Homeಅಂತರಾಷ್ಟ್ರೀಯಇರಾನ್- ಅಮೆರಿಕ ಯುದ್ಧದಲ್ಲಿ ಅಮೆರಿಕದ ಕಾಲಾಳು ಆಗಲು ಹೊರಟ ಭಾರತ

ಇರಾನ್- ಅಮೆರಿಕ ಯುದ್ಧದಲ್ಲಿ ಅಮೆರಿಕದ ಕಾಲಾಳು ಆಗಲು ಹೊರಟ ಭಾರತ

ಭಾರತವು ಜೂನ್ 21ರಂದು ತನ್ನ ಯುದ್ಧ ನೌಕೆಗಳಾದ ಚೆನ್ನೈ ಮತ್ತು ಸುನೈನಾವನ್ನು ಪರ್ಶಿಯನ್ ಕೊಲ್ಲಿಗೆ ಕಳುಹಿಸಲು ನಿರ್ಧರಿಸಿದೆ. ಈ ಕಾರ್ಯಾಚರಣೆಗೆ ‘ಆಪರೇಶನ್ ಸಂಕಲ್ಪ್’ ಎಂದು ಹೆಸರಿಡಲಾಗಿದೆ

- Advertisement -
- Advertisement -

| ಭರತ್ ಹೆಬ್ಬಾಳ್ |

ದಶಕಗಳಿಂದ ಒಂದಲ್ಲಾ ಒಂದು ರೀತಿಯ ನಿರಂತರ ಯುದ್ಧಗಳಿಂದ ತತ್ತರಿಸುತ್ತಿರುವ ಮಧ್ಯಪ್ರಾಚ್ಯ ಏಶಿಯಾದಲ್ಲಿ ಮತ್ತೊಮ್ಮೆ ಯುದ್ದದ ಕಾರ್ಮೋಡಗಳು ಆವರಿಸುತ್ತಿವೆ. 2015ರ ಜುಲೈ ತಿಂಗಳಲ್ಲಿ ಆರು ರಾಷ್ಟ್ರಗಳ ಸಂಧಾನ ಮಾತುಕತೆಗಳ ನಂತರ ಅಸ್ತಿತ್ವಕ್ಕೆ ಬಂದಿದ್ದ Joint Comprehensive Plan of Action (JCPOA) ಒಪ್ಪಂದವನ್ನು ಮೇ 2018ರಲ್ಲಿ ಟ್ರಂಪ್ ಆಡಳಿತ ಏಕಪಕ್ಷೀಯವಾಗಿ ಮುರಿದು ಹಾಕಿತ್ತು. ಇದರ ನಂತರದ ಮಾತುಕತೆಗಳಲ್ಲಿ ಇರಾನಿನ ಸಂಪೂರ್ಣ ಶರಣಾಗತಿಯನ್ನು ಬಯಸುತ್ತಿರುವ ಅಮೆರಿಕ, ಕಳೆದೆರಡು ತಿಂಗಳುಗಳಿಂದ ಪರ್ಶಿಯನ್ ಕೊಲ್ಲಿಯಲ್ಲಿ ನಡೆಯುತ್ತಿರುವ ಪಾಶ್ಚಾತ್ಯ ಕಚ್ಚಾ ತೈಲ ಟ್ಯಾಂಕರ್‍ಗಳ ಹಡಗುಗಳ ಮೇಲಿನ ಅಜ್ಞಾತ ದಾಳಿಗಳನ್ನು ಇರಾನಿನ ಮೇಲೆ ಕಟ್ಟಿತ್ತು.

ಅಮೆರಿಕ ಈ ರೀತಿಯ ತಂತ್ರಗಳನ್ನು ಇತಿಹಾಸದಲ್ಲಿ ಬಹಳಷ್ಟು ಮಾಡಿದೆ. ಉದಾಹರಣೆಗೆ ವಿಯೆಟ್ನಾಮ್ ಯುದ್ಧಕ್ಕೆ ನೆಪ ಮಾಡಿಕೊಂಡಿದ್ದು, ಇದೇ ರೀತಿಯ ತನ್ನ ಹಡಗುಗಳ ಮೇಲೆ ನಡೆದಿದೆ ಎನ್ನಲಾದ ಅಜ್ಞಾತ ದಾಳಿ (ಟೊಂಕಿನ್ ಕೊಲ್ಲಿಯ ಘಟನೆ). ಈ ದಾಳಿಗಳನ್ನು ಇರಾನ್ ನಿರಾಕರಿಸುತ್ತಲೇ ಬಂದಿದೆ ಮತ್ತು ಇದು ಯುದ್ಧಕ್ಕಾಗಿ ಅಮೆರಿಕ ಮಾಡುತ್ತಿರುವ ಷಡ್ಯಂತ್ರ ಎಂದು ಆರೋಪಿಸಿತ್ತು. ಇದರ ಮುಂದುವರೆದ ಭಾಗವಾಗಿಯೇ ಇರಾನ್, ಜೂನ್ 20ರಂದು ಅಮೆರಿಕಾದ ಮಾನವರಹಿತ ಗೂಢಚಾರಿ ವಿಮಾನವನ್ನು (RQ-4A Global Hawk Drone) ತನ್ನ ಸಯ್ಯದ್-2ಸಿ ಕ್ಷಿಪಣಿ ಉಪಯೋಗಿಸಿ ಹೊಡೆದುರುಳಿಸಿದೆ. ಈಗಾಗಲೇ ಅಮೆರಿಕಾದ ‘ಗರಿಷ್ಠ ಒತ್ತಡ’ ತಂತ್ರಗಾರಿಕೆಯ ಭಾಗವಾದ ತೀವ್ರ ಆರ್ಥಿಕ ನಿಬರ್ಂಧಗಳನ್ನು (ಭಯೋತ್ಪಾದನೆ) ಎದುರಿಸುತ್ತಿರುವ ಇರಾನ್ ಈಗ ‘ಗರಿಷ್ಠ ಪ್ರತಿ-ಒತ್ತಡ’ ಪ್ರದರ್ಶಿಸಲು ಸಜ್ಜಾಗುತ್ತಿದೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.

ತನ್ನ ವಾಯುಪ್ರದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಡ್ರೋನ್ ಹೊಡೆದು ಉರುಳಿಸಲಾಯಿತು ಎಂದು ಇರಾನ್ ಹೇಳಿಕೆ ಕೊಟ್ಟಿದೆ. ಅಮೆರಿಕ ಇದು ಅಂತರ್ರಾಷ್ಟ್ರೀಯ ನೀರಿಗೆ (International Waters) ಸೇರಿದ ಜಾಗ ಎಂದು ಹೇಳಿಕೆ ಕೊಟ್ಟಿದೆ. ವಾಸ್ತವದಲ್ಲಿ ಆ ಪ್ರದೇಶದಲ್ಲಿ ಅಂತರ್ರಾಷ್ಟ್ರೀಯ ನೀರಿನ ಜಾಗ ಆಗಿರುವುದು ಸಾಧ್ಯವೇ ಇಲ್ಲ. ಪರ್ಶಿಯನ್ ಕೊಲ್ಲಿಯಲ್ಲಿ ಹಾದುಹೋಗಬೇಕಾದರೆ ಅಲ್ಲಿರುವ ಕೊಲ್ಲಿಯ ಅತಿ ಸಣ್ಣ ಜಾಗ ಇರುವುದೇ 39 ಕಿಲೋಮೀಟರ್‍ಗಳ ಉದ್ದಗಲ. ಅದರ ಒಂದು ಭಾಗ ಇರಾನಿನದ್ದು, ಇನ್ನೊಂದು ಭಾಗ ಒಮಾನ್ ರಾಷ್ಟ್ರದ್ದು! ವಿಶ್ವದ 33% ಕಚ್ಚಾ ತೈಲ ಪರ್ಶಿಯನ್ ಕೊಲ್ಲಿಯಿಂದಲೇ ಹಾದುಹೋಗಬೇಕು.

ಈಗಾಗಲೇ ಇರಾನ್ ರಾಷ್ಟ್ರದಿಂದ ಕಚ್ಚಾ ತೈಲ ಆಮದು ನಿಲ್ಲಿಸುವಂತೆ ಎಲ್ಲಾ ದೇಶಗಳಿಗೂ ಅಮೆರಿಕ ಆದೇಶಿಸಿದೆ. ಆದೇಶ ಮೀರಿದರೆ ಆರ್ಥಿಕ ನಿಬರ್ಂಧಗಳನ್ನು ವಿಧಿಸುವುದಾಗಿ ಎಚ್ಚರಿಕೆಯನ್ನು ನೀಡಿದೆ. ತನ್ನನ್ನು ಕಚ್ಚಾ ತೈಲದ ಮಾರುಕಟ್ಟೆಯಿಂದ ನಿಬರ್ಂಧಿಸಿದರೆ ಪರ್ಶಿಯನ್ ಕೊಲ್ಲಿಯಲ್ಲಿ ಬೇರೆಯವರ ಕಚ್ಚಾ ತೈಲ ಹಾದುಹೋಗುವದಕ್ಕೆ ನಾವು ಬಿಡುವುದಿಲ್ಲ ಎಂದು ಇರಾನ್ ಕೂಡ ಎಚ್ಚರಿಸುತ್ತಲೇ ಬಂದಿದೆ. ಘಟನೆಯ ನಂತರ ಇರಾನಿನ ಮೇಜರ್ ಜನರಲ್ ಮೊಹಮ್ಮದ್ ಬಕೇರಿ ‘ಇರಾನ್ ಯಾವುದೇ ದೇಶದೊಂದಿಗೆ ಯುದ್ಧವನ್ನು ಬಯಸುತ್ತಿಲ್ಲ, ಆದರೆ ಇರಾನ್ ಅನ್ನು ರಕ್ಷಿಸಿಕೊಳ್ಳಲು ನಾವು ಸಂಪೂರ್ಣವಾಗಿ ಸಿದ್ಧರಿದ್ದೇವೆ, ಇರಾನ್ ಕೊಲ್ಲಿಯಿಂದ ತೈಲ ರಫ್ತು ಮಾಡುವುದನ್ನು ತಡೆಯಲು ನಿರ್ಧರಿಸಿದರೆ, ಆ ನಿರ್ಣಯವನ್ನು ದೇಶ ಹಾಗೂ ಸಶಸ್ತ್ರ ಪಡೆಗಳು ಪೂರ್ಣವಾಗಿ ಸಾಕಾರಗೊಳಿಸಿ ಸಾರ್ವಜನಿಕವಾಗಿ ಘೋಷಿಸಲಾಗುವುದು’ ಎಂಬ ಹೇಳಿಕೆ ಕೊಟ್ಟಿದ್ದಾರೆ.

ಈ ಘಟನೆಯ ನಂತರ ದೊಡ್ಡಣ್ಣ ಟ್ರಂಪ್ ‘ಇರಾನ್ ಬಹಳ ದೊಡ್ಡ ತಪ್ಪು’ ಮಾಡಿದೆ ಎಂದು ಟ್ವೀಟ್ ಮಾಡಿದ್ದರು. ನಂತರ ಇರಾನಿನ ಮೇಲೆ ದಾಳಿ ಮಾಡಲು ಆದೇಶಿಸಿ, ಆ ಆದೇಶವನ್ನು ಹಿಂಪಡೆದಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಆದೇಶ ಹಿಂಪಡೆಯುವುದರ ಹಿಂದೆ ಅಮೆರಿಕಾದ ಚುನಾವಣೆ ಕಾರಣ ಎಂದು ಹೇಳಲಾಗುತ್ತಿದ್ದರೂ, ಪರ್ಶಿಯನ್ ಕೊಲ್ಲಿಯನ್ನು ಇರಾನ್ ಮುಚ್ಚಿದರೆ ಅಮೆರಿಕಾದ ಆರ್ಥಿಕತೆ ಮತ್ತು ವಿಶ್ವದ ಆರ್ಥಿಕತೆ ಕುಸಿಯುವ ಭಯ ಇದರ ಹಿಂದಿರುವ ನಿಜವಾದ ಕಾರಣ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಈ ಕೊಲ್ಲಿಯ ಮಾರ್ಗ ಮುಚ್ಚಿದರೆ ಪ್ರಪಂಚದ 1.2 ದಶಲಕ್ಷ ಕೋಟಿ ಡರ್ರೈವೇಟಿವ್ಸ್ ಮಾರುಕಟ್ಟೆಯ ವಹಿವಾಟು ಅಂತಃಸ್ಫೋಟಗೊಂಡು ಪ್ರಪಂಚದ ಬ್ಯಾಂಕಿಂಗ್ ವ್ಯವಸ್ಥೆಯೇ ಕುಸಿದು ಬೀಳುತ್ತದೆ ಮತ್ತು ಪ್ರಪಂಚದ 80 ಟ್ರಿಲಿಯನ್ ಜಿಡಿಪಿ ಪ್ರಪಾತಕ್ಕೆ ಕುಸಿದು, ಕಂಡು ಕೇಳರಿಯದ ಆರ್ಥಿಕ ಹಿನ್ನಡೆ ಆಗುತ್ತದೆ ಎಂಬ ಸುಳಿವು ಸಿಕ್ಕ ನಂತರ ದಾಳಿ ನಡೆಸಲುದ್ದೇಶಿಸಿದ್ದ 10 ನಿಮಿಷದ ಮುಂಚೆ ಟ್ರಂಪ್ ತನ್ನ ಆದೇಶವನ್ನು ಹಿಂಪಡೆದುಕೊಂಡಿದ್ದಾರೆ. ಈ ಕೊಲ್ಲಿಯನ್ನು ಮುಚ್ಚಲು ಇರಾನ್ ತನ್ನ ಪಾಶ್ಚಾತ್ಯ ಗಡಿಯ ಉದ್ದಗಲಕ್ಕೂ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸಿದ್ಧಪಡಿಸಿಕೊಂಡಿದೆ ಮತ್ತು ಸಮಯ ಬಂದರೆ ಕೊಲ್ಲಿಯನ್ನು ಮುಚ್ಚುವುದಾಗಿಯೂ ಎಚ್ಚರಿಕೆ ನೀಡಿದೆ.

ಈ ಪರಿಸ್ಥಿತಿಯಲ್ಲಿ ಅನಾವರಣಗೊಳ್ಳುತ್ತಿರುವ ಬಿಕ್ಕಟ್ಟಿನ ಒಂದು ಅತ್ಯಂತ ಕಳವಳಕಾರಿ ಬೆಳೆವಣಿಗೆಯೆಂದರೆ ಭಾರತದ ನಿಗೂಢ ನಡೆ. ಭಾರತವು ಜೂನ್ 21ರಂದು ತನ್ನ ಯುದ್ಧ ನೌಕೆಗಳಾದ ಚೆನ್ನೈ ಮತ್ತು ಸುನೈನಾವನ್ನು ಪರ್ಶಿಯನ್ ಕೊಲ್ಲಿಗೆ ಕಳುಹಿಸಲು ನಿರ್ಧರಿಸಿದೆ. ಈ ಕಾರ್ಯಾಚರಣೆಗೆ ‘ಆಪರೇಶನ್ ಸಂಕಲ್ಪ್’ ಎಂದು ಹೆಸರಿಡಲಾಗಿದೆ ಹಾಗೂ ಯುದ್ಧ ನೌಕೆಗಳು ಓಮೆನ್ ಭಾಗದ ನೀರಿನಲ್ಲಿ ನಿಯೋಜಿಸಲ್ಪಟ್ಟಿರುತ್ತದೆ ಎಂದು ವಿವರಿಸಲಾಗಿದೆ. ತೀಕ್ಷ್ಣಗೊಳ್ಳುತ್ತಿರುವ ಜಾಗತಿಕ ರಾಜಕೀಯದಲ್ಲಿ ರಶಿಯ, ಸಿರಿಯ, ಚೀನಾ, ಇರಾನ್ ಒಂದು ಕಡೆಯಾದರೆ, ಅಮೆರಿಕ, ಯುರೋಪಿಯನ್ ಯೂನಿಯನ್‍ನ ಕೆಲವು ಮುಖ್ಯ ರಾಷ್ಟ್ರಗಳು, ಬ್ರಿಟನ್, ಇಸ್ರೇಲ್ ಸೌದಿ ಮತ್ತದರ ಹಿಂಬಾಲಕ ಅರಬ್ ರಾಷ್ಟ್ರಗಳು ಇನ್ನೊಂದು ಕಡೆ.

ಪಾಕಿಸ್ತಾನ ರಶಿಯ ಮತ್ತು ಚೀನಾಗೆ ಹತ್ತಿರವಾಗುತ್ತಿದ್ದರೆ, ಭಾರತ ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಒಂದು ವಿಚಿತ್ರ ಡಬಲ್ ಗೇಮ್ ಆಟದಲ್ಲಿ ತೊಡಗಿದೆ. ಹಿಂದಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದ ಈ ದೇಶಗಳ ಮಧ್ಯೆ ಆರ್ಥಿಕ ನಿರ್ಬಂಧಗಳಾಚೆಗೂ ವ್ಯಾಪಾರ ವಹಿವಾಟು ವಿವಿಧ ವಿನಿಮಯಗಳನ್ನು ಬಳಸಿ ನಡೆಸಲಾಗುತ್ತಿತ್ತು. ಆದರೆ ಕಳೆದ ಮೇ ತಿಂಗಳಿನಿಂದ ಇರಾನ್‍ನಿಂದ ಕಚ್ಚಾ ತೈಲ ಖರೀದಿಸುವುದನ್ನು ನಿಲ್ಲಿಸಿರುವ ಭಾರತವು ಇರಾನಿನ ಕಟು ವೈರಿಗಳಾದ ಇಸ್ರೇಲ್ ಮತ್ತು ಯುದ್ಧಕೋರ ಅಮೆರಿಕ ಜೊತೆಗೂಡಿ ಅಮೆರಿಕ ಕೇಂದ್ರಿತ ಏಕ ಧ್ರುವಿ ಪ್ರಪಂಚದ ದೃಷ್ಟಿಕೋನದಲ್ಲಿ ಏಶಿಯಾ ಖಂಡದ ಪಾಳೆಗಾರನಾಗಲು ಹೊರಟಿದೆ. ಸ್ವಾತಂತ್ರ್ಯದ ನಂತರದ ಶೀತಲ ಸಮರದಲ್ಲಿ ಆಲಿಪ್ತ ಚಳುವಳಿಯನ್ನು ಸೃಷ್ಟಿಸುವಲ್ಲಿ ಮುಖ್ಯ ಪಾತ್ರ ವಹಿಸಿ ಚಳವಳಿಯನ್ನು ಮುನ್ನಡೆಸುತ್ತಿದ್ದ ಭಾರತ ಈಗ ಅಮೆರಿಕದ ಕಾಲಾಳು ಆಗಲು ಹೊರಟಿದೆ.

ಮೋದಿ ಅಧಿಕಾರಕ್ಕೆ ಬಂದ ನಂತರ ಅಮೆರಿಕ ಜೊತೆ ಮಾಡಿಕೊಂಡಿರುವ ಎರಡು ಒಪ್ಪಂದಗಳು (LEMOA and COMCASA) ಇದಕ್ಕೆ ಸಾಕ್ಷಿ. LEMOA ಒಪ್ಪಂದ ಅಮೆರಿಕಾಗೆ ಭಾರತದ ಸೇನಾ ಸೌಕರ್ಯಗಳನ್ನು ಉಪಯೋಗಿಸಿಕೊಳ್ಳುವ ಹಕ್ಕು ನೀಡುತ್ತದೆ ಮತ್ತು COMCASA ಅತಿ ಸೂಕ್ಷ್ಮ ಮಿಲಿಟರಿ ಗುಪ್ತಚರ ವಿವರಗಳನ್ನು ಹಂಚಿಕೊಳ್ಳುವ ಒಪ್ಪಂದವಾಗಿದೆ. ಬಹುಮುಖ್ಯವಾಗಿ ಇದು ಮೋದಿ ಮತ್ತೆ ಅಧಿಕಾರಕ್ಕೆ ಬಂದ ನಂತರ ಭಾರತ ಎಸಗುತ್ತಿರುವ ಚಾರಿತ್ರಿಕ ದ್ರೋಹ ಎಂದು ದಾಖಲಾಗುತ್ತದೆ. ಏಕೆಂದರೆ ಇನ್ನು ಮುಂದೆ ನಮ್ಮ ವಿದೇಶಾಂಗ ನೀತಿಯು ಅಮೆರಿಕದ ವ್ಯೂಹದ ಭಾಗವಾಗಿರುತ್ತದೆ ಎಂಬುದರಲ್ಲಿ ಸಂದೇಹವೇ ಇಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಕ್ರಮ ಕಲ್ಲು ಗಣಿಗಾರಿಕೆ ಆರೋಪ: ಸಚಿವ ರುದ್ರಪ್ಪ ಲಮಾಣಿಗೆ 3 ಕೋಟಿ ರೂ. ದಂಡ

ಕಲ್ಲು ಗಣಿಗಾರಿಕೆ ನಡೆಸುವ ವೇಳೆ ಸಾಲು ಸಾಲು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶ್ರೀ ರುದ್ರಪ್ಪ ಮಾನಪ್ಪ ಲಮಾಣಿ ಅವರಿಗೆ ಗಣಿ ಮತ್ತು...

ಪಶ್ಚಿಮ ಬಂಗಾಳ SIR: 38 ಲಕ್ಷ ಮೇಲ್ಮನವಿಗಳಲ್ಲಿ ವಿಲೇವಾರಿಯಾಗಿದ್ದು ಕೇವಲ 1 ಲಕ್ಷ

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಬೃಹತ್ ಪ್ರಮಾಣದ ಮೇಲ್ಮನವಿಗಳ ಪೈಕಿ ವಿಲೇವಾರಿಯಾದ ಅರ್ಜಿಗಳ ಸಂಖ್ಯೆ ತೀರಾ ಕನಿಷ್ಠ ಮಟ್ಟದಲ್ಲಿದೆ ಎಂಬ ಆಘಾತಕಾರಿ ಮಾಹಿತಿ...

ಕರ್ನಾಟಕ ಎಸ್‌ಐಆರ್: ತಡವಾಗಿ ತಲುಪಿದ ನೋಟಿಸ್‌ಗಳಿಂದ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ; ಮತದಾರರಲ್ಲಿ ಗೊಂದಲ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗಳನ್ನು ಮತದಾರರಿಗೆ ತಲುಪಿಸುವಲ್ಲಿ ಉಂಟಾಗುತ್ತಿರುವ ವಿಳಂಬವು ಹಲವು ಕಡೆ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ ಮತ್ತು ಗೊಂದಲಕ್ಕೆ ಕಾರಣವಾಗುತ್ತಿದೆ. ‘ನೋ-ಮ್ಯಾಪಿಂಗ್’...

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...