Homeಕರ್ನಾಟಕಮನೆ ಮಟ್ಟದಲ್ಲಿ ಹಸಿ ತ್ಯಾಜ್ಯ ನಿರ್ವಹಣೆ ಪೌರಕಾರ್ಮಿಕರ ಹೊರೆ ತಗ್ಗಿಸಬಹುದು

ಮನೆ ಮಟ್ಟದಲ್ಲಿ ಹಸಿ ತ್ಯಾಜ್ಯ ನಿರ್ವಹಣೆ ಪೌರಕಾರ್ಮಿಕರ ಹೊರೆ ತಗ್ಗಿಸಬಹುದು

- Advertisement -
- Advertisement -

ಆಗತಾನೇ ಅಡುಗೆಮನೆಯಲ್ಲಿದ್ದ ಕಾಂಪೋಸ್ಟ್ ಡಬ್ಬವನ್ನು ಮೂಗು ಮುಚ್ಚಿಕೊಂಡು ಕಂಬಕ್ಕೆ ರವಾನಿಸಿ ಕೂತಿದ್ದೆ; ಅದೇ ಸಮಯಕ್ಕೆ ಫೋನ್ ಬಂತು; ನಿಮ್ಮನೇಲಿ ಹಸಿ ಕಸ ಕಾಂಪೋಸ್ಟ್ ಮಾಡ್ತೀರಲ್ಲ, ಅದರ ಬಗ್ಗೆ ಲೇಖನ ಬರೆದು ಕೊಡಿ ಅಂತ.

ಮೂವ್ವತ್ತು ವರ್ಷಗಳ ಹಿಂದೆ ನಾವು ಈಗಿರುವ ಮನೆಗೆ ಬಂದಾಗ ಅಕ್ಕಪಕ್ಕದ ಸೈಟುಗಳು ಖಾಲಿ ಇದ್ದವು. ತುಸು ದೂರದಲ್ಲಿದ್ದ ಹೊಲಗಳು ಕಣ್ಣಿಗೆ ಬೀಳ್ತಾ ಇದ್ದವು. ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಅಜ್ಜಅಜ್ಜಿಯರು ತಮ್ಮ ದನಕರುಗಳನ್ನು ನಮ್ಮ ಪಕ್ಕದ ಸೈಟಿನಲ್ಲಿ ಮೇಯಿಸುತ್ತಾ ತಮ್ಮ ಕಷ್ಟಸುಖ ಮಾತಾಡಿಕೊಳ್ತಾ, ಅಮ್ಮನ ಜೊತೆ ಆಗೀಗ ಕುಶಲೋಪರಿ ಮಾತುಕತೆ ಆಡ್ತಾ ಇದ್ದರು. ಅವರೆಕಾಯಿ, ಅಲಸಂದೆಕಾಯಿ ಸಿಪ್ಪೆ, ಹಲಸಿನ ಸಿಪ್ಪೆ, ಮಿಕ್ಕಿದ ಅನ್ನ-ಸಾರು ಇವೆಲ್ಲವೂ ಹಸುಗಳಿಗೆ ಆಹಾರವಾಗ್ತಾ ಇತ್ತು. ಕಾಲಕ್ರಮೇಣ ಸೈಟುಗಳಿದ್ದ ಕಡೆ ಮನೆಗಳೆದ್ದವು. ಅಜ್ಜ-ಅಜ್ಜಿಯರು ಹಸು ಮೇಯಿಸಲು ಶಕ್ತಿಯಿಲ್ಲದೆ ತಾವೇ ಹಾಲು ಕೊಳ್ಳುವ ಸ್ಥಿತಿಗೆ ತಲುಪಿದರು. ತರಕಾರಿ ಸಿಪ್ಪೆ ಕಸದಗಾಡಿಗೆ, ತಂಗಳು ಬಚ್ಚಲ ಕಿಂಡಿಯ ಮೂಲಕ ಚರಂಡಿ ಸೇರಲಾರಂಭಿಸಿತು. ಸುಮಾರು ಹತ್ತು ವರ್ಷಗಳ ಹಿಂದೆ ಇರ್ಬೇಕು, ಕೃಷಿ ವಿಜ್ಞಾನಿಯಾಗಿರುವ ನಮ್ಮಣ್ಣ ತರಕಾರಿ ಸಿಪ್ಪೆಯನ್ನು ಇನ್ಮೇಲೆ ಮಹಡಿ ಮೇಲೆ ಖಾಲಿ ಪಾಟ್‌ಗಳಿಗೆ ಹಾಕಿ ಮಣ್ಣು ತುಂಬಿ ಅಂದ್ರು. ಅದಾದಮೇಲೆ ಮನೆಯ ಎಲ್ಲಾ ಹಸಿ ಕಸವನ್ನು ಹೊರಗೆ ಹಾಕೋದು ಬೇಡ ಅಂದ್ರು. ಏನೋ ದೊಡ್ಡ ಕ್ರಾಂತಿ ಮಾಡುವ ಉತ್ಸಾಹದಲ್ಲಿ ಅಡುಗೆ ಮನೆಯ ಸಿಂಕ್ ಹತ್ತಿರ ೭-೮ ಕೆಜಿ ತುಂಬುವ ಡಬ್ಬ ಇಟ್ಟುಕೊಂಡು ತರಕಾರಿ ಸಿಪ್ಪೆ, ಅಳಿದುಳಿದ ಊಟ ತಿಂಡಿ ಎಲ್ಲಾ ಅದರಲ್ಲಿ ಹಾಕತೊಡಗಿದೆವು. ಮೂರನೇ ದಿವಸಕ್ಕೆ ಡಬ್ಬದ ಮುಚ್ಚಳ ತೆಗೆದರೆ ಸಹಿಸಲಾರದ ವಾಸನೆ, ಜೊತೆಗೆ ಪಿತಗರೆಯುವ ಬಿಳಿ ಹುಳುಗಳು. ಅವಾದರೋ ಜಿಗಿಯುವ ಸಾಮರ್ಥ್ಯವುಳ್ಳವು! ಫ್ರೂಟ್ ಫ್ಲೈಗಳ ಲಾರ್ವಾಗಳಂತೆ ಅವು! ಮಹಡಿಯ ಮೇಲಿನ ಪಾಟ್‌ಗಳಿಗೆ ಹಾಕಿ ಮಣ್ಣು ಸುರಿದರೂ ದುರ್ವಾಸನೆ. ಅಕ್ಕಪಕ್ಕದ ಮನೆಯವರು ಕೆಲವೊಮ್ಮೆ ಮೆಲ್ಲಗೆ, ಕೆಲವೊಮ್ಮೆ ಕೇಳುವ ಹಾಗೆ ಬೈದುಕೊಂಡದ್ದೂ ಉಂಟು. ಯಾರೂ ನೇರವಾಗಿ ಕೇಳಲಿಲ್ಲ ಸದ್ಯ!

ಇದನ್ನೂ ಓದಿ : ಹೈದ್ರಾಬಾದ್‌: ಮಹಿಳೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಸರ್ಕಲ್‌ ಇನ್‌ಸ್ಪೆಕ್ಟರ್‌‌

ಅಲ್ಲಿಇಲ್ಲಿ ಲೇಖನ ಓದಿ, ಮನೆಯ ಹಾಲ್‌ನಲ್ಲೆ ಇಟ್ಕೋಬಹುದಾದ, ವಾಸನೆ ಬರದ ಕಾಂಪೋಸ್ಟ್ ನಿರ್ವಹಣೆಯ ಬಗ್ಗೆ ತಿಳಿದುಕೊಂಡದ್ದಾಯ್ತು. ಮುಂದಿನ ಹಂತ: ಸಾವಿರಾರು ರೂಪಾಯಿ ಕೊಟ್ಟು ಮೂರು ಪಾಟ್‌ಗಳ ಕಂಬ ತಂದಿದ್ದಾಯ್ತು. ಆದರೆ ಮೂರೇ ಮಂದಿಯ ನಮ್ಮ ಪುಟ್ಟ ಮನೆಯ ಅಡುಗೆಮನೆ ಹಸಿ ಕಸಕ್ಕೆ ಆ ಕಂಬ ವಾರಕ್ಕೂ ಮುಂಚೆ ತುಂಬಿಹೋಗುತ್ತಿತ್ತು! ಮತ್ತದೇ ಪುನರಾವರ್ತನೆ. ಹೈಡ್ರೋಜನ್ ಸಲ್ಫೈಡ್ ವಾಸನೆಯನ್ನು ಬೀರುವ ಮಹಡಿ ಮೇಲಿನ ಪಾಟ್‌ಗಳಲ್ಲಿ ಕಾಂಪೋಸ್ಟ್ ಮಾಡುವ ಕೆಲಸ ಮತ್ತೆ ಶುರು. ಪಾಟ್‌ಗಳು ಸಾಲದೆಂದು ಪ್ಲಾಸ್ಟಿಕ್ ಚೀಲಗಳನ್ನೂ ಕೆಲ ಸಮಯ ಉಪಯೋಗಿಸಲಾಯ್ತು. ಆದರೆ ಕಾಂಪೋಸ್ಟ್ ಚೀಲವನ್ನು ಆಚೀಚೆ ಸರಿಸಿ ಇಡುವಾಗ ಚೀಲ ಹರಿದು, ಅರೆಬರೆ ಕೊಳೆತ ಕಾಂಪೋಸ್ಟ್ ಸುರಿದು, ಅದನ್ನು ಶುಚಿ ಮಾಡುವ ಮತ್ತೊಂದು ಕೆಲಸದ ಹೊರೆ ಆಗುತ್ತಿತ್ತು. ಹಸಿ ಕಸ ಸಂಗ್ರಹಿಸಿದ ಡಬ್ಬದಲ್ಲಿ ಗಾಳಿ ಆಡದೆ ಇದ್ದರೆ ಕಾಂಪೋಸ್ಟ್ ತಯಾರಿಕೆ ಕ್ರಿಯೆ ತುಸು ಇರಿಸುಮುರಿಸು ತರುತ್ತದೆ, ಮನೆಯವರಿಗೂ, ಅಕ್ಕಪಕ್ಕದವರಿಗೂ.
ಕೊನೆಗೂ ಈ ದುರ್ವಾಸನೆಯುಕ್ತ ಕಾಂಪೋಸ್ಟ್ ಮಾಡುವ ವಿಧಾನ ಕೊನೆಯಾಗಿದ್ದು ಏರೋಬಿಕ್ ವಿಧಾನವನ್ನು ಅಳವಡಿಸಿಕೊಂಡಾಗ.

ಹೆಸರಿನಿಂದ ಇದೇನೋ ಭಾರೀ ಕಷ್ಟದ ವಿಧಾನ ಅನಿಸಿರಬಹುದು! ಹಾಗೇನೂ ಇಲ್ಲ. ದೊಡ್ಡದೊಡ್ಡ ಅಂಗಡಿಗಳಲ್ಲಿ, ಹಾಪ್ಕಾಮ್ಸ್ ಅಂಗಡಿಗಳಲ್ಲಿ ನೋಡಿಯೇ ಇರುತ್ತೀರಿ ಪ್ಲಾಸ್ಟಿಕ್ ಕ್ರೇಟ್‌ಗಳನ್ನು. 200-300 ರೂಪಾಯಿಗಳಿಗೆ ದೊರಕುವ ಈ ಕ್ರೇಟ್‌ಗಳಿಗೆ ತಳದಲ್ಲಿ ತೂತು ಮಾಡಿ, ಕಬ್ಬಿಣದ ಸ್ಟಾಂಡ್ ಮೇಲೆ ಅವನ್ನಿಟ್ಟು ಅದರಲ್ಲಿ ಹಸಿ ಕಸವನ್ನು ಸಂಗ್ರಹಿಸಲು ಆರಂಭಿಸಿದೆವು. ಇದು ಪ್ರಾರಂಭಿಸಿ 4-5 ವರ್ಷಗಳಾಯ್ತು. ನಮ್ಮ ಬಿಲ್ಡಿಂಗ್‌ನಲ್ಲಿರುವ ಮೂರು ಮನೆಗಳಿಂದ ಏನಿಲ್ಲವೆಂದರೂ ವಾರಕ್ಕೆ 15-20 ಕೆಜಿ ಹಸಿ ಕಸ ಸಂಗ್ರಹವಾಗುತ್ತದೆ. ಅದನ್ನು ದಿನಾ ದಿನ ಕ್ರೇಟ್‌ನಲ್ಲಿ ತುಂಬಿ, ಅದರ ಮೇಲೆ ಈಗಾಗಲೇ ತಯಾರಾಗಿರುವ ಕಾಂಪೋಸ್ಟ್, ಅಥವಾ
ಮಣ್ಣು, ಜೊತೆಗೆ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಡಿಕಂಪೋಸರ್‌ಅನ್ನು ಬೆರೆಸಿ ಮಳೆ ನೀರು ಬೀಳದ ಹಾಗೆ ಮುಚ್ಚಿಟ್ಟರೆ, ಸುಮಾರು ಒಂದು ತಿಂಗಳಲ್ಲಿ ಹಸಿ ಕಸದ ಶೇ.೧೦ರಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರ ತಯಾರು. ನಮ್ಮ ಟೆರೇಸ್ ಗಾರ್ಡನ್‌ನಲ್ಲಿನ ಗಿಡಗಳಿಗೂ ಆಗಿ ಮಿಗುವಷ್ಟು ಕಾಂಪೋಸ್ಟ್ ತಯಾರಾಗುತ್ತದೆ. ಕಾಂಪೋಸ್ಟ್ ತಯಾರಿಯಲ್ಲಿ ಸ್ವಾಭಾವಿಕವಾಗಿ ಸಹಾಯ ಮಾಡುವ ಇತರೆ ಜೀವಿಗಳೆಂದರೆ ಎರೆಹುಳುಗಳು, ಸೋಲ್ಜರ್ ಹುಳುಗಳು, ಜಿರಳೆ, ಇರುವೆಗಳು. 10 ವರ್ಷಗಳಲ್ಲಿ ಸಂಗ್ರಹಿಸಿದ ಹಸಿ ಕಸ ವರ್ಷಕ್ಕೆ 1000 ಕೆಜಿಯಂತೆ 10 ಟನ್. ತನ್ಮೂಲಕ ತಯಾರಾದ ಸಾವಯವ ಗೊಬ್ಬರ ವರ್ಷಕ್ಕೆ 100 ಕೆಜಿಯಂತೆ 1 ಟನ್.

ಹಸಿಕಸವನ್ನು ಗೊಬ್ಬರವನ್ನಾಗಿಸುವುದು ಸುಲಲಿತವಾದ ಪಯಣವೇನಲ್ಲ. ಅಡುಗೆ ಮನೆಯಲ್ಲಿ ತರಕಾರಿ, ಊಟದ ತ್ಯಾಜ್ಯ ಸಂಗ್ರಹಿಸುವ ಜಾಗದಲ್ಲಿ ಯಾವಾಗಲೂ ಸೊಳ್ಳೆ, ಇರುವೆ ಮುಸುರುತ್ತವೆ. ಕಸವನ್ನು ಮಹಡಿಗೆ ಸಾಗಿಸುವುದು ನಿಧಾನಿಸಿದಷ್ಟು ಹೆಚ್ಚೆಚ್ಚು ದುರ್ಗಂಧ ಆವರಿಸುತ್ತದೆ. ಮಹಡಿಯ ಮೇಲೂ ಕೂಡ ಈ ಹಸಿ ಕಸವನ್ನು ತಿನ್ನಲೆಂದೇ ಹೇರಳವಾಗಿ ಇರುವೆ, ಜಿರಳೆ, ಹಲ್ಲಿ, ಹೆಗ್ಗಣ ಮುಗಿಬೀಳುತ್ತವೆ. ಒಂದು ಸಣ್ಣ ಮಳೆ ಬಿದ್ದರೂ ಸಾಕು ಸೋಲ್ಜರ್ ಹುಳುಗಳು ಮಹಡಿ, ಮೆಟ್ಟಿಲು ಎಲ್ಲೆಲ್ಲೂ ಹರಡಿ ತಮ್ಮ ಇರವನ್ನು ಖಚಿತಪಡಿಸುತ್ತವೆ. ಮಳೆಗಾಲದಲ್ಲಿ ಕಸ ಬೇಗ ಒಣಗುವುದಿಲ್ಲ. ಕ್ರೇಟ್‌ಗಳ ತಳದಿಂದ ಸೋರಿದ ನೀರು ಸರಿಯಾದ ವಾಟರ್ ಪ್ರೂಫಿಂಗ್ ಇಲ್ಲದಲ್ಲಿ ಗೋಡೆಗೆ ಇಳಿದು ಹಾನಿ ಮಾಡಬಹುದು. ಕಸ ಒಣಗಿದ ಮೇಲೆ ಗಾಳಿಗೆ ಹಾರಿ ಮಹಡಿಯೆಲ್ಲ ಹರಡಬಹುದು. ನಿತ್ಯ ಅದನ್ನು ಗುಡಿಸುವುದೂ ಸಹ ದಿನಚರಿಯಲ್ಲಿ
ಸೇರಿಸಿಕೊಳ್ಳಬೇಕಾಗುತ್ತದೆ.

ಇಷ್ಟೆಲ್ಲಾ ಅಡಚಣೆಗಳ ಮಧ್ಯೆಯೂ ಒಂದು ಸುಂದರ ಪರಿಸರ ವ್ಯವಸ್ಥೆ (eco system) ರೂಪುಗೊಳ್ಳುತ್ತದೆ. ಕಾಂಪೋಸ್ಟ್‌ನಲ್ಲಿರುವ ಹುಳುಗಳನ್ನು ತಿನ್ನಲೆಂದೇ ಕಾಗೆ, ಗೊರವಂಕಗಳು ಬರುತ್ತವೆ. ಪುಟಾಣಿ ಸನ್ ಬರ್ಡ್ ಗೂಡು ಕಟ್ಟಲು ಒಣಗಿದ ಕಡ್ಡಿಯ ಹುಡುಕಾಟದಲ್ಲಿ, ಗಿಡಗಳ ಮೇಲಿನೆ ಹುಳು-ಹುಪ್ಪಟೆ ತಿನ್ನಲು ಅಥವಾ
ನೀರಿಗಾಗಿ ದಿನಾಲು ನಿಗದಿತ ಸಮಯದಲ್ಲಿ ಹಾಜರಾಗುತ್ತವೆ. ಟೆರೇಸ್ ಗಾರ್ಡನ್‌ನಲ್ಲಿನ ಹೂವುಗಳನ್ನರಸಿ ಜೇನುನೊಣ, ಬಣ್ಣಬಣ್ಣದ ಚಿಟ್ಟೆಗಳು, ಕೆಲವೊಮ್ಮೆ ಕಣಜಗಳು ಕೂಡ ಆಗಮಿಸುತ್ತವೆ. ನೀರು ತುಂಬಿಟ್ಟ ಪಾತ್ರೆಗಳಲ್ಲಿ ಸ್ನಾನ ಮಾಡಲು ಬುಲ್ಬುಲ್ ಜೋಡಿ ಕೂಡ ಹಾಜರ್. ಬೇರೆ ಪಕ್ಷಿಗಳು ಬಂದರೆ ತುಸು ದೂರವೇ ನಿಂತು ತಮ್ಮ ಸರತಿ ಬರುವವರೆಗೂ ಕಾದು ಯಾವುದೇ ಜಗಳವಿಲ್ಲದೆ ನೀರಿನ ದಾಹ ಪರಿಹರಿಸಿಕೊಂಡು ಮನಸೋ ಇಚ್ಛೆ ಸ್ನಾನ ಮಾಡಿ ತೆರಳುತ್ತವೆ. ಆಗೀಗ ಮಾನವನ ಉಗಮ ಪ್ರಕ್ರಿಯೆಯಲ್ಲಿ ಕೊಂಡಿ ಎನ್ನಲಾಗುವ ಪೂರ್ವಜರು ಕೂಡ ಬರುವುದೂ ಉಂಟು. ಹಣ್ಣುಗಳನ್ನು ತಿಂದು ನಮಗೂ ಸ್ವಲ್ಪ ಉಳಿಸಿಯೇ ಸಾಗುತ್ತವೆ!
ಉದ್ಯಾನ ನಗರಿ ಬೆಂಗಳೂರಿನ ಹಸಿ ತ್ಯಾಜ್ಯಕ್ಕೆ ಕೆಲವು ಟನ್‌ಗಳಷ್ಟು ಹೊರೆ ಇಳಿಸಿದ್ದೇವೆ ಅನ್ನುವುದೇ ಸಮಾಧಾನದ ವಿಷಯ. ಅನುಕೂಲವಿದ್ದ ವಸತಿ ಪ್ರದೇಶಗಳಲ್ಲಿ ನಿಯಮಿತವಾಗಿ ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವ ವ್ಯವಸ್ಥೆ ಸಾರ್ವಜನಿಕವಾಗಿ ಲಭ್ಯವಿದ್ದಲ್ಲಿ ಅಥವಾ ಮಹಡಿಯ ಮೇಲೆ ಜಾಗದ ಅನುಕೂಲವಿರುವವರು ತಾವೇ ಕಾಂಪೋಸ್ಟ್ ಮಾಡುವ ಮನಸ್ಸು ಮಾಡಿ ಸೂಕ್ತ ವ್ಯವಸ್ಥೆ ಮಾಡಿಕೊಂಡರೂ ಸಹ ಹಲವಾರು ಟನ್ ಹಸಿ ಕಸದ ವಿಲೇವಾರಿ ಕಡಿಮೆಯಾಗುತ್ತದೆ. ಪರಿಸರಕ್ಕೂ ಒಳ್ಳೆಯದು, ಪೌರಕಾರ್ಮಿಕರಿಗೂ ತುಸು ಶ್ರಮ ಕಡಿಮೆಯಾಗಬಹುದು.

ರಾಧಿಕಾ ಗಂಗಣ್ಣ
ವೃತ್ತಿಯಲ್ಲಿ ಎಂಜಿನಿಯರ್. ಸಾಹಿತ್ಯ ಆಸಕ್ತಿಯ ಕ್ಷೇತ್ರ.
ಗೆಳೆಯರೊಂದಿಗೆ ಸೇರಿ ಕನ್ನಡ ಪುಸ್ತಕಗಳ ಬಗ್ಗೆ ಪ್ರತಿ ವಾರ
ಕ್ಲಬ್ ಹೌಸ್ ಕಾರ್ಯಕ್ರಮವೊಂದನ್ನು ನಿರ್ವಹಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...