Homeಗೌರಿ ಕಣ್ಣೋಟರಾಜಕಾರಣಿಗಳು ಮಾಡಲಾಗದ ಸಹಾಯವನ್ನು ಜನ ಮಾಡಿದ ಗಳಿಗೆ...

ರಾಜಕಾರಣಿಗಳು ಮಾಡಲಾಗದ ಸಹಾಯವನ್ನು ಜನ ಮಾಡಿದ ಗಳಿಗೆ…

ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದ ಕೈಗಾರಿಕೋದ್ಯಮಿಯೊಬ್ಬರು ಅನಾಮಧೇಯವಾಗಿ ಈ ನಿಧಿಗೆ 12 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.

- Advertisement -
- Advertisement -

ಭಾರತ-ಪಾಕಿಸ್ತಾನ ಗಡಿಯಲ್ಲಿರುವ ವಾಘಾದಲ್ಲಿ ಪ್ರತಿ ಸಂಜೆ ವಿಚಿತ್ರವಾದ ಒಂದು ಸಾಂಪ್ರದಾಯಿಕ ಆಚರಣೆ ನಡೆಯುತ್ತದೆ. ಸುಮಾರು ಐದಡಿ ಅಂತರದಲ್ಲಿ ಎರಡೂ ದೇಶಗಳ ಪ್ರವೇಶದ್ವಾರ (ಗೇಟ್)ಗಳಿವೆ. ಅದರ ಬಳಿಯೇ ಎರಡೂ ದೇಶಗಳ ಧ್ವಜಗಳು ಹಾರಾಡುತ್ತಿರುತ್ತವೆ. ಎರಡೂ ಕಡೆಯ ಸೈನಿಕರು “ಗುಡ್ ಡೇ, ಹೇಗಿದ್ದೀರಿ?” ಎಂದು ಕೆಲವೊಮ್ಮೆ ಒಬ್ಬರನ್ನೊಬ್ಬರು ವಿಚಾರಿಸಿಕೊಳ್ಳುತ್ತಾರೆ. ನಾನಲ್ಲಿಗೆ ಹೋಗಿದ್ದಾಗ ಭಾರತದ ಹಿರಿಯ ಸೈನ್ಯಾಧಿಕಾರಿಯೊಬ್ಬರು ನನ್ನನ್ನು ಪಾಕಿಸ್ತಾನದ ಸೈನ್ಯಾಧಿಕಾರಿಗೆ ಪರಿಚಯ ಮಾಡಿಕೊಟ್ಟಿದ್ದರು ಎರಡೂ ದೇಶಗಳ ನಡುವಿನ ನೋ ಮ್ಯಾನ್ಸ್ ಲ್ಯಾಂಡ್‍ನಲ್ಲಿ ನಾನೊಂದು ಹೆಜ್ಜೆಯಿಟ್ಟೆ. ಪಾಕಿಸ್ತಾನ ಸೈನ್ಯಾಧಿಕಾರಿಯೂ ಮುಂದೆ ಬಂದರು. ಇಬ್ಬರೂ ಕೈಕುಲುಕಿದೆವು. ಅದೂ ಕಾರ್ಗಿಲ್‍ನಲ್ಲಿ ಎರಡೂ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದ್ದಾಗ.

ಹೀಗೆ ಸೌಹಾರ್ದತೆಯಿಂದಲೇ ವಾಘಾದಲ್ಲಿ ತಮ್ಮ ದಿನಗಳನ್ನು ಕಳೆಯುವ ಎರಡೂ ಕಡೆಯ ಸೈನಿಕರು ಸಂಜೆಯಾಗುತ್ತಿದ್ದಂತೆ ಒಂದು ರೀತಿಯ ಪೈಪೋಟಿಗೆ ಇಳಿಯುತ್ತಾರೆ. ಎರಡೂ ಗೇಟ್‍ಗಳ ಹತ್ತಿರ ಸಾರ್ವಜನಿಕರು ಸೇರುತ್ತಿದ್ದಂತೆ, ಧ್ವಜ ಕೆಳಗಿಳಿಸುವ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಯಾವ ಕಡೆಯ ಸೈನಿಕರು ಹೆಚ್ಚು ಆಕ್ರಮಣಿಶೀಲತೆಯನ್ನು ಪ್ರದರ್ಶಿಸುತ್ತಾರೆ, ಯಾರು ಹೆಚ್ಚು ರಭಸದಿಂದ ಕಿವಿಗಪ್ಪಳಿಸುವಂತೆ ತಮ್ಮ ಬೂಟುಗಳನ್ನು ನೆಲಕ್ಕೆ ಅಪ್ಪಳಿಸುತ್ತಾರೆ ಎಂದೆಲ್ಲಾ ಗಮನಿಸುವ ಸಾರ್ವಜನಿಕರು ತಮ್ಮ ಕಡೆಯವರನ್ನು ಚಪ್ಪಾಳೆ ತಟ್ಟುತ್ತಾ, ಘೋಷಣೆಗಳನ್ನು ಕೂಗುತ್ತಾ ಹುರಿದುಂಬಿಸುತ್ತಾರೆ. ಎರಡೂ ಕಡೆಯ ಸೈನಿಕರ ನಡುವೆ ಒಂದು ಸಣ್ಣ ಯುದ್ಧ ನಡೆಯುತ್ತಿದೆಯೇನೋ ಎಂಬ ವಾತಾವರಣ ನಿರ್ಮಾಣವಾಗುತ್ತದೆ.

ಆದರೆ ವಿಚಿತ್ರ ಸಂಗತಿಯೇನೆಂದರೆ, ಈ ಧ್ವಜ ಕೆಳಗಿಳಿಸುವ ಆಚರಣೆ ಮುಗಿದ ಮರುಕ್ಷಣವೇ ಎರಡೂ ಕಡೆಯ ಸಾರ್ವಜನಿಕರು ಗೇಟ್‍ಗಳ ಹತ್ತಿರ ಧಾವಿಸುತ್ತಾರೆ. ಒಬ್ಬರನ್ನೊಬ್ಬರು ಕುತೂಹಲದಿಂದ ನೋಡುತ್ತಿರುತ್ತಾರೆ. ಅಲ್ಲಿ ಯಾವುದೇ ರೀತಿಯ ಪೈಪೋಟಿ ಇರುವುದಿಲ್ಲ. ಬದಲಾಗಿ ‘ನಮ್ಮಂತೆಯೇ ಇದ್ದೀರಲ್ಲಾ ನೀವು’ ಎಂಬ ಭಾವನೆ ಮೂಡಿರುತ್ತದೆ. ದೇಶ ವಿಭಜನೆಯ ಸಮಯದಲ್ಲಿ ಬೇರೆಯಾದ ತಮ್ಮ ಬಂಧುಗಳನ್ನು ಮತ್ತೆ ಕಾಣಬಹುದೇನೋ ಎಂಬ ತವಕದಿಂದ ಕೆಲವರು ವಾಘಾ ಗಡಿಗೆ ಪದೇಪದೇ ಬರುತ್ತಿರುತ್ತಾರೆ. ಈ ಕಡೆಯಿಂದ ಇವರು, ಆ ಕಡೆಯಿಂದ ಅವರು ಹೀಗೆ ಮೌನವಾಗಿ ನೋಡುತ್ತಲೇ ನಿಲ್ಲುವ ಜನ ಮತ್ತೆ ತಮ್ಮ ಮನೆಯತ್ತ ಮರುಳುವುದು ಎರಡೂ ಕಡೆಯ ಸೈನಿಕರು ಅವರನ್ನು ಅಲ್ಲಿಂದ ಓಡಿಸಿದಾಗಲೇ!

ಇದೆಲ್ಲವನ್ನು ನೆನಪು ಮಾಡಿಕೊಟ್ಟಿದ್ದು ನೂರ್ ಫಾತಿಮಾ ಎಂಬ ಮುದ್ದು ಮಗು. ಈ ಕೂಸಿನ ಶಸ್ತ್ರಚಿಕಿತ್ಸೆ ಬಗ್ಗೆ ಈಗಾಗಲೇ ಸಾಕಷ್ಟು ಸುದ್ದಿಗಳು ಎಲ್ಲ ಕಡೆಯೂ ಪ್ರಕಟವಾಗಿದೆ. ಆದರೆ ನನಗೆ ಇಷ್ಟವಾದದ್ದು ಆಕೆಗೆ ಭಾರತೀಯರು ನೀಡಿದ ಭಾವನಾತ್ಮಕ ಹಾಗೂ ಆರ್ಥಿಕ ಬೆಂಬಲ. ರಾಜಕಾರಣಿಗಳಿಗೆ ಸಾಧ್ಯವಾಗದಂತಹ ಸಹಾಯವನ್ನು ಜನ ನೀಡಿದ್ದಾರೆ. ನೂರ್‍ಳ ತಂದೆತಾಯಿ ಅದನ್ನು ಅಷ್ಟೇ ಸೌಜನ್ಯದಿಂದ ಸ್ವೀಕರಿಸಿದ್ದಾರೆ.

ನೂರ್‍ಳ ತಂದೆ ಬಡ ಮಕ್ಕಳಿಗೆಂದೇ ಶುರು ಮಾಡಿರುವ ‘ದೋಸ್ತಿ ಫಂಡ್’ (ಸ್ನೇಹನಿಧಿ)ಗೆ ಎಷ್ಟೋ ಭಾರತೀಯರು ಹಣ ನೀಡಿದ್ದಾರೆ. ಹಿಂದೆ ಲಾಹೋರ್‌ನಲ್ಲಿ ವಾಸಿಸುತ್ತಿದ್ದ, ಆದರೆ ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದ ಕೈಗಾರಿಕೋದ್ಯಮಿಯೊಬ್ಬರು ಅನಾಮಧೇಯವಾಗಿ ಈ ನಿಧಿಗೆ 12 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ. ಪಾಕಿಸ್ತಾನದ ಮುಸ್ಲಿಂ ಒಬ್ಬರು ಶುರುಮಾಡಿರುವ ಈ ನಿಧಿಗೆ ಭಾರತದ ಹಿಂದೂ ಒಬ್ಬರು ಇಂತಹ ದೊಡ್ಡ ಮೊತ್ತದ ದಾನ ನೀಡಿರುವುದು ಎರಡೂ ದೇಶಗಳ ಜನರಿಗೆ ಬೇಕಿರುವುದು ಸ್ನೇಹ ಮತ್ತು ಸೌಹಾರ್ದತೆಯ ಬಾಳು ಎಂಬುದನ್ನು ತೋರಿಸುತ್ತದೆ.

ದೇಶದಲ್ಲಿ ಜಾತಿ, ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುವ ಪ್ರಯತ್ನಗಳು ನಡೆಯುತ್ತಿರುವಾಗಲೇ, ಜನಸಾಮಾನ್ಯರು ತಮಗೆ ಧಾರ್ಮಿಕ ಭಿನ್ನತೆ ಮುಖ್ಯ ಅಲ್ಲವೇ ಅಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಪಾಕಿಸ್ತಾನದ ವಿರುದ್ಧ ಭಾರತದ ವೈರತ್ವವಿರುವುದು ನಮ್ಮ ದೇಶದ ಸುಭದ್ರತೆಯ ರಕ್ಷಣೆಗಾಗಿಯೇ ಹೊರತು, ಆ ದೇಶದ ಜನರ ವಿರುದ್ಧವಲ್ಲ, ಅವರ ಧರ್ಮದ ವಿರುದ್ಧವೂ ಅಲ್ಲ ಎಂದು ನೂರ್ ಪ್ರಕರಣ ತೋರಿಸುತ್ತದೆ.

ನೂರ್ ಎಂಬ ಬಾಲಕಿ ಬೇರೆ ದೇಶದವಳು, ಬೇರೆ ಧರ್ಮದವಳು ಎಂಬ ಭೇದಭಾವವನ್ನು ಅಲಕ್ಷಿಸಿದ್ದಾರೆ ಭಾರತೀಯರು. ಗುಜರಾತಿನಲ್ಲಿ ನಡೆದ ಕೋಮುದಳ್ಳುರಿಗೆ ತುತ್ತಾದ ಮುಸ್ಲಿಮರ ನೆರವಿಗೆ ಬಹಿರಂಗವಾಗಿ ಬರಲು ಹಿಂಜರಿದಿದ್ದ ಭಾರತೀಯರು ಪಾಕಿಸ್ತಾನದ ಮುಸ್ಲಿಂ ಬಾಲಕಿಗೆ ನೆರವಾಗಿದ್ದಾರೆ.

ತಮ್ಮ ಎದೆಯಲ್ಲಿ ಬರೀ ದ್ವೇಷವನ್ನೇ ತುಂಬಿಕೊಂಡಿರುವವರಿಲ್ಲದಿದ್ದಾಗ, ಮಾನವನ ಮುಖ್ಯಲಕ್ಷಣವೇ ಮಾನವೀಯತೆ… ಇದು ನೂರ್‌ ನಿಂದಾಗಿ ನಮ್ಮ ಜನರೇ ಅರಿತುಕೊಂಡ ಸತ್ಯ.

– ಗೌರಿ ಲಂಕೇಶ್
ಕಂಡಹಾಗೆ (ಸಂಗ್ರಹ) 1

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...