Homeಕರ್ನಾಟಕಭವ್ಯ ನರಸಿಂಹಮೂರ್ತಿ ಎಂಬ ದಿಟ್ಟ ಹುಡುಗಿಯ ಪ್ರಶ್ನೆಗಳಿಗೆ ಮೋದಿ-ಶಾ ಬಳಿ ಉತ್ತರವಿವೆಯೇ?

ಭವ್ಯ ನರಸಿಂಹಮೂರ್ತಿ ಎಂಬ ದಿಟ್ಟ ಹುಡುಗಿಯ ಪ್ರಶ್ನೆಗಳಿಗೆ ಮೋದಿ-ಶಾ ಬಳಿ ಉತ್ತರವಿವೆಯೇ?

ಸಂವಿಧಾನಕ್ಕೆ ಅಪಾಯ ಬಂದಿರುವ ಸಮಯದಲ್ಲಿ ಅದನ್ನು ಸಂರಕ್ಷಿಸುವುದು ನಮ್ಮ ನೈತಿಕ ಹೊಣೆಯಲ್ಲವೆ? ಅದಕ್ಕಾಗಿ ನಾನು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸುತ್ತೇನೆ..

- Advertisement -
- Advertisement -

ಅಂದು ಡಿಸೆಂಬರ್‌ 19. CAA, NRC ವಿರುದ್ಧ ಕರ್ನಾಟಕದಲ್ಲಿ, ಅದರಲ್ಲಿಯೂ ಬೆಂಗಳೂರಿನಲ್ಲಿ ಪ್ರತಿಭಟಿಸಲು ಲಕ್ಷಾಂತರ ಜನ ಸಜ್ಜುಗೊಂಡಿದ್ದರು. ಗುಪ್ತಚರ ಇಲಾಖೆಯ ಮೂಲಕ ಮಾಹಿತಿ ಪಡೆದ ಬಿಜೆಪಿ ಸರ್ಕಾರ ಅದರ ಹಿಂದಿನ ರಾತ್ರಿಯೇ ಹಲವು ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಿತು. ಬೆಂಗಳೂರು ಕಮಿಷನರ್‌ ಭಾಸ್ಕರ್‌ ರಾವ್‌ ಯಾರೂ ಪ್ರತಿಭಟನೆ ನಡೆಸುವಂತಿಲ್ಲ, ಆದೇಶ ಉಲ್ಲಂಘಿಸಿದರೆ ಜೈಲು ಗ್ಯಾರಂಟಿ ಎಂದು ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದರು…

ಇಂತಹ ಸಂದರ್ಭದಲ್ಲಿ ದಿಟ್ಟ ಹುಡುಗಿಯೊಬ್ಬಳು ಬೆಂಗಳೂರಿನಲ್ಲಿ ಏಕಾಂಗಿಯಾಗಿ ಗಾಂಧಿ ಫೋಟೊ ಇದ್ದ ಪೋಸ್ಟರ್‌ ಹಿಡಿದು CAA, NRC ವಿರುದ್ಧ ಪ್ರತಿಭಟನೆಗಿಳಿದಳು. ಪೊಲೀಸರಿಗೆ ಹೆದರದೆ ನೀವು ನನ್ನನ್ನು ಬಂಧಿಸುವಂತಿಲ್ಲ ಎಂದು ತಾಕೀತು ಮಾಡಿದ್ದಲ್ಲದೇ ಅಲ್ಲಿ ಆಕೆ ಇಂಗ್ಲಿಷ್‌ನಲ್ಲಿ ಮಾಡಿದ 3 ನಿಮಿಷಗಳ ಭಾಷಣ ದೇಶಾದ್ಯಂತ ವೈರಲ್‌ ಆಗಿದೆ. ತದನಂತರ ಎಂ.ಎಸ್‌ ಗೋಳ್ವಾಲ್ಕರ್‌, ಹಿಟ್ಲರ್‌ ಕುರಿತಂತೆ ಆಕೆ ಮಾಡಿದ ಇನ್ನೊಂದು ಭಾಷಣ ಕೂಡ ಮತ್ತೆ ವೈರಲ್‌ ಆಗಿದೆ. ಬಹಳ ಸ್ಪಷ್ಟ ಮಾತುಗಳಲ್ಲಿ ಸರ್ಕಾರದ ಪೌರತ್ವ ಕಾಯ್ದೆಯ ಹುನ್ನಾರಗಳನ್ನು ಬಯಲು ಮಾಡಿದ ಆಕೆ ಯಾರು, ಏನು ಎಂಬುದನ್ನು ತಿಳಿಯುವ ಮೊದಲ ಆಕೆಯ ಮೊದಲ ಮೂರು ನಿಮಿಷದ ಭಾಷಣ ಓದಿಬಿಡಿ.

“ನಾನು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧವಿದ್ದೇನೆ. ಈ ಕಾಯ್ದೆಯನ್ನು ಬಳಸಿಕೊಂಡು ಅಮಿತ್‌ ಶಾ ಮತ್ತು ನರೇಂದ್ರ ಮೋದಿಯವರು ಕೋಮುವಾದವನ್ನು ಕಾನೂನುಬದ್ದ, ಸಹಜ ಮತ್ತು ನೈಸರ್ಗಿಕಗೊಳಿಸಲು ಹೊರಟಿದ್ದಾರೆ. ಎಂ.ಎಸ್‌ ಗೋಳ್ವಾಲ್ಕರ್‌ ತನ್ನ ಪುಸ್ತಕವೊಂದರಲ್ಲಿ 60 ಲಕ್ಷ ಯಹೂದಿಗಳನ್ನು ಕೊಂದುದ್ದಕ್ಕಾಗಿ ನಾಝಿಗಳನ್ನು ಅಭಿನಂದಿಸಿದ್ದಾರೆ. ಗೋಳ್ವಾಲ್ಕರ್‌‌ರವರಿಂದ ಭಾರತೀಯರು ಕಲಿಯಬೇಕು. ಹಿಂದೂತ್ವವನ್ನು ಅನುಸರಿಸದವರಿಗೆ ಒತ್ತಾಯ ಮಾಡಿಯಾದರೂ ಸರಿಯೇ ಹಿಂದೂತ್ವವನ್ನುಒಪ್ಪಿಕೊಳ್ಳುವಂತೆ ಮಾಡಬೇಕು ಎಂದು ಬರೆದಿದ್ದಾರೆ. ಅದನ್ನೆ ಅಮಿತ್‌ ಶಾ ಅನುಸರಿಸಲು ಹೊರಟಿದ್ದಾರೆ.”

ಆದರೆ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಅಮಿತ್‌ ಶಾ ದೇಶದ ಜನರ ಸೇವೆ ಮಾಡಲು ಬಂದಿರುವವರೆ ಹೊರತು ಡಿಕ್ಟೇಟ್‌ ಮಾಡಲು ಅಲ್ಲ. ನಮ್ಮ ಭವಿಷ್ಯಕ್ಕಾಗಿ ನಾವೆಲ್ಲರೂ ಇಂದು ಬೀದಿಗಿಳಿಯಬೇಕಾಗಿದೆ. ಈ ರೀತಿಯ ಕಾಯ್ದೆಗಳನ್ನು ತರುವ ಮೂಲಕ ಅವರು ಆರ್ಥಿಕ ಕುಸಿತವನ್ನು, ನಿರುದ್ಯೋಗದಂತಹ ನೈಜ ಸಮಸ್ಯೆಗಳಿಂದ ನಮ್ಮನ್ನು ದಿಕ್ಕುತಪ್ಪಿಸುತ್ತಿದ್ದಾರೆ. ನಾವು ಭಾರತೀಯರು, ನಮ್ಮ ದೇಶಕ್ಕೆ ಗೌರವವಿದೆ. ನಮ್ಮದು ಜಾತ್ಯಾತೀತ ರಾಷ್ಟ್ರ. ನನಗೆ ಎಲ್ಲಾ ಧರ್ಮದ ಸ್ನೇಹಿತರಿದ್ದಾರೆ. ನನ್ನ ದೇಶದ ಈ ಉದಾತ್ತ ಮೌಲ್ಯಗಳನ್ನು ಉಳಿಸಿಕೊಳ್ಳಲು ನಾನೊಬ್ಬಳೆ ಆದರೂ ಪರವಾಗಿಲ್ಲ ನಾನು ನಿಲ್ಲುತ್ತೇನೆ. ನನ್ನನ್ನು ಬಂಧಿಸಿದರೂ ಸಹ. ಇಂದು ಬೆಳಿಗ್ಗೆ ರಾಮಚಂದ್ರ ಗುಹಾರಂತ ಮಹಾನ್‌ ಲೇಖಕರನ್ನೆ ಅರೆಸ್ಟ್‌ ಮಾಡಿದ್ದಾರೆ ಅಂದರೆ ಇನ್ನು ನಮ್ಮದೇನು? ಅವರ ಜೊತೆ ನಾವು ನಿಲ್ಲುತ್ತೇವೆ. ಭಾರತದ ಜೊತೆ ನಾವು ನಿಲ್ಲುತ್ತೇವೆ.

ಸೆಕ್ಷನ್‌ 144 ಬ್ರಿಟೀಷ್‌ ಕಾನೂನು. ನಮ್ಮನ್ನು ತಡೆಯಲು ಅಮಿತ್‌ ಶಾ, ನರೇಂದ್ರ ಮೋದಿಯಿಂದ ತಡೆಯಲು ಸಾಧ್ಯವಿಲ್ಲ. ನಾವು ಇಬ್ಬರು ಇದ್ದೇವೆ. ನೀವು ನಮ್ಮನ್ನು ಬಂಧಿಸಲು ಸಾಧ್ಯವಿಲ್ಲ. ಪೊಲೀಸರೆ ನಿಮಗೂ ಮಕ್ಕಳಿದ್ದಾರೆ. ನರೇಂದ್ರ ಮೋದಿ ಸರ್ಕಾರ ಮಕ್ಕಳ ಶಿಕ್ಷಣದಿಂದ 3000 ಕೋಟಿ ರೂಗಳನ್ನು ಕಡಿತ ಮಾಡಿದೆ. ಇದರ ಬಗ್ಗೆ ದನಿಯೆತ್ತಬೇಕೋ ಇಲ್ಲವೋ?…

ಇವಿಷ್ಟು ಆಕೆಯ ಸ್ಪಷ್ಟ ನುಡಿಗಳು.. ಆಕೆಯ ಹೆಸರು ಭವ್ಯ ನರಸಿಂಹ ಮೂರ್ತಿ. ಯುಪಿಎಸ್ಸಿ ಪರೀಕ್ಷೆ ಮೇಲೆ ಕಣ್ಣಿಟ್ಟಿದ್ದ ಇವರು ಬೆಂಗಳೂರಿನ ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಮುಗಿಸಿ ’ಸಾರ್ವಜನಿಕ ಆಡಳಿತ’ ವಿಷಯದಲ್ಲಿ ಅಮೆರಿಕದ ಕೊಲಂಬಿಯಾ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ನೂರು ವರ್ಷದ ಹಿಂದೆ ಅಂಬೇಡ್ಕರ್‌ರವರು ಮತ್ತು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಮಾ ಕೂಡ ಅದೇ ವಿವಿಯಲ್ಲಿ ಓದಿದ್ದೇ ನಾನು ಆ ವಿ.ವಿಯನ್ನು ಆಯ್ದುಕೊಳ್ಳಲು ಕಾರಣ ಎನ್ನುವುದು ಅವರ ಅಭಿಪ್ರಾಯ. ತದನಂತರ ವಿಶ್ವಸಂಸ್ಥೆಯಲ್ಲಿ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಎಲ್ಲಾ ದೇಶಗಳು ಮಾಡಿರುವ ಕೆಲಸವನ್ನು ಕ್ರೋಢಿಕರಿಸುವ ’ಗ್ಲೋಬಲ್‌ ಡಾಟಾಬೇಸ್‌’ ರೂಪಿಸುವಲ್ಲಿ ಅವರು ಕೆಲಸ ಮಾಡಿದ್ದಾರೆ.

ನಂತರ ಅರಬ್‌ ರಾಷ್ಟ್ರಗಳಲ್ಲಿ ’ಲಿಂಗ ಆಧಾರಿತ ಹಿಂಸೆ’ ಅಂದರೆ 15 ಅರಬ್‌ ದೇಶಗಳಲ್ಲಿ ಮಹಿಳೆಯರ ಮೇಲಿನ ಹಿಂಸೆ ತಡೆಗಟ್ಟುವ ಕುರಿತು ಕೆಲಸ ಮಾಡಿದ್ದಾರೆ. ಆನಂತರ ಯುನಿಸೆಫ್‌ ವತಿಯಿಂದ ನೇಪಾಳದಲ್ಲಿ ಅಪೌಷ್ಠಿಕತೆ ಹೋಗಲಾಡಿಸಲು ಕೆಲಸ ಮಾಡಿದ ಅವರು ಕೊನೆಗೂ ತಮ್ಮ ಸ್ವಂತ ಸ್ಥಳ ಕರ್ನಾಟಕಕ್ಕೆ ಮರಳಿದರು. ಇಷ್ಟೆಲ್ಲಾ ಕೆಲಸಗಳ, ಹೋರಾಟದ ಅನುಭವದಿಂದ ಅವರು ತಮ್ಮ ಯುಪಿಎಸ್ಸಿ ಕನಸನ್ನು ಮರತೆಬಿಟ್ಟಿದ್ದರು ಮಾತ್ರವಲ್ಲ ತನ್ನ ಆದ್ಯತೆಯೇನಿದ್ದರು ಜನಪರ ಹೋರಾಟ ಮತ್ತು ಚಳವಳಿಗಳತ್ತ ಎನ್ನುತ್ತಾರೆ…

ನನ್ನ ವಿದ್ಯಾಭ್ಯಾಸದ ಅವಧಿಯಲ್ಲಿ ಓದಿದ ಹಲವು ಪುಸ್ತಕಗಳಲ್ಲಿ ಎಂ.ಎಸ್‌ ಗೋಳ್ವಾಲ್ಕರ್‌ ರವರ ಪುಸ್ತಕ ತುಂಬಾ ಕಾಡಿಸಿತು. ಅದರಂತೆಯೇ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿಯ ಅಂಶಗಳು ಭಾರತವನ್ನು ವಿಭಜಿಸುತ್ತವೆ ಎಂಬುದು ಅರಿವಾಯಿತು. ಅದೇ ಸಮಯದಲ್ಲಿ ಡಿಸೆಂಬರ್‌ 19ರಂದು ಈ ವಿಚಾರದ ಕುರಿತು ಹೋರಾಟ ಮಾಡಿದ ಪ್ರಖ್ಯಾತ ಇತಿಹಾಸಕಾರ ರಾಮಚಂದ್ರಗುಹಾರವರ ಬಂಧನದ ವಿಷಯ ತಿಳಿತು. ಆಗ ನಾನು ಕೂಡ ಹೋರಾಟಕ್ಕೆ ಹೊರಟೆ ಎನ್ನುತ್ತಾರೆ ಭವ್ಯ ನರಸಿಂಹಮೂರ್ತಿ..

ನಾನು ಕೊಲಂಬಿಯಾ ವಿವಿಯಲ್ಲಿ ಓದುವಾಗ ನಮ್ಮ ಲೈಬ್ರರಿಯಲ್ಲಿರುವ ಬಾಬಾಸಾಹೇಬ್‌ ಅಂಬೇಡ್ಕರ್‌ರವರ ಪ್ರತಿಮೆಯನ್ನು ನೋಡುತ್ತಿದ್ದೆ. ಇಷ್ಟೊಂದು ವೈವಿಧ್ಯತೆಯಿರುವ ನಮ್ಮ ಭಾರತವನ್ನು ಈ ಒಬ್ಬ ಮನುಷ್ಯ ಎಷ್ಟು ಚೆನ್ನಾಗಿ ಅರಿತು ಸಂವಿಧಾನ ಬರೆದಿದ್ದಾರೆ. ಇವತ್ತು ಭಾರತ ಪ್ರಪಂಚದಲ್ಲಿ ಉತ್ತಮ ಹೆಸರನ್ನು ಗಳಿಸಲು ಅದಕ್ಕೆ ಮುಖ್ಯ ಕಾರಣ ಅಂಬೇಡ್ಕರ್‌ ಮತ್ತು ಅವರು ರಚಿಸಿದ ಸಂವಿಧಾನ…

ಆ ಸಂವಿಧಾನಕ್ಕೆ ಅಪಾಯ ಬಂದಿರುವ ಸಮಯದಲ್ಲಿ ಅದನ್ನು ಸಂರಕ್ಷಿಸುವುದು ನಮ್ಮ ನೈತಿಕ ಹೊಣೆಯಲ್ಲವೆ? ಅದಕ್ಕಾಗಿ ನಾನು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸುತ್ತೇನೆ ಎಂದು ಅವರು ಖಡಾಖಂಡಿತವಾಗಿ ಹೇಳುತ್ತಾರೆ

ಇನ್ನು ವೈರಲ್‌ ಆದ ಮತ್ತೊಂದು ವಿಡಿಯೋದಲ್ಲಿ ಅವರಾಡಿದ ಮಾತುಗಳ ಅನುವಾದ ಇಲ್ಲಿದೆ ನೋಡಿ.

ಸಿಎಎ ಮೂಲ ಎಲ್ಲಿದೆ? ಅಮಿತ್‌ ಶಾಗೆ ಎಂ.ಎಸ್‌ ಗೋಳ್ವಾಲ್ಕರ್‌ ದೇವರಾಗಿದ್ದಾರೆ. ಅವರು ಬರೆದ ಪುಸ್ತಕದಲ್ಲಿ ಈ ಚಿಂತನೆಯಿದೆ. ಸಿಎಎ ನಮ್ಮನ್ನು ಧರ್ಮದ ಆಧಾರದ ಮೇಲೆ ವಿಭಜಿಸುತ್ತದೆ. ಇದರಿಂದ ಹಿಂದುಗಳು ಸುರಕ್ಷಿತರು ಎಂದು ತಿಳಿದರೆ ಅದು ಸುಳ್ಳು. ಈಗ ಧರ್ಮದ ಆಧಾರದಲ್ಲಿ ಶೋಷಣೆ ನಂತರ ಲಿಂಗದ ಆಧಾರದಲ್ಲಿ, ನಂತರ ಜಾತಿಯ ಆಧಾರದಲ್ಲಿ ಶೋಷಿಸುತ್ತಾರೆ. ಹಿಂದೂ ಧರ್ಮದವರು ಕೂಡ ಇದಕ್ಕೆ ಬಲಿಪಶುಗಳು. ಹಾಗಾಗಿ ಹಿಂದು ಎಂಬ ಕಾರಣಕ್ಕೆ ನಾವು ಸುರಕ್ಷಿತರಲ್ಲ. ಭವಿಷ್ಯದ ಬಗ್ಗೆ, ನಿಮ್ಮ ಮಕ್ಕಳ ಬಗ್ಗೆ ಯೋಚಿಸಿ ಇದನ್ನು ವಿರೋಧಿಸಿ.

ಅವರು ಪಾಕಿಸ್ತಾನದ ಬಗ್ಗೆ ಮಾತಾಡುತ್ತಾರೆ. ನಮ್ಮದು ಜಾತ್ಯಾತೀತ ರಾಷ್ಟ್ರ ಅದಕ್ಕಾಗಿಯೇ ನಾವು ಅಮೆರಿಕದ ಜೊತೆ ಸ್ಪರ್ಧಿಸುತ್ತಿದ್ದೇವೆ, ಪಾಕಿಸ್ತಾನದ ಜೊತೆಗಲ್ಲ. ನಾವು ಆರ್ಥಿಕವಾಗಿ ಸ್ಪರ್ಧಿಸಬೇಕೆ ಹೊರತು ಧರ್ಮದ ಆಧಾರದಲ್ಲಿ ಅಲ್ಲ. ಇದುವರೆಗಿನ ಭಾರತದ ಅಭಿವೃದ್ದಿಯ ಇದೇ ಕಾರಣವಾಗಿದೆ. ಈ ಜನರು ನಮ್ಮ ದೇಶವನ್ನು 50 ವರ್ಷ ಹಿಂದಕ್ಕೆ ಎಳೆದೊಯ್ಯುತ್ತಿದ್ದಾರೆ. ನಾವು ಇಷ್ಟು ಅಭಿವೃದ್ದಿ ಹೊಂದಲು ಬಹಳಷ್ಟು ಜನ ಶ್ರಮಪಟ್ಟಿದ್ದಾರೆ. ನಾನಿಲ್ಲಿ ಒಬ್ಬ ಹುಡುಗಿಯಾಗಿ ನಿಂತು ಮಾತನಾಡುತ್ತಿರುವುದರ ಹಿಂದೆ ಸಾಕಷ್ಟು ಬೆವರು ಹರಿದಿದೆ. ಅದು ಕಳೆದ 50 ವರ್ಷಗಳ ಶ್ರಮವೇ ಹೊರತು ಕೇವಲ ಕಳೆದ 5 ವರ್ಷಗಳಲ್ಲಿ ಆದುದ್ದಲ್ಲ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಊರುಗಳ ಹೆಸರುಗಳನ್ನು ಬದಲಾಯಿಸುವುದರಲ್ಲಿಯೇ ತಮ್ಮ ಸಮಯ ಕಳೆಯುತ್ತಿದ್ದಾರೆ. ನಿನ್ನೆ ಅವರು ಮೀರತ್‌ ನಗರವನ್ನು ನಾಥುರಾಂ ಗೋಡ್ಸೆ ನಗರ ಎಂದು ಬದಲಿಸಲು ಯೋಚಿಸುತ್ತಿದ್ದಾರೆ. ಗೋಡ್ಸೆಯಂತ ಗಾಂಧಿಯವರ ಹಂತಕನ ಹೆಸರಿಡುವುದಕ್ಕೆ ನಾಚಿಕೆಯಾಗುವುದಿಲ್ಲವೇ? ಇದರ ಬದಲು ಉತ್ತರ ಪ್ರದೇಶದ ಮಹಿಳೆಯರ ಬಗ್ಗೆ ಅವರು ಯೋಚಿಸಬೇಕು. ನಿನ್ನೆ ಉತ್ತರ ಪ್ರದೇಶದ ಬಿಜೆಪಿ ಶಾಸಕನಿಂದ ಅತ್ಯಚಾರಕ್ಕೊಳಗಾದ ಸಂತ್ರಸ್ತೆ ದಿಟ್ಟ ಹೋರಾಟ ನಡೆಸಿ ಜಯ ಸಾಧಿಸಿದ್ದಾಳೆ. ತನ್ನ ತಂದೆಯನ್ನು, ಚಿಕ್ಕಮ್ಮನನ್ನು ಕಳೆದುಕೊಂಡರು ಆಕೆ ಹೋರಾಡಿದ್ದಾಳೆ. ಆತನಿಗೆ ಜೀವಾವಧಿ ಶಿಕ್ಷೆ ಘೋಷಣೆಯಾಗಿದೆ. ಇದು ಭಾರತದ ಮಹಿಳೆಯರ ಶಕ್ತಿ. ಈ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ನಮ್ಮನ್ನು ತಡೆಯಲು ಸಾಧ್ಯವಿಲ್ಲ. ಅವರು ಸಿಎಎ ಅನ್ನು ವಾಪಸ್‌ ಪಡೆಯುವವರೆಗೂ ನಾವು ಪ್ರತಿಭಟಿಸುತ್ತೇವೆ. ಅದನ್ನ ವಾಪಸ್‌ ಪಡೆಯುವಂತೆ ಮಾಡುತ್ತೇವೆ. ನಾವು ಇದಕ್ಕಾಗಿ ಮನವಿ ಮಾಡುವುದಿಲ್ಲ ಬದಲಾಗಿ ಆಗ್ರಹಿಸುತ್ತೇವೆ.

ಸದ್ಯಕ್ಕೆ ಕರ್ನಾಟಕ ಕಾಂಗ್ರೆಸ್‌ ಪಕ್ಷದ ಪ್ರಿಯದರ್ಶಿನಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಇವರು ಮಹಿಳೆಯರ ಹಕ್ಕುಗಳ ಕುರಿತು ತೊಡಗಿಸಿಕೊಳ್ಳಲು ಬಯಸುತ್ತಾರೆ. ಆದರೆ ಕೇಂದ್ರ ಸರ್ಕಾರದ ಈ ಕಾಯ್ದೆಗಳು ಹೆಚ್ಚಾಗಿ ಮಹಿಳೆಯರನ್ನೇ ಬಾದಿಸುತ್ತವೆ. ಪೌರತ್ವ ಕಾಯ್ದೆ ಹಿಂದೂ ಮುಸ್ಲಿಂ ಸಮಸ್ಯೆಯಲ್ಲ. ಅದು ಸಂವಿಧಾನ ಪರ ಇರುವವರು ಮತ್ತು ಸಂವಿಧಾನ ವಿರೋಧಿಗಳ ನಡುವಿನ ಹೋರಾಟ. ಎನ್‌ಆರ್‌ಸಿ ಬಡವರು ಮತ್ತು ಶ್ರೀಮಂತರ ನಡುವಿನ ಹೋರಾಟ. ನಮ್ಮ ದೇಶದ ಜಾತ್ಯಾತೀತ ಮೌಲ್ಯಗಳನ್ನು ಉಳಿಸುವಲ್ಲಿ ನಾನು ಸದಾ ತೊಡಗಿಸಿಕೊಳ್ಳಲು ಬಯಸುತ್ತೇನೆ ಎನ್ನುವುದು ಅವರ ಅಭಿಮತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...