Homeಚಳವಳಿನಾವು ಭಾರತೀಯರು ವೇದಿಕೆಯಿಂದ ಭಾರತ ಉಳಿಸಿ ಆಂದೋಲನ

ನಾವು ಭಾರತೀಯರು ವೇದಿಕೆಯಿಂದ ಭಾರತ ಉಳಿಸಿ ಆಂದೋಲನ

ಹಲವು ಹಕ್ಕೊತ್ತಾಯಗಳ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಸಹಿ ಸಂಗ್ರಹಕ್ಕೆ ಮುಂದಾಗಿರುವ ವೇದಿಕೆಯು ಒಂದು ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಿದೆ.

- Advertisement -
- Advertisement -

‘ದೇಶದ ಮರುನಿರ್ಮಾಣ – ಸಂವಿಧಾನದ ಅನುಷ್ಠಾನ’ ಘೋಷಣೆಯಡಿಯಲ್ಲಿ ನಾವು ಭಾರತೀಯರು ವೇದಿಕೆಯು ಭಾರತ ಉಳಿಸಿ ಆಂದೋಲನಕ್ಕೆ ಕರೆ ನೀಡಿದೆ. ಪ್ರಸ್ತುತ ಕೊರೊನಾ ಬಿಕ್ಕಟ್ಟು, ಆರ್ಥಿಕ ಸಮಸ್ಯೆ, ಸರ್ಕಾರದ ಏಕಮುಖ ನಿಲುವುಗಳಿಗೆ ಸಂಬಂಧಿಸಿದಂತೆ ತುರ್ತಾಗಿ ಗಮನ ಹರಿಸಬೇಕೆಂದು ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗಿದೆ. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರೋಧಿ ಆಂದೋಲನದಲ್ಲಿ ಸಕ್ರಿಯವಾಗಿದ್ದ ವಿವಿಧ ಸಂಘಟನೆಗಳು ಹಾಗೂ ಸಕ್ರಿಯ ವ್ಯಕ್ತಿಗಳೆಲ್ಲರೂ ಸೇರಿ ಮಾಡಿಕೊಂಡಿರುವ ವೇದಿಕೆಯೇ ‘ನಾವು ಭಾರತೀಯರು’ ಆಗಿದೆ.

ಅದರ ವತಿಯಿಂದ ಈಗಾಗಲೇ ಚೀನಾ ಜೊತೆ ಸಂಘರ್ಷದಲ್ಲಿ ಮೃತರಾದ ಯೋಧರಿಗೆ, ಲಾಕ್‌ಡೌನ್‌ನಿಂದ ಜೀವ ಕಳೆದುಕೊಂಡ ವಲಸೆ ಕಾರ್ಮಿಕರಿಗೆ ಮತ್ತು ಕೊರೊನಾದಿಂದ ತೀರಿಕೊಂಡ ರೋಗಿಗಳಿಗೆ ಶ್ರದ್ಧಾಂಜಲಿ ಅರ್ಪಿಸಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆಗಸ್ಟ್‌ 9ರ ಕ್ವಿಟ್ ಇಂಡಿಯಾ ನೆನಪಿನಲ್ಲಿ ಸೇವ್ ಇಂಡಿಯಾ ಕಾರ್ಯಕ್ರಮವನ್ನು ಆಗಸ್ಟ್‌ 10ರಂದು ನಡೆಸಲಾಗುತ್ತಿದೆ ಎಂದು ಸಂಚಾಲಕರಲ್ಲೊಬ್ಬರಾದ ರಾಜಶೇಖರ್ ಅಕ್ಕಿ ತಿಳಿಸಿದ್ದಾರೆ. ರಾಜ್ಯದ ವಿವಿಧ ರೈತ, ದಲಿತ, ಪ್ರಗತಿಪರ, ಮುಸ್ಲಿಂ ಸಂಘಟನೆಗಳು ವೇದಿಕೆಯ ಭಾಗವಾಗಿದ್ದಾರೆಂದು ಅವರು ನುಡಿದರು.

ಇದೀಗ ಇನ್ನೈದು ದಿನಗಳಲ್ಲಿ ರಾಜ್ಯದ 1 ಲಕ್ಷ ಪ್ರಜ್ಞಾವಂತರ ಸಹಿ ಸಂಗ್ರಹದ ಮೂಲಕ ದೇಶದ ಆರ್ಥಿಕ ಸ್ಥಿತಿ ಸುಧಾರಣೆ ಮತ್ತು ಸಂವಿಧಾನದ ಸರಿ ಅನುಷ್ಟಾನಕ್ಕಾಗಿ ಆಗ್ರಹಿಸಲಾಗುತ್ತಿದೆ ಎಂದು ಸಂಚಾಲಕ ನಯೀಂ ಅವರು ನಾನುಗೌರಿ.ಕಾಂ ಜೊತೆಗೆ ಮಾತನಾಡಿ ತಿಳಿಸಿದರು.

ರಾಷ್ಟ್ರಪತಿಗಳಿಗೆ ಸಲ್ಲಿಸಲಾಗುವ ಮನವಿಯ ಪೂರ್ಣ ಪಾಠ ಕೆಳಗಿನಂತಿದ್ದು, ಸಹಿ ಸಂಗ್ರಹ ಮಾಡಬಯಸುವವರು ಈ ಕೆಳಗಿನ ಲಿಂಕನ್ನು ಬಳಸಿ ಎಂದು ಅವರು ಕೋರಿದ್ದಾರೆ.

ಸಹಿ ಮಾಡಲು ಕೋರಿರುವ ಲಿಂಕ್

 

‘ಇದು ತಮ್ಮ ಕಚೇರಿಗೆ ಪ್ರತಿದಿನವೂ ಬರುವ ಅನೇಕಾನೇಕ ಮನವಿ ಪತ್ರಗಳಂತಹದೇ ಮತ್ತೊಂದು ಮಾಮೂಲಿ ಮನವಿ ಪತ್ರವಲ್ಲ. ಈ ದೇಶದ ಜನಸಾಮಾನ್ಯರು ಬೇರಾವ ಮಾರ್ಗಗಳೂ ಇಲ್ಲದೇ ನೇರವಾಗಿ ತಮ್ಮ ಮುಂದಿಡುತ್ತಿರುವ ಮೊರೆ ಇದು. ನಮ್ಮದೇ ಸರ್ಕಾರವು ಜನತೆಯ ಹಕ್ಕುಗಳನ್ನು ಒಂದೇ ಸಮನೆ ಮೊಟಕುಗೊಳಿಸುತ್ತಿರುವುದಕ್ಕೆ ಕೊನೆ ಹಾಡಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ’ ಎಂದು ವೇದಿಕೆ ತಿಳಿಸಿದೆ.

ಈ ಸಮಸ್ಯೆಗಳನ್ನು ಸರಿಪಡಿಸಲು ಕೂಡಲೇ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ ನಾವು ಪ್ರೀತಿಸುವ, ಗೌರವಿಸುವ ಈ ದೇಶವು ಒಂದು ದೇಶವಾಗಿ ಉಳಿಯುವುದಿಲ್ಲವೆಂಬ ಭಯ ನಮ್ಮೆಲ್ಲರನ್ನೂ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಆರೋಗ್ಯದ ಬಿಕ್ಕಟ್ಟಿನ ನಡುವೆ, ಪುನಶ್ಚೇತನದ ಯಾವುದೇ ಖಚಿತವಾದ ಯೋಜನೆಯಿಲ್ಲದೆ ಹೇರಿದ ದಿಢೀರ್ ಲಾಕ್‌ಡೌನ್‌ನಿಂದಾಗಿ ದೇಶದ ಅರ್ಥ ವ್ಯವಸ್ಥೆ ಸಂಪೂರ್ಣವಾಗಿ ನೆಲಕಚ್ಚಿದೆ. ಮೊದಲೇ ಇದ್ದ 12 ಕೋಟಿ ನಿರುದ್ಯೋಗಿಗಳ ಜೊತೆಗೆ, ಮಹಾ ಪಿಡುಗಿನ ಫಲವಾಗಿ ಮತ್ತೆ 14 ಕೋಟಿ ಉದ್ಯೋಗಗಳು ನಷ್ಟವಾದವು. ದೇಶದ ಶೇ.77 ಭಾಗ ಸಂಪತ್ತು ಕೇವಲ 10% ಸಿರಿವಂತರ ಕೈಯಲ್ಲಿರುವಾಗ, ಬಡಜನರ ಪಾಲಿಗೆ ಬಂದೆರಗಿದ ಈ ಪ್ರಮಾಣದ ಹೆಚ್ಚುವರಿ ಉದ್ಯೋಗ ನಷ್ಟವು ಅಸಮಾನತೆಯನ್ನು ಹಲವಾರು ಪಟ್ಟು ಹೆಚ್ಚಿಸಿದೆ.  ಉದ್ಯೋಗದ ಪ್ರಶ್ನೆಯು ಭೀಕರವಾಗಿ ಕಾಡುತ್ತಿರುವಾಗಲೇ ಸರ್ಕಾರವು ಕೆಲವು ಸೂಕ್ಷ್ಮವಲಯಗಳನ್ನು ಹೊರತುಪಡಿಸಿ, ಮಿಕ್ಕಂತೆ ಎಲ್ಲಾ ಸಾರ್ವಜನಿಕ ಕ್ಷೇತ್ರದ ಕಂಪನಿಗಳನ್ನೂ ಖಾಸಗೀಕರಣಗೊಳಿಸುವ ತೀರ್ಮಾನವನ್ನು ಘೋಷಿಸಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಭಾರೀ ಸುದ್ದಿಯೊಂದಿಗೆ ಘೋಷಿಸಲಾದ, 20 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜು ದೊಡ್ಡ ಮೋಸವಾಗಿತ್ತು. ನಗದು ಚಲಾವಣೆ, ಸಾಲ ಇತ್ಯಾದಿ ಕ್ರಮಗಳನ್ನೂ, ಹೇಗೂ ನೀಡಲಾಗುತ್ತಿದ್ದ ಹಣಕಾಸಿನ ನೆರವನ್ನೂ ಒಟ್ಟು ಸೇರಿಸಿ ಅಂಕೆ-ಸಂಖ್ಯೆಗಳನ್ನು ಜೋಡಿಸಿದ ಪ್ಯಾಕೇಜ್ ಅದು. ಅದರ ಅತೀ ಕಡಿಮೆ ಭಾಗವಾಗಿದ್ದ ನೇರ ನಗದು ವರ್ಗಾವಣೆಯೂ ಪೂರ್ಣವಾಗಿ ಜಾರಿಯಾಗಲಿಲ್ಲ. ಸರ್ಕಾರ ಇನ್ನೊಂದು ಪ್ಯಾಕೇಜು ಪ್ರಕಟಿಸಲಿಕ್ಕಾಗಲಿ, ತೀರಾ ಅತಂತ್ರ ಸ್ಥಿತಿಯಲ್ಲಿರುವವರನ್ನು ರಕ್ಷಿಸುವುದಕ್ಕಾಗಲಿ ಆಸಕ್ತಿ ತೋರಿಸುತ್ತಿಲ್ಲ ಎಂದು ದೂರಲಾಗಿದೆ.

‘ರೈತರ (ಸಬಲೀಕರಣ ಮತ್ತು ರಕ್ಷಣೆ) ಒಡಂಬಡಿಕೆ ಹಾಗೂ ಬೆಲೆ ಖಾತ್ರಿ ಮತ್ತು ಕೃಷಿ ಸೇವೆಗಳ ಸುಗ್ರೀವಾಜ್ಞೆ 2020’ನ್ನೂ ಜಾರಿಗೊಳಿಸಲಾಗಿದೆ. ಅಸಂಖ್ಯಾತ ರೈತರನ್ನು ಜಮೀನಿನಿಂದ ಹೊರಗಟ್ಟುವಂತಹ ಅವಕಾಶಗಳನ್ನು ಒಳಗೊಂಡ ಅಪಾಯಕಾರಿ ಕಾಂಟ್ರಾಕ್ಟ್ ಫಾರ್ಮಿಂಗ್ಗೆ ಇದು ದಾರಿ ಮಾಡಿಕೊಡುತ್ತದೆ. ಇನ್ನು ಕೆಲವೇ ದಿನಗಳಲ್ಲಿ, ನೆಪಮಾತ್ರದ ‘ಚರ್ಚೆ ಮತ್ತು ಸಮಾಲೋಚನೆ’ಯ ಪ್ರಹಸನ ಮುಗಿದೊಡನೆ ಸರ್ಕಾರವು ಜಾರಿಗೊಳಿಸುವುದು ಖಾತ್ರಿಯಾಗಿರುವ ‘ಪರಿಸರ ಪರಿಣಾಮಗಳ ಮೌಲ್ಯಮಾಪನದ ಕರಡು ಆದೇಶ 2020’ ಮುಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಎಲ್ಲ ಪ್ರಯತ್ನಗಳಿಗೆ, ಕಾಳಜಿಗಳಿಗೆ ಮಾರಕ ಹೊಡೆತ ನೀಡಲಿದೆ ಎಂದು ಆತಂಕ ವ್ಯಕ್ತಪಡಿಸಲಾಗಿದೆ.

ಬರಲಿರುವ ‘ಹೊಸ ಶಿಕ್ಷಣ ನೀತಿ’ಯು ಶಿಕ್ಷಣದ ಸುಧಾರಣೆ ಹೆಸರಿನಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಮತ್ತಷ್ಟು ಖಾಸಗೀಕರಣಕ್ಕೆ ಒಳಪಡಿಸಿ ಬಡವರಿಗೆ ಹಗಲುಗನಸು ಮಾಡುವ ಹುನ್ನಾರ ಹೊಂದಿದೆ. ಎಲ್ಲ ಪರಿಸ್ಥಿತಿಯಲ್ಲಿ ಈ ಸಲದ `ಕ್ವಿಟ್ ಇಂಡಿಯಾ’ ದಿನವನ್ನು `ದೇಶದ ಮರುನಿರ್ಮಾಣ – ಸಂವಿಧಾನದ ಅನುಷ್ಠಾನ’ ಎಂಬ ಘೋಷಣೆಯಡಿ `ಭಾರತ ಉಳಿಸಿ’ ದಿನವಾಗಿ ಆಚರಿಸುವ ಮೂಲಕ ನಮ್ಮ ಕಳಕಳಿಗಳನ್ನು ಮತ್ತೊಮ್ಮೆ ದೇಶವ್ಯಾಪಿ ಸಾರ್ವಜನಿಕವಾಗಿ ದಾಖಲಿಸುವುದರ ಹೊರತು ಬೇರೆ ದಾರಿಯಿಲ್ಲವಾಗಿದೆ ಎಂದು ಸವಿಸ್ತಾರ ಪತ್ರದಲ್ಲಿ ಬರೆಯಲಾಗಿದೆ.

ಹಕ್ಕೊತ್ತಾಯಗಳು

1. ಸಕಲರಿಗೂ ಸಮಾನ ವೈದ್ಯಕೀಯ ನೆರವನ್ನು ಒದಗಿಸುವ ಹೊಣೆಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಇಡೀ ಆರೋಗ್ಯ ವ್ಯವಸ್ಥೆಯನ್ನು ತುರ್ತು ಪುನಶ್ಚೇತನಗೊಳಿಸಿ ಸರ್ಕಾರದ ಮೇಲ್ವಿಚಾರಣೆಗೆ ಒಳಪಡಿಸಬೇಕು. ಬಳಸದೇ ಇರುವ ಸುಸ್ಥಿತಿಯಲ್ಲಿರುವ ಸರ್ಕಾರೀ ಕಟ್ಟಡಗಳು ಮತ್ತು ಖಾಸಗಿ ಕಟ್ಟಡಗಳನ್ನು ಆಸ್ಪತ್ರೆಗಳಾಗಿ ಬದಲಿಸಿ ಅಲ್ಲಿ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಮಾಡಬೇಕು. ಸರ್ಕಾರವು ನಿಗದಿ ಮಾಡಿದ ದರಕ್ಕೆ ಚಿಕಿತ್ಸೆ ನೀಡಲಾಗದ ಖಾಸಗಿ ಆಸ್ಪತ್ರೆಗಳಿಗೆ “ನಷ್ಟದಿಂದ ಮುಕ್ತಿ ನೀಡಿ” ಸರ್ಕಾರವೇ ನಡೆಸಬೇಕು.

2. ದೇಶದ ಜನಸಾಮಾನ್ಯರು ಬದುಕನ್ನೇ ಕಳೆದುಕೊಂಡು ತ್ಯಾಗ ಮಾಡುತ್ತಿರುವ ಹೊತ್ತಿನಲ್ಲಿ 1% ಶ್ರೀಮಂತರಿಗೆ ಕೇವಲ 2% ಆದರೂ ಸಂಪತ್ತಿನ ತೆರಿಗೆಯನ್ನು ಹಾಕಿ, ಸಂಪನ್ಮೂಲ ಕ್ರೋಢೀಕರಿಸಬೇಕು.

3. ಸ್ವಿಸ್ ಖಾತೆಗಳಲ್ಲಿ ನಮ್ಮ ಭ್ರಷ್ಟ ರಾಜಕಾರಣಿಗಳು, ಉದ್ದಿಮೆಪತಿಗಳು, ಅಧಿಕಾರಿಗಳು ಅಡಗಿಸಿ ಇಟ್ಟಿರುವ ಹಣವನ್ನು ಮತ್ತು ಬೋಗಸ್ ಕಂಪೆನಿಗಳ ಮೂಲಕ ಕಾರ್ಪೋರೇಟ್ ಕಂಪೆನಿಗಳು “ವಿದೇಶಿ ಹಣಕಾಸು ಬಂಡವಾಳ”ವೆಂಬ ಹೆಸರಿನಲ್ಲಿ ಇಲ್ಲಿಯೇ ಮರುಹೂಡಿಕೆ ಮಾಡುತ್ತಿರುವ ಭಾರತದ್ದೇ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಇವೆಲ್ಲದರಿಂದ ಕನಿಷ್ಠವೆಂದರೆ 30 ಲಕ್ಷ ಕೋಟಿ ರೂಪಾಯಿಗಳಷ್ಟು ಹಣ ಸಂಚಯವಾಗುತ್ತದೆ.

4. ಈ ಹಣವನ್ನು ಬಳಸಿ ಸರ್ಕಾರವು ಬದುಕಿನ ಆಧಾರ ಕಳೆದುಕೊಂಡಿರುವ ಜನಸಮುದಾಯಗಳ ನೆರವಿಗೆ ಈ ಕೂಡಲೇ ಮುಂದಾಗಬೇಕು. ದೇಶದ ಸಮಸ್ತ ಬಡ ಕುಟುಂಬಗಳಿಗೆ ತಿಂಗಳೊಂದಕ್ಕೆ 10 ಸಾವಿರ ರೂ.ಗಳಂತೆ ಮುಂದಿನ ನಾಲ್ಕು ತಿಂಗಳು ನೆರವುಧನ ನೀಡಬೇಕು.

5. ಎಲ್ಲಾ ಕಾರ್ಮಿಕ ಮತ್ತು ನೌಕರರ ಉದ್ಯೋಗ ಮತ್ತು ವೇತನದ ಭದ್ರತೆಗೆ ಕ್ರಮ ಕೈಗೊಳ್ಳಬೇಕು. ಸರ್ಕಾರೀ ವಲಯದ ಎಲ್ಲಾ ಗುತ್ತಿಗೆ, ಹೊರಗುತ್ತಿಗೆ ಹಾಗೂ ಗೌರವಧನ ನೌಕರರನ್ನು ಖಾಯಂಗೊಳಿಸುವ ಮೂಲಕ ಸರ್ಕಾರವು ಮಾದರಿ ಉದ್ಯೋಗದಾತನೆಂದು ತೋರಿಸಿಕೊಡಬೇಕು.

6. ಉದ್ಯೋಗ ಸೃಷ್ಟಿಗೆ ವಿಶೇಷ ಯೋಜನೆಗಳನ್ನು ರೂಪಿಸಬೇಕು. ಉದ್ಯೋಗ ಖಾತ್ರಿಗಾಗಿ ನರೇಗಾ ಯೋಜನೆಯನ್ನು ಬಲಪಡಿಸಬೇಕು ಮತ್ತು ನಗರಕ್ಕೂ ವಿಸ್ತರಿಸಬೇಕು.

7. ಸ್ಥಳೀಯ/ಪ್ರಾದೇಶಿಕ ಸಂಪನ್ಮೂಲ ಆಧರಿಸಿ ಉದ್ಯೋಗಗಳನ್ನು ಸೃಷ್ಟಿಸಿ, ಸ್ಥಳೀಯ/ಪ್ರಾದೇಶಿಕ ಮಟ್ಟದಲ್ಲಿ ಉದ್ಯೋಗ ಕಲ್ಪಿಸುವ ನೀತಿಯನ್ನು ಜಾರಿಗೆ ತರಬೇಕು.

8. ಇಡೀ ಕೃಷಿ ಕ್ಷೇತ್ರದ ಸಂಪೂರ್ಣ ಸಾಲಮನ್ನಾ ಘೋಷಿಸಬೇಕು. ಬೆಳೆ ಖಾತರಿ, ಬೆಲೆ ಖಾತರಿ, ಆದಾಯ ಖಾತರಿ ನೀತಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು.

9. ಯಾವುದೇ ಕಾರಣಕ್ಕೂ ಜನಸಾಮಾನ್ಯರ ಮೇಲೆ ತೆರಿಗೆಯನ್ನು ಹೆಚ್ಚಿಸಬಾರದು. ಮೊದಲನೆಯ ಕ್ರಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಈಗಿರುವುದಕ್ಕಿಂತ ಅರ್ಧದಷ್ಟು ಇಳಿಸುವುದು ನ್ಯಾಯಯುತವಾದುದು.

10. ಸರ್ಕಾರಿ ಮತ್ತು ಖಾಸಗೀ ಶಾಲೆ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ಬಡ ವಿದ್ಯಾರ್ಥಿಗಳ ಶುಲ್ಕವನ್ನು ಸರ್ಕಾರವೇ ಭರಿಸಬೇಕು. ಖಾಸಗೀ ಶಾಲೆಗಳಿಗೆ ಕನಿಷ್ಠ ದರ ನಿಗದಿ ಮಾಡಿ ಸರ್ಕಾರವೇ ತುಂಬಿಕೊಡಬೇಕು.

ಆಗ್ರಹಗಳು

1 ಸಂವಿಧಾನ ನೀಡಿರುವ ಜನತೆಯ ಪ್ರತಿಭಟಿಸುವ ಹಕ್ಕನ್ನು ಸರ್ಕಾರ ಗೌರವಿಸಬೇಕು. ಕೊರೋನಾ ನೆಪದಲ್ಲಿ ಸಂವಿಧಾನಬಾಹಿರವಾಗಿ ಹಾಕಲಾಗಿರುವ 144ನೇ ಸೆಕ್ಷನ್‌ಅನ್ನು ತೆಗೆಯಬೇಕು. ತಮ್ಮ ಹಕ್ಕೊತ್ತಾಯಗಳನ್ನು ದಾಖಲಿಸಲು, ಆಗ್ರಹಿಸಲು ಜನರಿಗೆ ಮುಕ್ತ ಅವಕಾಶ ನೀಡಬೇಕು. ಬಂಧಿತ ಚಿಂತಕರನ್ನು ಹಾಗೂ ಹೋರಾಟಗಾರರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು. ದುರ್ಬಳಕೆಯಾಗುತ್ತಿರುವ ಯುಎಪಿಎ ಕಾಯ್ದೆ ರದ್ದುಗೊಳಿಸಬೇಕು.

2. ಲೋಕಸಭೆ ಮತ್ತು ವಿಧಾನಸಭೆ ಕಾರ್ಯನಿರ್ವಹಿಸದೆ ದೇಶದ ಯಾವುದೇ ಕಾನೂನುಗಳಲ್ಲಿ ಬದಲಾವಣೆಗಳನ್ನು ತರಬಾರದು. ಕಾರ್ಮಿಕರ ಮತ್ತು ರೈತರ ಹಕ್ಕುಗಳನ್ನು ಕಸಿದುಕೊಳ್ಳಲು ತರಲಾಗಿರುವ ಎಲ್ಲಾ ಸುಗ್ರೀವಾಜ್ಞೆಗಳನ್ನೂ ಈ ಕೂಡಲೇ ಹಿಂತೆಗೆದುಕೊಳ್ಳಬೇಕು. ಭೂ ಸುಧಾರಣೆ ಕಾಯಿದೆಗೆ ತಂದಿರುವ ತಿದ್ದುಪಡಿಗಳನ್ನು ಹಿಂಪಡೆಯಬೇಕು ಹಾಗೂ ಕಾರ್ಮಿಕ ಕಾಯಿದೆಗಳಿಗೆ ಮಾಡಿರುವ ತಿದ್ದುಪಡಿಗಳನ್ನೂ ರದ್ದುಗೊಳಿಸಬೇಕು.

3. ಕೋರ್ಟುಗಳ ಪುನರ್ಚಾಲನೆಗೆ ಕ್ರಮ ಕೈಗೊಳ್ಳಬೇಕು. ಜನರ ಆಹಾರ, ಆರೋಗ್ಯ, ಉದ್ಯೋಗ ಹಾಗೂ ಶಿಕ್ಷಣದ ಸಾಂವಿಧಾನಿಕ ಹಕ್ಕನ್ನು ಖಾತ್ರಿಗೊಳಿಸಬೇಕು.

4. ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಮತ್ತು ನಿರ್ದಿಷ್ಟ ಸಮುದಾಯಗಳನ್ನು ಗುರಿ ಮಾಡಿ ಸುಳ್ಳು ಪ್ರಚಾರ ಮಾಡುವ ಎಲ್ಲರನ್ನೂ ನಿಯಂತ್ರಣದಲ್ಲಿಡಲು, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲು ಕಾರ್ಯಪ್ರವೃತ್ತವಾಗಬೇಕು.

5. ಈಗಾಗಲೇ ಸರ್ಕಾರದ ಹಸ್ತಕ್ಷೇಪದಿಂದ ಅರೆಜೀವವಾಗಿ ನಿಸ್ತೇಜಗೊಂಡಿರುವ ಸ್ವಾಯತ್ತ ಸಂಸ್ಥೆಗಳ ಸ್ವಾಯತ್ತತೆಯನ್ನು ಉಳಿಸಿ ಬೆಳೆಸಬೇಕು. ರಾಜ್ಯಗಳ ಅಧಿಕಾರವನ್ನು ಮೊಟಕುಗೊಳಿಸಿರುವ ಎಲ್ಲಾ ಕ್ರಮಗಳನ್ನು ಹಿಂತೆಗೆದುಕೊಂಡು, ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅಧಿಕಾರವನ್ನು, ಅನುದಾನವನ್ನು ಖಾತರಿಗೊಳಿಸಬೇಕು. ಏಕೆಂದರೆ ರಾಜ್ಯಗಳ ಮತ್ತು ಚುನಾವಣಾ ಆಯೋಗ, ಸುಪ್ರೀಂಕೋರ್ಟು, ಮಿಲಿಟರಿ, ಪೊಲೀಸು, ಸಿಬಿಐ ಥರದ ಸ್ವಾಯತ್ತ ಸಂಸ್ಥೆಗಳ ಸ್ವಾಯತ್ತತೆ ಉಳಿಯದಿದ್ದರೆ ಭಾರತದ ಪ್ರಜಾಪ್ರಭುತ್ವವೇ ಉಳಿಯುವುದಿಲ್ಲ.


ಇದನ್ನೂ ಓದಿ: ಮೋದಿ ಭಾರತ ಯುವಜನರಿಗೆ ಉದ್ಯೋಗ ಕೊಡಲು ಸಾಧ್ಯವಿಲ್ಲ: ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಂಯಮ ಮುಗಿದಿದೆ’: ಟ್ರಂಪ್ ಬೆದರಿಕೆಗೆ ಜಗ್ಗದ ಇರಾನ್; ಪ್ರದೇಶವನ್ನು ಮೀರಿ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಕೆ ನೀಡಿದ ಐಆರ್‌ಜಿಸಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನಿಗೆ ನೀಡಿದ್ದ ಗಡುವು ಕೆಲವೇ ಗಂಟೆಗಳು ಬಾಕಿ ಇರುವಾಗ, ಟ್ರಂಪ್ ಬೆದರಿಕೆಯನ್ನು ಧಿಕ್ಕರಿಸಿದ ಇರಾನ್ "ಸಂಯಮ ಮುಗಿದಿದೆ" ಎಂದು ಹೇಳಿದೆ ಮತ್ತು ಅದು ಈಗ ಈ ಪ್ರದೇಶದಲ್ಲಿನ...

ಒಡಿಶಾ| ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣ; ಬುಡಕಟ್ಟು ಜನಾಂಗ – ಪೊಲೀಸರ ನಡುವೆ ಘರ್ಷಣೆ

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಸಿಜಿಮಾಲಿ ಬಾಕ್ಸೈಟ್ ಗಣಿಗೆ ರಸ್ತೆ ನಿರ್ಮಾಣದ ಬಗ್ಗೆ ಮಂಗಳವಾರ (ಏಪ್ರಿಲ್ 7) ಸ್ಥಳೀಯ ಬುಡಕಟ್ಟು ಜನಾಂಗದವರೊಂದಿಗಿನ ಘರ್ಷಣೆಯಲ್ಲಿ 40 ಭದ್ರತಾ ಸಿಬ್ಬಂದಿ ಸೇರಿದಂತೆ ಸುಮಾರು 50 ಜನರು ಗಾಯಗೊಂಡಿದ್ದಾರೆ. ಜಿಲ್ಲೆಯ...

ಮಹಿಳೆಯರ ಶಬರಿಮಲೆ ಪ್ರವೇಶಕ್ಕೆ ಅನುಮತಿಸಿದ್ದ ತೀರ್ಪು ತಪ್ಪು : 9 ನ್ಯಾಯಾಧೀಶರ ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಕೇಂದ್ರ ಸರ್ಕಾರ ಹೇಳಿಕೆ-ವರದಿ

ಶಬರಿಮಲೆ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಎಲ್ಲಾ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನ ಪ್ರವೇಶಿಸಲು ಅನುಮತಿ ನೀಡಿದ 2018ರ ತೀರ್ಪು ತಪ್ಪಾಗಿದೆ ಮತ್ತು ಅದನ್ನು ತಪ್ಪು ಕಾನೂನು ಎಂದು ಘೋಷಿಸಲು ಅರ್ಹವಾಗಿದೆ ಎಂಬುವುದಾಗಿ ಕೇಂದ್ರ...

ಕೇರಳದಲ್ಲಿ ಬಿಜೆಪಿ ಅಭ್ಯರ್ಥಿಯಿಂದ ‘ಲವ್ ಜಿಹಾದ್’ ಹೇಳಿಕೆ; ಜಿಲ್ಲಾಧಿಕಾರಿಯಿಂದ ವರದಿ ಕೇಳಿದ ಚುನಾವಣಾ ಆಯೋಗ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಯುನೈಟೆಡ್ ಪ್ರಜಾಸತ್ತಾತ್ಮಕ ರಂಗದ ಗೆಲುವು ರಾಜ್ಯದಲ್ಲಿ "ಲವ್ ಜಿಹಾದ್" ಘಟನೆಗಳಿಗೆ ಕಾರಣವಾಗುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಪಿ ಕೆ ಕೃಷ್ಣದಾಸ್ ನೀಡಿದ ಹೇಳಿಕೆಯ...

ಮಣಿಪುರ: ಇಬ್ಬರು ಮಕ್ಕಳ ಹತ್ಯೆ ಖಂಡಿಸಿ ಇಂಫಾಲ್ ಕಣಿವೆಯಲ್ಲಿ ಪ್ರತಿಭಟನೆ; 5 ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

ಮಣಿಪುರ: ಕಣಿವೆಯ ಐದು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಬ್ರಾಡ್‌ಬ್ಯಾಂಡ್, ವಿಎಸ್‌ಎಟಿಗಳು ಮತ್ತು ವಿಪಿಎನ್ ಸೇರಿದಂತೆ ಇಂಟರ್ನೆಟ್ ಮತ್ತು ಮೊಬೈಲ್ ಡೇಟಾ ಸೇವೆಗಳನ್ನು ಸ್ಥಗಿತಗೊಳಿಸಲು ಮಣಿಪುರ ಸರ್ಕಾರ ಮಂಗಳವಾರ ಆದೇಶಿಸಿದೆ. ಗೃಹ ಇಲಾಖೆಯ ಅಧಿಕೃತ...

ಶ್ರೀನಗರದಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐವರ ಬಂಧನ; ಅಂತರರಾಜ್ಯ ಎಲ್‌ಇಟಿ ಮಾಡ್ಯೂಲ್ ಪತ್ತೆ 

ಶ್ರೀನಗರ: ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಶ್ರೀನಗರದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ಅಂತರರಾಜ್ಯ ಮಾಡ್ಯೂಲ್ ಅನ್ನು ಭೇದಿಸಿದ್ದು, ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರು ಸೇರಿದಂತೆ ಐದು...

ಟರ್ಕಿಯ ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ ಬಳಿ ಗುಂಡಿನ ದಾಳಿ: ಮೂವರು ಸಾವು

ಇಸ್ತಾನ್‌ಬುಲ್‌ನಲ್ಲಿರುವ ಇಸ್ರೇಲಿ ಕಾನ್ಸುಲೇಟ್ ಕಟ್ಟಡದ ಬಳಿ ಮಂಗಳವಾರ ನಡೆದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ, ಅಧಿಕಾರಿಗಳು ಆ ಪ್ರದೇಶವನ್ನು...

ತೆಲಂಗಾಣ ಸಿಎಂ ರೆಡ್ಡಿ ವಿರುದ್ಧ ಪಿಣರಾಯಿ ವಿಜಯನ್ ವಾಗ್ದಾಳಿ; ತೀವ್ರ ಸ್ವರೂಪ ಪಡೆದುಕೊಂಡ ವಾಕ್ಸಮರ

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿರುದ್ಧ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ (ಏ.7) ವಾಗ್ದಾಳಿ ನಡೆಸಿದ್ದಾರೆ. ಇಬ್ಬರು ನಾಯಕರ ನಡುವಿನ ಮಾತಿನ ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಣ್ಣೂರಿನಲ್ಲಿ ನಡೆದ ಪತ್ರಿಕಾ ಸಂವಾದ...

ಹಿಮಂತ ಬಿಸ್ವಾ ಶರ್ಮಾ ಪತ್ನಿಯ ವಿರುದ್ಧ ‘ಹಲವು ಪಾಸ್‌ಪೋರ್ಟ್‌’ ಹೊಂದಿರುವ ಆರೋಪ : ಪವನ್ ಖೇರಾ ಮನೆಯಲ್ಲಿ ಶೋಧ ನಡೆಸಿದ ಅಸ್ಸಾಂ ಪೊಲೀಸರು

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ಅವರು ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಅಸ್ಸಾಂ ಪೊಲೀಸರು ದೆಹಲಿಯಲ್ಲಿರುವ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರ ಮನೆಯಲ್ಲಿ ಶೋಧ...

ಮಮತಾ ಬ್ಯಾನರ್ಜಿ ಅವರ ಟಿಎಂಸಿ ಕೇಂದ್ರದ ಹಣವನ್ನು ಪಕ್ಷದ ಚಟುವಟಿಕೆಗಳಿಗೆ ಬಳಸಿಕೊಂಡಿದೆ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮಂಗಳವಾರ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಕೇಂದ್ರ ನಿಧಿಯ ದುರುಪಯೋಗ ಮತ್ತು ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ತೀವ್ರ ಕುಸಿತವಾಗಿದೆ ಎಂದು...