Homeಅಂಕಣಗಳುಪುಟಕ್ಕಿಟ್ಟ ಪುಟಗಳುಪುಟಕ್ಕಿಟ್ಟ ಪುಟಗಳು: ಲಿಯೋ ಟಾಲ್ಸ್‌ಟಾಯ್‌ರವರ ಯುದ್ಧ ಮತ್ತು ಶಾಂತಿ

ಪುಟಕ್ಕಿಟ್ಟ ಪುಟಗಳು: ಲಿಯೋ ಟಾಲ್ಸ್‌ಟಾಯ್‌ರವರ ಯುದ್ಧ ಮತ್ತು ಶಾಂತಿ

ಯುದ್ಧಾಸ್ತ್ರಗಳು ಹೇರಳವಾಗಿ ವ್ಯಾಪಾರದ ಸರಕಾದ ಮೇಲೆ, ಹೂಡಿದ ಬಂಡವಾಳಕ್ಕೆ ಲಾಭ ತರಲು ಯುದ್ಧಗಳನ್ನು ಒಲ್ಲೆ ಒಲ್ಲೆ ಎನ್ನುತ್ತಲೇ ಕಾರಣಗಳನ್ನು ಸೃಷ್ಟಿಸುತ್ತಾರೆ ಬಲಿಷ್ಟ ರಾಷ್ಟ್ರದ ಬಂಡವಾಳದ ಕೈಗಳು.

- Advertisement -
- Advertisement -

ಲಿಯೋ ಟಾಲ್ಸ್‌ಟಾಯ್ ಅವರ ಕಾದಂಬರಿ ‘ವಾರ್ ಅಂಡ್ ಪೀಸ್’ ನಾನಾ ಕಾರಣಗಳಿಂದ ಬಹು ಪ್ರಖ್ಯಾತವಾದದ್ದು. ಆದರೆ ಟಾಲ್ಸ್‌ಟಾಯ್ ಅದನ್ನು ಕಾದಂಬರಿ ಎನ್ನದೇ ‘ಹೇಳಬೇಕೆಂದರೆ ಅದೊಂದು ಕಾವ್ಯ, ಇನ್ನೂ ಹೇಳಬೇಕೆಂದರೆ ಅದು ಚರಿತ್ರೆಯ ಕಾಲಾನುಕ್ರಮಣಿಕೆ’ ಎನ್ನುತ್ತಾರೆ. ಕಾದಂಬರಿಯಲ್ಲಿ ಬಹುಪಾಲು ತಾತ್ವಿಕ ಚರ್ಚೆಗಳು ಮತ್ತು ಸಂವಾದಗಳಿದ್ದು ಕಾದಂಬರಿಯ ವ್ಯಾಪ್ತಿಗೆ ಸೇರುವಂತಹ ವಿವರ ಪ್ರವರಗಳಿಂದ ಹೊರತಾಗಿದೆ.

ಸ್ಥೂಲವಾಗಿ ‘ಯುದ್ಧ ಮತ್ತು ಶಾಂತಿ’ಯ ಭೂಮಿಕೆಯನ್ನು ಗುರುತಿಸುವುದಾದರೆ ನೆಪೋಲಿಯನ್ ರಶಿಯಾದ ಮೇಲೆ 1812ರಲ್ಲಿ ಮಾಡಿದ ದಾಳಿಯ ಕಥನವದು. ಆದರೆ ಆ ಸನ್ನಿವೇಶದಲ್ಲಿ ಜಮೀನುದಾರನೊಬ್ಬನ ಅಕ್ರಮ ಸಂತಾನದ ಫಲವಾದ ಪಿಯರೆ ಬೆಜುಕೋವ್ ತನ್ನ ಸ್ವಾಮಿತ್ವಕ್ಕಾಗಿ ಹೋರಾಡುತ್ತಾ ತನ್ನ ತಾತ್ವಿಕ ಸಾರ್ಥಕತೆಗಾಗಿ ಹೆಣಗಾಡುವ ಕಥೆ ಇದಾಗಿದೆ. ಹಾಗಂತ ಒಂದು ವ್ಯಕ್ತಿಯ ಸುತ್ತಲಿನ ಕತೆಯಲ್ಲವಿದು. ನೂರಾರು ಪಾತ್ರಗಳನ್ನು ಹೊಂದಿರುವ ಈ ಕಥನದಲ್ಲಿ ಯುದ್ಧ, ಶಾಂತಿ, ಮುದಿತನ, ಯೌವನ, ಸಾವು, ಮದುವೆ, ಭಿನ್ನಸ್ತರಗಳ ಬದುಕುಗಳನ್ನೆಲ್ಲಾ ಚರ್ಚಿಸುತ್ತಾ ಹೋಗುವುದರಿಂದ, ರಶಿಯಾದ ಸಾಮಾಜಿಕ ಪ್ರಭಾವಗಳು ವಿವಿಧ ವರ್ಗ ಮತ್ತು ಕ್ಷೇತ್ರಗಳ ವ್ಯಕ್ತಿಗಳ ಮೇಲೆ ಎಂತೆಂತಹ ಪ್ರಭಾವಗಳನ್ನು ಬೀರಿದ್ದವು ಎಂಬುದರ ಅನಾವರಣವಾಗುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ವಿಷಯಗಳನ್ನು ನಿಷ್ಟುರವಾಗಿ, ಪ್ರಾಮಾಣಿಕವಾಗಿ ಮತ್ತು ಪಕ್ಷಪಾತರಹಿತವಾಗಿ ನೋಡುವುದು.

ಈ ಕಾದಂಬರಿಯ ಸೌಂದರ್ಯವೇ ಅದು. ವಸ್ತುವಿಷಯಗಳನ್ನು ಯಥಾಸ್ಥಿತಿಯಲ್ಲಿ ಸಾಕ್ಷೀಕರಿಸುವುದು. ಆದರೆ ಯಥಾಸ್ಥಿತಿವಾದವನ್ನು ಖಂಡಿಸುವುದು. ಅಥವಾ ಪುರೋಗಾಮಿತನವನ್ನು ಬಯಸುವುದು. ರಾಜಕುಮಾರ ಆಂಡ್ರೀ ಬೊಲ್ಕೊನ್ಸ್ಕಿ ತನ್ನ ಕುಟುಂಬವನ್ನು ಬಿಟ್ಟು ನೆಪೋಲಿಯನ್ ವಿರುದ್ಧವಾಗಿ ಯುದ್ಧಕ್ಕಾಗಿ ತೆರಳುವನು. ಅವನ ಮತ್ತು ನಟಾಶ ರೊಸ್ತೋವ್, ಕುಲೀನ ಮನೆತನದ ಸುಂದರವಾದ ಹುಡುಗಿಯ ನಡುವಿನ ಪ್ರಸಂಗಗಳು, ವ್ಯಕ್ತಿಗತವಾದ ಸೆಳೆತಗಳು, ಕುಟುಂಬದ ಘನತೆ ಮತ್ತು ಸಾಂದರ್ಭಿಕ ಅನಿವಾರ್ಯತೆಗಳ ತಾಕಲಾಟಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಅವಳಿಗೆ ಪ್ರೇಮ, ಕಾಮ, ವ್ಯಾಮೋಹ ಎಲ್ಲವೂ ಒಂದೇ ಆಗಿದ್ದು ಎಲ್ಲದರಿಂದ ಹೊರತಾಗುವಂತಹ ಸ್ಥಿತಿಯೂ ಕೂಡಾ ಒಂದು ಪ್ರತಿಮಾ ಸಂದೇಶವೇ ಆಗಿದೆ.

ರಾಜಕೀಯ ಸಂಘರ್ಷದ ಕಾರಣಕ್ಕೆ ಯುದ್ಧವೆಂಬುದು ನಡೆದರೂ ಅದು ಅಷ್ಟಕ್ಕೇ ಸೀಮಿತಗೊಳ್ಳುವುದಿಲ್ಲ. ರೈತರು, ಕುಲೀನರು, ನಾಗರಿಕರು, ಸೈನಿಕರು ಎಲ್ಲರೂ ಸಮಸ್ಯೆಗಳನ್ನು ಅನುಭವಿಸುವತ್ತಾರೆ. ಅವರ ಕಾಲಘಟ್ಟದಲ್ಲಿ ಮತ್ತು ಗತಿಸಿದ ಚರಿತ್ರೆಯಲ್ಲಿಯೇ ಎದುರಿಸದಂತಹ ಸಂಕಟಗಳಿಂದ ಬಳಲಬೇಕು. ಅದೇ ಯುದ್ಧ ಮತ್ತು ಶಾಂತಿಯಲ್ಲಿಯೂ ಆಗುವುದು. ಟಾಲ್ಸ್ಟಾಯ್ ಈ ಹಿನ್ನೆಲೆಗಳ ಎಲ್ಲಾ ಪ್ರತಿನಿಧಿಗಳನ್ನು ಪಾತ್ರಗಳನ್ನಾಗಿಸಿ ಮಾನುಷವಾಗಿ ಚಿತ್ರಿಸುತ್ತಾಹೋಗುತ್ತಾರೆ. ಮನುಷ್ಯ ಹೃದಯದ ಸಂವೇದನೆಯುಳ್ಳವರಿಗೆಲ್ಲಾ ಸ್ಪಂದಿಸುವ ದುಃಖ ದುಮ್ಮಾನಗಳು – ಭಾವುಕತೆಗೂ ಮತ್ತು ತಾತ್ವಿಕತೆಗೂ ಭಿನ್ನಬೇಧಗಳನ್ನು ಕಾಣಲಾಗದು.

ಟಾಲ್ಸ್‌ಟಾಯ್ ಅವರ ಕಾಲಘಟ್ಟಕ್ಕೆ 60 ವರ್ಷಗಳ ಮುನ್ನದ ಕತೆಯ ಭೂಮಿಕೆಯಾದರೂ ಅವರಲ್ಲಿ ಫ್ರಾನ್ಸ್ ಮಾಡಿದ ಯುದ್ಧದ ಛಾಯೆ ಪೂರ್ತಿ ಕರಗಿಹೋಗಿರಲಿಲ್ಲ. ಯುದ್ಧವೇ ಹಾಗೆ. ಯಾವುದೇ ಕಾರಣದಿಂದ ಅದು ನಡೆದರೂ ಸಾಮಾಜಿಕ ಮತ್ತು ರಾಜತಾಂತ್ರಿಕ ವ್ಯವಸ್ಥೆ ಹದಗೆಡುತ್ತದೆ. ಜನತೆಗಾಗಿಯೇ ಆ ವ್ಯವಸ್ಥೆ ಇರುವುದಾದರೂ, ಅದಕ್ಕೆ ಬೀಳುವ ಏಟಿನಿಂದ ಉಂಟಾಗುವ ಅವ್ಯವಸ್ಥೆಯಿಂದ ಯಾವುದೇ ತಪ್ಪನ್ನು ಮಾಡಿರದ ಜನರು ಶಿಕ್ಷೆ ಅನುಭವಿಸುತ್ತಾರೆ. ತಮ್ಮ ಹಿತರಕ್ಷಣೆಗಾಗಿ ವ್ಯವಸ್ಥೆ ಎಂದು ನಂಬಿರುವ ಜನರು ಎದುರುನೋಡದ ತೊಂದರೆಗಳಿಗೆ ಎದೆಯೊಡ್ಡಬೇಕಾಗುತ್ತದೆ. ಶಿಕ್ಷಣದ ಸಮಸ್ಯೆ, ಉದ್ಯೋಗದಿಂದಲೇ ಅನ್ನವನ್ನು ಗಳಿಸಿಕೊಳ್ಳುವರ ಸಮಸ್ಯೆ, ವೈದ್ಯಕೀಯ ಸೌಲಭ್ಯಗಳಲ್ಲಿ ವ್ಯತ್ಯಯವುಂಟಾಗುವ ಸಮಸ್ಯೆ, ಗಮನವು ಯುದ್ಧದ ಕಡೆ ಹರಿಯುವುದರಿಂದ ಆಂತರಿಕವಾಗಿ ಸಡಿಲವಾಗುವ ಭದ್ರತಾ ವ್ಯವಸ್ಥೆ; ಹೀಗೆ ಅನೇಕಾನೇಕ ಸಮಸ್ಯೆಗಳು ಯುದ್ಧದ ಕಾರಣಗಳಿಂದಾಗುತ್ತವೆ.

ಯುದ್ಧವೆಂಬುದು ರೋಮಾಂಚನ. ಅದೊಂದು ಉನ್ಮತ್ತವಾದ ಭ್ರಾಮಕವಾದ ಆನಂದ. ಅದು ಕುಲೀನರ, ರಾಜಕಾರಣದ ಮತ್ತು ಆರ್ಥಿಕತೆಯ ಉತ್ತುಂಗದಲ್ಲಿರುವವರು ಬಲಿಪಶುಗಳನ್ನಾಗಿಸುವವರಿಗೆ ಮಾತ್ರವೇ ಬೇಕು. ದುಡಿಯುವವರಿಗಲ್ಲ, ಶ್ರಮಿಕರಿಗಲ್ಲ, ಮನೆಯಲ್ಲಿ ಮಕ್ಕಳನ್ನು ಸಲಹುವ ಮತ್ತು ಕುಟುಂಬವನ್ನು ನಿರ್ವಹಣೆ ಮಾಡುವ ಮಹಿಳೆಯರಿಗಲ್ಲ. ಆದರೆ ಇವರೆಲ್ಲರ ಸಮೂಹದ ಪ್ರತಿನಿಧಿಯಂತಿರುವ ರಾಜಕಾರಣ ವ್ಯವಸ್ಥೆಯನ್ನು ಯುದ್ಧಕ್ಕೆಳೆಯುವುದು ಮತ್ತು ಯುದ್ಧವನ್ನು ಎದುರಿಸುವಂತೆ ಮಾಡುವುದು, ಏನೇ ಆದರೂ ಯುದ್ಧದ ರೋಮಾಂಚನ ಒಲ್ಲದ, ಬದುಕಿನ ಉಸುರಿಗೆ ಹಾತೊರೆಯುವವರ ನರಳಾಟಕ್ಕೆ ಕಾರಣವಾಗುತ್ತದೆ.

‘ಯುದ್ಧ ಮತ್ತು ಶಾಂತಿಯ’ಲ್ಲಿ ಅನೇಕ ಕತೆಗಳಿವೆ, ಅನೇಕ ಬದುಕುಗಳಿವೆ. ನಾಯಕ ಎಂದೋ, ನಾಯಕಿ ಎಂದೋ ಯಾರೂ ಇಲ್ಲ. ಸಿದ್ಧಸೂತ್ರದ ನಾಯಕ ಮತ್ತು ನಾಯಕಿಯ ಪಾತ್ರವನ್ನು ನಿರೀಕ್ಷಿಸುವವರಿಗೆ ಯಾರೂ ಸಿಗುವುದಿಲ್ಲ. ಹಾಗೆಂದು ಇದು ಐತಿಹಾಸಿಕ ಕಾದಂಬರಿಯೂ ಅಲ್ಲ. ಕಲಾವಿದನಾಗಿ ಟಾಲ್ಸ್‌ಟಾಯ್ ಒಮ್ಮೆ ಕಂಡರೆ, ಮತ್ತೊಮ್ಮೆ ಬೋಧನೆಗಳನ್ನು ಮಾಡುವ ಋಷಿಯಾಗಿ ಬದಲಾಗುತ್ತಾರೆ. ಮತ್ತೊಮ್ಮೆ ಕ್ರಾಂತಿಕಾರಿಯಾಗಿ ವ್ಯವಸ್ಥೆಯೊಳಗಿನ ತಿದಿಗಳಿಗೆ ಕೆರಳುತ್ತಾರೆ.

ಮನುಷ್ಯನ ತಿಕ್ಕಲುತನದ ಉನ್ಮತ್ತತೆಗೆ ಶಾಂತಿಯ ಅವಧಿಯೂ ಕೂಡಾ ಯುದ್ಧದ ಸಿದ್ಧತೆಯೇ ಆಗಿರುತ್ತದೆ. ಯುದ್ಧಾಸ್ತ್ರಗಳು ಹೇರಳವಾಗಿ ವ್ಯಾಪಾರದ ಸರಕಾದ ಮೇಲೆ, ಹೂಡಿದ ಬಂಡವಾಳಕ್ಕೆ ಲಾಭ ತರಲು ಯುದ್ಧಗಳನ್ನು ಒಲ್ಲೆ ಒಲ್ಲೆ ಎನ್ನುತ್ತಲೇ ಕಾರಣಗಳನ್ನು ಸೃಷ್ಟಿಸುತ್ತಾರೆ ಬಲಿಷ್ಟ ರಾಷ್ಟ್ರದ ಬಂಡವಾಳದ ಕೈಗಳು.

ಸುಮಾರು 1225 ಪುಟಗಳನ್ನು ಹೊಂದಿರುವ ‘ಯುದ್ಧ ಮತ್ತು ಶಾಂತಿ’ಯ ಕಾದಂಬರಿಯನ್ನು ಪರಿಚಯಿಸಲು ಸಾಧ್ಯವಾಗದ ಈ ಲೇಖನ ಅದು ಯುದ್ಧದ ಬಗ್ಗೆ ಹೊಂದಿರುವ ಧೋರಣೆಯ ಒಂದು ಮುಖವನ್ನು ಮಾತ್ರ ಧ್ವನಿಸುತ್ತದೆ. ಆದರೆ ಅದನ್ನು ಓದುವಾಗ ಯುದ್ಧದ ನೆರಳಿನಲ್ಲಿರುವ ಎಲ್ಲಾ ದೇಶಗಳೂ ನಮ್ಮ ಕಣ್ಪಟಲದ ಮುಂದೆ ಹಾದುಹೋಗುವಂತೆ ಮಾಡುವುದು ಈ ಕಾದಂಬರಿಯ ಶಕ್ತಿ.


ಇದನ್ನು ಓದಿ: ವಿಶೇಷ ಲೇಖನ: ಹೊಸ ತಲೆಮಾರಿಗೆ ಗೊತ್ತಿಲ್ಲದ ಡಾ.ಎಚ್ಚೆನ್ ಅವರ ‘ಹೋರಾಟದ ಹಾದಿ’ಯ ಕುರಿತು ಡಾ.ಸಿಎನ್ಆರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...

ಕೊಲ್ಕತ್ತಾದ 26 ಲಕ್ಷ ಮತದಾರರ ಹೆಸರು 2002 ರ ಪಟ್ಟಿಗೆ ಹೊಂದಿಕೆಯಾಗುತ್ತಿಲ್ಲ: ಮುಖ್ಯ ಚುನಾವಣಾ ಅಧಿಕಾರಿ

ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಹಲವಾರು ವಿಧಾನಸಭಾ ಕ್ಷೇತ್ರಗಳ ಮತದಾರರ ಹೆಸರುಗಳು 2002 ರ ಮತದಾರರ ಪಟ್ಟಿಯಲ್ಲಿರುವ ನಮೂದುಗಳಿಗೆ ಹೊಂದಿಕೆಯಾಗುತ್ತಿಲ್ಲ ಎಂದು ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಅಗರ್ವಾಲ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ...