HomeUncategorized"ವಿಷಯಾಂತರ" ಸಣ್ಣ ಕತೆ...

“ವಿಷಯಾಂತರ” ಸಣ್ಣ ಕತೆ…

- Advertisement -
- Advertisement -

ತುಮಕೂರಿನ ಒಂದು ರಸ್ತೆ. ರಸ್ತೆ ಬದಿಯಲ್ಲಿ ದೊಂಬರಾಟ ನಡೆಯುತ್ತಿತ್ತು. ಒಬ್ಬ ವ್ಯಕ್ತಿ ಒಂದು ಉದ್ದದ ಕಟ್ಟಿಗೆಯ ಕಂಬವೊಂದನ್ನು ತನ್ನ ಬಾಯಲ್ಲಿ ಎತ್ತಿಹಿಡಿದಿದ್ದ. ಆ ಕೋಲಿನ ತುದಿಯಲ್ಲಿ ಒಂದು ಪುಟ್ಟ ಮಗು, ಒಂದು ವರ್ಷದ್ದಿರಬಹುದು. ಆ ಮಗುವನ್ನು ಕೋಲಿನ ತುದಿಯಲ್ಲಿ ಇರಿಸಿ ಬ್ಯಾಲೆನ್ಸ್ ಮಾಡಿದ. ಸುತ್ತ ಒಂದು ಹದಿನೈದು ಜನರು ನೋಡುತ್ತಿದ್ದರು. ಆ ಕೋಲನ್ನು ಸಾವಕಾಶವಾಗಿ ಕೆಳಗಿಳಿಸಿ ಮಗುವನ್ನು ಹಿಡಿದುಕೊಂಡ. ಪುಟ್ಟ ಬಾಲಕಿಯೊಬ್ಬಳು ತಂತಿಯ ಮೇಲೆ ನಡೆದು ತನ್ನ ಬ್ಯಾಲೆನ್ಸ್ ಪ್ರದರ್ಶಿಸಿದಳು. ಆ ವ್ಯಕ್ತಿ ಅವಳು ನಡೆದಾಡುತ್ತಿದ್ದಂತೆ ಕೆಳಗಿನಿಂದ ಹಿಂಬಾಲಿಸುತ್ತಿದ್ದ. ತನ್ನ ನಡೆದಾಟವನ್ನು ಯಶಸ್ವಿಯಾಗಿ ಮುಗಿಸಿ ಕೆಳಗಿಳಿದಳು. ಅಷ್ಟರಲ್ಲಿ ಒಬ್ಬ ಮಧ್ಯವಯಸ್ಕ ವ್ಯಕ್ತಿಯೂ ನೋಡುಗರಲ್ಲಿ ಬಂದು ಸೇರಿದ್ದ. ಅವನು ನೋಡುಗರ ಕಡೆ ಒಂದು ಸಲ ಕಣ್ಣಾಡಿಸಿದ. ನೋಡುಗರಲ್ಲಿ ಅಷ್ಟೇನೂ ಉತ್ಸಾಹ ಕಂಡುಬರುತ್ತಿರಲಿಲ್ಲ. ಒಂದೆರಡು ಚಪ್ಪಾಳೆ ಕೇಳಿತೇನೋ ಎನ್ನುವಷ್ಟು ಕಡಿಮೆಯಾಗಿತ್ತು ನೋಡುಗರ ಉತ್ಸಾಹ. ದೊಂಬರಾಟ ಮಾಡುವ ಜನರಿಗೂ ಉತ್ಸಾಹದ ಕೊರತೆ ಕಾಣಿಸಿತ್ತೋ ಇಲ್ಲವೋ, ಅವರು ತಮ್ಮ ಆಟವನ್ನು ಮುಂದುವರೆಸಿದರು. ಇತ್ತ ರಸ್ತೆಯಲ್ಲಿ ಹೆಚ್ಚಿನ ಜನರು ತಮ್ಮ ಸಂಚಾರವನ್ನು ಮುಂದುವರೆಸಿದ್ದರು. ನಡೆದುಕೊಂಡು ಹೋಗುವವರು ಒಂದು ಸಲ ಕಣ್ಣು ಹಾಯಿಸಿ ಮುಂದುಹೋದರೆ, ವಾಹನದಲ್ಲಿರುವವರಿಗೆ ಈ ಆಟ ಕಾಣಲೇ ಇಲ್ಲ.

ಬಾಲಕಿ ಕೆಳಗಿಳಿದ ಮೇಲೆ, ದೊಂಬರಾಟದ ಆ ವ್ಯಕ್ತಿ ಹಣ ಸಂಗ್ರಹಿಸಲು ಆರಂಭಿಸಿದ. ನೋಡುಗರಾರೂ ಸ್ಥಿತಿವಂತರಂತೆ ಕಾಣುತ್ತಿರಲಿಲ್ಲ. ಆದರೂ ಕೆಲವರು ಐದು, ಹತ್ತು ರೂಪಾಯಿಗಳನ್ನು ಆ ವ್ಯಕ್ತಿಯ ಕೈಗಿಟ್ಟರು. ಒಂದು ಬ್ಯಾಗ್ ಅನ್ನು ಹೆಗಲಿಗೆ ಹಾಕಿ ನಿಂತಿದ್ದ ಮಧ್ಯ ವಯಸ್ಕ ವ್ಯಕ್ತಿಯ ಹತ್ತಿರ ದೊಂಬರಾಟದವನು ಬಂದ. ಆಗ ಆ ಮಧ್ಯವಯಸ್ಕ ವ್ಯಕ್ತಿ ನೂರರ ಒಂದು ನೋಟನ್ನು ಇತರರಿಗೆ ಕಾಣದಂತೆ ಕೈಗಿತ್ತ. ದೊಂಬರಾಟದವನು ಒಂದುಕ್ಷಣ ಅನುಮಾನದಿಂದ ನೋಡಿದ. ಈವಯ್ಯ ನೂರರ ನೋಟನ್ನು ಕೊಟ್ಟು ತೊಂಬತ್ತು ರೂಪಾಯಿ ಕೇಳುವನೋ ಎನ್ನುವಂತಿತ್ತು ಅವನ ನೋಟ. ಮಧ್ಯವಯಸ್ಕ ವ್ಯಕ್ತಿ ಒಂದುಕ್ಷಣ ತಡವರಿಸಿ ದೊಂಬರಾಟದವನ ಹತ್ತಿರಕ್ಕೆ ಬಂದು ಅವನನ್ನು ಅಪ್ಪಿಕೊಂಡ. ಅಪ್ಪಿಕೊಳ್ಳಲು ಹೊರಟಾಗ ಕಂಡ ಹಿಂಜರಿಕೆ ಅಪ್ಪಿಕೊಂಡಾಗ ಇರಲಿಲ್ಲ. ದೊಂಬರಾಟದವನೂ ಈ ಅಪರಿಚಿತ ವ್ಯಕ್ತಿಯ ಅಪ್ಪುಗೆಯನ್ನು ಸಹಜವೆಂಬಂತೆ ಸ್ವೀಕರಿಸಿದ.

ದೊಂಬರಾಟದವನ ಹೆಂಗಸು, ಅಪರಿಚಿತ ವ್ಯಕ್ತಿಯ ಕಣ್ಣಲ್ಲಿ ನೀರು ಜಿನುಗಿದ್ದು ಕಂಡಳು. ಇವನು ತಾನು ಭಾವುಕನಾದದ್ದು ಗೊತ್ತಾದೊಡನೇ ಸಾವರಿಸಿಕೊಂಡು ಮುಗುಳ್ನಕ್ಕ. ಹನಿ ಜಿನುಗತೊಡಗಿ ಅಲ್ಲಿಯ ಜನರು ಕಾಲ್ಕೀಳಲು ಶುರು ಮಾಡಿದರು. ಮಧ್ಯವಯಸ್ಕ ವ್ಯಕ್ತಿಯೂ ಹೊರಡಲು ಅಣಿಯಾದ. ‘ಒಂದೀಟು ಚಾ ಕುಡುದು ಹೋಗಣ್ಣ’ ಹೆಣ್ಣಿನ ಧ್ವನಿ ಕೇಳಿತು; ದೊಂಬರಾಟದ ಹೆಂಗಸು. ಹೊರಡಲು ಅಣಿಯಾದ ಮಧ್ಯವಯಸ್ಕ ವ್ಯಕ್ತಿ ನಿಂತ. ಪಕ್ಕದಲ್ಲಿಯ ಚಾದಂಗಡಿಯಲ್ಲಿ ಎಲ್ಲರೂ ಸೇರಿದರು. ‘ಎಲ್ಲರಿಗೂ ಚಾ ಕೊಡು’ ಎಂದು ಆದೇಶಿಸಿದ ಮಧ್ಯವಯಸ್ಕ ವ್ಯಕ್ತಿ. ಅಲ್ಲಿಯೇ ಇದ್ದ ಒಂದು ಕಟ್ಟಿಗೆಯ ಬೆಂಚಿನ ಮೇಲೆ ಕುಳಿತುಕೊಂಡ. ದೊಂಬರಾಟದವನೂ ಆ ಬೆಂಚಿನ ಇನ್ನೊಂದು ತುದಿಯಲ್ಲಿ ಕುಳಿತ. ಹೆಂಗಸು, ಮಗುವನ್ನು ತೊಡೆಯ ಮೇಲಿರಿಸಿ ನೆಲದ ಮೇಲೆ ಕುಳಿತು ಚಾ ಕುಡಿಯತೊಡಗಿದಳು. ಬಾಲಕಿ ಚಾ ಕುಡಿಯುತ್ತ ಈ ಅಪರಿಚಿತ ವ್ಯಕ್ತಿಯನ್ನು ನೋಡುತ್ತಿದ್ದಳು.

ದೊಂಬರಾಟದವ ಮತ್ತು ಮಧ್ಯವಯಸ್ಕ ಇಬ್ಬರೂ ಪರಸ್ಪರ ನೋಡಿದರು. ದೊಂಬರಾಟದವನು ಒಂದು ಮಾಸಿದ ಬನಿಯನ್ನು, ಒಂದು ಹಳೆಯ ಪ್ಯಾಂಟ್ ಹಾಕಿಕೊಂಡಿದ್ದ. ಸುಮಾರು ಮೂವತ್ತು ವಯಸ್ಸಾಗಿರಬಹುದು ಆದರೆ ನಲವತ್ತರ ಅಂಚಿನಲ್ಲಿದ್ದಂತೆ ಕಾಣುತ್ತಿದ್ದ. ಜೀವನವಿಡೀ ದೈಹಿಕ ಶ್ರಮ ಮಾಡಿದ್ದು ಒಂದು ಸಲ ನೋಡಿದರೇ ಗೊತ್ತಾಗುತ್ತಿತ್ತು. ಶುಭ್ರವಾದ ಅಂಗಿ, ಕರಿ ಶೂಸ್, ಕರಿ ಪ್ಯಾಂಟ್ ಹಾಕಿಕೊಂಡಿದ್ದ ಈ ಮಧ್ಯವಯಸ್ಕ ವ್ಯಕ್ತಿ ಚಾ ಬಿಸಿಯಾಗಿದ್ದರೂ ಬೇಗ ಬೇಗ ಕುಡಿಯುತ್ತಿದ್ದ. ಒಂದು ರೀತಿಯ ಮುಜುಗರ ಎದ್ದು ಕಾಣುತ್ತಿತ್ತು. ಈಗತಾನೆ ತಂತಿಯ ಮೇಲೆ ನಡೆದ ಬಾಲಕಿ ತನ್ನ ಕಡೆ ನೋಡುತ್ತಿದ್ದನ್ನು ಗಮನಿಸಿ ಮುಗುಳ್ನಕ್ಕ. ‘ಯಾವೂರು ನಿಮ್ದು?’ ಕೇಳಿದ ದೊಂಬರಾಟದವ. ‘ಮೈಸೂರು’ ಎಂದು ತಡವರಿಸಿ ಉತ್ತರ ಬಂತು. ಚಾ ಗ್ಲಾಸು ಖಾಲಿಯಾದೊಡನೇ ಐವತ್ತು ರೂಪಾಯಿಗಳನ್ನು ಚಾದಂಗಡಿಯವನ ಕೈಗಿತ್ತು, ‘ಬರ್ತೀನಿ’ ಎಂದು ಎದ್ದು ಹೊರಟ. ಮಳೆ ನಿಂತಿತ್ತು. ಚಾ ಕುಡಿದು ದೊಂಬರಾಟದವರೂ ಎದ್ದರು. ಚಾದಂಗಡಿಯನ್ನು ಕಾರಣವಿಲ್ಲದೇ ನಕ್ಕ.

ತನ್ನ ಹುಚ್ಚುತನಕ್ಕೆ ಖುಷಿಪಟ್ಟುಕೊಂಡು ಬಿರಬಿರನೇ ಹೆಜ್ಜೆ ಹಾಕುತ್ತಿದ್ದ ಆ ಮಧ್ಯವಯಸ್ಕ. ಇತ್ತ ದೊಂಬರಾಟದವರು ತಮ್ಮ ಸಾಮಾನುಗಳನ್ನು ಒಂದೆಡೆ ಕಲೆಹಾಕುವಲ್ಲಿ ತೊಡಗಿಸಿಕೊಂಡರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...