Homeಚಳವಳಿರಾಜ್ಯದ ಪಾಲಿನ ಹಣ ಕೊಡದಿದ್ದರೆ ನಾವು ತೆರಿಗೆ ಕಟ್ಟುವುದಿಲ್ಲ: ಕನ್ನಡಿಗರ ಆಕ್ರೋಶ

ರಾಜ್ಯದ ಪಾಲಿನ ಹಣ ಕೊಡದಿದ್ದರೆ ನಾವು ತೆರಿಗೆ ಕಟ್ಟುವುದಿಲ್ಲ: ಕನ್ನಡಿಗರ ಆಕ್ರೋಶ

ಕರ ನಿರಾಕರಣೆ ಎಂದರೆ ನಾವು ಜಿಎಸ್‌ಟಿ ಬಿಲ್ ಇರುವ ಯಾವುದೇ ವಸ್ತುಗಳನ್ನು ಕೊಳ್ಳುವುದಿಲ್ಲ. ನಾವು ರೈತರಿಂದ ನೇರವಾಗಿ ಕೊಳ್ಳುತ್ತೇವೆ. ನೇಕಾರರಿಂದ ನೇಯ್ದ ಬಟ್ಟೆಯನ್ನು ಕೊಂಡುಕೊಳ್ಳುತ್ತೇವೆ.. ಈ ರೀತಿಯಾಗಿ ಎಲ್ಲೆಡೆ ಜಾಗೃತಿ ಮೂಡಿಸುತ್ತೇವೆ.

- Advertisement -
- Advertisement -

ಕನ್ನಡ ನಾಡಿಗೆ ನ್ಯಾಯಸಮ್ಮತವಾಗಿ ಬರಬೇಕಾದ GST ಪರಿಹಾರ, ನೆರೆ ಪರಿಹಾರ, SDRF ಹಾಗೂ NSRF ನಿಧಿ ನೀಡದೇ ಮಲತಾಯಿ ಧೋರಣೆ ತಳೆದಿರುವ ಭಾರತ ಒಕ್ಕೂಟ ಸರ್ಕಾರದ ನಡೆ ಖಂಡಿನೀಯ. ರಾಜ್ಯದ ಪಾಲಿನ GST, ನೆರೆ ಪರಿಹಾರ ಕೊಡಿ, ಇಲ್ಲದಿದ್ದರೆ ನಾವು ತೆರಿಗೆ ಕಟ್ಟುವುದಿಲ್ಲ! ಎಂದು ಕನ್ನಡಿಗರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಇಂದು ಬೆಂಗಳೂರಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಮುಂದೆ ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕನ್ನಡ ರಣಧೀರರ ಪರ ಸಹಭಾಗಿತ್ವದಲ್ಲಿ ‘ಕರ ನಿರಾಕರಣೆ ಚಳವಳಿ’ ಎಂಬ ವಿನೂತನ ವಿಭಿನ್ನ ಸತ್ಯಾಗ್ರಹ ಚಳವಳಿ ಹಮ್ಮಿಕೊಳ್ಳಲಾಗಿದೆ.

ಕರ ನಿರಾಕರಣೆ ಎಂದರೆ ನಾವು ಜಿಎಸ್‌ಟಿ ಬಿಲ್ ಇರುವ ಯಾವುದೇ ವಸ್ತುಗಳನ್ನು ಕೊಳ್ಳುವುದಿಲ್ಲ. ನಾವು ರೈತರಿಂದ ನೇರವಾಗಿ ಕೊಳ್ಳುತ್ತೇವೆ. ನೇಕಾರರಿಂದ ನೇಯ್ದ ಬಟ್ಟೆಯನ್ನು ಕೊಂಡುಕೊಳ್ಳುತ್ತೇವೆ.. ಈ ರೀತಿಯಾಗಿ ಎಲ್ಲೆಡೆ ಜಾಗೃತಿ ಮೂಡಿಸುತ್ತೇವೆ. ಕೊನೆಗೆ ತೆರಿಗೆ ಕಟ್ಟದೇ ಪ್ರತಿರೋಧ ಒಡ್ಡುತ್ತೇವೆ ಎಂದು ಕನ್ನಡ ರಣಧೀರರ ಪಡೆಯ ಚೇತನ್ ಗೌಡ ತಿಳಿಸಿದ್ದಾರೆ.

“ದಕ್ಷಿಣದ ರಾಜ್ಯಗಳ ಮೇಲಿನ ಹಿಂದಿ ಹೇರಿಕೆ ಹಾಗೂ ಭಾಷಾತಾರತಮ್ಯ ನೀತಿಯನ್ನು ಭಾರತದ ಒಕ್ಕೂಟ ಸರ್ಕಾರವು ನಿಲ್ಲಿಸಬೇಕು. ರಾಷ್ಟ್ರೀಯ ಶಿಕ್ಷಣ ನೀತಿ-2020ಯನ್ನು ಕೈಬಿಡಬೇಕು. ಶಿಕ್ಷಣದಲ್ಲಿ ದ್ವಿಭಾಷಾ ನೀತಿ ಮತ್ತು ಪರಿಷ್ಕೃತ ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು. ಅನಿಯಂತ್ರಿತ ವಲಸೆ ನಿಯಂತ್ರಣ ಕಾಯ್ದೆ (ILP) ಜಾರಿಯಾಗಬೇಕು. ಜೊತೆಗೆ ಭೂಸುಧಾರಣಾ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿಗಳನ್ನು ಕೈಬಿಡುವಂತೆ ಕನ್ನಡಿಗರು ಒತ್ತಾಯಿಸಿದ್ದಾರೆ.

“ಕರ್ನಾಟಕ ರಾಜ್ಯವು ಭಾರತದ ಒಕ್ಕೂಟ ಸರ್ಕಾರಕ್ಕೆ  2014-15ರಲ್ಲಿ 60,595 ಕೋಟಿ, 2015-16ರಲ್ಲಿ 72,040ಕೋಟಿ, 2016-17 ರಲ್ಲಿ 85,920 ಕೋಟಿ, 2017-18 ರಲ್ಲಿ 98,460 ಕೋಟಿ ಮತ್ತು 2018-19 ರಲ್ಲಿ 1,19,796 ಕೋಟಿ ರೂಗಳನ್ನು ತೆರಿಗೆಯಾಗಿ ನೀಡಿದೆ. ಆದರೆ ಇಷ್ಟೊಂದು ತೆರಿಗೆ ಕಟ್ಟಿದರು ಭಿಕ್ಷೆ ಬೇಡುವ ಪರಿಸ್ಥಿತಿ ಎದುರಾಗಿದೆ. ನಮ್ಮದೇ ಹಣವನ್ನು ನಮಗೆ ಕೊಡಲು ಹಿಂಜರಿಕೆಯೇಕೆ? ಕಳೆದ ವರ್ಷಗಳಲ್ಲಿ ಸರಾಸರಿ 100 ಪ್ರತಿಶತ ಹೆಚ್ಚಿನ ತೆರಿಗೆಯನ್ನು ನೀಡಿದ್ದೇವೆ. ಇದಕ್ಕೆ ನಮಗೆ ಸಿಕ್ಕ ಉಡುಗೊರೆಯೆಂದರೆ ನಮ್ಮ ಪಾಲಿನ 11,324 ಕೋಟಿ ರೂ ಜಿಎಸ್‌ಟಿ ಪರಿಹಾರ ಹಣ ಕೊಡದೇ ಆರ್‌ಬಿಐನಿಂದ ಸಾಲ ಪಡೆಯಿರಿ ಎಂದು ಹೇಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯ ಲೈವ್ ನೋಡಿ

ಬೆಂಗಳೂರು: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ಕನ್ನಡ ರಣಧೀರ ಪಡೆ ಮತ್ತು ಕನ್ನಡ ಚಳವಳಿ ಕೇಂದ್ರ ಸಮಿತಿ ವತಿಯಿಂದ "ಕರೆ ನಿರಾಕರಣೆ ಸತ್ಯಾಗ್ರಹ"

Posted by Naanu Gauri on Thursday, October 1, 2020

ಇಡೀ ಭಾರತ ಒಕ್ಕೂಟದಲ್ಲಿಯೇ 2ನೇ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ನಮ್ಮದು. ಆದರೆ ನಮ್ಮ ಪಾಲಿನ ಹಣ ಕೇಳಲು ರಾಜ್ಯ ಸರ್ಕಾರ ವಿಫಲವಾಗಿದೆ. ಮುಖ್ಯಮಂತ್ರಿಗಳು ತಾವೇ ಭ್ರಷ್ಟರಾಗಿದ್ದುಕೊಂಡು ಹೈಕಮಾಂಡ್ ಎದುರು ಜೀ ಹುಜೂರ್ ಎನ್ನುತ್ತಿದ್ದಾರೆ. ಇನ್ನು ಇಲ್ಲಿಂದ ಆಯ್ಕೆಯಾದ  ಸಂಸದರು ಯಾವುದಕ್ಕೂ ಪ್ರಯೋಜನವಿಲ್ಲವೆಂದು ಹೋರಾಟಕಾರರು ಆಕ್ರೋಶ ಹೊರಹಾಕಿದ್ದಾರೆ.

ಕರ ನಿರಾಕರಣೆ ಮುಖೇನ ನಮ್ಮ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಪಡೆಯಲು ನಾಡಿನ ಜನತೆ ಮುಂದಾಗಬೇಕು, ಅಧಿಕಾರ ಹಣ ಲಾಲಸೆಗಳಿಗೆ ಕನ್ನಡದ ಅಸ್ಮಿತೆಯನ್ನು ಅಡಮಾನವಿಟ್ಟಿರುವ ನಾಡದ್ರೋಹಿಗಳ ವಿರುದ್ಧ ನಮ್ಮ ಹೋರಾಟ ನಿತ್ಯ ನಿರಂತರವಾಗಿರಬೇಕು. ನಾಡಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವ ಹಾಗೂ ನಾಡಿನ ಸರ್ಕಾರದ ಉದ್ಯಮ, ನೆಲ, ಜಲಗಳನ್ನು ಮಾರಾಟಕ್ಕಿಟ್ಟಿರುವ, ನಮಗೆ ಬರಬೇಕಾದ ಪಾಲನ್ನು ಪಡೆಯಲಾಗದೆ ನಮ್ಮ ಭೂಮಿಯನ್ನು ಮಾರುತ್ತಿರುವ ರಣಹೇಡಿ ಸರ್ಕಾರದ ನಡೆಯನ್ನು ಕನ್ನಡ ಚಳವಳಿ ಕೇಂದ್ರ ಸಮಿತಿ ಹಾಗೂ ಕನ್ನಡ ರಣಧೀರರ ಪಡೆ ಜಂಟಿಯಾಗಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೋರಾಟಗಾರರು ಹೇಳಿದರು.

ಇದೇ ಸಂದರ್ಭದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀ ಗುರುದೇವ್ ನಾರಾಯಣ ಕುಮಾರ್ ಮಾತನಾಡಿ “ನಮ್ಮ ನಾಡಿನ ತೆರಿಗೆ ಪಡೆಯುವ ಭಾರತ ಒಕ್ಕೂಟ ಸರ್ಕಾರ ನಮಗೆ ನೀಡಬೇಕಾದ ನ್ಯಾಯಸಮ್ಮತ ಹಣ ನೀಡದೆ, ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಾಣುತ್ತಿರುವುದು ತೀರಾ ಖಂಡನೀಯ. ನಾಡಿನ ನೆಲ ಸಂಸ್ಕೃತಿಗೆ ಬೆಲೆ ನೀಡದೆ, ಹಿಂದಿ ಹೇರಿಕೆ ಮಾಡುತ್ತಿರುವ ನೀತಿಯನ್ನು ಖಂಡಿಸಿ, ಭಾರತ ಒಕ್ಕೂಟ ಸರ್ಕಾರ ತನ್ನ ಮಲತಾಯಿ ಧೋರಣೆ ಮುಂದುವರಿಸಿದಲ್ಲಿ ಮಗದೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ಕಾರಣವಾಗಲಿದೆ” ಎಂದು ಎಚ್ಚರಿಕೆ ನೀಡಿದರು.


ಇದನ್ನೂ ಓದಿ: ದೋಷಪೂರಿತ ಜಿಎಸ್‌ಟಿ ದೇಶದ ಆರ್ಥಿಕತೆಯನ್ನು ನಾಶಮಾಡಿದೆ: ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಾಬಾ ಬುಡನ್‌ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ ‘ಪ್ರಗತಿಪರ ಸೌಹಾರ್ದ ಸಂಘಟನೆಗಳ’ ಆಗ್ರಹ

ಚಿಕ್ಕಮಗಳೂರಿನ ಬಾಬಾ ಬುಡನ್‌ ಗಿರಿಯಲ್ಲಿ ಉರುಸ್ ನಡೆಸಲು ಅನುಮತಿ ನೀಡುವಂತೆ ಆಗ್ರಹಿಸಿದ ಕರ್ನಾಟಕ ಸಮಸ್ತ ಪ್ರಗತಿಪರ ಸೌಹಾರ್ದ ಸಂಘಟನೆಗಳ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ಆಗ್ರಹಿಸಿದ್ದಾರೆ. ಚಿಕ್ಕಮಗಳೂರಿನ ಬಾಬಾ ಬುಡನ್‌...

ಖಮೇನಿ ನಿಧನಕ್ಕೆ ತಡವಾಗಿ ಸಂತಾಪ ಸೂಚಿಸಿದ ಭಾರತ; ಇರಾನ್‌ ರಾಯಭಾರ ಕಚೇರಿಯಲ್ಲಿನ ಪುಸ್ತಕದಲ್ಲಿ ವಿಕ್ರಮ್ ಮಿಶ್ರಿ ಸಹಿ

ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನಕ್ಕೆ ಭಾರತ ತಡವಾಗಿ ಸಂತಾಪ ಸೂಚಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಗುರುವಾರ ನವದೆಹಲಿಯ ಇರಾನಿನ ರಾಯಭಾರ ಕಚೇರಿಯಲ್ಲಿ ಸಂತಾಪ ಸೂಚಿಸುವ ಪುಸ್ತಕಕ್ಕೆ...

ಉಕ್ರೇನ್, ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ತ್ವರಿತವಾಗಿ ಕೊನೆಗೊಳಿಸಲು ಬೆಂಬಲಿಸುತ್ತೇನೆ: ಫಿನ್ಲೆಂಡ್‌ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಪಶ್ಚಿಮ ಏಷ್ಯಾ ಮತ್ತು ಉಕ್ರೇನ್‌ನಲ್ಲಿನ ಸಂಘರ್ಷಗಳಿಗೆ "ತ್ವರಿತ ಅಂತ್ಯ" ವನ್ನು ತರಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕರೆ ನೀಡಿದ್ದಾರೆ, ಯಾವುದೇ ಸಮಸ್ಯೆಯನ್ನು ಮಿಲಿಟರಿ ಮುಖಾಮುಖಿಯ ಮೂಲಕ ಪರಿಹರಿಸಲು ಸಾಧ್ಯವಿಲ್ಲ ಎಂದು...

ಮಹಾರಾಷ್ಟ್ರ| ಬಣ್ಣ ಎರಚಿದ ಮೊಮ್ಮಗನ ಮೇಲೆ ಬಿಸಿ ನೀರು ಸುರಿದ ಮಹಿಳೆ; ಬಾಲಕನ ಸ್ಥಿತಿ ಗಂಭೀರ

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕೊರಾಡಿ ಪ್ರದೇಶದಲ್ಲಿ ಹೋಲಿ ಆಡುತ್ತಿದ್ದಾಗ ನಾಲ್ಕು ವರ್ಷದ ಮೊಮ್ಮಗ ತನ್ನ ಮೇಲೆ ಬಣ್ಣ ಎರಚಿದ್ದರಿಂದ ಕೋಪಗೊಂಡ ಅಜ್ಜಿ ಮಗುವಿನ ಮೇಲೆ ಕುದಿಯುವ ನೀರನ್ನು ಸುರಿದಿರುವ ವಿಡಿಯೋ ಇದೀಗ ವೈರಲ್...

ಭಾರತದ ಕಾಲ ಬುಡದಲ್ಲಿ ಇರಾನ್ ನೌಕೆ ಮೇಲೆ ಅಮೆರಿಕ ದಾಳಿ : 100ರಷ್ಟು ಸಿಬ್ಬಂದಿ ಸಾವಿಗೀಡಾದರೂ ಮೋದಿ ಸರ್ಕಾರ ಮೌನ!

ಭಾರತದಿಂದ ಕೇವಲ 300 ಕಿಲೋ ಮೀಟರ್ ದೂರದಲ್ಲಿ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ 'ಐಆರ್‌ಐಎಸ್ ದೆನಾ' ಮೇಲೆ ಅಮೆರಿಕ ಜಲಾಂತರ್ಗಾಮಿ ಬುಧವಾರ (ಮಾ.4) ಭೀಕರ ದಾಳಿ ನಡೆಸಿದೆ. ಈ ಘಟನೆಯಲ್ಲಿ ಇರಾನ್‌ ನೌಕೆಯಲ್ಲಿದ್ದ 180 ಸಿಬ್ಬಂದಿಯ...

ಹಿಂದೂ ಮಹಾಸಾಗರದಲ್ಲಿ ಇರಾನ್ ನೌಕೆ ಮೇಲೆ ದಾಳಿ: ‘ರಾಜಿ ಮಾಡಿಕೊಂಡ ಪ್ರಧಾನಿ ಕಾರ್ಯತಂತ್ರದ ಸ್ವಾಯತ್ತತೆ ಬಿಟ್ಟುಕೊಟ್ಟರು: ರಾಹುಲ್ ಟೀಕೆ

ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆ ಐರಿಸ್ ದೇನಾದ ಮೇಲೆ ಅಮೆರಿಕಾ ದಾಳಿ ಮಾಡಿದ ಒಂದು ದಿನದ ನಂತರ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಾಗ್ದಾಳಿ...

ಟ್ರಂಪ್ ಬೆದರಿಕೆಗೆ ಹೆದರದ ಸ್ಪೇನ್ ಪ್ರಧಾನಿ; ಇರಾನ್ ಮೇಲಿನ ದಾಳಿಗೆ ಸೇನಾ ನೆಲೆ ಬಳಸಲು ಅನುಮತಿ ನಿರಾಕರಿಸಿದ ಪೆಡ್ರೊ ಸ್ಯಾಂಚೆಜ್

ಇರಾನ್ ಮೇಲೆ ದಾಳಿ ಮಾಡಲು ಅಮೆರಿಕದ ವಿಮಾನಗಳು ತನ್ನ ನೆಲೆಗಳನ್ನು ಬಳಸಲು ಅನುಮತಿಸಲು ಮ್ಯಾಡ್ರಿಡ್ ನಿರಾಕರಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ ಟೀಕೆಗಳಿಗೆ ಬುಧವಾರ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ತಿರುಗೇಟು...

ಭಾರತದಿಂದ ಹಿಂದಿರುಗುತ್ತಿದ್ದ ಯುದ್ಧನೌಕೆ ಮೇಲೆ ಹಠಾತ್ ದಾಳಿ : ಅಮೆರಿಕ ಪಶ್ಚಾತ್ತಾಪ ಪಡಲಿದೆ ಎಂದ ಇರಾನ್

ಭಾರತೀಯ ನೌಕಾಪಡೆಯ ಆಹ್ವಾನದ ಮೇರೆಗೆ ಸಮರಾಭ್ಯಾಸದಲ್ಲಿ ಭಾಗವಹಿಸಿ ಹಿಂದಿರುಗುತ್ತಿದ್ದ ಇರಾನ್‌ನ ಅತ್ಯಾಧುನಿಕ ಯುದ್ಧನೌಕೆ ಐಆರ್‌ಐಎಸ್ ದೆನಾ ಮೇಲೆ ಅಮೆರಿಕದ ಜಲಾಂತರ್ಗಾಮಿ ದಾಳಿ ನಡೆಸಿ ಅದನ್ನು ಮುಳುಗಿಸಿದೆ. ಮಾರ್ಚ್ 4ರಂದು ಶ್ರೀಲಂಕಾದ ದಕ್ಷಿಣ ಕರಾವಳಿಯಿಂದ ಸುಮಾರು 40 ನಾಟಿಕಲ್...

ದೆಹಲಿ| ಹೋಳಿ ಹಬ್ಬ ಸಡಗರದಲ್ಲಿ ಕುಡಿದು ವಾಹನ ಚಾಲನೆ; 1,200 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲು

ಹೋಳಿ ಹಬ್ಬದಂದು ನಗರದಾದ್ಯಂತ ನಡೆಸಿದ ವಿಶೇಷ ಪರಿಶೀಲನೆಯಲ್ಲಿ ದೆಹಲಿ ಸಂಚಾರ ಪೊಲೀಸರು 1,200 ಕ್ಕೂ ಹೆಚ್ಚು ವಾಹನ ಚಾಲಕರ ವಿರುದ್ಧ ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ. ಪಶ್ಚಿಮ ವಲಯದಿಂದ ಅತಿ ಹೆಚ್ಚು...

ತಮಿಳುನಾಡು: ಜಾತಿ ಜಗಳದಲ್ಲಿ ದಲಿತ ವ್ಯಕ್ತಿ, ಒಡಿಶಾ ವಲಸೆ ಕಾರ್ಮಿಕನ ಹತ್ಯೆ; ಹಿಂದೆಯೂ ಜಾತಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಆರೋಪಿಗಳು

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ನಂಗುನೇರಿಯಿಂದ ಜಾತಿ ಹಿಂಸಾಚಾರದ ಭಯಾನಕ ಘಟನೆ ವರದಿಯಾಗಿದೆ, ಪೆರುಂಪತ್ತು ಗ್ರಾಮದಲ್ಲಿ ನಡೆದ ಕ್ರೂರ ದಾಳಿಯಲ್ಲಿ ಅಂಗವಿಕಲ ದಲಿತ ವ್ಯಕ್ತಿ ಮತ್ತು ಒಡಿಶಾದ ವಲಸೆ ಕಾರ್ಮಿಕ ಸಾವನ್ನಪ್ಪಿದ್ದಾರೆ.  ಆರೋಪಿಗಳಲ್ಲಿ ಇಬ್ಬರು ಕೆಲವು...