Homeಮುಖಪುಟಶಾರ್ಟ್ ಸೆಲ್ಲಿಂಗ್ ಎಂದರೇನು? ಅದಾನಿಯನ್ನು ಪ್ರಪಾತಕ್ಕೆ ನೂಕುತ್ತಿರುವ ಹಿಂಡೆನ್‌ಬರ್ಗ್‌ ಕಂಪನಿಯ ಹಿನ್ನಲೆಯೇನು?

ಶಾರ್ಟ್ ಸೆಲ್ಲಿಂಗ್ ಎಂದರೇನು? ಅದಾನಿಯನ್ನು ಪ್ರಪಾತಕ್ಕೆ ನೂಕುತ್ತಿರುವ ಹಿಂಡೆನ್‌ಬರ್ಗ್‌ ಕಂಪನಿಯ ಹಿನ್ನಲೆಯೇನು?

ಹಿಂಡೆನ್‌ಬರ್ಗ್ ಸಂಸ್ಥೆಯು 2020 ರಿಂದ ಟೆಸ್ಲಾ, ಟ್ವಿಟರ್ ಸೇರಿದಂತೆ ಸುಮಾರು 30 ಕಂಪನಿಗಳನ್ನು ಗುರಿಯಾಗಿಸಿಕೊಂಡು ಶಾರ್ಟಿಂಗ್ ಮಾಡಿ ಲಾಭ ಗಳಿಸಿದೆ.

- Advertisement -
- Advertisement -

ಕಳೆದ ನಾಲ್ಕು ದಿನಗಳಲ್ಲಿ ದಿಢೀರ್ ಪ್ರಚಲಿತಕ್ಕೆ ಬಂದ ಅಮೆರಿಕದ ಕಂಪನಿಯ ಹೆಸರು ಹಿಂಡೆನ್‌ಬರ್ಗ್ ರಿಸರ್ಚ್. ಭಾರತದ ನಂಬರ್ ಒನ್ ಶ್ರೀಮಂತ ಗೌತಮ್ ಅದಾನಿಯವರ ಹಣಕಾಸು ಅಕ್ರಮಗಳನ್ನು ಬಯಲಿಗೆಳೆಯುವ ವರದಿ ಪ್ರಕಟಿಸುವ ಮೂಲಕ ಅದು ಸದ್ಯ ಟ್ರೆಂಡಿಂಗ್‌ನಲ್ಲಿದೆ. ಇತ್ತ ಆ ಒಂದು ವರದಿಯಿಂದ ಅದಾನಿ ಕಂಪನಿಯ ಷೇರುಗಳೆಲ್ಲ ಪ್ರಪಾತಕ್ಕೆ ಕುಸಿಯುತ್ತಿದ್ದು, ಈ ನಾಲ್ಕು ದಿನದಲ್ಲಿ ಕನಿಷ್ಟ 4 ಲಕ್ಷ ಕೋಟಿ ರೂಗಳಿಗೂ ಹೆಚ್ಚಿನ ನಷ್ಟಕ್ಕೆ ಒಳಗಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ಎಸ್‌ಬಿಐ, ಎಲ್‌ಐಸಿಯಂತಹ ಸಾರ್ವಜನಿಕ ವಲಯದ ಸಂಸ್ಥೆಗಳ ಷೇರು ಮೌಲ್ಯಗಳು ಕುಸಿಯುತ್ತಿದ್ದು, ಇಡೀ ಭಾರತದ ಆರ್ಥಿಕತೆ ಅಪಾಯದಲ್ಲಿದೆ. ಇಂತಹ ಸಮಯದಲ್ಲಿ ಹಿಂಡೆನ್‌ಬರ್ಗ್ ಕಂಪನಿಯನ್ನು ‘ಶಾರ್ಟ್ ಸೆಲ್ಲಿಂಗ್’ ಕಂಪನಿ ಎಂದು ಸಂಭೋದಿಸಲಾಗುತ್ತಿದೆ. ಅದು ಅದಾನಿಗೆ ಶಾರ್ಟ್ ಸೆಲ್ಲಿಂಗ್ ಮಾಡುವ ಮೂಲಕ ಮಿಲಿಯನ್‌ ಡಾಲರ್‌ಗಟ್ಟಲೇ ಹಣ ಸಂಪಾದಿಸಿದೆ ಎಂದು ವರದಿಯಾಗಿದೆ. ಆಗಿದ್ದರೆ ಶಾರ್ಟ್‌ ಸೆಲ್ಲಿಂಗ್ ಎಂದರೇನು? ಆ ಕಂಪನಿಯ ಹಿನ್ನೆಲೆಯೇನು ಎಂಬುದನ್ನು ನೋಡೋಣ.

ಹಿಂಡೆನ್‌ಬರ್ಗ್ ಹಿನ್ನೆಲೆ

2017ರಲ್ಲಿ ನಾಥನ್ ಆಂಡರ್ಸನ್ ಎಂಬುವವರು ಸ್ಥಾಪಿಸಿದ ಹಿಂಡೆನ್‌ಬರ್ಗ್ ರಿಸರ್ಚ್ ತನ್ನನ್ನು ಸಂಶೋಧನಾ ಮತ್ತು ತನಿಖಾ ಸಂಸ್ಥೆ ಎಂದು ಕರೆದುಕೊಂಡಿದೆ. ಸ್ಟಾಕ್‌ ಮಾರ್ಕೆಟ್‌ನಲ್ಲಿ ತಪ್ಪಿಸಬಹುದಾದ ಆರ್ಥಿಕ ಅವಘಡಗಳನ್ನು ಗುರುತಿಸುವುದು, ಸಂತ್ರಸ್ತರನ್ನು ರಕ್ಷಿಸುವುದು ತನ್ನ ಕೆಲಸ ಎಂದು ಹೇಳಿಕೊಂಡಿದೆ. ಕೇವಲ ಬೆರಳೆಣಿಕೆಯ ಸಿಬ್ಬಂದಿಗಳನ್ನು ಹೊಂದಿರುವ ಈ ಸಂಸ್ಥೆಯು ದೈತ್ಯ ಕಂಪನಿಗಳ ಕುರಿತಾದ ಆಳವಾದ ಸಂಶೋಧನೆ ಮಾಡುವುದರಲ್ಲಿ ಪಳಗಿದ ಕೈ ಎನಿಸಿಕೊಂಡಿದೆ. ಆರ್ಥಿಕ ಅವ್ಯವಹಾರಗಳನ್ನು ಬಯಲಿಗೆಳೆಯುವುದು, ವರದಿಗಳನ್ನು ಬಿಡುಗಡೆ ಮಾಡುವ ವಿಶಲ್ ಬ್ಲೋಯರ್ ಕೆಲಸ ಮಾಡುತ್ತಲೇ ಅದು ‘ಶಾರ್ಟ್ ಸೆಲ್ಲರ್ ಆಕ್ಟಿವಿಸಂ’ ಅನ್ನು ಮಾಡುತ್ತಾ ಬಂದಿದೆ. ಅದಾನಿ ಕಂಪನಿಯ ವಿರುದ್ಧ ಸಹ ಅದು ಶಾರ್ಟ್ ಸೆಲ್ಲಿಂಗ್ ಮಾಡಿದೆ ಎಂದು ತನ್ನ ವರದಿಯಲ್ಲಿ ಹೇಳಿಕೊಂಡಿದೆ.

ಏನಿದು ಶಾರ್ಟ್ ಸೆಲ್ಲಿಂಗ್?

ಶಾರ್ಟ್ ಸೆಲ್ಲಿಂಗ್ ಎನ್ನುವುದು ಒಂದು ಮಾರುಕಟ್ಟೆ ತಂತ್ರವಾಗಿದ್ದು ಭಾರತ ಮತ್ತು ಅಮೆರಿಕದಲ್ಲಿ ಕಾನೂನುಬದ್ಧವಾಗಿ ಯಾರು ಬೇಕಾದರೂ ಮಾಡಬಹುದಾಗಿದೆ. ಅಂದರೆ ಕೆಲವು ಕಂಪನಿಗಳ ಷೇರುಗಳ ಬೆಲೆ ಕುಸಿಯುತ್ತವೆ ಎಂದು ಅಧ್ಯಯನ, ಸಂಶೋಧನೆ ನಡೆಸುವುದು. ತನ್ನದಲ್ಲದ ಆ ಷೇರುಗಳನ್ನು ದಲ್ಲಾಳಿಗಳ ಮೂಲಕ ಎರವಲು ಪಡೆದು ಸದ್ಯದ ಬೆಲೆಗೆ ಮಾರುವುದು. ನಂತರ ಅವುಗಳ ಬೆಲೆ ಕುಸಿದಾಗ ಕಡಿಮೆ ಬೆಲೆಗೆ ಕೊಂಡು ದಲ್ಲಾಳಿಗಳಿಗೆ ಹಿಂದಿರುಗಿಸುವ ಮೂಲಕ ಲಾಭ ಗಳಿಸುವುದನ್ನು ಶಾರ್ಟ್ ಸೆಲ್ಲಿಂಗ್ ಎನ್ನಲಾಗುತ್ತದೆ.

ಉದಾಹರಣೆಯ ಮೂಲಕ ನೋಡುವುದಾದರೆ ಅಆ ಎಂಬ ಕಂಪನಿಯ ಷೇರುಗಳು 1000 ರೂಗೆ ಮಾರಾಟವಾಗುತ್ತಿರುತ್ತವೆ. ವ್ಯಕ್ತಿ ಅಥವಾ ಸಂಸ್ಥೆಯೊಂದು ಆ ಕಂಪನಿಯ ಕುರಿತು ಸಾಕಷ್ಟು ಅಧ್ಯಯನ ನಡೆಸಿ ಮುಂದಿನ ದಿನಗಳಲ್ಲಿ ಅದರ ಷೇರುಗಳ ಬೆಲೆ ಕುಸಿಯುತ್ತದೆ ಎಂದು ಅಂದಾಜಿಸುತ್ತಾರೆ. ಆಗ ಆ ಕಂಪನಿಯ 1000 ರೂ ಬೆಲೆಯ 100 ಷೇರುಗಳನ್ನು ಬ್ರೋಕರ್‌ಗಳ ಮೂಲಕ ಎರವಲು ಪಡೆದು ಮಾರಿ 1 ಲಕ್ಷ ರೂ ಗಳಿಸುತ್ತಾರೆ. ಆನಂತರ ಆ ಕಂಪನಿಯ ಷೇರುಗಳ ಬೆಲೆ 600 ರೂಗಳಿಗೆ ಕುಸಿದ ಸಂದರ್ಭದಲ್ಲಿ ತಾವೇ 60,000 ರೂಗಳಿಗೆ 100 ಷೇರುಗಳನ್ನು ಖರೀದಿಸಿ ದಲ್ಲಾಳಿಗೆ ಹಿಂದಿರುಗಿಸುತ್ತಾರೆ. ಆಗ ಅವರಿಗೆ 40,000 ರೂ ಲಾಭವಾಗುತ್ತದೆ. ಇದನ್ನು ಶಾರ್ಟಿಂಗ್ ಎನ್ನುತ್ತಾರೆ.

ಇದೊಂದು ಜೂಜಿನಂತಿರುತ್ತದೆ ಮತ್ತು ಇಂತಿಷ್ಟು ಸಮಯದಲ್ಲಿ ದಲ್ಲಾಳಿಗೆ ಷೇರುಗಳನ್ನು ಮರಳಿ ನೀಡುವ ಒಪ್ಪಂದವಾಗಿತ್ತದೆ. ಒಂದು ವೇಳೆ ಅವರ ಅಂದಾಜು ತಪ್ಪಿ ಆ ಕಂಪನಿಯ ಷೇರಿನ ಬೆಲೆ ಕುಸಿಯುವ ಬದಲು 1,400 ರೂ ಏರಿಕೆಯಾದಲ್ಲಿ ಶಾರ್ಟ್ ಮಾಡಿದ ವ್ಯಕ್ತಿ ಅಥವಾ ಸಂಸ್ಥೆ ತನ್ನ ಕೈಯಿಂದಲೇ 40,000 ದುಡ್ಡು ಹಾಕಿ ಷೇರುಗಳನ್ನು ಕೊಳ್ಳುವ ಮೂಲಕ ನಷ್ಟಕ್ಕೆ ಸಿಲುಕುವ ಸಂದರ್ಭವೂ ಎದುರಾಗಬಹುದಾಗಿದೆ.

ಪ್ರಸ್ತುತ ಹಿಂಡೆನ್‌ಬರ್ಗ್ ಅದಾನಿ ಕಂಪನಿಗೆ ಮಾಡಿರುವುದು ಇದೇ ಶಾರ್ಟಿಂಗ್ ಆಗಿದೆ. ಎರಡು ವರ್ಷಗಳ ಕಾಲ ಸತತ ಅಧ್ಯಯನ ಮಾಡಿದ ಅದು ಅದಾನಿ ಕಂಪನಿಯ ಅಕ್ರಮಗಳ ಕುರಿತು ದಾಖಲೆಗಳನ್ನು ಶೇಖರಿಸಿಟ್ಟುಕೊಂಡಿತ್ತು. ಆನಂತರ ಷೇರು ಮಾರುಕಟ್ಟೆಯಲ್ಲಿ ದಲ್ಲಾಳಿಗಳ ಮೂಲಕ ಲಕ್ಷಾಂತರ ಷೇರುಗಳನ್ನು ಎರವಲು ಪಡೆದು ಮಾರಾಟ ಮಾಡಿ ಹಣ ಸಂಗ್ರಹಿಸಿಟ್ಟುಕೊಂಡಿದೆ. ಜನವರಿ 24 ರಂದು ವರದಿ ಬಿಡುಗಡೆ ಮಾಡಿದ ನಂತರ ಪ್ರಪಂಚದಾದ್ಯಂತ ಅದು ಸುದ್ದಿಯಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಅದಾನಿ ಬಹುತೇಕ ಸಾಲದ ಮೇಲೆಯೇ ಸಾಮ್ರಾಜ್ಯ ಕಟ್ಟಿದ್ದು ಅದರ ಅಡಿಪಾಯವೇ ಅಲ್ಲಾಡುತ್ತಿದೆ ಎಂಬ ಕಥನ ಬಿತ್ತರಿಸಲಾಯಿತು. ಇದರಿಂದ ಭಯಗೊಂಡ ಲಕ್ಷಾಂತರ ಜನ ಏಕಕಾಲದಲ್ಲಿ ಅದಾನಿ ಕಂಪನಿಯ ತಮ್ಮ ಷೇರುಗಳನ್ನು ಮಾರಲು ಮುಂದಾದರು. ಆಗ ಸಹಜವಾಗಿ ಅವುಗಳ ಬೆಲೆ ಕುಸಿಯುತ್ತಾ ಹೋಯಿತು. ಸುಮಾರು ಶೇ. 20%ಗೂ ಹೆಚ್ಚಿನ ಷೇರು ಬೆಲೆಗಳು ಕುಸಿಯುತ್ತಿರುವುದರಿಂದ ಅದೆಲ್ಲವೂ ಹಿಂಡೆನ್‌ಬರ್ಗ್‌ ಕಂಪನಿಗೆ ಲಾಭವಾಗುತ್ತಿದೆ. ಏಕೆಂದರೆ ಹೆಚ್ಚು ಬೆಲೆಗೆ ಮಾರಿರುವ ಅದು ಕಡಿಮೆ ಬೆಲೆ ಕೊಂಡು ದಲ್ಲಾಳಿಗೆ ಹಿಂದಿರುಗಿಸುತ್ತದೆ. ಅಂದರೆ ಅದಾನಿ ಷೇರುಗಳ ಬೆಲೆ ಕುಸಿದಷ್ಟು ಅದರ ಲಾಭ ಹಿಂಡೆನ್‌ಬರ್ಗ್‌ಗೆ ದಕ್ಕುತ್ತಿದೆ. ಹೆಚ್ಚಿನ ಬೆಲೆಗೆ ಮಾರಾಟ ಮತ್ತು ಕಡಿಮೆ ಬೆಲೆ ಕೊಳ್ಳುವುದು ನಡೆಯುತ್ತಿದೆ.

ಇದೇ ಮೊದಲಲ್ಲ

ಬ್ಲೂಮ್‌ಬರ್ಗ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಹಿಂಡೆನ್‌ಬರ್ಗ್ 2020 ರಿಂದ ಈ ರೀತಿಯಲ್ಲಿ ಸುಮಾರು 30 ಕಂಪನಿಗಳನ್ನು ಗುರಿಯಾಗಿಸಿಕೊಂಡು ಶಾರ್ಟಿಂಗ್ ಮಾಡಿದೆ. ಅದು ತನಿಖೆಗಳನ್ನು ಸಾರ್ವಜನಿಕಗೊಳಿಸಿದ ಮರುದಿನವೇ ಆಯಾ ಕಂಪನಿಗಳು ಸರಾಸರಿಯಾಗಿ ತಮ್ಮ ಮೌಲ್ಯದ ಸುಮಾರು 15 ಪ್ರತಿಶತವನ್ನು ಕಳೆದುಕೊಂಡಿವೆ. ಅಂದರೆ ಅವುಗಳಲ್ಲೆಲ್ಲ ಅದು ಲಾಭ ಗಳಿಸಿದೆ. ಟೆಸ್ಲಾ, ಟ್ವಿಟರ್‌ನಂತಹ ಕಂಪನಿಗಳ ಮೇಲೆ ಸಹ ಅದು ಶಾರ್ಟಿಂಗ್ ಮಾಡಿ ಲಾಭ ಗಳಿಸಿದೆ ಎನ್ನಲಾಗಿದೆ. ನಿಕೋಲಾ ಎಂಬ ಕಂಪನಿಯ ಮೇಲೆ ಹಿಂಡೆನ್‌ಬರ್ಗ್ ಶಾರ್ಟಿಂಗ್ ಮಾಡಿತ್ತು. ಹಾಗಾಗಿ ಸುಮಾರು 34 ಬಿಲಿಯನ್ ಅಮೆರಿಕನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ್ದ ನಿಕೋಲಾ ಕಂಪನಿಯು ಸದ್ಯ 1.3 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಕುಸಿದಿದೆ ಎಂದರೆ ಹಿಂಡೆನ್‌ಬರ್ಗ್ ಕಂಪನಿಯ ಸಂಶೋಧನೆಗಳು, ತಂತ್ರಗಳು ಎಷ್ಟು ಕರಾರುವಕ್ಕಾರಿಗುತ್ತವೆ ಎಂಬುದಕ್ಕೆ ಉದಾಹರಣೆಯಾಗಿದೆ.

ಇದನ್ನೂ ಓದಿ: Explainer: ಏನಿದು ಹಿಂಡೆನ್‌ಬರ್ಗ್ ವರದಿ? ಅದಾನಿ ಸಾಮ್ರಾಜ್ಯ ಕುಸಿಯುತ್ತಿರುವುದೇಕೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. This company has been banned in usa as per recent news, how india had allowed it to investigate by short selling method, no shares of india/USA are not allowed to allot or sell or buy to us entity or indian entity or investors at present. It seems that unknown rival entity is hand in glove. M

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...