HomeಮುಖಪುಟPPE ಗಳ ಕೊರತೆ: ದೆಹಲಿಯಲ್ಲಿ ಬಿಜೆಪಿ, ಆಪ್‌ ನಡುವೆ ಜಟಾಪಟಿ - 10 ಅಂಶಗಳು

PPE ಗಳ ಕೊರತೆ: ದೆಹಲಿಯಲ್ಲಿ ಬಿಜೆಪಿ, ಆಪ್‌ ನಡುವೆ ಜಟಾಪಟಿ – 10 ಅಂಶಗಳು

- Advertisement -
- Advertisement -

ಕೊರೊನಾ ಭಾರತದಲ್ಲಿ ವೇಗವಾಗಿ ಹಬ್ಬುತ್ತಿದೆ. ಹಾಗಾಗಿ PPE ಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿಯ ಆಡಳಿತರೂಢ ಆಪ್‌ ಒತ್ತಾಯಿಸಿತ್ತು. ಆದರೆ ಬಿಜೆಪಿಯ ಗೌತಮ್‌ ಗಂಭೀರ್‌ ಆಪ್‌ ಮೇಲೆ ಅಹಂಕಾರ ಬಿಟ್ಟು ಕೆಲಸ ಮಾಡಿ, ಹಣ ಬೇಕಾದರೆ ನಾನು ಕೊಡುತ್ತೇನೆ ಎಂದು ದಾಳಿ ಮಾಡಿದರು. ಅದಕ್ಕೆ ಸಿಎಂ ಅರವಿಂದ್‌ ಕೇಜ್ರಿವಾಲ್‌ ಉತ್ತರಿಸಿದ್ದಾರೆ. ಒಟ್ಟಾರೆ ಪ್ರಕರಣದ 10 ಮುಖ್ಯಾಂಶಗಳು ಇಲ್ಲಿವೆ.

  1. ನಾವು ಪಿಪಿಇ ಕಿಟ್‌ಗಳ ಕೊರತೆಯನ್ನು ಎದುರಿಸುತ್ತಿದ್ದೇವೆ. ನಮ್ಮ ವೈದ್ಯರು ಮತ್ತು ದಾದಿಯರಿಗೆ ಅಗತ್ಯವಾದ ಕಿಟ್‌ಗಳನ್ನು ಪೂರೈಸಲು ನಾವು ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಆದರೆ ನಾವು ಈವರೆಗೆ ಕೇಂದ್ರ ಸರ್ಕಾರದಿಂದ ಒಂದು ಪಿಪಿಇ ಕಿಟ್ ಕೂಡ ಸ್ವೀಕರಿಸಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಏಪ್ರಿಲ್‌ ನಾಲ್ಕರಂದು ಆರೋಪಿಸಿದ್ದರು.

2. ಅಲ್ಲದೇ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾರವರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರಿಗೆ ಬರೆದ ಪತ್ರದಲ್ಲಿ, “ಕೇಂದ್ರವು 17,000 ಕೋಟಿ ರೂ.ಗಳನ್ನು ರಾಜ್ಯಗಳಿಗೆ ವಿಪತ್ತು ನಿಧಿಯಿಂದ ಬಿಡುಗಡೆ ಮಾಡಿದೆ. ಆದರೆ ದೆಹಲಿಗೆ ಒಂದು ರೂಪಾಯಿ ಕೂಡ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

3. “ದೆಹಲಿಯಲ್ಲಿ ವಾರ್ಷಿಕ 65,000 ಕೋಟಿ ರೂ.ಗಳ ಬಜೆಟ್ ಮಂಡಿಸುವ ಆಪ್‌ ಪಕ್ಷವು 1-2 ಕೋಟಿ ರೂ.ಗಳ ಪಿಪಿಇ ಕಿಟ್‌ಗಳನ್ನು ಖರೀದಿಸಲು ಅಸಮರ್ಥವಾಗಿದೆ ಅಂದರೆ ಅರವಿಂದ್ ಕೇಜ್ರಿವಾಲ್ ಅವರ ಉದ್ದೇಶದ ಏನು” ಎಂದು ಬಿಜೆಪಿಯ ದೆಹಲಿ ಘಟಕದ ಅಧ್ಯಕ್ಷ ಮನೋಜ್ ತಿವಾರಿ ಟ್ವೀಟ್ ಮಾಡಿದ್ದರು.

4. ಬೆಳಿಗ್ಗೆಯಿಂದ ಸಂಜೆಯವರೆಗೆ ಪ್ರಚಾರಕ್ಕಾಗಿ ಟಿವಿಯಲ್ಲಿ ಕುಳಿತರೆ ಪ್ರಯೋಜನವಿಲ್ಲ. ಬದಲು ಪಿಪಿಈಗಳನ್ನು ಖರೀದಿಸಿದರೆ ಸಾರ್ವಜನಿಕರಿಗೆ ಸ್ವಲ್ಪ ಒಳ್ಳೆಯದು ಸಿಗುತ್ತದೆ. 2 ವಾರಗಳ ಹಿಂದೆ ನಾನು ಪಿಪಿಇ ಕಿಟ್‌ಗಳು ಮತ್ತು ಮುಖವಾಡಗಳಿಗಾಗಿ 50 ಲಕ್ಷ ನೀಡಲು ಪ್ರತಿಜ್ಞೆ ಮಾಡಿದ್ದೇನೆ, ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈಗ ಕೇಂದ್ರವನ್ನು ಕೇಳುತ್ತಿದ್ದಾರೆ. ಅರವಿಂದ್ ಕೇಜ್ರಿವಾಲ್ ಮೊಸಳೆ ಕಣ್ಣೀರು ಮತ್ತು ಬಲಿಪಶು ಎಂಬ ಎರಡು ಕಾರ್ಡ್ ಗಳನ್ನು ಆಡುತ್ತಿದ್ದಾರೆ ಎಂದು ಗೌತಮ್‌ ಗಂಭೀರ್‌ ಟ್ವೀಟ್‌ ಮಾಡುವ ಮೂಳಕ ಆರೋಪಿಸಿದ್ದಾರೆ.

5. ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಉಪಮುಖ್ಯಮಂತ್ರಿ ಹಣದ ಅಗತ್ಯವಿದೆ ಎಂದು ಹೇಳುತ್ತಾರೆ. ಆದರೆ ಸಂಸದರ ನಿಧಿಯಿಂದ 50 ಲಕ್ಷ ಹಣ ತೆಗೆದುಕೊಳ್ಳಲು ಅವರಿಗೆ ಅವಕಾಶ ನೀಡಿದ್ದರೂ ಸಹ ಅದಕ್ಕೆ ಅವರ ಬೃಹತ್ ಅಹಂಕಾರವು ಅಡ್ಡಬರುತ್ತದೆ. ಇನ್ನೂ 50 ಲಕ್ಷ ಹೆಚ್ಚಿಗೆ ಕೊಡಲು ಸಿದ್ದನಿದ್ದೇನೆ. ಇದರಿಂದ ಮುಗ್ಧರು ತೊಂದರೆ ಅನುಭವಿಸುವುದಿಲ್ಲ! “1 ಕೋಟಿ ಹಣವು ಕನಿಷ್ಠ ಹಲವು ದಿನಗಳ ಮುಖವಾಡಗಳು ಮತ್ತು ಪಿಪಿಇ ಕಿಟ್‌ಗಳ ತುರ್ತು ಅಗತ್ಯವನ್ನು ಪರಿಹರಿಸುತ್ತದೆ, ಅವರು ದೆಹಲಿಗೆ ಆದ್ಯತೆ ನೀಡುತ್ತಾರೆಂದು ಭಾವಿಸುತ್ತೇವೆ” ಎಂದು ಗಂಭೀರ್ ಮತ್ತೊಂದು ಪೋಸ್ಟ್ ಮಾಡಿದ್ದಾರೆ.

6. “ಗೌತಮ್ ಜಿ, ನಿಮ್ಮ ಕೊಡುಗೆಗಾಗಿ ಧನ್ಯವಾದಗಳು. ಸಮಸ್ಯೆ ಹಣದಲ್ಲ ಆದರೆ ಪಿಪಿಇ ಕಿಟ್‌ಗಳ ಲಭ್ಯತೆಯದ್ದು. ತಕ್ಷಣವೇ ಎಲ್ಲಿಂದಲಾದರೂ ಅವುಗಳನ್ನು ಪಡೆಯಲು ನಮಗೆ ಸಹಾಯ ಮಾಡಿದರೆ ನಾವು ಕೃತಜ್ಞರಾಗಿರುತ್ತೇವೆ. ದೆಹಲಿ ಸರ್ಕಾರ ಅವುಗಳನ್ನು ಖರೀದಿಸುತ್ತದೆ. ಧನ್ಯವಾದಗಳು” ಎಂದು ಸಿಎಂ ಕೇಜ್ರಿವಾಲ್ ಟ್ವೀಟ್ ಮೂಲಕ ಗೌತಮ್‌ ಗಂಭೀರ್‌ರವರಿಗೆ ಉತ್ತರಿಸಿದ್ದಾರೆ.

7. ದೆಹಲಿಯಲ್ಲಿ ಕನಿಷ್ಠ 24 ಆರೋಗ್ಯ ಕಾರ್ಯಕರ್ತರು-ವೈದ್ಯರು, ದಾದಿಯರು, ನೈರ್ಮಲ್ಯ ಸಿಬ್ಬಂದಿಗಳು ಕೋವಿಡ್ -19 ಸೋಂಕಿಗೆ ಒಳಗಾಗಿದ್ದಾರೆ. ಅವರು ಪೂರ್ಣ-ದೇಹದ ಸೂಟುಗಳು, ಕನ್ನಡಕಗಳು, ಮುಖವಾಡಗಳು, ಕೈಗವಸುಗಳು ಮತ್ತು ಶೂ ಕವರ್‌ಗಳಂತಹ ಸಾಕಷ್ಟು ಪಿಪಿಇಗಳ ಲಭ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ವೈದ್ಯಕೀಯ ಸಲಕರಣೆಗಳು ಸಮಯಕ್ಕೆ ಸರಿಯಾಗಿ ಸಿಕ್ಕಿದ್ದರೆ ಸಮಸ್ಯೆ ಉಲ್ಬಣವಾಗುತ್ತಿರಲಿಲ್ಲ ಎಂದು ದೂರಿದ್ದಾರೆ.

8. ಭಾರತದಲ್ಲಿ ಸೋಂಕಿತರ ಸಂಖ್ಯೆ 4000 ದಾಟಿದ್ದು, ಮೃತಪಟ್ಟವರ ಸಂಖ್ಯೆ 100 ರ ಗಡಿ ದಾಟಿದೆ.

9. ದೆಹಲಿಯು ಅತಿ ಹೆಚ್ಚು ಪ್ರಕರಣಗಳು ಕಂಡುಬಂದ ರಾಜ್ಯಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ ತಮಿಳುನಾಡು ಎರಡನೇ ಸ್ಥಾನದಲ್ಲಿದೆ.

10. ವೈದ್ಯರುಗಳಿಗೆ ಕೊರೊನಾ ಹರಡಲು ಮೋದಿ ಸರ್ಕಾರವೇ ಕಾರಣವಾಗಿದೆ. ಅವರು ವೈದ್ಯಕೀಯ ಸಲಕರಣೆಗಳನ್ನು ಖರೀದಿಸಲು ಮುಂದಾಗದೆ, ಚಪ್ಪಳೆ ತಟ್ಟಲು, ದೀಪ ಹಚ್ಚಲು ಕರೆ ಕೊಡುವಲ್ಲಿ ನಿರತರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...