HomeUncategorized"ವಿಷಯಾಂತರ" ಸಣ್ಣ ಕತೆ...

“ವಿಷಯಾಂತರ” ಸಣ್ಣ ಕತೆ…

- Advertisement -
- Advertisement -

ತುಮಕೂರಿನ ಒಂದು ರಸ್ತೆ. ರಸ್ತೆ ಬದಿಯಲ್ಲಿ ದೊಂಬರಾಟ ನಡೆಯುತ್ತಿತ್ತು. ಒಬ್ಬ ವ್ಯಕ್ತಿ ಒಂದು ಉದ್ದದ ಕಟ್ಟಿಗೆಯ ಕಂಬವೊಂದನ್ನು ತನ್ನ ಬಾಯಲ್ಲಿ ಎತ್ತಿಹಿಡಿದಿದ್ದ. ಆ ಕೋಲಿನ ತುದಿಯಲ್ಲಿ ಒಂದು ಪುಟ್ಟ ಮಗು, ಒಂದು ವರ್ಷದ್ದಿರಬಹುದು. ಆ ಮಗುವನ್ನು ಕೋಲಿನ ತುದಿಯಲ್ಲಿ ಇರಿಸಿ ಬ್ಯಾಲೆನ್ಸ್ ಮಾಡಿದ. ಸುತ್ತ ಒಂದು ಹದಿನೈದು ಜನರು ನೋಡುತ್ತಿದ್ದರು. ಆ ಕೋಲನ್ನು ಸಾವಕಾಶವಾಗಿ ಕೆಳಗಿಳಿಸಿ ಮಗುವನ್ನು ಹಿಡಿದುಕೊಂಡ. ಪುಟ್ಟ ಬಾಲಕಿಯೊಬ್ಬಳು ತಂತಿಯ ಮೇಲೆ ನಡೆದು ತನ್ನ ಬ್ಯಾಲೆನ್ಸ್ ಪ್ರದರ್ಶಿಸಿದಳು. ಆ ವ್ಯಕ್ತಿ ಅವಳು ನಡೆದಾಡುತ್ತಿದ್ದಂತೆ ಕೆಳಗಿನಿಂದ ಹಿಂಬಾಲಿಸುತ್ತಿದ್ದ. ತನ್ನ ನಡೆದಾಟವನ್ನು ಯಶಸ್ವಿಯಾಗಿ ಮುಗಿಸಿ ಕೆಳಗಿಳಿದಳು. ಅಷ್ಟರಲ್ಲಿ ಒಬ್ಬ ಮಧ್ಯವಯಸ್ಕ ವ್ಯಕ್ತಿಯೂ ನೋಡುಗರಲ್ಲಿ ಬಂದು ಸೇರಿದ್ದ. ಅವನು ನೋಡುಗರ ಕಡೆ ಒಂದು ಸಲ ಕಣ್ಣಾಡಿಸಿದ. ನೋಡುಗರಲ್ಲಿ ಅಷ್ಟೇನೂ ಉತ್ಸಾಹ ಕಂಡುಬರುತ್ತಿರಲಿಲ್ಲ. ಒಂದೆರಡು ಚಪ್ಪಾಳೆ ಕೇಳಿತೇನೋ ಎನ್ನುವಷ್ಟು ಕಡಿಮೆಯಾಗಿತ್ತು ನೋಡುಗರ ಉತ್ಸಾಹ. ದೊಂಬರಾಟ ಮಾಡುವ ಜನರಿಗೂ ಉತ್ಸಾಹದ ಕೊರತೆ ಕಾಣಿಸಿತ್ತೋ ಇಲ್ಲವೋ, ಅವರು ತಮ್ಮ ಆಟವನ್ನು ಮುಂದುವರೆಸಿದರು. ಇತ್ತ ರಸ್ತೆಯಲ್ಲಿ ಹೆಚ್ಚಿನ ಜನರು ತಮ್ಮ ಸಂಚಾರವನ್ನು ಮುಂದುವರೆಸಿದ್ದರು. ನಡೆದುಕೊಂಡು ಹೋಗುವವರು ಒಂದು ಸಲ ಕಣ್ಣು ಹಾಯಿಸಿ ಮುಂದುಹೋದರೆ, ವಾಹನದಲ್ಲಿರುವವರಿಗೆ ಈ ಆಟ ಕಾಣಲೇ ಇಲ್ಲ.

ಬಾಲಕಿ ಕೆಳಗಿಳಿದ ಮೇಲೆ, ದೊಂಬರಾಟದ ಆ ವ್ಯಕ್ತಿ ಹಣ ಸಂಗ್ರಹಿಸಲು ಆರಂಭಿಸಿದ. ನೋಡುಗರಾರೂ ಸ್ಥಿತಿವಂತರಂತೆ ಕಾಣುತ್ತಿರಲಿಲ್ಲ. ಆದರೂ ಕೆಲವರು ಐದು, ಹತ್ತು ರೂಪಾಯಿಗಳನ್ನು ಆ ವ್ಯಕ್ತಿಯ ಕೈಗಿಟ್ಟರು. ಒಂದು ಬ್ಯಾಗ್ ಅನ್ನು ಹೆಗಲಿಗೆ ಹಾಕಿ ನಿಂತಿದ್ದ ಮಧ್ಯ ವಯಸ್ಕ ವ್ಯಕ್ತಿಯ ಹತ್ತಿರ ದೊಂಬರಾಟದವನು ಬಂದ. ಆಗ ಆ ಮಧ್ಯವಯಸ್ಕ ವ್ಯಕ್ತಿ ನೂರರ ಒಂದು ನೋಟನ್ನು ಇತರರಿಗೆ ಕಾಣದಂತೆ ಕೈಗಿತ್ತ. ದೊಂಬರಾಟದವನು ಒಂದುಕ್ಷಣ ಅನುಮಾನದಿಂದ ನೋಡಿದ. ಈವಯ್ಯ ನೂರರ ನೋಟನ್ನು ಕೊಟ್ಟು ತೊಂಬತ್ತು ರೂಪಾಯಿ ಕೇಳುವನೋ ಎನ್ನುವಂತಿತ್ತು ಅವನ ನೋಟ. ಮಧ್ಯವಯಸ್ಕ ವ್ಯಕ್ತಿ ಒಂದುಕ್ಷಣ ತಡವರಿಸಿ ದೊಂಬರಾಟದವನ ಹತ್ತಿರಕ್ಕೆ ಬಂದು ಅವನನ್ನು ಅಪ್ಪಿಕೊಂಡ. ಅಪ್ಪಿಕೊಳ್ಳಲು ಹೊರಟಾಗ ಕಂಡ ಹಿಂಜರಿಕೆ ಅಪ್ಪಿಕೊಂಡಾಗ ಇರಲಿಲ್ಲ. ದೊಂಬರಾಟದವನೂ ಈ ಅಪರಿಚಿತ ವ್ಯಕ್ತಿಯ ಅಪ್ಪುಗೆಯನ್ನು ಸಹಜವೆಂಬಂತೆ ಸ್ವೀಕರಿಸಿದ.

ದೊಂಬರಾಟದವನ ಹೆಂಗಸು, ಅಪರಿಚಿತ ವ್ಯಕ್ತಿಯ ಕಣ್ಣಲ್ಲಿ ನೀರು ಜಿನುಗಿದ್ದು ಕಂಡಳು. ಇವನು ತಾನು ಭಾವುಕನಾದದ್ದು ಗೊತ್ತಾದೊಡನೇ ಸಾವರಿಸಿಕೊಂಡು ಮುಗುಳ್ನಕ್ಕ. ಹನಿ ಜಿನುಗತೊಡಗಿ ಅಲ್ಲಿಯ ಜನರು ಕಾಲ್ಕೀಳಲು ಶುರು ಮಾಡಿದರು. ಮಧ್ಯವಯಸ್ಕ ವ್ಯಕ್ತಿಯೂ ಹೊರಡಲು ಅಣಿಯಾದ. ‘ಒಂದೀಟು ಚಾ ಕುಡುದು ಹೋಗಣ್ಣ’ ಹೆಣ್ಣಿನ ಧ್ವನಿ ಕೇಳಿತು; ದೊಂಬರಾಟದ ಹೆಂಗಸು. ಹೊರಡಲು ಅಣಿಯಾದ ಮಧ್ಯವಯಸ್ಕ ವ್ಯಕ್ತಿ ನಿಂತ. ಪಕ್ಕದಲ್ಲಿಯ ಚಾದಂಗಡಿಯಲ್ಲಿ ಎಲ್ಲರೂ ಸೇರಿದರು. ‘ಎಲ್ಲರಿಗೂ ಚಾ ಕೊಡು’ ಎಂದು ಆದೇಶಿಸಿದ ಮಧ್ಯವಯಸ್ಕ ವ್ಯಕ್ತಿ. ಅಲ್ಲಿಯೇ ಇದ್ದ ಒಂದು ಕಟ್ಟಿಗೆಯ ಬೆಂಚಿನ ಮೇಲೆ ಕುಳಿತುಕೊಂಡ. ದೊಂಬರಾಟದವನೂ ಆ ಬೆಂಚಿನ ಇನ್ನೊಂದು ತುದಿಯಲ್ಲಿ ಕುಳಿತ. ಹೆಂಗಸು, ಮಗುವನ್ನು ತೊಡೆಯ ಮೇಲಿರಿಸಿ ನೆಲದ ಮೇಲೆ ಕುಳಿತು ಚಾ ಕುಡಿಯತೊಡಗಿದಳು. ಬಾಲಕಿ ಚಾ ಕುಡಿಯುತ್ತ ಈ ಅಪರಿಚಿತ ವ್ಯಕ್ತಿಯನ್ನು ನೋಡುತ್ತಿದ್ದಳು.

ದೊಂಬರಾಟದವ ಮತ್ತು ಮಧ್ಯವಯಸ್ಕ ಇಬ್ಬರೂ ಪರಸ್ಪರ ನೋಡಿದರು. ದೊಂಬರಾಟದವನು ಒಂದು ಮಾಸಿದ ಬನಿಯನ್ನು, ಒಂದು ಹಳೆಯ ಪ್ಯಾಂಟ್ ಹಾಕಿಕೊಂಡಿದ್ದ. ಸುಮಾರು ಮೂವತ್ತು ವಯಸ್ಸಾಗಿರಬಹುದು ಆದರೆ ನಲವತ್ತರ ಅಂಚಿನಲ್ಲಿದ್ದಂತೆ ಕಾಣುತ್ತಿದ್ದ. ಜೀವನವಿಡೀ ದೈಹಿಕ ಶ್ರಮ ಮಾಡಿದ್ದು ಒಂದು ಸಲ ನೋಡಿದರೇ ಗೊತ್ತಾಗುತ್ತಿತ್ತು. ಶುಭ್ರವಾದ ಅಂಗಿ, ಕರಿ ಶೂಸ್, ಕರಿ ಪ್ಯಾಂಟ್ ಹಾಕಿಕೊಂಡಿದ್ದ ಈ ಮಧ್ಯವಯಸ್ಕ ವ್ಯಕ್ತಿ ಚಾ ಬಿಸಿಯಾಗಿದ್ದರೂ ಬೇಗ ಬೇಗ ಕುಡಿಯುತ್ತಿದ್ದ. ಒಂದು ರೀತಿಯ ಮುಜುಗರ ಎದ್ದು ಕಾಣುತ್ತಿತ್ತು. ಈಗತಾನೆ ತಂತಿಯ ಮೇಲೆ ನಡೆದ ಬಾಲಕಿ ತನ್ನ ಕಡೆ ನೋಡುತ್ತಿದ್ದನ್ನು ಗಮನಿಸಿ ಮುಗುಳ್ನಕ್ಕ. ‘ಯಾವೂರು ನಿಮ್ದು?’ ಕೇಳಿದ ದೊಂಬರಾಟದವ. ‘ಮೈಸೂರು’ ಎಂದು ತಡವರಿಸಿ ಉತ್ತರ ಬಂತು. ಚಾ ಗ್ಲಾಸು ಖಾಲಿಯಾದೊಡನೇ ಐವತ್ತು ರೂಪಾಯಿಗಳನ್ನು ಚಾದಂಗಡಿಯವನ ಕೈಗಿತ್ತು, ‘ಬರ್ತೀನಿ’ ಎಂದು ಎದ್ದು ಹೊರಟ. ಮಳೆ ನಿಂತಿತ್ತು. ಚಾ ಕುಡಿದು ದೊಂಬರಾಟದವರೂ ಎದ್ದರು. ಚಾದಂಗಡಿಯನ್ನು ಕಾರಣವಿಲ್ಲದೇ ನಕ್ಕ.

ತನ್ನ ಹುಚ್ಚುತನಕ್ಕೆ ಖುಷಿಪಟ್ಟುಕೊಂಡು ಬಿರಬಿರನೇ ಹೆಜ್ಜೆ ಹಾಕುತ್ತಿದ್ದ ಆ ಮಧ್ಯವಯಸ್ಕ. ಇತ್ತ ದೊಂಬರಾಟದವರು ತಮ್ಮ ಸಾಮಾನುಗಳನ್ನು ಒಂದೆಡೆ ಕಲೆಹಾಕುವಲ್ಲಿ ತೊಡಗಿಸಿಕೊಂಡರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...