Homeಕರ್ನಾಟಕಮನೆ ಮಟ್ಟದಲ್ಲಿ ಹಸಿ ತ್ಯಾಜ್ಯ ನಿರ್ವಹಣೆ ಪೌರಕಾರ್ಮಿಕರ ಹೊರೆ ತಗ್ಗಿಸಬಹುದು

ಮನೆ ಮಟ್ಟದಲ್ಲಿ ಹಸಿ ತ್ಯಾಜ್ಯ ನಿರ್ವಹಣೆ ಪೌರಕಾರ್ಮಿಕರ ಹೊರೆ ತಗ್ಗಿಸಬಹುದು

- Advertisement -
- Advertisement -

ಆಗತಾನೇ ಅಡುಗೆಮನೆಯಲ್ಲಿದ್ದ ಕಾಂಪೋಸ್ಟ್ ಡಬ್ಬವನ್ನು ಮೂಗು ಮುಚ್ಚಿಕೊಂಡು ಕಂಬಕ್ಕೆ ರವಾನಿಸಿ ಕೂತಿದ್ದೆ; ಅದೇ ಸಮಯಕ್ಕೆ ಫೋನ್ ಬಂತು; ನಿಮ್ಮನೇಲಿ ಹಸಿ ಕಸ ಕಾಂಪೋಸ್ಟ್ ಮಾಡ್ತೀರಲ್ಲ, ಅದರ ಬಗ್ಗೆ ಲೇಖನ ಬರೆದು ಕೊಡಿ ಅಂತ.

ಮೂವ್ವತ್ತು ವರ್ಷಗಳ ಹಿಂದೆ ನಾವು ಈಗಿರುವ ಮನೆಗೆ ಬಂದಾಗ ಅಕ್ಕಪಕ್ಕದ ಸೈಟುಗಳು ಖಾಲಿ ಇದ್ದವು. ತುಸು ದೂರದಲ್ಲಿದ್ದ ಹೊಲಗಳು ಕಣ್ಣಿಗೆ ಬೀಳ್ತಾ ಇದ್ದವು. ನೆರೆಹೊರೆಯಲ್ಲಿ ವಾಸಿಸುತ್ತಿದ್ದ ಅಜ್ಜಅಜ್ಜಿಯರು ತಮ್ಮ ದನಕರುಗಳನ್ನು ನಮ್ಮ ಪಕ್ಕದ ಸೈಟಿನಲ್ಲಿ ಮೇಯಿಸುತ್ತಾ ತಮ್ಮ ಕಷ್ಟಸುಖ ಮಾತಾಡಿಕೊಳ್ತಾ, ಅಮ್ಮನ ಜೊತೆ ಆಗೀಗ ಕುಶಲೋಪರಿ ಮಾತುಕತೆ ಆಡ್ತಾ ಇದ್ದರು. ಅವರೆಕಾಯಿ, ಅಲಸಂದೆಕಾಯಿ ಸಿಪ್ಪೆ, ಹಲಸಿನ ಸಿಪ್ಪೆ, ಮಿಕ್ಕಿದ ಅನ್ನ-ಸಾರು ಇವೆಲ್ಲವೂ ಹಸುಗಳಿಗೆ ಆಹಾರವಾಗ್ತಾ ಇತ್ತು. ಕಾಲಕ್ರಮೇಣ ಸೈಟುಗಳಿದ್ದ ಕಡೆ ಮನೆಗಳೆದ್ದವು. ಅಜ್ಜ-ಅಜ್ಜಿಯರು ಹಸು ಮೇಯಿಸಲು ಶಕ್ತಿಯಿಲ್ಲದೆ ತಾವೇ ಹಾಲು ಕೊಳ್ಳುವ ಸ್ಥಿತಿಗೆ ತಲುಪಿದರು. ತರಕಾರಿ ಸಿಪ್ಪೆ ಕಸದಗಾಡಿಗೆ, ತಂಗಳು ಬಚ್ಚಲ ಕಿಂಡಿಯ ಮೂಲಕ ಚರಂಡಿ ಸೇರಲಾರಂಭಿಸಿತು. ಸುಮಾರು ಹತ್ತು ವರ್ಷಗಳ ಹಿಂದೆ ಇರ್ಬೇಕು, ಕೃಷಿ ವಿಜ್ಞಾನಿಯಾಗಿರುವ ನಮ್ಮಣ್ಣ ತರಕಾರಿ ಸಿಪ್ಪೆಯನ್ನು ಇನ್ಮೇಲೆ ಮಹಡಿ ಮೇಲೆ ಖಾಲಿ ಪಾಟ್‌ಗಳಿಗೆ ಹಾಕಿ ಮಣ್ಣು ತುಂಬಿ ಅಂದ್ರು. ಅದಾದಮೇಲೆ ಮನೆಯ ಎಲ್ಲಾ ಹಸಿ ಕಸವನ್ನು ಹೊರಗೆ ಹಾಕೋದು ಬೇಡ ಅಂದ್ರು. ಏನೋ ದೊಡ್ಡ ಕ್ರಾಂತಿ ಮಾಡುವ ಉತ್ಸಾಹದಲ್ಲಿ ಅಡುಗೆ ಮನೆಯ ಸಿಂಕ್ ಹತ್ತಿರ ೭-೮ ಕೆಜಿ ತುಂಬುವ ಡಬ್ಬ ಇಟ್ಟುಕೊಂಡು ತರಕಾರಿ ಸಿಪ್ಪೆ, ಅಳಿದುಳಿದ ಊಟ ತಿಂಡಿ ಎಲ್ಲಾ ಅದರಲ್ಲಿ ಹಾಕತೊಡಗಿದೆವು. ಮೂರನೇ ದಿವಸಕ್ಕೆ ಡಬ್ಬದ ಮುಚ್ಚಳ ತೆಗೆದರೆ ಸಹಿಸಲಾರದ ವಾಸನೆ, ಜೊತೆಗೆ ಪಿತಗರೆಯುವ ಬಿಳಿ ಹುಳುಗಳು. ಅವಾದರೋ ಜಿಗಿಯುವ ಸಾಮರ್ಥ್ಯವುಳ್ಳವು! ಫ್ರೂಟ್ ಫ್ಲೈಗಳ ಲಾರ್ವಾಗಳಂತೆ ಅವು! ಮಹಡಿಯ ಮೇಲಿನ ಪಾಟ್‌ಗಳಿಗೆ ಹಾಕಿ ಮಣ್ಣು ಸುರಿದರೂ ದುರ್ವಾಸನೆ. ಅಕ್ಕಪಕ್ಕದ ಮನೆಯವರು ಕೆಲವೊಮ್ಮೆ ಮೆಲ್ಲಗೆ, ಕೆಲವೊಮ್ಮೆ ಕೇಳುವ ಹಾಗೆ ಬೈದುಕೊಂಡದ್ದೂ ಉಂಟು. ಯಾರೂ ನೇರವಾಗಿ ಕೇಳಲಿಲ್ಲ ಸದ್ಯ!

ಇದನ್ನೂ ಓದಿ : ಹೈದ್ರಾಬಾದ್‌: ಮಹಿಳೆಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಸರ್ಕಲ್‌ ಇನ್‌ಸ್ಪೆಕ್ಟರ್‌‌

ಅಲ್ಲಿಇಲ್ಲಿ ಲೇಖನ ಓದಿ, ಮನೆಯ ಹಾಲ್‌ನಲ್ಲೆ ಇಟ್ಕೋಬಹುದಾದ, ವಾಸನೆ ಬರದ ಕಾಂಪೋಸ್ಟ್ ನಿರ್ವಹಣೆಯ ಬಗ್ಗೆ ತಿಳಿದುಕೊಂಡದ್ದಾಯ್ತು. ಮುಂದಿನ ಹಂತ: ಸಾವಿರಾರು ರೂಪಾಯಿ ಕೊಟ್ಟು ಮೂರು ಪಾಟ್‌ಗಳ ಕಂಬ ತಂದಿದ್ದಾಯ್ತು. ಆದರೆ ಮೂರೇ ಮಂದಿಯ ನಮ್ಮ ಪುಟ್ಟ ಮನೆಯ ಅಡುಗೆಮನೆ ಹಸಿ ಕಸಕ್ಕೆ ಆ ಕಂಬ ವಾರಕ್ಕೂ ಮುಂಚೆ ತುಂಬಿಹೋಗುತ್ತಿತ್ತು! ಮತ್ತದೇ ಪುನರಾವರ್ತನೆ. ಹೈಡ್ರೋಜನ್ ಸಲ್ಫೈಡ್ ವಾಸನೆಯನ್ನು ಬೀರುವ ಮಹಡಿ ಮೇಲಿನ ಪಾಟ್‌ಗಳಲ್ಲಿ ಕಾಂಪೋಸ್ಟ್ ಮಾಡುವ ಕೆಲಸ ಮತ್ತೆ ಶುರು. ಪಾಟ್‌ಗಳು ಸಾಲದೆಂದು ಪ್ಲಾಸ್ಟಿಕ್ ಚೀಲಗಳನ್ನೂ ಕೆಲ ಸಮಯ ಉಪಯೋಗಿಸಲಾಯ್ತು. ಆದರೆ ಕಾಂಪೋಸ್ಟ್ ಚೀಲವನ್ನು ಆಚೀಚೆ ಸರಿಸಿ ಇಡುವಾಗ ಚೀಲ ಹರಿದು, ಅರೆಬರೆ ಕೊಳೆತ ಕಾಂಪೋಸ್ಟ್ ಸುರಿದು, ಅದನ್ನು ಶುಚಿ ಮಾಡುವ ಮತ್ತೊಂದು ಕೆಲಸದ ಹೊರೆ ಆಗುತ್ತಿತ್ತು. ಹಸಿ ಕಸ ಸಂಗ್ರಹಿಸಿದ ಡಬ್ಬದಲ್ಲಿ ಗಾಳಿ ಆಡದೆ ಇದ್ದರೆ ಕಾಂಪೋಸ್ಟ್ ತಯಾರಿಕೆ ಕ್ರಿಯೆ ತುಸು ಇರಿಸುಮುರಿಸು ತರುತ್ತದೆ, ಮನೆಯವರಿಗೂ, ಅಕ್ಕಪಕ್ಕದವರಿಗೂ.
ಕೊನೆಗೂ ಈ ದುರ್ವಾಸನೆಯುಕ್ತ ಕಾಂಪೋಸ್ಟ್ ಮಾಡುವ ವಿಧಾನ ಕೊನೆಯಾಗಿದ್ದು ಏರೋಬಿಕ್ ವಿಧಾನವನ್ನು ಅಳವಡಿಸಿಕೊಂಡಾಗ.

ಹೆಸರಿನಿಂದ ಇದೇನೋ ಭಾರೀ ಕಷ್ಟದ ವಿಧಾನ ಅನಿಸಿರಬಹುದು! ಹಾಗೇನೂ ಇಲ್ಲ. ದೊಡ್ಡದೊಡ್ಡ ಅಂಗಡಿಗಳಲ್ಲಿ, ಹಾಪ್ಕಾಮ್ಸ್ ಅಂಗಡಿಗಳಲ್ಲಿ ನೋಡಿಯೇ ಇರುತ್ತೀರಿ ಪ್ಲಾಸ್ಟಿಕ್ ಕ್ರೇಟ್‌ಗಳನ್ನು. 200-300 ರೂಪಾಯಿಗಳಿಗೆ ದೊರಕುವ ಈ ಕ್ರೇಟ್‌ಗಳಿಗೆ ತಳದಲ್ಲಿ ತೂತು ಮಾಡಿ, ಕಬ್ಬಿಣದ ಸ್ಟಾಂಡ್ ಮೇಲೆ ಅವನ್ನಿಟ್ಟು ಅದರಲ್ಲಿ ಹಸಿ ಕಸವನ್ನು ಸಂಗ್ರಹಿಸಲು ಆರಂಭಿಸಿದೆವು. ಇದು ಪ್ರಾರಂಭಿಸಿ 4-5 ವರ್ಷಗಳಾಯ್ತು. ನಮ್ಮ ಬಿಲ್ಡಿಂಗ್‌ನಲ್ಲಿರುವ ಮೂರು ಮನೆಗಳಿಂದ ಏನಿಲ್ಲವೆಂದರೂ ವಾರಕ್ಕೆ 15-20 ಕೆಜಿ ಹಸಿ ಕಸ ಸಂಗ್ರಹವಾಗುತ್ತದೆ. ಅದನ್ನು ದಿನಾ ದಿನ ಕ್ರೇಟ್‌ನಲ್ಲಿ ತುಂಬಿ, ಅದರ ಮೇಲೆ ಈಗಾಗಲೇ ತಯಾರಾಗಿರುವ ಕಾಂಪೋಸ್ಟ್, ಅಥವಾ
ಮಣ್ಣು, ಜೊತೆಗೆ ಹೆಸರುಘಟ್ಟದಲ್ಲಿರುವ ಭಾರತೀಯ ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಡಿಕಂಪೋಸರ್‌ಅನ್ನು ಬೆರೆಸಿ ಮಳೆ ನೀರು ಬೀಳದ ಹಾಗೆ ಮುಚ್ಚಿಟ್ಟರೆ, ಸುಮಾರು ಒಂದು ತಿಂಗಳಲ್ಲಿ ಹಸಿ ಕಸದ ಶೇ.೧೦ರಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರ ತಯಾರು. ನಮ್ಮ ಟೆರೇಸ್ ಗಾರ್ಡನ್‌ನಲ್ಲಿನ ಗಿಡಗಳಿಗೂ ಆಗಿ ಮಿಗುವಷ್ಟು ಕಾಂಪೋಸ್ಟ್ ತಯಾರಾಗುತ್ತದೆ. ಕಾಂಪೋಸ್ಟ್ ತಯಾರಿಯಲ್ಲಿ ಸ್ವಾಭಾವಿಕವಾಗಿ ಸಹಾಯ ಮಾಡುವ ಇತರೆ ಜೀವಿಗಳೆಂದರೆ ಎರೆಹುಳುಗಳು, ಸೋಲ್ಜರ್ ಹುಳುಗಳು, ಜಿರಳೆ, ಇರುವೆಗಳು. 10 ವರ್ಷಗಳಲ್ಲಿ ಸಂಗ್ರಹಿಸಿದ ಹಸಿ ಕಸ ವರ್ಷಕ್ಕೆ 1000 ಕೆಜಿಯಂತೆ 10 ಟನ್. ತನ್ಮೂಲಕ ತಯಾರಾದ ಸಾವಯವ ಗೊಬ್ಬರ ವರ್ಷಕ್ಕೆ 100 ಕೆಜಿಯಂತೆ 1 ಟನ್.

ಹಸಿಕಸವನ್ನು ಗೊಬ್ಬರವನ್ನಾಗಿಸುವುದು ಸುಲಲಿತವಾದ ಪಯಣವೇನಲ್ಲ. ಅಡುಗೆ ಮನೆಯಲ್ಲಿ ತರಕಾರಿ, ಊಟದ ತ್ಯಾಜ್ಯ ಸಂಗ್ರಹಿಸುವ ಜಾಗದಲ್ಲಿ ಯಾವಾಗಲೂ ಸೊಳ್ಳೆ, ಇರುವೆ ಮುಸುರುತ್ತವೆ. ಕಸವನ್ನು ಮಹಡಿಗೆ ಸಾಗಿಸುವುದು ನಿಧಾನಿಸಿದಷ್ಟು ಹೆಚ್ಚೆಚ್ಚು ದುರ್ಗಂಧ ಆವರಿಸುತ್ತದೆ. ಮಹಡಿಯ ಮೇಲೂ ಕೂಡ ಈ ಹಸಿ ಕಸವನ್ನು ತಿನ್ನಲೆಂದೇ ಹೇರಳವಾಗಿ ಇರುವೆ, ಜಿರಳೆ, ಹಲ್ಲಿ, ಹೆಗ್ಗಣ ಮುಗಿಬೀಳುತ್ತವೆ. ಒಂದು ಸಣ್ಣ ಮಳೆ ಬಿದ್ದರೂ ಸಾಕು ಸೋಲ್ಜರ್ ಹುಳುಗಳು ಮಹಡಿ, ಮೆಟ್ಟಿಲು ಎಲ್ಲೆಲ್ಲೂ ಹರಡಿ ತಮ್ಮ ಇರವನ್ನು ಖಚಿತಪಡಿಸುತ್ತವೆ. ಮಳೆಗಾಲದಲ್ಲಿ ಕಸ ಬೇಗ ಒಣಗುವುದಿಲ್ಲ. ಕ್ರೇಟ್‌ಗಳ ತಳದಿಂದ ಸೋರಿದ ನೀರು ಸರಿಯಾದ ವಾಟರ್ ಪ್ರೂಫಿಂಗ್ ಇಲ್ಲದಲ್ಲಿ ಗೋಡೆಗೆ ಇಳಿದು ಹಾನಿ ಮಾಡಬಹುದು. ಕಸ ಒಣಗಿದ ಮೇಲೆ ಗಾಳಿಗೆ ಹಾರಿ ಮಹಡಿಯೆಲ್ಲ ಹರಡಬಹುದು. ನಿತ್ಯ ಅದನ್ನು ಗುಡಿಸುವುದೂ ಸಹ ದಿನಚರಿಯಲ್ಲಿ
ಸೇರಿಸಿಕೊಳ್ಳಬೇಕಾಗುತ್ತದೆ.

ಇಷ್ಟೆಲ್ಲಾ ಅಡಚಣೆಗಳ ಮಧ್ಯೆಯೂ ಒಂದು ಸುಂದರ ಪರಿಸರ ವ್ಯವಸ್ಥೆ (eco system) ರೂಪುಗೊಳ್ಳುತ್ತದೆ. ಕಾಂಪೋಸ್ಟ್‌ನಲ್ಲಿರುವ ಹುಳುಗಳನ್ನು ತಿನ್ನಲೆಂದೇ ಕಾಗೆ, ಗೊರವಂಕಗಳು ಬರುತ್ತವೆ. ಪುಟಾಣಿ ಸನ್ ಬರ್ಡ್ ಗೂಡು ಕಟ್ಟಲು ಒಣಗಿದ ಕಡ್ಡಿಯ ಹುಡುಕಾಟದಲ್ಲಿ, ಗಿಡಗಳ ಮೇಲಿನೆ ಹುಳು-ಹುಪ್ಪಟೆ ತಿನ್ನಲು ಅಥವಾ
ನೀರಿಗಾಗಿ ದಿನಾಲು ನಿಗದಿತ ಸಮಯದಲ್ಲಿ ಹಾಜರಾಗುತ್ತವೆ. ಟೆರೇಸ್ ಗಾರ್ಡನ್‌ನಲ್ಲಿನ ಹೂವುಗಳನ್ನರಸಿ ಜೇನುನೊಣ, ಬಣ್ಣಬಣ್ಣದ ಚಿಟ್ಟೆಗಳು, ಕೆಲವೊಮ್ಮೆ ಕಣಜಗಳು ಕೂಡ ಆಗಮಿಸುತ್ತವೆ. ನೀರು ತುಂಬಿಟ್ಟ ಪಾತ್ರೆಗಳಲ್ಲಿ ಸ್ನಾನ ಮಾಡಲು ಬುಲ್ಬುಲ್ ಜೋಡಿ ಕೂಡ ಹಾಜರ್. ಬೇರೆ ಪಕ್ಷಿಗಳು ಬಂದರೆ ತುಸು ದೂರವೇ ನಿಂತು ತಮ್ಮ ಸರತಿ ಬರುವವರೆಗೂ ಕಾದು ಯಾವುದೇ ಜಗಳವಿಲ್ಲದೆ ನೀರಿನ ದಾಹ ಪರಿಹರಿಸಿಕೊಂಡು ಮನಸೋ ಇಚ್ಛೆ ಸ್ನಾನ ಮಾಡಿ ತೆರಳುತ್ತವೆ. ಆಗೀಗ ಮಾನವನ ಉಗಮ ಪ್ರಕ್ರಿಯೆಯಲ್ಲಿ ಕೊಂಡಿ ಎನ್ನಲಾಗುವ ಪೂರ್ವಜರು ಕೂಡ ಬರುವುದೂ ಉಂಟು. ಹಣ್ಣುಗಳನ್ನು ತಿಂದು ನಮಗೂ ಸ್ವಲ್ಪ ಉಳಿಸಿಯೇ ಸಾಗುತ್ತವೆ!
ಉದ್ಯಾನ ನಗರಿ ಬೆಂಗಳೂರಿನ ಹಸಿ ತ್ಯಾಜ್ಯಕ್ಕೆ ಕೆಲವು ಟನ್‌ಗಳಷ್ಟು ಹೊರೆ ಇಳಿಸಿದ್ದೇವೆ ಅನ್ನುವುದೇ ಸಮಾಧಾನದ ವಿಷಯ. ಅನುಕೂಲವಿದ್ದ ವಸತಿ ಪ್ರದೇಶಗಳಲ್ಲಿ ನಿಯಮಿತವಾಗಿ ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ ಮಾಡುವ ವ್ಯವಸ್ಥೆ ಸಾರ್ವಜನಿಕವಾಗಿ ಲಭ್ಯವಿದ್ದಲ್ಲಿ ಅಥವಾ ಮಹಡಿಯ ಮೇಲೆ ಜಾಗದ ಅನುಕೂಲವಿರುವವರು ತಾವೇ ಕಾಂಪೋಸ್ಟ್ ಮಾಡುವ ಮನಸ್ಸು ಮಾಡಿ ಸೂಕ್ತ ವ್ಯವಸ್ಥೆ ಮಾಡಿಕೊಂಡರೂ ಸಹ ಹಲವಾರು ಟನ್ ಹಸಿ ಕಸದ ವಿಲೇವಾರಿ ಕಡಿಮೆಯಾಗುತ್ತದೆ. ಪರಿಸರಕ್ಕೂ ಒಳ್ಳೆಯದು, ಪೌರಕಾರ್ಮಿಕರಿಗೂ ತುಸು ಶ್ರಮ ಕಡಿಮೆಯಾಗಬಹುದು.

ರಾಧಿಕಾ ಗಂಗಣ್ಣ
ವೃತ್ತಿಯಲ್ಲಿ ಎಂಜಿನಿಯರ್. ಸಾಹಿತ್ಯ ಆಸಕ್ತಿಯ ಕ್ಷೇತ್ರ.
ಗೆಳೆಯರೊಂದಿಗೆ ಸೇರಿ ಕನ್ನಡ ಪುಸ್ತಕಗಳ ಬಗ್ಗೆ ಪ್ರತಿ ವಾರ
ಕ್ಲಬ್ ಹೌಸ್ ಕಾರ್ಯಕ್ರಮವೊಂದನ್ನು ನಿರ್ವಹಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....