Homeಮುಖಪುಟರೇವಣ್ಣನವರ ಕುರಿತು ವ್ಯಂಗ್ಯವಾಡಲು ಹೋಗಿ ತೀವ್ರ ಟೀಕೆ-ನಿಂದನೆಗೊಳಗಾದ ವಿಶ್ವೇಶ್ವರ ಭಟ್‌!

ರೇವಣ್ಣನವರ ಕುರಿತು ವ್ಯಂಗ್ಯವಾಡಲು ಹೋಗಿ ತೀವ್ರ ಟೀಕೆ-ನಿಂದನೆಗೊಳಗಾದ ವಿಶ್ವೇಶ್ವರ ಭಟ್‌!

ಈ ಟ್ವೀಟ್‌ ಮೂಲಕ ವಿಶ್ವೇಶ್ವರ ಭಟ್ಟರು ಮಾಡಿದ್ದು ತಪ್ಪು ಎಂದು ಶೇ. 80ಕ್ಕೂ ಹೆಚ್ಚು ಜನ ಅಭಿಪ್ರಾಯಪಟ್ಟಿದ್ದಾರೆ.

- Advertisement -
- Advertisement -

ಪ್ರಪಂಚದೆಲ್ಲೆಡೆ ಕೊರೊನಾ ಹಬ್ಬುತ್ತಿದೆ. ಸಾವು ನೋವುಗಳು ದಿನೇ ದಿನೇ ಹೆಚ್ಚುತ್ತಿವೆ. ಇಡೀ ವೈದ್ಯಕೀಯ ಸಮೂಹ ಅದರ ವಿರುದ್ಧ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ಕೊರೊನಾ ವಿರುದ್ಧ ಐಕ್ಯಮತ್ಯ  ಸಾಧಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರು 9 ನಿಮಿಷಗಳ ಕಾಲ ಲೈಟ್‌ ಬಂದ್‌ ಮಾಡಿ ದೀಪ ಹಚ್ಚಲು ಕರೆ ನೀಡಿದ್ದರು.

ಪ್ರಧಾನಿಗಳ ಕರೆ ಕೇಳಿಬರುತ್ತಿದ್ದಂತೆಯೇ ಅದಕ್ಕೆ ಮತ್ತಷ್ಟು ಸುಳ್ಳುಗಳು ಪೋಣಿಸಿಕೊಳ್ಳಲಾರಂಭಿಸಿದ್ದವು. ದೀಪದ ಬೆಳಕಿಗೆ ಕೊರೊನಾ ಸಾಯುತ್ತದೆ, ದೀಪದ ಶಾಖಕ್ಕೆ ಶಕ್ತಿ ಇದೆ ಎಂದೆಲ್ಲಾ ಜನ ನಂಬಲು ಆರಂಭಿಸಿದ್ದರು. ಅಷ್ಟರಲ್ಲಿ ಮೈಸೂರಿನ ಬಿಜೆಪಿ ಶಾಸಕ ರಾಮ್‌ದಾಸ್‌ “ದೀಪ ಹಚ್ಚಿದರೆ ವೈರಸ್ ದೀಪದ ಬಳಿ ಬಂದು ಶಾಖಕ್ಕೆ ಸಾಯುತ್ತದೆ” ಎಂದು ಹೇಳಿಕೆ ನೀಡಿ ತೀವ್ರ ಮುಜುಗರಕ್ಕೊಳಗಾಗಿದ್ದರು.

ಇದನ್ನೂ  ಓದಿ: ದೀಪದ ಶಾಖಕ್ಕೆ ಕ್ರಿಮಿ ಸಾಯುತ್ತದೆ ಎಂದ ಬಿಜೆಪಿ ಶಾಸಕ ರಾಮದಾಸ್: ವ್ಯಾಪಕ ಟ್ರೋಲ್‌

ಇನ್ನೊಂದು ಕಡೆ ದೇಶದೆಲ್ಲೆಡೆ ಪ್ರಧಾನಿಗಳ ಮನವಿಗೆ ಜನ ಸ್ಪಂದಿಸಿದ್ದರು. ಕರ್ನಾಟಕದ ಮಾಜಿ ಸಚಿವ ಎಚ್‌.ಡಿ ರೇವಣ್ಣ ಸಹ ಮೋಂಬತ್ತಿ ಹಚ್ಚಿ ಪ್ರಧಾನಿಗಳ ಕರೆಗೆ ಓಗೊಟ್ಟಿದ್ದರು. ಆದರೆ ಆ ಫೋಟೊವನ್ನೇ ಬಳಸಿ ರೇವಣ್ಣನವರ ತೇಜೋವಧೆಗೆ ಮಾಡಲು ಮುಂದಾಗಿದ್ದ ಪತ್ರಕರ್ತ ವಿಶ್ವೇಶ್ವರ ಭಟ್ ಮೇಲೆ ನೆಟ್ಟಿಗರು ಮುಗಿಬಿದ್ದಿದ್ದು ವ್ಯಾಪಕ ಟೀಕೆ-ನಿಂದನೆಗಳ ಸುರಿಮಳೆ ಸುರಿಸಿದ್ದಾರೆ.

ಈ ರೀತಿಯಾಗಿ ಟ್ವಿಟ್ಟರ್‌ನಲ್ಲಿ ಎಚ್‌.ಡಿ ರೇವಣ್ಣನವರ ತೇಜೋವಧೆ ಮಾಡುವಂತಹ ಎರಡು ಪೋಸ್ಟ್‌ಗಳನ್ನು ವಿಶ್ವೇಶ್ವರ ಭಟ್‌ ಹಾಕಿದ್ದಾರೆ. ಇದು ಸಹಜವಾಗಿಯೇ ನೆಟ್ಟಿಗರನ್ನು ಕೆರಳಿಸಿದೆ. ಕೂಡಲೇ ವಿಶ್ವೇಶ್ವರ ಭಟ್‌ ಮೇಲೆ ಮುಗಿಬಿದ್ದ ಅವರು ವ್ಯಾಪಕ ಟೀಕೆ ಜೊತೆಗೆ ನಿಂದನೆಗಳ ಸುರಿಮಳೆ ಸುರಿಸಿದ್ದಾರೆ. ಕೆಲವು ಕೆಳಗಿನಂತಿವೆ ನೋಡಿ.

“ಹೌದು ನಿಮ್ಮ ಈ ಟ್ವೀಟ್ ನೋಡಿದ ಮೇಲೆ ಇಂತ ವಿಷ ಜಂತುಗಳ ಮದ್ಯೆ ನನಗೇನು ಕೆಲಸ ಅಂತ ಕೊರೊನಾ ಈ ದೇಶ ಬಿಟ್ಟು ಓಡಿ ಹೋದರು ಹೋಗಬಹುದು , atleast ನಿಮ್ಮ ಹೆಸರಿನ ಮುಂದೆ ಇರೋ ಪತ್ರಕರ್ತ ಅನ್ನೋ ಶಬ್ದಕ್ಕಾದರೂ ಬೆಲೆ ಕೊಡಿ ಭಟ್ರೆ” ಎಂದು ವಿನಾಯಕ್‌ನಾಯಕ್‌ ಟ್ವೀಟ್‌ ಮಾಡಿದ್ದಾರೆ.

“ವಿಶ್ವೇಶ್ವರ ಬಟ್ಟರೆ.. ನಾನು ನೀವೊಬ್ಬ ಪತ್ರಕರ್ತರೆಂದು ಭಾವಿಸಿ ನಿಮ್ಮನ್ನು follow ಮಾಡ್ತಿದ್ದೆ, ಆದರೆ ನೀವು ಈ ರೀತಿ ವೈಯಕ್ತಿಕವಾಗಿ ಗೌಡರ ಮನೆಯವರ ಮೇಲೆ ವ್ಯಂಗ್ಯವಾಡುವುದು ಅಸಯ್ಯದ ಸಂಗತಿ.. ನಿಮ್ಮ ಸ್ಥಾನಕ್ಕೆ ತಕ್ಕಾಗಿ ನೆಡೆದುಕೊಳ್ಳಿ.. ಮನೆಯಲ್ಲಿದ್ದಾಗ ಪಂಚೆ ಹಾಕಿಕೊಳ್ಳದೆ ಇನ್ನೇನು ಸೂಟ್, ಬೂಟ್ ಹಾಕಿಕೊಂಡು ಪೋಸ್ ಕೊಡಬೇಕೆ..” ಎಂದು ಶರತ್‌ ಕುಮಾರ್‌ ಜಿ.ಡಿ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಸ್ವಲ್ಪ ಅತಿಯಾಯಿತು ಭಟ್ರೇ. ಅವರು ಆಚರಿಸಿದರೂ ಅಣಕಿಸುತ್ತೀರ, ಆಚರಿಸದಿದ್ದರೂ ಅಣಕಿಸುತ್ತೀರ.. ಎಂದು ರೋಹಿತ್‌ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

“ಭಟ್ರೇ ನಂಜು ಮೈ ಇಡೀ ತುಂಬಿದ ರೀತಿ ಕಾಣಿಸ್ತಾ ಇದೆ ನಿಮ್ಮ ಟ್ವೀಟ್ ನೋಡುವಾಗ. ಇಷ್ಟೊಂದು ವಿಷ ದೇಹದಲ್ಲಿ ಇಟ್ಕೊಂಡು ಹೇಗೆ ಜೀವಂತ ಇದ್ದೀರಿ?” ಎಂದು ಯಶ್ವಿನ್‌ಎಂಬುವವರು ಪ್ರಶ್ನಿಸಿದ್ದಾರೆ.

“ಒಂದು ಜನಾಂಗದ ಬಟ್ಟೆಯನ್ನು ಅಣುಕಿಸುವ ಮುಂಚೆ ನಿಮ್ಮ ಹಿರಿಯರ ಲಂಗೋಟಿ ಜ್ಞಾಪಸಿಕೋ” ಎಂದು ಮಂಜುನಾಥ್‌ ಜವರನಹಳ್ಳಿಯವರು ವ್ಯಂಗ್ಯವಾಡಿದ್ದಾರೆ.

Sir, ಪತ್ರಿಕೆಯೊಂದರ ಸಂಪಾದಕರಾಗಿ ನೀವು ಈ ರೀತಿ ಟ್ವೀಟ್ ಮಾಡುವುದು ಸರಿಯಲ್ಲ. ಪ್ರಧಾನಿಯ ಕರೆಗೆ ಇವರು ಸ್ಪಂದಿಸಿದ್ದಾರೆ, ಅದೇ ದೊಡ್ಡ ವಿಷಯ. ಈ ರೀತಿ ಟ್ರೋಲ್ ಮಾಡುವಷ್ಟು ಸಣ್ಣ ಸ್ಥಾನದಲ್ಲಿ ನೀವು ಇಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ದೀಪ ಹಚ್ಚಿದರೂ ಟೀಕೆ ಹಚ್ಚದಿದ್ದರೂ ಟೀಕೆ….. ವಾವ್…..ನಿಮ್ಮಂತ ನಿಷ್ಪ್ರಯೋಜಕರಿಂದ ದೇಶಕ್ಕೆ ಏನು ಪ್ರಯೋಜನವಿಲ್ಲ…ಹೊರಡು… ನೀವು 365 ದಿನ ಹಾಕೋದು ಇದೆ ಪಾಂಡಿತ್ಯದ ಬಟ್ಟೆ ಅಲ್ಲವಾ…..??? ಎಂದು ಮೋಹನ್‌ ಪ್ರಶ್ನಿಸಿದ್ದಾರೆ.

“ಪತ್ರಕರ್ತರೇನು ದೈವಪುತ್ರರಲ್ಲ ಸಲೀಸಾಗಿ ಇನ್ನೊಬ್ಬರ ತೇಜೋವಧೆ ಮಾಡಲು. ಅದು ಅವರ ಇಚ್ಛೆ. ಏಕವಚನದಿಂದ ಮಾತನಾಡುವುದನ್ನು ಬಿಡಿ. ಗೌರವ ಕೊಡಿ” ಎಂದು ದೀಪಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಟ್ಟರೆ ತಾವು ಒಂದು ಪತ್ರಿಕೆಯ ಸಂಪಾದಕರಾ ಇಲ್ಲ ರಾಜಕೀಯ ಪಕ್ಷದ ಸಾಮಾಜಿಕ ಜಾಲತಾಣ ಸಂಚಾಲಕರಾ ಅಂತ ನನಗೆ ಅನುಮಾನ ಬರತಾ ಇದೆ ಸದ್ಯಕ್ಕೆ ಯಾವುದೆ ನಾಮಕರಣಗಳು ಇಲ್ಲ ಸ್ವಲ್ಪ ತಡೆಯಿರಿ ಎಂದು ಪರಮ ಆತ್ಮ ಎಂಬುವವರು ಟೀಕಿಸಿದ್ದಾರೆ.

ಆ ಫೋಟೊದಲ್ಲಿ ತಪ್ಪೇನಿದೆ. ರಾಮದಾಸ್ ನ ಮೂರ್ಖ ಹೇಳಿಕೆನಾ ಖಂಡಿಸದ ನೀನು, ರೇವಣ್ಣನನ್ನು ಕಂಡರೆ ಯಾಕೆ ಉರಿ? ಥೂ ನೀನು ಒಬ್ಬ ಮನುಷ್ಯನಾ? ನಿನ್ನಂಥ ಜಾತಿವ್ಯಾದಿ ಕ್ರಿಮಿನಾ ನೋಡಿರಲಿಲ್ಲ.. ಥೂ ಅಯೋಗ್ಯ ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.

ಈ ಟ್ವೀಟ್‌ ಮೂಲಕ ವಿಶ್ವೇಶ್ವರ ಭಟ್ಟರು ಮಾಡಿದ್ದು ತಪ್ಪು ಎಂದು ಶೇ. 80ಕ್ಕೂ ಹೆಚ್ಚು ಜನ ಅಭಿಪ್ರಾಯಪಟ್ಟಿದ್ದಾರೆ. ಇದೇ ಭಟ್ಟರು ಸಹ ಅದೇ ರೀತಿಯಲ್ಲಿ ತಾವು ಕೂಡ ದೀಪ ಹಚ್ಚಿಕೊಂಡು ತಮ್ಮ ಮಗಳ ಜೊತೆ ನಿಂತಿರುವ ವಿಡಿಯೋವನ್ನು ಕೆಲವೇ ನಿಮಿಷಗಳ ಮುಂಚೆ ಷೇರ್ ಮಾಡಿದ್ದಾರೆ. ಅಲ್ಲದೇ ಅತ್ಯಾಚಾರದ ಆರೋಪ ಹೊತ್ತಿರುವ ರಾಘವೇಶ್ವರ ಭಾರತಿ ಸ್ವಾಮಿಯವರು ದೀಪಹಿಡಿದಿರುವ ಫೋಟೊವನ್ನು ಸಹ ಅವರೇ ಷೇರ್‌ ಮಾಡಿದ್ದಾರೆ. ಆದರೆ ರೇವಣ್ಣನವರ ಮೇಲೆ ಮಾತ್ರ ಅಸೂಯೆ ವ್ಯಕ್ತಪಡಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ.

ವಿಶ್ವೇಶ್ವರ ಭಟ್ಟರು ಈ ರೀತಿ ವಯಕ್ತಿಕ ತೇಜೋವಧೇ ಮಾಡಲು ಹೋಗಿ ತಾವೇ ಮುಜುಗರಕ್ಕೊಳಗಾಗಿರುವುದು ಇದೇ ಮೊದಲನೇನಲ್ಲ. ಗೌರಿ ಲಂಕೇಶ್‌ ಹತ್ಯಾ ವಿರೋಧಿ ಕಾರ್ಯಕ್ರಮದಲ್ಲಿ ಜನರಿಲ್ಲ ಎಂದು ತೋರಿಸಲು ಹೋಗಿ ಟೀಕೆಗೆ ಒಳಗಾಗಿದ್ದರು. ಮಹಿಳೆಯರ ಒಳವಸ್ತ್ರಗಳ ಕುರಿತೆಲ್ಲಾ ತಮಾಷೆ ಮಾಡಲು ಹೋಗಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದ್ದರು.


ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. Vishwanath bhatre, you showed your true colour. People like you are disgrace to the community. Instead of commenting on Revanna’s dress like an idiot, appreciate his concern about the society at this crucial stage. We need to be united at this stage. Shame on you.

  2. Ivnu obba ganji kendrada giraki.. eno sarkarda mattinalli kelsa irbeku.. 90 % mediagalu, rajakaranigalu patrakartaru ovatu enadaru success agidare, adu e gowdara kutumba dinda, avra bhage olledo, kettado mstadidre success agtini anta e papi nu hage madidane..

  3. What Mr. Revanna has done, it is what PM Mr. Modi ji wanted from him as a citizen, of India and what Mr. BHATT has done is wrong and should apologize for his misdeed.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...