Homeಅಂಕಣಗಳುಪಶ್ಚಿಮ ಬಂಗಾಳ: ಮುಸ್ಲಿಂ ಬೀದಿ ವ್ಯಾಪಾರಿಗೆ ಚೂರಿ ಇರಿತ, ದಾಳಿಕೋರರು 'ಜೈ ಶ್ರೀರಾಮ್' ಕೂಗಾಲು ಒತ್ತಾಯ

ಪಶ್ಚಿಮ ಬಂಗಾಳ: ಮುಸ್ಲಿಂ ಬೀದಿ ವ್ಯಾಪಾರಿಗೆ ಚೂರಿ ಇರಿತ, ದಾಳಿಕೋರರು ‘ಜೈ ಶ್ರೀರಾಮ್’ ಕೂಗಾಲು ಒತ್ತಾಯ

- Advertisement -
- Advertisement -

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿ ನಡೆದ ಅಮಾನವೀಯ ಘಟನೆಯು ಎಲ್ಲೆಡೆ ಆತಂಕವನ್ನು ಸೃಷ್ಟಿಸಿದೆ. ಸೆಪ್ಟೆಂಬರ್ 6ರಂದು, 60 ವರ್ಷದ ವೃದ್ಧ ಮುಸ್ಲಿಂ ಬೀದಿ ವ್ಯಾಪಾರಿಯಾದ ಮೈಮೂರ್ ಅಲಿ ಮಂಡಲ್ ಅವರ ಮೇಲೆ ಮೂವರು ವ್ಯಕ್ತಿಗಳು ಹಲ್ಲೆ ನಡೆಸಿ, ಅವರನ್ನು ಹಿಂಸಿಸಿ, “ಜೈ ಶ್ರೀರಾಮ್” ಎಂದು ಹೇಳಲು ಒತ್ತಾಯಿಸಿದ್ದಾರೆ. ಇದು ಕೇವಲ ದೈಹಿಕ ಹಲ್ಲೆಯಲ್ಲ, ಬದಲಿಗೆ ಕೋಮು ದ್ವೇಷದ ತೀವ್ರ ಸ್ವರೂಪವನ್ನು ತೋರಿಸುವ ಘಟನೆಯಾಗಿದೆ.

ಮೈಮೂರ್ ಅಲಿ ಮಂಡಲ್ ಅವರು ಬಂಕುರಾ ಜಿಲ್ಲೆಯ ಒಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಪುನಿಸೋಲ್ ಗ್ರಾಮದ ನಿವಾಸಿ. ಈ ದುಷ್ಕೃತ್ಯ ಎಸಗಿದವರು ಬಂಕುರಾ ಪಟ್ಟಣದ ಲೋಕಪುರ ಬಳಿಯ ಕದ್ಮಪರದವರು ಎಂದು ತಿಳಿದುಬಂದಿದೆ. ದಾಳಿಕೋರರು ಮಂಡಲ್ ಅವರ ಕುತ್ತಿಗೆ ಮತ್ತು ಹೊಟ್ಟೆಗೆ ಇರಿದು ಕ್ರೌರ್ಯ ಮೆರೆದಿದ್ದಾರೆ.

ಈ ಭೀಕರ ದಾಳಿಯ ನಂತರದ ಘಟನೆಗಳು ಅದಕ್ಕಿಂತಲೂ ಆತಂಕಕಾರಿಯಾಗಿದ್ದವು. ಮಂಡಲ್ ಅವರು ನೋವಿನಿಂದ ನರಳುತ್ತಾ, ರಕ್ತ ಸುರಿಸುತ್ತಾ ಜನನಿಬಿಡ ರಸ್ತೆಯಲ್ಲಿ ಬಿದ್ದಿದ್ದರೂ, ಹಲ್ಲೆಕೋರರು ಅವರಿಗೆ ಚಿಕಿತ್ಸೆಗಾಗಿ ಬಂಕುರಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಹೋದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಜೊತೆಗೆ, ಮಂಡಲ್ ಅವರ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ಸ್ವತಃ ಮಂಡಲ್ ಅವರೇ ತಿಳಿಸಿದ್ದಾರೆ. ಇಷ್ಟೆಲ್ಲಾ ಸಾರ್ವಜನಿಕವಾಗಿ ನಡೆಯುತ್ತಿದ್ದರೂ, ಜನನಿಬಿಡ ರಸ್ತೆಯಲ್ಲಿ ಒಬ್ಬರೂ ಕೂಡ ಸಹಾಯಕ್ಕೆ ಬರಲಿಲ್ಲ ಎಂಬುದು ಘಟನೆಯ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ.

“ರಕ್ತದ ಮಡುವಿನಲ್ಲಿ ಸ್ವಲ್ಪ ಹೊತ್ತು ಬಿದ್ದಿದ್ದ ನಂತರ, ಮತ್ತೊಬ್ಬ ವ್ಯಾಪಾರಿ ನನ್ನನ್ನು ರಸ್ತೆಯಿಂದ ಮೇಲೆತ್ತಿದ. ನನ್ನ ಎಲ್ಲ ಸಾಮಾನುಗಳು ಚಲ್ಲಾಪಿಲ್ಲಿಯಾಗಿದ್ದವು. ಅವರ ಬೆದರಿಕೆಗಳಿಂದ ನಾನು ಭಯಭೀತನಾಗಿದ್ದೆ. ನೋವಿನಿಂದ ನರಳುತ್ತಲೇ, ಹೇಗೋ ನನ್ನ ಸೈಕಲ್ ಮೇಲೆ ಕುಳಿತು ನನ್ನ ಗ್ರಾಮದತ್ತ ಹೊರಟೆ” ಎಂದು ಮಂಡಲ್ ಅವರು ದಿ ವೈರ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಈ ಘಟನೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬಂಕುರಾದಂತಹ ಕೋಮು ಘಟನೆಗಳ ಇತಿಹಾಸವೇ ಇಲ್ಲದ ಸ್ಥಳದಲ್ಲಿ ಇಂತಹ ಹಿಂಸೆ ಏಕೆ ಭುಗಿಲೆದ್ದಿದೆ? ಇಲ್ಲಿನ ಸೌಹಾರ್ದಯುತ ವಾತಾವರಣವನ್ನು ಹಾಳುಮಾಡಲು ಯಾರು ಹೊಣೆ?

‘ನನ್ನ ಕುತ್ತಿಗೆ ಮತ್ತು ಹೊಟ್ಟೆಗೆ ಚೂರಿ ಇರಿದು, ಜೈ ಶ್ರೀ ರಾಮ್ ಎಂದು ಹೇಳಲು ಕೇಳಿದರು’

ದಿ ವೈರ್ ತಂಡವು ಮುಕ್ಷಾಪಾರಾದಲ್ಲಿರುವ (ರಿಯಾ ಪಾರಾ ಎಂದೂ ಕರೆಯಲ್ಪಡುವ) ಮಂಡಲ್ ಅವರ ಮನೆಗೆ ಭೇಟಿ ನೀಡಿದಾಗ, ಅಲ್ಲಿನ ವಾತಾವರಣ ತೀವ್ರ ಉದ್ವಿಗ್ನ ಮತ್ತು ಭಯದಿಂದ ಕೂಡಿತ್ತು. ಕುತ್ತಿಗೆ ಮತ್ತು ಹೊಟ್ಟೆಯ ಮೇಲೆ ಬ್ಯಾಂಡೇಜ್‌ಗಳನ್ನು ಹಾಕಿಕೊಂಡು ಹಾಸಿಗೆಯ ಮೇಲೆ ಮಲಗಿದ್ದ ಮಂಡಲ್, ದೈಹಿಕ ನೋವಿನ ಜೊತೆಗೆ ಮಾನಸಿಕ ಆಘಾತದಿಂದ ಬಳಲುತ್ತಿದ್ದರು.

ಅವರು ಘಟನೆಯ ಬಗ್ಗೆ ಹೀಗೆ ವಿವರಿಸಿದರು: “ನಾನು ಲೋಕಪುರದಿಂದ ವ್ಯಾಪಾರ ಮುಗಿಸಿ ನನ್ನ ಸೈಕಲ್‌ನಲ್ಲಿ ಮನೆಗೆ ಹೋಗುತ್ತಿದ್ದೆ. ಕಂಕಟದಲ್ಲಿರುವ ಬ್ಯಾನರ್ಜಿ ಡಯಾಗ್ನೋಸ್ಟಿಕ್ ಸೆಂಟರ್ ಬಳಿ, ಒಂದು ಇ-ರಿಕ್ಷಾ ನನ್ನ ಸೈಕಲ್‌ಗೆ ಡಿಕ್ಕಿ ಹೊಡೆದಾಗ ನಾನು ಕೆಳಗೆ ಬಿದ್ದೆ. ಆ ವಾಹನದಲ್ಲಿದ್ದ ಯುವಕರಲ್ಲಿ ಒಬ್ಬ ನನ್ನಿಂದ 200 ರೂಪಾಯಿ ಕೇಳಿದ. ನಾನು ನಿರಾಕರಿಸಿದಾಗ, ಅವನು ಭೋಜಲಿ (ಒಂದು ಚೂಪಾದ ಆಯುಧ) ಯಿಂದ ನನ್ನ ಕುತ್ತಿಗೆಗೆ ಇರಿದು, ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಒತ್ತಾಯಿಸಿದ. ನಾನು ಮತ್ತೆ ನಿರಾಕರಿಸಿದಾಗ, ಅವನು ನನ್ನ ಹೊಟ್ಟೆಗೆ ಇರಿದ. ಅವರು ನನ್ನನ್ನು ಕೊಲ್ಲಲು ಬಯಸಿದ್ದರು. ನನಗೆ ಅವರಲ್ಲಿ ಯಾರ ಪರಿಚಯವೂ ಇಲ್ಲ”.

ಮಂಡಲ್ ಅವರು ಕಳೆದ 32 ವರ್ಷಗಳಿಂದ ಬಂಕುರಾ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಇಲ್ಲಿನ ಜನರು ಯಾವಾಗಲೂ ಗೌರವದಿಂದ ನಡೆಸಿಕೊಂಡಿದ್ದಾರೆ ಎಂದು ಒತ್ತಿ ಹೇಳಿದರು. “ಬಂಕುರಾದ ಜನ ನಮ್ಮನ್ನು ಯಾವಾಗಲೂ ಕುಟುಂಬದವರಂತೆ ನೋಡಿಕೊಂಡಿದ್ದಾರೆ. ಹಿಂದೆಂದೂ ಇಂತಹ ಘಟನೆ ನಡೆದಿಲ್ಲ. ಈಗ ನಾವೆಲ್ಲ ತುಂಬಾ ಭಯಗೊಂಡಿದ್ದೇವೆ” ಎಂದು ಮಂಡಲ್ ಹೇಳಿದರು.

ಅವರ ಮಗ ನಜೀಬುದ್ದೀನ್ ಮಂಡಲ್, ಕುಟುಂಬಕ್ಕೆ ಘಟನೆ ತಿಳಿದು ಬಂದ ಬಗೆಯನ್ನು ವಿವರಿಸಿದರು. “ಮಧ್ಯಾಹ್ನ ತಡವಾಗಿ ನಾವು ನಮ್ಮ ತಂದೆಯ ಬಗ್ಗೆ ಸುದ್ದಿ ಕೇಳಿದೆವು. ಅವರು ರಕ್ತಸ್ರಾವವಾಗುತ್ತಿದ್ದರೂ, ಹೇಗೋ ಬಂಕುರಾದಿಂದ ಪುನಿಸೋಲ್‌ನ ಬೆನಜಿರಾ ಗ್ರಾಮದವರೆಗೆ ಸೈಕಲ್‌ನಲ್ಲಿ ಬರುವ ಪ್ರಯತ್ನ ಮಾಡುತ್ತಿದ್ದರು. ಅವರ ಇಡೀ ದೇಹ ರಕ್ತದಲ್ಲಿ ತೋಯ್ದಿತ್ತು. ನಂತರ ನಾವು ಅವರನ್ನು ಬಂಕುರಾ ವೈದ್ಯಕೀಯ ಕಾಲೇಜಿಗೆ ಸೇರಿಸಿದೆವು. ಅಲ್ಲಿ ವೈದ್ಯರು ಗಾಯಗಳಿಗೆ ಹೊಲಿಗೆ ಹಾಕಿ ಮನೆಗೆ ಕಳುಹಿಸಿದರು” ಎಂದು ನಜೀಬುದ್ದೀನ್ ತಿಳಿಸಿದರು.

ಮಂಡಲ್ ಅವರ ಮೇಲಿನ ಈ ದಾಳಿಯ ನಂತರ ಅವರ ಕುಟುಂಬ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. “ನನ್ನ ಪತಿಯೇ ನಮ್ಮ ಏಕೈಕ ಆಧಾರ. ಈಗ ಅವರಿಗೆ ಕೆಲಸ ಮಾಡಲು ಸಾಧ್ಯವಿಲ್ಲ. ನಾವು ಹೇಗೆ ಬದುಕುವುದು? ವೈದ್ಯರು ಹೇಳಿದ ಔಷಧಿಗಳನ್ನು ಹೇಗೆ ಖರೀದಿಸುವುದು?” ಎಂದು ಮಂಡಲ್ ಅವರ ಪತ್ನಿ ಹಸಿಫುನ್ ಬೀಬಿ ಚಿಂತೆಯಿಂದ ನುಡಿದರು.

‘ನಾವು ಮತ್ತೆ ಕೆಲಸ ಮಾಡಲು ಸಾಧ್ಯವಾಗುತ್ತದೆಯೇ? ಆಡಳಿತವು ನಮಗೆ ಭದ್ರತೆ ಒದಗಿಸುತ್ತದೆಯೇ?’

ಝಾರ್ಗ್ರಾಮ್ ರಾಜ್ಯ ಹೆದ್ದಾರಿಯಲ್ಲಿ ಬಂಕುರಾದಿಂದ ಸುಮಾರು 12 ಕಿಲೋಮೀಟರ್ ದೂರದಲ್ಲಿರುವ ಪುನಿಸೋಲ್ ಗ್ರಾಮವು ಒಂಡಾ ಬ್ಲಾಕ್‌ನ ಪುನಿಸೋಲ್ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುತ್ತದೆ. ಇದು ಬಂಕುರಾ ಜಿಲ್ಲೆಯ ಅತಿ ದೊಡ್ಡ ಅಲ್ಪಸಂಖ್ಯಾತ ವಸಾಹತುಗಳಲ್ಲಿ ಒಂದಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದೆ. ಆದರೆ ಇಲ್ಲಿ ಸರ್ಕಾರಿ ನೌಕರರು ಬಹುತೇಕ ಇಲ್ಲವಾಗಿದೆ.

ಹೆಚ್ಚಿನ ಗ್ರಾಮಸ್ಥರು ಭೂಹೀನರು. ಅವರು ಕಲ್ಲು ಒಡೆಯುವುದು, ಮರ ಕತ್ತರಿಸುವುದು, ಬಾವಿಗಳನ್ನು ಅಗೆಯುವುದು ಮುಂತಾದ ಕಠಿಣ ಮತ್ತು ಅಪಾಯಕಾರಿ ಕೆಲಸಗಳಿಂದ ಜೀವನ ನಡೆಸುತ್ತಾರೆ. ಇಂತಹ ಕೆಲಸ ಪ್ರತಿದಿನ ಸಿಗದಿರುವ ಕಾರಣ, ಸಾವಿರಾರು ಗ್ರಾಮಸ್ಥರು, ಯುವಕರು ಮತ್ತು ವೃದ್ಧರು, ಸೂರ್ಯೋದಯಕ್ಕೂ ಮುನ್ನವೇ ಸೈಕಲ್‌ಗಳಲ್ಲಿ ಬಂಕುರಾ, ತಲ್ದಂಗ್ರಾ, ಒಂಡಾ ಮತ್ತು ಇಂದ್‌ಪುರ್‌ಗೆ ತೆರಳುತ್ತಾರೆ.

ಅವರು ಹಳೆಯ ವಸ್ತುಗಳನ್ನು – ಮುರಿದ ಪೀಠೋಪಕರಣಗಳು, ಹಳೆಯ ಟಿನ್ ಶೀಟ್‌ಗಳು, ಕಬ್ಬಿಣ, ಅಲ್ಯೂಮಿನಿಯಂ, ಸ್ಟೀಲ್ ಪಾತ್ರೆಗಳು, ವೃತ್ತಪತ್ರಿಕೆಗಳು ಮತ್ತು ಪ್ಲಾಸ್ಟಿಕ್‌ಗಳನ್ನು ಮನೆಗಳಿಂದ ಕಡಿಮೆ ಬೆಲೆಗೆ ಸಂಗ್ರಹಿಸಿ, ಅವುಗಳನ್ನು ಸ್ಕ್ರ್ಯಾಪ್ ಡೀಲರ್‌ಗಳಿಗೆ ಮಾರಾಟ ಮಾಡುತ್ತಾರೆ. ಸ್ಥಳೀಯವಾಗಿ ಅವರನ್ನು “ಟಿನ್-ಭಂಗಾ” ಅಥವಾ “ಲೋಹಾ-ಭಂಗಾ” ವ್ಯಾಪಾರಿಗಳು ಎಂದು ಕರೆಯಲಾಗುತ್ತದೆ.

“ನಮಗೆ ಪ್ರತಿದಿನ ಕೆಲಸ ಸಿಗುವುದಿಲ್ಲ. ನಾವು ದಿನವಿಡೀ ಕೆಲಸ ಮಾಡಿದ ನಂತರ, ಸರಾಸರಿ 100 ರೂಪಾಯಿಗಳಷ್ಟು ಗಳಿಸುತ್ತೇವೆ” ಎಂದು ಪುನಿಸೋಲ್‌ನ ವ್ಯಾಪಾರಿ ಅಕ್ತನ್ ಅಲಿ ಖಾನ್ ಹೇಳಿದರು.

ಈ ವರದಿಗಾರ ಶನಿವಾರ (ಸೆಪ್ಟೆಂಬರ್ 6) ಸಂಜೆ ಪುನಿಸೋಲ್‌ಗೆ ಭೇಟಿ ನೀಡಿದಾಗ, ಇಡೀ ಗ್ರಾಮವೇ ಭಯದಲ್ಲಿ ಮುಳುಗಿತ್ತು. “ನಾವು ಮತ್ತೆ ಕೆಲಸ ಮಾಡಲು ಸಾಧ್ಯವಾಗುತ್ತದೆಯೇ? ಆಡಳಿತವು ನಮಗೆ ಭದ್ರತೆಯನ್ನು ಒದಗಿಸುತ್ತದೆಯೇ?” ಎಂಬ ಪ್ರಶ್ನೆಗಳು ಎಲ್ಲರ ಬಾಯಿಯಿಂದ ಹೊರಬರುತ್ತಿದ್ದವು.

ಬಂಕುರಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್-ಇನ್-ಚಾರ್ಜ್ ಸುಜೋಯ್ ತುಂಗಾ ಅವರು ಸಂತ್ರಸ್ತರ ದೂರಿನ ಆಧಾರದ ಮೇಲೆ ಲೋಕಪುರ ಕದ್ಮಪರದ ಸಮೀರ್ ಸಹಿಸ್ ಎಂಬ ಯುವಕನನ್ನು ಬಂಧಿಸಲಾಗಿದೆ ಎಂದು ದೃಢಪಡಿಸಿದರು.

ಘಟನೆಯನ್ನು ಕೋಮು ಘಟನೆ ಎಂದು ಕರೆಯುವುದು ‘ವಾಸ್ತವಿಕವಾಗಿ ತಪ್ಪಾಗಿದೆ’ ಎನ್ನುವ ಪೊಲೀಸರು, ಆದರೆ ಸಂತ್ರಸ್ತರು ತಮ್ಮ ಹೇಳಿಕೆಗೆ ಅಂಟಿಕೊಂಡಿದ್ದಾರೆ

ಭಾನುವಾರ (ಸೆಪ್ಟೆಂಬರ್ 7) ಸಂಜೆ, ಬಂಕುರಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ್ ಡೋರ್ಜಿ ಅವರು ಮಂಡಲ್ ಮೇಲಿನ ದಾಳಿಯ ಬಗ್ಗೆ ಮಾಧ್ಯಮಗಳಿಗೆ ಪತ್ರಿಕಾ ಹೇಳಿಕೆಯನ್ನು ನೀಡಿದರು. “ಕೆಲವು ಸಾಮಾಜಿಕ ಮಾಧ್ಯಮಗಳು ಈ ಘಟನೆಯನ್ನು ಕೋಮು ಎಂದು ಬಿಂಬಿಸುತ್ತಿವೆ, ಸಂತ್ರಸ್ತರಿಗೆ ಧಾರ್ಮಿಕ ಘೋಷಣೆಗಳನ್ನು ಕೂಗಲು ಒತ್ತಾಯಿಸಲಾಗಿದೆ ಎಂದು ಹೇಳುತ್ತಿವೆ. ಇದು ವಾಸ್ತವವಾಗಿ ತಪ್ಪಾಗಿದೆ ಮತ್ತು ದಾರಿತಪ್ಪಿಸುವಂತಿದೆ. ಪ್ರಾಥಮಿಕ ತನಿಖೆಯು ಇದು ಕ್ರಿಮಿನಲ್ ಸ್ವರೂಪದ ಘಟನೆ ಎಂದು ಖಚಿತಪಡಿಸಿದೆ, ಕೋಮು ಸ್ವರೂಪದ್ದಲ್ಲ. ಸಂತ್ರಸ್ತರಿಗೆ ಧಾರ್ಮಿಕ ಘೋಷಣೆಗಳನ್ನು ಕೂಗಲು ಒತ್ತಾಯಿಸಲಾಗಿದೆ ಎಂಬ ಆರೋಪಗಳು ಆಧಾರರಹಿತವಾಗಿವೆ. ಸುಳ್ಳು ಮಾಹಿತಿಯನ್ನು ನಂಬಬೇಡಿ ಅಥವಾ ಹರಡಬೇಡಿ ಎಂದು ನಾಗರಿಕರಲ್ಲಿ ವಿನಂತಿಸಲಾಗಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಆದಾಗ್ಯೂ, ಮಂಡಲ್ ಅವರು ತಾವು ನೀಡಿದ ಹೇಳಿಕೆಗೆ ಬದ್ಧರಾಗಿದ್ದಾರೆ. “ನಾನು ‘ಜೈ ಶ್ರೀ ರಾಮ್’ ಎಂದು ಹೇಳಲು ನಿರಾಕರಿಸಿದ್ದಕ್ಕೆ ನನ್ನ ಮೇಲೆ ಚೂರಿ ಇರಿಯಲಾಯಿತು ಎಂದು ನಾನು ಪೊಲೀಸರಿಗೆ ಸ್ಪಷ್ಟವಾಗಿ ಹೇಳಿದ್ದೇನೆ” ಎಂದು ಮಂಡಲ್ ಪುನರುಚ್ಚರಿಸಿದರು.

ಪೊಲೀಸರು ಉದ್ದೇಶಪೂರ್ವಕವಾಗಿ ಸುಳ್ಳುಗಳನ್ನು ಹರಡುತ್ತಿಲ್ಲ ಎಂದು ಕೆಲವು ಸ್ಥಳೀಯರು ವಾದಿಸಿದರೆ, ಮತ್ತೆ ಕೆಲವರು ಸಂಪೂರ್ಣ ತನಿಖೆಗೆ ಒತ್ತಾಯಿಸುತ್ತಿದ್ದಾರೆ. “ಪೊಲೀಸರು ಈ ಘಟನೆಯನ್ನು ಆಳವಾಗಿ ತನಿಖೆ ಮಾಡದಿದ್ದರೆ, ಇಂತಹ ಘಟನೆಗಳು ಇನ್ನಷ್ಟು ಹೆಚ್ಚಾಗುತ್ತವೆ. ಬಂಗಾಳವು ಈಗಾಗಲೇ ಬೇರೆಡೆ ಇಂತಹ ಹಲವಾರು ಪ್ರಕರಣಗಳನ್ನು ಕಂಡಿದೆ” ಎಂದು ಗ್ರಾಮಸ್ಥರೊಬ್ಬರು ಆತಂಕ ವ್ಯಕ್ತಪಡಿಸಿದರು.

ಇತ್ತೀಚೆಗೆ ನಡೆದ ಇಂತಹ ಘಟನೆಗಳು ಹೆಚ್ಚುತ್ತಿರುವ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತವೆ: ಕೋಲ್ಕತ್ತಾದ ಟಾಲಿಗಂಜ್ ಮೆಟ್ರೋ ನಿಲ್ದಾಣದಲ್ಲಿ ಸುಗಂಧ ದ್ರವ್ಯ ಮಾರಾಟಗಾರನನ್ನು ಕೇವಲ ಅತ್ತರ್ ಮಾರಾಟ ಮಾಡಿದ್ದಕ್ಕಾಗಿ “ಬಾಂಗ್ಲಾದೇಶಿ” ಎಂದು ಹಣೆಪಟ್ಟಿ ಕಟ್ಟಲಾಯಿತು; ಕಲ್ಕತ್ತಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಗುಂಪನ್ನು ಸೀಲ್ದಾಹ್‌ನಲ್ಲಿ “ಬಾಂಗ್ಲಾದೇಶಿಗಳು” ಎಂದು ಹಣೆಪಟ್ಟಿ ಕಟ್ಟಲಾಯಿತು; ಕಳೆದ ತಿಂಗಳು, ಕೃಷಿ ಕೆಲಸಕ್ಕಾಗಿ ದನಗಳನ್ನು ಸಾಗಿಸುತ್ತಿದ್ದ ಮುಸ್ಲಿಂ ಪುರುಷರ ಗುಂಪಿನ ಮೇಲೆ ದುರ್ಗಾಪುರದಲ್ಲಿ ಹಲ್ಲೆ ನಡೆಸಲಾಯಿತು. ಈ ಘಟನೆಗಳು ಹೆಚ್ಚುತ್ತಿರುವ ಬಿಜೆಪಿ ಪ್ರಚಾರದ ಹಿಂದೂತ್ವ ಸಿದ್ಧಾಂತದ ಪ್ರಭಾವದ ಒಂದು ಆತಂಕಕಾರಿ ಪ್ರವೃತ್ತಿಯನ್ನು ಒತ್ತಿಹೇಳುತ್ತವೆ.

ಮೂಲ: ಮಧು ಸುಡಾನ್ ಚಟರ್ಜಿ ಪುನಿಸೋಲ್, ದಿ ವೈರ್

ಮದ್ದೂರು ಕಲ್ಲು ತೂರಾಟ ಪ್ರಕರಣ: 21 ಜನರ ಬಂಧನ, ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...