Homeಕರ್ನಾಟಕಮನೆ ಮಟ್ಟದಲ್ಲಿ ಹಸಿ ತ್ಯಾಜ್ಯ ನಿರ್ವಹಣೆ ಪೌರಕಾರ್ಮಿಕರ ಹೊರೆ ತಗ್ಗಿಸಬಹುದು

ಮನೆ ಮಟ್ಟದಲ್ಲಿ ಹಸಿ ತ್ಯಾಜ್ಯ ನಿರ್ವಹಣೆ ಪೌರಕಾರ್ಮಿಕರ ಹೊರೆ ತಗ್ಗಿಸಬಹುದು

- Advertisement -
- Advertisement -

ಆಗತಾನೇ ಅಡುಗೆಮನೆಯಲ್ಲಿದ್ದ ಕಾಂಪೋಸ್ಟ್ ಡಬ್ಬವನ್ನು ಮೂಗು ಮುಚ್ಚಿಕೊಂಡು ಕಂಬಕ್ಕೆ ರವಾನಿಸಿ ಕೂತಿದ್ದೆ; ಅದೇ ಸಮಯಕ್ಕೆ ಫೋನ್ ಬಂತು; ನಿಮ್ಮನೇಲಿ ಹಸಿ ಕಸ ಕಾಂಪೋಸ್ಟ್ ಮಾಡ್ತೀರಲ್ಲ, ಅದರ ಬಗ್ಗೆ ಲೇಖನ ಬರೆದು ಕೊಡಿ ಅಂತ.

ಮೂವ್ವತ್ತು ವರ್ಷಗಳ ಹಿಂದೆ ನಾವು ಈಗಿರುವ ಮನೆಗೆ ಬಂದಾಗ ಅಕ್ಕಪಕ್ಕದ ಸೈಟುಗಳು ಖಾಲಿ ಇದ್ದವು. ತುಸು ದೂರದಲ್ಲಿದ್ದ ಹೊಲಗಳು ಕಣ್ಣಿಗೆ ಬೀಳ್ತಾ ಇದ್ದವು. ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಅಜ್ಜಅಜ್ಜಿಯರು ತಮ್ಮ ದನಕರುಗಳನ್ನು ನಮ್ಮ ಪಕ್ಕದ ಸೈಟಿನಲ್ಲಿ ಮೇಯಿಸುತ್ತಾ ತಮ್ಮ ಕಷ್ಟಸುಖ ಮಾತಾಡಿಕೊಳ್ತಾ, ಅಮ್ಮನ ಜೊತೆ ಆಗೀಗ ಕುಶಲೋಪರಿ ಮಾತುಕತೆ ಆಡ್ತಾ ಇದ್ದರು. ಅವರೆಕಾಯಿ, ಅಲಸಂದೆಕಾಯಿ ಸಿಪ್ಪೆ, ಹಲಸಿನ ಸಿಪ್ಪೆ, ಮಿಕ್ಕಿದ ಅನ್ನ-ಸಾರು ಇವೆಲ್ಲವೂ ಹಸುಗಳಿಗೆ ಆಹಾರವಾಗ್ತಾ ಇತ್ತು. ಕಾಲಕ್ರಮೇಣ ಸೈಟುಗಳಿದ್ದ ಕಡೆ ಮನೆಗಳೆದ್ದವು. ಅಜ್ಜ-ಅಜ್ಜಿಯರು ಹಸು ಮೇಯಿಸಲು ಶಕ್ತಿಯಿಲ್ಲದೆ ತಾವೇ ಹಾಲು ಕೊಳ್ಳುವ ಸ್ಥಿತಿಗೆ ತಲುಪಿದರು. ತರಕಾರಿ ಸಿಪ್ಪೆ ಕಸದಗಾಡಿಗೆ, ತಂಗಳು ಬಚ್ಚಲ ಕಿಂಡಿಯ ಮೂಲಕ ಚರಂಡಿ ಸೇರಲಾರಂಭಿಸಿತು. ಸುಮಾರು ಹತ್ತು ವರ್ಷಗಳ ಹಿಂದೆ ಇರ್ಬೇಕು, ಕೃಷಿ ವಿಜ್ಞಾನಿಯಾಗಿರುವ ನಮ್ಮಣ್ಣ ತರಕಾರಿ ಸಿಪ್ಪೆಯನ್ನು ಇನ್ಮೇಲೆ ಮಹಡಿ ಮೇಲೆ ಖಾಲಿ ಪಾಟ್‌ಗಳಿಗೆ ಹಾಕಿ ಮಣ್ಣು ತುಂಬಿ ಅಂದ್ರು. ಅದಾದಮೇಲೆ ಮನೆಯ ಎಲ್ಲಾ ಹಸಿ ಕಸವನ್ನು ಹೊರಗೆ ಹಾಕೋದು ಬೇಡ ಅಂದ್ರು. ಏನೋ ದೊಡ್ಡ ಕ್ರಾಂತಿ ಮಾಡುವ ಉತ್ಸಾಹದಲ್ಲಿ ಅಡುಗೆ ಮನೆಯ ಸಿಂಕ್ ಹತ್ತಿರ ೭-೮ ಕೆಜಿ ತುಂಬುವ ಡಬ್ಬ ಇಟ್ಟುಕೊಂಡು ತರಕಾರಿ ಸಿಪ್ಪೆ, ಅಳಿದುಳಿದ ಊಟ ತಿಂಡಿ ಎಲ್ಲಾ ಅದರಲ್ಲಿ ಹಾಕತೊಡಗಿದೆವು. ಮೂರನೇ ದಿವಸಕ್ಕೆ ಡಬ್ಬದ ಮುಚ್ಚಳ ತೆಗೆದರೆ ಸಹಿಸಲಾರದ ವಾಸನೆ, ಜೊತೆಗೆ ಪಿತಗರೆಯುವ ಬಿಳಿ ಹುಳುಗಳು. ಅವಾದರೋ ಜಿಗಿಯುವ ಸಾಮರ್ಥ್ಯವುಳ್ಳವು! ಫ್ರೂಟ್ ಫ್ಲೈಗಳ ಲಾರ್ವಾಗಳಂತೆ ಅವು! ಮಹಡಿಯ ಮೇಲಿನ ಪಾಟ್‌ಗಳಿಗೆ ಹಾಕಿ ಮಣ್ಣು ಸುರಿದರೂ ದುರ್ವಾಸನೆ. ಅಕ್ಕಪಕ್ಕದ ಮನೆಯವರು ಕೆಲವೊಮ್ಮೆ ಮೆಲ್ಲಗೆ, ಕೆಲವೊಮ್ಮೆ ಕೇಳುವ ಹಾಗೆ ಬೈದುಕೊಂಡದ್ದೂ ಉಂಟು. ಯಾರೂ ನೇರವಾಗಿ ಕೇಳಲಿಲ್ಲ ಸದ್ಯ!

ಇದನ್ನೂ ಓದಿ : ಹೈದ್ರಾಬಾದ್‌: ಮಹಿಳೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಸರ್ಕಲ್‌ ಇನ್‌ಸ್ಪೆಕ್ಟರ್‌‌

ಅಲ್ಲಿಇಲ್ಲಿ ಲೇಖನ ಓದಿ, ಮನೆಯ ಹಾಲ್‌ನಲ್ಲೆ ಇಟ್ಕೋಬಹುದಾದ, ವಾಸನೆ ಬರದ ಕಾಂಪೋಸ್ಟ್ ನಿರ್ವಹಣೆಯ ಬಗ್ಗೆ ತಿಳಿದುಕೊಂಡದ್ದಾಯ್ತು. ಮುಂದಿನ ಹಂತ: ಸಾವಿರಾರು ರೂಪಾಯಿ ಕೊಟ್ಟು ಮೂರು ಪಾಟ್‌ಗಳ ಕಂಬ ತಂದಿದ್ದಾಯ್ತು. ಆದರೆ ಮೂರೇ ಮಂದಿಯ ನಮ್ಮ ಪುಟ್ಟ ಮನೆಯ ಅಡುಗೆಮನೆ ಹಸಿ ಕಸಕ್ಕೆ ಆ ಕಂಬ ವಾರಕ್ಕೂ ಮುಂಚೆ ತುಂಬಿಹೋಗುತ್ತಿತ್ತು! ಮತ್ತದೇ ಪುನರಾವರ್ತನೆ. ಹೈಡ್ರೋಜನ್ ಸಲ್ಫೈಡ್ ವಾಸನೆಯನ್ನು ಬೀರುವ ಮಹಡಿ ಮೇಲಿನ ಪಾಟ್‌ಗಳಲ್ಲಿ ಕಾಂಪೋಸ್ಟ್ ಮಾಡುವ ಕೆಲಸ ಮತ್ತೆ ಶುರು. ಪಾಟ್‌ಗಳು ಸಾಲದೆಂದು ಪ್ಲಾಸ್ಟಿಕ್ ಚೀಲಗಳನ್ನೂ ಕೆಲ ಸಮಯ ಉಪಯೋಗಿಸಲಾಯ್ತು. ಆದರೆ ಕಾಂಪೋಸ್ಟ್ ಚೀಲವನ್ನು ಆಚೀಚೆ ಸರಿಸಿ ಇಡುವಾಗ ಚೀಲ ಹರಿದು, ಅರೆಬರೆ ಕೊಳೆತ ಕಾಂಪೋಸ್ಟ್ ಸುರಿದು, ಅದನ್ನು ಶುಚಿ ಮಾಡುವ ಮತ್ತೊಂದು ಕೆಲಸದ ಹೊರೆ ಆಗುತ್ತಿತ್ತು. ಹಸಿ ಕಸ ಸಂಗ್ರಹಿಸಿದ ಡಬ್ಬದಲ್ಲಿ ಗಾಳಿ ಆಡದೆ ಇದ್ದರೆ ಕಾಂಪೋಸ್ಟ್ ತಯಾರಿಕೆ ಕ್ರಿಯೆ ತುಸು ಇರಿಸುಮುರಿಸು ತರುತ್ತದೆ, ಮನೆಯವರಿಗೂ, ಅಕ್ಕಪಕ್ಕದವರಿಗೂ.
ಕೊನೆಗೂ ಈ ದುರ್ವಾಸನೆಯುಕ್ತ ಕಾಂಪೋಸ್ಟ್ ಮಾಡುವ ವಿಧಾನ ಕೊನೆಯಾಗಿದ್ದು ಏರೋಬಿಕ್ ವಿಧಾನವನ್ನು ಅಳವಡಿಸಿಕೊಂಡಾಗ.

ಹೆಸರಿನಿಂದ ಇದೇನೋ ಭಾರೀ ಕಷ್ಟದ ವಿಧಾನ ಅನಿಸಿರಬಹುದು! ಹಾಗೇನೂ ಇಲ್ಲ. ದೊಡ್ಡದೊಡ್ಡ ಅಂಗಡಿಗಳಲ್ಲಿ, ಹಾಪ್ಕಾಮ್ಸ್ ಅಂಗಡಿಗಳಲ್ಲಿ ನೋಡಿಯೇ ಇರುತ್ತೀರಿ ಪ್ಲಾಸ್ಟಿಕ್ ಕ್ರೇಟ್‌ಗಳನ್ನು. 200-300 ರೂಪಾಯಿಗಳಿಗೆ ದೊರಕುವ ಈ ಕ್ರೇಟ್‌ಗಳಿಗೆ ತಳದಲ್ಲಿ ತೂತು ಮಾಡಿ, ಕಬ್ಬಿಣದ ಸ್ಟಾಂಡ್ ಮೇಲೆ ಅವನ್ನಿಟ್ಟು ಅದರಲ್ಲಿ ಹಸಿ ಕಸವನ್ನು ಸಂಗ್ರಹಿಸಲು ಆರಂಭಿಸಿದೆವು. ಇದು ಪ್ರಾರಂಭಿಸಿ 4-5 ವರ್ಷಗಳಾಯ್ತು. ನಮ್ಮ ಬಿಲ್ಡಿಂಗ್‌ನಲ್ಲಿರುವ ಮೂರು ಮನೆಗಳಿಂದ ಏನಿಲ್ಲವೆಂದರೂ ವಾರಕ್ಕೆ 15-20 ಕೆಜಿ ಹಸಿ ಕಸ ಸಂಗ್ರಹವಾಗುತ್ತದೆ. ಅದನ್ನು ದಿನಾ ದಿನ ಕ್ರೇಟ್‌ನಲ್ಲಿ ತುಂಬಿ, ಅದರ ಮೇಲೆ ಈಗಾಗಲೇ ತಯಾರಾಗಿರುವ ಕಾಂಪೋಸ್ಟ್, ಅಥವಾ
ಮಣ್ಣು, ಜೊತೆಗೆ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಡಿಕಂಪೋಸರ್‌ಅನ್ನು ಬೆರೆಸಿ ಮಳೆ ನೀರು ಬೀಳದ ಹಾಗೆ ಮುಚ್ಚಿಟ್ಟರೆ, ಸುಮಾರು ಒಂದು ತಿಂಗಳಲ್ಲಿ ಹಸಿ ಕಸದ ಶೇ.೧೦ರಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರ ತಯಾರು. ನಮ್ಮ ಟೆರೇಸ್ ಗಾರ್ಡನ್‌ನಲ್ಲಿನ ಗಿಡಗಳಿಗೂ ಆಗಿ ಮಿಗುವಷ್ಟು ಕಾಂಪೋಸ್ಟ್ ತಯಾರಾಗುತ್ತದೆ. ಕಾಂಪೋಸ್ಟ್ ತಯಾರಿಯಲ್ಲಿ ಸ್ವಾಭಾವಿಕವಾಗಿ ಸಹಾಯ ಮಾಡುವ ಇತರೆ ಜೀವಿಗಳೆಂದರೆ ಎರೆಹುಳುಗಳು, ಸೋಲ್ಜರ್ ಹುಳುಗಳು, ಜಿರಳೆ, ಇರುವೆಗಳು. 10 ವರ್ಷಗಳಲ್ಲಿ ಸಂಗ್ರಹಿಸಿದ ಹಸಿ ಕಸ ವರ್ಷಕ್ಕೆ 1000 ಕೆಜಿಯಂತೆ 10 ಟನ್. ತನ್ಮೂಲಕ ತಯಾರಾದ ಸಾವಯವ ಗೊಬ್ಬರ ವರ್ಷಕ್ಕೆ 100 ಕೆಜಿಯಂತೆ 1 ಟನ್.

ಹಸಿಕಸವನ್ನು ಗೊಬ್ಬರವನ್ನಾಗಿಸುವುದು ಸುಲಲಿತವಾದ ಪಯಣವೇನಲ್ಲ. ಅಡುಗೆ ಮನೆಯಲ್ಲಿ ತರಕಾರಿ, ಊಟದ ತ್ಯಾಜ್ಯ ಸಂಗ್ರಹಿಸುವ ಜಾಗದಲ್ಲಿ ಯಾವಾಗಲೂ ಸೊಳ್ಳೆ, ಇರುವೆ ಮುಸುರುತ್ತವೆ. ಕಸವನ್ನು ಮಹಡಿಗೆ ಸಾಗಿಸುವುದು ನಿಧಾನಿಸಿದಷ್ಟು ಹೆಚ್ಚೆಚ್ಚು ದುರ್ಗಂಧ ಆವರಿಸುತ್ತದೆ. ಮಹಡಿಯ ಮೇಲೂ ಕೂಡ ಈ ಹಸಿ ಕಸವನ್ನು ತಿನ್ನಲೆಂದೇ ಹೇರಳವಾಗಿ ಇರುವೆ, ಜಿರಳೆ, ಹಲ್ಲಿ, ಹೆಗ್ಗಣ ಮುಗಿಬೀಳುತ್ತವೆ. ಒಂದು ಸಣ್ಣ ಮಳೆ ಬಿದ್ದರೂ ಸಾಕು ಸೋಲ್ಜರ್ ಹುಳುಗಳು ಮಹಡಿ, ಮೆಟ್ಟಿಲು ಎಲ್ಲೆಲ್ಲೂ ಹರಡಿ ತಮ್ಮ ಇರವನ್ನು ಖಚಿತಪಡಿಸುತ್ತವೆ. ಮಳೆಗಾಲದಲ್ಲಿ ಕಸ ಬೇಗ ಒಣಗುವುದಿಲ್ಲ. ಕ್ರೇಟ್‌ಗಳ ತಳದಿಂದ ಸೋರಿದ ನೀರು ಸರಿಯಾದ ವಾಟರ್ ಪ್ರೂಫಿಂಗ್ ಇಲ್ಲದಲ್ಲಿ ಗೋಡೆಗೆ ಇಳಿದು ಹಾನಿ ಮಾಡಬಹುದು. ಕಸ ಒಣಗಿದ ಮೇಲೆ ಗಾಳಿಗೆ ಹಾರಿ ಮಹಡಿಯೆಲ್ಲ ಹರಡಬಹುದು. ನಿತ್ಯ ಅದನ್ನು ಗುಡಿಸುವುದೂ ಸಹ ದಿನಚರಿಯಲ್ಲಿ
ಸೇರಿಸಿಕೊಳ್ಳಬೇಕಾಗುತ್ತದೆ.

ಇಷ್ಟೆಲ್ಲಾ ಅಡಚಣೆಗಳ ಮಧ್ಯೆಯೂ ಒಂದು ಸುಂದರ ಪರಿಸರ ವ್ಯವಸ್ಥೆ (eco system) ರೂಪುಗೊಳ್ಳುತ್ತದೆ. ಕಾಂಪೋಸ್ಟ್‌ನಲ್ಲಿರುವ ಹುಳುಗಳನ್ನು ತಿನ್ನಲೆಂದೇ ಕಾಗೆ, ಗೊರವಂಕಗಳು ಬರುತ್ತವೆ. ಪುಟಾಣಿ ಸನ್ ಬರ್ಡ್ ಗೂಡು ಕಟ್ಟಲು ಒಣಗಿದ ಕಡ್ಡಿಯ ಹುಡುಕಾಟದಲ್ಲಿ, ಗಿಡಗಳ ಮೇಲಿನೆ ಹುಳು-ಹುಪ್ಪಟೆ ತಿನ್ನಲು ಅಥವಾ
ನೀರಿಗಾಗಿ ದಿನಾಲು ನಿಗದಿತ ಸಮಯದಲ್ಲಿ ಹಾಜರಾಗುತ್ತವೆ. ಟೆರೇಸ್ ಗಾರ್ಡನ್‌ನಲ್ಲಿನ ಹೂವುಗಳನ್ನರಸಿ ಜೇನುನೊಣ, ಬಣ್ಣಬಣ್ಣದ ಚಿಟ್ಟೆಗಳು, ಕೆಲವೊಮ್ಮೆ ಕಣಜಗಳು ಕೂಡ ಆಗಮಿಸುತ್ತವೆ. ನೀರು ತುಂಬಿಟ್ಟ ಪಾತ್ರೆಗಳಲ್ಲಿ ಸ್ನಾನ ಮಾಡಲು ಬುಲ್ಬುಲ್ ಜೋಡಿ ಕೂಡ ಹಾಜರ್. ಬೇರೆ ಪಕ್ಷಿಗಳು ಬಂದರೆ ತುಸು ದೂರವೇ ನಿಂತು ತಮ್ಮ ಸರತಿ ಬರುವವರೆಗೂ ಕಾದು ಯಾವುದೇ ಜಗಳವಿಲ್ಲದೆ ನೀರಿನ ದಾಹ ಪರಿಹರಿಸಿಕೊಂಡು ಮನಸೋ ಇಚ್ಛೆ ಸ್ನಾನ ಮಾಡಿ ತೆರಳುತ್ತವೆ. ಆಗೀಗ ಮಾನವನ ಉಗಮ ಪ್ರಕ್ರಿಯೆಯಲ್ಲಿ ಕೊಂಡಿ ಎನ್ನಲಾಗುವ ಪೂರ್ವಜರು ಕೂಡ ಬರುವುದೂ ಉಂಟು. ಹಣ್ಣುಗಳನ್ನು ತಿಂದು ನಮಗೂ ಸ್ವಲ್ಪ ಉಳಿಸಿಯೇ ಸಾಗುತ್ತವೆ!
ಉದ್ಯಾನ ನಗರಿ ಬೆಂಗಳೂರಿನ ಹಸಿ ತ್ಯಾಜ್ಯಕ್ಕೆ ಕೆಲವು ಟನ್‌ಗಳಷ್ಟು ಹೊರೆ ಇಳಿಸಿದ್ದೇವೆ ಅನ್ನುವುದೇ ಸಮಾಧಾನದ ವಿಷಯ. ಅನುಕೂಲವಿದ್ದ ವಸತಿ ಪ್ರದೇಶಗಳಲ್ಲಿ ನಿಯಮಿತವಾಗಿ ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವ ವ್ಯವಸ್ಥೆ ಸಾರ್ವಜನಿಕವಾಗಿ ಲಭ್ಯವಿದ್ದಲ್ಲಿ ಅಥವಾ ಮಹಡಿಯ ಮೇಲೆ ಜಾಗದ ಅನುಕೂಲವಿರುವವರು ತಾವೇ ಕಾಂಪೋಸ್ಟ್ ಮಾಡುವ ಮನಸ್ಸು ಮಾಡಿ ಸೂಕ್ತ ವ್ಯವಸ್ಥೆ ಮಾಡಿಕೊಂಡರೂ ಸಹ ಹಲವಾರು ಟನ್ ಹಸಿ ಕಸದ ವಿಲೇವಾರಿ ಕಡಿಮೆಯಾಗುತ್ತದೆ. ಪರಿಸರಕ್ಕೂ ಒಳ್ಳೆಯದು, ಪೌರಕಾರ್ಮಿಕರಿಗೂ ತುಸು ಶ್ರಮ ಕಡಿಮೆಯಾಗಬಹುದು.

ರಾಧಿಕಾ ಗಂಗಣ್ಣ
ವೃತ್ತಿಯಲ್ಲಿ ಎಂಜಿನಿಯರ್. ಸಾಹಿತ್ಯ ಆಸಕ್ತಿಯ ಕ್ಷೇತ್ರ.
ಗೆಳೆಯರೊಂದಿಗೆ ಸೇರಿ ಕನ್ನಡ ಪುಸ್ತಕಗಳ ಬಗ್ಗೆ ಪ್ರತಿ ವಾರ
ಕ್ಲಬ್ ಹೌಸ್ ಕಾರ್ಯಕ್ರಮವೊಂದನ್ನು ನಿರ್ವಹಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...