Homeಮುಖಪುಟಹೊಸ ವೈರಸ್‌ಗಳ ಹುಟ್ಟಿಗೆ ಕಾರಣವೇನು? ಇವುಗಳ ಮುಂದೆ ಮಾನವ ಬಲಹೀನನೆ?

ಹೊಸ ವೈರಸ್‌ಗಳ ಹುಟ್ಟಿಗೆ ಕಾರಣವೇನು? ಇವುಗಳ ಮುಂದೆ ಮಾನವ ಬಲಹೀನನೆ?

- Advertisement -
- Advertisement -

ಹೊಸ ಕೊರೊನಾ ವೈರಾಣು ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿದೆ. ಈ ಹಿಂದೆ ಝೀಕಾ, ಎಬೊಲಾ, ಸಾರ್ಸ್‌ನಂತ ವೈರಾಣುಗಳು ನಡುಕ ಹುಟ್ಟಿಸಿ ಹೋಗಿದ್ದವು. ಮನುಷ್ಯರ ಸಾಧನೆ, ನಾಗರಿಕತೆ, ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರು, ʼನಿರ್ಜೀವಿʼ ವೈರಸ್‌ ಒಂದು ಇದನ್ನೆಲ್ಲಾ ಬುಡಮೇಲು ಮಾಡುತ್ತಿದೆ ಎನ್ನುವ ಪ್ರಶ್ನೆ ಕಾಡುವಂತಾಗಿದೆ. ನಾವು ಇಷ್ಟು ಬಲಹೀನ ಮತ್ತು ದುರ್ಬಲರೇ ಎನ್ನುವಂತಾಗಿದೆ. ಅನೇಕ ಬಾರಿ ನಮ್ಮ ಹೆಗ್ಗಳಿಕೆಯ ಯಶಸ್ಸು ಕಲ್ಲಿನ ಮೇಲೆ ಬರೆದದ್ದಲ್ಲ ಮರಳಿನ ಮೇಲೆ ಎನ್ನುವುದುಂಟು. ಯಾವಾಗ ಬೇಕಾದರು ಅಳಿಸಿ ಹೋಗಬಹುದು.

ಇದೇ ಸಂದರ್ಭದಲ್ಲಿ ಹೊಸ ಹೊಸ ಮಾರಕ ರೋಗಾಣುಗಳ ಹುಟ್ಟಿಗೆ ಕಾರಣವಾದರೂ ಏನು ಎನ್ನುವ ಪ್ರಶ್ನೆ ಹುಟ್ಟುತ್ತದೆ. ನಾವು ಕುಳಿತಿರುವ ಮರದ ಕೊಂಬೆಯನ್ನು ನಾವು ಕಡೆಯುತ್ತಿದ್ದೇವಾ? ಸೂಫಿ ಸಂತ ರೂಮಿ ಒಂದೆಡೆ ಹೀಗೆನ್ನುತ್ತಾನೆ “ಕೊನೆಗೂ ನನ್ನ ಶತ್ರು ನನಗೆ ಸಿಕ್ಕ, ನಾನೇ ಅವನು”. ಪರಿಸರ ಮತ್ತು ಪೃಕೃತಿ ಸಮತೋಲನ ಎಲ್ಲ ಜೀವಜಗತ್ತಿಗೆ ಆಧಾರ. ಪರಸ್ಪರ ಒಂದನ್ನೊಂದು ಅವಲಂಬಿಸಿ ಹೊಸೆದು ಹೆಣೆದು ಬದುಕುವ ಬಗೆ. ಎಲ್ಲವನ್ನು ಸಮಗ್ರವಾಗಿ ನೋಡುವ ಚಿಂತನೆ ನಮ್ಮಲ್ಲಿ ಬಹಳ ಕಡಿಮೆಯಾಗುತ್ತಿದೆ.

ಸೂಕ್ಷ್ಮ ಜೀವಿಯನ್ನು ಇರುವೆಯಲ್ಲಿ, ಇರುವೆಯನ್ನು ಮರದಲ್ಲಿ, ಮರವನ್ನು ಕಾಡಿನಲ್ಲಿ, ಕಾಡನ್ನು ಪೃಕೃತಿಯಲ್ಲಿ, ಪೃಕೃತಿಯನ್ನು ವಿಶ್ವದಲ್ಲಿ ಬೆರೆತಿರುವುದನ್ನು ಪರಿಸರ ವಿಜ್ಞಾನ ತೋರಿಸಿಕೊಡುತ್ತಿದೆ. ಈ ಮೂಲ ಬೆಸುಗೆಯನ್ನು ತುಂಡರಿಸುವುದರಿಂದ ಹೊಸ ರೋಗಾಣುಗಳು ಅಥವಾ ಸಾಧು ಜೀವಿಗಳು ಕ್ರೂರ ಜೀವಿಗಳಾಗುವುದು ಸಾಧ್ಯ.

ಲೈಮ್‌ ಕಾಯಿಲೆ

ಕಾಡಿನಲ್ಲಿರುವ ಉಣ್ಣೆಯಿಂದ ನಮ್ಮಲ್ಲಿ ಮಂಗನಕಾಯಿಲೆ, ಅದೇರೀತಿ ಬೇರೆ ಬೇರೆ ದೇಶಗಳಲ್ಲಿ ಇನ್ನೊಂದು ಜಾತಿಯ ಉಣ್ಣೆಯಿಂದ ಲೈಮ್‌ ಕಾಯಿಲೆ (lyme disease) ಎನ್ನುವ ಮಾರಕ ಕಾಯಿಲೆ ಇದೆ. ಮಂಗನಕಾಯಿಲೆಯ ವೈರಾಣು, ಅದಕ್ಕೆ ಲಸಿಕೆ ಬಗ್ಗೆ ಈಗ ಸಾಕಷ್ಟು ತಿಳಿದಿದ್ದರು, ಅದರ ಹುಟ್ಟು ಮತ್ತು ಹರಿವು ಇನ್ನು ನಿಗೂಢವಾಗಿದೆ.  ಇದೇ ರೀತಿಯ ಉಣ್ಣೆಯಿಂದ ಬರುವ ಲೈಮ್‌ ಕಾಯಿಲೆಯ ಬಗ್ಗೆ ಕೆಲವು ಅಧ್ಯಯನಗಳಿಂದ ಹೊಸ ಪ್ರಾಕೃತಿಕ ಸಂಬಂಧಗಳು ಹೊರಬಿದ್ದಿವೆ. ಈ ಉಣ್ಣೆ ಬದುಕಲು ಮತ್ತು ಹೇರಳವಾಗಿ ಸಂತಾನೋತ್ಪತ್ತಿ ಮಾಡಲು ಇಲಿಗಳ ರಕ್ತ ಬೇಕು. ಇಲಿಗಳ ಸಂತತಿ ಹೆಚ್ಚಿದ್ದರೆ ಉಣ್ಣೆಯ ಸಂತತಿ ಹೆಚ್ಚುತ್ತದೆ. ಪಾಶ್ಚಾತ್ಯ ದೇಶಗಳಲ್ಲಿ ಇಲಿಗಳನ್ನು ತಿನ್ನುವ ನರಿಗಳಿವೆ. ಆದರೆ ನರಿ ಬೇಟೆ ಪಾಶ್ಚಾತ್ಯರಲ್ಲಿ ಮೋಜಿನ ಆಟ. ಎಲ್ಲಿ ನರಿ ಸಂಖ್ಯೆ ಕಡಿಮೆಯಾಗುತ್ತದೆಯೋ ಅಲ್ಲಿ ಇಲಿ ಸಂಖ್ಯೆ ಹೆಚ್ಚಾಗುತ್ತದೆ. ಎಲ್ಲಿ ಇಲಿ ಹೆಚ್ಚಾಗುತ್ತದೆಯೋ ಉಣ್ಣೆಯೂ ಹೆಚ್ಚಾಗಿ ಮಾರಣಾಂತಿಕ ಲೈಮ್‌ ಕಾಯಿಲೆ ಹೆಚ್ಚಾಗುವ ಸಾಧ್ಯತೆಯನ್ನು ಸಂಶೋಧನೆಗಳು ತಿಳಿಸಿವೆ.

ಇತ್ತೀಚೆಗೆ ಮಲೇರಿಯಾ ರಹಿತ ಕಾಫಿ ಎನ್ನುವ ಸುದ್ದಿಯಾಯಿತು. ಇದಕ್ಕೆ ಕಾರಣ ಕಾಡು ನಾಶಮಾಡಿ, ಕಾಫಿ ಬೆಳೆದಾಗ ಕಾಡಿನ ಸೊಳ್ಳೆ ಊರಿಗೆ ಬಂದು ಮಲೇರಿಯಾ ಕಾಯಿಲೆ ಹರಡುವುದು. ಹಾಗೆಯೇ ಕಾಡು ನಾಶವಾದಾಗ ಸೊಳ್ಳೆ ತಿನ್ನುವ ಕಪ್ಪೆ ನಾಶವಾಗುವುದು ಕಾರಣ. ಇದಕ್ಕೆ ಕಾಡನ್ನು ಉಳಿಸಿಕೊಂಡು ಬೆಳೆದ ಕಾಫಿಯನ್ನು ಮಲೇರಿಯಾ ಮುಕ್ತ ಕಾಫಿ ಎನ್ನುವುದಾಗಿದೆ. ಹಿಂದೊಮ್ಮೆ ಡಾಲ್ಡಾ ಎಣ್ಣೆ ಒರಾಂಗುಟನ್‌ನನ್ನು ಕೊಲ್ಲುತ್ತದೆ ಎನ್ನುವ ಸುದ್ದಿ ಬಂದಿತ್ತು. ಕಾರಣ ಡಾಲ್ಡಾ ಮಾಡಲು ಕಾಡು ಕಡಿದು ತಾಳೆ ಎಣ್ಣೆ ಬೆಳೆಯಬೇಕಾಗುತ್ತದೆ. ಬಾರ್ನಿಯೊ ಕಾಡು ಒರಾಂಗುಟನ್‌ ಬದುಕುವ ತಾಣ. ಅಲ್ಲಿ ಕಾಡನ್ನು ಕಡೆದು ಅಥವಾ ಬೆಂಕಿ ಹಚ್ಚಿ ಸರ್ವನಾಶ ಮಾಡಿ ತಾಳೆ ಬೆಳೆದಾಗ ಜೀವ ಸಂಕುಲ ನಾಶವಾಗುತ್ತದೆ.

ಎಲ್‌ ನಿನ್ಯೊ (El nino), ಲಾ ನಿನ್ಯಾ( La nina) ಜಾಗತಿಕ ತಾಪಮಾನದಿಂದ ಉಂಟಾಗಿರುವ ಸಾಗರದ ಪ್ರಕ್ರಿಯೆ. ಇದರಿಂದ ಪ್ರಕೃತಿಯಲ್ಲಿ ಅನೇಕ ಏರು ಪೇರುಗಳನ್ನು ಕಾಣಬಹುದು. ಅದೇ ರೀತಿ ಇಂಡಿಯನ್‌ ಓಶನ್‌ ಡೈಪೊಲ್‌ ಎನ್ನುವ ಸಾಗರ ತಾಪಮಾನದ ಅಲೆಗಳಿಂದ ಇತ್ತಿಚೆಗೆ ಆಸ್ಟ್ರೇಲಿಯಾ ಖಂಡಕ್ಕೆ ಬೆಂಕಿ ಬಿದ್ದದ್ದು ಹೊರ ನೋಟಕ್ಕೆ ಕಾಣುವ ಕಾರ್ಯಕಾರಣ ಸಂಬಂಧಗಳನ್ನು ಬುಡಮೇಲು ಮಾಡುತ್ತದೆ.

ಎಲ್‌ ನಿನ್ಯೊ
ಲಾ ನಿನ್ಯಾ

ಬಾವಲಿಯಲ್ಲಿ ಅನೇಕ ರೀತಿಯ ಕರೊನಾದಂತಹ ವೈರಾಣುಗಳು ಮನೆಮಾಡಿವೆ. ಪರಸ್ಪರ ಹೊಂದಿಕೊಂಡು ಬಾವಲಿಯ ಜೊತೆ ಬದುಕುತ್ತಿವೆ. ಹೀಗಾಗಿ ಬಾವಲಿಗೆ ಮಾತ್ರ ಕ್ಯಾನ್ಸರ್‌ ಬರುವುದಿಲ್ಲ ಎನ್ನುವುದು ಒಂದು ರೋಚಕ ಸಂಗತಿಯೇ. ಆದರೆ ಬಾವಲಿಯ ಪ್ರಕೃತಿ ತಾಣವನ್ನು ಉಲ್ಲಂಘಿಸಿದಾಗ ಅತ್ತಿಂದತ್ತ ವೈರಾಣುಗಳು ಕಾಲಿಟ್ಟಲ್ಲಿ ಮನುಕುಲಕೆ ನಡುಕ ಉಂಟಾಗುತ್ತದೆ. ಮುಂದೆ ನಮ್ಮ ವಿಜ್ಞಾನ ಹೆಚ್ಚು ಹೆಚ್ಚು ಇಂತಹ ಬೆಸುಗೆಯ ಬಗ್ಗೆ ಬೆಳಕು ಚೆಲ್ಲಬೇಕಾಗಿದೆ. ಫ್ರಾನ್ಸಿಸ್‌ ಬೇಕನ್‌ ಬಹಳ ವರ್ಷಗಳ ಹಿಂದೆ ಪ್ರಕೃತಿಯನ್ನು ನಿಯಂತ್ರಿಸುವುದು ಅದನ್ನು ವಿಧೇಯಿಸುವುದರಿಂದ ಮಾತ್ರ ಸಾಧ್ಯ ಎಂದಿದ್ದ. (Nature to be commanded must be obeyed)

(ಲೇಖಕರು ಚಿಂತಕರು ಮತ್ತು ಬರಹಗಾರರು.)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...