Homeಅಂಕಣಗಳುಹನಿಮೂನ್ ಸಾಕು ತಗೋ ತಲಾಕು

ಹನಿಮೂನ್ ಸಾಕು ತಗೋ ತಲಾಕು

- Advertisement -
- Advertisement -

ಆಘಾತವಾಣಿ ವಾರ್ತೆಗಳು, ಕೇಳುಗರಿಗೆಲ್ಲ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.

ಆಗಿದ್ದಾಗ್ಲಿ ಹೋಗಿದ್ದೋಗ್ಲಿ, ಆರು ಮೂರಾಗ್ಲಿ, ಮೂರು ಮುವ್ವತ್ತಾಗ್ಲಿ, ನಾನೂ ಕೆಲ್ಸ ಮಾಡಲ್ಲ, ಬೇರೇಯವ್ರಿಗೂ ಕೆಲ್ಸ ಮಾಡೋಕೆ ಬಿಡಲ್ಲ ಅಂತ ವೀರಪ್ರತಿಜ್ಞೆ ಮಾಡಿರೋ ಪಕೋಡೇಂದ್ರ ಕುಂಡಾಲಯ್ಯನ ಕಡೆಯಿಂದ ಹೊಸ ಸುದ್ದಿಯೊಂದು ಬಂದಿದೆ. ವರ್ಷಗಳ ಹಿಂದೆ ದೆಹಲಿ ಚುನಾವಣೆಯಲ್ಲಿ ಕೇಜ್ರಿವಾಲ್ ಪಕ್ಷದಿಂದ ಮಕಮೂತಿಗೆ ಇಕ್ಕಿಸಿಕೊಂಡು ಮಣ್ಣುಮುಕ್ಕಿದ್ದ ಪಕೋಡೇಂದ್ರರವರು ಕೇಜ್ರಿವಾಲ್ ತಲೆ ಮೇಲೆ ಲೆಫ್ಟಿನೆಂಟ್ ಗೌರ್ನರ್ ಎಂಬ ಶೋಕೇಸ್ ಪೀಸೊಂದನ್ನು ಕುಕ್ಕಿದ್ದನು. ಈ ಲಡಾಸಿ ಗೌರ್ನರ್ ದೆಹಲಿಯ ಐಎಎಸ್ ಅಧಿಕಾರಿಗಳ ತಲೆಸವರಿ ಒಳಕ್ಕೆಳೆದುಕೊಂಡು ತಾನಿರುವ ಸರ್ಕಾರದ ವಿರುದ್ಧವೇ ಸ್ಟ್ರೈಕು ಮಾಡಿಸಲು ಹಚ್ಚಿದ್ದಾರೆಂದು ಸುಪ್ತಚರ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಪ್ರತಿಯಾಗಿ ಕೇಜ್ರಿವಾಲ್ ತಮ್ಮ ತಂಡದೊಂದಿಗೆ ಲೆಫ್ಟಿನೆಂಟ್ ಗೌರ್ನರ್ ಕಚೇರಿಯೊಳಗೇ ಮೊಕ್ಕಾಂ ಹೂಡಿ ಧರಣಿ ಕೂತು ವಾರ ಕಳೆದರೂ ಚೇಂಬರಿನಿಂದ ಹೊರಬರದೆ ಟೇಬಲ್ ಕೆಳಗೆ ಅವಿತು ಕುಳಿತಿದ್ದ ಆತನು ದೆಹಲಿಯ ಜನರು ಕೈಗೆ ಪ್ಯಾರಗಾನ್ ಚಡಾವು ಕಳಚಿಕೊಳ್ಳುತ್ತಿದ್ದಂತೆ ಆಫೀಸಿಂದ ಈಚೆ ಬಂದು ಕೇಜ್ರಿವಾಲ್ ಬೇಡಿಕೆಗಳಿಗೆ ಸೈನ್ ಹಾಕಿ ಮತ್ತೆ ಹೋಗಿ ಟೇಬಲ್ ಕೆಳಗೆ ಅವಿತುಕೊಂಡಿದ್ದಾನೆಂದು ವರದಿಯಾಗಿದೆ.
****
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಶ್ಮೀರದಲ್ಲಿ ಮೂರು ಮುಕ್ಕಾಲು ಸೀಟು ಪಡೆದು ಕಾಶ್ಮೀರ ಪ್ರತ್ಯೇಕತಾವಾದಿ ಪಿಡಿಪಿ ಪಕ್ಷದ ಜೊತೆ ಸೇರಿ ಸರ್ಕಾರ ರಚಿಸಿದ್ದ ಬ್ಲೂಜೆಪಿ ಪಕ್ಷದ ವತಿಯಿಂದ ಹೊಸ ನ್ಯೂಸೊಂದು ಎಗರಿ ಬಂದಿದೆ. ಪುಡಿಪುಕ್ಕ ಸೀಟುಗಳನ್ನು ಕಂಕುಳಿಗಿಟ್ಟುಕೊಂಡು “ ಪ್ರೀತ್ಸೇ ಪ್ರೀತ್ಸೇ, ಮೂರೂ ಬಿಟ್ಟು ನನ್ನೇ ಪ್ರೀತ್ಸೇ” ಅಂತ ಈ ಕಡೆಯಿಂದ ಪಿಡಿಪಿ ಪಕ್ಷದ ಸೊಂಟ ಗಿಲ್ಲಿದಾಗ, ಆ ಕಡೆಯಿಂದ “ ಆಜಾ ಮೆರಿ ಗಾಡಿ ಮೇ ಬೈಟ್ ಜಾ, ಆಜಾ ಮೆರಿ ಗಾಡಿ ಮೇ ಬೈಟ್ ಜಾ” ಅನ್ನೋ ರೆಸ್ಪಾನ್ಸ್ ಬಂದಿತ್ತು. ನಂತ್ರ ಇಬ್ಬರೂ ಸೇರಿ ಕಾಶ್ಮೀರದಲ್ಲಿ ಕಲಬೆರಕೆ ಸರ್ಕಾರ ರಚಿಸಿ ಒಬ್ಬರ ಸೊಂಟ ಒಬ್ಬರು ಹಿಡಿದು “ ಬೆರಕೆ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ, ಹೂ ಅಂತೀಯ, ಉಹೂ ಅಂತೀಯ” ಅಂತ ಡ್ಯಾನ್ಸ್ ಮಾಡ್ತಿದ್ದ ಎರಡೂ ಪಕ್ಷಗಳು ಈಗ ಮಕಮಕ ಪರಚಾಡಿಕೊಂಡು ದಿಢೀರ್ ಡೈವೋರ್ಸ್ ತಗೊಂಡಿವೆ.
****
ಈ ಢಮಾರ್ ಡೈವೋರ್ಸಿಗೆ ಕಾರಣಗಳೇನೆಂದು ಕೆದಕಿದಾಗ ಕುತೂಹಲಕಾರಿ ಕಿತಾಪತಿ ಮಾಹಿತಿಗಳು ನಮಗೆ ಲಭ್ಯವಾಗಿವೆ. ದೇಶದ ತುಂಬ ಕಾಶ್ಮೀರಿ ಟೆರರಿಸ್ಟ್‍ಗಳ ಬಗ್ಗೆ ಪುಯ್ಯೋ ಪುಯ್ಯೋ ಎಂದು ಪುಂಗಿ ಊದುವ ಬ್ಲೂಜೆಪಿ ಪಕ್ಷವು, ಈ ಪ್ರತ್ಯೇಕತಾವಾದಿಗಳ ಜೊತೆಗೆ ಕಾಶ್ಮೀರದಲ್ಲಿ ತಮ್ಮದೇ ಸರ್ಕಾರದಲ್ಲಿ ಕುಸುಕು ಮುಸುಕು ನಡೆಸುತ್ತಿದ್ದುದು ಎಲ್ಲರಿಗು ತಿಳಿದ ಸತ್ಯ. ಪೊಲೀಸರು-ಮಿಲಿಟರಿಯವರು ಅರೆಸ್ಟ್ ಮಾಡಿದ ಟೆರರಿಸ್ಟುಗಳ ಕೈಗೆ ಹೂಗುಚ್ಛ ಕೊಟ್ಟು ಜೈಲಿಂದ ಬಿಡಿಸಿ ಕಳಿಸುತ್ತಿದ್ದ ಇದೇ ಬೆರಕೆ ಪಕ್ಷದವರು ಬೇರೆ ರಾಜ್ಯಗಳಲ್ಲಿ ಇದಕ್ಕೆ ಉಲ್ಟಾ ಭಾಷಣಗಳನ್ನು ಬೊಗಳುತ್ತ ಚಿಲ್ರೆಕಾಸು ದುಡಿದು ಹೊಟ್ಟೆ ಹೊರೆಯುತ್ತಿದ್ದರು. ಅದೇನಾಯ್ತೋ ಏನೋ ಪಿಡಿಪಿ ಪಕ್ಷಕ್ಕೆ ಬ್ಲೂಜೆಪಿ ಜೊತೆಗಿನ ಕುಸುಕು ಮುಸುಕು ಪ್ರಣಯ ಸಾಕಾಗಿ ಬ್ಲೂಜೆಪಿಯನ್ನು ಸರ್ಕಾರದಿಂದ ಒದ್ದೋಡಿಸುವ ಪ್ರಯತ್ನದಲ್ಲಿತ್ತು. ಅಷ್ಟರಲ್ಲಿ ತನ್ನ ಲಂಗೋಟಿ-ಪುಟಗೋಸಿಯನ್ನು ಗಂಟು ಕಟ್ಟಿಕೊಂಡು ತಲೆ ಮೇಲೆ ಟವೆಲ್ಲು ಹಾಕಿಕೊಂಡ ಬ್ಲೂಜೆಪಿಯು ತಾನೇ ಸರ್ಕಾರದಿಂದ ಈಚೆಗೆ ಬರುತ್ತಿದ್ದೇನೆಂಬ ಡ್ರಾಮಾ ಆಡಿ ಮುಖ ಉಳಿಸಿಕೊಳ್ಳಲು ಪ್ರಯತ್ನಿಸಿದೆಯೆಂದು ಬಲ್ಲ ಮೂಲಗಳು ಬೊಂಬಡ ಹೊಡೆಯುತ್ತ ತಿಳಿಸಿವೆ.
****
ಪ್ರಸ್ತುತ ಮಾಟ-ಮಂತ್ರ ಕವಡೆಶಾಸ್ತ್ರ ತಜ್ಞರ ರಾಜ್ಯಮಟ್ಟದ ಸಮ್ಮೇಳನದಂತೆ ಕಾಣುತ್ತಿರುವ ಕರ್ನಾಟಕದ ‘ಮಿಕ್ಸ್ ಮಸಾಲ ಸರ್ಕಾರ’ದ ಕಡೆಯಿಂದ ಹೊಸ “ಮಮ್ಮಿ ಮೆಟ್ಟು” ವರದಿಯೊಂದು ಕುಪ್ಪಳಿಸುತ್ತ ಬಂದಿದೆ. ಪ್ರೈಮರಿಶಾಲೆಯ ಮಂತ್ರಿಯೊಬ್ಬರು ಮದನಪಲ್ಲಿ ಮೂಲದ ರೇಪಿಸ್ಟನೊಬ್ಬನ ಪತ್ನಿ ಹಾಗೂ ಮಾಜಿಸುಂದರಿ ಮತ್ತು ಹಾಲಿ “ಮಮ್ಮಿ ಭಗವಾನ್” ದೇವಿಯ ಮರದ ಎಕ್ಕಡಗಳನ್ನು ಸ್ಲೋಮೋಷನ್ನಿನಲ್ಲಿ ಮೈಗೆಲ್ಲ ಚರಚರನೆ ಸವರಿಕೊಂಡು ಪಠಾಪಠಾ ಹೊಡೆದುಕೊಂಡು ಆಶೀರ್ವಾದ ತೆಗೆದುಕೊಂಡ ಹಾಸ್ಯಾಸ್ಪದ ಸುದ್ದಿಯೊಂದು ಲಭ್ಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಮಮ್ಮಿ ಭಗವಾನ್ ಭಕ್ತಮಂತ್ರಿಯ ಎಕ್ಕಡಸೇವೆಯ ವಿಡಿಯೋ ಕಡ್ಲೆಪುರಿಯಂತೆ ಖರ್ಚಾಗುತ್ತಿರುವುದು ರಾಜ್ಯದ ಪ್ರಾಥಮಿಕ ಶಾಲೆಯ ಪುಟ್ಟಮಕ್ಕಳಲ್ಲಿ ಗಾಬರಿ ಹುಟ್ಟಿಸಿದೆ. ಈ ಬಗ್ಗೆ ನಿಮ್ಮ ಒಪಿನಿಯನ್ ಏನೆಂದು ಕೇಳಿದಾಗ “ಓಟಿಗೋಸ್ಕರ ಹಿಂಗೆಲ್ಲ ಕಂಡೋರ ಎಕ್ಕಡವನ್ನು ಮತದಾರರ ಇಚ್ಛೆಯಂತೆ ಮೈಗೆಲ್ಲ ಸವರಿಕೊಳ್ಳಬೇಕಾಗ್ತದೆ” ಎಂದು ಸದರೀ ಮಮ್ಮಿ ಭಗವಾನ್ ಭಕ್ತಮಂತ್ರಿಯು ಆಲಾಪಿಸಿದೆ. ಓಟು ಕೊಡೋರು “ನಮ್ಮನೆ ಎಮ್ಮೆಸೆಗಣಿ ತಿನ್ನಿ, ಮೇಲ್ಜಾತಿ ಜನರ ಬೀದಿಯ ಚರಂಡಿನೀರು ತಗೊಂಡು ತಲೆಗೆ ಚಿಮುಕಿಸ್ಕೊಳಿ” ಅಂದ್ರೆ ಅದನ್ನೂ ಮಾಡ್ತೀರ ಸ್ವಾಮಿ? ಎಂದು ಕೇಳಿದಾಗ.. ಕಂಗಾಲಾದ ಭಕ್ತಮಂತ್ರಿಯು ಮುಳುಮುಳನೆ ಗೋಳಾಡುತ್ತ ತನ್ನ ಭಜನೆಭಕ್ತರೊಡನೆ ಇನ್ನೊಂದು “ಡ್ಯಾಡಿ ಭಗವಾನ್” ಮಠದತ್ತ ಬರಿಗಾಲಲ್ಲಿ ಓಡಿಹೋದ ಘಟನೆ ತಡವಾಗಿ ವರದಿಯಾಗಿದೆ.
****
ಹೊಟ್ಟೆಪಾಡಿಗೊಂದು ಕೆಲಸವೂ ಇಲ್ಲದೆ ತೆಂಗಿನಚಿಪ್ಪೊಂದನ್ನು ತಲೇ ಮೇಲಿಟ್ಟುಕೊಂಡು ಊರೂರಲ್ಲಿ ತಿರುಪೆಯೆತ್ತಿಕೊಂಡು ಅಂಡಲೆಯುತ್ತಿರುವ ‘ಪ್ರಬೋದ್ ಮೂತ್ರಲೀಕ್’ ಎಂಬ ವಯೋವೃದ್ಧ ಗುಳ್ಳೆನರಿಯು ಈ ಜನ್ಮದಲ್ಲಿ ಉದ್ದಾರವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲವೆಂಬುದಕ್ಕೆ ಇತ್ತೀಚೆಗೆ ಮತ್ತೊಂದು ಸಾಕ್ಷಿ ದೊರಕಿದೆ. ಕರ್ನಾಟಕದಲ್ಲಿ ನಾಯಿ ಸತ್ತರೂ ಅದಕ್ಕೆ ಡ್ರಾಮಾಮಾಸ್ಟರ್ ಕುಂಡಾಲೇಂದ್ರ ರೆಸ್ಪಾಂಡ್ ಮಾಡಬೇಕೆ? ಎಂದು ಈ ಕೆಟ್ಟಮುಸುಡಿ ಗುಳ್ಳೆನರಿಯು ಊಳಿಟ್ಟಿದೆ. ಈ ಸುದ್ದಿ ಕೇಳಿದ ಹುಬ್ಬಳ್ಳಿಯ ಪಾನ್ ಬೀಡಾ ಅಂಗಡಿ ಓನರ್ ಸಿದ್ದಪ್ಪಶೆಟ್ಟಿಯವರು, “ಇವನ ಮನೆ ಹಾಳಾಗ, ಇದೆಲ್ಲಾ ಕಿಸಲಗೇಡಿ ಮಾತಾಡೋ ಈ ಮೂತ್ರಲೀಕ್, ಕಟಿಂಗ್ ಶೇವಿಂಗ್ ಮಾಡಿಸಿಕೊಳ್ಳಲು ನನ್ನ ಬಳಿ 300 ರುಪಾಯಿ ತೆಗೆದುಕೊಂಡು ತಲೆಮರೆಸಿಕೊಂಡು ತಿರುಗುತ್ತಿದ್ದಾನೆ, ಇವನನ್ನು ಕಂಡವರು ಇವನ ಕೈಕಾಲು ಕಟ್ಟಿ ಹತ್ತಿರದ ಪಾಳುಬಾವಿಯೊಂದರೊಳಗೆ ಎತ್ತಿಹಾಕಿ, ನನಗೊಂದು ಮಿಸ್ ಕಾಲ್ ಕೊಟ್ರೆ ಓಡಿ ಬಂದು ಮೂತ್ರಲೀಕ್ ಬಿದ್ದಿರುವ ಪಾಳುಬಾವಿಗೆ ಮುವ್ವತ್ತು ಮಂಕರಿ ತಿಪ್ಪೆಗೊಬ್ಬರ ಸುರಿಯುತ್ತೇನೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****
ಕರ್ನಾಟಕ ಕಿಚಡಿ ಗೌರ್ಮೆಂಟಿನ ಚೀಫ್ ಮಂತ್ರಿಯಾಗಿರುವ ಕುಮಾರಣ್ಣನವರ ತಲೆ ಇತ್ತೀಚೆಗೆ ಕೆಟ್ಟು ಕೇಸರಿಬಾತ್ ಆಗಿರುವ ಲಕ್ಷಣಗಳು ಗೋಚರವಾಗುತ್ತಿವೆ. ಹಾವು ಮುಂಗುಸಿಗಳನ್ನು ಒಂದೇ ಮೂಟೆಯೊಳಗೆ ತುಂಬಿಟ್ಟಂತಾಗಿರುವ ಕಿಚಡಿ ಸರ್ಕಾರದಲ್ಲಿ ಕಂಡಕಂಡವರೆಲ್ಲ ಕುಮಾರಣ್ಣನ ನುಣುಪಾದ ತಲೆಗೆ ಟುಕು ಟುಕು ಕುಟ್ಟುತ್ತಿರುವುದರಿಂದ ರೋಸತ್ತು ಹೋಗಿರುವ ಮು.ಮಂ. ಅವರು ಇನ್ನುಮುಂದೆ ತಲೆಗೆ 25 ಕೇಜಿ ತೂಕದ ತಾಮ್ರದ ಹೆಲ್ಮೆಟ್ಟು ಧರಿಸಿಕೊಂಡು ಓಡಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅತ್ತ ನಿಂಬೆಹಣ್ ತಜ್ಞ ಲೇವಣ್ಣ, ಇತ್ತ ಹೋಮಹವನ ಪಂಡಿತ ಪಲಮೇಶ್ವರ್, ಆ ಕಡೆ ಹೆಡ್ ಮೇಸ್ಟ್ರು ದೊಡ್ಡಗೌಡ್ರು, ಈ ಕಡೆ 24/7 ಗಢಾರಿ ಹಿಡಿದುಕೊಂಡೇ ಓಡಾಡೋ ಎಂ.ಬಿ. ಘಾಟೀಲ್, ಮತ್ತೊಂದು ಕಡೆ ಉದುರೋ ಕಡ್ಲೆಬೀಜ ಫಾಲೋ ಮಾಡ್ಕೊಂಡು ಹಿಂದಿಂದೆಯೇ ಸುತ್ತುತ್ತಿರೋ ಧಡಿಯೂರಪ್ಪ, ಇನ್ನೊಂದ್ಕಡೆ ಈ ಗೌರ್ಮೆಂಟ್ ಅದುರಿ ಅಲ್ಲಾಡಿ, ನೆಗರಿ ನಿಗುರಾಡಿ ಸರ್ವನಾಶ ಆಗಲಿ ಅಂತ ದಿನಬೆಳಗಾದರೆ ಕಯ್ಯಯ್ಯೋ ಅನ್ನೋ ‘ಆಲ್‍ರೈಟ್ ರಂಗ’ ಅಂಡ್ ಪಟಾಲಂನ ರಕ್ತಬೇಧಿಯ ಕಾಟ ತಡೆಯಲಾರದೆ ಕುಮಾರಣ್ಣ ಕಕ್ಕಾಬಿಕ್ಕಿಯಾಗಿ, ತಲೆಗೇರಿಸಿಕೊಂಡ ತಾಮ್ರದ ಹೆಲ್ಮೆಟ್ಟನ್ನು ಮಲಗೋವಾಗಲು ಸಹ ತೆಗೆಯದೆ ಸೇಫ್ಟಿಯಾಗಿದ್ದಾರೆಂದು ಅವರ ಕಾರ್ ಡ್ರೈವರ್ ಎಣ್ಣೆ ಏಟಿನಲ್ಲಿ ಬಾರ್ ಸಪ್ಲೈಯರ್ ಜೊತೆಗೆ ಚರ್ಚೆ ನಡೆಸಿದ್ದಾರೆಂದು ಗುಪ್ತದಳದ ಮೂಲಗಳು ತಿಳಿಸಿವೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ. ನಮಸ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...