Homeಮುಖಪುಟರೇವಣ್ಣನವರ ಕುರಿತು ವ್ಯಂಗ್ಯವಾಡಲು ಹೋಗಿ ತೀವ್ರ ಟೀಕೆ-ನಿಂದನೆಗೊಳಗಾದ ವಿಶ್ವೇಶ್ವರ ಭಟ್‌!

ರೇವಣ್ಣನವರ ಕುರಿತು ವ್ಯಂಗ್ಯವಾಡಲು ಹೋಗಿ ತೀವ್ರ ಟೀಕೆ-ನಿಂದನೆಗೊಳಗಾದ ವಿಶ್ವೇಶ್ವರ ಭಟ್‌!

ಈ ಟ್ವೀಟ್‌ ಮೂಲಕ ವಿಶ್ವೇಶ್ವರ ಭಟ್ಟರು ಮಾಡಿದ್ದು ತಪ್ಪು ಎಂದು ಶೇ. 80ಕ್ಕೂ ಹೆಚ್ಚು ಜನ ಅಭಿಪ್ರಾಯಪಟ್ಟಿದ್ದಾರೆ.

- Advertisement -
- Advertisement -

ಪ್ರಪಂಚದೆಲ್ಲೆಡೆ ಕೊರೊನಾ ಹಬ್ಬುತ್ತಿದೆ. ಸಾವು ನೋವುಗಳು ದಿನೇ ದಿನೇ ಹೆಚ್ಚುತ್ತಿವೆ. ಇಡೀ ವೈದ್ಯಕೀಯ ಸಮೂಹ ಅದರ ವಿರುದ್ಧ ಹೋರಾಡುತ್ತಿದೆ. ಇಂತಹ ಸಮಯದಲ್ಲಿ ಕೊರೊನಾ ವಿರುದ್ಧ ಐಕ್ಯಮತ್ಯ  ಸಾಧಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿಯವರು 9 ನಿಮಿಷಗಳ ಕಾಲ ಲೈಟ್‌ ಬಂದ್‌ ಮಾಡಿ ದೀಪ ಹಚ್ಚಲು ಕರೆ ನೀಡಿದ್ದರು.

ಪ್ರಧಾನಿಗಳ ಕರೆ ಕೇಳಿಬರುತ್ತಿದ್ದಂತೆಯೇ ಅದಕ್ಕೆ ಮತ್ತಷ್ಟು ಸುಳ್ಳುಗಳು ಪೋಣಿಸಿಕೊಳ್ಳಲಾರಂಭಿಸಿದ್ದವು. ದೀಪದ ಬೆಳಕಿಗೆ ಕೊರೊನಾ ಸಾಯುತ್ತದೆ, ದೀಪದ ಶಾಖಕ್ಕೆ ಶಕ್ತಿ ಇದೆ ಎಂದೆಲ್ಲಾ ಜನ ನಂಬಲು ಆರಂಭಿಸಿದ್ದರು. ಅಷ್ಟರಲ್ಲಿ ಮೈಸೂರಿನ ಬಿಜೆಪಿ ಶಾಸಕ ರಾಮ್‌ದಾಸ್‌ “ದೀಪ ಹಚ್ಚಿದರೆ ವೈರಸ್ ದೀಪದ ಬಳಿ ಬಂದು ಶಾಖಕ್ಕೆ ಸಾಯುತ್ತದೆ” ಎಂದು ಹೇಳಿಕೆ ನೀಡಿ ತೀವ್ರ ಮುಜುಗರಕ್ಕೊಳಗಾಗಿದ್ದರು.

ಇದನ್ನೂ  ಓದಿ: ದೀಪದ ಶಾಖಕ್ಕೆ ಕ್ರಿಮಿ ಸಾಯುತ್ತದೆ ಎಂದ ಬಿಜೆಪಿ ಶಾಸಕ ರಾಮದಾಸ್: ವ್ಯಾಪಕ ಟ್ರೋಲ್‌

ಇನ್ನೊಂದು ಕಡೆ ದೇಶದೆಲ್ಲೆಡೆ ಪ್ರಧಾನಿಗಳ ಮನವಿಗೆ ಜನ ಸ್ಪಂದಿಸಿದ್ದರು. ಕರ್ನಾಟಕದ ಮಾಜಿ ಸಚಿವ ಎಚ್‌.ಡಿ ರೇವಣ್ಣ ಸಹ ಮೋಂಬತ್ತಿ ಹಚ್ಚಿ ಪ್ರಧಾನಿಗಳ ಕರೆಗೆ ಓಗೊಟ್ಟಿದ್ದರು. ಆದರೆ ಆ ಫೋಟೊವನ್ನೇ ಬಳಸಿ ರೇವಣ್ಣನವರ ತೇಜೋವಧೆಗೆ ಮಾಡಲು ಮುಂದಾಗಿದ್ದ ಪತ್ರಕರ್ತ ವಿಶ್ವೇಶ್ವರ ಭಟ್ ಮೇಲೆ ನೆಟ್ಟಿಗರು ಮುಗಿಬಿದ್ದಿದ್ದು ವ್ಯಾಪಕ ಟೀಕೆ-ನಿಂದನೆಗಳ ಸುರಿಮಳೆ ಸುರಿಸಿದ್ದಾರೆ.

ಈ ರೀತಿಯಾಗಿ ಟ್ವಿಟ್ಟರ್‌ನಲ್ಲಿ ಎಚ್‌.ಡಿ ರೇವಣ್ಣನವರ ತೇಜೋವಧೆ ಮಾಡುವಂತಹ ಎರಡು ಪೋಸ್ಟ್‌ಗಳನ್ನು ವಿಶ್ವೇಶ್ವರ ಭಟ್‌ ಹಾಕಿದ್ದಾರೆ. ಇದು ಸಹಜವಾಗಿಯೇ ನೆಟ್ಟಿಗರನ್ನು ಕೆರಳಿಸಿದೆ. ಕೂಡಲೇ ವಿಶ್ವೇಶ್ವರ ಭಟ್‌ ಮೇಲೆ ಮುಗಿಬಿದ್ದ ಅವರು ವ್ಯಾಪಕ ಟೀಕೆ ಜೊತೆಗೆ ನಿಂದನೆಗಳ ಸುರಿಮಳೆ ಸುರಿಸಿದ್ದಾರೆ. ಕೆಲವು ಕೆಳಗಿನಂತಿವೆ ನೋಡಿ.

“ಹೌದು ನಿಮ್ಮ ಈ ಟ್ವೀಟ್ ನೋಡಿದ ಮೇಲೆ ಇಂತ ವಿಷ ಜಂತುಗಳ ಮದ್ಯೆ ನನಗೇನು ಕೆಲಸ ಅಂತ ಕೊರೊನಾ ಈ ದೇಶ ಬಿಟ್ಟು ಓಡಿ ಹೋದರು ಹೋಗಬಹುದು , atleast ನಿಮ್ಮ ಹೆಸರಿನ ಮುಂದೆ ಇರೋ ಪತ್ರಕರ್ತ ಅನ್ನೋ ಶಬ್ದಕ್ಕಾದರೂ ಬೆಲೆ ಕೊಡಿ ಭಟ್ರೆ” ಎಂದು ವಿನಾಯಕ್‌ನಾಯಕ್‌ ಟ್ವೀಟ್‌ ಮಾಡಿದ್ದಾರೆ.

“ವಿಶ್ವೇಶ್ವರ ಬಟ್ಟರೆ.. ನಾನು ನೀವೊಬ್ಬ ಪತ್ರಕರ್ತರೆಂದು ಭಾವಿಸಿ ನಿಮ್ಮನ್ನು follow ಮಾಡ್ತಿದ್ದೆ, ಆದರೆ ನೀವು ಈ ರೀತಿ ವೈಯಕ್ತಿಕವಾಗಿ ಗೌಡರ ಮನೆಯವರ ಮೇಲೆ ವ್ಯಂಗ್ಯವಾಡುವುದು ಅಸಯ್ಯದ ಸಂಗತಿ.. ನಿಮ್ಮ ಸ್ಥಾನಕ್ಕೆ ತಕ್ಕಾಗಿ ನೆಡೆದುಕೊಳ್ಳಿ.. ಮನೆಯಲ್ಲಿದ್ದಾಗ ಪಂಚೆ ಹಾಕಿಕೊಳ್ಳದೆ ಇನ್ನೇನು ಸೂಟ್, ಬೂಟ್ ಹಾಕಿಕೊಂಡು ಪೋಸ್ ಕೊಡಬೇಕೆ..” ಎಂದು ಶರತ್‌ ಕುಮಾರ್‌ ಜಿ.ಡಿ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ಸ್ವಲ್ಪ ಅತಿಯಾಯಿತು ಭಟ್ರೇ. ಅವರು ಆಚರಿಸಿದರೂ ಅಣಕಿಸುತ್ತೀರ, ಆಚರಿಸದಿದ್ದರೂ ಅಣಕಿಸುತ್ತೀರ.. ಎಂದು ರೋಹಿತ್‌ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

“ಭಟ್ರೇ ನಂಜು ಮೈ ಇಡೀ ತುಂಬಿದ ರೀತಿ ಕಾಣಿಸ್ತಾ ಇದೆ ನಿಮ್ಮ ಟ್ವೀಟ್ ನೋಡುವಾಗ. ಇಷ್ಟೊಂದು ವಿಷ ದೇಹದಲ್ಲಿ ಇಟ್ಕೊಂಡು ಹೇಗೆ ಜೀವಂತ ಇದ್ದೀರಿ?” ಎಂದು ಯಶ್ವಿನ್‌ಎಂಬುವವರು ಪ್ರಶ್ನಿಸಿದ್ದಾರೆ.

“ಒಂದು ಜನಾಂಗದ ಬಟ್ಟೆಯನ್ನು ಅಣುಕಿಸುವ ಮುಂಚೆ ನಿಮ್ಮ ಹಿರಿಯರ ಲಂಗೋಟಿ ಜ್ಞಾಪಸಿಕೋ” ಎಂದು ಮಂಜುನಾಥ್‌ ಜವರನಹಳ್ಳಿಯವರು ವ್ಯಂಗ್ಯವಾಡಿದ್ದಾರೆ.

Sir, ಪತ್ರಿಕೆಯೊಂದರ ಸಂಪಾದಕರಾಗಿ ನೀವು ಈ ರೀತಿ ಟ್ವೀಟ್ ಮಾಡುವುದು ಸರಿಯಲ್ಲ. ಪ್ರಧಾನಿಯ ಕರೆಗೆ ಇವರು ಸ್ಪಂದಿಸಿದ್ದಾರೆ, ಅದೇ ದೊಡ್ಡ ವಿಷಯ. ಈ ರೀತಿ ಟ್ರೋಲ್ ಮಾಡುವಷ್ಟು ಸಣ್ಣ ಸ್ಥಾನದಲ್ಲಿ ನೀವು ಇಲ್ಲ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ದೀಪ ಹಚ್ಚಿದರೂ ಟೀಕೆ ಹಚ್ಚದಿದ್ದರೂ ಟೀಕೆ….. ವಾವ್…..ನಿಮ್ಮಂತ ನಿಷ್ಪ್ರಯೋಜಕರಿಂದ ದೇಶಕ್ಕೆ ಏನು ಪ್ರಯೋಜನವಿಲ್ಲ…ಹೊರಡು… ನೀವು 365 ದಿನ ಹಾಕೋದು ಇದೆ ಪಾಂಡಿತ್ಯದ ಬಟ್ಟೆ ಅಲ್ಲವಾ…..??? ಎಂದು ಮೋಹನ್‌ ಪ್ರಶ್ನಿಸಿದ್ದಾರೆ.

“ಪತ್ರಕರ್ತರೇನು ದೈವಪುತ್ರರಲ್ಲ ಸಲೀಸಾಗಿ ಇನ್ನೊಬ್ಬರ ತೇಜೋವಧೆ ಮಾಡಲು. ಅದು ಅವರ ಇಚ್ಛೆ. ಏಕವಚನದಿಂದ ಮಾತನಾಡುವುದನ್ನು ಬಿಡಿ. ಗೌರವ ಕೊಡಿ” ಎಂದು ದೀಪಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಟ್ಟರೆ ತಾವು ಒಂದು ಪತ್ರಿಕೆಯ ಸಂಪಾದಕರಾ ಇಲ್ಲ ರಾಜಕೀಯ ಪಕ್ಷದ ಸಾಮಾಜಿಕ ಜಾಲತಾಣ ಸಂಚಾಲಕರಾ ಅಂತ ನನಗೆ ಅನುಮಾನ ಬರತಾ ಇದೆ ಸದ್ಯಕ್ಕೆ ಯಾವುದೆ ನಾಮಕರಣಗಳು ಇಲ್ಲ ಸ್ವಲ್ಪ ತಡೆಯಿರಿ ಎಂದು ಪರಮ ಆತ್ಮ ಎಂಬುವವರು ಟೀಕಿಸಿದ್ದಾರೆ.

ಆ ಫೋಟೊದಲ್ಲಿ ತಪ್ಪೇನಿದೆ. ರಾಮದಾಸ್ ನ ಮೂರ್ಖ ಹೇಳಿಕೆನಾ ಖಂಡಿಸದ ನೀನು, ರೇವಣ್ಣನನ್ನು ಕಂಡರೆ ಯಾಕೆ ಉರಿ? ಥೂ ನೀನು ಒಬ್ಬ ಮನುಷ್ಯನಾ? ನಿನ್ನಂಥ ಜಾತಿವ್ಯಾದಿ ಕ್ರಿಮಿನಾ ನೋಡಿರಲಿಲ್ಲ.. ಥೂ ಅಯೋಗ್ಯ ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ.

ಈ ಟ್ವೀಟ್‌ ಮೂಲಕ ವಿಶ್ವೇಶ್ವರ ಭಟ್ಟರು ಮಾಡಿದ್ದು ತಪ್ಪು ಎಂದು ಶೇ. 80ಕ್ಕೂ ಹೆಚ್ಚು ಜನ ಅಭಿಪ್ರಾಯಪಟ್ಟಿದ್ದಾರೆ. ಇದೇ ಭಟ್ಟರು ಸಹ ಅದೇ ರೀತಿಯಲ್ಲಿ ತಾವು ಕೂಡ ದೀಪ ಹಚ್ಚಿಕೊಂಡು ತಮ್ಮ ಮಗಳ ಜೊತೆ ನಿಂತಿರುವ ವಿಡಿಯೋವನ್ನು ಕೆಲವೇ ನಿಮಿಷಗಳ ಮುಂಚೆ ಷೇರ್ ಮಾಡಿದ್ದಾರೆ. ಅಲ್ಲದೇ ಅತ್ಯಾಚಾರದ ಆರೋಪ ಹೊತ್ತಿರುವ ರಾಘವೇಶ್ವರ ಭಾರತಿ ಸ್ವಾಮಿಯವರು ದೀಪಹಿಡಿದಿರುವ ಫೋಟೊವನ್ನು ಸಹ ಅವರೇ ಷೇರ್‌ ಮಾಡಿದ್ದಾರೆ. ಆದರೆ ರೇವಣ್ಣನವರ ಮೇಲೆ ಮಾತ್ರ ಅಸೂಯೆ ವ್ಯಕ್ತಪಡಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ.

ವಿಶ್ವೇಶ್ವರ ಭಟ್ಟರು ಈ ರೀತಿ ವಯಕ್ತಿಕ ತೇಜೋವಧೇ ಮಾಡಲು ಹೋಗಿ ತಾವೇ ಮುಜುಗರಕ್ಕೊಳಗಾಗಿರುವುದು ಇದೇ ಮೊದಲನೇನಲ್ಲ. ಗೌರಿ ಲಂಕೇಶ್‌ ಹತ್ಯಾ ವಿರೋಧಿ ಕಾರ್ಯಕ್ರಮದಲ್ಲಿ ಜನರಿಲ್ಲ ಎಂದು ತೋರಿಸಲು ಹೋಗಿ ಟೀಕೆಗೆ ಒಳಗಾಗಿದ್ದರು. ಮಹಿಳೆಯರ ಒಳವಸ್ತ್ರಗಳ ಕುರಿತೆಲ್ಲಾ ತಮಾಷೆ ಮಾಡಲು ಹೋಗಿ ವ್ಯಾಪಕ ಟ್ರೋಲ್‌ಗೆ ಒಳಗಾಗಿದ್ದರು.


ಇದನ್ನೂ ಓದಿ: ಯಾರೂ ಸಹ ಅಲ್ಪಸಂಖ್ಯಾತ ಮುಸ್ಲಿಂ ಬಂಧುಗಳ ಮೇಲೆ ಒಂದು ಶಬ್ಧ ಮಾತಾಡಕೂಡದು: ಯಡಿಯೂರಪ್ಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. Vishwanath bhatre, you showed your true colour. People like you are disgrace to the community. Instead of commenting on Revanna’s dress like an idiot, appreciate his concern about the society at this crucial stage. We need to be united at this stage. Shame on you.

  2. Ivnu obba ganji kendrada giraki.. eno sarkarda mattinalli kelsa irbeku.. 90 % mediagalu, rajakaranigalu patrakartaru ovatu enadaru success agidare, adu e gowdara kutumba dinda, avra bhage olledo, kettado mstadidre success agtini anta e papi nu hage madidane..

  3. What Mr. Revanna has done, it is what PM Mr. Modi ji wanted from him as a citizen, of India and what Mr. BHATT has done is wrong and should apologize for his misdeed.

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...