ್ಲಿ ಬಾರ್ ಸಪ್ಲೈಯರ್ ಜೊತೆಗೆ ಚರ್ಚೆ ನಡೆಸಿದ್ದಾರೆಂದು ಗುಪ್ತದಳದ ಮೂಲಗಳು ತಿಳಿಸಿವೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ. ನಮಸ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...

ಬಿಹಾರ: ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ; ಹಲ್ಲೆ ಮಾಡಿ ವಿಡಿಯೋ ಹರಿಬಿಟ್ಟ ದುಷ್ಟರು: ಇಬ್ಬರ ಬಂಧನ 

ಬಿಹಾರದ ನಳಂದ ಜಿಲ್ಲೆಯಲ್ಲಿ ನಾಚಿಕೆಗೇಡಿನ ಮತ್ತು ಆತಂಕಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ನೂರ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಮೂವರು ಪುರುಷರು ವಿವಾಹಿತ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ದೌರ್ಜನ್ಯ ವಿರೋಧಿಸಿ...

‘ಹಿಂದುತ್ವ ಉಗ್ರವಾದವನ್ನು ಏಕೆ ನಿರ್ಲಕ್ಷಿಸಬೇಕು..?’; ಸಂಸತ್ತಿನಲ್ಲಿ ಪ್ರಶ್ನಿಸಿದ ರುಹುಲ್ಲಾ ಮೆಹದಿ

"ದೇಶದಲ್ಲಿ ಹೆಚ್ಚುತ್ತಿರುವ ಬಲಪಂಥೀಯ ಉಗ್ರವಾದವನ್ನು ನಿರ್ಲಕ್ಷಿಸಿ ಎಡಪಂಥೀಯ ಬೆದರಿಕೆಗಳ ಮೇಲೆ ಮಾತ್ರ ಗಮನಹರಿಸಲಾಗುತ್ತಿದೆ" ಎಂದು ಲೋಕಸಭೆಯಲ್ಲಿ ಜಮ್ಮು-ಕಾಶ್ಮೀರದ ಶ್ರೀನಗರ ಸಂಸದ ಆಗಾ ಸೈಯದ್ ರುಹುಲ್ಲಾ ಮೆಹದಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ...

ವಿರೋಧದ ನಡುವೆಯೂ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ

ತೀವ್ರ ವಿರೋಧಗಳ ನಡುವೆಯೂ ಟ್ರಾನ್ಸ್‌ಜೆಂಡರ್‌ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದಾರೆ ಎಂದು ಕೇಂದ್ರ ಕಾನೂನು ಸಚಿವಾಲಯ ಸೋಮವಾರ (ಮಾ. 30) ಗೆಜೆಟ್ ಅಧಿಸೂಚನೆಯಲ್ಲಿ...

ಮಶಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ದಾಳಿ: ದೆಹಲಿಗೆ ತೆರಳುತ್ತಿದ್ದ ನೆರವು ವಿಮಾನಕ್ಕೆ ಡಿಕ್ಕಿ: ಇದು ‘ಯುದ್ಧ ಅಪರಾಧ’ ಎಂದ ಇರಾನ್ 

ಇರಾನ್‌ನ ಮಶಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಾಯುದಾಳಿಯ ಸಂದರ್ಭದಲ್ಲಿ ನವದೆಹಲಿಗೆ ಹಾರಲು ನಿಗದಿಯಾಗಿದ್ದ ಮಹಾನ್ ಏರ್ ವಿಮಾನವು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.  ಈ ವಿಮಾನವು ಔಷಧಿಗಳು ಸೇರಿದಂತೆ ಮಾನವೀಯ ನೆರವು ಸಾಗಣೆಗೆ...

ಪ್ಯಾಲೆಸ್ತೀನಿಯರಿಗೆ ಮರಣದಂಡನೆ ವಿಧಿಸುವ ಕಾನೂನು ಅಂಗೀಕಾರ : ಇಸ್ರೇಲ್ ಕ್ರಮಕ್ಕೆ ಜಾಗತಿಕ ಖಂಡನೆ

ಮಾರಣಾಂತಿಕ ದಾಳಿಗಳ ಅಪರಾಧ ಸಾಬೀತಾದ ಪ್ಯಾಲೆಸ್ತೀನಿಯರಿಗೆ ಮರಣದಂಡನೆಯನ್ನು ಕಡ್ಡಾಯ ಶಿಕ್ಷೆಯನ್ನಾಗಿ ನಿಗದಿಪಡಿಸಿದ ಇಸ್ರೇಲ್‌ನ ಹೊಸ ಕಾನೂನನ್ನು ಮಾನವ ಹಕ್ಕುಗಳ ಸಂಘಟನೆಗಳು, ವಿವಿಧ ರಾಷ್ಟ್ರಗಳ ನಾಯಕರು ಸೇರಿದಂತೆ ಜಾಗತಿಕ ಸಮುಯದಾಯ ತೀವ್ರವಾಗಿ ವಿರೋಧಿಸಿದೆ. ಈ...

ಬರೇಲಿ: ಮುಸ್ಲಿಂ ಯುವಕರ ಮೇಲೆ ಹಲ್ಲೆ, ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಬಲವಂತ; ಪ್ರಮುಖ ಆರೋಪಿ ಬಂಧನ

ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಯುವಕನ ಮೇಲೆ ಹಲ್ಲೆ, ಅವಮಾನ ಮತ್ತು ಹಿಂದುತ್ವ ಘೋಷಣೆಗಳನ್ನು ಪಠಿಸುವಂತೆ ಒತ್ತಾಯಿಸಲಾಗಿದೆ ಎಂದು ಆರೋಪಿಸಲಾಗಿದೆ. ಪ್ರಮುಖ ಆರೋಪಿ ರಿಷಭ್ ಠಾಕೂರ್ ನನ್ನು ಪೊಲೀಸರು ಬಂಧಿಸಿದ್ದು, ಮತ್ತಷ್ಟು ಬಂಧನಗಳು ನಡೆಯುವ...