Homeಅಂತರಾಷ್ಟ್ರೀಯಇರಾನ್- ಅಮೆರಿಕ ಯುದ್ಧದಲ್ಲಿ ಅಮೆರಿಕದ ಕಾಲಾಳು ಆಗಲು ಹೊರಟ ಭಾರತ

ಇರಾನ್- ಅಮೆರಿಕ ಯುದ್ಧದಲ್ಲಿ ಅಮೆರಿಕದ ಕಾಲಾಳು ಆಗಲು ಹೊರಟ ಭಾರತ

ಭಾರತವು ಜೂನ್ 21ರಂದು ತನ್ನ ಯುದ್ಧ ನೌಕೆಗಳಾದ ಚೆನ್ನೈ ಮತ್ತು ಸುನೈನಾವನ್ನು ಪರ್ಶಿಯನ್ ಕೊಲ್ಲಿಗೆ ಕಳುಹಿಸಲು ನಿರ್ಧರಿಸಿದೆ. ಈ ಕಾರ್ಯಾಚರಣೆಗೆ ‘ಆಪರೇಶನ್ ಸಂಕಲ್ಪ್’ ಎಂದು ಹೆಸರಿಡಲಾಗಿದೆ

- Advertisement -
- Advertisement -

| ಭರತ್ ಹೆಬ್ಬಾಳ್ |

ದಶಕಗಳಿಂದ ಒಂದಲ್ಲಾ ಒಂದು ರೀತಿಯ ನಿರಂತರ ಯುದ್ಧಗಳಿಂದ ತತ್ತರಿಸುತ್ತಿರುವ ಮಧ್ಯಪ್ರಾಚ್ಯ ಏಶಿಯಾದಲ್ಲಿ ಮತ್ತೊಮ್ಮೆ ಯುದ್ದದ ಕಾರ್ಮೋಡಗಳು ಆವರಿಸುತ್ತಿವೆ. 2015ರ ಜುಲೈ ತಿಂಗಳಲ್ಲಿ ಆರು ರಾಷ್ಟ್ರಗಳ ಸಂಧಾನ ಮಾತುಕತೆಗಳ ನಂತರ ಅಸ್ತಿತ್ವಕ್ಕೆ ಬಂದಿದ್ದ Joint Comprehensive Plan of Action (JCPOA) ಒಪ್ಪಂದವನ್ನು ಮೇ 2018ರಲ್ಲಿ ಟ್ರಂಪ್ ಆಡಳಿತ ಏಕಪಕ್ಷೀಯವಾಗಿ ಮುರಿದು ಹಾಕಿತ್ತು. ಇದರ ನಂತರದ ಮಾತುಕತೆಗಳಲ್ಲಿ ಇರಾನಿನ ಸಂಪೂರ್ಣ ಶರಣಾಗತಿಯನ್ನು ಬಯಸುತ್ತಿರುವ ಅಮೆರಿಕ, ಕಳೆದೆರಡು ತಿಂಗಳುಗಳಿಂದ ಪರ್ಶಿಯನ್ ಕೊಲ್ಲಿಯಲ್ಲಿ ನಡೆಯುತ್ತಿರುವ ಪಾಶ್ಚಾತ್ಯ ಕಚ್ಚಾ ತೈಲ ಟ್ಯಾಂಕರ್‍ಗಳ ಹಡಗುಗಳ ಮೇಲಿನ ಅಜ್ಞಾತ ದಾಳಿಗಳನ್ನು ಇರಾನಿನ ಮೇಲೆ ಕಟ್ಟಿತ್ತು.

ಅಮೆರಿಕ ಈ ರೀತಿಯ ತಂತ್ರಗಳನ್ನು ಇತಿಹಾಸದಲ್ಲಿ ಬಹಳಷ್ಟು ಮಾಡಿದೆ. ಉದಾಹರಣೆಗೆ ವಿಯೆಟ್ನಾಮ್ ಯುದ್ಧಕ್ಕೆ ನೆಪ ಮಾಡಿಕೊಂಡಿದ್ದು, ಇದೇ ರೀತಿಯ ತನ್ನ ಹಡಗುಗಳ ಮೇಲೆ ನಡೆದಿದೆ ಎನ್ನಲಾದ ಅಜ್ಞಾತ ದಾಳಿ (ಟೊಂಕಿನ್ ಕೊಲ್ಲಿಯ ಘಟನೆ). ಈ ದಾಳಿಗಳನ್ನು ಇರಾನ್ ನಿರಾಕರಿಸುತ್ತಲೇ ಬಂದಿದೆ ಮತ್ತು ಇದು ಯುದ್ಧಕ್ಕಾಗಿ ಅಮೆರಿಕ ಮಾಡುತ್ತಿರುವ ಷಡ್ಯಂತ್ರ ಎಂದು ಆರೋಪಿಸಿತ್ತು. ಇದರ ಮುಂದುವರೆದ ಭಾಗವಾಗಿಯೇ ಇರಾನ್, ಜೂನ್ 20ರಂದು ಅಮೆರಿಕಾದ ಮಾನವರಹಿತ ಗೂಢಚಾರಿ ವಿಮಾನವನ್ನು (RQ-4A Global Hawk Drone) ತನ್ನ ಸಯ್ಯದ್-2ಸಿ ಕ್ಷಿಪಣಿ ಉಪಯೋಗಿಸಿ ಹೊಡೆದುರುಳಿಸಿದೆ. ಈಗಾಗಲೇ ಅಮೆರಿಕಾದ ‘ಗರಿಷ್ಠ ಒತ್ತಡ’ ತಂತ್ರಗಾರಿಕೆಯ ಭಾಗವಾದ ತೀವ್ರ ಆರ್ಥಿಕ ನಿಬರ್ಂಧಗಳನ್ನು (ಭಯೋತ್ಪಾದನೆ) ಎದುರಿಸುತ್ತಿರುವ ಇರಾನ್ ಈಗ ‘ಗರಿಷ್ಠ ಪ್ರತಿ-ಒತ್ತಡ’ ಪ್ರದರ್ಶಿಸಲು ಸಜ್ಜಾಗುತ್ತಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಡ್ರೋನ್ ಹೊಡೆದು ಉರುಳಿಸಲಾಯಿತು ಎಂದು ಇರಾನ್ ಹೇಳಿಕೆ ಕೊಟ್ಟಿದೆ. ಅಮೆರಿಕ ಇದು ಅಂತರ್ರಾಷ್ಟ್ರೀಯ ನೀರಿಗೆ (International Waters) ಸೇರಿದ ಜಾಗ ಎಂದು ಹೇಳಿಕೆ ಕೊಟ್ಟಿದೆ. ವಾಸ್ತವದಲ್ಲಿ ಆ ಪ್ರದೇಶದಲ್ಲಿ ಅಂತರ್ರಾಷ್ಟ್ರೀಯ ನೀರಿನ ಜಾಗ ಆಗಿರುವುದು ಸಾಧ್ಯವೇ ಇಲ್ಲ. ಪರ್ಶಿಯನ್ ಕೊಲ್ಲಿಯಲ್ಲಿ ಹಾದುಹೋಗಬೇಕಾದರೆ ಅಲ್ಲಿರುವ ಕೊಲ್ಲಿಯ ಅತಿ ಸಣ್ಣ ಜಾಗ ಇರುವುದೇ 39 ಕಿಲೋಮೀಟರ್‍ಗಳ ಉದ್ದಗಲ. ಅದರ ಒಂದು ಭಾಗ ಇರಾನಿನದ್ದು, ಇನ್ನೊಂದು ಭಾಗ ಒಮಾನ್ ರಾಷ್ಟ್ರದ್ದು! ವಿಶ್ವದ 33% ಕಚ್ಚಾ ತೈಲ ಪರ್ಶಿಯನ್ ಕೊಲ್ಲಿಯಿಂದಲೇ ಹಾದುಹೋಗಬೇಕು.

ಈಗಾಗಲೇ ಇರಾನ್ ರಾಷ್ಟ್ರದಿಂದ ಕಚ್ಚಾ ತೈಲ ಆಮದು ನಿಲ್ಲಿಸುವಂತೆ ಎಲ್ಲಾ ದೇಶಗಳಿಗೂ ಅಮೆರಿಕ ಆದೇಶಿಸಿದೆ. ಆದೇಶ ಮೀರಿದರೆ ಆರ್ಥಿಕ ನಿಬರ್ಂಧಗಳನ್ನು ವಿಧಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ. ತನ್ನನ್ನು ಕಚ್ಚಾ ತೈಲದ ಮಾರುಕಟ್ಟೆಯಿಂದ ನಿಬರ್ಂಧಿಸಿದರೆ ಪರ್ಶಿಯನ್ ಕೊಲ್ಲಿಯಲ್ಲಿ ಬೇರೆಯವರ ಕಚ್ಚಾ ತೈಲ ಹಾದುಹೋಗುವದಕ್ಕೆ ನಾವು ಬಿಡುವುದಿಲ್ಲ ಎಂದು ಇರಾನ್ ಕೂಡ ಎಚ್ಚರಿಸುತ್ತಲೇ ಬಂದಿದೆ. ಘಟನೆಯ ನಂತರ ಇರಾನಿನ ಮೇಜರ್ ಜನರಲ್ ಮೊಹಮ್ಮದ್ ಬಕೇರಿ ‘ಇರಾನ್ ಯಾವುದೇ ದೇಶದೊಂದಿಗೆ ಯುದ್ಧವನ್ನು ಬಯಸುತ್ತಿಲ್ಲ, ಆದರೆ ಇರಾನ್ ಅನ್ನು ರಕ್ಷಿಸಿಕೊಳ್ಳಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ, ಇರಾನ್ ಕೊಲ್ಲಿಯಿಂದ ತೈಲ ರಫ್ತು ಮಾಡುವುದನ್ನು ತಡೆಯಲು ನಿರ್ಧರಿಸಿದರೆ, ಆ ನಿರ್ಣಯವನ್ನು ದೇಶ ಹಾಗೂ ಸಶಸ್ತ್ರ ಪಡೆಗಳು ಪೂರ್ಣವಾಗಿ ಸಾಕಾರಗೊಳಿಸಿ ಸಾರ್ವಜನಿಕವಾಗಿ ಘೋಷಿಸಲಾಗುವುದು’ ಎಂಬ ಹೇಳಿಕೆ ಕೊಟ್ಟಿದ್ದಾರೆ.

ಈ ಘಟನೆಯ ನಂತರ ದೊಡ್ಡಣ್ಣ ಟ್ರಂಪ್ ‘ಇರಾನ್ ಬಹಳ ದೊಡ್ಡ ತಪ್ಪು’ ಮಾಡಿದೆ ಎಂದು ಟ್ವೀಟ್ ಮಾಡಿದ್ದರು. ನಂತರ ಇರಾನಿನ ಮೇಲೆ ದಾಳಿ ಮಾಡಲು ಆದೇಶಿಸಿ, ಆ ಆದೇಶವನ್ನು ಹಿಂಪಡೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಆದೇಶ ಹಿಂಪಡೆಯುವುದರ ಹಿಂದೆ ಅಮೆರಿಕಾದ ಚುನಾವಣೆ ಕಾರಣ ಎಂದು ಹೇಳಲಾಗುತ್ತಿದ್ದರೂ, ಪರ್ಶಿಯನ್ ಕೊಲ್ಲಿಯನ್ನು ಇರಾನ್ ಮುಚ್ಚಿದರೆ ಅಮೆರಿಕಾದ ಆರ್ಥಿಕತೆ ಮತ್ತು ವಿಶ್ವದ ಆರ್ಥಿಕತೆ ಕುಸಿಯುವ ಭಯ ಇದರ ಹಿಂದಿರುವ ನಿಜವಾದ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಈ ಕೊಲ್ಲಿಯ ಮಾರ್ಗ ಮುಚ್ಚಿದರೆ ಪ್ರಪಂಚದ 1.2 ದಶಲಕ್ಷ ಕೋಟಿ ಡರ್ರೈವೇಟಿವ್ಸ್ ಮಾರುಕಟ್ಟೆಯ ವಹಿವಾಟು ಅಂತಃಸ್ಫೋಟಗೊಂಡು ಪ್ರಪಂಚದ ಬ್ಯಾಂಕಿಂಗ್ ವ್ಯವಸ್ಥೆಯೇ ಕುಸಿದು ಬೀಳುತ್ತದೆ ಮತ್ತು ಪ್ರಪಂಚದ 80 ಟ್ರಿಲಿಯನ್ ಜಿಡಿಪಿ ಪ್ರಪಾತಕ್ಕೆ ಕುಸಿದು, ಕಂಡು ಕೇಳರಿಯದ ಆರ್ಥಿಕ ಹಿನ್ನಡೆ ಆಗುತ್ತದೆ ಎಂಬ ಸುಳಿವು ಸಿಕ್ಕ ನಂತರ ದಾಳಿ ನಡೆಸಲುದ್ದೇಶಿಸಿದ್ದ 10 ನಿಮಿಷದ ಮುಂಚೆ ಟ್ರಂಪ್ ತನ್ನ ಆದೇಶವನ್ನು ಹಿಂಪಡೆದುಕೊಂಡಿದ್ದಾರೆ. ಈ ಕೊಲ್ಲಿಯನ್ನು ಮುಚ್ಚಲು ಇರಾನ್ ತನ್ನ ಪಾಶ್ಚಾತ್ಯ ಗಡಿಯ ಉದ್ದಗಲಕ್ಕೂ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಿದ್ಧಪಡಿಸಿಕೊಂಡಿದೆ ಮತ್ತು ಸಮಯ ಬಂದರೆ ಕೊಲ್ಲಿಯನ್ನು ಮುಚ್ಚುವುದಾಗಿಯೂ ಎಚ್ಚರಿಕೆ ನೀಡಿದೆ.

ಈ ಪರಿಸ್ಥಿತಿಯಲ್ಲಿ ಅನಾವರಣಗೊಳ್ಳುತ್ತಿರುವ ಬಿಕ್ಕಟ್ಟಿನ ಒಂದು ಅತ್ಯಂತ ಕಳವಳಕಾರಿ ಬೆಳೆವಣಿಗೆಯೆಂದರೆ ಭಾರತದ ನಿಗೂಢ ನಡೆ. ಭಾರತವು ಜೂನ್ 21ರಂದು ತನ್ನ ಯುದ್ಧ ನೌಕೆಗಳಾದ ಚೆನ್ನೈ ಮತ್ತು ಸುನೈನಾವನ್ನು ಪರ್ಶಿಯನ್ ಕೊಲ್ಲಿಗೆ ಕಳುಹಿಸಲು ನಿರ್ಧರಿಸಿದೆ. ಈ ಕಾರ್ಯಾಚರಣೆಗೆ ‘ಆಪರೇಶನ್ ಸಂಕಲ್ಪ್’ ಎಂದು ಹೆಸರಿಡಲಾಗಿದೆ ಹಾಗೂ ಯುದ್ಧ ನೌಕೆಗಳು ಓಮೆನ್ ಭಾಗದ ನೀರಿನಲ್ಲಿ ನಿಯೋಜಿಸಲ್ಪಟ್ಟಿರುತ್ತದೆ ಎಂದು ವಿವರಿಸಲಾಗಿದೆ. ತೀಕ್ಷ್ಣಗೊಳ್ಳುತ್ತಿರುವ ಜಾಗತಿಕ ರಾಜಕೀಯದಲ್ಲಿ ರಶಿಯ, ಸಿರಿಯ, ಚೀನಾ, ಇರಾನ್ ಒಂದು ಕಡೆಯಾದರೆ, ಅಮೆರಿಕ, ಯುರೋಪಿಯನ್ ಯೂನಿಯನ್‍ನ ಕೆಲವು ಮುಖ್ಯ ರಾಷ್ಟ್ರಗಳು, ಬ್ರಿಟನ್, ಇಸ್ರೇಲ್ ಸೌದಿ ಮತ್ತದರ ಹಿಂಬಾಲಕ ಅರಬ್ ರಾಷ್ಟ್ರಗಳು ಇನ್ನೊಂದು ಕಡೆ.

ಪಾಕಿಸ್ತಾನ ರಶಿಯ ಮತ್ತು ಚೀನಾಗೆ ಹತ್ತಿರವಾಗುತ್ತಿದ್ದರೆ, ಭಾರತ ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಒಂದು ವಿಚಿತ್ರ ಡಬಲ್ ಗೇಮ್ ಆಟದಲ್ಲಿ ತೊಡಗಿದೆ. ಹಿಂದಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದ ಈ ದೇಶಗಳ ಮಧ್ಯೆ ಆರ್ಥಿಕ ನಿರ್ಬಂಧಗಳಾಚೆಗೂ ವ್ಯಾಪಾರ ವಹಿವಾಟು ವಿವಿಧ ವಿನಿಮಯಗಳನ್ನು ಬಳಸಿ ನಡೆಸಲಾಗುತ್ತಿತ್ತು. ಆದರೆ ಕಳೆದ ಮೇ ತಿಂಗಳಿನಿಂದ ಇರಾನ್‍ನಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಿರುವ ಭಾರತವು ಇರಾನಿನ ಕಟು ವೈರಿಗಳಾದ ಇಸ್ರೇಲ್ ಮತ್ತು ಯುದ್ಧಕೋರ ಅಮೆರಿಕ ಜೊತೆಗೂಡಿ ಅಮೆರಿಕ ಕೇಂದ್ರಿತ ಏಕ ಧ್ರುವಿ ಪ್ರಪಂಚದ ದೃಷ್ಟಿಕೋನದಲ್ಲಿ ಏಶಿಯಾ ಖಂಡದ ಪಾಳೆಗಾರನಾಗಲು ಹೊರಟಿದೆ. ಸ್ವಾತಂತ್ರ್ಯದ ನಂತರದ ಶೀತಲ ಸಮರದಲ್ಲಿ ಆಲಿಪ್ತ ಚಳುವಳಿಯನ್ನು ಸೃಷ್ಟಿಸುವಲ್ಲಿ ಮುಖ್ಯ ಪಾತ್ರ ವಹಿಸಿ ಚಳವಳಿಯನ್ನು ಮುನ್ನಡೆಸುತ್ತಿದ್ದ ಭಾರತ ಈಗ ಅಮೆರಿಕದ ಕಾಲಾಳು ಆಗಲು ಹೊರಟಿದೆ.

ಮೋದಿ ಅಧಿಕಾರಕ್ಕೆ ಬಂದ ನಂತರ ಅಮೆರಿಕ ಜೊತೆ ಮಾಡಿಕೊಂಡಿರುವ ಎರಡು ಒಪ್ಪಂದಗಳು (LEMOA and COMCASA) ಇದಕ್ಕೆ ಸಾಕ್ಷಿ. LEMOA ಒಪ್ಪಂದ ಅಮೆರಿಕಾಗೆ ಭಾರತದ ಸೇನಾ ಸೌಕರ್ಯಗಳನ್ನು ಉಪಯೋಗಿಸಿಕೊಳ್ಳುವ ಹಕ್ಕು ನೀಡುತ್ತದೆ ಮತ್ತು COMCASA ಅತಿ ಸೂಕ್ಷ್ಮ ಮಿಲಿಟರಿ ಗುಪ್ತಚರ ವಿವರಗಳನ್ನು ಹಂಚಿಕೊಳ್ಳುವ ಒಪ್ಪಂದವಾಗಿದೆ. ಬಹುಮುಖ್ಯವಾಗಿ ಇದು ಮೋದಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಭಾರತ ಎಸಗುತ್ತಿರುವ ಚಾರಿತ್ರಿಕ ದ್ರೋಹ ಎಂದು ದಾಖಲಾಗುತ್ತದೆ. ಏಕೆಂದರೆ ಇನ್ನು ಮುಂದೆ ನಮ್ಮ ವಿದೇಶಾಂಗ ನೀತಿಯು ಅಮೆರಿಕದ ವ್ಯೂಹದ ಭಾಗವಾಗಿರುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...